March 3, 2021

ದ್ರೌಪದಿ ಐದು ಜನ ಪಾಂಡವರನ್ನು ಮದುವೆಯಾಗಿ ಐವರೊಡನೆ ಹೇಗೆ ಸಂಸಾರ ಮಾಡಿದಳು ?

ಪುರಾಣದ ಕತೆಯಿಂದ ಸಂಗ್ರಹಿಸಿದ್ದು...ಓದಿ ನಿಮ್ಮ ಅಭಿಪ್ರಾಯ ತಿಳಿಸಿ.ಸ್ನೇಹಿತರೆ
ದ್ರೌಪದಿ ಐದು ಜನ ಪಾಂಡವರನ್ನು   ಮದುವೆಯಾಗಿ ಐವರೊಡನೆ ಹೇಗೆ ಸಂಸಾರ ಮಾಡಿದಳು ? ಎಂಬ ವಿಚಾರ ಹಲವರಿಗೆ ಸಂಶಯ... ಅದಕೆಂದೆ ಇಂಥಾ ಕೀಳುಮಟ್ಟದ ಮೆಸೇಜ್ಗಳು ಆಗಾಗ  ಹರಿದಾಡುತ್ತಿರುತ್ತವೆ.. 

ಮೊದಲು ಎಲ್ಲರೂ ತಿಳಿಯಬೇಕಾದ ಸಂಗತಿಯೆಂದರೆ, ಭಗವಂತ ಕೃಷ್ಣನಾಗಿ ಭೂಮಿಗೆ ಬಂದಾಗ ಪಾಂಡವರು, ದ್ರೌಪದಿ, ಭೀಷ್ಮ, ದ್ರೋಣ ಹೀಗೆ ಅನೇಕಾನೇಕ  ದೇವತೆಗಳು ಅವತಾರವೆತ್ತಿ ಭೂಮಿಗೆ ಬಂದರು ಎಂಬ ಮಾತನ್ನು ಮಹಾಭಾರತವೇ ಸ್ಪಷ್ಟವಾಗಿ ಹೇಳುತ್ತದೆ.... 

ಮಹಾಭಾರತವೇ ಹೇಳುವಂತೆ ದೂರ್ವಾಸರಿತ್ತ ಮಂತ್ರಶಕ್ತಿಯನ್ನು ಉಪಯೋಗಿಸಿ ಕುಂತಿ ಮತ್ತು ಮಾದ್ರಿ ಈ ಪಂಚ ಪಾಂಡವರನ್ನು ಪಡೆದದ್ದು... ಆಯಾ ಮಂತ್ರದಿಂದ ಕರೆದ ದೇವತೆಯೇ ಕುಂತಿಯಲ್ಲಿ - ಯಮ, ವಾಯು, ಇಂದ್ರ ಮತ್ತು ಮಾದ್ರಿಯಲ್ಲಿ - ಅಶ್ವಿದೇವತೆಗಳು ಮಕ್ಕಳಾಗಿ ಹುಟ್ಟಿ ಬಂದರು..‌. 

ಯಮರಾಜನೆ "ಧರ್ಮರಾಜ"ನಾಗಿ ಬಂದ..
ವಾಯುದೇವ "ಭೀಮಸೇನ"ನಾಗಿ ಬಂದ...
ದೇವತೆಗಳ ಒಡೆಯನಾದ ಇಂದ್ರ "ಅರ್ಜುನ"ನಾಗಿ ಬಂದ...
ಅಶ್ವಿದೇವತೆಗಳೇ ನಕುಲ-ಸಹದೇವರಾಗಿ ಈ ಭೂಮಿಗೆ ಬಂದರು... 

ಈ ಎಲ್ಲ ದೇವತೆಗಳಿಗೂ ಮೂಲರೂಪದಲ್ಲಿ ಪತ್ನಿಯರಿದ್ದಾರೆ... ಗಂಡಂದಿರು ಭೂಮಿಗೆ ಹೋದಾಗ ಅವರೂ ಬರಬೇಡವೇ,.. ಹಾಗೆ ಇಳೆಗೆ ಬರುವಾಗ ಇವರೆಲ್ಲರ ಪತ್ನಿಯರೂ ದ್ರೌಪದಿಯಲ್ಲಿ ಸನ್ನಿಹಿತರಾದರು... 

ದ್ರೌಪದಿಯಲ್ಲಿ, ಯಮನ ಪತ್ನಿ ಶ್ಯಾಮಳಾ ಇದ್ದಾಳೆ. ಇವಳೇ ಧರ್ಮರಾಜನ ಪತ್ನಿಯಾಗಿ ದ್ರೌಪದಿ ರೂಪದಿಂದ  ಸಂಸಾರ ಮಾಡುತ್ತಾಳೆ...

ವಾಯುದೇವರ ಪತ್ನಿ ಭಾರತೀದೇವಿ ದ್ರೌಪದಿಯಲ್ಲಿ ಇದ್ದಾಳೆ... ದ್ರೌಪದಿ ಭೀಮನೊಟ್ಟಿಗಿದ್ದಾಗ ಒಳಗಿನಿಂದ ಭಾರತಿದೇವಿ ದ್ರೌಪದಿಯ ರೂಪದಲಿದ್ದು ಭೀಮನೊಟ್ಟಿಗೆ ಸಂಸಾರ ಮಾಡಿದಳು... 

ಇಂದ್ರ ಪತ್ನಿಯಾದ ಶಚೀದೇವಿ ದ್ರೌಪದಿ ರೂಪದಲ್ಲಿದ್ದು ಅರ್ಜುನನೊಡನೆ ಸಂಸಾರ ಮಾಡಿದಳು... 

ಹಾಗೆಯೇ ಅಶ್ವಿದೇವತೆಗಳ ಪತ್ನಿ ಉಷಸ್ ದೇವತೆ ದ್ರೌಪದಿಯಲ್ಲಿದ್ದು ನಕುಲ ಮತ್ತು ಸಹದೇವರೊಟ್ಟಿಗೆ ದ್ರೌಪದಿ ರೂಪದಿಂದ ಸಂಸಾರ ಮಾಡಿದರು.. 

ಇದಾವುದರ ಅರಿವೂ ಇಲ್ಲದೆ ನಮ್ಮ ಧರ್ಮಗ್ರಂಥಗಳ, ಇತಿಹಾಸ ಗ್ರಂಥಗಳ ಬಗೆಗೆ ಅವಹೇಳನಕಾರಿ ಸಂದೇಶಗಳನ್ನು ರವಾನಿಸುವುದು ತಪ್ಪಲ್ಲವೇ ???

ಇನ್ನಾದರೂ ನಮ್ಮ ಸಂಸ್ಕೃತಿಯ ಬಗೆಗೆ ಅವಹೇಳನಕಾರಿಯಾಗಿ ಬಿಂಬಿಸುವವರ ವಿರುದ್ಧ ಧ್ವನಿ ಎತ್ತೋಣ..

No comments:

Post a Comment

If you have any doubts. please let me know...