April 12, 2021

ಒಂದೊಳ್ಳೆ ನುಡಿ ಮುತ್ತುಗಳು

*ನಿದ್ದೆ ಎಷ್ಟು ಅದ್ಭುತವೆಂದರೆ ಬಂದರೆ ಎಲ್ಲವನ್ನೂ ಮರೆಸುತ್ತದೆ. ಬಾರದಿದ್ದರೆ ಎಲ್ಲವನ್ನು ನೆನಪಿಸುತ್ತದೆ.*

*: ಜೀವನದಲ್ಲಿ ಸಮಸ್ಯೆಗಳು ಮಳೆಯ ಹನಿಗಳಿದ್ದಂತೆ.  ನಿಧಾನವಾಗಿ ಬರಲಿ ಅಥವಾ ರಭಸವಾಗಿ  ಬರಲಿ, ಆತ್ಮವಿಶ್ವಾಸವೆಂಬ  ಕೊಡೆ ಇರಬೇಕು.*  

 *ದೇವರಲ್ಲಿ ಕೇಳುವುದೊಂದೆ ನಮಗೆ ,ಅಹಂಕಾರ ಕೊಡಬೇಡ. ಬೇರೆಯವರಿಗೆ ಸಹಾಯ ಮಾಡಲು ಆಗದಿದ್ದರೂ  ನಮ್ಮಿಂದ ಕೆಡುಕು ಮಾಡಿಸಬೇಡ.*

*: ಪ್ರೀತಿಸುವವರು ಹೇಗಿರಬೇಕು ಎಂದರೆ ಇದ್ದರೆ ಕನ್ನಡಿ ತರಹ ಇರಬೇಕು. ಇಲ್ಲದಿದ್ದರೆ ನೆರಳಿನ ತರಹ ಇರಬೇಕು. ಏಕೆಂದರೆ ಕನ್ನಡಿ ಯಾವತ್ತೂ ಸುಳ್ಳು ಹೇಳುವುದಿಲ್ಲ. ನೆರಳು ಯಾವತ್ತು  ನಮ್ಮನ್ನು ಬಿಟ್ಟು ಹೋಗುವುದಿಲ್ಲ.*
 *ಮಾತಿಗೆ ಬೆಲೆ ಇಲ್ಲ ಎಂದಾಗ ಮೌನವಾಗಿರಬೇಕು.* *ಮೌನಕ್ಕೂ ಬೆಲೆ ಇಲ್ಲ ಎಂದಾಗ ಆ ಜಾಗದಿ೦ದ ದೂರ ಹೋಗಿಬಿಡಬೇಕು.* 

 *ನಮ್ಮ ಹಿಂದೆ ಮಾತಾಡುವವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ಅವರಿಗೆ ಮುಂದೆ  ಮಾತನಾಡುವ  ಯೋಗ್ಯತೆ ಇರುವುದಿಲ್ಲ.*

 *ಮನೆ ಎಷ್ಟು ದೊಡ್ಡದಿದೆ ಎನ್ನುವುದಕ್ಕಿಂತ,  ಮನೆಯಲ್ಲಿ ಎಷ್ಟು ಸಂತೋಷವಾಗಿದ್ದೇವೆ ಎನ್ನುವುದೇ ಮುಖ್ಯ .*
*: ಒಳ್ಳೆಯ ಮನಸ್ಸಿನಿಂದ  ಯೋಚಿಸಿದರೆ ಕೆಟ್ಟವರಲ್ಲೂ ಒಳ್ಳೆಯತನವನ್ನು ಕಾಣಬಹುದು. ಆದರೆ ಕೆಟ್ಟ ಮನಸ್ಸಿನಿಂದ ಯೋಚಿಸಿದರೆ  ಒಳ್ಳೆಯವರಲ್ಲೂ  ಕೆಟ್ಟದ್ದನ್ನೇ ಕಾಣಬಹುದು.* 

 *ಮನಸ್ಸಿನಲ್ಲಿ ನಂಬಿಕೆ ಗಟ್ಟಿ ಮಾಡಿಕೊಳ್ಳಿ. ಮನಸ್ತಾಪಗಳು ತಾನಾಗಿ ದೂರವಾಗುತ್ತವೆ.*

 *ಗರ್ವದಿಂದ ಇರಬೇಡ ದೇವರ ದಯೆಯನ್ನು ಕಳೆದುಕೊಳ್ಳುವಿ.  ಈರ್ಷೆಯಿಂದ ಇರಬೇಡ ಸ್ನೇಹಿತರನ್ನು ಕಳೆದುಕೊಳ್ಳುವಿ.      ಕೋಪದಿಂದ ಇರಬೇಡ  ನಿನ್ನನ್ನು ನೀನೇ ಕಳೆದುಕೊಳ್ಳುವಿ.*

 *ನಮ್ಮಿಂದ ದೂರ ಇರಲು ಬಯಸುವವರು ನಮ್ಮವರು ಅಲ್ಲ. ನಮ್ಮ ಜೊತೆಗೇ ಇದ್ದು ನಮ್ಮವರಂತೆ ನಟಿಸುವವರು ನಮ್ಮವರು ಅಲ್ಲ ಎಲ್ಲೇ ಇದ್ದರೂ ಯಾವತ್ತೂ ನಮ್ಮ*
*ಬಗ್ಗೆ ಯೋಚನೆ* *ಮಾಡುವರು ನಿಜವಾಗಿ ನಮ್ಮವರು.*                                                                                                                                      *ಕೋಪದಲ್ಲಿ ಒಂದು ಕ್ಷಣ ಮೌನ   ವಹಿಸಿದರೆ ಸಾಕು, ಅದು ದುಃಖದ  ನೂರು ದಿನಗಳನ್ನು ಪಾರು ಮಾಡುತ್ತದೆ.*

 *ಜಾತಕ, ರೇಖೆ ಇತ್ಯಾದಿಗಳನ್ನು ನಂಬಿ ಕೂರುವುದಲ್ಲ. ಹಸ್ತವೇ ಇಲ್ಲದವನಿಗೂ ಭವಿಷ್ಯವಿದೆ. ಶ್ರಮ, ಶ್ರದ್ಧೆಗಳಲ್ಲಿ ವಿಶ್ವಾಸವಿರಲಿ.*

*: ದೃಷ್ಟಿ ಆಕಾಶದಲ್ಲಿರುವ ನಕ್ಷತ್ರಗಳತ್ತ ಇರುವಾಗಲೂ ಕಾಲು ಮಾತ್ರ ನೆಲದಲ್ಲಿರಲಿ. ನಮ್ಮ ಸ್ಥಾನಮಾನಗಳು ಮೂಲವನ್ನು ಮರೆಸುವಂತಿರಬಾರದು.*

 *ಹೃದಯ ಹತ್ತಿರವಿದ್ದಾಗ  ಜೋಪಾನ ಮಾಡಿಕೊಳ್ಳಿ. ಮನಸ್ಸು ಹತ್ತಿರವಿದ್ದಾಗ  ಅರ್ಥ ಮಾಡಿಕೊಳ್ಳಿ. ಏಕೆಂದರೆ ಬಿಟ್ಟು ಹೋದ ಹೃದಯ, ದೂರವಾದ ಮನಸ್ಸು   ಬೇಕು ಎಂದಾಗ ಸಿಗುವುದು  ತುಂಬಾ ಕಷ್ಟ.*                                                                                                                                            *: ಶರೀರ  ಸುಂದರವಾಗಿರಲಿ    ಇಲ್ಲದಿರಲಿ ನಾವಾಡುವ ಮಾತುಗಳು                 ಸುಂದರವಾಗಿಟ್ಟುಕೊಳ್ಳಬೇಕು. ಏಕೆಂದರೆ ಜನರು  ಮುಖವನ್ನು ಮರೆಯುತ್ತಾರೆ, ನಾವಾಡುವ ಮಾತುಗಳು ಎಂದಿಗೂ ಮರೆಯುವುದಿಲ್ಲ.* ಶುಭೋದಯ

No comments:

Post a Comment

If you have any doubts. please let me know...