ಒಮ್ಮೆ ಸಿಂಹಕ್ಕೆ ಜೋರಾಗಿ ಹಸಿವೆಯಾಯ್ತು. ಪಕ್ಕದಲ್ಲಿದ್ದ ನರಿಯೊಂದಿಗೆ ಹೇಳಿತು:
"ನನಗೇನಾದರು ತಿನ್ನಲು ತಂದುಕೊಡು, ಇಲ್ಲದಿದ್ದರೆ ನಾನು ನಿನ್ನನ್ನು ಕೊಂದು ತಿನ್ನುತ್ತೇನೆ."
ನರಿ ನೇರವಾಗಿ ಒಂದು ಕತ್ತೆಯ ಬಳಿ ಹೋಗಿ ಹೇಳಿತು:
"ಸಿಂಹ ನಿನ್ನನ್ನು ರಾಜನನ್ನಾಗಿ ಮಾಡ್ತಾನಂತೆ, ಬಾ ನನ್ನ ಜೊತೆ."
ನರಿಯ ಮಾತನ್ನು ನಂಬಿದ ಕತ್ತೆ ಸಿಂಹದ ಬಳಿ ಹೋಯಿತು.
ಕತ್ತೆಯನ್ನು ಕಂಡಾಗ ಸಿಂಹ ಅದರ ಮೇಲೆ ಹಾರಿ ಆಕ್ರಮಿಸಿತು, ಕತ್ತೆಯ ಕಿವಿಯನ್ನು ಕಚ್ಚಿ ಕತ್ತರಿಸಿತು, ಆದರೆ ಕತ್ತೆ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಯಿತು...
ನಂತರ ಕತ್ತೆ ಮತ್ತೆ ತನ್ನನ್ನು ಭೇಟಿಯಾದ ನರಿಯೊಂದಿಗೆ ಕೇಳಿತು, "ನೀನು ನನಗೆ ಮೋಸ ಮಾಡಿಬಿಟ್ಟೆ ಅಲ್ವಾ?...! "
ನರಿ ಹೇಳಿತು: "ಮುಠ್ಠಾಳನಂತೆ ಮಾತಾಡ್ಬೇಡ, ನಿನ್ನ ತಲೆಗೆ ಕಿರೀಟ ತೊಡಿಸಲು ನಿನ್ನ ಕಿವಿಯನ್ನು ಕತ್ತರಿಸಿದ್ದು" ಎಂದು.
ಆಗ ಕತ್ತೆ ನರಿಯ ಮಾತು ಸತ್ಯವಾಗಿರಬಹುದು ಎಂದು ಭಾವಿಸಿ ನರಿಯ ಜೊತೆ ಮತ್ತೆ ಸಿಂಹದ ಬಳಿ ಹೋಯಿತು...
ಸಿಂಹ ಪುನಃ ಕತ್ತೆಯನ್ನು ಆಕ್ರಮಿಸಿ ಕಚ್ಚಿ ಅದರ ಬಾಲವನ್ನು ಕತ್ತರಿಸಿ ಹಾಕಿತು..!,
ಕತ್ತೆ ಮತ್ತೊಮ್ಮೆ ಕಷ್ಟಪಟ್ಟು ಪಾರಾಗಿ ಹೋಗಿ ನರಿಯೊಂದಿಗೆ ಕೇಳಿತು "ನೀನು ನನ್ನಲ್ಲಿ ಸುಳ್ಳು ಹೇಳಿದ್ದಲ್ವಾ?!...
ನರಿ ಹೇಳಿತು: "ಅಯ್ಯೋ ಪೆದ್ದುಮುಂಡೇದು, ನಿನಗೆ ಸಿಂಹಾಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಅನುಕೂಲ ಆಗಬೇಕಾಗಿ ತಾನೇ ನಿನ್ನ ಬಾಲವನ್ನು ಕತ್ತರಿಸಿದ್ದು"...
ಬಹಳ ಬುದ್ಧಿವಂತಿಕೆಯಿಂದ ಮಾತನಾಡಿದ ನರಿಯು ಕತ್ತೆ ವಾಪಸ್ ಸಿಂಹದ ಬಳಿ ಹೋಗುವಂತೆ ಮನವೊಲಿಸಿತು .....
ಈಗ ಸಿಂಹ ಕತ್ತೆಯನ್ನು ಹಿಡಿದು ಕೊಂದು ತಿಂದು ಹಾಕಿತು...!
ನಂತರ
ಸಿಂಹ ನರಿಯೊಂದಿಗೆ ಹೇಳಿತು: "ನೀನು ಒಳ್ಳೆಯ ಕೆಲಸ ಮಾಡಿದೆ, ವೆಲ್ ಡನ್, ಇನ್ನು ಹೋಗಿ ಇದರ ಚರ್ಮ ಸುಲಿದು ತಾ".....
ನರಿ ಕತ್ತೆಯ ಚರ್ಮ ಸುಲಿದು,,,
ಕತ್ತೆಯ ಮೆದುಳನ್ನು ತಿಂದು,,,
ಅದರ ಹೃದಯ, ಕರುಳು, ಶ್ವಾಸಕೋಶವನ್ನು ಸಿಂಹದ ಮುಂದೆ ತಂದಿಟ್ಟಿತು...
ಸಿಂಹ ಕೋಪದಿಂದ ಕೇಳಿತು,:
"ಇದರ ಮೆದುಳು ಎಲ್ಲಿ...?"
ನರಿ ಉತ್ತರಿಸಿತು:
"ಅದಕ್ಕೆ ಮೆದುಳು ಎಂಬುದು ಇರಲಿಲ್ಲ ಪ್ರಭು... ಅದು ಇದ್ದಿದ್ದರೆ ಕಿವಿ ಬಾಲ ಕಚ್ಚಿ ಕತ್ತರಿಸಿದ ನಂತರವೂ ನಿಮ್ಮ ಬಳಿ ವಾಪಸ್ ಬರ್ತಿತ್ತಾ???...!!!
ಸ್ನೇಹಿತರೇ...
ಒಮ್ಮೆ ಯೋಚಿಸಿ, ನಾವು ಎಂಥವರ ಜೊತೆ ಬದುಕುತ್ತಿದ್ದೇವೆ ?
ಪ್ರತಿ ದಿನ, ಪ್ರತಿ ಕ್ಷಣ ಯಾರನ್ನು ನಂಬಿ ಯಾರ ಬಳಿ ಹೋಗುತ್ತಿದ್ದೇವೆ ?
ಹಾಗಾದರೆ ನಮ್ಮಲ್ಲಿ ಮೆದುಳು ಉಂಟಾ ?
ನಮ್ಮಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯ.
"ಚಂದಾಮಾಮ" ಕಥೆ ಇದು...!
No comments:
Post a Comment
If you have any doubts. please let me know...