May 28, 2026

ಸನ್ಯಾಸಯೋಗ

*ಸನ್ಯಾಸಿ ಯೋಗ ಅಥವಾ* 
*ಪ್ರವ್ರಜ್ಯಾ ಯೋಗ*
 
*ಜನ್ಮ ಕುಂಡಲಿಯಲ್ಲಿ  4 ಮತ್ತು ಹೆಚ್ಚಿನ ಗ್ರಹ ಕೇಂದ್ರದಲ್ಲಿದ್ರೆ, ಯಾವ ಗ್ರಹ ಅತೀ ಬಲವಾಗಿರುತ್ತದೆ  ಅದರ ಪ್ರಕಾರ ಸಂನ್ಯಾಸದ ರೀತಿ ಬದಲಾಗುತ್ತೆ* 

*ಬೃಹತ್ ಪರಾಶರ ಹೋರಾ ಶಾಸ್ತ್ರ ಅಧ್ಯಾಯ 22 ಹೇಳುವ  "ಪ್ರವ್ರಜ್ಯಾ ಯೋಗಾ"*
*ಜನ್ಮ ಕುಂಡಲಿಯಲ್ಲಿ ಬಲವಾದ ಗ್ರಹ*
*ಸೂರ್ಯ ಆಗಿದ್ದರೆ, ತಾಪಸ/ವನಪ್ರಸ್ಥ ಸನ್ಯಾಸ ಯೋಗ ಉಂಟಾಗುತ್ತದೆ. ಇವರು ಕೇಸರಿ ವಸ್ತ್ರ ಉಟ್ಟು ಕೈಯಲ್ಲಿ ದಂಡ ಕಮಂಡಲ ಹಿಡಿದು, ಕಾಡಿನಲ್ಲಿ ತಪಸ್ಸು ಮಾಡುತ್ತಾರೆ. ಇವರು ಶಿವ/ಸೂರ್ಯ ಉಪಾಸನೆ ಮಾಡುತ್ತಾರೆ . ವಿಶ್ವಾಮಿತ್ರ, ವಸಿಷ್ಠ, ರಾಜ ಋಷಿಗಳು*.

*ಚಂದ್ರ ಬಲವಾಗಿದ್ದರೆ, ಶೈವ/ಕಾಪಾಲಿಕ ಸನ್ಯಾಸಿ ಯೋಗ. ಇವರು ಮೈ ಮೇಲೆ ವಿಭೂತಿ ಧರಿಸಿ, ರುದ್ರಾಕ್ಷಿ ಧರಿಸಿ , ಶ್ಮಶಾನದಲ್ಲಿ ವಾಸ, ಭಿಕ್ಷಾಟನೆ ಮಾಡಿಕೊಂಡು ಶಿವ, ಪಾರ್ವತಿ, ಗೋರಖನಾಥ ಪರಂಪರೆ ಶಿವಯೋಗಿಗಳು*.

*ಮಂಗಳ ಗ್ರಹ ಬಲವಾಗಿದ್ದರೆ, ಇವರು ರಕ್ತಾಂಬರ/ಶಕ್ತ ಸನ್ಯಾಸಿ ಯೋಗ: ಕೆಂಪು ಬಟ್ಟೆ ತೊಟ್ಟು , ತ್ರಿಶೂಲ ಹಿಡಿದು, ಶಕ್ತಿ ಉಪಾಸನೆ, ವೀರ ತಪಸ್ಸು ಮಾಡುತ್ತಾರೆ. ದುರ್ಗಾ, ಕಾಳಿ, ಭೈರವ ಆರಾಧನೆ. ನಾಗಾ ಸಾಧುಗಳು, ಅಘೋರಿ* *ಇವರನ್ನು ಯುದ್ಧ ಸಂನ್ಯಾಸಿ ಅನ್ನುತ್ತಾರೆ*.
*ಬುಧನಿಂದ ಉಂಟಾಗುವ ಸನ್ಯಾಸಿಯೋಗವನ್ನು , ಶಾಕ್ಯ/ಬೌದ್ಧ ಭಿಕ್ಷು ಅನ್ನುತ್ತಾರೆ. ಇವರು ಹಳದಿ ವಸ್ತ್ರ ಧರಿಸಿ, ಮುಂಡನ ಮಾಡಿಕೊಂಡು, ಶಾಸ್ತ್ರ ಅಧ್ಯಯನ ಮಾಡಿಕೊಂಡು, ಜನರಿಗೆ ಪ್ರವಚನ ನೀಡುವ,   ಜ್ಞಾನ ಮಾರ್ಗದ ಸನ್ಯಾಸಿಗಳು, ...ಗೌತಮ ಬುದ್ಧ, ದಲೈ ಲಾಮಾ ಅಂತವರು*.
*ಗುರುವಿನಿಂದ ಉಂಟಾಗುವ ಸನ್ಯಾಸಿಯೋಗವನ್ನು ವೇದಾಂತ/ಪರಮಹಂಸ ಯೋಗ ಅನ್ನುತ್ತಾರೆ. ಇವರು ಕಾವಿ ವಸ್ತ್ರ ಧರಿಸಿ, ಕೈಯಲ್ಲಿ ದಂಡ ಹಿಡಿದು, ಉಪನಿಷತ್ ಪ್ರಚಾರ, ಅದ್ವೈತ, ನಾರಾಯಣ, ವಿಷ್ಣು, **ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಠಾಧಿಪತಿಗಳು*.
*ಶುಕ್ರನಿಂದ ಸನ್ಯಾಸ ಯೋಗವೆಂದರೆ, ಭಾಗವತ/ವೈಷ್ಣವ, ಬಿಳಿ/ಹಳದಿ ವಸ್ತ್ರ ಧರಿಸಿ, ಕೈಯಲ್ಲಿ ತುಳಸಿ ಮಾಲೆ ಹಿಡಿದು, ಭಜನೆ, ಕೀರ್ತನೆ, ಪ್ರೇಮ ಭಕ್ತಿ ಹಾಡುವ, ಕೃಷ್ಣ, ರಾಮ, ವಿಠ್ಠಲ, ಚೈತನ್ಯ ಮಹಾಪ್ರಭು, ಸಂತ ತುಕಾರಾಮ*.
*ಶನಿಯಿಂದ ಸನ್ಯಾಸ ಯೋಗ... ನಿರ್ಗ್ರಂಥ/ಜೈನ ಮುನಿ, ಬೆತ್ತಲೆ ಅಥವಾ ಬಿಳಿ ಬಟ್ಟೆ ಧರಿಸಿ, ಕಠೋರ ವ್ರತ, ಅಹಿಂಸೆ ಮಾರ್ಗ,  ತೀರ್ಥಂಕರರು, ನಿರಾಕಾರ, ಮಹಾವೀರ, ಜೈನ ಮುನಿ,  ದಿಗಂಬರರು*.


*ವಿಶೇಷ ನಿಯಮ*

 *ಮುಖ್ಯವಾಗಿ ಗ್ರಹ ಸ್ವಕ್ಷೇತ್ರ/ಉಚ್ಚ ಕ್ಷೇತ್ರದಲ್ಲಿ ಇರುವ ಗ್ರಹದ ಯುತಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಗ್ರಹ ಇರಬೇಕು, ಆಗ ಸ್ವಕ್ಷೇತ್ರ ಗ್ರಹದ ಸಂನ್ಯಾಸ ಪಕ್ಕಾ ಸಿಗುತ್ತೆ* *ಉದಾ: ಶನಿ ತುಲಾದಲ್ಲಿ ಉಚ್ಚ* → *ಜೈನ ಮುನಿ ಯೋಗ ಪ್ರಬಲವಾಗಿರುತ್ತದೆ*
 *ಒಂದು ವೇಳೆ ಗ್ರಹ ನೀಚ/ಅಸ್ತವಾಗಿದ್ದರೆ, ಆ ಸಂನ್ಯಾಸ ಅರ್ಧಕ್ಕೆ ನಿಂತು ಹೋಗುತ್ತೆ. ಅವರು ಮತ್ತೆ ಸಂಸಾರಕ್ಕೆ ಬರ್ತಾರೆ*.
 *2 ಗ್ರಹ ಸಮ ಬಲವಾಗಿದ್ದರೆ, ಮಿಶ್ರ ಸಂನ್ಯಾಸ ಯೋಗ, ಉದಾ: ಗುರು+ಶುಕ್ರ ಇಬ್ಬರು ಬಲವಾಗಿದ್ದರೆ, ಆಗ ಭಕ್ತಿ+ಜ್ಞಾನ ಮಾರ್ಗ*
*ರಾಹು/ಕೇತು ಜೊತೆ ಇದ್ದಾಗ, ಕೇತುವು ತೀವ್ರ ವೈರಾಗ್ಯ ಮತ್ತೆ ರಾಹು ಡಾಂಭಿಕ ಸಂನ್ಯಾಸ, ಹೆಸರಿಗೆ ಮಾತ್ರ*.

*ಗ್ರಹ ಸಂಯೋಗದಿಂದ ಸಂನ್ಯಾಸ ಅಂದರೆ*
*ಚಂದ್ರ+ಶನಿ 1/10ರಲ್ಲಿ ವಿವಿದಿಷಾ ಸಂನ್ಯಾಸ,  ಇವರಿಗೆ ಚಿಕ್ಕಂದಿಂದಲೇ ಜೀವನದಲ್ಲಿ ವಿರಕ್ತಿ,  ಶಾಲೆ ಬಿಟ್ಟು ಓಡಿಹೋಗ್ತಾರೆ*.
*ಗುರು 9ರಲ್ಲಿ ಮತ್ತು ಕೇತು 12ರಲ್ಲಿ ಇದ್ದಾಗ ಯತಿಧರ್ಮ ಸಂನ್ಯಾಸ, ಇವರು 40 ನಂತರ ತಾನಾಗೇ ಮನೆ ಬಿಡ್ತಾರೆ*.
*10ರಲ್ಲಿ ನಾಲ್ಕು ಗ್ರಹ + ಲಗ್ನೇಶ ಬಲವಾಗಿ ಇರಬೇಕು, ಆಗ *ರಾಜಸಂನ್ಯಾಸ* *ಅಂದರೆ ಈಗಿನ MLA ಆಗಿ ಆಮೇಲೆ ಸಂನ್ಯಾಸಿ ಜನ ಸೇವೆ ಮಾಡ್ತಾರೆ*.


*RMP ಟಿಪ್ಪಣಿ* 

*ಕೇಂದ್ರದಲ್ಲಿ 4 ಗ್ರಹ ಇರೋದೇ ಅಪರೂಪ* *ಅದ್ರಲ್ಲಿ 1 ಗ್ರಹ ದಿಗ್ಬಲ/ಉಚ್ಚ ಆಗೋದು ಇನ್ನೂ ಅಪರೂಪ* *ಹಾಗಾಗಿ ನಿಜವಾದ ಪ್ರವ್ರಜ್ಯಾ ಯೋಗ 10,000ಕ್ಕೆ 1 ಜಾತಕದಲ್ಲಿ ಸಿಗುತ್ತೆ ಅಷ್ಟೇ.*
*ಈಗಿನ ಕಾಲದಲ್ಲಿ ಮನಸ್ಸಿನ ಹತೋಟಿ ಬಹಳ ಮುಖ್ಯ*
*ಶುಕ್ರ ಬಲ ಇದ್ದರೆ *ಮನೆಲಿದ್ಕೊಂಡು ಕೃಷ್ಣ ಭಜನೆ ಮಾಡೋದು*.  
*ಗುರು ಬಲ* *ಇದ್ದರೆ, ಆಫೀಸ್ ಮಾಡ್ಕೊಂಡು ಗೀತಾ ಪಾಠ  ಮಾಡೋದು*. 
*ಮಂಗಳ ಬಲ* *ಇದ್ದರೆ *ಸಮಾಜ ಸೇವೆ, ಧರ್ಮ ರಕ್ಷಣೆ ಮಾಡೋದು*.

*ಗುರು+ಮಂಗಳ  *"ಕರ್ಮ ಯೋಗಿ ಸಂನ್ಯಾಸ"*  *ಸಂಸಾರ ಮಾಡ್ಕೊಂಡು ಜನರ ಕಷ್ಟ ಪರಿಹರಿಸೋದು* *ಇದೇ ಕಲಿಯುಗದ ಶ್ರೇಷ್ಠ ಸಂನ್ಯಾಸ*.

*Dr Ramamurthy*