April 30, 2026

ದೈವತ್ವದ ಆವಾಹನೆ ಅರ್ಚಕಸ್ಯ ತಪೋಯೋಗಾತ್

ಸಾಮಾನ್ಯ ಕಲ್ಲಿಗೂ, ಪೂಜಿಸುವ ಮೂರ್ತಿಗೂ ಇರುವ ವ್ಯತ್ಯಾಸವನ್ನು ನಮ್ಮ ಆಗಮ ಶಾಸ್ತ್ರಗಳು ಬಹಳ ಸುಂದರವಾಗಿ ವಿವರಿಸಿವೆ.

"ಅರ್ಚಕಸ್ಯ ತಪೋಯೋಗಾತ್ ಅರ್ಚನಾಯಾಶ್ಚ ಗೌರವಾತ್ | ಭಕ್ತಾನಾಂ ಭಕ್ತಿಯೋಗಾಚ್ಚ ಶಿಲಾ ಭವತಿ ದೇವತಾ ||"

ಅರ್ಚಕನ ಅಥವಾ ಪೂಜಿಸುವವನ ತಪಸ್ಸಿನ ಶಕ್ತಿಯಿಂದ, ಪೂಜಾ ವಿಧಾನದ ಶ್ರೇಷ್ಠತೆಯಿಂದ ಮತ್ತು ಭಕ್ತರ ನಿಷ್ಕಲ್ಮಶ ಭಕ್ತಿಯಿಂದಾಗಿ ಒಂದು ಸಾಮಾನ್ಯ ಶಿಲೆಯು 'ದೇವತೆ' ಯಾಗಿ ಪರಿವರ್ತನೆಗೊಳ್ಳುತ್ತದೆ.

April 25, 2026

ಸೌಂದರ್ಯ ಲಹರಿ ಸ್ತೋತ್ರಮ್

ಓಂ
ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ⁣
   ನ ಚೇದೇವಂ ದೇವೋ ನ ಖಲು ಕುಶಲಃ ಸ್ಪನ್ದಿತುಮಪಿ ।⁣
ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿರಪಿ⁣
   ಪ್ರಣನ್ತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ ॥ 1॥⁣
ತನೀಯಾಂಸಂ ಪಾಂಸುಂ ತವ ಚರಣಪಂಕೇರುಹಭವಂ⁣
   ವಿರಿಂಚಿಸ್ಸಂಚಿನ್ವನ್ ವಿರಚಯತಿ ಲೋಕಾನವಿಕಲಮ್ ।⁣
ವಹತ್ಯೇನಂ ಶೌರಿಃ ಕಥಮಪಿ ಸಹಸ್ರೇಣ ಶಿರಸಾಂ⁣
   ಹರಸ್ಸಂಕ್ಷುದ್ಯೈನಂ ಭಜತಿ ಭಸಿತೋದ್ಧೂಲನವಿಧಿಮ್ ॥ 2॥⁣
ಅವಿದ್ಯಾನಾಮನ್ತ-ಸ್ತಿಮಿರ-ಮಿಹಿರದ್ವೀಪನಗರೀ⁣
   ಜಡಾನಾಂ ಚೈತನ್ಯ-ಸ್ತಬಕ-ಮಕರನ್ದ-ಸ್ರುತಿಝರೀ ।⁣
ದರಿದ್ರಾಣಾಂ ಚಿನ್ತಾಮಣಿಗುಣನಿಕಾ ಜನ್ಮಜಲಧೌ⁣
   ನಿಮಗ್ನಾನಾಂ ದಂಷ್ಟ್ರಾ ಮುರರಿಪು-ವರಾಹಸ್ಯ ಭವತಿ ॥ 3॥⁣
ತ್ವದನ್ಯಃ ಪಾಣಿಭ್ಯಾಮಭಯವರದೋ ದೈವತಗಣಃ⁣
   ತ್ವಮೇಕಾ ನೈವಾಸಿ ಪ್ರಕಟಿತವರಾಭೀತ್ಯಭಿನಯಾ ।⁣
ಭಯಾತ್ ತ್ರಾತುಂ ದಾತುಂ ಫಲಮಪಿ ಚ ವಾಂಛಾಸಮಧಿಕಂ⁣
   ಶರಣ್ಯೇ ಲೋಕಾನಾಂ ತವ ಹಿ ಚರಣಾವೇವ ನಿಪುಣೌ ॥ 4॥⁣
ಹರಿಸ್ತ್ವಾಮಾರಾಧ್ಯ ಪ್ರಣತಜನಸೌಭಾಗ್ಯಜನನೀಂ⁣
   ಪುರಾ ನಾರೀ ಭೂತ್ವಾ ಪುರರಿಪುಮಪಿ ಕ್ಷೋಭಮನಯತ್ ।⁣
ಸ್ಮರೋಽಪಿ ತ್ವಾಂ ನತ್ವಾ ರತಿನಯನಲೇಹ್ಯೇನ ವಪುಷಾ⁣
   ಮುನೀನಾಮಪ್ಯನ್ತಃ ಪ್ರಭವತಿ ಹಿ ಮೋಹಾಯ ಮಹತಾಮ್ ॥ 5॥⁣
ಧನುಃ ಪೌಷ್ಪಂ ಮೌರ್ವೀ ಮಧುಕರಮಯೀ ಪಂಚ ವಿಶಿಖಾಃ⁣
   ವಸನ್ತಃ ಸಾಮನ್ತೋ ಮಲಯಮರುದಾಯೋಧನರಥಃ ।⁣
ತಥಾಪ್ಯೇಕಃ ಸರ್ವಂ ಹಿಮಗಿರಿಸುತೇ ಕಾಮಪಿ ಕೃಪಾಮ್⁣
   ಅಪಾಂಗಾತ್ತೇ ಲಬ್ಧ್ವಾ ಜಗದಿದ-ಮನಂಗೋ ವಿಜಯತೇ ॥ 6॥⁣
ಕ್ವಣತ್ಕಾಂಚೀದಾಮಾ ಕರಿಕಲಭಕುಮ್ಭಸ್ತನನತಾ⁣
   ಪರಿಕ್ಷೀಣಾ ಮಧ್ಯೇ ಪರಿಣತಶರಚ್ಚನ್ದ್ರವದನಾ ।⁣
ಧನುರ್ಬಾಣಾನ್ ಪಾಶಂ ಸೃಣಿಮಪಿ ದಧಾನಾ ಕರತಲೈಃ⁣
   ಪುರಸ್ತಾದಾಸ್ತಾಂ ನಃ ಪುರಮಥಿತುರಾಹೋಪುರುಷಿಕಾ ॥ 7॥⁣
ಸುಧಾಸಿನ್ಧೋರ್ಮಧ್ಯೇ ಸುರವಿಟಪಿವಾಟೀಪರಿವೃತೇ⁣
   ಮಣಿದ್ವೀಪೇ ನೀಪೋಪವನವತಿ ಚಿನ್ತಾಮಣಿಗೃಹೇ ।⁣
ಶಿವಾಕಾರೇ ಮಂಚೇ ಪರಮಶಿವಪರ್ಯಂಕನಿಲಯಾಂ⁣
   ಭಜನ್ತಿ ತ್ವಾಂ ಧನ್ಯಾಃ ಕತಿಚನ ಚಿದಾನನ್ದಲಹರೀಮ್ ॥ 8॥⁣
ಮಹೀಂ ಮೂಲಾಧಾರೇ ಕಮಪಿ ಮಣಿಪೂರೇ ಹುತವಹಂ⁣
   ಸ್ಥಿತಂ ಸ್ವಾಧಿಷ್ಠಾನೇ ಹೃದಿ ಮರುತಮಾಕಾಶಮುಪರಿ ।⁣
ಮನೋಽಪಿ ಭ್ರೂಮಧ್ಯೇ ಸಕಲಮಪಿ ಭಿತ್ವಾ ಕುಲಪಥಂ⁣
   ಸಹಸ್ರಾರೇ ಪದ್ಮೇ ಸಹ ರಹಸಿ ಪತ್ಯಾ ವಿಹರಸೇ ॥ 9॥⁣
ಸುಧಾಧಾರಾಸಾರೈಶ್ಚರಣಯುಗಲಾನ್ತರ್ವಿಗಲಿತೈಃ⁣
   ಪ್ರಪಂಚಂ ಸಿಂಚನ್ತೀ ಪುನರಪಿ ರಸಾಮ್ನಾಯಮಹಸಃ ।⁣
ಅವಾಪ್ಯ ಸ್ವಾಂ ಭೂಮಿಂ ಭುಜಗನಿಭಮಧ್ಯುಷ್ಟವಲಯಂ⁣
   ಸ್ವಮಾತ್ಮಾನಂ ಕೃತ್ವಾ ಸ್ವಪಿಷಿ ಕುಲಕುಂಡೇ ಕುಹರಿಣಿ ॥ 10॥⁣
ಚತುರ್ಭಿಃ ಶ್ರೀಕಂಠೈಃ ಶಿವಯುವತಿಭಿಃ ಪಂಚಭಿರಪಿ⁣
   ಪ್ರಭಿನ್ನಾಭಿಃ ಶಮ್ಭೋರ್ನವಭಿರಪಿ ಮೂಲಪ್ರಕೃತಿಭಿಃ ।⁣
ಚತುಶ್ಚತ್ವಾರಿಂಶದ್ವಸುದಲಕಲಾಶ್ರತ್ರಿವಲಯ-⁣
   ತ್ರಿರೇಖಾಭಿಃ ಸಾರ್ಧಂ ತವ ಶರಣಕೋಣಾಃ ಪರಿಣತಾಃ ॥ 11॥⁣
ತ್ವದೀಯಂ ಸೌನ್ದರ್ಯಂ ತುಹಿನಗಿರಿಕನ್ಯೇ ತುಲಯಿತುಂ⁣
   ಕವೀನ್ದ್ರಾಃ ಕಲ್ಪನ್ತೇ ಕಥಮಪಿ ವಿರಿಂಚಿಪ್ರಭೃತಯಃ ।⁣
ಯದಾಲೋಕೌತ್ಸುಕ್ಯಾದಮರಲಲನಾ ಯಾನ್ತಿ ಮನಸಾ⁣
   ತಪೋಭಿರ್ದುಷ್ಪ್ರಾಪಾಮಪಿ ಗಿರಿಶಸಾಯುಜ್ಯಪದವೀಮ್ ॥ 12॥⁣
ನರಂ ವರ್ಷೀಯಾಂಸಂ ನಯನವಿರಸಂ ನರ್ಮಸು ಜಡಂ⁣
   ತವಾಪಾಂಗಾಲೋಕೇ ಪತಿತಮನುಧಾವನ್ತಿ ಶತಶಃ ।⁣
ಗಲದ್ವೇಣೀಬನ್ಧಾಃ ಕುಚಕಲಶವಿಸ್ರಸ್ತಸಿಚಯಾ⁣
   ಹಠಾತ್ ತ್ರುಟ್ಯತ್ಕಾಂಚ್ಯೋ ವಿಗಲಿತದುಕೂಲಾ ಯುವತಯಃ ॥ 13॥⁣
ಕ್ಷಿತೌ ಷಟ್ಪಂಚಾಶದ್ ದ್ವಿಸಮಧಿಕಪಂಚಾಶದುದಕೇ⁣
   ಹುತಾಶೇ ದ್ವಾಷಷ್ಟಿಶ್ಚತುರಧಿಕಪಂಚಾಶದನಿಲೇ ।⁣
ದಿವಿ ದ್ವಿಷ್ಷಟ್ತ್ರಿಂಶನ್ಮನಸಿ ಚ ಚತುಷ್ಷಷ್ಟಿರಿತಿ ಯೇ⁣
   ಮಯೂಖಾಸ್ತೇಷಾಮಪ್ಯುಪರಿ ತವ ಪಾದಾಮ್ಬುಜಯುಗಮ್ ॥ 14॥⁣
ಶರಜ್ಜ್ಯೋತ್ಸ್ನಾಶುದ್ಧಾಂ ಶಶಿಯುತಜಟಾಜೂಟಮಕುಟಾಂ⁣
   ವರತ್ರಾಸತ್ರಾಣಸ್ಫಟಿಕಘಟಿಕಾಪುಸ್ತಕಕರಾಮ್ ।⁣
ಸಕೃನ್ನ ತ್ವಾ ನತ್ವಾ ಕಥಮಿವ ಸತಾಂ ಸಂನ್ನಿದಧತೇ⁣
   ಮಧುಕ್ಷೀರದ್ರಾಕ್ಷಾಮಧುರಿಮಧುರೀಣಾಃ ಭಣಿತಯಃ ॥ 15॥  var  ಫಣಿತಯಃ⁣
ಕವೀನ್ದ್ರಾಣಾಂ ಚೇತಃಕಮಲವನಬಾಲಾತಪರುಚಿಂ⁣
   ಭಜನ್ತೇ ಯೇ ಸನ್ತಃ ಕತಿಚಿದರುಣಾಮೇವ ಭವತೀಮ್ ।⁣
ವಿರಿಂಚಿಪ್ರೇಯಸ್ಯಾಸ್ತರುಣತರಶೃಂಗಾರಲಹರೀ-⁣
   ಗಭೀರಾಭಿರ್ವಾಗ್ಭಿರ್ವಿದಧತಿ ಸತಾಂ ರಂಜನಮಮೀ ॥ 16॥⁣
ಸವಿತ್ರೀಭಿರ್ವಾಚಾಂ ಶಶಿಮಣಿಶಿಲಾಭಂಗರುಚಿಭಿಃ⁣
   ವಶಿನ್ಯಾದ್ಯಾಭಿಸ್ತ್ವಾಂ ಸಹ ಜನನಿ ಸಂಚಿನ್ತಯತಿ ಯಃ ।⁣
ಸ ಕರ್ತಾ ಕಾವ್ಯಾನಾಂ ಭವತಿ ಮಹತಾಂ ಭಂಗಿರುಚಿಭಿಃ⁣
   ವಚೋಭಿರ್ವಾಗ್ದೇವೀವದನಕಮಲಾಮೋದಮಧುರೈಃ ॥ 17॥⁣
ತನುಚ್ಛಾಯಾಭಿಸ್ತೇ ತರುಣತರಣಿಶ್ರೀಸರಣಿಭಿಃ⁣
   ದಿವಂ ಸರ್ವಾಮುರ್ವೀಮರುಣಿಮನಿ ಮಗ್ನಾಂ ಸ್ಮರತಿ ಯಃ ।⁣
ಭವನ್ತ್ಯಸ್ಯ ತ್ರಸ್ಯದ್ವನಹರಿಣಶಾಲೀನನಯನಾಃ⁣
   ಸಹೋರ್ವಶ್ಯಾ ವಶ್ಯಾಃ ಕತಿ ಕತಿ ನ ಗೀರ್ವಾಣಗಣಿಕಾಃ ॥ 18॥⁣
ಮುಖಂ ಬಿನ್ದುಂ ಕೃತ್ವಾ ಕುಚಯುಗಮಧಸ್ತಸ್ಯ ತದಧೋ⁣
   ಹರಾರ್ಧಂ ಧ್ಯಾಯೇದ್ಯೋ ಹರಮಹಿಷಿ ತೇ ಮನ್ಮಥಕಲಾಮ್ ।⁣
ಸ ಸದ್ಯಃ ಸಂಕ್ಷೋಭಂ ನಯತಿ ವನಿತಾ ಇತ್ಯತಿಲಘು⁣
   ತ್ರಿಲೋಕೀಮಪ್ಯಾಶು ಭ್ರಮಯತಿ ರವೀನ್ದುಸ್ತನಯುಗಾಮ್ ॥ 19॥⁣
ಕಿರನ್ತೀಮಂಗೇಭ್ಯಃ ಕಿರಣನಿಕುರಮ್ಬಾಮೃತರಸಂ⁣
   ಹೃದಿ ತ್ವಾಮಾಧತ್ತೇ ಹಿಮಕರಶಿಲಾಮೂರ್ತಿಮಿವ ಯಃ ।⁣
ಸ ಸರ್ಪಾಣಾಂ ದರ್ಪಂ ಶಮಯತಿ ಶಕುನ್ತಾಧಿಪ ಇವ⁣
   ಜ್ವರಪ್ಲುಷ್ಟಾನ್ ದೃಷ್ಟ್ಯಾ ಸುಖಯತಿ ಸುಧಾಧಾರಸಿರಯಾ ॥ 20॥⁣
ತಟಿಲ್ಲೇಖಾತನ್ವೀಂ ತಪನಶಶಿವೈಶ್ವಾನರಮಯೀಂ⁣
   ನಿಷಣ್ಣಾಂ ಷಣ್ಣಾಮಪ್ಯುಪರಿ ಕಮಲಾನಾಂ ತವ ಕಲಾಮ್ ।⁣
ಮಹಾಪದ್ಮಾಟವ್ಯಾಂ ಮೃದಿತಮಲಮಾಯೇನ ಮನಸಾ⁣
   ಮಹಾನ್ತಃ ಪಶ್ಯನ್ತೋ ದಧತಿ ಪರಮಾಹ್ಲಾದಲಹರೀಮ್ ॥ 21॥⁣
ಭವಾನಿ ತ್ವಂ ದಾಸೇ ಮಯಿ ವಿತರ ದೃಷ್ಟಿಂ ಸಕರುಣಾ-⁣
   ಮಿತಿ ಸ್ತೋತುಂ ವಾಂಛನ್ ಕಥಯತಿ ಭವಾನಿ ತ್ವಮಿತಿ ಯಃ ।⁣
ತದೈವ ತ್ವಂ ತಸ್ಮೈ ದಿಶಸಿ ನಿಜಸಾಯುಜ್ಯಪದವೀಂ⁣
   ಮುಕುನ್ದಬ್ರಹ್ಮೇನ್ದ್ರಸ್ಫುಟಮಕುಟನೀರಾಜಿತಪದಾಮ್ ॥ 22॥⁣
ತ್ವಯಾ ಹೃತ್ವಾ ವಾಮಂ ವಪುರಪರಿತೃಪ್ತೇನ ಮನಸಾ⁣
   ಶರೀರಾರ್ಧಂ ಶಮ್ಭೋರಪರಮಪಿ ಶಂಕೇ ಹೃತಮಭೂತ್ ।⁣
ಯದೇತತ್ತ್ವದ್ರೂಪಂ ಸಕಲಮರುಣಾಭಂ ತ್ರಿನಯನಂ⁣
   ಕುಚಾಭ್ಯಾಮಾನಮ್ರಂ ಕುಟಿಲಶಶಿಚೂಡಾಲಮಕುಟಮ್ ॥ 23॥⁣
ಜಗತ್ಸೂತೇ ಧಾತಾ ಹರಿರವತಿ ರುದ್ರಃ ಕ್ಷಪಯತೇ⁣
   ತಿರಸ್ಕುರ್ವನ್ನೇತತ್ಸ್ವಮಪಿ ವಪುರೀಶಸ್ತಿರಯತಿ ।⁣
ಸದಾಪೂರ್ವಃ ಸರ್ವಂ ತದಿದಮನುಗೃಹ್ಣಾತಿ ಚ ಶಿವ-⁣
   ಸ್ತವಾಜ್ಞಾಮಾಲಮ್ಬ್ಯ ಕ್ಷಣಚಲಿತಯೋರ್ಭ್ರೂಲತಿಕಯೋಃ ॥ 24॥⁣
ತ್ರಯಾಣಾಂ ದೇವಾನಾಂ ತ್ರಿಗುಣಜನಿತಾನಾಂ ತವ ಶಿವೇ⁣
   ಭವೇತ್ ಪೂಜಾ ಪೂಜಾ ತವ ಚರಣಯೋರ್ಯಾ ವಿರಚಿತಾ ।⁣
ತಥಾ ಹಿ ತ್ವತ್ಪಾದೋದ್ವಹನಮಣಿಪೀಠಸ್ಯ ನಿಕಟೇ⁣
   ಸ್ಥಿತಾ ಹ್ಯೇತೇ ಶಶ್ವನ್ಮುಕುಲಿತಕರೋತ್ತಂಸಮಕುಟಾಃ ॥ 25॥⁣
ವಿರಿಂಚಿಃ ಪಂಚತ್ವಂ ವ್ರಜತಿ ಹರಿರಾಪ್ನೋತಿ ವಿರತಿಂ⁣
   ವಿನಾಶಂ ಕೀನಾಶೋ ಭಜತಿ ಧನದೋ ಯಾತಿ ನಿಧನಮ್ ।⁣
ವಿತನ್ದ್ರೀ ಮಾಹೇನ್ದ್ರೀ ವಿತತಿರಪಿ ಸಂಮೀಲಿತದೃಶಾ⁣
   ಮಹಾಸಂಹಾರೇಽಸ್ಮಿನ್ ವಿಹರತಿ ಸತಿ ತ್ವತ್ಪತಿರಸೌ ॥ 26॥⁣
ಜಪೋ ಜಲ್ಪಃ ಶಿಲ್ಪಂ ಸಕಲಮಪಿ ಮುದ್ರಾವಿರಚನಾ⁣
   ಗತಿಃ ಪ್ರಾದಕ್ಷಿಣ್ಯಕ್ರಮಣಮಶನಾದ್ಯಾಹುತಿವಿಧಿಃ ।⁣
ಪ್ರಣಾಮಸ್ಸಂವೇಶಸ್ಸುಖಮಖಿಲಮಾತ್ಮಾರ್ಪಣದೃಶಾ⁣
   ಸಪರ್ಯಾಪರ್ಯಾಯಸ್ತವ ಭವತು ಯನ್ಮೇ ವಿಲಸಿತಮ್ ॥ 27॥⁣
ಸುಧಾಮಪ್ಯಾಸ್ವಾದ್ಯ ಪ್ರತಿಭಯಜರಾಮೃತ್ಯುಹರಿಣೀಂ⁣
   ವಿಪದ್ಯನ್ತೇ ವಿಶ್ವೇ ವಿಧಿಶತಮಖಾದ್ಯಾ ದಿವಿಷದಃ ।⁣
ಕರಾಲಂ ಯತ್ಕ್ಷ್ವೇಲಂ ಕಬಲಿತವತಃ ಕಾಲಕಲನಾ⁣
   ನ ಶಮ್ಭೋಸ್ತನ್ಮೂಲಂ ತವ ಜನನಿ ತಾಟಂಕಮಹಿಮಾ ॥ 28॥⁣
ಕಿರೀಟಂ ವೈರಿಂಚಂ ಪರಿಹರ ಪುರಃ ಕೈಟಭಭಿದಃ⁣
   ಕಠೋರೇ ಕೋಟೀರೇ ಸ್ಖಲಸಿ ಜಹಿ ಜಮ್ಭಾರಿಮುಕುಟಮ್ ।⁣
ಪ್ರಣಮ್ರೇಷ್ವೇತೇಷು ಪ್ರಸಭಮುಪಯಾತಸ್ಯ ಭವನಂ⁣
   ಭವಸ್ಯಾಭ್ಯುತ್ಥಾನೇ ತವ ಪರಿಜನೋಕ್ತಿರ್ವಿಜಯತೇ ॥ 29॥⁣
ಸ್ವದೇಹೋದ್ಭೂತಾಭಿರ್ಘೃಣಿಭಿರಣಿಮಾದ್ಯಾಭಿರಭಿತೋ⁣
   ನಿಷೇವ್ಯೇ ನಿತ್ಯೇ ತ್ವಾಮಹಮಿತಿ ಸದಾ ಭಾವಯತಿ ಯಃ ।⁣
ಕಿಮಾಶ್ಚರ್ಯಂ ತಸ್ಯ ತ್ರಿನಯನಸಮೃದ್ಧಿಂ ತೃಣಯತೋ⁣
   ಮಹಾಸಂವರ್ತಾಗ್ನಿರ್ವಿರಚಯತಿ ನಿರಾಜನವಿಧಿಮ್ ॥ 30॥⁣
ಚತುಷ್ಷಷ್ಟ್ಯಾ ತನ್ತ್ರೈಃ ಸಕಲಮತಿಸಂಧಾಯ ಭುವನಂ⁣
   ಸ್ಥಿತಸ್ತತ್ತತ್ಸಿದ್ಧಿಪ್ರಸವಪರತನ್ತ್ರೈಃ ಪಶುಪತಿಃ ।⁣
ಪುನಸ್ತ್ವನ್ನಿರ್ಬನ್ಧಾದಖಿಲಪುರುಷಾರ್ಥೈಕಘಟನಾ-⁣
   ಸ್ವತನ್ತ್ರಂ ತೇ ತನ್ತ್ರಂ ಕ್ಷಿತಿತಲಮವಾತೀತರದಿದಮ್ ॥ 31॥⁣
ಶಿವಃ ಶಕ್ತಿಃ ಕಾಮಃ ಕ್ಷಿತಿರಥ ರವಿಃ ಶೀತಕಿರಣಃ⁣
   ಸ್ಮರೋ ಹಂಸಃ ಶಕ್ರಸ್ತದನು ಚ ಪರಾಮಾರಹರಯಃ ।⁣
ಅಮೀ ಹೃಲ್ಲೇಖಾಭಿಸ್ತಿಸೃಭಿರವಸಾನೇಷು ಘಟಿತಾ⁣
   ಭಜನ್ತೇ ವರ್ಣಾಸ್ತೇ ತವ ಜನನಿ ನಾಮಾವಯವತಾಮ್ ॥ 32॥⁣
ಸ್ಮರಂ ಯೋನಿಂ ಲಕ್ಷ್ಮೀಂ ತ್ರಿತಯಮಿದಮಾದೌ ತವ ಮನೋ-⁣
   ರ್ನಿಧಾಯೈಕೇ ನಿತ್ಯೇ ನಿರವಧಿಮಹಾಭೋಗರಸಿಕಾಃ ।⁣
ಭಜನ್ತಿ ತ್ವಾಂ ಚಿನ್ತಾಮಣಿಗುನನಿಬದ್ಧಾಕ್ಷವಲಯಾಃ⁣
   ಶಿವಾಗ್ನೌ ಜುಹ್ವನ್ತಃ ಸುರಭಿಘೃತಧಾರಾಹುತಿಶತೈಃ ॥ 33॥⁣
ಶರೀರಂ ತ್ವಂ ಶಮ್ಭೋಃ ಶಶಿಮಿಹಿರವಕ್ಷೋರುಹಯುಗಂ⁣
   ತವಾತ್ಮಾನಂ ಮನ್ಯೇ ಭಗವತಿ ನವಾತ್ಮಾನಮನಘಮ್ ।⁣
ಅತಶ್ಶೇಷಶ್ಶೇಷೀತ್ಯಯಮುಭಯಸಾಧಾರಣತಯಾ⁣
   ಸ್ಥಿತಃ ಸಂಬನ್ಧೋ ವಾಂ ಸಮರಸಪರಾನನ್ದಪರಯೋಃ ॥ 34॥⁣
ಮನಸ್ತ್ವಂ ವ್ಯೋಮ ತ್ವಂ ಮರುದಸಿ ಮರುತ್ಸಾರಥಿರಸಿ⁣
   ತ್ವಮಾಪಸ್ತ್ವಂ ಭೂಮಿಸ್ತ್ವಯಿ ಪರಿಣತಾಯಾಂ ನ ಹಿ ಪರಮ್ ।⁣
ತ್ವಮೇವ ಸ್ವಾತ್ಮಾನಂ ಪರಿಣಮಯಿತುಂ ವಿಶ್ವವಪುಷಾ⁣
   ಚಿದಾನನ್ದಾಕಾರಂ ಶಿವಯುವತಿ ಭಾವೇನ ಬಿಭೃಷೇ ॥ 35॥⁣
ತವಾಜ್ಞಾಚಕ್ರಸ್ಥಂ ತಪನಶಶಿಕೋಟಿದ್ಯುತಿಧರಂ⁣
   ಪರಂ ಶಮ್ಭುಂ ವನ್ದೇ ಪರಿಮಿಲಿತಪಾರ್ಶ್ವಂ ಪರಚಿತಾ ।⁣
ಯಮಾರಾಧ್ಯನ್ ಭಕ್ತ್ಯಾ ರವಿಶಶಿಶುಚೀನಾಮವಿಷಯೇ⁣
   ನಿರಾಲೋಕೇಽಲೋಕೇ ನಿವಸತಿ ಹಿ ಭಾಲೋಕಭವನೇ ॥ 36॥⁣
ವಿಶುದ್ಧೌ ತೇ ಶುದ್ಧಸ್ಫಟಿಕವಿಶದಂ ವ್ಯೋಮಜನಕಂ⁣
   ಶಿವಂ ಸೇವೇ ದೇವೀಮಪಿ ಶಿವಸಮಾನವ್ಯವಸಿತಾಮ್ ।⁣
ಯಯೋಃ ಕಾನ್ತ್ಯಾ ಯಾನ್ತ್ಯಾಃ ಶಶಿಕಿರಣಸಾರೂಪ್ಯಸರಣೇ-⁣
   ವಿಧೂತಾನ್ತರ್ಧ್ವಾನ್ತಾ ವಿಲಸತಿ ಚಕೋರೀವ ಜಗತೀ ॥ 37॥⁣
ಸಮುನ್ಮೀಲತ್ ಸಂವಿತ್ ಕಮಲಮಕರನ್ದೈಕರಸಿಕಂ⁣
   ಭಜೇ ಹಂಸದ್ವನ್ದ್ವಂ ಕಿಮಪಿ ಮಹತಾಂ ಮಾನಸಚರಮ್ ।⁣
ಯದಾಲಾಪಾದಷ್ಟಾದಶಗುಣಿತವಿದ್ಯಾಪರಿಣತಿ-⁣
   ರ್ಯದಾದತ್ತೇ ದೋಷಾದ್ ಗುಣಮಖಿಲಮದ್ಭ್ಯಃ ಪಯ ಇವ ॥ 38॥⁣
ತವ ಸ್ವಾಧಿಷ್ಠಾನೇ ಹುತವಹಮಧಿಷ್ಠಾಯ ನಿರತಂ⁣
   ತಮೀಡೇ ಸಂವರ್ತಂ ಜನನಿ ಮಹತೀಂ ತಾಂ ಚ ಸಮಯಾಮ್ ।⁣
ಯದಾಲೋಕೇ ಲೋಕಾನ್ ದಹತಿ ಮಹತಿ ಕ್ರೋಧಕಲಿತೇ⁣
   ದಯಾರ್ದ್ರಾ ಯಾ ದೃಷ್ಟಿಃ ಶಿಶಿರಮುಪಚಾರಂ ರಚಯತಿ ॥ 39॥⁣
ತಟಿತ್ತ್ವನ್ತಂ ಶಕ್ತ್ಯಾ ತಿಮಿರಪರಿಪನ್ಥಿಫುರಣಯಾ⁣
   ಸ್ಫುರನ್ನಾನಾರತ್ನಾಭರಣಪರಿಣದ್ಧೇನ್ದ್ರಧನುಷಮ್ ।⁣
ತವ ಶ್ಯಾಮಂ ಮೇಘಂ ಕಮಪಿ ಮಣಿಪೂರೈಕಶರಣಂ⁣
   ನಿಷೇವೇ ವರ್ಷನ್ತಂ ಹರಮಿಹಿರತಪ್ತಂ ತ್ರಿಭುವನಮ್ ॥ 40॥⁣
ತವಾಧಾರೇ ಮೂಲೇ ಸಹ ಸಮಯಯಾ ಲಾಸ್ಯಪರಯಾ⁣
   ನವಾತ್ಮಾನಂ ಮನ್ಯೇ ನವರಸಮಹಾತಾಂಡವನಟಮ್ ।⁣
ಉಭಾಭ್ಯಾಮೇತಾಭ್ಯಾಮುದಯವಿಧಿಮುದ್ದಿಶ್ಯ ದಯಯಾ⁣
   ಸನಾಥಾಭ್ಯಾಂ ಜಜ್ಞೇ ಜನಕಜನನೀಮಜ್ಜಗದಿದಮ್ ॥ 41॥⁣
               ಸೌನ್ದರ್ಯಲಹರೀ⁣
ಗತೈರ್ಮಾಣಿಕ್ಯತ್ವಂ ಗಗನಮಣಿಭಿಃ ಸಾನ್ದ್ರಘಟಿತಂ⁣
   ಕಿರೀಟಂ ತೇ ಹೈಮಂ ಹಿಮಗಿರಿಸುತೇ ಕೀರ್ತಯತಿ ಯಃ ।⁣
ಸ ನೀಡೇಯಚ್ಛಾಯಾಚ್ಛುರಣಶಬಲಂ ಚನ್ದ್ರಶಕಲಂ⁣
   ಧನುಃ ಶೌನಾಸೀರಂ ಕಿಮಿತಿ ನ ನಿಬಧ್ನಾತಿ ಧಿಷಣಾಮ್ ॥ 42॥⁣
ಧುನೋತು ಧ್ವಾನ್ತಂ ನಸ್ತುಲಿತದಲಿತೇನ್ದೀವರವನಂ⁣
   ಘನಸ್ನಿಗ್ಧಶ್ಲಕ್ಷ್ಣಂ ಚಿಕುರನಿಕುರುಮ್ಬಂ ತವ ಶಿವೇ ।⁣
ಯದೀಯಂ ಸೌರಭ್ಯಂ ಸಹಜಮುಪಲಬ್ಧುಂ ಸುಮನಸೋ⁣
   ವಸನ್ತ್ಯಸ್ಮಿನ್ ಮನ್ಯೇ ವಲಮಥನವಾಟೀವಿಟಪಿನಾಮ್ ॥ 43॥⁣
ತನೋತು ಕ್ಷೇಮಂ ನಸ್ತವ ವದನಸೌನ್ದರ್ಯಲಹರೀ-⁣
   ಪರೀವಾಹಸ್ರೋತಃಸರಣಿರಿವ ಸೀಮನ್ತಸರಣಿಃ ।⁣
ವಹನ್ತೀ ಸಿನ್ದೂರಂ ಪ್ರಬಲಕಬರೀಭಾರತಿಮಿರ-⁣
   ದ್ವಿಷಾಂ ಬೃನ್ದೈರ್ಬನ್ದೀಕೃತಮಿವ ನವೀನಾರ್ಕಕಿರಣಮ್ ॥ 44॥⁣
ಅರಾಲೈಃ ಸ್ವಾಭಾವ್ಯಾದಲಿಕಲಭಸಶ್ರೀಭಿರಲಕೈಃ⁣
   ಪರೀತಂ ತೇ ವಕ್ತ್ರಂ ಪರಿಹಸತಿ ಪಂಕೇರುಹರುಚಿಮ್ ।⁣
ದರಸ್ಮೇರೇ ಯಸ್ಮಿನ್ ದಶನರುಚಿಕಿಂಜಲ್ಕರುಚಿರೇ⁣
   ಸುಗನ್ಧೌ ಮಾದ್ಯನ್ತಿ ಸ್ಮರದಹನಚಕ್ಷುರ್ಮಧುಲಿಹಃ ॥ 45॥⁣
ಲಲಾಟಂ ಲಾವಣ್ಯದ್ಯುತಿವಿಮಲಮಾಭಾತಿ ತವ ಯ-⁣
   ದ್ದ್ವಿತೀಯಂ ತನ್ಮನ್ಯೇ ಮಕುಟಘಟಿತಂ ಚನ್ದ್ರಶಕಲಮ್ ।⁣
ವಿಪರ್ಯಾಸನ್ಯಾಸಾದುಭಯಮಪಿ ಸಂಭೂಯ ಚ ಮಿಥಃ⁣
   ಸುಧಾಲೇಪಸ್ಯೂತಿಃ ಪರಿಣಮತಿ ರಾಕಾಹಿಮಕರಃ ॥ 46॥⁣
ಭ್ರುವೌ ಭುಗ್ನೇ ಕಿಂಚಿದ್ಭುವನಭಯಭಂಗವ್ಯಸನಿನಿ⁣
   ತ್ವದೀಯೇ ನೇತ್ರಾಭ್ಯಾಂ ಮಧುಕರರುಚಿಭ್ಯಾಂ ಧೃತಗುಣಮ್ ।⁣
ಧನುರ್ಮನ್ಯೇ ಸವ್ಯೇತರಕರಗೃಹೀತಂ ರತಿಪತೇಃ⁣
   ಪ್ರಕೋಷ್ಠೇ ಮುಷ್ಟೌ ಚ ಸ್ಥಗಯತಿ ನಿಗೂಢಾನ್ತರಮುಮೇ ॥ 47॥⁣
ಅಹಃ ಸೂತೇ ಸವ್ಯಂ ತವ ನಯನಮರ್ಕಾತ್ಮಕತಯಾ⁣
   ತ್ರಿಯಾಮಾಂ ವಾಮಂ ತೇ ಸೃಜತಿ ರಜನೀನಾಯಕತಯಾ ।⁣
ತೃತೀಯಾ ತೇ ದೃಷ್ಟಿರ್ದರದಲಿತಹೇಮಾಮ್ಬುಜರುಚಿಃ⁣
   ಸಮಾಧತ್ತೇ ಸಂಧ್ಯಾಂ ದಿವಸನಿಶಯೋರನ್ತರಚರೀಮ್ ॥ 48॥⁣
ವಿಶಾಲಾ ಕಲ್ಯಾಣೀ ಸ್ಫುಟರುಚಿರಯೋಧ್ಯಾ ಕುವಲಯೈಃ⁣
   ಕೃಪಾಧಾರಾಧಾರಾ ಕಿಮಪಿ ಮಧುರಾಭೋಗವತಿಕಾ ।⁣
ಅವನ್ತೀ ದೃಷ್ಟಿಸ್ತೇ ಬಹುನಗರವಿಸ್ತಾರವಿಜಯಾ⁣
   ಧ್ರುವಂ ತತ್ತನ್ನಾಮವ್ಯವಹರಣಯೋಗ್ಯಾ ವಿಜಯತೇ ॥ 49॥⁣
ಕವೀನಾಂ ಸಂದರ್ಭಸ್ತಬಕಮಕರನ್ದೈಕರಸಿಕಂ⁣
   ಕಟಾಕ್ಷವ್ಯಾಕ್ಷೇಪಭ್ರಮರಕಲಭೌ ಕರ್ಣಯುಗಲಮ್ ।⁣
ಅಮುಂಚನ್ತೌ ದೃಷ್ಟ್ವಾ ತವ ನವರಸಾಸ್ವಾದತರಲಾ-⁣
   ವಸೂಯಾಸಂಸರ್ಗಾದಲಿಕನಯನಂ ಕಿಂಚಿದರುಣಮ್ ॥ 50॥⁣
ಶಿವೇ ಶೃಂಗಾರಾರ್ದ್ರಾ ತದಿತರಜನೇ ಕುತ್ಸನಪರಾ⁣
   ಸರೋಷಾ ಗಂಗಾಯಾಂ ಗಿರಿಶಚರಿತೇ ವಿಸ್ಮಯವತೀ ।⁣
ಹರಾಹಿಭ್ಯೋ ಭೀತಾ ಸರಸಿರುಹಸೌಭಾಗ್ಯಜಯಿನೀ⁣
   ಸಖೀಷು ಸ್ಮೇರಾ ತೇ ಮಯಿ ಜನನೀ ದೃಷ್ಟಿಃ ಸಕರುಣಾ ॥ 51॥⁣
ಗತೇ ಕರ್ಣಾಭ್ಯರ್ಣಂ ಗರುತ ಇವ ಪಕ್ಷ್ಮಾಣಿ ದಧತೀ⁣
   ಪುರಾಂ ಭೇತ್ತುಶ್ಚಿತ್ತಪ್ರಶಮರಸವಿದ್ರಾವಣಫಲೇ ।⁣
ಇಮೇ ನೇತ್ರೇ ಗೋತ್ರಾಧರಪತಿಕುಲೋತ್ತಂಸಕಲಿಕೇ⁣
   ತವಾಕರ್ಣಾಕೃಷ್ಟಸ್ಮರಶರವಿಲಾಸಂ ಕಲಯತಃ ॥ 52॥⁣
ವಿಭಕ್ತತ್ರೈವರ್ಣ್ಯಂ ವ್ಯತಿಕರಿತಲೀಲಾಂಜನತಯಾ⁣
   ವಿಭಾತಿ ತ್ವನ್ನೇತ್ರತ್ರಿತಯಮಿದಮೀಶಾನದಯಿತೇ ।⁣
ಪುನಃ ಸ್ರಷ್ಟುಂ ದೇವಾನ್ ದ್ರುಹಿಣಹರಿರುದ್ರಾನುಪರತಾನ್⁣
   ರಜಃ ಸತ್ತ್ವಂ ಬಿಭ್ರತ್ತಮ ಇತಿ ಗುಣಾನಾಂ ತ್ರಯಮಿವ ॥ 53॥⁣
ಪವಿತ್ರೀಕರ್ತುಂ ನಃ ಪಶುಪತಿಪರಾಧೀನಹೃದಯೇ⁣
   ದಯಾಮಿತ್ರೈರ್ನೇತ್ರೈರರುಣಧವಲಶ್ಯಾಮರುಚಿಭಿಃ ।⁣
ನದಃ ಶೋಣೋ ಗಂಗಾ ತಪನತನಯೇತಿ ಧ್ರುವಮಮುಂ⁣
   ತ್ರಯಾಣಾಂ ತೀರ್ಥಾನಾಮುಪನಯಸಿ ಸಂಭೇದಮನಘಮ್ ॥ 54॥⁣
ನಿಮೇಷೋನ್ಮೇಷಾಭ್ಯಾಂ ಪ್ರಲಯಮುದಯಂ ಯಾತಿ ಜಗತೀ⁣
   ತವೇತ್ಯಾಹುಃ ಸನ್ತೋ ಧರಣಿಧರರಾಜನ್ಯತನಯೇ ।⁣
ತ್ವದುನ್ಮೇಷಾಜ್ಜಾತಂ ಜಗದಿದಮಶೇಷಂ ಪ್ರಲಯತಃ⁣
   ಪರಿತ್ರಾತುಂ ಶಂಕೇ ಪರಿಹೃತನಿಮೇಷಾಸ್ತವ ದೃಶಃ ॥ 55॥⁣
ತವಾಪರ್ಣೇ ಕರ್ಣೇಜಪನಯನಪೈಶುನ್ಯಚಕಿತಾ⁣
   ನಿಲೀಯನ್ತೇ ತೋಯೇ ನಿಯತಮನಿಮೇಷಾಃ ಶಫರಿಕಾಃ ।⁣
ಇಯಂ ಚ ಶ್ರೀರ್ಬದ್ಧಚ್ಛದಪುಟಕವಾಟಂ ಕುವಲಯಮ್⁣
   ಜಹಾತಿ ಪ್ರತ್ಯೂಷೇ ನಿಶಿ ಚ ವಿಘಟಯ್ಯ ಪ್ರವಿಶತಿ ॥ 56॥⁣
ದೃಶಾ ದ್ರಾಘೀಯಸ್ಯಾ ದರದಲಿತನೀಲೋತ್ಪಲರುಚಾ⁣
   ದವೀಯಾಂಸಂ ದೀನಂ ಸ್ನಪಯ ಕೃಪಯಾ ಮಾಮಪಿ ಶಿವೇ ।⁣
ಅನೇನಾಯಂ ಧನ್ಯೋ ಭವತಿ ನ ಚ ತೇ ಹಾನಿರಿಯತಾ⁣
   ವನೇ ವಾ ಹರ್ಮ್ಯೇ ವಾ ಸಮಕರನಿಪಾತೋ ಹಿಮಕರಃ ॥ 57॥⁣
ಅರಾಲಂ ತೇ ಪಾಲೀಯುಗಲಮಗರಾಜನ್ಯತನಯೇ⁣
   ನ ಕೇಷಾಮಾಧತ್ತೇ ಕುಸುಮಶರಕೋದಂಡಕುತುಕಮ್ ।⁣
ತಿರಶ್ಚೀನೋ ಯತ್ರ ಶ್ರವಣಪಥಮುಲ್ಲಂಘ್ಯ ವಿಲಸ-⁣
   ನ್ನಪಾಂಗವ್ಯಾಸಂಗೋ ದಿಶತಿ ಶರಸಂಧಾನಧಿಷಣಾಮ್ ॥ 58॥⁣
ಸ್ಫುರದ್ಗಂಡಾಭೋಗಪ್ರತಿಫಲಿತತಾಟಂಕಯುಗಲಂ⁣
   ಚತುಶ್ಚಕ್ರಂ ಮನ್ಯೇ ತವ ಮುಖಮಿದಂ ಮನ್ಮಥರಥಮ್ ।⁣
ಯಮಾರುಹ್ಯ ದ್ರುಹ್ಯತ್ಯವನಿರಥಮರ್ಕೇನ್ದುಚರಣಂ⁣
   ಮಹಾವೀರೋ ಮಾರಃ ಪ್ರಮಥಪತಯೇ ಸಜ್ಜಿತವತೇ ॥ 59॥⁣
ಸರಸ್ವತ್ಯಾಃ ಸೂಕ್ತೀರಮೃತಲಹರೀಕೌಶಲಹರೀಃ⁣
   ಪಿಬನ್ತ್ಯಾಃ ಶರ್ವಾಣಿ ಶ್ರವಣಚುಲುಕಾಭ್ಯಾಮವಿರಲಮ್ ।⁣
ಚಮತ್ಕಾರಶ್ಲಾಘಾಚಲಿತಶಿರಸಃ ಕುಂಡಲಗಣೋ⁣
   ಝಣತ್ಕಾರೈಸ್ತಾರೈಃ ಪ್ರತಿವಚನಮಾಚಷ್ಟ ಇವ ತೇ ॥ 60॥⁣
ಅಸೌ ನಾಸಾವಂಶಸ್ತುಹಿನಗಿರಿವಂಶಧ್ವಜಪಟಿ⁣
   ತ್ವದೀಯೋ ನೇದೀಯಃ ಫಲತು ಫಲಮಸ್ಮಾಕಮುಚಿತಮ್ ।⁣
ವಹನ್ನನ್ತರ್ಮುಕ್ತಾಃ ಶಿಶಿರತರನಿಶ್ವಾಸಗಲಿತಂ⁣
   ಸಮೃದ್ಧ್ಯಾ ಯತ್ತಾಸಾಂ ಬಹಿರಪಿ ಚ ಮುಕ್ತಾಮಣಿಧರಃ ॥ 61॥⁣
ಪ್ರಕೃತ್ಯಾ ರಕ್ತಾಯಾಸ್ತವ ಸುದತಿ ದನ್ತಚ್ಛದರುಚೇಃ⁣
   ಪ್ರವಕ್ಷ್ಯೇ ಸಾದೃಶ್ಯಂ ಜನಯತು ಫಲಂ ವಿದ್ರುಮಲತಾ ।⁣
ನ ಬಿಮ್ಬಂ ತದ್ಬಿಮ್ಬಪ್ರತಿಫಲನರಾಗಾದರುಣಿತಂ⁣
   ತುಲಾಮಧ್ಯಾರೋಢುಂ ಕಥಮಿವ ವಿಲಜ್ಜೇತ ಕಲಯಾ ॥ 62॥⁣
ಸ್ಮಿತಜ್ಯೋತ್ಸ್ನಾಜಾಲಂ ತವ ವದನಚನ್ದ್ರಸ್ಯ ಪಿಬತಾಂ⁣
   ಚಕೋರಾಣಾಮಾಸೀದತಿರಸತಯಾ ಚಂಚುಜಡಿಮಾ ।⁣
ಅತಸ್ತೇ ಶೀತಾಂಶೋರಮೃತಲಹರೀಮಮ್ಲರುಚಯಃ⁣
   ಪಿಬನ್ತಿ ಸ್ವಚ್ಛನ್ದಂ ನಿಶಿ ನಿಶಿ ಭೃಶಂ ಕಾಂಜಿಕಧಿಯಾ ॥ 63॥⁣
ಅವಿಶ್ರಾನ್ತಂ ಪತ್ಯುರ್ಗುಣಗಣಕಥಾಮ್ರೇಡನಜಪಾ⁣
   ಜಪಾಪುಷ್ಪಚ್ಛಾಯಾ ತವ ಜನನಿ ಜಿಹ್ವಾ ಜಯತಿ ಸಾ ।⁣
ಯದಗ್ರಾಸೀನಾಯಾಃ ಸ್ಫಟಿಕದೃಷದಚ್ಛಚ್ಛವಿಮಯೀ⁣
   ಸರಸ್ವತ್ಯಾ ಮೂರ್ತಿಃ ಪರಿಣಮತಿ ಮಾಣಿಕ್ಯವಪುಷಾ ॥ 64॥⁣
ರಣೇ ಜಿತ್ವಾ ದೈತ್ಯಾನಪಹೃತಶಿರಸ್ತ್ರೈಃ ಕವಚಿಭಿರ್-⁣
   ನಿವೃತ್ತೈಶ್ಚಂಡಾಂಶತ್ರಿಪುರಹರನಿರ್ಮಾಲ್ಯವಿಮುಖೈಃ ।⁣
ವಿಶಾಖೇನ್ದ್ರೋಪೇನ್ದ್ರೈಃ ಶಶಿವಿಶದಕರ್ಪೂರಶಕಲಾ⁣
   ವಿಲೀಯನ್ತೇ ಮಾತಸ್ತವ ವದನತಾಮ್ಬೂಲಕಬಲಾಃ ॥ 65॥⁣
ವಿಪಂಚ್ಯಾ ಗಾಯನ್ತೀ ವಿವಿಧಮಪದಾನಂ ಪಶುಪತೇಃ⁣
   ತ್ವಯಾರಬ್ಧೇ ವಕ್ತುಂ ಚಲಿತಶಿರಸಾ ಸಾಧುವಚನೇ ।⁣
ತದೀಯೈರ್ಮಾಧುರ್ಯೈರಪಲಪಿತತನ್ತ್ರೀಕಲರವಾಂ⁣
   ನಿಜಾಂ ವೀಣಾಂ ವಾಣೀ ನಿಚುಲಯತಿ ಚೋಲೇನ ನಿಭೃತಮ್ ॥ 66॥⁣
ಕರಾಗ್ರೇಣ ಸ್ಪೃಷ್ಟಂ ತುಹಿನಗಿರಿಣಾ ವತ್ಸಲತಯಾ⁣
   ಗಿರೀಶೇನೋದಸ್ತಂ ಮುಹುರಧರಪಾನಾಕುಲತಯಾ ।⁣
ಕರಗ್ರಾಹ್ಯಂ ಶಮ್ಭೋರ್ಮುಖಮುಕುರವೃನ್ತಂ ಗಿರಿಸುತೇ⁣
   ಕಥಂಕಾರಂ ಬ್ರೂಮಸ್ತವ ಚಿಬುಕಮೌಪಮ್ಯರಹಿತಮ್ ॥ 67॥⁣
ಭುಜಾಶ್ಲೇಷಾನ್ ನಿತ್ಯಂ ಪುರದಮಯಿತುಃ ಕಂಟಕವತೀ⁣
   ತವ ಗ್ರೀವಾ ಧತ್ತೇ ಮುಖಕಮಲನಾಲಶ್ರಿಯಮಿಯಮ್ ।⁣
ಸ್ವತಃ ಶ್ವೇತಾ ಕಾಲಾಗುರುಬಹುಲಜಮ್ಬಾಲಮಲಿನಾ⁣
   ಮೃಣಾಲೀಲಾಲಿತ್ಯಮ್ ವಹತಿ ಯದಧೋ ಹಾರಲತಿಕಾ ॥ 68॥⁣
ಗಲೇ ರೇಖಾಸ್ತಿಸ್ರೋ ಗತಿಗಮಕಗೀತೈಕನಿಪುಣೇ⁣
   ವಿವಾಹವ್ಯಾನದ್ಧಪ್ರಗುಣಗುಣಸಂಖ್ಯಾಪ್ರತಿಭುವಃ ।⁣
ವಿರಾಜನ್ತೇ ನಾನಾವಿಧಮಧುರರಾಗಾಕರಭುವಾಂ⁣
   ತ್ರಯಾಣಾಂ ಗ್ರಾಮಾಣಾಂ ಸ್ಥಿತಿನಿಯಮಸೀಮಾನ ಇವ ತೇ ॥ 69॥⁣
ಮೃಣಾಲೀಮೃದ್ವೀನಾಂ ತವ ಭುಜಲತಾನಾಂ ಚತಸೃಣಾಂ⁣
   ಚತುರ್ಭಿಃ ಸೌನ್ದರ್ಯಂ ಸರಸಿಜಭವಃ ಸ್ತೌತಿ ವದನೈಃ ।⁣
ನಖೇಭ್ಯಃ ಸನ್ತ್ರಸ್ಯನ್ ಪ್ರಥಮಮಥನಾದನ್ಧಕರಿಪೋ-⁣
   ಶ್ಚತುರ್ಣಾಂ ಶೀರ್ಷಾಣಾಂ ಸಮಮಭಯಹಸ್ತಾರ್ಪಣಧಿಯಾ ॥ 70॥⁣
ನಖಾನಾಮುದ್ದ್ಯೋತೈರ್ನವನಲಿನರಾಗಂ ವಿಹಸತಾಂ⁣
   ಕರಾಣಾಂ ತೇ ಕಾನ್ತಿಂ ಕಥಯ ಕಥಯಾಮಃ ಕಥಮುಮೇ ।⁣
ಕಯಾಚಿದ್ವಾ ಸಾಮ್ಯಂ ಭಜತು ಕಲಯಾ ಹನ್ತ ಕಮಲಂ⁣
   ಯದಿ ಕ್ರೀಡಲ್ಲಕ್ಷ್ಮೀಚರಣತಲಲಾಕ್ಷಾರಸಛಣಮ್ ॥ 71॥⁣
ಸಮಂ ದೇವಿ ಸ್ಕನ್ದದ್ವಿಪವದನಪೀತಂ ಸ್ತನಯುಗಂ⁣
   ತವೇದಂ ನಃ ಖೇದಂ ಹರತು ಸತತಂ ಪ್ರಸ್ನುತಮುಖಮ್ ।⁣
ಯದಾಲೋಕ್ಯಾಶಂಕಾಕುಲಿತಹೃದಯೋ ಹಾಸಜನಕಃ⁣
   ಸ್ವಕುಮ್ಭೌ ಹೇರಮ್ಬಃ ಪರಿಮೃಶತಿ ಹಸ್ತೇನ ಝಡಿತಿ ॥ 72॥⁣
ಅಮೂ ತೇ ವಕ್ಷೋಜಾವಮೃತರಸಮಾಣಿಕ್ಯಕುತುಪೌ⁣
   ನ ಸಂದೇಹಸ್ಪನ್ದೋ ನಗಪತಿಪತಾಕೇ ಮನಸಿ ನಃ ।⁣
ಪಿಬನ್ತೌ ತೌ ಯಸ್ಮಾದವಿದಿತವಧೂಸಂಗರಸಿಕೌ⁣
   ಕುಮಾರಾವದ್ಯಾಪಿ ದ್ವಿರದವದನಕ್ರೌಂಚದಲನೌ ॥ 73॥⁣
ವಹತ್ಯಮ್ಬ ಸ್ತಮ್ಬೇರಮದನುಜಕುಮ್ಭಪ್ರಕೃತಿಭಿಃ⁣
   ಸಮಾರಬ್ಧಾಂ ಮುಕ್ತಾಮಣಿಭಿರಮಲಾಂ ಹಾರಲತಿಕಾಮ್ ।⁣
ಕುಚಾಭೋಗೋ ಬಿಮ್ಬಾಧರರುಚಿಭಿರನ್ತಃ ಶಬಲಿತಾಂ⁣
   ಪ್ರತಾಪವ್ಯಾಮಿಶ್ರಾಂ ಪುರದಮಯಿತುಃ ಕೀರ್ತಿಮಿವ ತೇ ॥ 74॥⁣
ತವ ಸ್ತನ್ಯಂ ಮನ್ಯೇ ಧರಣಿಧರಕನ್ಯೇ ಹೃದಯತಃ⁣
   ಪಯಃಪಾರಾವಾರಃ ಪರಿವಹತಿ ಸಾರಸ್ವತಮಿವ ।⁣
ದಯಾವತ್ಯಾ ದತ್ತಂ ದ್ರವಿಡಶಿಶುರಾಸ್ವಾದ್ಯ ತವ ಯತ್⁣
   ಕವೀನಾಂ ಪ್ರೌಢಾನಾಮಜನಿ ಕಮನೀಯಃ ಕವಯಿತಾ ॥ 75॥⁣
ಹರಕ್ರೋಧಜ್ವಾಲಾವಲಿಭಿರವಲೀಢೇನ ವಪುಷಾ⁣
   ಗಭೀರೇ ತೇ ನಾಭೀಸರಸಿ ಕೃತಸಂಗೋ ಮನಸಿಜಃ ।⁣
ಸಮುತ್ತಸ್ಥೌ ತಸ್ಮಾದಚಲತನಯೇ ಧೂಮಲತಿಕಾ⁣
   ಜನಸ್ತಾಂ ಜಾನೀತೇ ತವ ಜನನಿ ರೋಮಾವಲಿರಿತಿ ॥ 76॥⁣
ಯದೇತತ್ ಕಾಲಿನ್ದೀತನುತರತರಂಗಾಕೃತಿ ಶಿವೇ⁣
   ಕೃಶೇ ಮಧ್ಯೇ ಕಿಂಚಿಜ್ಜನನಿ ತವ ಯದ್ಭಾತಿ ಸುಧಿಯಾಮ್ ।⁣
ವಿಮರ್ದಾದನ್ಯೋಽನ್ಯಂ ಕುಚಕಲಶಯೋರನ್ತರಗತಂ⁣
   ತನೂಭೂತಂ ವ್ಯೋಮ ಪ್ರವಿಶದಿವ ನಾಭಿಂ ಕುಹರಿಣೀಮ್ ॥ 77॥⁣
ಸ್ಥಿರೋ ಗಂಗಾವರ್ತಃ ಸ್ತನಮುಕುಲರೋಮಾವಲಿಲತಾ-⁣
   ಕಲಾವಾಲಂ ಕುಂಡಂ ಕುಸುಮಶರತೇಜೋಹುತಭುಜಃ ।⁣
ರತೇರ್ಲೀಲಾಗಾರಂ ಕಿಮಪಿ ತವ ನಾಭಿರ್ಗಿರಿಸುತೇ⁣
   ಬಿಲದ್ವಾರಂ ಸಿದ್ಧೇರ್ಗಿರಿಶನಯನಾನಾಂ ವಿಜಯತೇ ॥ 78॥⁣
ನಿಸರ್ಗಕ್ಷೀಣಸ್ಯ ಸ್ತನತಟಭರೇಣ ಕ್ಲಮಜುಷೋ⁣
   ನಮನ್ಮೂರ್ತೇರ್ನಾರೀತಿಲಕ ಶನಕೈಸ್ತ್ರುಟ್ಯತ ಇವ ।⁣
ಚಿರಂ ತೇ ಮಧ್ಯಸ್ಯ ತ್ರುಟಿತತಟಿನೀತೀರತರುಣಾ⁣
   ಸಮಾವಸ್ಥಾಸ್ಥೇಮ್ನೋ ಭವತು ಕುಶಲಂ ಶೈಲತನಯೇ ॥ 79॥⁣
ಕುಚೌ ಸದ್ಯಃಸ್ವಿದ್ಯತ್ತಟಘಟಿತಕೂರ್ಪಾಸಭಿದುರೌ⁣
   ಕಷನ್ತೌ ದೋರ್ಮೂಲೇ ಕನಕಕಲಶಾಭೌ ಕಲಯತಾ ।⁣
ತವ ತ್ರಾತುಂ ಭಂಗಾದಲಮಿತಿ ವಲಗ್ನಂ ತನುಭುವಾ⁣
   ತ್ರಿಧಾ ನದ್ಧಂ ದೇವಿ ತ್ರಿವಲಿ ಲವಲೀವಲ್ಲಿಭಿರಿವ ॥ 80॥⁣
ಗುರುತ್ವಂ ವಿಸ್ತಾರಂ ಕ್ಷಿತಿಧರಪತಿಃ ಪಾರ್ವತಿ ನಿಜಾ-⁣
   ನ್ನಿತಮ್ಬಾದಾಚ್ಛಿದ್ಯ ತ್ವಯಿ ಹರಣರೂಪೇಣ ನಿದಧೇ ।⁣
ಅತಸ್ತೇ ವಿಸ್ತೀರ್ಣೋ ಗುರುರಯಮಶೇಷಾಂ ವಸುಮತೀಂ⁣
   ನಿತಮ್ಬಪ್ರಾಗ್ಭಾರಃ ಸ್ಥಗಯತಿ ಲಘುತ್ವಂ ನಯತಿ ಚ ॥ 81॥⁣
ಕರೀನ್ದ್ರಾಣಾಂ ಶುಂಡಾನ್ ಕನಕಕದಲೀಕಾಂಡಪಟಲೀ-⁣
   ಮುಭಾಭ್ಯಾಮೂರುಭ್ಯಾಮುಭಯಮಪಿ ನಿರ್ಜಿತ್ಯ ಭವತೀ ।⁣
ಸುವೃತ್ತಾಭ್ಯಾಂ ಪತ್ಯುಃ ಪ್ರಣತಿಕಠಿನಾಭ್ಯಾಂ ಗಿರಿಸುತೇ⁣
   ವಿಧಿಜ್ಞ್ಯೇ ಜಾನುಭ್ಯಾಂ ವಿಬುಧಕರಿಕುಮ್ಭದ್ವಯಮಸಿ ॥ 82॥⁣
ಪರಾಜೇತುಂ ರುದ್ರಂ ದ್ವಿಗುಣಶರಗರ್ಭೌ ಗಿರಿಸುತೇ⁣
   ನಿಷಂಗೌ ಜಂಘೇ ತೇ ವಿಷಮವಿಶಿಖೋ ಬಾಢಮಕೃತ ।⁣
ಯದಗ್ರೇ ದೃಶ್ಯನ್ತೇ ದಶಶರಫಲಾಃ ಪಾದಯುಗಲೀ-⁣
   ನಖಾಗ್ರಚ್ಛದ್ಮಾನಃ ಸುರಮಕುಟಶಾಣೈಕನಿಶಿತಾಃ ॥ 83॥⁣
ಶ್ರುತೀನಾಂ ಮೂರ್ಧಾನೋ ದಧತಿ ತವ ಯೌ ಶೇಖರತಯಾ⁣
   ಮಮಾಪ್ಯೇತೌ ಮಾತಃ ಶಿರಸಿ ದಯಯಾ ಧೇಹಿ ಚರಣೌ ।⁣
ಯಯೋಃ ಪಾದ್ಯಂ ಪಾಥಃ ಪಶುಪತಿಜಟಾಜೂಟತಟಿನೀ⁣
   ಯಯೋರ್ಲಾಕ್ಷಾಲಕ್ಷ್ಮೀರರುಣಹರಿಚೂಡಾಮಣಿರುಚಿಃ ॥ 84॥⁣
ನಮೋವಾಕಂ ಬ್ರೂಮೋ ನಯನರಮಣೀಯಾಯ ಪದಯೋ-⁣
   ಸ್ತವಾಸ್ಮೈ ದ್ವನ್ದ್ವಾಯ ಸ್ಫುಟರುಚಿರಸಾಲಕ್ತಕವತೇ ।⁣
ಅಸೂಯತ್ಯತ್ಯನ್ತಂ ಯದಭಿಹನನಾಯ ಸ್ಪೃಹಯತೇ⁣
   ಪಶೂನಾಮೀಶಾನಃ ಪ್ರಮದವನಕಂಕೇಲಿತರವೇ ॥ 85॥⁣
ಮೃಷಾ ಕೃತ್ವಾ ಗೋತ್ರಸ್ಖಲನಮಥ ವೈಲಕ್ಷ್ಯನಮಿತಂ⁣
   ಲಲಾಟೇ ಭರ್ತಾರಂ ಚರಣಕಮಲೇ ತಾಡಯತಿ ತೇ ।⁣
ಚಿರಾದನ್ತಃಶಲ್ಯಂ ದಹನಕೃತಮುನ್ಮೂಲಿತವತಾ⁣
   ತುಲಾಕೋಟಿಕ್ವಾಣೈಃ ಕಿಲಿಕಿಲಿತಮೀಶಾನರಿಪುಣಾ ॥ 86॥⁣
ಹಿಮಾನೀಹನ್ತವ್ಯಂ ಹಿಮಗಿರಿನಿವಾಸೈಕಚತುರೌ⁣
   ನಿಶಾಯಾಂ ನಿದ್ರಾಣಂ ನಿಶಿ ಚರಮಭಾಗೇ ಚ ವಿಶದೌ ।⁣
ವರಂ ಲಕ್ಷ್ಮೀಪಾತ್ರಂ ಶ್ರಿಯಮತಿಸೃಜನ್ತೌ ಸಮಯಿನಾಂ⁣
   ಸರೋಜಂ ತ್ವತ್ಪಾದೌ ಜನನಿ ಜಯತಶ್ಚಿತ್ರಮಿಹ ಕಿಮ್ ॥ 87॥⁣
ಪದಂ ತೇ ಕೀರ್ತೀನಾಂ ಪ್ರಪದಮಪದಂ ದೇವಿ ವಿಪದಾಂ⁣
   ಕಥಂ ನೀತಂ ಸದ್ಭಿಃ ಕಠಿನಕಮಠೀಕರ್ಪರತುಲಾಮ್ ।⁣
ಕಥಂ ವಾ ಬಾಹುಭ್ಯಾಮುಪಯಮನಕಾಲೇ ಪುರಭಿದಾ⁣
   ಯದಾದಾಯ ನ್ಯಸ್ತಂ ದೃಷದಿ ದಯಮಾನೇನ ಮನಸಾ ॥ 88॥⁣
ನಖೈರ್ನಾಕಸ್ತ್ರೀಣಾಂ ಕರಕಮಲಸಂಕೋಚಶಶಿಭಿ-⁣
   ಸ್ತರೂಣಾಂ ದಿವ್ಯಾನಾಂ ಹಸತ ಇವ ತೇ ಚಂಡಿ ಚರಣೌ ।⁣
ಫಲಾನಿ ಸ್ವಃಸ್ಥೇಭ್ಯಃ ಕಿಸಲಯಕರಾಗ್ರೇಣ ದದತಾಂ⁣
   ದರಿದ್ರೇಭ್ಯೋ ಭದ್ರಾಂ ಶ್ರಿಯಮನಿಶಮಹ್ನಾಯ ದದತೌ ॥ 89॥⁣
ದದಾನೇ ದೀನೇಭ್ಯಃ ಶ್ರಿಯಮನಿಶಮಾಶಾನುಸದೃಶೀ-⁣
   ಮಮನ್ದಂ ಸೌನ್ದರ್ಯಪ್ರಕರಮಕರನ್ದಮ್ ವಿಕಿರತಿ ।⁣
ತವಾಸ್ಮಿನ್ ಮನ್ದಾರಸ್ತಬಕಸುಭಗೇ ಯಾತು ಚರಣೇ⁣
   ನಿಮಜ್ಜನ್ಮಜ್ಜೀವಃ ಕರಣಚರಣಃ ಷಟ್ಚರಣತಾಮ್ ॥ 90॥⁣
ಪದನ್ಯಾಸಕ್ರೀಡಾಪರಿಚಯಮಿವಾರಬ್ಧುಮನಸಃ⁣
   ಸ್ಖಲನ್ತಸ್ತೇ ಖೇಲಂ ಭವನಕಲಹಂಸಾ ನ ಜಹತಿ ।⁣
ಅತಸ್ತೇಷಾಂ ಶಿಕ್ಷಾಂ ಸುಭಗಮಣಿಮಂಜೀರರಣಿತ-⁣
   ಚ್ಛಲಾದಾಚಕ್ಷಾಣಂ ಚರಣಕಮಲಂ ಚಾರುಚರಿತೇ ॥ 91॥⁣
ಗತಾಸ್ತೇ ಮಂಚತ್ವಂ ದ್ರುಹಿಣಹರಿರುದ್ರೇಶ್ವರಭೃತಃ⁣
   ಶಿವಃ ಸ್ವಚ್ಛಚ್ಛಾಯಾಘಟಿತಕಪಟಪ್ರಚ್ಛದಪಟಃ ।⁣
ತ್ವದೀಯಾನಾಂ ಭಾಸಾಂ ಪ್ರತಿಫಲನರಾಗಾರುಣತಯಾ⁣
   ಶರೀರೀ ಶೃಂಗಾರೋ ರಸ ಇವ ದೃಶಾಂ ದೋಗ್ಧಿ ಕುತುಕಮ್ ॥ 92॥⁣
ಅರಾಲಾ ಕೇಶೇಷು ಪ್ರಕೃತಿಸರಲಾ ಮನ್ದಹಸಿತೇ⁣
   ಶಿರೀಷಾಭಾ ಚಿತ್ತೇ ದೃಷದುಪಲಶೋಭಾ ಕುಚತಟೇ ।⁣
ಭೃಶಂ ತನ್ವೀ ಮಧ್ಯೇ ಪೃಥುರುರಸಿಜಾರೋಹವಿಷಯೇ⁣
  ಜಗತ್ತ್ರಾತುಂ ಶಮ್ಭೋರ್ಜಯತಿ ಕರುಣಾ ಕಾಚಿದರುಣಾ ॥ 93॥⁣
ಕಲಂಕಃ ಕಸ್ತೂರೀ ರಜನಿಕರಬಿಮ್ಬಂ ಜಲಮಯಂ⁣
   ಕಲಾಭಿಃ ಕರ್ಪೂರೈರ್ಮರಕತಕರಂಡಂ ನಿಬಿಡಿತಮ್ ।⁣
ಅತಸ್ತ್ವದ್ಭೋಗೇನ ಪ್ರತಿದಿನಮಿದಂ ರಿಕ್ತಕುಹರಂ⁣
   ವಿಧಿರ್ಭೂಯೋ ಭೂಯೋ ನಿಬಿಡಯತಿ ನೂನಂ ತವ ಕೃತೇ ॥ 94॥⁣
ಪುರಾರಾತೇರನ್ತಃಪುರಮಸಿ ತತಸ್ತ್ವಚ್ಚರಣಯೋಃ⁣
   ಸಪರ್ಯಾಮರ್ಯಾದಾ ತರಲಕರಣಾನಾಮಸುಲಭಾ ।⁣
ತಥಾ ಹ್ಯೇತೇ ನೀತಾಃ ಶತಮಖಮುಖಾಃ ಸಿದ್ಧಿಮತುಲಾಂ⁣
   ತವ ದ್ವಾರೋಪಾನ್ತಸ್ಥಿತಿಭಿರಣಿಮಾದ್ಯಾಭಿರಮರಾಃ ॥ 95॥⁣
ಕಲತ್ರಂ ವೈಧಾತ್ರಂ ಕತಿಕತಿ ಭಜನ್ತೇ ನ ಕವಯಃ⁣
   ಶ್ರಿಯೋ ದೇವ್ಯಾಃ ಕೋ ವಾ ನ ಭವತಿ ಪತಿಃ ಕೈರಪಿ ಧನೈಃ ।⁣
ಮಹಾದೇವಂ ಹಿತ್ವಾ ತವ ಸತಿ ಸತೀನಾಮಚರಮೇ⁣
   ಕುಚಾಭ್ಯಾಮಾಸಂಗಃ ಕುರವಕತರೋರಪ್ಯಸುಲಭಃ ॥ 96॥⁣
ಗಿರಾಮಾಹುರ್ದೇವೀಂ ದ್ರುಹಿಣಗೃಹಿಣೀಮಾಗಮವಿದೋ⁣
   ಹರೇಃ ಪತ್ನೀಂ ಪದ್ಮಾಂ ಹರಸಹಚರೀಮದ್ರಿತನಯಾಮ್ ।⁣
ತುರೀಯಾ ಕಾಪಿ ತ್ವಂ ದುರಧಿಗಮನಿಃಸೀಮಮಹಿಮಾ⁣
   ಮಹಾಮಾಯಾ ವಿಶ್ವಂ ಭ್ರಮಯಸಿ ಪರಬ್ರಹ್ಮಮಹಿಷಿ ॥ 97॥⁣
ಕದಾ ಕಾಲೇ ಮಾತಃ ಕಥಯ ಕಲಿತಾಲಕ್ತಕರಸಂ⁣
   ಪಿಬೇಯಂ ವಿದ್ಯಾರ್ಥೀ ತವ ಚರಣನಿರ್ಣೇಜನಜಲಮ್ ।⁣
ಪ್ರಕೃತ್ಯಾ ಮೂಕಾನಾಮಪಿ ಚ ಕವಿತಾಕಾರಣತಯಾ⁣
   ಕದಾ ಧತ್ತೇ ವಾಣೀಮುಖಕಮಲತಾಮ್ಬೂಲರಸತಾಮ್ ॥ 98॥⁣
ಸರಸ್ವತ್ಯಾ ಲಕ್ಷ್ಮ್ಯಾ ವಿಧಿಹರಿಸಪತ್ನೋ ವಿಹರತೇ⁣
   ರತೇಃ ಪಾತಿವ್ರತ್ಯಂ ಶಿಥಿಲಯತಿ ರಮ್ಯೇಣ ವಪುಷಾ ।⁣
ಚಿರಂ ಜೀವನ್ನೇವ ಕ್ಷಪಿತಪಶುಪಾಶವ್ಯತಿಕರಃ⁣
   ಪರಾನನ್ದಾಭಿಖ್ಯಮ್ ರಸಯತಿ ರಸಂ ತ್ವದ್ಭಜನವಾನ್ ॥ 99॥⁣
ಪ್ರದೀಪಜ್ವಾಲಾಭಿರ್ದಿವಸಕರನೀರಾಜನವಿಧಿಃ⁣
   ಸುಧಾಸೂತೇಶ್ಚನ್ದ್ರೋಪಲಜಲಲವೈರರ್ಘ್ಯರಚನಾ ।⁣
ಸ್ವಕೀಯೈರಮ್ಭೋಭಿಃ ಸಲಿಲನಿಧಿಸೌಹಿತ್ಯಕರಣಂ⁣
   ತ್ವದೀಯಾಭಿರ್ವಾಗ್ಭಿಸ್ತವ ಜನನಿ ವಾಚಾಂ ಸ್ತುತಿರಿಯಮ್ ॥ 100॥⁣
ಸಮಾನೀತಃ ಪದ್ಭ್ಯಾಂ ಮಣಿಮುಕುರತಾಮಮ್ಬರಮಣಿ-⁣
   ರ್ಭಯಾದನ್ತಃಸ್ತಿಮಿತಕಿರಣಶ್ರೇಣಿಮಸೃಣಃ ।⁣
ದಧಾತಿ ತ್ವದ್ವಕ್ತ್ರಂಪ್ರತಿಫಲನಮಶ್ರಾನ್ತವಿಕಚಂ⁣
   ನಿರಾತಂಕಂ ಚನ್ದ್ರಾನ್ನಿಜಹೃದಯಪಂಕೇರುಹಮಿವ ॥ 101॥⁣
ಸಮುದ್ಭೂತಸ್ಥೂಲಸ್ತನಭರಮುರಶ್ಚಾರು ಹಸಿತಂ⁣
   ಕಟಾಕ್ಷೇ ಕನ್ದರ್ಪಃ ಕತಿಚನ ಕದಮ್ಬದ್ಯುತಿ ವಪುಃ ।⁣
ಹರಸ್ಯ ತ್ವದ್ಭ್ರಾನ್ತಿಂ ಮನಸಿ ಜನಯಾಮ್ ಸ್ಮ ವಿಮಲಾ⁣
   ಭವತ್ಯಾ ಯೇ ಭಕ್ತಾಃ ಪರಿಣತಿರಮೀಷಾಮಿಯಮುಮೇ ॥ 102॥⁣
ನಿಧೇ ನಿತ್ಯಸ್ಮೇರೇ ನಿರವಧಿಗುಣೇ ನೀತಿನಿಪುಣೇ⁣
   ನಿರಾಘಾತಜ್ಞಾನೇ ನಿಯಮಪರಚಿತ್ತೈಕನಿಲಯೇ ।⁣
ನಿಯತ್ಯಾ ನಿರ್ಮುಕ್ತೇ ನಿಖಿಲನಿಗಮಾನ್ತಸ್ತುತಿಪದೇ⁣
   ನಿರಾತಂಕೇ ನಿತ್ಯೇ ನಿಗಮಯ ಮಮಾಪಿ ಸ್ತುತಿಮಿಮಾಮ್ ॥ 103॥⁣
॥ ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ⁣
ಶ್ರೀಗೋವಿನ್ದಭಗವತ್ಪೂಜ್ಯಪಾದಶಿಷ್ಯಸ್ಯ⁣
ಶ್ರೀಮಚ್ಛಂಕರಭಗವತಃ ಕೃತೌ ಸೌನ್ದರ್ಯಲಹರೀ ಸಮ್ಪೂರ್ಣಾ⁣
                 ॥ ಓಂ ತತ್ಸತ್ ॥⁣

April 16, 2026

ಒಂದು ಹಣತೆ‌

ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.
ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.
ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು
ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು
ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು.
” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ ”
ಆ ಭರವಸೆಯ ಬೆಳಕು ನಿಮ್ಮದಾಗಲಿ

April 9, 2026

गुरुर्ब्रह्मा

गुरुर्ब्रह्मा गुरुर्विष्णुर् 
गुरुर्देवो महेश्वरः ।
गुरुः साक्षात्परं ब्रह्म 
तस्मै श्रीगुरवे नमः ।।
     वस्तुतः मनुष्यस्य कृते सन्मार्गदर्शकः कश्चन गुरुः अत्यन्तम् आवश्यकः। अस्मिन् कल्मषोपेते युगे तादृशः सद्गुरुः अत्यन्तं दुर्लभतां गतोऽस्ति । तस्मात् सर्वेषां हृदये, सर्वत्र च विद्यमानः परब्रह्म परमात्मा हि समेषां सद्गुरुः वर्तते, तस्य नित्यम् अन्वेषणञ्च अस्माभिः मनुष्यैः कर्तव्यम् । गुरोः प्राप्तिः, तस्य सान्निध्यञ्च मनुष्यस्य परमकल्याणाय भवति । वस्तुतस्तु जगति सर्वेषां गुरुरेक एव, यश्च परमात्मा आख्यायते - 'कृष्णं वन्दे जगद्गुरुम्' इति । यदा कस्यचन अन्तःकरणे स्वश्रेयसः, कल्याणस्य, उद्धारस्य वा इच्छा जागरिता भवति तदा सः आत्मानं भगवतः शिष्यं मन्यते ; भगवतः शरणागतो भूत्वा शिक्षां प्रार्थयते - 'शिष्यस्तेऽहं शाधि मां त्वां प्रपन्नम्' इति गीतावचनम् । गीता बाह्यविधिषु, बाह्यपरिवर्तने च तावत् आदरभावं न दर्शयति, यावच्च अन्तर्भावे, विवेके, बोधे, जिज्ञासायां, त्यागे च आदरं दर्शयति । यतोहि गीताया उपदेशः सार्वभौमः, न वा कमपि विशेषसम्प्रदायं, व्यक्तिं वा आलम्ब्य भगवता कृत उपदेशोऽयं,  प्रत्युत मानवमात्रस्य कृते प्रदत्त उपदेशो वर्तते । 
     यदा कस्यचन अन्तःकरणे तीव्रजिज्ञासा, श्रद्धा, भक्तिः, विश्वास इत्यादिभावः समुद्भवेत् तदा मनुष्यो विना केनापि सम्बन्धेन अन्तःकरणे स्वतःस्फुर्ततया जागरितं स्वोपदेशं स्वीकुर्यात् - 'श्रद्धावांल्लभते ज्ञानम्' इति । तात्पर्यं यत् ज्ञानन्तु स्वकीयया जिज्ञासया, लगनतया हि सम्भवति, न वा केवलं गुरोः स्वीकरणमात्रेण । स्वकीयोद्धारस्तु स्वयमेव कार्यः - 'उद्धरेदात्मनात्मानम्' इति ।
     वास्तविकतया भगवान् हि सर्वेषां गुरुः,  यच्च उपर्युक्तम् । यतोहि भगवता रचिते संसारेऽस्मिन् यस्मादपि ज्ञानप्रकाशादिकम् उपलब्धं भवति, तत्तु भगवत्तो हि प्राप्तवस्तु स्यात् - 'अहमादिर्हि देवानां महर्षीणां च सर्वशः' इति ।
     पूर्वं परम्परया बहवः सिद्धा गुरवः सञ्जाताः अस्मिन् भारते, भूतले च ।परन्तु अस्मिन् घोरकलिसमये न सद्गुरवः अपितु धर्मनाम्ना वञ्चकाः, निन्दकाः, क्रूरा वा हि सर्वत्र उपलभ्यन्ते । कथञ्चित् कोटिषु एक एकः सिद्धगुरुः स्याद्वा न वा, शङ्केति । गुरुलक्षणं महद्भवति । सज्जनस्य दृष्टिः, कर्म, भक्तिः, ज्ञानम्  इत्यादिकं सर्वं सदैव एकमात्रं भगवदभिमुखं हि भवति । मानवता, सहृदयता, समदर्शिता, प्रेम, आत्मीयता इत्यादिको भावो गुरुलक्षणे अवलोक्यते इति, शुभम्।
         -- नारदः ।

March 30, 2026

ಲಿಂಗದ ಮೇಲೆ ಕಾಲಿಟ್ಟ ಸ್ವಾಮಿ, ತಪ್ಪೇ?

"ಗುರು ಬ್ರಹ್ಮ ಗುರು ವಿಷ್ಣು:
ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ"
 
    ನಾನು ಒಮ್ಮೆ ಚಾಲನಾ ಪರವಾನಗಿ ಪಡೆಯಲು ಹೋಗಿದ್ದೆ. ಅಲ್ಲಿದ್ದ ಅಧಿಕಾರಿ ಒಂದೆರಡು ಚಾಲನಾ ನಿಯಮಗಳ ಪ್ರಶ್ನೆಗಳನ್ನು ಕೇಳಿ ನಂತರ, "ಬ್ರಹ್ಮ ದೊಡ್ಡವನೋ, ಗುರು ದೊಡ್ಡವನೋ?" ಎಂದು ಕೇಳಿದರು. ಆಗ ನನಗೆ ನಿತ್ಯ ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮೇಲಿನ ಶ್ಲೋಕ ನೆನಪಾಗಿ, "ಗುರು ದೊಡ್ಡವನು" ಎಂದೆನು. ಆಗ ಅಧಿಕಾರಿಯು "ಗುಡ್, ಪರೀಕ್ಷೆ ಪಾಸ್ ಆದೆ, ನಡಿ" ಎಂದು ಪರವಾನಗಿ ದಯಪಾಲಿಸಿದರು. ಹೇಗೂ ಸೀಲು ಒತ್ತಿ ಸಹಿ ಮಾಡಿ ಆಗಿದೆಯೆಲ್ಲ ಎಂದು, "ತಾವು ಕೇಳಿದ ಪ್ರಶ್ನೆ ಇಲ್ಲಿ ಅವಶ್ಯವೇ" ಎಂದು ಕೇಳಿದೆ. ಅದಕ್ಕೆ ಆ ಅಧಿಕಾರಿ, "ಇದು ಭಾರತದ ಪ್ರತಿಯೊಂದು ಮಜಲಿನಲ್ಲಿಯೂ ಕೇಳಬೇಕಾದ ಪ್ರಶ್ನೆ, ನಡಿ" ಎಂದರು.
 
ಭಾರತದ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ದೇವರಿಗಿಂತ ಮಿಗಿಲಾದ ಸ್ಥಾನಮಾನವನ್ನು ಕೊಡಲಾಗಿದೆ. ಈ ಮಹತ್ವವನ್ನು ಹಿಂದೂ ಪ್ರಬೇಧದ ಎಲ್ಲಾ ಮತಧರ್ಮಗಳೂ ಪಾಲಿಸುತ್ತವೆ. ಪುರಂದರದಾಸರು, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಪದ ಹಾಡಿದ್ದಾರೆ.
 
ಇನ್ನು ಇದೇ ರೀತಿ ವೀರಶೈವ ಲಿಂಗವಂತರಲ್ಲಿ ಹಿಂದೂ ಪ್ರಬೇಧದ ಇತರೆಲ್ಲಾ ಮತಪಂಥಗಳಿಗಿಂತ ಗುರುವಿಗೆ ಅತ್ಯಂತ ಹಿರಿಯ ಸ್ಥಾನವನ್ನು ಕೊಡಲಾಗಿದೆ. 
 
ಶೂನ್ಯಪೀಠದ ಶೂನ್ಯಾಧ್ಯಕ್ಷ ಅಲ್ಲಮನು, 
"ಶ್ರೀಗುರುವೆ ಎನಗೆ ಕಾಯವು, ಶ್ರೀಗುರುವೆ ಎನಗೆ ಪ್ರಾಣವು,
ಶ್ರೀಗುರುವೆ ಎನಗೆ ಇಹವು, ಶ್ರೀಗುರುವೆ ಎನಗೆ ಪರವು,
ಶ್ರೀಗುರುವೆ ಎನಗೆ ಗತಿಯು, ಶ್ರೀಗುರುವೆ ಎನಗೆ ಮತಿಯು,
ಶ್ರೀಗುರುಪಾದವೆ ಎನಗೆ ಘನತರ ಮುಕ್ತಿಗೆ ಕಾರಣವು.
ಗುಹೇಶ್ವರ ಗುಹೇಶ್ವರಾ, ನಿಮ್ಮಾಣೆ ಇದು ಸತ್ಯ." ಎಂದಿದ್ದಾನೆ.
 
ಷಟಸ್ಥಲ ಚಕ್ರವರ್ತಿ ಚೆನ್ನಬಸವಣ್ಣನು,
 
"ಪರುಷವಿದ್ದುದ ಕಂಡು ಪರಿಣಾಮಬಡುವರು,
ಇಷ್ಟಲಿಂಗ ಬಿದ್ದಿತ್ತೆಂದು ಕುತ್ತಿಕೊಂಡು ಸಾವರು.
ಅರಿದರಿದು ಗುರುಶಿಷ್ಯಸಂಬಂಧವು,
ಅರಿವುಳ್ಳವರಿಗಲ್ಲದೆ ಮತ್ತಾರಿಗೆಯೂ ಆಗದು.
ಕುರುಹು ಘನವೋ? ಲಿಂಗ ಘನವೋ? ಅರಿವುಳ್ಳವರು ಹೇಳಿರೆ.
ಮರಹು ಕವಿದಹುದೆಂದು ಕುರುಹ ತೋರಿದನಲ್ಲದೆ
ಅರಿದರಿವ ಮರೆದರೆ ಕೂಡಲಚೆನ್ನಸಂಗಯ್ಯಂಗೆ
ಅವನಂದೇ ದೂರ." 
 
ಎಂದು ಲಿಂಗಕ್ಕಿಂತ ಗುರುವೇ ಪ್ರಮುಖ ಎಂದಿದ್ದಾನೆ.
 
ಭಕ್ತಿ ಭಂಡಾರಿ ಬಸವಣ್ಣನು,
 
"ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.
ತನುವುದ್ದೇಶ, ಮನವುದ್ದೇಶವಾಗಿ
ಮಾಡುವ ನೇಮ ಸಲ್ಲವು, ಸಲ್ಲವು.
ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.
ಕೂಡಲಸಂಗಮದೇವಯ್ಯಾ
ಇವು ನಿಮ್ಮ ನಿಜದೊಳಗೆ ನಿಲ್ಲವು, ನಿಲ್ಲವು." 
 
ಎಂದು ಗುರುಪಥಕ್ಕಿಂತ ಮಿಗಿಲಾದ ಯಾವ ಪಥವೂ ಸಲ್ಲದು ಎಂದಿದ್ದಾನೆ.
 
ಇನ್ನು ಆಗಮಗಳಲ್ಲಿ, "ಮಹಾಲಿಂಗವೇ ಗುರುವಿನ ಅನುಗ್ರಹದಿಂದ ಕರಸ್ಥಲಕ್ಕೆ ಬಂದು ಇಷ್ಟಲಿಂಗವಾಗಿದೆ, ಪ್ರಾಣದಲ್ಲಿ ಪ್ರಾಣಲಿಂಗವೆನಿಸಿದೆ, ಭಾವದಲ್ಲಿ ಭಾವಲಿಂಗವೆನಿಸಿದೆ. ಶ್ರೀಗುರುವು ಜೀವನಿಗೆ ದೀಕ್ಷೆ ನೀಡುವಾಗ ಅವನಲ್ಲಿ ಕಂಡುಬರುವ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಭೇದಗಳನ್ನು ವಿಶ್ಲೇಷಿಸಿ ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳನ್ನು ಕಲ್ಪಿಸಿ ಅವುಗಳಲ್ಲಿ ಕ್ರಮವಾಗಿ ಈ ಲಿಂಗಗಳನ್ನು ಸ್ಥಾಪಿಸುವನು. ಕಾರಣ ಇಷ್ಟಲಿಂಗದಲ್ಲಿ ದೃಷ್ಟಿಯೋಗ, ಪ್ರಾಣಲಿಂಗದಲ್ಲಿ ಮನೋಯೋಗ ಮತ್ತು ಭಾವಲಿಂಗದಲ್ಲಿ ಭಾವಯೋಗವನ್ನು ಏಕಕಾಲದಲ್ಲಿ ಸಾಧಿಸಿದ ಸಾಧಕರು ಮುಕ್ತರು. ಈ ಮೂರರ ಸಮನ್ವಯವೇ ಶಿವಯೋಗವೆಂಬುದು ಶೈವಾಗಮದ ಸಿದ್ಧಾಂತ. ಅದೇ ಶಿವಾರಾಧನೆಯ ಕ್ರಮ ಎನ್ನಲಾಗಿದೆ. 
 
ಹೀಗೆ ಹಿಂದೂ ಪ್ರಭೇದಗಳಲ್ಲಿ, ವಚನಗಳಿಗೆ ಮೂಲವಾದ ಆಗಮಗಳಲ್ಲಿ ಮತ್ತು ಸಿದ್ಧಾಂತ ಶಿಖಾಮಣಿಯಲ್ಲಿ ಸಹ ಗುರುವನ್ನು ಶಿವನ ಸಾಕ್ಷಾತ್ ಸ್ವರೂಪವೆನ್ನುತ್ತ ಜ್ಞಾನದಾಯಕ ಮತ್ತು ಲಿಂಗ-ಜಂಗಮದೊಂದಿಗೆ ಆತ್ಮನ ಉದ್ಧಾರಕನೆಂದು ಬಣ್ಣಿಸಲಾಗಿದೆ.  ಗುರು, ಲಿಂಗ, ಜಂಗಮ ಎಂಬ ತ್ರಿವಿಧ ಸಂಪತ್ತಿನಲ್ಲಿ ಗುರುವೇ ಪ್ರಥಮ ಮತ್ತು ಶ್ರೇಷ್ಠವೆಂದು ಪ್ರತಿಪಾದಿಸಲಾಗಿದೆ.
 
ಹಾಗಾಗಿಯೇ ಲಿಂಗವಂತ ವೀರಶೈವರಲ್ಲಿ ಸಕಲ ಅರಿವು, ಕಲಿಕೆ (ಜ್ಞಾನ)ಯಿಂದ ಬಯಲು (ಮುಕ್ತಿ)ಗೆ ಗುರುಕಾರುಣ್ಯವೇ ಅಂತಿಮವಾಗಿದೆ. ಈ ಕಾರಣವಾಗಿಯೇ ಲಿಂಗೋದ್ಭವ (ಗರ್ಭದಲ್ಲಿರುವಾಗಲೇ ಕೊಡುವ ಲಿಂಗದೀಕ್ಷೆ)ದಿಂದ ಲಿಂಗೈಕ್ಯರಾಗಿ ಅಂತಿಮ ಸಂಸ್ಕಾರ ಪಡೆಯುವಾಗಲೂ ಗುರುವೇ ಪರಮವಾಗಿದ್ದಾನೆ. ವೀರಶೈವ ಲಿಂಗವಂತ ಮತದ ಎಲ್ಲಾ ಧರ್ಮಗ್ರಂಥಗಳ ಮುಖೇನ ಸಹ "ಗುರುವೇ ಪರಮೋಚ್ಚ" ಎಂದು ಹೇಳಲಾಗಿದೆ.
 
ಹೀಗಿರುವಾಗ ಅಖಂಡ ವೀರಶೈವ ಮತವನ್ನು ಅವಹೇಳಿಸುತ್ತಾ, ಕೆಲವು ಲಿಂಗಾಹತಿಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಎಂದರೆ ಈ ಚಿತ್ರ! ಇಲ್ಲಿ ವೀರಶೈವ ಧರ್ಮಗುರುಗಳಾದ ರಂಭಾಪುರಿ ಜಗದ್ಗುರುಗಳ ಪಾದಪೂಜೆಯ ಚಿತ್ರವನ್ನು ತಿರುಚಿ "ಲಿಂಗದ ಮೇಲೆ ಕಾಲಿಟ್ಟ ಸ್ವಾಮಿ" ಎಂದು ಅವಹೇಳಿಸಿ ಲಕ್ಷಾಂತರ ಭಕ್ತರ ಭಾವನೆಗಳನ್ನು ಕೆಣಕಲಾಗಿದೆ. ಪಾದಪೂಜೆಯ ಒಂದು ಕ್ರಮವಾಗಿ ಸ್ವಾಮಿಗಳ ಕಾಲಿಗೆ ಪುಷ್ಪಾರ್ಚನೆ ಮಾಡುತ್ತಿರುವ ಚಿತ್ರವನ್ನು ಹಿಡಿದು ವಿಚಿತ್ರ ವಿಕಾರವಾಗಿ ಸಮಾಜದಲ್ಲಿ ಧಾರ್ಮಿಕ ದ್ವೇಷ ಹರಡುತ್ತಿವೆ. 
 
ಹೀಗೆ ಅವಹೇಳಿಸುವವರಿಗಾಗಿಯೇ ಬಸವಣ್ಣನು,
 
“ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು,
ಅವು ಒಂದರ ಸಿಹಿಯನೊಂದರಿಯವು.
ಭಕ್ತ ಜಂಗಮದ ನಡುವೆ ಅರ್ಥಪ್ರಾಣ ಅಭಿಮಾನವೆಂಬ
ಸಿಗುರು ಕಾಡಿತ್ತು ಕಾಣಾ, ಕೂಡಲಸಂಗಮದೇವಾ”
ಎಂದಿದ್ದಾನೆ.
 
ಅಂತೆಯೇ ಗುರುಸ್ವರೂಪಿ ಜಂಗಮನ ಕುರಿತು,
 
“ಗುರು ಮುನಿದಡೆ ಒಂದು ದಿನ ತಾಳುವೆ,
ಲಿಂಗ ಮುನಿದಡೆ ದಿನವರೆ ತಾಳುವೆ.
ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ,
ಎನ್ನ ಪ್ರಾಣದ ಹೋಕು ಕೂಡಲಸಂಗಮದೇವಾ”
 
ಎಂದೂ ಬಸವಣ್ಣನು ಹೇಳಿದ್ದಾನೆ.
 
ಮಡಿವಾಳ ಮಾಚಿದೇವನು ಗುರುವಿನ ಪ್ರಾಮುಖ್ಯತೆಯನ್ನು ಹೀಗೆ ವರ್ಣಿಸಿದ್ದಾನೆ:

"ಅರಿದಲ್ಲದೆ ಗುರುವ ಕಾಣಬಾರದು.
ಅರಿದಲ್ಲದೆ ಲಿಂಗವ ಕಾಣಬಾರದು.
ಅರಿದಲ್ಲದೆ ಜಂಗಮವ ಕಾಣಬಾರದು.
ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ
ಎನಗೆ ಸ್ವಾಯತವಾಯಿತ್ತಾಗಿ,
ಭಿನ್ನವಿಲ್ಲ ಕಾಣಾ ಕಲಿದೇವರದೇವ." 

ಹೀಗೆ ಈ ಲಿಂಗಾಹತಿಗಳೊಪ್ಪದ ಆಗಮ, ಸಿದ್ಧಾಂತ ಶಿಖಾಮಣಿಗಳ ಹೊರತಾಗಿಯೂ ವಚನಸಾಹಿತ್ಯದಲ್ಲಿಯೇ ಗುರುವಿನ ಮಹತ್ವ, ಮತ್ತು ಲಿಂಗಕ್ಕಿಂತ ಗುರುವೇ ಮುಖ್ಯ ಎಂಬ ಧಾರ್ಮಿಕ ನೀತಿಯೇ ವಿಜೃಂಬಿಸಿದೆ. ಇಷ್ಟೆಲ್ಲಾ ಇದ್ದೂ ಅರಿವಿಲ್ಲದ ಅರಿವುಗೇಡಿಗಳು ಅರಿತಿಹೆವೆಂದೆಡೆ ಇವರಿಗೇನು ಲಿಂಗ ಸ್ವಾಯತವಾಗುವುದು? ಹಾಗಾಗಿಯೇ ಇವರು ಲಿಂಗಾಹತರು! ಇವರೆಲ್ಲರೂ ಬಸವಣ್ಣ, ಲಿಂಗಾಯತ, ಲಿಂಗದ ಬಗ್ಗೆ ಮಾತನಾಡಲು ಅನರ್ಹರು.

ಇನ್ನು ಅಸಲಿಗೆ ಈ ಲಿಂಗಾಹತಿಗಳು ಆರೋಪಿಸುವಂತೆ ಲಿಂಗದ ಮೇಲೆ ಕಾಲನ್ನೇ ಇಟ್ಟಿದ್ದರೂ ಅದು ವೀರಶೈವ ಲಿಂಗವಂತ ಧರ್ಮಾನುಷ್ಠಾನದ ಭಾಗವೇ ಆಗಿದೆ! ಇದನ್ನು ಶೂನ್ಯಪೀಠವನ್ನು ಏರಿದ್ದ ಅಲ್ಲಮ, ಚೆನ್ನಬಸವಣ್ಣ , ಸಿದ್ಧರಾಮೇಶ್ವರರಾದಿಯಾಗಿ ತಮ್ಮ ವಚನಗಳಲ್ಲಿ ಸ್ಪಷ್ಟವಾಗಿ ಹೀಗೆಯೇ ಮಾಡಬೇಕೆಂದು ಹೇಳಿದ್ದಾರೆ. ಸಾಕ್ಷ್ಯವಾಗಿ ಚೆನ್ನಬಸವಣ್ಣನ ವಚನ ಹೀಗಿದೆ:

"ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ
ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ,
ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು
ಅಂಗುಲಗಳಲ್ಲಿ
ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ
ಮೂರು ವೇಳೆ ಸ್ಪರ್ಶನವ ಮಾಡಿ,
ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು
ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು.
ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು.
ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು.
ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ
ಸ್ಪರ್ಶನೋದಕವೆನಿಸುವುದು.
ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು.
ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ
ಅಪ್ಯಾಯನೋದಕವೆನಿಸುವುದು.
ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು.
ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು
ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು.
ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು
ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು_
ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು
ಅರಿದು ಆಚರಿಸುವುದು.
ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ
ಕೂಡಲಚೆನ್ನಸಂಗಮದೇವಾ."

ಅದೇ ರೀತಿ ಗುರುಸಿದ್ಧದೇವರ ವಚನ ಹೀಗಿದೆ:

"ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು
ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ
ನಿರಂಜನಜಂಗಮಕ್ಕೆ ಉಪರಿಸಿಂಹಾಸನ ಮಾಡಿ,
ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ
ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ
ಜಂಗಮದೀಕ್ಷಾಪಾದೋದಕವ ತುಂಬಿ,
ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ,
ನವಧಾನ್ಯ, ನವಸೂತ್ರ, ವಿಭೂತಿವೀಳ್ಯೆ,
ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ
ಷೋಡಶೋಪಚಾರಂಗಳಿಂದೊಪ್ಪುವ
ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ
ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ
ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ,
ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ,
ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ
ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ,
ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ
ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ,
ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ
ಗಣಸಾಕ್ಷಿಯಾಗಿ ಶ್ರೀ ಗುರುದೇವನು
ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ,
"ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ,"
ಆ ಪಂಚಕಲಶಂಗಳಲ್ಲಿ ಶೋಬ್ಥಿಸುವಂಥ ದೇವಗಂಗಾಜಲಸ್ವರೂಪವಾದ
ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ
ಆ ಕಲಶಂಗಳೈದರಲ್ಲಿ ತೆಗೆದುಕೊಂಡು
ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ
ಒಂದು ಬಿಂದುವ ತಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ,
ಇವಾರುತೆರದ ಅರ್ಘೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ
ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು,
ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ
ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ
ಮಾಡುವಂಥಾದೆ ಕಲಶಾಬ್ಥಿಷೇಕದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ."

ಬಸವಾದಿ ಶರಣರೇ "ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ..." ಎಂದಿರುವಾಗ ಈ ಲಿಂಗಾಹತಿಗಳು ಯಾವ ಬಸವ, ಯಾವ ಶರಣ, ಯಾವ ವಚನ, ಯಾವ ಲಿಂಗಾಯತದ ಬಗ್ಗೆ ಮಾತನಾಡುತ್ತಿದ್ದಾರೆ?!?!

ಅಂದು ನನಗೆ "ಬ್ರಹ್ಮ ದೊಡ್ಡವನೋ, ಗುರು ದೊಡ್ಡವನೋ" ಎಂದು ಕೇಳಿ ಚಾಲನಾ ಪರವಾನಗಿ ನೀಡಿದಂತೆ ಇಂದು ಗುರು, ಲಿಂಗ, ಜಂಗಮ, ಬಸವಣ್ಣ, ವಚನ, ಲಿಂಗಾಯತದ ಬಗ್ಗೆ ಮಾತನಾಡುವ ಅರ್ಹತಾ ಪತ್ರ ಅತ್ಯವಶ್ಯವಾಗಿದೆ. ಏನೊಂದರಿಯದೆ ಎಂತೆಂದರಿಯದೆ ಕೇವಲ "ಬಸವಪರ ಸಂಘಟನೆಗಳು"ಎಂದರೆ ಅವು ಭಕ್ತಿ ಭಂಡಾರಿ ಬಸವಣ್ಣನ ಹೆಸರಿನ ಸಂಘಟನೆಗಳಲ್ಲ! ಅವು ಕೇವಲ ಬೀಜವಿರದ ತುಡುಗು ದನಗಳ ಸಂಘಗಳು. ಬಸವ ದಟ್ ಬಸವ ದಿಸ್ ಎಂದು ಎಲ್ಲೆಲ್ಲಿಯೂ ಬುಲ್ ಶಿಟ್ ಹಾಕಿ ಸಮಾಜವನ್ನು ಕಲುಷಿತಗೊಳಿಸುತ್ತಿರುವ ಈ ದನಗಳ ಬಗ್ಗೆ ಸಮಾಜ ಎಚ್ಚರಗೊಂಡು ಪಾಠ ಕಲಿಸುವ ತುರ್ತು ಇಂದು ಅಖಂಡ ವೀರಶೈವ ಲಿಂಗಾಯತ ಸಮಾಜದ ಮುಂದಿದೆ.
 
~ ರವಿ ಹಂಜ್.

March 27, 2026

ಸಮಯದ‌ ಮಹತ್ವ

        ಮೊನ್ನೆ ಗೆಳೆಯರು ಒಂದು ಕಡೆ ಸೇರೋಣ ಅಂತ ಪ್ಲಾನ್ ಮಾಡಿದ್ವಿ. ಅದರಲ್ಲಿ ಕೆಲವರು‘ನಾನು ತುಂಬಾ ಬ್ಯುಸಿ’ ಎಂದರು ಹಾಗೂ ಕೆಲವರು ‘ಬದುಕೇ ಬೋರ್ ಎದ್ದು ಹೋಗಿದೆ . ಹೇಗೆ ಟೈಂಪಾಸ್ ಮಾಡೋದು ಗೊತ್ತೇ ಅಗ್ತಿಲ್ಲ’ ಒಳ್ಳೆಯದು ಆಯ್ತು ಎಂದರು. ನಿಮ್ಮಲ್ಲೋ ಇಂತ ಹಳಹಳಿಸುವ ಸ್ನೇಹಿತರು ಇದ್ದೇ ಇರುತ್ತಾರೆ. ಸಮಯದ ಮಹತ್ವ ಅರಿತವರು ಈ ಎರಡೂ ಮಾತನ್ನು ಎಂದಿಗೂ ಹೇಳುವುದಿಲ್ಲ.ಒಂದು ದಿನಕ್ಕೆ 24 ಗಂಟೆಗಳು ಎಂಬುದು ಎಲ್ಲರಂತೆ ಅವರಿಗೂ ಗೊತ್ತಿರುತ್ತೆ. ಆದರೆ ಇರುವ 24 ಗಂಟೆಯನ್ನು ಸದುಪಯೋಗ ಪಡಿಸಿಕೊಳ್ಳುವ ವಿಧಾನ ತಿಳಿಯದೇ ಅವರು ಒದಾಡುತ್ತಿರುತ್ತಾರೆ.ಸಮಯ ನಿರ್ವಹಣೆ ಒಂದು ಕಲೆ. ಸಮಯವನ್ನು ಪಳಗಿಸಿಕೊಂಡವರಿಗೆ ಅದು ನಂಬಿಕಸ್ಥ ಸಹಾಯಕ. ಸ್ವೇಚ್ಛಾಚಾರದಿಂದ ವರ್ತಿಸಿದವರಿಗೆ ಸಮಯವೇ ಮಾರಕ. ನಿಮಗೂ & ನಮಗೂ ಒಂದು ದಿನದಲ್ಲಿರುವುದು ಕೇವಲ ಇಪ್ಪತ್ನಾಲ್ಕು ತಾಸುಗಳು ಮಾತ್ರ. ಇವುಗಳಲ್ಲೇ ನಮ್ಮ ಉದ್ಯೋಗ, ಯಾವುದೇ ವೃತ್ತಿ, ಮನೆಕೆಲಸ, ಮಕ್ಕಳ ಪೋಷಣೆ, ಇನ್ನಿತರ ಜವಾಬ್ದಾರಿಗಳ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲರ ಬದುಕಿನಲ್ಲೂ ದಿನದ ಬಹುಭಾಗ ಈ ಮುಖ್ಯ ಕಾರ್ಯಗಳಿಗಾಗಿಯೇ ವಿನಿಯೋಗವಾಗುತ್ತದೆ. ಇದರ ಜತೆಗೆ ಮನೆಗೆ ಸಂಬಂಧಿಸಿದ ಕೆಲಸಗಳು ಮತ್ತು ನಿತ್ಯಬದುಕಿಗೆ ಅಗತ್ಯವಿರುವ ವಸ್ತು, ಸಲಕರಣೆ ಮುಂತಾದವನ್ನು ಹೊಂದಿಸಿಕೊಳ್ಳುವತ್ತ ಗಮನಹರಿಸಬೇಕು. ವೈಯಕ್ತಿಕ ಆಸಕ್ತಿ, ಅಭಿರುಚಿಗಳಿಗೂ ಆದ್ಯತೆ ನೀಡಬೇಕು. ಗೆಳೆಯರು, ಬಂಧು-ಬಳಗದವರೊಡನೆ ಒಡನಾಟ, ಅವರುಗಳ ಮನೆಗೆ ಹೋಗಿಬರುವುದನ್ನೂ ಮಾಡಬೇಕು. ಮನೆಯಲ್ಲಿ ವಯಸ್ಸಾದ ತಂದೆ-ತಾಯಿಗಳ ಯೋಗಕ್ಷೇಮವನ್ನೂ ಕಡೆಗಣಿಸುವಂತಿಲ್ಲ. ಇನ್ನು ದಿನನಿತ್ಯದ ಅನೇಕಾನೇಕ ಕೆಲಸಗಳಲ್ಲಿ ಕೆಲವಂತೂ ತುರ್ತಾಗಿ ಮಾಡಬೇಕಾಗಿರುವಂಥಾದ್ದು ಇರುತ್ತವೆ. ಈ ಎಲ್ಲ ಸಂದರ್ಭಗಳಲ್ಲೂ ನಮ್ಮಲ್ಲಿ ಅನೇಕರನ್ನು ಬಹಳವಾಗಿ ಕಾಡುವಂಥಾದ್ದು ಸಮಯದ ಸಮಸ್ಯೆ. ಸಮಯವೇ ಸಾಕಾಗುತ್ತಿಲ್ಲವೆಂಬ ಕೊರಗು ಅನೇಕ ಸಂದರ್ಭಗಳಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಕಾಡುತ್ತಿರುತ್ತದೆ.
    ಸಮಯ ಉಳಿತಾಯ ದೃಷ್ಟಿಯಿಂದ ಸಮಯದ ಆಯ್ಕೆ ಮತ್ತು ಹಂಚಿಕೆ ಬಹಳ ಮುಖ್ಯವಾದದ್ದು. ಸಮಯವನ್ನು ನಿಶ್ಚಿತವಾದ ಯೋಜನೆಗೆ ತಕ್ಕಂತೆ ಅನಿರೀಕ್ಷಿತ ಆಗುಹೋಗುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಗದಿಪಡಿಸಬೇಕು. ನೀವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗಿಕೊಳ್ಳುವವರೆಗೆ ಯಾವ್ಯಾವ ಕೆಲಸಗಳನ್ನು ಮಾಡಬೇಕೆಂಬುದರ ಬಗ್ಗೆ ಪೂರ್ವಯೋಜಿತ ಕಲ್ಪನೆ ನಿಮಗಿರಬೇಕಾಗುತ್ತದೆ. ಇದರಲ್ಲಿ ನಿಮ್ಮ ಕಚೇರಿಯಲ್ಲಿ ಉದ್ಯೋಗ ನಿರ್ವಹಣೆ ಅಥವಾ ಬದುಕು ನಿರ್ವಹಣೆ ಕಾಯಕಕ್ಕೆ ಪ್ರಥಮ ಆದ್ಯತೆ ಇರಲಿ. ಜತೆಗೆ ನಿಮ್ಮ ಇನ್ನಿತರ ಕೆಲಸ ಕಾರ್ಯಗಳು, ವ್ಯಾಯಾಮ, ಪೂಜೆ, ಸಂಜೆಯ ವಾಕಿಂಗ್, ಬ್ಯಾಂಕ್-ಅಂಚೆ ಕಚೇರಿಗೆ ಹೋಗಿ ಬರುವುದು, ಗೆಳೆಯ ಅಥವಾ ಸಂಬಂಧಿಕರ ಮನೆಗೆ ಹೋಗಿಬರುವುದು, ಕುಟುಂಬದೊಡನೆ ಸಮಯ ಕಳೆಯುವುದು -ಇತ್ಯಾದಿ. ಈ ಎಲ್ಲ ಕೆಲಸಗಳಿಗೂ ವೇಳೆಯನ್ನು ನಿಗದಿಪಡಿಸಿಕೊಂಡುಬಿಡಿ. ಅದೇ ರೀತಿ ಉದ್ಯೋಗ ನಿರ್ವಹಣೆಯಲ್ಲಿ ಯಾವ್ಯಾವ ಕೆಲಸಗಳನ್ನು ಅಥವಾ ಫೈಲುಗಳನ್ನು ವಿಲೇವಾರಿ ಮಾಡಬೇಕೆಂದು ನಿರ್ಧರಿಸಿ ಅದಕ್ಕೆ ವೇಳೆಯನ್ನು ಕೂಡ ಮುಂಚಿತವಾಗಿಯೇ ನಿಗದಿ ಮಾಡಿಟ್ಟುಬಿಡಿ.
    ಪ್ರತಿ ಮುಂಜಾನೆ ಏಳುತ್ತಿದ್ದಂತೆ ಎಲ್ಲರಿಗೂ ಸಮಾನವಾಗಿ ಸಿಗುವ 24 ಗಂಟೆಗಳ ಸಮಯವನ್ನು ಸಮರ್ಥವಾಗಿ ನಿರ್ವಹಿಸಲು ಚೈತನ್ಯಭರಿತ ಉತ್ಸಾಹ ಇರಬೇಕು; ನಿರ್ದಿಷ್ಟವಾದ ಗುರಿಯನ್ನು ಸಾಧಿಸಲು ಸಕಾರಾತ್ಮಕ ಮನೋಭಾವ ಇರಬೇಕು; ಎಲ್ಲಕ್ಕಿಂತ ಹೆಚ್ಚಾಗಿ, ಸಮಯವನ್ನು ಸೂಕ್ತವಾಗಿ ಬಳಸಲು ಯೋಜನಾ ಶಕ್ತಿ ಮತ್ತು ಅದನ್ನು ಪರಿಪಾಲಿಸುವ ಶಿಸ್ತು ಇರಬೇಕು. ಸಮಯದ ಪರಿಪಾಲನೆಗೆ ಮತ್ತು ಶಿಸ್ತಿಗೆ ಅತ್ಯಂತ ಹೆಸರಾಗಿದ್ದ ಸರ್‌ಎಂ.ವಿಶ್ವೇಶ್ವರಯ್ಯನವರು `ಕಾಲವನ್ನು ನಾವು ಪಾಲಿಸಿದರೆ, ಅದು ನಮಗೆ ವಿಧೇಯವಾಗಿರುತ್ತದೆ' ಎಂದು ಹೇಳಿದ್ದಾರೆ. ಹೆಸರಾಂತ ಲೇಖಕ ಸ್ಟೀಫನ್ ಕೋವಿ, ಸಮಯದ ನಿರ್ವಹಣೆಯ ತತ್ವ, ಸಿದ್ಧಾಂತಗಳ ಬಗ್ಗೆ ಕೂಲಂಕಷವಾಗಿ ತಮ್ಮ ಪುಸ್ತಕಗಳಲ್ಲೂ, ಲೇಖನಗಳಲ್ಲೂ ಕೆಳಕಂಡಂತೆ ವಿವರಿಸಿದ್ದಾರೆ:

ಹಾಗಾದರೆ ಮೊದಲು ನಿಮ್ಮ ಒಟ್ಟು ಕೆಲಸವನ್ನು ಈ ಕೆಳಗಿನಂತೆ ವಿಂಗಡಿಸಿ :-

ಭಾಗ 1 - ಇದು ಮುಖ್ಯವಾದ ತುರ್ತು ಕೆಲಸಗಳಿಗಾಗಿ. ಈ ಭಾಗದ ಕಾರ್ಯಗಳಿಗೆ ತಕ್ಷಣ ಗಮನಕೊಡಬೇಕು, ಸಮಯದ ಎಲ್ಲೆ ಮೀರುವ ಮೊದಲೇ ಮಾಡಿಮುಗಿಸಬೇಕು.
ಭಾಗ 2 - ಇದು ಮುಖ್ಯವಾದರೂ ತುರ್ತಲ್ಲದ ಕಾರ್ಯಗಳಿಗಾಗಿ. ಈ ಕಾರ್ಯಗಳಿಗೂ ಒಂದು ಸಮಯದ ಎಲ್ಲೆ ಇದ್ದೇ ಇದೆ. ಉದಾ: ಪ್ರಾಜೆಕ್ಟನ್ನು ಈ ವಾರದ ಕೊನೆಯಲ್ಲಿ ಮಾಡಬೇಕು.
ಭಾಗ 3 - ಇದು ಮುಖ್ಯವಲ್ಲದಿದ್ದರೂ, ತ್ವರೆಯ ಕಾರ್ಯಗಳಿಗಾಗಿ. ಅಷ್ಟೇನೂ ಮುಖ್ಯವಲ್ಲದಿದ್ದರೂ ಈ ಕಾರ್ಯಗಳನ್ನು ತಕ್ಷಣ ಮಾಡಿಮುಗಿಸಬೇಕು.
ಭಾಗ 4 - ಇದು ಮುಖ್ಯವೂ ಅಲ್ಲದ ತುರ್ತೂ ಅಲ್ಲದ ಕಾರ್ಯಗಳಿಗಾಗಿ. ಈ ಕಾರ್ಯಗಳು ಕೇವಲ ಮನೋರಂಜನೆಗಾಗಿ.

ಸಮಯವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಪಳಗಿಸಿಕೊಳ್ಳಲು ೧೫ ಅತ್ಯುತ್ತಮ ಸೂತ್ರಗಳು:
1) ಚಿಕ್ಕ ಲಿಸ್ಟ್ ಬರೆದುಕೊಳ್ಳಿ:
ಎಲ್ಲವನ್ನೂ ನೆನಪಿನ ಶಕ್ತಿಗೇ ಹೊರಿಸುವುದು ದೊಡ್ಡ ತಪ್ಪು. ಮಾಹಿತಿಯ ಮಹಾಪೂರದಿಂದ ಮಿದುಳು ಕೆಲವು ಸಂಗತಿಗಳನ್ನು ಸಮಯಕ್ಕೆ ಸರಿಯಾಗಿ ನೆನಪಿಸುವುದಿಲ್ಲ. ಒಂದು ಚೀಟಿ ಅಥವಾ ಪುಟಾಣಿ ಪುಸ್ತಕದಲ್ಲಿ ಇಂದು ಮಾಡಬೇಕಾದ ಎಲ್ಲ ಕೆಲಸಗಳನ್ನು ಮುಂಜಾನೆಯೇ ಬರೆದಿಟ್ಟುಕೊಳ್ಳುವುದು ಸಮಯ ನಿರ್ವಹಣೆಯ ಮೊದಲ ಸೂತ್ರ.
2) ಪ್ರಯಾರಿಟಿ :
ಒಂದು ಸಲ ದಿನದ ಎಲ್ಲ ಕೆಲಸಗಳನ್ನು ಗುರುತು ಹಾಕಿಕೊಂಡ ನಂತರ ಆದ್ಯತೆಯನ್ನು ನಿರ್ಧರಿಸಿ. ತಕ್ಷಣ ಮಾಡಬೇಕಾದ ಕೆಲಸ, ಇಂದೇ ಮಾಡಬೇಕಾದ ಕೆಲಸ, ರಾತ್ರಿಯೊಳಗೆ ಮುಗಿಸಬೇಕಾದ ಕೆಲಸ, ನಾಳೆ ಮಾಡಿದರೂ ಪರವಾಗಿಲ್ಲ ಎನ್ನುವ ಕೆಲಸಗಳಿಗೆ ಪ್ರತ್ಯೇಕವಾಗಿ ನಿಮಗೆ ಗೊತ್ತಿರುವ ಸಂಕೇತ ನೀಡಿ ಗುರುತು ಮಾಡಿಟ್ಟುಕೊಳ್ಳಿ.
3) ವಾರದ ವೇಳಾಪಟ್ಟಿ ಇರಲಿ:
ವಾರದ ರಜೆಯ ದಿನದಲ್ಲಿ ಮುಂದಿನ ವಾರದ ಕೆಲಸಗಳ ಬಗ್ಗೆ ಆಲೋಚಿಸಿ ಒಂದು ಪಟ್ಟಿ ಮಾಡಿಕೊಳ್ಳಿ. ಅಸೈನ್ಮೆಂಟ್ ಡೆಡ್ಲೈನ್ಗಳು, ಪರೀಕ್ಷೆಯ ದಿನಾಂಕಗಳು, ಆರೋಗ್ಯ ತಪಾಸಣೆ, ಕ್ರೀಡಾದಿನ ಇತ್ಯಾದಿ ಸಂಗತಿಗಳನ್ನು ಗಮನಿಸಿ ಇಡೀ ವಾರದ ಕಾರ್ಯಕ್ರಮ ಪಟ್ಟಿ ತಯಾರಿಸಿಕೊಳ್ಳಿ.
4) ನೆನಪಿನ ಪುಸ್ತಕ ಇರಲಿ:
ಕಿಸೆಯಲ್ಲಿ ಸದಾಕಾಲವೂ ನೆನಪಿನ ಪುಸ್ತಕ ಹಾಗೂ ಒಂದು ಪೆನ್ ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ಕೆಲವೊಮ್ಮೆ ನಮಗೇ ಗೊತ್ತಿಲ್ಲದೇ ನಮ್ಮ ತಲೆಗೆ ಬ್ರಿಲಿಯಂಟ್ ಐಡಿಯಾಗಳು ಹೊಳೆಯುತ್ತವೆ. ಅದನ್ನು ತಕ್ಷಣ ಗುರುತು ಮಾಡಿಕೊಳ್ಳಲು ಹಾಗೂ ದಿನದ ಕೆಲಸಗಳು ಎಷ್ಟು ಹಿಂದುಳಿದಿವೆ ಎಂಬುದನ್ನು ಗಮನಿಸಲು ಇದರಿಂದ ಅನುಕೂಲ.
5) ಯೋಚಿಸಿ ಕೆಲಸ ಮಾಡಿ:
ಕೆಲಸ ಮಾಡಿದ ನಂತರ ಯೋಚಿಸುವುದು ಒಂದು ಬಗೆ. ಯೋಚಿಸಿ ಕೆಲಸ ಮಾಡುವುದು ಮತ್ತೊಂದು ಬಗೆ. ಜೀವನದಲ್ಲಿ ಎಷ್ಟು ಸಲ ನಾವು ‘ಈ ಬೇಡದ ಕೆಲಸಕ್ಕಾಗಿ ಎಷ್ಟು ಟೈಂ ವೇಸ್ಟ್ ಮಾಡಿದೆ ಛೇ’ ಎಂದುಕೊಂಡಿರುವುದ್ಲಿಲ. ಕೆಲಸ ಪ್ರಾರಂಭಿಸುವ ಮೊದಲು ಒಂದು ಕ್ಷಣ ಯೋಚಿಸಿದ್ದರೆ ಹಲವು ಗಂಟೆಗಳು ಉಳಿಯುತ್ತಿದ್ದವು.
6) ಆಗಲ್ಲ ಎನ್ನಿ:
ಎಲ್ಲರಿಗೂ ಒಳ್ಳೆಯವರಾಗಬೇಕೆಂಬ ಮನೋಭಾವ ಹಲವರಲ್ಲಿ ರುತ್ತದೆ. ‘ಇಲ್ಲ’ ಎನ್ನಲು ಬರುವುದಿಲ್ಲ ಎಂಬ ಒಂದೇ ಕಾರಣದಿಂದ ಬೇಡದ ಕೆಲಸಗಳಿಗೆ ಸಮಯ ವ್ಯಯಿಸುತ್ತಿರುತ್ತಾರೆ. ಇಂಥವರು ತಮ್ಮ ಸ್ವಭಾವ ಬದಲಿಸಿಕೊಂಡು ನಗುನಗುತ್ತಲೇ ‘ಇಲ್ಲ... ಆಗಲ್ಲ... ಕ್ಷಮಿಸಿ’ ಎಂದು ಹೇಳುವುದನ್ನು ಅಗತ್ಯವಾಗಿ ಕಲಿಯಬೇಕು.
7) ಸತತ ಬದಲಾವಣೆ ಅಗತ್ಯ:
ವೇಗವಾಗಿ ಕೆಲಸ ಮಾಡುವುದನ್ನು ಸತತವಾಗಿ ಕಲಿಯಬೇಕು. ಟೈಪಿಂಗ್ ಕಲಿಯಲು ಸೇರಿದವರು ಒಂದು ವರ್ಷದ ನಂತರವೂ ಅಕ್ಷರ ಹುಡುಕುತ್ತಿದ್ದರೆ ಅದಕ್ಕೆ ಏನನ್ನಬೇಕು? ಈ ಉದಾಹರಣೆ ಜೀವನದ ಎಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಯಾವುದೇ ಕೆಲಸದಲ್ಲಿ ನಾವು ಪಳಗಿದಂತೆ ಕೆಲಸ ಮಾಡುವ ವೇಗ ಹೆಚ್ಚಾಗಲೇಬೇಕು. ಈ ನಿಟ್ಟಿನಲ್ಲಿ ಸತತ ಪ್ರಯತ್ನ ಅಗತ್ಯ.
8) ಮೌಲ್ಯಮಾಪನ:
ನಿಮ್ಮ ಬದುಕಿನ ೨೪ ಗಂಟೆ ಹೇಗೆ ಕಳೆಯುತ್ತಿದೆ ಎಂಬ ಬಗ್ಗೆ ಆಗಾಗ ಪರಿಶೀಲಿಸುವುದು ಅಗತ್ಯ. ನಿಮ್ಮ ದಿನಚರಿಯಲ್ಲಿ ಬೇಡದ ಸಂಗತಿಗಳ್ದಿದರೆ ಅದನ್ನು ಗುರುತಿಸಿ ತೆಗೆದುಹಾಕಿ ಸಮಯ ಉಳಿಸಲು ಇದು ಸಹಾಯ ಮಾಡುತ್ತದೆ.
9) ದಿನಚರಿ ಇರಲಿ:
‘ಸಮಯದ ಉಳಿಕೆಯೇ- ಸಮಯದ ಗಳಿಕೆ’ ಎಂಬುದು ದಿನಚರಿಯ ಮುಖ್ಯ ಸೂತ್ರ. ಬದುಕಿನ ಬಂಡಿ ಹಳಿ ತಪ್ಪದಂತೆ ಕಾಪಾಡಲು ದಿನಚರಿ ಅತ್ಯಗತ್ಯ. ನೀವು ಒಂದು ದಿನವನ್ನು ಹೇಗೆ ಕಳೆಯುತ್ತೀರಿ ಎಂಬುದನ್ನು ಸ್ಪಷ್ಟವಾಗಿ ಬರೆದಿಟ್ಟುಕೊಳ್ಳಿ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಗುರಿ ನಿಮ್ಮಿಂದ ಎಷ್ಟು ದೂರವಿದೆ. ಅದನ್ನು ತಲುಪಲು ಏನು ಮಾಡಬೇಕು ಎಂಬುದು ನಿಮಗೇ ಹೊಳೆಯುತ್ತದೆ.
10) ಚಟ ಬಿಡಿ:
ನಿಮ್ಮ ಸಮಯ ಕದಿಯುವ ಹರಟೆ, ಕುಡಿತ, ಧೂಮಪಾನ, ಚಾಡಿ ಹೇಳುವುದು, ಅಶ್ಲೀಲ ಚಿತ್ರಗಳನ್ನು ನೋಡುವುದು ಮೊದಲಾದ ದುರಭ್ಯಾಸಗಳನ್ನು ನೀವೇ ಗುರುತಿಸಿಕೊಳ್ಳಿ. ಒಂದು ದಿನದ್ಲಲಿ ಇವಕ್ಕೆ ಸರಾಸರಿ ಎಷ್ಟು ಸಮಯ ವ್ಯಯವಾಗುತ್ತಿದೆ ಲೆಕ್ಕಾಹಾಕಿ. ದೃಢ ನಿರ್ಧಾರದಿಂದ, ಅಗತ್ಯ ಬ್ದಿದರೆ ಹಿರಿಯ ಸಲಹೆಯಿಂದ ಇವನ್ನು ಗ್ಲೆಲಲು ಯತ್ನಿಸಿ.
11) ಇನ್ನೊಬ್ಬರ ಕೆಲಸ ಬೇಡ:
ನಾನೊಬ್ಬ ಹೀರೋ ಆಗಬೇಕು ಎಂಬ ಭ್ರಮೆಯಿಂದ ಇನ್ನೊಬ್ಬರ ಕೆಲಸ ಮಾಡುವುದನ್ನು ಕೆಲವರು ರೂಢಿಸಿಕೊಳ್ಳುತ್ತಾರೆ. ಈ ಜಗತ್ತಿನ್ಲಲಿ ಅವರವರ ಕೆಲಸ ಅವರವರೇ ಮಾಡಬೇಕು. ನೀವು ಬೇಕಾದರೆ ಇನ್ನೊಬ್ಬರಿಗೆ ಸಹಾಯ ಮಾತ್ರ ಮಾಡಬಹುದು. ಆದರೆ ಅವರ ಹೊಣೆಯನ್ನು ನಿಮ್ಮ ಹೆಗಲಿಗೆ ಹೊತ್ತುಕೊಳ್ಳಬೇಡಿ. ಇನ್ನೊಬ್ಬರ ಕೆಲಸಗಳನ್ನೇ ಮಾಡುತ್ತ್ದಿದರೆ ನಿಮ್ಮ ಕೆಲಸಗಳಿಗೆ ಸಮಯ ಉಳಿಯುವುದಿಲ್ಲ.
12) ಭವಿಷ್ಯದ ಪುಟಗಳು:
1 ವರ್ಷದ ನಂತರ ನಿಮ್ಮ ಬದುಕು ಹೇಗಿರಬೇಕು? 3 ವರ್ಷದ ನಂತರ ಹೇಗಾಗಬೇಕು? ಎಂಬ ಬಗ್ಗೆ ನಿಮ್ಮದೇ ಆದ ಕನಸುಗಳಿರಲಿ. ಎಲ ಕನಸುಗಳನ್ನು ಬರೆದಿಟ್ಟುಕೊಂಡು ಅವುಗಳತ್ತ ಮುನ್ನುಗ್ಗಲು ಯತ್ನಿಸಿ. ಪ್ರತಿ ಮುಂಜಾನೆ ನಿಮ್ಮ ಕನಸಿನ ಹಾದಿಯ್ಲಲಿ ಎಷ್ಟು ದೂರ ಕ್ರಮಿಸ್ದಿದೀರಿ ಎಂಬುದನ್ನು ಪರಿಶೀಲಿಸಿ. ನಿಮಗೆ ಗೊತ್ತ್ತಿಲ್ಲದೇ ನಿಮ್ಮ ದಿನಚರಿ ಬದಲಾಗುತ್ತೆ.
13) ಪರ್ಫೆಕ್ಟ್ ಮಂತ್ರ ಎಲೆಡೆ ಬೇಡ:
ಒಂದು ಎಸ್ಎಂಎಸ್ ಕಳಿಸಲು 5 ನಿಮಿಷ, ಈ ಮೇಲ್ಗೆ 15 ನಿಮಿಷ ವ್ಯಯಿಸುವುದು ದಡ್ಡತನವ್ಲಲವೇ? ಎಲದರ್ಲಲಿಯೂ ಪರ್ಫೆಕ್ಟ್ ಆಗಿರಬೇಕೆಂಬ ಹಠ ಬೇಡ. ಯಾವುದು ಎಷ್ಟು ಶ್ರದ್ಧೆ ಬಯಸುತ್ತದೆಯೋ ಅದಕ್ಕೆ ಅಷ್ಟು ಶ್ರದ್ಧೆ ನೀಡಿದರೆ ಸಾಕು.
14) ಆದ್ಯತೆ ಮುಖ್ಯ:
ಪರೀಕ್ಷೆ ಹತ್ತಿರ ಇದಾಗ ಗಂಟೆಗಟ್ಟಲೆ ಕೇರಂಬೋರ್ಡ್ ಆಡುವುದು, ಮಾರನೇ ದಿನ ರನ್ನಿಂಗ್ ರೇಸ್ನ್ಲಲಿ ಓಡಬೇಕು ಅಂದ್ರೆ ಇವತ್ತು ಮ್ಯೂಚ್ಯುಯಲ್ ಫಂಡನ ಎನ್ಎವಿ ಲೆಕ್ಕ ಹಾಕುತ್ತಾ ಕೂರುವುದು ಎಷ್ಟು ಸರಿ. ಈ ಕೆಲಸಗಳನ್ನು ಮಾಡಲು ಸಾಕಷ್ಟು ಸಮಯವಿದೆ ಅಲವೇ? ಮೊದಲು ಮಾಡಬೇಕಾದ ಕೆಲಸ ಮೊದಲು ಮಾಡಿ.
15) ಬೇಡದ ಕೆಲಸಗಳು:
ಚೆನ್ನಾಗಿ ಮಾಡಲು ಬರುತ್ತದೆ ಎಂಬ ಒಂದೇ ಕಾರಣಕ್ಕೆ ಬೇಡದ ಕೆಲಸಗಳನ್ನು ಮಾಡುವುದು ಎಷ್ಟು ಸರಿ? ಚೆನ್ನಾಗಿ ಕಸಗುಡಿಸಲು ಬರುತ್ತದೆ ಎಂದು ಬೀದಿಯೆಲ್ಲಾ ಕಸ ಗುಡಿಸಲು ಸಾಧ್ಯವೇ? ಬದುಕಿನ್ಲಲೂ ಅಷ್ಟೇ ಚೆನ್ನಾಗಿ ಬರುತ್ತೆ, ನನಗಿಷ್ಟ ಎಂಬ ಎರಡೇ ನೆಪದಿಂದ ಎಷ್ಟೋ ಪ್ರತಿಫಲವೇ ಇಲದ- ಬೇಡದ ಕೆಲಸಗಳನ್ನು ಗುಡ್ಡೆ ಹಾಕಿಕೊಂಡು ಬ್ಯುಸಿಯಾಗಿರುತ್ತೇವೆ.
ಕೊನೆ ಮಾತು :ಸಮಯದ ಪರಿಪಾಲನೆಗೆ ಮತ್ತು ಶಿಸ್ತಿಗೆ ಅತ್ಯಂತ ಹೆಸರಾಗಿದ್ದ ಸರ್ಎಂ.ವಿಶ್ವೇಶ್ವರಯ್ಯನವರು `ಕಾಲವನ್ನು ನಾವು ಪಾಲಿಸಿದರೆ, ಅದು ನಮಗೆ ವಿಧೇಯವಾಗಿರುತ್ತದೆ' ಎಂದು ಹೇಳಿದ್ದಾರೆ. ಎಷ್ಟೊಂದು ನಿಜವಲ್ವಾ? ಯೋಚಿಸಿರಿ.

ಸಿಂಹ ಮತ್ತು ನರಿ

ಒಮ್ಮೆ ಸಿಂಹಕ್ಕೆ ಜೋರಾಗಿ ಹಸಿವೆಯಾಯ್ತು. ಪಕ್ಕದಲ್ಲಿದ್ದ ನರಿಯೊಂದಿಗೆ ಹೇಳಿತು:
"ನನಗೇನಾದರು ತಿನ್ನಲು ತಂದುಕೊಡು, ಇಲ್ಲದಿದ್ದರೆ ನಾನು ನಿನ್ನನ್ನು ಕೊಂದು ತಿನ್ನುತ್ತೇನೆ."
ನರಿ ನೇರವಾಗಿ ಒಂದು ಕತ್ತೆಯ ಬಳಿ ಹೋಗಿ ಹೇಳಿತು:
"ಸಿಂಹ ನಿನ್ನನ್ನು ರಾಜನನ್ನಾಗಿ ಮಾಡ್ತಾನಂತೆ, ಬಾ ನನ್ನ ಜೊತೆ."
ನರಿಯ ಮಾತನ್ನು ನಂಬಿದ ಕತ್ತೆ ಸಿಂಹದ ಬಳಿ ಹೋಯಿತು.

ಕತ್ತೆಯನ್ನು ಕಂಡಾಗ ಸಿಂಹ ಅದರ ಮೇಲೆ ಹಾರಿ ಆಕ್ರಮಿಸಿತು, ಕತ್ತೆಯ ಕಿವಿಯನ್ನು ಕಚ್ಚಿ ಕತ್ತರಿಸಿತು, ಆದರೆ ಕತ್ತೆ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಯಿತು...

ನಂತರ ಕತ್ತೆ ಮತ್ತೆ ತನ್ನನ್ನು ಭೇಟಿಯಾದ ನರಿಯೊಂದಿಗೆ ಕೇಳಿತು, "ನೀನು ನನಗೆ ಮೋಸ ಮಾಡಿಬಿಟ್ಟೆ ಅಲ್ವಾ?...! "

ನರಿ ಹೇಳಿತು: "ಮುಠ್ಠಾಳನಂತೆ ಮಾತಾಡ್ಬೇಡ, ನಿನ್ನ ತಲೆಗೆ ಕಿರೀಟ ತೊಡಿಸಲು ನಿನ್ನ ಕಿವಿಯನ್ನು ಕತ್ತರಿಸಿದ್ದು" ಎಂದು.
ಆಗ ಕತ್ತೆ ನರಿಯ ಮಾತು ಸತ್ಯವಾಗಿರಬಹುದು ಎಂದು ಭಾವಿಸಿ ನರಿಯ ಜೊತೆ ಮತ್ತೆ ಸಿಂಹದ ಬಳಿ ಹೋಯಿತು...

ಸಿಂಹ ಪುನಃ ಕತ್ತೆಯನ್ನು ಆಕ್ರಮಿಸಿ ಕಚ್ಚಿ ಅದರ ಬಾಲವನ್ನು ಕತ್ತರಿಸಿ ಹಾಕಿತು..!,
ಕತ್ತೆ ಮತ್ತೊಮ್ಮೆ ಕಷ್ಟಪಟ್ಟು ಪಾರಾಗಿ ಹೋಗಿ ನರಿಯೊಂದಿಗೆ ಕೇಳಿತು "ನೀನು ನನ್ನಲ್ಲಿ ಸುಳ್ಳು ಹೇಳಿದ್ದಲ್ವಾ?!...

ನರಿ ಹೇಳಿತು: "ಅಯ್ಯೋ ಪೆದ್ದುಮುಂಡೇದು, ನಿನಗೆ ಸಿಂಹಾಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಅನುಕೂಲ ಆಗಬೇಕಾಗಿ ತಾನೇ ನಿನ್ನ ಬಾಲವನ್ನು ಕತ್ತರಿಸಿದ್ದು"...

ಬಹಳ ಬುದ್ಧಿವಂತಿಕೆಯಿಂದ ಮಾತನಾಡಿದ ನರಿಯು ಕತ್ತೆ ವಾಪಸ್ ಸಿಂಹದ ಬಳಿ ಹೋಗುವಂತೆ ಮನವೊಲಿಸಿತು .....
ಈಗ ಸಿಂಹ ಕತ್ತೆಯನ್ನು ಹಿಡಿದು ಕೊಂದು ತಿಂದು ಹಾಕಿತು...!

ನಂತರ
ಸಿಂಹ ನರಿಯೊಂದಿಗೆ ಹೇಳಿತು: "ನೀನು ಒಳ್ಳೆಯ ಕೆಲಸ ಮಾಡಿದೆ, ವೆಲ್ ಡನ್, ಇನ್ನು ಹೋಗಿ ಇದರ ಚರ್ಮ ಸುಲಿದು ತಾ".....

ನರಿ ಕತ್ತೆಯ ಚರ್ಮ ಸುಲಿದು,,,
ಕತ್ತೆಯ ಮೆದುಳನ್ನು ತಿಂದು,,,
ಅದರ ಹೃದಯ, ಕರುಳು, ಶ್ವಾಸಕೋಶವನ್ನು ಸಿಂಹದ ಮುಂದೆ ತಂದಿಟ್ಟಿತು...

ಸಿಂಹ ಕೋಪದಿಂದ ಕೇಳಿತು,:
"ಇದರ ಮೆದುಳು ಎಲ್ಲಿ...?"

ನರಿ ಉತ್ತರಿಸಿತು:
"ಅದಕ್ಕೆ ಮೆದುಳು ಎಂಬುದು ಇರಲಿಲ್ಲ ಪ್ರಭು... ಅದು ಇದ್ದಿದ್ದರೆ ಕಿವಿ ಬಾಲ ಕಚ್ಚಿ ಕತ್ತರಿಸಿದ ನಂತರವೂ ನಿಮ್ಮ ಬಳಿ ವಾಪಸ್ ಬರ್ತಿತ್ತಾ???...!!!

ಸ್ನೇಹಿತರೇ...

ಒಮ್ಮೆ ಯೋಚಿಸಿ, ನಾವು ಎಂಥವರ ಜೊತೆ ಬದುಕುತ್ತಿದ್ದೇವೆ ?
ಪ್ರತಿ ದಿನ, ಪ್ರತಿ ಕ್ಷಣ ಯಾರನ್ನು ನಂಬಿ ಯಾರ ಬಳಿ ಹೋಗುತ್ತಿದ್ದೇವೆ ?
ಹಾಗಾದರೆ ನಮ್ಮಲ್ಲಿ ಮೆದುಳು ಉಂಟಾ ?

ನಮ್ಮಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯ.
"ಚಂದಾಮಾಮ" ಕಥೆ ಇದು...!

March 26, 2026

ಸದಯಂ ಹೃದಯಂ ಯಸ್ಯ

ಸದಯಂ ಹೃದಯಂ ಯಸ್ಯ" ಎಂಬುದು ನೀತಿಶಾಸ್ತ್ರದ ಪ್ರಸಿದ್ಧ ಶ್ಲೋಕದ ಭಾಗವಾಗಿದ್ದು, ದಯಾಪರತೆ, ಸತ್ಯ ಮತ್ತು ಪರಹಿತ ಚಿಂತನೆಯ ಮಹತ್ವವನ್ನು ಸಾರುತ್ತದೆ. ಇದರ ಪೂರ್ಣ ರೂಪ:

"ಸದಯಂ ಹೃದಯಂ ಯಸ್ಯ, ಭಾಷಿತಂ ಸತ್ಯಭೂಷಿತಂ | ಕಾಯಃ ಪರಹಿತೇ ಯಸ್ಯ, ಕಲಿಃ ಕುರ್ವೀತ ತಸ್ಯ ಕಿಮ್ ||"

ಯಾರ ಹೃದಯದಲ್ಲಿ ದಯೆ, ನಾಲಿಗೆಯಲ್ಲಿ ಸತ್ಯ ಮತ್ತು ದೇಹವು ಇತರರ ಸೇವೆಗೆ ಮೀಸಲಾಗಿರುತ್ತದೆಯೋ, ಅಂಥವನನ್ನು ಕಲಿಯುಗವು (ಕಲಿಪುರುಷ) ಬಾಧಿಸಲು ಸಾಧ್ಯವಿಲ್ಲ ಎಂದು ಇದರ ಅರ್ಥ.

ಶ್ಲೋಕದ ವಿವರಣೆ:
ಸದಯಂ ಹೃದಯಂ ಯಸ್ಯ: ಯಾರ ಹೃದಯದಲ್ಲಿ ದಯೆ/ಕರುಣೆ ತುಂಬಿದೆಯೋ.

ಭಾಷಿತಂ ಸತ್ಯಭೂಷಿತಂ: ಯಾರ ಮಾತು ಸತ್ಯದಿಂದ ಕೂಡಿರುತ್ತದೆಯೋ (ಸತ್ಯವೇ ಆಭರಣವಾಗಿದೆಯೋ).

ಕಾಯಃ ಪರಹಿತೇ ಯಸ್ಯ: ಯಾರ ಶರೀರವು ಇತರರ ಹಿತಕ್ಕಾಗಿ (ಸೇವೆಗಾಗಿ) ಮೀಸಲಾಗಿದೆಯೋ.

ಕಲಿಃ ಕುರ್ವೀತ ತಸ್ಯ ಕಿಮ್: ಅಂಥವನಿಗೆ ಕಲಿಪುರುಷನು (ದುಷ್ಟ ಶಕ್ತಿ/ಕಲಿಯುಗದ ದೋಷಗಳು) ಏನು ತಾನೇ ಮಾಡಬಲ್ಲನು?.

ಸಾರಾಂಶವೆಂದರೆ, ಯಾರ ಹೃದಯವು ದಯೆಯಿಂದ ಕೂಡಿರುವುದೋ,ಯಾರ ಮಾತು ಸತ್ಯದಿಂದ ಕೂಡಿರುವುದೋ, ಯಾರ ದೇಹವು ಇತರರಿಗಾಗಿ, ಇತರರ ಒಳಿತಿಗಾಗಿ ಇರುವುದೋ ಅವರನ್ನು ಹೃದಯವಂತರು, ದೇವಮಾನವರು ಎನ್ನಬಹುದು.

ಹೃದಯಹೀನರಾಗದೆ, ಹೃದಯವಂತರಾಗೋಣ, ದೀರ್ಘಾಯುಷ್ಯವಂತರಾಗಿ, ಮಾನವತೆಯ ಪ್ರತಿರೂಪವಾಗಿ ಬಾಳಿ ಬದುಕೋಣ.

ಒಂಟಿತನ

ಓರ್ವ ಇಂದಿನ ಭಾನುವಾರದ ಪತ್ರಿಕೆಯಲ್ಲಿ ಮುದ್ರಣ ಜಾಹೀರಾತನ್ನು ಓದಿದ..‌
ಫ್ಲಾಟ್... ಕೇವಲ 30 ಲಕ್ಷಕ್ಕೆ.
ಐಷಾರಾಮಿ ಪ್ರದೇಶ, 
ದಾರಿಯಲ್ಲಿ...
 ಶಾಪಿಂಗ್ ಮಾಲ್‌ಗಳು ಥಿಯೇಟರ್‌ಗಳು..  ಆ ಯುವಕ ಜಾಹೀರಾತನ್ನು ಓದಿದನು. 
ಅವನು ಫ್ಲಾಟ್ ನೋಡಲು ತನ್ನ ಹೆಂಡತಿಯೊಂದಿಗೆ ಆ ಪೊಶ್ ಪ್ರದೇಶದ ಸೊಸೈಟಿಗೆ ಪ್ರವೇಶಿಸಿದನು. ಇಡೀ ಆ ಪ್ಲಾಟ್ ಸೊಸೈಟಿ, ಆ ಸ್ಥಳ, ಅಲ್ಲಿನ ನಿವಾಸಿಗಳು ಜನರು ... ಎಲ್ಲವನ್ನೂ ಎಚ್ಚರಿಕೆಯಿಂದ ನೋಡಿದರು ... ಪ್ರವೇಶಿಸುವಿಕೆ ಕೂಡ ಚೆನ್ನಾಗಿತ್ತು ... ತುಂಬಾ ಸುಸಜ್ಜಿತ ಮತ್ತು ಮಾಡರ್ನ್  ಸಮಾಜದಲ್ಲಿ ಸುಂದರ  ಫ್ಲಾಟ್ ..

ಮೂರನೇ ಮಹಡಿಯಲ್ಲಿ ಫ್ಲಾಟ್ ಸಂಖ್ಯೆ 303 ರ ಕಾಲಿಂಗ್ ಬೆಲ್ ರಿಂಗಣಿಸಿತು. ಅಜ್ಜಿಯೊಬ್ಬರು ಫ್ಲಾಟ್‌ನ ಬಾಗಿಲು ತೆರೆದು ಇಡೀ ಫ್ಲಾಟ್ ಅನ್ನು ತೋರಿಸಿದರು .. 
ಗ್ಯಾಲರಿ... ಅಡುಗೆ ಮನೆ... 🍒 ಫರ್ನಿಚರ್... ಪ್ಯಾಸೇಜ್... ಎಲ್ಲವೂ ಗಾಜಿನಂತೆ ಸ್ಪಷ್ಟ.
  
ಒಳಗಿನ ಕೋಣೆಯಲ್ಲಿ ವಯಸ್ಸಾದ  ಮುಪ್ಪಿನ ಬಿಳಿ ಕೂದಲಿನ ಓರ್ವರು  ವಿಕಲಚೇತನ ಮಹಿಳೆ ವೀಲ್ ಚೇರ್ ಮೇಲೆ ಕುಳಿತಿದ್ದರು...

"ನಮಸ್ತೆ, ಈ ಫ್ಲಾಟ್ ಖರೀದಿ ಮಾಡುವ ಅಂತಾ ಬಂದಿದ್ದೇವೆ ಇದರ ಬೆಲೆ ಎಷ್ಟು!?" ಎಂದು ಯುವಕ ಕೇಳಿದೆ.
"ಮೊದಲು ನನ್ನನ್ನು ಅಜ್ಜಿ ಎಂದು ಕರೆಯಬೇಡಿ ನಾನು ಅಮೃತ ಶರ್ಮಾ. ಪತ್ರಿಕೆಯಲ್ಲಿ ಬೆಲೆ ಬರೆಯಲಾಗಿದೆ...ಆದರೆ  ಬೇಕಾದರೆ ಇನ್ನೂ ಎರಡು ಮೂರು ಲಕ್ಷ ಕಡಿಮೆ ಮಾಡಿ ಕೊಡುವೆ ನೋಡಿ.. ಕುಳಿತುಕೊಳ್ಳಿ..‌"
ಆಗ ಆ ಮಹಿಳೆ ಕೂಗುತ್ತಾ ಹೇಳಿದಳು, ಚಹಾ ತಂದ ಈ ಹುಡುಗಿಗೆ  ಹೇಳಿದಳು ಇವರಿಗೆ  ಚಾಕಲೇಟ್ ತಂದು ಕೊಡು. "ಶಾಂತಿಯಿಂದ ಕುಳಿತುಕೊಳ್ಳಿ.. ಆಗ ಇದೆಲ್ಲ ನಡೆಯುತ್ತದೆ.." ಕ್ರಮೇಣ ಮಾತುಕತೆ ಸಾಗಿತು... ಉದ್ಯೋಗ... ಫ್ಲಾಟ್ ಇತಿಹಾಸ... ಕುಟುಂಬದ ವಿಷಯಗಳು, ಬದುಕಿನ ಬವಣೆಗಳು ಹವ್ಯಾಸಗಳು, ಜೀವನದ ರಹಸ್ಯಗಳು... ಯೌವನದ ಹವ್ಯಾಸಗಳು..  ಚರ್ಚೆ ನಂತರ ಕೆಲವು ಹಳೆಯ ಆಲ್ಬಂಗಳತ್ತ ಸಾಗಿತು...

ಯುವಕನಿಗೆ ತಾವು ಬಂದು ಬಹಳ‌ ಸಮಯ ಆಯಿತು ಎಂದು ಅನಿಸಿತು. ಎರಡು ಗಂಟೆಗೂ ಹೆಚ್ಚು ಕಾಲ ಅವರು ಮಾತನಾಡಿದರು.. ಯುವಕ ಮತ್ತು ಅವನ ಹೆಂಡತಿ ಎಚ್ಚರಗೊಂಡರು.
ಆಯಿತು, ಬರುತ್ತೇವೆ ಎಂದು ಹೇಳಿ ಹಿಂದೆ ತಿರುಗಿ ಬಂದರು. ಅಂತಹ ಸುಂದರವಾದ ಫ್ಲಾಟ್, ಉತ್ತಮ ಸ್ಥಳ, ಬೆಲೆ ಕೂಡ ತುಂಬಾ ಅಗ್ಗವಾಗಿದೆ ಆದರೂ ಯಾಕೆ ಇದು ಇನ್ನೂ ಮಾರಾಟವಾಗಿಲ್ಲ!? ಯುವ ದಂಪತಿಗಳು ತಮ್ಮಲ್ಲಿಯೇ ಪ್ರಶ್ನಿಸಿಕೊಂಡರು.
ನಾನು ಭದ್ರತಾ ಸಿಬ್ಬಂದಿಯನ್ನು ಕೇಳುತ್ತೇನೆ .. ಎಂದ ಆತ.
ಸೆಕ್ಯೂರಿಟಿ ಗಾರ್ಡ್ ಎಲೆ ಅಡಿಕೆ ಜೊತೆ ತಂಬಾಕು ಉಜ್ಜುತ್ತಾ ಹೇಳಿದ...
ಆ ಅಜ್ಜಿ ತನ್ನ ಸಮಯ ಕಳೆಯಲು ಈ ರೀತಿ ಮಾಡುತ್ತಾರೆ. ಯಾರೂ ಬರದಿದ್ದರೆ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಜನರನ್ನು ಆಹ್ವಾನಿಸುತ್ತಾಳೆ...ಕೆಲವೊಮ್ಮೆ ಫ್ರಿಡ್ಜ್ ಮಾರುತ್ತಾಳೆ... ಕೆಲವೊಮ್ಮೆ ಅಲ್ಮೆರಾ ಮಾರುತ್ತಾಳೆ... ಕೆಲವೊಮ್ಮೆ ಡೈನಿಂಗ್ ಟೇಬಲ್.. ಹೀಗೆ ಜಾಹಿರಾತು ಕೊಟ್ಟು ಬಂದವರ ಬಳಿ ಸುಮ್ಮನೆ ಟೈಮ್ ಪಾಸ್ ಮಾಡುತ್ತಾಳೆ... ಎಲ್ಲರಿಗೂ ಒಳ್ಳೆಯ ಊಟವನ್ನು ಉಣಬಡಿಸುತ್ತಾಳೆ. .. ನಿಮಗೂ ಆಕೆ  ಆ ದುಬಾರಿ ವಿದೇಶಿ ಚಾಕಲೇಟ್ ತಿನ್ನಿಸಿರಬೇಕು.... ಅವಳ ಮಗ ವಿದೇಶದಿಂದ ಕಳುಹಿಸುತ್ತಾನೆ. ಆತ ವಿದೇಶದಲ್ಲಿ ಯಾವುದೋ ದೊಡ್ಡ ಕಂಪನಿಯಲ್ಲಿ ದೊಡ್ಡ ನೌಕರಿ ಇದೆ. ಕೋಟಿ, ಕೋಟಿ ಸಂಬಳ. ಇಲ್ಲಿಗೆ ಬರುವುದಿಲ್ಲ. ಮನೆಗೆ ಯಾರೂ ಬರುವುದಿಲ್ಲ ಅಜ್ಜಿಗೆ ಬೇಸರ!! ಒಂಟಿ ಜೀವನ, ಮಾತನಾಡಲು ಹರಟೆ ಹೊಡೆಯುತ್ತಾ ಕೂರಲು ತಮ್ಮವರು ಯಾರೂ ಇಲ್ಲ.. 
ಆಗಾಗ ಸುಮ್ಮನೆ ಈ ರೀತಿ ಜಾಹೀರಾತು ಹಾಕಿ ಮನೆ ಖರೀದಿಗೆಂದು ಬಂದವರ ಜೊತೆ ಹರಟೆ ಹೊಡೆಯುತ್ತಾ ಕೂರುತ್ತಾರೆ.. ಪುಷ್ಕಳ ಭೋಜನ ವ್ಯವಸ್ಥೆ ಮಾಡಿಸಿ ಕಳುಹಿಸುತ್ತಾರೆ ಅಷ್ಟೇ.. ನೀವು ಇದನ್ನು *ಟೈಂಪಾಸ್*⏰ ಎಂದು ಕರೆಯಿರಿ ಅಥವಾ... *ಒಂಟಿತನಕ್ಕೆ ಮದ್ದು*...!!🧮

> *ಹೇಳದೇ ಉಳಿದ ಮಾತು:*
🔽
> ಈಗ ಒಬ್ಬ ಮನುಷ್ಯನಿಗೆ ಎಲ್ಲಾ *ಸೌಲಭ್ಯಗಳಿವೆ*... ಆದರೆ ಅವನ ಜೊತೆ ಸ್ವಲ್ಪ ಹೊತ್ತು ಕೂರಲು ಯಾರೂ ಇರುವುದಿಲ್ಲ.. ಇದು ಶ್ರೀಮಂತಿಕೆಯು ಸೃಷ್ಟಿಸಿದ ಬಡತನ !! 😪

ಲೈಫ್ ಜೊತೆ ಒಂದು ಸೆಲ್ಫಿ 🤳

ನಮಸ್ಕಾರದಿಂದ ಆಯುಷ್ಯವೂ ವೃದ್ಧಿಯಾಗುತ್ತದೆ

ಮಾರ್ಕಂಡೇಯ ಮುನಿಗಳು ದೀರ್ಘಾಯುಷಿಯಾದುದರ ಬಗೆಗಿನ ಹಲವು ಕಥೆಗಳಲ್ಲಿ ಇದು ಒಂದು.

ಮೃಕಂಡು ಮನಿಗಳ ಮಗನಿಗೆ  9 ವರ್ಷಕ್ಕೆ ಮರಣ ಯೋಗ ಇತ್ತು. ಏಳನೇ ವರ್ಷಕ್ಕೆ ಉಪನಯನ ಮಾಡಿದ ಮುನಿಗಳು ಮಗನಿಗೆ ಹೀಗೆಂದರು.
"ಮಗು ಸಾತ್ವಿಕರು ಹಿರಿಯರು ಕಂಡಲ್ಲಿ ನಮಸ್ಕಾರ ಮಾಡು ಅವರ ಆಶೀರ್ವಾದವನ್ನು ಪಡೆದುಕೋ."

*ಅಭಿವಾದನ ಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ| 
ಚತ್ವಾರಿ ತಸ್ಯ ವರ್ಧಂತೇ ಆಯುಃ ಪ್ರಜ್ಞಾ ಯಶೋ ಬಲಂ*॥

ನಮಸ್ಕಾರ ಮಾಡುವುದರಿಂದ; ಜ್ಞಾನ ವೃದ್ಧರ ಸೇವೆಯಲ್ಲಿ ನಿರತರಾದವರಿಗೆ ಆಯುಷ್ಯ ಪ್ರಜ್ಞೆ ಯಶಸ್ಸು ಬಲಗಳು ವೃದ್ಧಿಯಾಗುತ್ತವೆ.

ಬಾಲಕ ಮಾರ್ಕಂಡೇಯ ಹಾಗೆಯೇ ಮಾಡಿದ.
ತನ್ನ ಆಶ್ರಮದ ಮಾರ್ಗದಲ್ಲಿ ಬಂದ ಎಲ್ಲಾ ಹಿರಿಯ ಜ್ಞಾನಿಗಳ ಪಾದಕ್ಕೆ ಅಭಿವಾದನ ಮಾಡಿ ನಮಿಸುತ್ತಿದ್ದ. ದೀರ್ಘಾಯುಷ್ಮಾನ್ ಭವ ಎಂಬ ಆಶೀರ್ವಾದಗಳನ್ನು ಪಡೆದು ಹಿಂತಿರುಗುತ್ತಿದ್ದ.
ಆಶ್ರಮದ ಮಾರ್ಗದಲ್ಲಿ ಬಂದಂತಹ ಸಪ್ತಋಷಿಗಳಿಗೂ ಕೂಡ ಬಾಲಕನು ಅಭಿವಾದನ ಮಾಡಿದ. ದೈವ ಸಂಕಲ್ಪದಂತೆ ಪೂರ್ವಾಪರಗಳನ್ನು ಆಲೋಚನೆ ಮಾಡದೆ ಸಪ್ತಋಷಿಗಳು ಬಾಲಕ ಮಾರ್ಕಂಡೇಯನಿಗೆ ದೀರ್ಘಾಯುಷ್ಯ ದ ವರವನ್ನಿತ್ತರು.
ಜ್ಞಾನಿಗಳ ಸಜ್ಜನರ ಮುಖದಿಂದ ಹೊರಟ ಮಾತುಗಳು ಕೂಡ ಸುಳ್ಳಾಗಲು ಪರಮಾತ್ಮ ಬಿಡುವುದಿಲ್ಲ.

ಕಾಲ ಕಳೆಯಿತು.....

ನಿತ್ಯ ನಿರಂತರ ಪರಮ ಶಿವನನ್ನು ಆರಾಧಿಸುತ್ತಿದ್ದ ಬಾಲಕ ಮಾರ್ಕಂಡೇಯನ ಜೀವ ಒಯ್ಯಲು ಯಮದೂತರು ಬಂದರು ಅವರಿಗೆ ಬಾಲಕನನ್ನು ಸ್ಪರ್ಶಿಸಲು ಆಗಲಿಲ್ಲ. ಮಹಿಷ ವಾಹನ ನಾಗಿ ಯಮನೇ ಬಂದರೂ ಕೂಡ ಪ್ರಯೋಜನವಾಗಲಿಲ್ಲ. ಬಾಲಕನ ಸುತ್ತ ಆವರಿಸಿದ್ದ ಆಶೀರ್ವಾದದ ಕವಚವನ್ನು ಛೇದಿಸಲು ಸಾಧ್ಯವಾಗಲಿಲ್ಲ. ಶಿವ ಭಕ್ತ ಮಾರ್ಕಂಡೇಯನ ಆಯುಷ್ಯವನ್ನು ಸಪ್ತ ಕಲ್ಪದ ತನಕ ತಿದ್ದಿ ಬಿಡುವಂತೆ ಯಮಧರ್ಮರಾಜನಿಗೆ ಪರಶಿವನು ಸೂಚಿಸುತ್ತಾನೆ.
ಮಾರ್ಕಂಡೇಯ ಋಷಿಗಳನ್ನು ಸ್ಮರಿಸುವವನಿಗೆ ಆಯುಷ್ಯವೂ ವೃದ್ಧಿಯಾಗುತ್ತದೆ.

ಹಿರಿಯರು ಬಂದಾಗ ಎದ್ದು ನಿಲ್ಲುವುದು ಕರ್ತವ್ಯ ದೊಡ್ಡವರು ಸನಿಹದಿಂದ ಸಾಗುತ್ತಿದ್ದಾಗಲೂ ಎದ್ದು ನಿಲ್ಲದವನ ಆಯುಷ್ಯಕ್ಕೆ ಪೆಟ್ಟಿದೆ.
*ಊರ್ದ್ವಂ ಪ್ರಾಣ ಉತ್ಕ್ರಾಮಂತಿ ಯೂನಃ ಸ್ಥವಿರ ಆಗತೇ*
ಹಿರಿಯರು ಸನಿಹದಿಂದ ಸಾಗುತ್ತಿದ್ದಾಗ ಕಿರಿಯರ ಪ್ರಾಣಶಕ್ತಿ ತಾನಾಗಿ ಮೇಲಕ್ಕೆ ಚಿಮ್ಮುತ್ತದೆ. ಆಗ ಎದ್ದು ನಿಂತಲ್ಲಿ ಅದು ಶಾಂತವಾಗಿ ಶರೀರದಲ್ಲಿಯೇ ನೆಲೆಯಾಗುತ್ತದೆ ಇಲ್ಲವಾದರೆ ಆಯುಷ್ಯ ಕ್ಷೀಣ ವಾಗುತ್ತದೆ.

ಗುರು-ಹಿರಿಯರನ್ನು ತಂದೆತಾಯಿಗಳನ್ನು ಜ್ಞಾನಿಗಳನ್ನು ಗೌರವಿಸುವುದರಿಂದ ; ನಮಸ್ಕರಿಸುವುದರಿಂದ ನಮಗೆ ಸರ್ವ ಸೌಭಾಗ್ಯಗಳು ಲಭಿಸುತ್ತವೆ.

ಪ್ರದಕ್ಷಿಣ ನಮಸ್ಕಾರ

ಮಂದಿರಗಳಲ್ಲಿ,ಅಗ್ನಿಗೆ,ಅಶ್ವತ್ಥವೃಕ್ಷಕ್ಕೆ,ತುಳಸಿಗೆ ಸುತ್ತುವರಿದು ನಮಸ್ಕಾರ ಮಾಡುತ್ತೇವೆ.ಅದೇ ಪ್ರದಕ್ಷಿಣೆ ನಮಸ್ಕಾರ ಅಥವಾ ಪರಿಕ್ರಮ. ದೇವಸ್ಥಾನಕ್ಕೆ ಹೋಗಿ ದೇವರ ಪೂಜೆಯನ್ನು ಮಾಡಿ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸುವುದು ಪದ್ಧತಿ.ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸಬೇಕು.ದೇವರ ಅಭಿಮುಖವಾಗಿ ನಿಂತರೆ ಎಡಭಾಗ ಯಾವುದಾಗುವುದೋ ಅಲ್ಲಿಂದ ಪ್ರದಕ್ಷಿಣೆಯನ್ನು ಪ್ರಾರಂಭಿಸಬೇಕು.ಪ್ರದಕ್ಷಿಣೆಯನ್ನು ಮಾಡುವಾಗ ಮೌನದಿಂದ,ಸ್ತೋತ್ರಗಳನ್ನು ಪಠಿಸುತ್ತಾ,ಪ್ರಾರ್ಥಿಸುತ್ತಾ,ಏಕಾಗ್ರತೆಯಿಂದ ಪ್ರದಕ್ಷಿಣೆ ನಮಸ್ಕಾರವನ್ನು ಸಲ್ಲಿಸಬೇಕು.

ಒಂದು ವೃತ್ತಕ್ಕೆ ಒಂದು ಕೇಂದ್ರಬಿಂದುವಿರಲೇಬೇಕು. ಭಗವಂತನಿಂದ ರಚಿತವಾದ ಈ ಪ್ರಪಂಚ ಒಂದು ವೃತ್ತ(Circle). ಇಲ್ಲಿ ಕೇಂದ್ರಬಿಂದು (Center Point) ಪರಮಾತ್ಮ.ಕೇಂದ್ರಬಿಂದುವಿಲ್ಲದೇ ವೃತ್ತವಿಲ್ಲ.ಪರಮೇಶ್ವರನ ಅಸ್ತಿತ್ವವಿಲ್ಲದೇ ಲೋಕವಿಲ್ಲ. ಹಾಗಾಗಿ ಆ ಕೇಂದ್ರಬಿಂದುವಿನ ಸುತ್ತ ಭಕ್ತಿಯಿಂದ ಸುತ್ತಲೇಬೇಕು.ಹಾಗೇ ಸುತ್ತುವಾಗ ನಮ್ಮ ಕರ್ಮ ಹಾಗೂ ಚಿಂತನೆಗಳು ಕೇಂದ್ರಬಿಂದುವಾದ ಭಗವಂತನಲ್ಲಿ ಲೀನವಾಗುತ್ತವೆ.ಕೇಂದ್ರಬಿಂದು ಯಾವಾಗಲೂ ಸ್ಥಿರ.ಸೌರಮಂಡಲದಲ್ಲಿ ಸೂರ್ಯನೇ ಕೇಂದ್ರಬಿಂದು.ಆತನ ಸುತ್ತಲೂ ಉಳಿದ ಗ್ರಹಗಳು ಸುತ್ತುತ್ತಿರುತ್ತವೆ.ಹಾಗೇ ಪ್ರಪಂಚದಲ್ಲಿ ಭಗವಂತನೇ ಕೇಂದ್ರಬಿಂದು,ಹಾಗಾಗಿ ನಾವು ಭಗವಂತನ ಸುತ್ತ ಪ್ರದಕ್ಷಿಣೆಯನ್ನು ಮಾಡಬೇಕೆಂದು ತಿಳಿಯುತ್ತದೆ. ಕೇಂದ್ರಬಿಂದುವಿಲ್ಲದೇ ವೃತ್ತವನ್ನು ರಚಿಸಲು ಸಾಧ್ಯವಿಲ್ಲ.ಹಾಗೇ ನಮ್ಮ ಶರೀರದ ಕೇಂದ್ರಬಿಂದು ಮನಸ್ಸು.ಮನಸ್ಸಿನಲ್ಲಿ ಭಗವಂತನಿರದಿದ್ದರೆ ಶಾಂತಿ,ನೆಮ್ಮದಿ ದೊರಕುವುದಿಲ್ಲ.ಮನದಲ್ಲಿ ಭಗವಂತ ನೆಲೆಗೊಳ್ಳಲಿ ಎಂದು ಪ್ರದಕ್ಷಿಣೆ ನಮಸ್ಕಾರ ಮಾಡಬೇಕು.ವೃತ್ತದಲ್ಲಿರುವ ಪ್ರತಿಯೊಂದು ಬಿಂದುವೂ ಕೇಂದ್ರಬಿಂದುವಿಗೆ ಸರಿಸಮಾನವಾಗಿರುತ್ತದೆ.ಹಾಗೇ ನಾವೆಲ್ಲೇ ಇರಲಿ,ಏನನ್ನೇ ಮಾಡಲಿ ಅದು ಕೇಂದ್ರಬಿಂದುವಾದ ಭಗವಂತನಿಗೆ ಹತ್ತಿರವಾಗಿಯೇ ಇರುತ್ತದೆ.ಆತನ ದಯೆಯಿಲ್ಲದೇ ಏನನ್ನೂ ಸಾಧಿಸಲಾಗದು. ಹಾಗೇ ದೇವಾಲಯದ ಪರಿಸರ ಶಾಂತ ಹಾಗೂ ಸಕಾರಾತ್ಮಕ ಅಂಶಗಳಿಂದ ಕೂಡಿರುತ್ತದೆ.ಪ್ರದಕ್ಷಿಣೆಯ ಸಮಯದಲ್ಲಿ ಆ ಸಕಾರಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸಿ ಶರೀರ ಚೈತನ್ಯಮಯವಾಗುತ್ತದೆ ಹಾಗೇ ಮಾನಸಿಕ ಶಾಂತಿಯೂ ಸಿಗುತ್ತದೆ.ಎಲ್ಲ ಜಂಜಾಟಗಳನ್ನು ಮರೆತು ಭಗವಂತನ ಸನ್ನಿಧಿಯಲ್ಲಿ ತುಸುಹೊತ್ತು ಕಳೆದರೆ ನವೋಲ್ಲಾಸ ಸಿಗುತ್ತದೆ.

ಸ್ಕಂದ ಪುರಾಣದ ಪ್ರಕಾರ ಮೊದಲ ಪ್ರದಕ್ಷಿಣೆಯಲ್ಲಿ ಮನದಿಂದ ಮಾಡಿದ ಪಾಪಗಳು ನಾಶವಾಗುತ್ತವೆ.
ಎರಡನೇ ಪ್ರದಕ್ಷಿಣೆಯಲ್ಲಿ ಮಾತಿನಿಂದ ಮಾಡಿದ ಪಾಪಗಳು ದೂರವಾಗುತ್ತವೆ.
ಮೂರನೇ ಪ್ರದಕ್ಷಿಣೆಯಲ್ಲಿ ದೇಹದಿಂದ ಮಾಡಿದಂತಹ ಪಾಪಗಳು ದೂರವಾಗುತ್ತವೆ
.ಮಾನಸಿಕ,ವಾಚಿಕ,ದೈಹಿಕ ಪಾಪಗಳ ನಿವಾರಣೆಗಾಗಿ ಮೂರು ಅಥವಾ 5 ಪ್ರದಕ್ಷಿಣೆಗಳನ್ನು ಹಾಕುವ ಸಂಪ್ರದಾಯ ಬೆಳೆದುಬಂದಿದೆ.

ಜಗತ್ತಿನ ಅಲೌಕಿಕ ಶಕ್ತಿಗೆ ನಮಸ್ಕರಿಸುವುದೇ ಪ್ರದಕ್ಷಿಣೆಯೆನಿಸುತ್ತದೆ. ಶಯನ ಪ್ರದಕ್ಷಿಣೆ ಹಾಗೂ ಆತ್ಮ ಪ್ರದಕ್ಷಿಣೆಯೂ ಸಹ ಪ್ರದಕ್ಷಿಣೆಯ ಭಾಗಗಳು.
ಶಯನ ಪ್ರದಕ್ಷಿಣೆ ಅಂದರೆ ಮಲಗಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕುವುದು ಇದಕ್ಕೆ ಉರುಳು ಸೇವೆ ಎನ್ನುತ್ತಾರೆ.
ಆತ್ಮ ಪ್ರದಕ್ಷಿಣೆಯೆಂದರೆ ನಿಂತಲ್ಲೇ ಮೂರು ಪ್ರದಕ್ಷಿಣೆಯನ್ನು ಹಾಕಿ ದೇವರಿಗೆ ನಮಸ್ಕರಿಸುವುದು.

ಈ ಪ್ರಾರ್ಥನೆಯನ್ನು ಹೇಳುತ್ತಾ ಪ್ರದಕ್ಷಿಣೆ ಮಾಡಿದರೆ ಒಳ್ಳೆಯದು.

 "ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ ||"

(ಅರಿತೋ ಅರಿಯದೆಯೋ ಏನಾದರೂ ಪಾಪ ಮಾಡಿದ್ದರೆ,ಹಿಂದಿನ ಜನ್ಮಗಳಲ್ಲಿ ಪಾಪ ಮಾಡಿದ್ದರೆ,ಅಂತಹ ಪಾಪಗಳು ಪ್ರದಕ್ಷಿಣೆ ನಮಸ್ಕಾರದಿಂದ ನಾಶವಾಗುತ್ತವೆ.)
ಲೋಕಾಃ ಸಮಸ್ತಾಃ ಸುಖಿನೋ ಭವಂತು.