March 19, 2026

ದೀಪಾವಳಿ ಮತ್ತು ಜ್ಯೋತಿಷ್ಯ

ಭಾದ್ರಪಸದ ಮಾಸದ ಪಿತೃ
ಪಕ್ಷದಲ್ಲಿ ಪಿತೃಗಳಿಗೆ ಋಣ  ಕಾರ್ಯ 
ಮಾಡಿದ ಮೇಲೆ ......ರವಿ ಹಾಗೂ ಚಂದ್ರರು ಮುಂದಿನ ರಾಶಿಯಾದ ತುಲಾಗೆ ಬರುತ್ತಾರೆ..
ರವಿಯು - *ಪಿತೃ* ಲೋಕಕ್ಕೆ ಕಾರಕ
ಚಂದ್ರನು -  *ಚಂದ್ರ*  ಲೋಕಕ್ಕೆ ಕಾರಕ
*ರವಿ* - ತಂದೆಯ ಕಡೆಯ ಮರಣ ಹೊಂದಿದ ಪುರುಷ  ಪಿತೃಗಳು
*ಚಂದ್ರ* - ತಾಯಿಯ ಕಡೆ ಮರಣ ಹೊಂದಿದ ಸ್ತ್ರೀ ಯರ ಪಿತೃಗಳು

ತುಲಾದಲ್ಲಿ ರವಿ ನೀಚನಾಗಿ ಚಂದ್ರನೊಂದಿಗೆ ಅಮಾವಾಸ್ಯೆ ಬಂದರೆ ಅದು ರವಿ ಹಾಗು ಚಂದ್ರರಿಗೆ *ಶಕ್ತಿ ಹೀನ* ವಾಗುವ ಪರಿಸ್ತಿತಿ ..
ಅಂದರೆ  ಪಿತೃದೇವತೆಗಳು ಪಂಚಭೂತವಾದ ಭೂಮಿಯ ಜಗತ್ತಿನಲ್ಲಿ ಶಕ್ತಿಹೀನರಾಗಿ  ಬಲ ಕಳೆದುಕೊಂಡು ತಮ್ಮ ಲೋಕವಾದ ಪಿತೃಲೋಕಕ್ಕೆ ತೆರಳುತ್ತಾರೆ.ಪಿತೃಗಳು ಅವರ ಲೋಕಕ್ಕೆ ಶಾಂತರಾಗಿ ಹೋದರೆ ಇಲ್ಲಿರುವ ಅವರ ವಂಶಸ್ಥರಿಗೆ   *ಶಾಪವಿಮೋಚನೆಯಾಗುತ್ತದೆ* ಕಷ್ಡ ಕಾರ್ಪಣ್ಯ ಬಗೆಹರಿದು ನಿವಾರಣೆಯಾಗಿ *ಹಣ ಸುಖ ಸೌಭಾಗ್ಯಗಳು* ಲಭಿಸುತ್ತವೆ.. 

ಸುಖ - ಹಣಕ್ಕೆ ಕಾರಕ- ಶುಕ್ರ ಶುಕ್ರನ ಅಧಿದೇವತೆ  - ಲಕ್ಷ್ಮೀ  
ವ್ಯವಹಾರ ಚೆನ್ನಾಗಿ ನಡೆದರೆ ಅಪಾರ ಹಣ ಪ್ರಾಪ್ತಿ. ತುಲಾ ರಾಶಿಯು ವ್ಯವಹಾರದ ರಾಶಿಯಾಗಿದೆ ವ್ಯವಹಾರಕ್ಕೆ ಪ್ರತೀಕವಾದ ತಕ್ಕಡಿ ಅದರ ಸಂಕೇತವಾಗಿದೆ. ಅದರ ಸಂಕೇತವಾಗಿ ಅಮಾವಾಸ್ಯೆಯಲ್ಲಿ *ಲಕ್ಷ್ಮಿಪೂಜೆ* ಆಚರಿಸಲಾಗುತ್ತದೆ.

ಪಿತೃಗಳ ಆತ್ಮವು 
*ಜ್ಯೋತಿಯ*
 ರೂಪದಲ್ಲಿ ಇರುತ್ತದೆ . ಆ ಜ್ಯೋತಿಯು ಪಿತೃಲೋಕಕ್ಕೆ ತೆರಳುವ ಸಂಕೇತವಾಗಿ *ದೀಪ* ಹಚ್ಚಲಾಗುತ್ತದೆ.
 
💐 *ಸೂರ್ಯ + ಚಂದ್ರ ಸಂಯೋಗ*.
ಸಂಯೋಗವಾಗುವುದು ಚಿತ್ತಾ ನಕ್ಷತ್ರದಲ್ಲಿ... ಚಿತ್ತಾ ನಕ್ಷತ್ರವು  ವಿಶ್ವಕರ್ಮನ ನಕ್ಷತ್ರ
*ವಾಸ್ತುಶಿಲ್ಪ ವಿದ್ಯೆಯ* ಅಧಿದೇವತೆ. ಈ ವಿದ್ಯೆಯು *ಬೆಳಕು ಹಾಗೂ ಜ್ಯೋತಿಯ* ಸಂಕೇತವಾಗಿದೆ.ನೈಸರ್ಗಿಕ *ಬೆಳಕಿನ ಗ್ರಹಗಳಾದ ರವಿ ಹಾಗೂ ಚಂದ್ರರು ವಿದ್ಯೆ ಎಂಬ ಬೆಳಕಿನೊಡನೆ  ಚಿತ್ತಾ ನಕ್ಷತ್ರದಲ್ಲಿ ಸಂಯೋಗವಾಗುವುದರಿಂದ ಅದರ  ಸಂಕೇತವಾಗಿ ದೀಪ* ಹಚ್ಚಲಾಗುತ್ತದೆ.

💐 *ರಾಕ್ಷಸ ಹಾಗು ದೇವತೆಗಳು*
ತುಲಾರಾಶಿಯ ಒಡೆಯ ಶುಕ್ರ ರಾಕ್ಷಸರ ಪಕ್ಷ  .ಸೂರ್ಯ ಚಂದ್ರರು  ದೇವತೆಗಳ ಪಕ್ಷ. ಅಸುರತ್ವ ನಿಗ್ರಹಿಸಲು ಬೇಕಾದ ಶಕ್ತಿಯನ್ನು  ವಿದ್ಯೆಯು ನೀಡುತ್ತದೆ
ಅದರ ಸಂಕೇತವಾಗಿ *ದೀಪ* ಹಚ್ಚಲಾಗುತ್ತದೆ.

💐 *ರಾಮಾಯಣ..ಹಾಗೂ ದೀಪಾವಳಿ* 
ರವಿ - ರಾಮ 
ಚಂದ್ರ -ಸೀತೆ
ಸೀತೆಯನ್ನು ಅಸುರನಾದ ರಾವಣ ಶನಿ ಅಪಹರಿಸುತ್ತಾನೆ ಅಪಹರಣ ಆರನೇ ಮನೆ . 
ನಂತರ ರಾಮನು ಹನುಮಂತ ಹಾಗೂ ವಾನರರ ಕುಜ ನ ಸಹಾಯ ಪಡೆದು ಯುದ್ದ ಮಾಡಿ ರಾವಣನನ್ನು ವಧೆ ಮಾಡುತ್ತಾನೆ.ವಧೆ ಹಾಗೂ ಯುದ್ದವು  "ಅಷ್ಡಮ " ಅಂದರೆ " ವೃಶ್ಚಿಕ" . ವೃಶ್ಚಿಕಕ್ಕೆ ವ್ಯಯ ರಾಶಿ ತುಲಾ 
ಸೀತೆಯನ್ನು ರಾಮನು ಅಯೋದ್ಯೆಗೆ ಕರೆತರುವಾಗ ತುಲಾರಾಶಿಯ ಅಮಾವಾಸ್ಯೆ ಆಗಿದ್ದಾಗ ಅವರಿಗೆ ದಾರಿ ಕಾಣಲೆಂದು ಪ್ರಜೆಗಳು *ದೀಪ* ಹಚ್ಚಿ ಇಟ್ಟಿದ್ದರು.

💐 *ಭಾಗವತ ಹಾಗು ದೀಪಾವಳಿ*
 ನರಕಾಸುರನ ವಧೆ
ನರಕಾಸುರನ  ನರಕದ ಮನೆ ಅಷ್ಟಮ ಅಂದರೆ ವೃಶ್ಚಿಕ ರಾಶಿ ನರಕಾಸುರನ್ನು ವಧೆ ಮಾಡಿದ್ದು 

ಕೃಷ್ಣ ವೃಶ್ಚಿಕಕ್ಕೆ ಮಾರಕ
ಸ್ತಾನವಾದ ವೃ಼ಷಭ ರಾಶಿಯ  ಸಂಜಾತ
ವಧೆಗೆ ಆರಿಸಿಕೊಂಡ ದಿನ ತುಲಾರಾಶಿಯ ಅಮಾವಾಸ್ಯೆ ಕಾರಣ ವೃಶ್ಚಿಕಕ್ಕೆ ತುಲಾ *ದ್ವಾದಶ* ವ್ಯಯ .ಅಂದರೆ ನಾಶ .ನರಕದ ಅಧಿಪತಿಗೆ ನಾಶದ  ದಿನವನ್ನಾಗಿ ಆರಿಸಿ *ವಧೆ* ಮಾಡಿದ ಕೃಷ್ಣ
ರಾಕ್ಷಸರು - *ಕತ್ತಲೆ ಸಂಕೇತ ಅಸುರತ್ವ ನಾಶವಾದರೆ ಅದು ಬೆಳಕು ಆ ಕಾರಣ ಇಂದು ದೀಪ* ಹಚ್ಚುತ್ತಾರೆ.

ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ *ಅಭೀಂದ್ರ*🙏🏻🙏🏻🙏🏻🙏🏻

No comments:

Post a Comment

If you have any doubts. please let me know...