ಆಗಸ್ಟ್ 4, 2026

ಕುಂಭ ವಿವಾಹ ಮತ್ತು ಅರ್ಕ ವಿವಾಹಗಳು

*ಧರ್ಮ ಸಿಂಧು ಮತ್ತು ನಿರ್ಣಯ ಸಿಂಧು* ನಂತಹ ವೈದಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ, ಶಾಸ್ತ್ರೋಕ್ತ ಪರಿಹಾರಗಳಾಗಿವೆ. ಇವು ಪ್ರತಿಯೊಂದು ವಿವಾಹ ಸಂಬಂಧಿತ ಸಮಸ್ಯೆಗೆ ಮಾಡುವ ಸಾಮಾನ್ಯ ಪರಿಹಾರಗಳಲ್ಲ, ಬದಲಿಗೆ ಜಾತಕದಲ್ಲಿರುವ ನಿರ್ದಿಷ್ಟ ಗ್ರಹಗಳ ಸ್ಥಿತಿಯನ್ನು ಆಧರಿಸಿ ಮಾಡುವಂತಹವು.

ಇತಿಹಾಸ ಮತ್ತು ಶಾಸ್ತ್ರಗಳ ಪ್ರಕಾರ, ಈ ಎರಡು ವಿಧಿಗಳನ್ನು ಲಿಂಗ (Gender) ಮತ್ತು ಗ್ರಹ ದೋಷದ ಸ್ವರೂಪ ಆಧರಿಸಿ ನಿರ್ಧರಿಸಲಾಗುತ್ತದೆ.

 *ಸ್ತ್ರೀ (ಕನ್ಯಾ)* :-ವಿಷ್ಣುವಿನ ಸ್ವರೂಪವಾದ ಮಣ್ಣಿನ ಮಡಕೆ (ಕುಂಭ / ಕಳಶ). ತೀವ್ರ ವೈಧವ್ಯ ಯೋಗ ಅಥವಾ ತೀವ್ರ ಮಂಗಳ/ಕುಜ ದೋಷ. ಪೂಜೆಯ ನಂತರ ಮಡಕೆಯನ್ನು ಒಡೆಯಲಾಗುತ್ತದೆ/ವಿಸರ್ಜಿಸಲಾಗುತ್ತದೆ. ಇದು ಮೊದಲ ಅಪಾಯಕಾರಿ ವಿವಾಹ ದೋಷವನ್ನು ಅಂತ್ಯಗೊಳಿಸುವ ಸಂಕೇತವಾಗಿದೆ


 *ಪುರುಷ (ವರ) ಎಕ್ಕದ ಗಿಡ (ಅರ್ಕ)* 
ದ್ವಿ-ವಿವಾಹ ಯೋಗ (ಎರಡು ಮದುವೆ ಯೋಗ) ಅಥವಾ ತೀವ್ರ ಮಂಗಳ / ವಿಷಕನ್ಯಾ / ಗಂಧರ್ವ ದೋಷ .ಎಕ್ಕದ ಗಿಡವನ್ನು ಪೂಜಿಸಿ, ಅದಕ್ಕೇ ಸಾಂಕೇತಿಕ ವಿವಾಹ ಮಾಡಿ ದೋಷಯುಕ್ತ ಶಕ್ತಿಯನ್ನು ಗಿಡಕ್ಕೆ ವರ್ಗಾಯಿಸಲಾಗುತ್ತದೆ.


 *ಈ ಪರಿಹಾರಗಳು ಯಾವುದೇ ಮದುವೆಯ ಸಮಸ್ಯೆಗೆ ಅನ್ವಯಿಸುತ್ತವೆಯೇ?* 
 *ಇಲ್ಲ.* 

ಒಬ್ಬ ಜಾತಕನಿಗೆ ಸಪ್ತಮಾಧಿಪತಿ (೭ನೇ ಮನೆಯ ಅಧಿಪತಿ) ಬಲಹೀನನಾಗಿರುವುದು, ೭ನೇ ಮನೆಗೆ ಶನಿಯ ದೃಷ್ಟಿ ಇರುವುದು ಅಥವಾ ದಶಾಸಾಪೋರ್ಟ್ ಇಲ್ಲದೆ ಮದುವೆ ತಡವಾಗುತ್ತಿದ್ದರೆ, ಕುಂಭ ಅಥವಾ ಅರ್ಕ ವಿವಾಹ ಮಾಡುವುದು ಸರಿಯಾದ ಕ್ರಮವಲ್ಲ.

ಸಾಮಾನ್ಯ ವಿವಾಹ ವಿಳಂಬಕ್ಕೆ-- ಗುರು / ಸಪ್ತಮಾಧಿಪತಿಯ ಶಾಂತಿ, ಸಪ್ತಮಾಧಿಪತಿಯ  ನಕ್ಷತ್ರಾಧಿಪತಿ , ಸ್ವಯಂವರ ಪಾರ್ವತಿ ಜಪ, ಅಥವಾ ರಾಹು-ಕೇತು- ಕುಜ -ಶನಿ ಶಾಂತಿಗಳನ್ನು, etc etc ಮಾಡಲಾಗುತ್ತದೆ.

ಕುಂಭ/ಅರ್ಕ ವಿವಾಹಕ್ಕೆ, ದಂಪತಿಯ ಆಯುಷ್ಯಕ್ಕೆ ಕಂಟಕ ತರುವ ಅಥವಾ ಮೊದಲ ವಿವಾಹ ಮುರಿದುಬೀಳುವ ತೀವ್ರ ಸ್ವರೂಪದ ದೋಷಗಳು ಜಾತಕದಲ್ಲಿರಬೇಕು.

ಸ್ತ್ರೀ ಜಾತಕದಲ್ಲಿ ಮೊದಲ ಪತಿಯ ಆಯುಷ್ಯಕ್ಕೆ ಕಂಟಕ ಅಥವಾ ದಾಂಪತ್ಯದಲ್ಲಿ ತೀವ್ರ ದುಃಖ ಸೂಚಿಸುವ ಯೋಗಗಳಿದ್ದಾಗ ಕುಂಭ ವಿವಾಹವನ್ನು ಶಿಫಾರಸು ಮಾಡಲಾಗುತ್ತದೆ. ತೀವ್ರ ಮಂಗಳ / ಕುಜ ದೋಷ:, ವೈಧವ್ಯ ಯೋಗ (ಗಂಡನ ಆಯುಷ್ಯಕ್ಕೆ ಕಂಟಕ), ಬಹು-ವಿವಾಹ ಯೋಗ, ವಿಷಕನ್ಯಾ ಯೋಗ ಜಾತಕದಲ್ಲಿರಬೇಕು.( 

 *ಪುರುಷ ಜಾತಕದಲ್ಲಿ* ಹೆಂಡತಿಯನ್ನು ಕಳೆದುಕೊಳ್ಳುವ ಅಥವಾ ಒಂದಕ್ಕಿಂತ ಹೆಚ್ಚು ಮದುವೆಯಾಗುವ ಬಲವಾದ ಸೂಚನೆಗಳಿದ್ದಾಗ *ಅರ್ಕ ವಿವಾಹವನ್ನು* ಸೂಚಿಸಲಾಗುತ್ತದೆ.

ಈ ವಿಧಿಗಳ ಮುಖ್ಯ ಉದ್ದೇಶವೆಂದರೆ, ಮೊದಲ ಸಾಂಕೇತಿಕ ವಿವಾಹವು ಜಾತಕದಲ್ಲಿರುವ ತೀವ್ರ ಪಾಪಗ್ರಹಗಳ ಕೆಟ್ಟ ಶಕ್ತಿಯನ್ನು (ದೋಷ) ತನ್ನತ್ತ ಹೀರಿಕೊಳ್ಳುತ್ತದೆ. ಮಡಕೆಯನ್ನು ಒಡೆದಾಗ ಅಥವಾ ಗಿಡವನ್ನು ವಿಸರ್ಜಿಸಿದಾಗ, ಆ ಮೊದಲ ವಿವಾಹದ "ದೋಷ" ಮುಕ್ತಾಯವಾಯಿತು ಎಂದು ಪರಿಗಣಿಸಲಾಗುತ್ತದೆ.

 ಇವು ವಿವಾಹದ ದೀರ್ಘಾಯುಷ್ಯ ಮತ್ತು ದ್ವಿ-ವಿವಾಹ ಯೋಗಗಳನ್ನು ನಿಯಂತ್ರಿಸುವ ವಿಶೇಷ ಪರಿಹಾರಗಳೇ ಹೊರತು, ಸಾಮಾನ್ಯ ಮದುವೆ ವಿಳಂಬವನ್ನು ನಿವಾರಿಸುವ ಪೂಜೆಗಳಲ್ಲ.

 ಕುಂಭ ಅಥವಾ ಅರ್ಕ ವಿವಾಹದ ಅಗತ್ಯವಿದೆಯೇ ಎಂದು ನಿರ್ಧರಿಸುವ ಮೊದಲು ಜಾತಕದ ಮಂಗಳ ದೋಷ, ೭ ಮತ್ತು ೮ನೇ ಮನೆಗಳ ಸ್ಥಿತಿ, ಶುಕ್ರ/ಗುರುವಿನ ಬಲ ಮತ್ತು ನವಾಂಶ (D9) ಕುಂಡಲಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು.

ಅಪರಿಹಾರ್ಯವಾದ ಅಥವಾ ಪರಿಹರಿಸಲಾಗದ ವೈಧವ್ಯ ಯೋಗವಿರುವ ಕನ್ಯೆಯ ದೋಷ ನಿವಾರಣೆಗೆ ವಿಶೇಷವಾದ ವಿಧಿಯನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ.

 *ಮಾರ್ಕಾಂಡೇಯ ಪುರಾಣದ ಪ್ರಕಾರ,* ಕನ್ಯೆಯ ಜಾತಕದಲ್ಲಿ ಬಾಲ ವೈಧವ್ಯ ಯೋಗವಿದ್ದರೆ, ನೈಜ ವಿವಾಹಕ್ಕೆ ಮೊದಲು ಸಾಂಕೇತಿಕ ವಿವಾಹವನ್ನು ಮಾಡಬೇಕು.

ನೀರು ತುಂಬಿದ ಕುಂಭ (ಕಲಶ), ಅಶ್ವತ್ಥ ವೃಕ್ಷ (ಅರಳಿ ಮರ) ಅಥವಾ ಬಂಗಾರದ ವಿಷ್ಣು ಪ್ರತಿಮೆ — ಇವುಗಳಲ್ಲಿ ಯಾವುದಾದರೂ ಒಂದರ ಜೊತೆಗೆ ಕನ್ಯೆಗೆ ಸಾಂಕೇತಿಕ ವಿವಾಹ ನೆರವೇರಿಸಬೇಕು. ಜನ್ಮ ಲಗ್ನದಿಂದ ಬಾಲ ವಿಧವ ಯೋಗವನ್ನು ನೋಡಿ,ಕನ್ಯೆ ಇಂದ ಸಾವಿತ್ರಿಯ ಅಥವಾ ಅರಳಿ ಮರದ ವ್ರತವನ್ನು ಏಕಾಂತದಲ್ಲಿ ಮಾಡಿಸಬೇಕು ಅಥವಾ ವಿಷ್ಣು -ಪ್ರತಿಮಾ ಅಥವಾ ಅರಳಿ ಮರದೊಡನೆ ಉತ್ತಮ ಲಗ್ನದಲ್ಲಿ ಕೂಡಿಸಿ ನಂತರ ಚಿರಂಜೀವಿ ಯೋಗವಿರುವ ವರನೊಡನೆ ಕನ್ಯೆಯ ವಿವಾಹ ಮಾಡಬೇಕು. ಇದರಲ್ಲಿ ಪುನರ್ ಭೂ ದೋಷ Punarphoo ಅಂದರೆ ವಿವಾಹದ ದೋಷ ಉಂಟಾಗುವುದಿಲ್ಲ

ಈ ರೀತಿ ಪ್ರಥಮದಲ್ಲಿ ಸಾಂಕೇತಿಕ ವಿವಾಹವನ್ನು ಮಾಡಿ, ನಂತರ ನೈಜ ವರನೊಂದಿಗೆ ಮದುವೆ ಮಾಡಿದರೆ ಕನ್ಯೆಗೆ ವೈಧವ್ಯದ ದೋಷ ಅಥವಾ ಪುನರ್ವಿವಾಹದ ಬಾಧೆ ತಟ್ಟುವುದಿಲ್ಲ.

 *ವಿಧಾನ ಖಂಡ ಮತ್ತು ನಿರ್ಣಯ ಸಿಂಧು* ಗ್ರಂಥಗಳಲ್ಲಿ ಹೇಳಿರುವಂತೆ, ಸುವರ್ಣ, ಉದಕ (ಕುಂಭ) ಅಥವಾ ಅಶ್ವತ್ಥ ಗಿಡದೊಂದಿಗೆ ಕನ್ಯೆಯ ಸಾಂಕೇತಿಕ ವಿವಾಹ ನೆರವೇರಿಸಿ, ತದನಂತರ ವರನೊಂದಿಗೆ ಮಾಡುವ ವಿವಾಹವನ್ನು ‘ಪುನರ್ಪೂ’ (ದ್ವಿತೀಯ ವಿವಾಹ ಅಥವಾ ಪುನರ್ವಿವಾಹ) ಎಂದು ಪರಿಗಣಿಸಲಾಗುವುದಿಲ್ಲ. ಇದು ಧರ್ಮಶಾಸ್ತ್ರ ಸಮ್ಮತವಾದ ಶುದ್ಧ ವಿವಾಹವೇ ಆಗಿರುತ್ತದೆ.

ಕುಂಭದೊಂದಿಗೆ (ಕಲಶದೊಂದಿಗೆ) ಸಾಂಕೇತಿಕ ವಿವಾಹ ನೆರವೇರಿಸುವಾಗ, ಆ ಕಲಶವನ್ನು ಷೋಡಶೋಪಚಾರ ಪೂಜೆಗಳಿಂದ (೧೬ ಬಗೆಯ ಉಪಚಾರಗಳಿಂದ) ಭಕ್ತಿಯಿಂದ ಪೂಜಿಸಿ, ಈ ಕೆಳಗಿನಂತೆ ಪ್ರಾರ್ಥಿಸಬೇಕು:

"ವರನ ಸ್ವರೂಪವಾಗಿರುವ ಎಲೈ ಘಟವೇ (ಕುಂಭವೇ), ನೀನು ಜಲದ ಆಶ್ರಯಸ್ಥಾನವಾಗಿದ್ದೀಯ. ನೀನು ಈ ಕನ್ಯೆಯ ಪತಿಗೆ ದೀರ್ಘಾಯುಷ್ಯವನ್ನು ನೀಡಿ, ಇವಳಿಗೆ ಪುತ್ರ ಸುಖವನ್ನು ಕೊಟ್ಟು ಅನುಗ್ರಹಿಸು. ಹಾಗೆಯೇ ಎಲೈ ಶ್ರೀಮನ್ನಾರಾಯಣನೇ, ಈ ಕನ್ಯೆಗೆ ಉತ್ತಮನಾದ ವರನನ್ನು ನೀಡಿ, ಇವಳನ್ನು ಸಕಲ ದುಃಖ-ದೋಷಗಳಿಂದ ರಕ್ಷಿಸು."
ಇದಕ್ಕೆ ಕುಂಭ ವಿವಾಹ ಎನ್ನುವುದು

ವಧು ವರರ ನಕ್ಷತ್ರ ಗ್ರಹಿಮಿತ್ರತ್ವ ಇತ್ಯಾದಿ 13 ವಿಷಯಗಳನ್ನು ನೋಡಿದ ನಂತರ ಜಾತಕ ವಿಮರ್ಶೆ ಮಾಡಬೇಕು ಕುಜ ದೋಷ ವಧು-ವರರಿಬ್ಬರ ಜಾತಕದಲ್ಲಿಯೂ ಇದ್ದರೆ ಇಬ್ಬರಿಗೂ ಸುಖವಿದೆ. ವಧುವಿನ ಜಾತಕದಲ್ಲಿ ಕಠಿಣ ಕುಜದೋಷವಿದ್ದಾಗ ವಧುವಿನ ತಂದೆ ಕುಂಭ ವಿವಾಹವನ್ನು ಮಾಡಿಸಬೇಕು ಎಂದು ಧರ್ಮ ಸಿಂಧು ಗ್ರಂಥ ಹೇಳುತ್ತದೆ. “ ಕನ್ಯಾ ವೈದವ್ಯ ಹರಕುಂಬ ವಿವಾಹಂ ಕರಿಶೆ “ ಎಂಬ ಸಂಕಲ್ಪದಿಂದ ಆರಂಭಿಸಿ ಕಲಶ ಸ್ಥಾಪನೆ ಮಾಡಿ ಅದರ ಮಧ್ಯೆ ವಿಷ್ಣು ಪ್ರತಿಮೆ ಇಟ್ಟು ಶೋಡೋಶೋಪಚಾರಗಳಿಂದ ಪೂಜಿಸುವಾಗ “ ವರುಣಾಂಗ ಸ್ವರೂಪಾಯ ಜೀವನಅಂಶಮಾಶ್ರಯ ಪತಿಂ ಜೀವಯ ಕನ್ಯಾಯ:ಚಿರಂಪುತ್ರ ಸುಕಂ ಕುರು ದೇಹಿ ವಿಷ್ಣು ಪರಂದೇವಾ ಕನ್ಯಾಮ್ ಪಾಲಯ ದುಃಖಿತ:” ಎಂದು ಪ್ರಾರ್ಥಿಸುತ್ತಾರೆ. ನಂತರ “ ವಿಷ್ಣುರೂಪಿಣೆ ಕುಂಭಾಯ ಇಮಾಮ್ ಕನ್ಯಾಶ್ರೀರೂಪಿಣಿ ಸಮರ್ಪಯಾಮಿ”  ಎಂದು ಹೇಳುತ್ತಾ ವಿವಾಹ ವಿಧಿ ವಿಧಾನಗಳನ್ನು (ಕುಂಭ ವರನ ಪ್ರತಿರೂಪ) ಮತ್ತು ವಧುವಿಗೆ ನೆರವೇರಿಸಿ ಕುಂಭವನ್ನು ಜಲಾಶಯದಲ್ಲಿ ಒಡೆಯುತ್ತಾರೆ. ಕನ್ಯೆಗೆ ಕಲಶ ಸ್ನಾನ ಮಾಡಿಸಿ, ಶುದ್ದಗೊಳಿಸಿ ಬ್ರಾಹ್ಮಣ ಭೋಜನ ಮಾಡಿಸುತ್ತಾರೆ. ಹೀಗೆ ಮಾಡಿದ ನಂತರ ಶ್ರೀ ಸುಬ್ರಹ್ಮಣ್ಯ ದೇವರ{ಕುಜ} ದರ್ಶನ ಮಾಡಿದಲ್ಲಿ ಕುಜ ದೋಷ ವಧುವಿಗೆ ಪರಿಹಾರವಾಗುವುದು. ವೈದವ್ಯ ಹರ ಕುಂಭ ವಿವಾಹ ಎನ್ನುವರು



 *ಕುಜದೋಷ /ಕುಜಾಷ್ಟಮ ದೋಷ:-* ,ಕುಜನು ಮಂಗಳ ಗ್ರಹ. ವಂಶದಲ್ಲಿ ಮಂಗಳ ಉಂಟಾಗಬೇಕಾದರೆ ಈ ಮಂಗಳನ ಅನುಗ್ರಹ  ಬೇಕೇ ಬೇಕು. ಕುಜನು, ರಾಹು- ಶನಿ- ಕೇತು- ರವಿ ಸಂಯೋಗ ಪಡೆದರೆ ಪಾಪಿ ಆಗುವವನು. ಕುಜರು ಶತ್ರುರಾಶಿ ಅಷ್ಟಮದಲ್ಲಿ ಇದ್ದರೆ ಕುಜಾಷ್ಟಮ ದೋಷ ವಿಪರೀತವಾಗಿರುತ್ತದೆ. ಈ ದೋಷ ಎಲ್ಲಾ ಯೋಗಗಳನ್ನು ಮಲಗಿಸಿ ಬಿಡುವುದು ಎಂದು ಜಾತಕಭರಣ ಗ್ರಂಥದಲ್ಲಿ ಹೇಳಿರುವರು .ನೈಸರ್ಗಿಕ ಪಾಪಗ್ರಹ ಕುಜನು ಯಾವ ಮನೆಯಲ್ಲಿ ಇದ್ದರೂ ಇವನು ದೋಷ ಕೊಡುವನು. 


ಇವನನ್ನು ಅಗ್ನಿ ಗ್ರಹ ಎಂದು ಕರೆಯುವರು. ಬೆಂಕಿಯನ್ನು ಮುಟ್ಟಿದರು ದೋಷ, ಹತ್ತಿರವಿದ್ದರೂ ದೋಷ, ದೂರವಿದ್ದರು ದೋಷ, ಅಪಾಯ. ಆದ್ದರಿಂದ ಇವನು ಅಪಾಯ ಗೃಹ. ಒಂದು ಕ್ಷಣದಲ್ಲಿ ಹೊಡೆದು ಹಾಕುವ ಶಕ್ತಿ ಈತನಿಗೆ ಇದೆ.

 ಕುಜ ಅಷ್ಟಮ ದೋಷ ಬಹಳ ಕೆಟ್ಟದು, ಜಾತಕದಲ್ಲಿರುವ ಯಾವುದೇ ಯೋಗ ಇದ್ದರು ಜಾತಕವನ್ನು ಮಲಗಿಸಿ ಬಿಡುವನು.

ಕುಜನು ಸ್ವಭಾವತ ಕ್ರೂರಿ, ಕೋಪಿಷ್ಟ, ಕಣ್ಣೀರು -ಅಹಂಕಾರಿ ಕಾರಕ. ಎಲ್ಲವನ್ನು ಹಾಳು ಮಾಡುವ ಸ್ವಭಾವನಾಗಿರುವುದರಿಂದ ನೈಸರ್ಗಿಕ ಪಾಪಗ್ರಹ ಎಂದು ಹೇಳಿರುವರು.

 ಕುಜನು ಶತ್ರುರಾಶಿಯಲ್ಲಿದ್ದರೂ ಬಲಿಷ್ಠ. ಕುಜನನ್ನು ವಿಯೋಗ ಕಾರಕ ಎಂದು ಹೇಳುವರು. 

ಕುಜ-ಕೇತು ವೈದವ್ಯಕಾರಕರು ,ಹೆಣ್ಣಿನ ಮಾಂಗಲ್ಯವನ್ನು ಕಿತ್ತು ಕೊಳ್ಳುವರು. 

ಕುಜನು ಏಳರಲ್ಲಿದ್ದರೆ ಕಳತ್ರದೊಡನೆ ಕಲಹ- ಮರಣಕಾರಕ ಸ್ಥಾನ.

 ಕುಜನು 8 ರಲ್ಲಿದ್ದರೆ ಆಕೆಯ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳುವನು.

 ಕುಜನು 12 ರಲ್ಲಿದ್ದರೆ ಪ್ರತಿದಿನ ಮಲಗುವಾಗ ಅಸಮಾಧಾನವನ್ನು ಸೂಚಿಸುವನು. 

ಸ್ತ್ರೀಯರ ಸಂಸಾರ ಸುಖವನ್ನು ಕೆಡಿಸಿ ಕಿರುಕುಳವನ್ನು ಕೊಟ್ಟು ತಾನು ಆನಂದ ಪಡುವುದರಲ್ಲಿ ಶನಿಗಿಂತ ಕುಜನ ಕ್ರೂರನು ಎಂದು *ಕಾಳಿದಾಸನು ತನ್ನ ಉತ್ತರ ಕಾಲಾಮೃತ ಗ್ರಂಥದಲ್ಲಿ* ಹೇಳಿದ್ದಾರೆ. 

ಆದುದರಿಂದ ಜಾತಕದಲ್ಲಿ ಕುಜದೋಷ ಶನಿದೋಷ ಗಮನಿಸುವುದು ಮುಖ್ಯವಾಗಿರುತ್ತದೆ.

 ಕುಜನು ಯುದ್ಧ ಗ್ರಹ ಈತನ ಮುಂದೆ ನಿಲ್ಲಲು ಯಾವ ಗ್ರಹಕ್ಕೂ ಶಕ್ತಿ ಇಲ್ಲ, ರವಿಯು ಬಲಶಾಲಿ, ತೇಜಸ್ವಿನಿಂದ ಕೂಡಿರುವನು, ಅಂತಹ ರವಿಗೆ ಕುಜನು ಗುದ್ದಲು ಹೋಗುವನು, ಇದರಿಂದ ಕುಜನನ್ನು ಬಹಳ ಅಪಾಯಕಾರಿ ಗ್ರಹ ಎಂದು *ಪರಾಶರರು* ಸೂಚಿಸಿರುವರು. 

ಈ ಗ್ರಹದ ಮುಂದೆ ಎಲ್ಲಾ ಗ್ರಹಗಳು ಒಂದೊಂದು ಸಲ ನಿಸ್ತೇಜವಾಗುವುದು. ಈ ಗ್ರಹದ ಮುಂದೆ ಯಾವ ಗ್ರಹವು ಎದುರು ನಿಲ್ಲಲಾರವು. ಬೃಹಸ್ಪತಿಚಾರ್ಯರು ಒಬ್ಬರೇ ಈ ಗ್ರಹವನ್ನು ನಿಲ್ಲಿಸಲು ಸಮರ್ಥರು. ಇಲ್ಲಿ ಗುರು ಗ್ರಹ ದೃಷ್ಟಿ ಅಂಗಾರಕರ ಮೇಲೆ ಇರಬೇಕೇ ಹೊರತು ಕುಜರು ಗುರುವನ್ನು ನೋಡಬಾರದು ಎಂಬುದು ಶಾಸ್ತ್ರಕಾರರ ಅಭಿಪ್ರಾಯವಾಗಿದೆ.

 *ಬಲಿಷ್ಠ ಕುಜ ಶ್ರೀರಾಮನನ್ನೇ ಬಿಡಲಿಲ್ಲ, ಇನ್ನು ನಾವೇನು?"* ಶ್ರೀರಾಮನ ಜಾತಕದಲ್ಲಿ ಸಪ್ತಮಾಧಿಪತಿ ಯಾದ ಶನಿಯು ನಾಲ್ಕರಲ್ಲಿ ಉಚ್ಚನಾದ್ದರಿಂದ ಬಾರಿi ಶ್ರೀಮಂತರ ಸಂಬಂಧವೇ ದೊರಕಿತು. ಲಗ್ನಾಧಿಪತಿ ಚಂದ್ರನು ಬಲಿಷ್ಠ, ಸಪ್ತಮಾಧಿಪತಿ ಶನಿಯು ಬಲಿಷ್ಠ. ಇದರಿಂದ ಇಬ್ಬರು ಬಲಶಾಲಿ ಗಳೇ. ಪರಸ್ಪರರ ಮಧ್ಯೆ ತಾರತಮ್ಯವಿಲ್ಲ. ಇಬ್ಬರು ಕೀರ್ತಿವಂತರೇ. *ಸಪ್ತಮಾಧಿಪತಿಗೆ ಏಳರಲ್ಲಿ ರವಿ* ಇರುವುದರಿಂದ ಮದುವೆಯಾಗಿ ಕೆಲವೇ ದಿನಗಳಲ್ಲಿ ಒಬ್ಬರನ್ನೊಬ್ಬರು ಅಗಲಿದರು. ಏಳರಲ್ಲಿ ಕುಜನು ಉಚ್ಚನಾದ್ದರಿಂದ ಕುಜದೋಷ ಎದ್ದು ಕಾಣುತ್ತದೆ. ಆದರೆ ಬಲಿಷ್ಠ ಗುರು ನೋಡುವುದರಿಂದ ಕುಜದೋಷ ತಗ್ಗಿ ಹೋಗಿದೆ. ಕುಜನ ಮನೆಯಾದ ಮೇಷದಲ್ಲಿ ರವಿ ಉಚ್ಚನಾಗಿ, ಶುಭಗ್ರಹ ಬುಧನಿರುವುದರಿಂದ ಕುಜದೋಷ ತಗ್ಗಿದೆ. ಕುಜನು ಕಟಕ ಲಗ್ನಕ್ಕೆ ಯೋಗಕಾರಕ ಆದ್ದರಿಂದ ಕುಜದೋಷ ಕಡಿಮೆಯಾಗಿ, ಬಾಧಕಾಧಿಪತಿ ಆದ್ದರಿಂದ ದಂಪತಿಗಳನ್ನು ಅಗಲಿಸಿದನು .

 ಸಾಮಾನ್ಯವಾಗಿ 11ನೇ ಮನೆಯಲ್ಲಿ ಗ್ರಹಗಳು ಶುಭಫಲ ಕೊಡುವರು. 3-6- 11ನೇ ಮನೆ ಉಪಚಯ ಸ್ಥಾನ ವಾದ್ದರಿಂದ ಕುಜನು ಅಲ್ಲೇ ಇರಬೇಕು, ಇಲ್ಲಿದ್ದರೆ ಅಷ್ಟು ಅಪಾಯಕಾರಿಯಲ್ಲ ಎಂದು ಹೇಳುವರು.

 ಆದರೆ ಆತನ ಕ್ರೂರ ದೃಷ್ಟಿ 3-6-11 ರಲ್ಲಿ ಇದ್ದರು ಈ ದೃಷ್ಟಿಯಿಂದ ಯಾವ ಮನೆಯನ್ನು ಯಾವ ಗ್ರಹವನ್ನು ಆದರೂ ನೋಡುವನು. ಇದರಿಂದ ನೋಡುವ ದೃಷ್ಟಿ ಪರಿಣಾಮಕಾರಿ. 

ಕುಜನು ಇರುವ ಸ್ಥಾನ, ನೋಡುವ ಸ್ಥಾನ, ಕಲಹ- ಬೀತಿ -ಹಿಂಸೆ ಇರುತ್ತದೆ. ಎಲ್ಲಾ ಗ್ರಹಗಳು ಅಷ್ಟೇ, ನೋಡುವ ದೃಷ್ಟಿಯಲ್ಲಿ ತುಂಬಾ ಪ್ರಭಾವ ಇರುತ್ತದೆ.

 ಗುರು ಇರುವ ಸ್ಥಾನ, ನೋಡುವ ಸ್ಥಾನ ಎರಡು ಅಭಿವೃದ್ಧಿಯಾಗುವುದು.

 ಶನಿ ಇರುವ ಸ್ಥಾನ- ಭಾವ ದುಃಖ, ನಿಧಾನತೆ, ಕಷ್ಟ- ನಷ್ಟ, ಅಪವಾದ, ಭಯ, ಅಲೆದಾಟ ಇರುತ್ತದೆ.

 ಲಗ್ನದಿಂದ ಕುಜನು 10ರಲ್ಲಿ ಇರಬೇಕು ಆಗ ಮಾತ್ರ ಶುಭಫಲ ಕೊಡುವನು ಆದರೆ ಕುಜನಿಗೆ ರಾಹು ಕೇತು ಸಂಪರ್ಕ ಇರಬಾರದು . " *ದಶಮಂ ಅಂಗಾರಕಶ್ಚೈವ ಸುಪುತ್ರ ಕುಲದೀಪಕ" ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದ್ದಾರೆ.* 

ಈ ಪ್ರಸಿದ್ಧ ಸಾಲು *ಮಹರ್ಷಿ ವೇದವ್ಯಾಸರಿಂದ* ರಚಿತವಾದ 'ಅಂಗಾರಕ ಸ್ತೋತ್ರಂ' (ಮಂಗಲ ದ್ವಾದಶನಾಮ ಸ್ತೋತ್ರಂ) ಎಂಬ ಸ್ತೋತ್ರದಲ್ಲಿದೆ. ಇದು *ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ* ಉಲ್ಲೇಖವಾಗಿದೆ.

 ದಶಮಂ ಅಂಗಾರಕಶ್ಚೈವ: 10ನೇ ಹೆಸರು – ಅಂಗಾರಕ (ಕೆಂಡದಂತೆ ಪ್ರಜ್ವಲಿಸುವವನು)

ಸುಪುತ್ರಃ: 11ನೇ ಹೆಸರು – ಸುಪುತ್ರ (ಸಂತಾನ ಕಾರಕ, ಸತ್ಪುತ್ರನನ್ನು ಕರುಣಿಸುವವನು)

ಕುಲದೀಪಕಃ: 12ನೇ ಹೆಸರು – ಕುಲದೀಪಕ (ವಂಶಕ್ಕೆ ಕೀರ್ತಿ ತರುವ ದೀಪದಂತಿರುವವನು)

ಮಂಗಲೋ ಭೂಮಿಪುತ್ರಶ್ಚ ಋಣಹರ್ತಾ ಧನಪ್ರದಃ ।
ಸ್ಥಿರಾಸನೋ ಮಹಾಕಾಯಃ ಸರ್ವಕರ್ಮಾವಬೋಧಕಃ ॥
ಲೋಹಿತೋ ಲೋಹಿತಾಕ್ಷಶ್ಚ ಸಾಮಗಾನಾಂ ಕೃಪಾಕರಃ ।
ದಶಮಂ ಅಂಗಾರಕಶ್ಚೈವ ಸುಪುತ್ರಃ ಕುಲದೀಪಕಃ ॥

ಚಂದ್ರನು ಪ್ರಾಣ- ರಕ್ತ ಕಾರಕ ಎಂದು ಜೈಮಿನಿ ಜ್ಯೋತಿಷ್ಯದಲ್ಲಿ ಹೇಳಿರುವರು. ಚಂದ್ರನು ಶೀತ ಗ್ರಹ *Blood Plasma* ಕಾರಕ. 

 ಕುಜನು Blood,ಗಟ್ಟಿ- ಉಷ್ಣಕಾರಕ. ಕುಜ-ಚಂದ್ರನಿಂದಲೇ ಸ್ತ್ರೀಯರಿಗೆ ಋತು ದೋಷ. ಇದರಿಂದ ಕುಜನು ಮಹಾ ಬಲಿಷ್ಠ ಗ್ರಹ ನೆಂದು ತಿಳಿಯಬಹುದು.

 ಕುಜದೋಷ ಇರಬೇಕು, ದಂಪತಿಗಳು ಇಬ್ಬರಿಗೂ ಇರಬೇಕು, ಇದು ಇದ್ದರೆ ಆರೋಗ್ಯ- ರಕ್ತ ಪರಿಚಲನೆ -ಸುಖ ಸಂಸಾರ ಇರುವುದು.ಆದರೆ ಹೆಣ್ಣಿಗೆ ಜಾಸ್ತಿ ಇರಬಾರದು.

 ಗಂಡಿಗೆ ಚಂದ್ರ- ಶುಕ್ರ- ಶನಿಯಿಂದ ಗಮನಿಸಿ ಹೇಳಬೇಕು. ಕುಜದೋಷ ದಂಪತಿಗಳಿಗೆ ಇರದಿದ್ದರೆ ಇಬ್ಬರು ರೋಗಿಷ್ಟ ರಾಗುವರು. ಮನುಷ್ಯನ ರಕ್ತಪರಿಚಲನೆ ಮೇಲೆ ಅಧಿಕಾರ ಅಂಗಾರಕನಿಗೆಇರುತ್ತದೆ  

 *ಭೃಗು ಶಟ್ಕ ದೋಷ .* 
ಯಾವುದೇ ಕಾರಣಕ್ಕೂ ಶುಕ್ರನು, ರಾಹು- ಕೇತು --ಕುಜ -ಶನಿಯ ಸಂಪರ್ಕಪಡೆಯಬಾರದು. ಶುಕ್ರನು ಎಷ್ಟು ನಿರ್ಬಲನಾಗುವನೋ ಅಷ್ಟೇ ದುರ್ಬಲರಾಗಿ ವ್ಯಕ್ತಿಯು ಜೀವನವನ್ನು ಅಂತ್ಯ ಮಾಡಿಕೊಳ್ಳುವನು. ಶುಕ್ರನು ಪಾಪ ರಾಶಿಯಲ್ಲಿ ಇರುವುದು ಒಂದು ದೋಷ ವಾದರೆ ಶನಿಯ ನಕ್ಷತ್ರ ಅಥವಾ ಪಾಪಗ್ರಹದ ನಕ್ಷತ್ರದಲ್ಲಿ ಇರುವುದು ಇನ್ನೊಂದು ದೋಷ. ಆದಕಾರಣ ಶುಭ ಆಗಿದ್ದಾಗ ಪಾಪಗ್ರಹಗಳ ನಕ್ಷತ್ರಗಳಲ್ಲಿ ಇರಬಾರದು.