March 27, 2026

ಸಮಯದ‌ ಮಹತ್ವ

        ಮೊನ್ನೆ ಗೆಳೆಯರು ಒಂದು ಕಡೆ ಸೇರೋಣ ಅಂತ ಪ್ಲಾನ್ ಮಾಡಿದ್ವಿ. ಅದರಲ್ಲಿ ಕೆಲವರು‘ನಾನು ತುಂಬಾ ಬ್ಯುಸಿ’ ಎಂದರು ಹಾಗೂ ಕೆಲವರು ‘ಬದುಕೇ ಬೋರ್ ಎದ್ದು ಹೋಗಿದೆ . ಹೇಗೆ ಟೈಂಪಾಸ್ ಮಾಡೋದು ಗೊತ್ತೇ ಅಗ್ತಿಲ್ಲ’ ಒಳ್ಳೆಯದು ಆಯ್ತು ಎಂದರು. ನಿಮ್ಮಲ್ಲೋ ಇಂತ ಹಳಹಳಿಸುವ ಸ್ನೇಹಿತರು ಇದ್ದೇ ಇರುತ್ತಾರೆ. ಸಮಯದ ಮಹತ್ವ ಅರಿತವರು ಈ ಎರಡೂ ಮಾತನ್ನು ಎಂದಿಗೂ ಹೇಳುವುದಿಲ್ಲ.ಒಂದು ದಿನಕ್ಕೆ 24 ಗಂಟೆಗಳು ಎಂಬುದು ಎಲ್ಲರಂತೆ ಅವರಿಗೂ ಗೊತ್ತಿರುತ್ತೆ. ಆದರೆ ಇರುವ 24 ಗಂಟೆಯನ್ನು ಸದುಪಯೋಗ ಪಡಿಸಿಕೊಳ್ಳುವ ವಿಧಾನ ತಿಳಿಯದೇ ಅವರು ಒದಾಡುತ್ತಿರುತ್ತಾರೆ.ಸಮಯ ನಿರ್ವಹಣೆ ಒಂದು ಕಲೆ. ಸಮಯವನ್ನು ಪಳಗಿಸಿಕೊಂಡವರಿಗೆ ಅದು ನಂಬಿಕಸ್ಥ ಸಹಾಯಕ. ಸ್ವೇಚ್ಛಾಚಾರದಿಂದ ವರ್ತಿಸಿದವರಿಗೆ ಸಮಯವೇ ಮಾರಕ. ನಿಮಗೂ & ನಮಗೂ ಒಂದು ದಿನದಲ್ಲಿರುವುದು ಕೇವಲ ಇಪ್ಪತ್ನಾಲ್ಕು ತಾಸುಗಳು ಮಾತ್ರ. ಇವುಗಳಲ್ಲೇ ನಮ್ಮ ಉದ್ಯೋಗ, ಯಾವುದೇ ವೃತ್ತಿ, ಮನೆಕೆಲಸ, ಮಕ್ಕಳ ಪೋಷಣೆ, ಇನ್ನಿತರ ಜವಾಬ್ದಾರಿಗಳ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲರ ಬದುಕಿನಲ್ಲೂ ದಿನದ ಬಹುಭಾಗ ಈ ಮುಖ್ಯ ಕಾರ್ಯಗಳಿಗಾಗಿಯೇ ವಿನಿಯೋಗವಾಗುತ್ತದೆ. ಇದರ ಜತೆಗೆ ಮನೆಗೆ ಸಂಬಂಧಿಸಿದ ಕೆಲಸಗಳು ಮತ್ತು ನಿತ್ಯಬದುಕಿಗೆ ಅಗತ್ಯವಿರುವ ವಸ್ತು, ಸಲಕರಣೆ ಮುಂತಾದವನ್ನು ಹೊಂದಿಸಿಕೊಳ್ಳುವತ್ತ ಗಮನಹರಿಸಬೇಕು. ವೈಯಕ್ತಿಕ ಆಸಕ್ತಿ, ಅಭಿರುಚಿಗಳಿಗೂ ಆದ್ಯತೆ ನೀಡಬೇಕು. ಗೆಳೆಯರು, ಬಂಧು-ಬಳಗದವರೊಡನೆ ಒಡನಾಟ, ಅವರುಗಳ ಮನೆಗೆ ಹೋಗಿಬರುವುದನ್ನೂ ಮಾಡಬೇಕು. ಮನೆಯಲ್ಲಿ ವಯಸ್ಸಾದ ತಂದೆ-ತಾಯಿಗಳ ಯೋಗಕ್ಷೇಮವನ್ನೂ ಕಡೆಗಣಿಸುವಂತಿಲ್ಲ. ಇನ್ನು ದಿನನಿತ್ಯದ ಅನೇಕಾನೇಕ ಕೆಲಸಗಳಲ್ಲಿ ಕೆಲವಂತೂ ತುರ್ತಾಗಿ ಮಾಡಬೇಕಾಗಿರುವಂಥಾದ್ದು ಇರುತ್ತವೆ. ಈ ಎಲ್ಲ ಸಂದರ್ಭಗಳಲ್ಲೂ ನಮ್ಮಲ್ಲಿ ಅನೇಕರನ್ನು ಬಹಳವಾಗಿ ಕಾಡುವಂಥಾದ್ದು ಸಮಯದ ಸಮಸ್ಯೆ. ಸಮಯವೇ ಸಾಕಾಗುತ್ತಿಲ್ಲವೆಂಬ ಕೊರಗು ಅನೇಕ ಸಂದರ್ಭಗಳಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಕಾಡುತ್ತಿರುತ್ತದೆ.
    ಸಮಯ ಉಳಿತಾಯ ದೃಷ್ಟಿಯಿಂದ ಸಮಯದ ಆಯ್ಕೆ ಮತ್ತು ಹಂಚಿಕೆ ಬಹಳ ಮುಖ್ಯವಾದದ್ದು. ಸಮಯವನ್ನು ನಿಶ್ಚಿತವಾದ ಯೋಜನೆಗೆ ತಕ್ಕಂತೆ ಅನಿರೀಕ್ಷಿತ ಆಗುಹೋಗುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಗದಿಪಡಿಸಬೇಕು. ನೀವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗಿಕೊಳ್ಳುವವರೆಗೆ ಯಾವ್ಯಾವ ಕೆಲಸಗಳನ್ನು ಮಾಡಬೇಕೆಂಬುದರ ಬಗ್ಗೆ ಪೂರ್ವಯೋಜಿತ ಕಲ್ಪನೆ ನಿಮಗಿರಬೇಕಾಗುತ್ತದೆ. ಇದರಲ್ಲಿ ನಿಮ್ಮ ಕಚೇರಿಯಲ್ಲಿ ಉದ್ಯೋಗ ನಿರ್ವಹಣೆ ಅಥವಾ ಬದುಕು ನಿರ್ವಹಣೆ ಕಾಯಕಕ್ಕೆ ಪ್ರಥಮ ಆದ್ಯತೆ ಇರಲಿ. ಜತೆಗೆ ನಿಮ್ಮ ಇನ್ನಿತರ ಕೆಲಸ ಕಾರ್ಯಗಳು, ವ್ಯಾಯಾಮ, ಪೂಜೆ, ಸಂಜೆಯ ವಾಕಿಂಗ್, ಬ್ಯಾಂಕ್-ಅಂಚೆ ಕಚೇರಿಗೆ ಹೋಗಿ ಬರುವುದು, ಗೆಳೆಯ ಅಥವಾ ಸಂಬಂಧಿಕರ ಮನೆಗೆ ಹೋಗಿಬರುವುದು, ಕುಟುಂಬದೊಡನೆ ಸಮಯ ಕಳೆಯುವುದು -ಇತ್ಯಾದಿ. ಈ ಎಲ್ಲ ಕೆಲಸಗಳಿಗೂ ವೇಳೆಯನ್ನು ನಿಗದಿಪಡಿಸಿಕೊಂಡುಬಿಡಿ. ಅದೇ ರೀತಿ ಉದ್ಯೋಗ ನಿರ್ವಹಣೆಯಲ್ಲಿ ಯಾವ್ಯಾವ ಕೆಲಸಗಳನ್ನು ಅಥವಾ ಫೈಲುಗಳನ್ನು ವಿಲೇವಾರಿ ಮಾಡಬೇಕೆಂದು ನಿರ್ಧರಿಸಿ ಅದಕ್ಕೆ ವೇಳೆಯನ್ನು ಕೂಡ ಮುಂಚಿತವಾಗಿಯೇ ನಿಗದಿ ಮಾಡಿಟ್ಟುಬಿಡಿ.
    ಪ್ರತಿ ಮುಂಜಾನೆ ಏಳುತ್ತಿದ್ದಂತೆ ಎಲ್ಲರಿಗೂ ಸಮಾನವಾಗಿ ಸಿಗುವ 24 ಗಂಟೆಗಳ ಸಮಯವನ್ನು ಸಮರ್ಥವಾಗಿ ನಿರ್ವಹಿಸಲು ಚೈತನ್ಯಭರಿತ ಉತ್ಸಾಹ ಇರಬೇಕು; ನಿರ್ದಿಷ್ಟವಾದ ಗುರಿಯನ್ನು ಸಾಧಿಸಲು ಸಕಾರಾತ್ಮಕ ಮನೋಭಾವ ಇರಬೇಕು; ಎಲ್ಲಕ್ಕಿಂತ ಹೆಚ್ಚಾಗಿ, ಸಮಯವನ್ನು ಸೂಕ್ತವಾಗಿ ಬಳಸಲು ಯೋಜನಾ ಶಕ್ತಿ ಮತ್ತು ಅದನ್ನು ಪರಿಪಾಲಿಸುವ ಶಿಸ್ತು ಇರಬೇಕು. ಸಮಯದ ಪರಿಪಾಲನೆಗೆ ಮತ್ತು ಶಿಸ್ತಿಗೆ ಅತ್ಯಂತ ಹೆಸರಾಗಿದ್ದ ಸರ್‌ಎಂ.ವಿಶ್ವೇಶ್ವರಯ್ಯನವರು `ಕಾಲವನ್ನು ನಾವು ಪಾಲಿಸಿದರೆ, ಅದು ನಮಗೆ ವಿಧೇಯವಾಗಿರುತ್ತದೆ' ಎಂದು ಹೇಳಿದ್ದಾರೆ. ಹೆಸರಾಂತ ಲೇಖಕ ಸ್ಟೀಫನ್ ಕೋವಿ, ಸಮಯದ ನಿರ್ವಹಣೆಯ ತತ್ವ, ಸಿದ್ಧಾಂತಗಳ ಬಗ್ಗೆ ಕೂಲಂಕಷವಾಗಿ ತಮ್ಮ ಪುಸ್ತಕಗಳಲ್ಲೂ, ಲೇಖನಗಳಲ್ಲೂ ಕೆಳಕಂಡಂತೆ ವಿವರಿಸಿದ್ದಾರೆ:

ಹಾಗಾದರೆ ಮೊದಲು ನಿಮ್ಮ ಒಟ್ಟು ಕೆಲಸವನ್ನು ಈ ಕೆಳಗಿನಂತೆ ವಿಂಗಡಿಸಿ :-

ಭಾಗ 1 - ಇದು ಮುಖ್ಯವಾದ ತುರ್ತು ಕೆಲಸಗಳಿಗಾಗಿ. ಈ ಭಾಗದ ಕಾರ್ಯಗಳಿಗೆ ತಕ್ಷಣ ಗಮನಕೊಡಬೇಕು, ಸಮಯದ ಎಲ್ಲೆ ಮೀರುವ ಮೊದಲೇ ಮಾಡಿಮುಗಿಸಬೇಕು.
ಭಾಗ 2 - ಇದು ಮುಖ್ಯವಾದರೂ ತುರ್ತಲ್ಲದ ಕಾರ್ಯಗಳಿಗಾಗಿ. ಈ ಕಾರ್ಯಗಳಿಗೂ ಒಂದು ಸಮಯದ ಎಲ್ಲೆ ಇದ್ದೇ ಇದೆ. ಉದಾ: ಪ್ರಾಜೆಕ್ಟನ್ನು ಈ ವಾರದ ಕೊನೆಯಲ್ಲಿ ಮಾಡಬೇಕು.
ಭಾಗ 3 - ಇದು ಮುಖ್ಯವಲ್ಲದಿದ್ದರೂ, ತ್ವರೆಯ ಕಾರ್ಯಗಳಿಗಾಗಿ. ಅಷ್ಟೇನೂ ಮುಖ್ಯವಲ್ಲದಿದ್ದರೂ ಈ ಕಾರ್ಯಗಳನ್ನು ತಕ್ಷಣ ಮಾಡಿಮುಗಿಸಬೇಕು.
ಭಾಗ 4 - ಇದು ಮುಖ್ಯವೂ ಅಲ್ಲದ ತುರ್ತೂ ಅಲ್ಲದ ಕಾರ್ಯಗಳಿಗಾಗಿ. ಈ ಕಾರ್ಯಗಳು ಕೇವಲ ಮನೋರಂಜನೆಗಾಗಿ.

ಸಮಯವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಪಳಗಿಸಿಕೊಳ್ಳಲು ೧೫ ಅತ್ಯುತ್ತಮ ಸೂತ್ರಗಳು:
1) ಚಿಕ್ಕ ಲಿಸ್ಟ್ ಬರೆದುಕೊಳ್ಳಿ:
ಎಲ್ಲವನ್ನೂ ನೆನಪಿನ ಶಕ್ತಿಗೇ ಹೊರಿಸುವುದು ದೊಡ್ಡ ತಪ್ಪು. ಮಾಹಿತಿಯ ಮಹಾಪೂರದಿಂದ ಮಿದುಳು ಕೆಲವು ಸಂಗತಿಗಳನ್ನು ಸಮಯಕ್ಕೆ ಸರಿಯಾಗಿ ನೆನಪಿಸುವುದಿಲ್ಲ. ಒಂದು ಚೀಟಿ ಅಥವಾ ಪುಟಾಣಿ ಪುಸ್ತಕದಲ್ಲಿ ಇಂದು ಮಾಡಬೇಕಾದ ಎಲ್ಲ ಕೆಲಸಗಳನ್ನು ಮುಂಜಾನೆಯೇ ಬರೆದಿಟ್ಟುಕೊಳ್ಳುವುದು ಸಮಯ ನಿರ್ವಹಣೆಯ ಮೊದಲ ಸೂತ್ರ.
2) ಪ್ರಯಾರಿಟಿ :
ಒಂದು ಸಲ ದಿನದ ಎಲ್ಲ ಕೆಲಸಗಳನ್ನು ಗುರುತು ಹಾಕಿಕೊಂಡ ನಂತರ ಆದ್ಯತೆಯನ್ನು ನಿರ್ಧರಿಸಿ. ತಕ್ಷಣ ಮಾಡಬೇಕಾದ ಕೆಲಸ, ಇಂದೇ ಮಾಡಬೇಕಾದ ಕೆಲಸ, ರಾತ್ರಿಯೊಳಗೆ ಮುಗಿಸಬೇಕಾದ ಕೆಲಸ, ನಾಳೆ ಮಾಡಿದರೂ ಪರವಾಗಿಲ್ಲ ಎನ್ನುವ ಕೆಲಸಗಳಿಗೆ ಪ್ರತ್ಯೇಕವಾಗಿ ನಿಮಗೆ ಗೊತ್ತಿರುವ ಸಂಕೇತ ನೀಡಿ ಗುರುತು ಮಾಡಿಟ್ಟುಕೊಳ್ಳಿ.
3) ವಾರದ ವೇಳಾಪಟ್ಟಿ ಇರಲಿ:
ವಾರದ ರಜೆಯ ದಿನದಲ್ಲಿ ಮುಂದಿನ ವಾರದ ಕೆಲಸಗಳ ಬಗ್ಗೆ ಆಲೋಚಿಸಿ ಒಂದು ಪಟ್ಟಿ ಮಾಡಿಕೊಳ್ಳಿ. ಅಸೈನ್ಮೆಂಟ್ ಡೆಡ್ಲೈನ್ಗಳು, ಪರೀಕ್ಷೆಯ ದಿನಾಂಕಗಳು, ಆರೋಗ್ಯ ತಪಾಸಣೆ, ಕ್ರೀಡಾದಿನ ಇತ್ಯಾದಿ ಸಂಗತಿಗಳನ್ನು ಗಮನಿಸಿ ಇಡೀ ವಾರದ ಕಾರ್ಯಕ್ರಮ ಪಟ್ಟಿ ತಯಾರಿಸಿಕೊಳ್ಳಿ.
4) ನೆನಪಿನ ಪುಸ್ತಕ ಇರಲಿ:
ಕಿಸೆಯಲ್ಲಿ ಸದಾಕಾಲವೂ ನೆನಪಿನ ಪುಸ್ತಕ ಹಾಗೂ ಒಂದು ಪೆನ್ ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ಕೆಲವೊಮ್ಮೆ ನಮಗೇ ಗೊತ್ತಿಲ್ಲದೇ ನಮ್ಮ ತಲೆಗೆ ಬ್ರಿಲಿಯಂಟ್ ಐಡಿಯಾಗಳು ಹೊಳೆಯುತ್ತವೆ. ಅದನ್ನು ತಕ್ಷಣ ಗುರುತು ಮಾಡಿಕೊಳ್ಳಲು ಹಾಗೂ ದಿನದ ಕೆಲಸಗಳು ಎಷ್ಟು ಹಿಂದುಳಿದಿವೆ ಎಂಬುದನ್ನು ಗಮನಿಸಲು ಇದರಿಂದ ಅನುಕೂಲ.
5) ಯೋಚಿಸಿ ಕೆಲಸ ಮಾಡಿ:
ಕೆಲಸ ಮಾಡಿದ ನಂತರ ಯೋಚಿಸುವುದು ಒಂದು ಬಗೆ. ಯೋಚಿಸಿ ಕೆಲಸ ಮಾಡುವುದು ಮತ್ತೊಂದು ಬಗೆ. ಜೀವನದಲ್ಲಿ ಎಷ್ಟು ಸಲ ನಾವು ‘ಈ ಬೇಡದ ಕೆಲಸಕ್ಕಾಗಿ ಎಷ್ಟು ಟೈಂ ವೇಸ್ಟ್ ಮಾಡಿದೆ ಛೇ’ ಎಂದುಕೊಂಡಿರುವುದ್ಲಿಲ. ಕೆಲಸ ಪ್ರಾರಂಭಿಸುವ ಮೊದಲು ಒಂದು ಕ್ಷಣ ಯೋಚಿಸಿದ್ದರೆ ಹಲವು ಗಂಟೆಗಳು ಉಳಿಯುತ್ತಿದ್ದವು.
6) ಆಗಲ್ಲ ಎನ್ನಿ:
ಎಲ್ಲರಿಗೂ ಒಳ್ಳೆಯವರಾಗಬೇಕೆಂಬ ಮನೋಭಾವ ಹಲವರಲ್ಲಿ ರುತ್ತದೆ. ‘ಇಲ್ಲ’ ಎನ್ನಲು ಬರುವುದಿಲ್ಲ ಎಂಬ ಒಂದೇ ಕಾರಣದಿಂದ ಬೇಡದ ಕೆಲಸಗಳಿಗೆ ಸಮಯ ವ್ಯಯಿಸುತ್ತಿರುತ್ತಾರೆ. ಇಂಥವರು ತಮ್ಮ ಸ್ವಭಾವ ಬದಲಿಸಿಕೊಂಡು ನಗುನಗುತ್ತಲೇ ‘ಇಲ್ಲ... ಆಗಲ್ಲ... ಕ್ಷಮಿಸಿ’ ಎಂದು ಹೇಳುವುದನ್ನು ಅಗತ್ಯವಾಗಿ ಕಲಿಯಬೇಕು.
7) ಸತತ ಬದಲಾವಣೆ ಅಗತ್ಯ:
ವೇಗವಾಗಿ ಕೆಲಸ ಮಾಡುವುದನ್ನು ಸತತವಾಗಿ ಕಲಿಯಬೇಕು. ಟೈಪಿಂಗ್ ಕಲಿಯಲು ಸೇರಿದವರು ಒಂದು ವರ್ಷದ ನಂತರವೂ ಅಕ್ಷರ ಹುಡುಕುತ್ತಿದ್ದರೆ ಅದಕ್ಕೆ ಏನನ್ನಬೇಕು? ಈ ಉದಾಹರಣೆ ಜೀವನದ ಎಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಯಾವುದೇ ಕೆಲಸದಲ್ಲಿ ನಾವು ಪಳಗಿದಂತೆ ಕೆಲಸ ಮಾಡುವ ವೇಗ ಹೆಚ್ಚಾಗಲೇಬೇಕು. ಈ ನಿಟ್ಟಿನಲ್ಲಿ ಸತತ ಪ್ರಯತ್ನ ಅಗತ್ಯ.
8) ಮೌಲ್ಯಮಾಪನ:
ನಿಮ್ಮ ಬದುಕಿನ ೨೪ ಗಂಟೆ ಹೇಗೆ ಕಳೆಯುತ್ತಿದೆ ಎಂಬ ಬಗ್ಗೆ ಆಗಾಗ ಪರಿಶೀಲಿಸುವುದು ಅಗತ್ಯ. ನಿಮ್ಮ ದಿನಚರಿಯಲ್ಲಿ ಬೇಡದ ಸಂಗತಿಗಳ್ದಿದರೆ ಅದನ್ನು ಗುರುತಿಸಿ ತೆಗೆದುಹಾಕಿ ಸಮಯ ಉಳಿಸಲು ಇದು ಸಹಾಯ ಮಾಡುತ್ತದೆ.
9) ದಿನಚರಿ ಇರಲಿ:
‘ಸಮಯದ ಉಳಿಕೆಯೇ- ಸಮಯದ ಗಳಿಕೆ’ ಎಂಬುದು ದಿನಚರಿಯ ಮುಖ್ಯ ಸೂತ್ರ. ಬದುಕಿನ ಬಂಡಿ ಹಳಿ ತಪ್ಪದಂತೆ ಕಾಪಾಡಲು ದಿನಚರಿ ಅತ್ಯಗತ್ಯ. ನೀವು ಒಂದು ದಿನವನ್ನು ಹೇಗೆ ಕಳೆಯುತ್ತೀರಿ ಎಂಬುದನ್ನು ಸ್ಪಷ್ಟವಾಗಿ ಬರೆದಿಟ್ಟುಕೊಳ್ಳಿ. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಗುರಿ ನಿಮ್ಮಿಂದ ಎಷ್ಟು ದೂರವಿದೆ. ಅದನ್ನು ತಲುಪಲು ಏನು ಮಾಡಬೇಕು ಎಂಬುದು ನಿಮಗೇ ಹೊಳೆಯುತ್ತದೆ.
10) ಚಟ ಬಿಡಿ:
ನಿಮ್ಮ ಸಮಯ ಕದಿಯುವ ಹರಟೆ, ಕುಡಿತ, ಧೂಮಪಾನ, ಚಾಡಿ ಹೇಳುವುದು, ಅಶ್ಲೀಲ ಚಿತ್ರಗಳನ್ನು ನೋಡುವುದು ಮೊದಲಾದ ದುರಭ್ಯಾಸಗಳನ್ನು ನೀವೇ ಗುರುತಿಸಿಕೊಳ್ಳಿ. ಒಂದು ದಿನದ್ಲಲಿ ಇವಕ್ಕೆ ಸರಾಸರಿ ಎಷ್ಟು ಸಮಯ ವ್ಯಯವಾಗುತ್ತಿದೆ ಲೆಕ್ಕಾಹಾಕಿ. ದೃಢ ನಿರ್ಧಾರದಿಂದ, ಅಗತ್ಯ ಬ್ದಿದರೆ ಹಿರಿಯ ಸಲಹೆಯಿಂದ ಇವನ್ನು ಗ್ಲೆಲಲು ಯತ್ನಿಸಿ.
11) ಇನ್ನೊಬ್ಬರ ಕೆಲಸ ಬೇಡ:
ನಾನೊಬ್ಬ ಹೀರೋ ಆಗಬೇಕು ಎಂಬ ಭ್ರಮೆಯಿಂದ ಇನ್ನೊಬ್ಬರ ಕೆಲಸ ಮಾಡುವುದನ್ನು ಕೆಲವರು ರೂಢಿಸಿಕೊಳ್ಳುತ್ತಾರೆ. ಈ ಜಗತ್ತಿನ್ಲಲಿ ಅವರವರ ಕೆಲಸ ಅವರವರೇ ಮಾಡಬೇಕು. ನೀವು ಬೇಕಾದರೆ ಇನ್ನೊಬ್ಬರಿಗೆ ಸಹಾಯ ಮಾತ್ರ ಮಾಡಬಹುದು. ಆದರೆ ಅವರ ಹೊಣೆಯನ್ನು ನಿಮ್ಮ ಹೆಗಲಿಗೆ ಹೊತ್ತುಕೊಳ್ಳಬೇಡಿ. ಇನ್ನೊಬ್ಬರ ಕೆಲಸಗಳನ್ನೇ ಮಾಡುತ್ತ್ದಿದರೆ ನಿಮ್ಮ ಕೆಲಸಗಳಿಗೆ ಸಮಯ ಉಳಿಯುವುದಿಲ್ಲ.
12) ಭವಿಷ್ಯದ ಪುಟಗಳು:
1 ವರ್ಷದ ನಂತರ ನಿಮ್ಮ ಬದುಕು ಹೇಗಿರಬೇಕು? 3 ವರ್ಷದ ನಂತರ ಹೇಗಾಗಬೇಕು? ಎಂಬ ಬಗ್ಗೆ ನಿಮ್ಮದೇ ಆದ ಕನಸುಗಳಿರಲಿ. ಎಲ ಕನಸುಗಳನ್ನು ಬರೆದಿಟ್ಟುಕೊಂಡು ಅವುಗಳತ್ತ ಮುನ್ನುಗ್ಗಲು ಯತ್ನಿಸಿ. ಪ್ರತಿ ಮುಂಜಾನೆ ನಿಮ್ಮ ಕನಸಿನ ಹಾದಿಯ್ಲಲಿ ಎಷ್ಟು ದೂರ ಕ್ರಮಿಸ್ದಿದೀರಿ ಎಂಬುದನ್ನು ಪರಿಶೀಲಿಸಿ. ನಿಮಗೆ ಗೊತ್ತ್ತಿಲ್ಲದೇ ನಿಮ್ಮ ದಿನಚರಿ ಬದಲಾಗುತ್ತೆ.
13) ಪರ್ಫೆಕ್ಟ್ ಮಂತ್ರ ಎಲೆಡೆ ಬೇಡ:
ಒಂದು ಎಸ್ಎಂಎಸ್ ಕಳಿಸಲು 5 ನಿಮಿಷ, ಈ ಮೇಲ್ಗೆ 15 ನಿಮಿಷ ವ್ಯಯಿಸುವುದು ದಡ್ಡತನವ್ಲಲವೇ? ಎಲದರ್ಲಲಿಯೂ ಪರ್ಫೆಕ್ಟ್ ಆಗಿರಬೇಕೆಂಬ ಹಠ ಬೇಡ. ಯಾವುದು ಎಷ್ಟು ಶ್ರದ್ಧೆ ಬಯಸುತ್ತದೆಯೋ ಅದಕ್ಕೆ ಅಷ್ಟು ಶ್ರದ್ಧೆ ನೀಡಿದರೆ ಸಾಕು.
14) ಆದ್ಯತೆ ಮುಖ್ಯ:
ಪರೀಕ್ಷೆ ಹತ್ತಿರ ಇದಾಗ ಗಂಟೆಗಟ್ಟಲೆ ಕೇರಂಬೋರ್ಡ್ ಆಡುವುದು, ಮಾರನೇ ದಿನ ರನ್ನಿಂಗ್ ರೇಸ್ನ್ಲಲಿ ಓಡಬೇಕು ಅಂದ್ರೆ ಇವತ್ತು ಮ್ಯೂಚ್ಯುಯಲ್ ಫಂಡನ ಎನ್ಎವಿ ಲೆಕ್ಕ ಹಾಕುತ್ತಾ ಕೂರುವುದು ಎಷ್ಟು ಸರಿ. ಈ ಕೆಲಸಗಳನ್ನು ಮಾಡಲು ಸಾಕಷ್ಟು ಸಮಯವಿದೆ ಅಲವೇ? ಮೊದಲು ಮಾಡಬೇಕಾದ ಕೆಲಸ ಮೊದಲು ಮಾಡಿ.
15) ಬೇಡದ ಕೆಲಸಗಳು:
ಚೆನ್ನಾಗಿ ಮಾಡಲು ಬರುತ್ತದೆ ಎಂಬ ಒಂದೇ ಕಾರಣಕ್ಕೆ ಬೇಡದ ಕೆಲಸಗಳನ್ನು ಮಾಡುವುದು ಎಷ್ಟು ಸರಿ? ಚೆನ್ನಾಗಿ ಕಸಗುಡಿಸಲು ಬರುತ್ತದೆ ಎಂದು ಬೀದಿಯೆಲ್ಲಾ ಕಸ ಗುಡಿಸಲು ಸಾಧ್ಯವೇ? ಬದುಕಿನ್ಲಲೂ ಅಷ್ಟೇ ಚೆನ್ನಾಗಿ ಬರುತ್ತೆ, ನನಗಿಷ್ಟ ಎಂಬ ಎರಡೇ ನೆಪದಿಂದ ಎಷ್ಟೋ ಪ್ರತಿಫಲವೇ ಇಲದ- ಬೇಡದ ಕೆಲಸಗಳನ್ನು ಗುಡ್ಡೆ ಹಾಕಿಕೊಂಡು ಬ್ಯುಸಿಯಾಗಿರುತ್ತೇವೆ.
ಕೊನೆ ಮಾತು :ಸಮಯದ ಪರಿಪಾಲನೆಗೆ ಮತ್ತು ಶಿಸ್ತಿಗೆ ಅತ್ಯಂತ ಹೆಸರಾಗಿದ್ದ ಸರ್ಎಂ.ವಿಶ್ವೇಶ್ವರಯ್ಯನವರು `ಕಾಲವನ್ನು ನಾವು ಪಾಲಿಸಿದರೆ, ಅದು ನಮಗೆ ವಿಧೇಯವಾಗಿರುತ್ತದೆ' ಎಂದು ಹೇಳಿದ್ದಾರೆ. ಎಷ್ಟೊಂದು ನಿಜವಲ್ವಾ? ಯೋಚಿಸಿರಿ.

No comments:

Post a Comment

If you have any doubts. please let me know...