ಶತ್ರುಗಳಿಂದ ಉಂಟಾಗುವ ಅನ್ಯಾಯ, ದ್ರೋಹ, ಕಾನೂನು ವ್ಯಾಜ್ಯ ಅಥವಾ ರಹಸ್ಯ ಕುತಂತ್ರಗಳ ಸಂದರ್ಭಗಳಲ್ಲಿ ಆತುರದಿಂದ ಕ್ರಮ ಕೈಗೊಳ್ಳುವುದಕ್ಕಿಂತ, ಶಾಸ್ತ್ರೋಕ್ತ ಮುಹೂರ್ತವನ್ನು ಆಯ್ಕೆ ಮಾಡುವುದು ವಿಜಯದ ಮಾರ್ಗವೆಂದು ಮುಹೂರ್ತ ಶಾಸ್ತ್ರ ಹೇಳುತ್ತದೆ. ಅಂತಹ ಸಂದರ್ಭಗಳಿಗೆ ಆಯ್ಕೆ ಮಾಡುವ ವಿಶೇಷ ಸಮಯವೇ ಶತ್ರು ದಂಡನ ಮುಹೂರ್ತ.
*ಮುಖ್ಯ ಸೂಚನೆ:*
ಈ ಮುಹೂರ್ತವು ಕೇವಲ ಸ್ವರಕ್ಷಣೆ, ಧರ್ಮಪಾಲನೆ ಮತ್ತು ನ್ಯಾಯಸ್ಥಾಪನೆಗಾಗಿ ಮಾತ್ರ. ಯಾವುದೇ ಕಾರಣವಿಲ್ಲದೆ ಇತರರಿಗೆ ಹಾನಿ ಮಾಡುವ ಉದ್ದೇಶಕ್ಕೆ ಇದನ್ನು ಬಳಸುವುದು ಶಾಸ್ತ್ರೋಕ್ತ ಮಾರ್ಗವಲ್ಲ.
ಈ ಮುಹೂರ್ತದಲ್ಲಿ ಪರಿಗಣಿಸುವ ಕಾರ್ಯಗಳು*
• ಶತ್ರುವಿನ ಅನ್ಯಾಯಕ್ಕೆ ದೃಢ ಪ್ರತಿಕ್ರಿಯೆ
• ಕಾನೂನು ಕ್ರಮ ಆರಂಭ (ದೂರು ಸಲ್ಲಿಕೆ, ನ್ಯಾಯಾಲಯ ವ್ಯಾಜ್ಯ)
• ಪೊಲೀಸ್ ಠಾಣೆ / ಆಡಳಿತಾತ್ಮಕ ವಿಚಾರಣೆ
• ಕುತಂತ್ರ ಅಥವಾ ರಹಸ್ಯ ಸಂಚುಗಳನ್ನು ತಡೆಯುವುದು
• ಧೈರ್ಯಪೂರ್ಣ ಮುಖಾಮುಖಿ ಮಾತುಕತೆ
• ತಂತ್ರಾತ್ಮಕ ಅಥವಾ ರಕ್ಷಣಾತ್ಮಕ ಕ್ರಮಗಳು
* 1. ಉಗ್ರ ತಿಥಿಗಳ*
*ಶ್ಲೋಕ:*
ಉಗ್ರಾಣಿ ಕ್ರೂರಕಾರ್ಯೇಷು ತಿಥಯಃ ಪರಿಕೀರ್ತಿತಾಃ ।
ಚತುರ್ಥ್ಯಷ್ಟಮಿ ನವಮಿ ಚ ಚತುರ್ಧಶೀ ತ್ರಯೋದಶೀ ॥
* ಗ್ರಂಥ: ಮುಹೂರ್ತ ಚಿಂತಾಮಣಿ
*ಅರ್ಥ:*
ಚತುರ್ಥಿ, ಅಷ್ಟಮಿ, ನವಮಿ, ಚತುರ್ಧಶಿ ಮತ್ತು ತ್ರಯೋದಶಿ ತಿಥಿಗಳು ಉಗ್ರ ಮತ್ತು ಕಠಿಣ ಕಾರ್ಯಗಳಿಗೆ ಯೋಗ್ಯವೆಂದು ಹೇಳಲಾಗಿದೆ.
* ತೃತೀಯವೂ ದೃಢ ನಿರ್ಧಾರಗಳಿಗೆ ಅನುಕೂಲಕರವೆಂದು ಕೆಲವು ಪರಂಪರೆಗಳು ಪರಿಗಣಿಸುತ್ತವೆ.
* 2. ಉಗ್ರ ನಕ್ಷತ್ರಗಳ*
*ಶ್ಲೋಕ:*
ಉಗ್ರಾಣಿ ಭರಣ್ಯಾರ್ದ್ರಾ ಮಘಾಶ್ಲೇಷಾ ತಥೈವ ಚ ।
ಜ್ಯೇಷ್ಠಾ ಮೂಲಂ ಚ ಪೂರ್ವಾಷಾಢಾ ಪೂರ್ವಾಭಾದ್ರಾ ಚ ಕೀರ್ತಿತಾಃ ॥
* ಗ್ರಂಥ: ಕಾಲಾಮೃತ
*ಅರ್ಥ:*
ಭರಣಿ, ಆರ್ದ್ರ, ಮಘಾ, ಆಶ್ಲೇಷಾ, ಜ್ಯೇಷ್ಠಾ, ಮೂಲ, ಪೂರ್ವಾಷಾಢಾ ಮತ್ತು ಪೂರ್ವಾಭಾದ್ರ ನಕ್ಷತ್ರಗಳು ಉಗ್ರಸ್ವಭಾವವುಳ್ಳವು.
* ಪೂರ್ವ ಫಲ್ಗುನಿಯೂ ಕೆಲವು ಸಂಪ್ರದಾಯಗಳಲ್ಲಿ ತೀಕ್ಷ್ಣ ಸ್ವಭಾವಕ್ಕೆ ಸೇರಿಸಲಾಗಿದೆ.
* 3. ಮಂಗಳವಾರ ಮತ್ತು ಶನಿವಾರ*
*ಶ್ಲೋಕ:*
ಭೌಮೇ ಶತ್ರುವಿನಾಶಾಯ ಶನೌ ದಂಡಪ್ರದಾಯಕೇ ॥
* ಗ್ರಂಥ: ಬೃಹತ್ ಸಂಹಿತಾ
*ಅರ್ಥ:*
ಮಂಗಳವಾರ ಶತ್ರುನಾಶಕ್ಕೆ ಯೋಗ್ಯ; ಶನಿವಾರ ದಂಡನೆ ಮತ್ತು ಕಠಿಣ ಕ್ರಮಗಳಿಗೆ ಅನುಕೂಲಕರ.
* ಸೋಮವಾರ ಮನೋಸ್ಥೈರ್ಯ ಮತ್ತು ನಿಯಂತ್ರಿತ ನಿರ್ಧಾರಕ್ಕೆ ಸಹಕಾರಿ.
* 4. ಪಾಪಗ್ರಹ ಸಂಯುಕ್ತ ಲಗ್ನ*
*ಶ್ಲೋಕ*:
ಪಾಪಗ್ರಹೈಃ ಸಂಯುತೋ ಲಗ್ನೋ ರಿಪುನಾಶಕರೋ ಭವೇತ್ ॥
* ಗ್ರಂಥ: ಧರ್ಮಸಿಂಧು
*ಅರ್ಥ:* ಪಾಪಗ್ರಹಗಳಿಂದ ಸಂಯುಕ್ತವಾದ ಲಗ್ನವು ಶತ್ರುನಾಶಕಾರಕವಾಗುತ್ತದೆ.
* ಲಗ್ನದಲ್ಲಿ ಅಥವಾ ಲಗ್ನಕ್ಕೆ ದೃಷ್ಟಿ ನೀಡುವ ಮಂಗಳ, ಶನಿ, ರಾಹು, ಕೇತುಗಳ ಬಲವು ದಿಟ್ಟ ಕ್ರಮಗಳಿಗೆ ಶಕ್ತಿ ನೀಡುತ್ತದೆ.
* ಅನುಕೂಲಕರ ಲಗ್ನ / ರಾಶಿಗಳು*
• ಮೇಷ
• ಸಿಂಹ
• ವೃಶ್ಚಿಕ
• ಮಕರ
• ಕುಂಭ
ಈ ರಾಶಿಗಳು ಧೈರ್ಯ, ಸ್ಥೈರ್ಯ ಮತ್ತು ಪ್ರತಿರೋಧ ಶಕ್ತಿಯನ್ನು ಸೂಚಿಸುತ್ತವೆ.
* ಜ್ಯೋತಿಷ್ಯ ಸಾರಾಂಶ*
ಉಗ್ರ ತಿಥಿ + ತೀಕ್ಷ್ಣ ನಕ್ಷತ್ರ + ಮಂಗಳ/ಶನಿ ಪ್ರಭಾವ + ಪಾಪಗ್ರಹ ಬಲ
= ಶತ್ರು ದಂಡನ ಅಥವಾ ರಕ್ಷಣಾತ್ಮಕ ಕ್ರಮಗಳಿಗೆ ಶಕ್ತಿದಾಯಕ ಸಂಯೋಗ.
ಆದರೆ ಜೊತೆಗೆ ಗಮನಿಸಬೇಕಾದ ಅಂಶಗಳು:
• ಲಗ್ನಬಲ ಮತ್ತು ಚಂದ್ರಬಲ
• ಷಷ್ಠಭಾವ ಬಲ (ಶತ್ರುಭಾವ)
• ಮಾತನಾಡಲು ಹೋಗವ ಕಾಲಕ್ಕೆ ರಾಹುಕಾಲ, ಯಮಗಂಡ, ಗುಳಿಕಕಾಲ ತ್ಯಜಿಸಬೇಕು
• ಗುರುದೃಷ್ಟಿ ಇದ್ದರೆ ಜಯ ಸ್ಥಿರವಾಗುತ್ತದೆ
* ಧಾರ್ಮಿಕ ಸಂದೇಶ*
ಧರ್ಮದ ಪರವಾಗಿ ಕೈಗೊಂಡ ಕ್ರಮವೇ ಶಾಶ್ವತ ಜಯಕ್ಕೆ ಕಾರಣ.
ಅಧರ್ಮದಿಂದ ಮಾಡಿದ ಪ್ರಯತ್ನ ಕರ್ಮಫಲದ ಮೂಲಕ ವಿಪರೀತ ಫಲ ನೀಡುತ್ತದೆ.
ಆದ್ದರಿಂದ ಶತ್ರು ದಂಡನ ಮುಹೂರ್ತವನ್ನು ಆಯ್ಕೆ ಮಾಡುವಾಗ ಧೈರ್ಯಕ್ಕಿಂತಲೂ ಧರ್ಮಬುದ್ಧಿ ಮುಖ್ಯ.
ಶ್ರೀ ಗುರುರಾಜಾಚಾರ್ಯ ಜೋಶಿ