> ನೀತಿ
ಹಳತು ಹೊಸತು
ಹಳತೆಂಬ ಕಾರಣಕೆ ಒಳಿತಾಗಬೇಕಿಲ್ಲ
ಹೊಸತಿದು ಎಂಬುದಕೆ ಹೊರದೂಡಬೇಕಿಲ್ಲ
ಅರಿತವರು ಒರೆಗಿರಿಸಿ ಬಳಿಕವೇ ಹೊಗಳುವರು
ಮರುಳರವರಿವರಮಾತನೇ ತಲೆಗೇರಿಸುವರು
ಸಂಸ್ಕೃತ ಮೂಲ:
ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ |
ಸಂತಃ ಪರೀಕ್ಷ್ಯಾನ್ಯತರದ್ಭಜಂತೇ
ಮೂಢಃ ಪರಪ್ರತ್ಯಯನೇನಬುದ್ಧಿಃ ||
ಕಾಳಿದಾಸ ಇದನ್ನು ಕಾವ್ಯದ ವಿಷಯವಾಗಿ ಹೇಳಿದ್ದು ಕಡಿಮೆಯೆಂದರೆ ಹದಿನೈದು ಶತಮಾನಗಳ ಹಿಂದೆ. ಆದರೆ, ಅಂದಿಗೂ, ಇಂದಿಗೂ, ಎಂದಿಗೂ, ಎಲ್ಲ ವಿಷಯಕ್ಕೂ ಹೊಂದುವ ನಲ್ನುಡಿ!
No comments:
Post a Comment
If you have any doubts. please let me know...