April 30, 2021

ನಾಲ್ಕು ರೀತಿಯ ಮರಣ

ಆರ್ತೋ,ಅರ್ಥಾರ್ಥೀ,ಜ್ಞಾನಾರ್ಥೀ,ಶರಣಾರ್ಥೀ ಎಂಬ ನಾಲ್ಕು ವರ್ಗದ(category) ಜನರಿದ್ದಾರೆ.
ಹಾಗೆಯೇ ನಾಲ್ಕು ವಿಧಗಳ ಮರಣ ಸ್ವರೂಪಗಳೂ ಇವೆ.ಅವೆಂದರೆ, ಆರ್ತ,ರೌದ್ರ,ಧನ್ಯ,ಶುಕ್ಲ.
ಈಗ ಮೊದಲ ವರ್ಗದ ವಿಚಾರ ನೋಡೋಣ.

ಆರ್ತ: ಕಷ್ಟ ಬಂದಾಗ ಮಾತ್ರ ದೇವರೇ ಕಾಪಾಡೂ ಎಂದು ಮೊರೆ ಹೋಗ್ತಾನೆ.ದೇವರ ದಯೆಯಿಂದ ಸುಖ ಪ್ರಾಪ್ತಿಯಾದ ತಕ್ಷಣ ದೇವರ ನೆನಪಾಗಲ್ಲ.'ದೇವ್ರಿಗೆ ಸಾಕಷ್ಟು ಕೊಟ್ಟಿದ್ದೇನಯ್ಯಾ.ಸಮಸ್ಯೆ ಬಂದರೆ ಪೂಜೆ,ಯಾಗ,ಯಜ್ಞ ಮಾಡಿಸಿಕೊಂಡರಾಯ್ತು ಬಿಡು' ಎನ್ನುವ ಮನಸ್ಸಿನವ. ಸಮಸ್ಯೆ ಬಂದ ನಂತರ ನ್ಯಾಯವಾದಿಗಳ ಮೂಲಕವೋ,ನ್ಯಾಯಾಧೀಶರಿಗೆ ಲಂಚ ಕೊಡುವ ಮೂಲಕವೋ ಸಮಸ್ಯೆಗಳಿಂದ ಮುಕ್ತರಾಗೋದು. ಈ ಮದ್ಯೆ ಅದ್ಯಾರೋ ಸಲಹೆ ಕೊಟ್ಟಂತೆ ಪೂಜೆ ಗೀಜೆ ಅದೂನೂ ಮಾಡಿಸೋದು. ಒಟ್ನಲ್ಲಿ ನನ್ನ ಸಮಸ್ಯೆ ಮುಗಿದುಬಿಟ್ರೆ ಸಾಕು. ಇಂತವನಿಗೆ ಆರ್ತ ರೂಪದ ಮರಣ ಬರುತ್ತದೆ.ಅಂದರೆ ಮರಣ ಕಾಲದಲ್ಲಿ ಈತನಿಗೆ ಆ ದೇವರ ಪೂಜೆ ಮಾಡ್ಸಿದ್ದೆ,ಈ ಸಂಸ್ಥೆಗೆ ದಾನ ನೀಡಿದ್ದೆ.ಇಷ್ಟು ಮಾಡಿದರೂ ಯಾಕೆ ಈ ಮರಣ ವೇಧನೆ ಎನ್ನುತ್ತಾ ಕೊನೆಯುಸಿರು ಬಿಡ್ತಾನೆ.ಇವನೂ ಭಗವಂತನ ಪಾದವೇ ಸೇರೋದು.ಆದರೆ ಮುಂಬರುವ ಜನ್ಮದಲ್ಲಿ ದರಿದ್ರನಾಗಿಯೇ ಜನಿಸಬೇಕಾಗುತ್ತದೆ.
ಅರ್ಥಾರ್ಥಿ: ಈ ವ್ಯಕ್ತಿ ತುಂಬಾ ದೇವಸ್ಥಾನ ಸುತ್ತುತ್ತಾನೆ. ಪೂಜೆ,ಯಾಗ,ಯಜ್ಞ ಮಾಡಿಸುತ್ತಾನೆ.ಯಾಕೆಂದರೆ  ಅಧಿಕಾರ,ಧನಕ್ಕೆ ಬೇಕಾಗಿ. ಯಾರನ್ನೋ ಮುಳುಗಿಸಲಿಕ್ಕೆ ಬೇಕಾಗಿ. ಅದು ಆಗದಿದ್ದರೆ, ಸಿಗದಿದ್ದರೆ ,' ಯಾವ ದೇವರೂ ಇಲ್ಲ ಕಣಯ್ಯಾ.ಎಲ್ಲ ಸುಳ್ಳು' ಎನ್ನಲೂ ಇವನ ನಾಲಿಗೆ ಹಿಂಜರಿಯುವುದಿಲ್ಲ. ಇವನ ಅಂತ್ಯ ಕಾಲದಲ್ಲಿ ರೌದ್ರ ಮರಣ ಬರುತ್ತದೆ.ಅದು ಹೇಗಿರುತ್ತೆ ಅಂದರೆ, ದ್ವೇಷ, ಅಸೂಯೆ ತುಂಬಿ ತುಳುಕಾಡುತ್ತಿರುತ್ತದೆ. ಕೆಲವರು ಹೇಳುವುದನ್ನು ಕೇಳಿರಬಹುದು ನೀವು. ' ಸತ್ತರೂ ನಿನ್ನನ್ನು ದೆವ್ವವಾಗಿ ಕಾಡದೆ ಬಿಡಲ್ಲ.ನನ್ನ ಹೆಣ ಕೂಡಾ ಮುಟ್ಟಬಾರದು ನೀನು' ಎನ್ನುವ ವ್ಯಕ್ತಿಗಳನ್ನು ಕಾಣುತ್ತೇವೆ.ಇವನ ಮರಣಕಾಲಕ್ಕೆ ರೌದ್ರ ಚಿಂತನೆ ಬರುತ್ತದೆ.ಇದರ ಅರ್ಥ ಮುಂದಿನ ಜನ್ಮದಲ್ಲಿ ಮಹಾ ನಂಜುಕೋರ,ಜಿಪುಣ,ಕಳ್ಳನಾಗಿ ಹೊಡೆದಾಡುತ್ತಾ ಸಾಯುವ ಜನ್ಮ ಲಭಿಸುತ್ತದೆ.ಇವನೂ ಸತ್ತ ಮೇಲೆ ಸೇರುವುದು ಭಗವಂತನ ಪಾದಕ್ಕೆ.ಜನ್ಮ ನೀಡುವ ತೀರ್ಮಾನವೂ ಭಗವಂತನದ್ದೆ.

ಜ್ಞಾನಾರ್ಥಿ: ಇವನು ಭಕ್ತಿಯಿಂದ ದೇವರನ್ನು ನೋಡಲ್ಲ. ಕುತೂಹಲದಿಂದ ನೋಡುತ್ತಾನೆ. ದೇವರು ಇದ್ದಾನೋ ಇಲ್ಲವೋ ನೋಡೇ ಬಿಡುವ ಎನ್ನುವ ಛಲ.ಅನ್ಯಾಯಗಾರನಲ್ಲ.ಪರರ ಹಿಂಸಕನೂ ಆಗಿರಲ್ಲ.ಪರರ ಸೊತ್ತಿನ ಮೇಲೆ ಕಣ್ಣಿಟ್ಟವನೂ ಅಲ್ಲ. ಬೇಕಾದರೆ ದಾನ ಧರ್ಮ ಕೂಡಾ ಮಾಡುತ್ತಾನೆ.ಮತ್ತು ಸ್ವಲ್ಪ ಪ್ರಚಾರ ಪ್ರಿಯ.ಹೇಳಿಕೊಂಡು ಬರ್ತಾನೆ.ಅವನಿಗೆ ಸಹಾಯ ಮಾಡಿದೆ,ಇವನನ್ನು ಬದುಕಿಸಿದೆ,ಆ ಸಂಸ್ಥೆಗಿಷ್ಟು ದಾನ ಮಾಡಿದೆ ಎನ್ನುತ್ತಾ ಒಂದು ದಿನ ಮರಣ ಹೊಂದುತ್ತಾನೆ. ಅವನ ಮರಣ ಕಾಲದ ಚಿಂತನೆ ಹೇಗಿರಬಹುದು?
' ಓ ದೇವರೇ ಯಾಕೆ ನನ್ನನ್ನು ಒಯ್ಯುತ್ತೀ.ಇನ್ನೂ ಸ್ವಲ್ಪ ಬದುಕಿಕೊಳ್ಳುತ್ತಿದೆ.ಅದೆಷ್ಟೋ ದಾನ ಧರ್ಮ ಮಾಡಿದ್ದೇನೆ.ಬೇಕಾದರೆ ಜನರನ್ನು ಕೇಳು.ಪತ್ರಿಕೆಗಳನ್ನು ನೋಡು.ಅಲ್ಲಿ ಎಲ್ಲಾ ಕಡೆ ನನ್ನ ಪ್ರಶಂಸೆ ಇದೆ. ಬೇಕಾದಷ್ಟು ಜ್ಞಾನ ಸಂಪಾದಿಸಿದ್ದೇನೆ' ಎನ್ನುತ್ತಾ ಕಣ್ಣು ಮುಚ್ಚಿಬಿಡುತ್ತಾನೆ. ಇವನೂ ಭಗವಂತನಿಗೆ ಪ್ರಿಯನೆ.ಇವನಿಗೆ ಮುಂದಿನ ಜನ್ಮವು ಶ್ರೀಮಂತಿಕೆಯ ಜನ್ಮ ಆಗುತ್ತದೆ.ಇದು ಕೂಡಾ ಭಗವತ್ ಚಿತ್ತವೆ.

ಶರಣಾರ್ಥಿ: ಇವನು ಮಾತ್ರ ಪರಮ ಪೂಜ್ಯನು.ಫಲಾಪೇಕ್ಷೆ ಇಲ್ಲದ ಸೇವೆ ಇವನದ್ದು. ಧರ್ಮಿಷ್ಟನು. ಯಾರಾದರೂ ಇವನನ್ನು ಹೊಗಳಿದರೆ,ನಗುತ್ತಾ,' ಏನ್ರೀ ನಮ್ದು ಇದೆ? ಅವ ಕೊಟ್ಟ.ಅದರಲ್ಲಿ ಸ್ವಲ್ಪ ಹಸಿವಿಗಾಗಿ ತಿಂದ್ಕೊಂಡೆ.ಉಳಿದುದನ್ನು ಪರರಿಗೆ,ದೀನರಿಗೆ ಕೊಟ್ಟೆ.ಇದರಲ್ಲಿ ನಂದೇನಿದೆ? ಎಲ್ಲವೂ ಭಗವಂತ ನನ್ನ ಕೈಯಲ್ಲಿ ಮಾಡಿಸಿದ ಅಷ್ಟೆ. ನಾನೇನಿದ್ದರೂ ಶರಣನಷ್ಟೆ. ಭಗವಂತನ ಅಣತಿಯಂತೆ ಕೆಲಸ ಮಾಡುವ ಕಾರ್ಮಿಕ. ಇದರಲ್ಲಿ ನನ್ನ ಸಾಧನೆ ಏನಿಲ್ಲ.ಯಾರ್ಯಾರಿಗೆ ಎಷ್ಟೆಷ್ಟು ನನ್ನ ಕೈಯಲ್ಲಿ ಕೊಡಿಸಿದ್ದಾನೋ ಅದೇನೂ ನನಗೆ ಅರಿವಿಲ್ಲ.ಹೇ ಭಗವಂತಾ,ಈ ಜಗತ್ತಿನ ಸ್ವಾಸ್ಥ್ಯಕ್ಕಾಗಿ ನನ್ನ ಕಾಯವನ್ನು ಸತ್ಕರ್ಮಕ್ಕಾಗಿ ಇಟ್ಟುಕೋ ಎಂಬುದಿಷ್ಟೇ ನನ್ನ ಪ್ರಾರ್ಥನೆ.
ಕೊನೆಯ ಚಿಂತನೆಯು ಭಗವಂತನ ಚಿಂತನೆಯಲ್ಲದೆ ಬೇರಾವ ಇಂತನೆಯೂ ಇವನಿಗಿಲ್ಲ.ಇವನು ಶುಕ್ಲ ಮರಣವನ್ನು ಹೊಂದುತ್ತಾನೆ.ಅಂದರೆ ಇವನು ಭಗವಂತನಿಗೆ ಅತ್ಯಂತ ಪ್ರಿಯನಾಗಿ ಮೋಕ್ಷ ಪಡೆಯುವವನಾಗುತ್ತಾನೆ.

ಇಂತಹ ಶುಭ ಜನ್ಮ ಅಥವಾ ಮೋಕ್ಷಕ್ಕಾಗಿಯೇ ಜೀವನದುದ್ದಕ್ಕೂ ನಡೆಸುವ ಸತ್ಚಿಂತನೆ ಸತ್ಕರ್ಮಗಳ ಅಭ್ಯಾಸ ಇರುವುದು.

ದೇವರ ಪ್ರಭಾವಳಿ ರಹಸ್ಯ

ದೇವಸ್ಥಾನದಲ್ಲಿ ದೇವರ ಪ್ರಭಾವಳಿಯಲ್ಲಿರುವ ರಾಕ್ಷಸ ಮುಖದ ಹಿಂದಿದೆ ಅದ್ಭುತ ಜೀವನ ರಹಸ್ಯ..!

ಯಾವುದೇ ದೇಗುಲಕ್ಕೆ ಹೋಗಿ. ಗರ್ಭಗುಡಿಯಲ್ಲಿ ದೇವರ ಹಿಂಬದಿಯ ಪ್ರಭಾವಳಿಯಲ್ಲಿ ವಿಚಿತ್ರವಾದ ರಾಕ್ಷಸ ಮುಖವೊಂದನ್ನು ನೀವು ಕಾಣಬಹುದು. ಕೋರೆ ದಾಡೆ ಹಾಗೂ ನಾಲಿಗೆಯನ್ನ ಚಾಚಿದ ಈ ಭಯಂಕರ ದೈತ್ಯ ಮುಖ ಅದು. ಗರ್ಭಗುಡಿಗಳಲ್ಲಿ ಮಾತ್ರವಲ್ಲ, ಕೆಲವು ಪ್ರಾಚೀನ ದೇವಾಲಯಗಳ ವಾಸ್ತು ಹಾಗೂ ಶಿಲ್ಪಶಾಸ್ತ್ರದ ಭಾಗವಾಗಿ ಗೋಪುರಗಳಲ್ಲಿ ಈ ರಾಕ್ಷಸ ಮುಖವನ್ನು ಅಲಂಕಾರಿಕ ವಸ್ತುವಾಗಿ ಬಳಸಿರುವುದನ್ನು ನೋಡಬಹುದು. ಈ ರಾಕ್ಷಸ ಮುಖವನ್ನು ನಮ್ಮ ಸಂಸ್ಕೃತಿಯಲ್ಲಿ ‘‘ಕೀರ್ತಿಮುಖ’’ ಎಂಬ ಅದ್ಭುತ ಹೆಸರಿನಿಂದ ಕರೆಯಲಾಗಿದೆ. ಹಾಗೆ ನೋಡಿದರೆ ಭಾರತೀಯರ ದೇಗುಲಗಳಿಗೆ ಈ ಕೀರ್ತಿಮುಖ ಹೊಸದೇನೂ ಅಲ್ಲ. ಇಂಥದೊಂದು ವಿಚಿತ್ರ ಮುಖದ ಹಿಂದೆ ಬಹುದೊಡ್ಡ ಪರಂಪರೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತ ಜೀವನ ಪಾಠವಿದೆ.
ರಕ್ಕಸನೊಬ್ಬನ ಮುಖ, ದೇಗುಲಗಳ ಗೋಡೆ ಹಾಗೂ ಗರ್ಭಗುಡಿಯ ಪ್ರಭಾವಳಿಯಲ್ಲಿ ಸ್ಥಾನ ಪಡೆದಿದ್ದರ ಹಿಂದೆ ಒಂದು ಕುತೂಹಲಕಾರಿ ಕಥೆಯೂ ಇದೆ. ನಾವೆಲ್ಲ ಶಿವಪುರಾಣದಲ್ಲಿ ಬರುವ ಅಸುರರ ರಾಜ ಜಲಂಧರನ ಕಥೆಯನ್ನು ಓದಿರಬಹುದು. ರಾಕ್ಷಸರ ಗುರು ಶುಕ್ರಾಚಾರ್ಯರ ಪರಮ ಶಿಷ್ಯ ಆತ. ಸ್ವತಃ ಪಾರ್ವತಿಯನ್ನೇ ಮೋಹಿಸಲು ಮುಂದಾಗಿದ್ದ ಹಠಮಾರಿ ಅಸುರ ರಾಜ ಆತ. ಅದೊಂದು ದಿನ, ಈ ಅಸುರ ರಾಜ, ಶಿವನ ತಲೆಯ ಮೇಲೆ ಸದಾ ತಂಪು ಸೂಸುವ ಚಂದ್ರ ಮೇಲೆ ಕಣ್ಣು ಹಾಕುತ್ತಾನೆ. ಪರಮಶಿವನ ಆಭರಣವೇ ಆಗಿರುವ ಆ ಚಂದ್ರಮನನ್ನು ಕಿತ್ತು ತರುವಂತೆ ತನ್ನ ಪರಮ ಸ್ನೇಹಿತನಾಗಿದ್ದ ರಾಹುವಿಗೆ ಆದೇಶಿಸುತ್ತಾನೆ.
ಜಲಂಧರನ ಆಜ್ಞೆಯಂತೆಚಂದ್ರನನ್ನು ತರಲು ಕೈಲಾಸಕ್ಕೆ ಹೊರಟ ರಾಹು, ಅದೇ ಚಂದ್ರನ ಬೆಳಕಿನಲ್ಲಿ ಧ್ಯಾನಸ್ಥನಾಗಿದ್ದ ಪರಮಶಿವನನ್ನು ನೋಡುತ್ತಾನೆ. ಶಿವನ ತಲೆಯ ಮೇಲಿರುವ ಚಂದ್ರನನ್ನು ಕಿತ್ತುಕೊಳ್ಳುವ ಅವಸರದಲ್ಲಿ ಶಿವನ ಧ್ಯಾನಕ್ಕೆ ಭಂಗವುಂಟುಮಾಡುತ್ತಾನೆ. ತನ್ನ ತಪೋಭಂಗಗೊಳಿಸಿದ ರಾಹುವಿನ ಕುಚೇಷ್ಟೆಗಳಿಂದ ಕುಪಿತನಾದ ಶಿವ, ತನ್ನ 3ನೇ ಕಣ್ಣಿನಿಂದ ಅಗ್ನಿಜ್ವಾಲೆಗಳನ್ನ ಸ್ಫೋಟಿಸಿಬಿಡುತ್ತಾನೆ. ಶಿವ ಸ್ಫೋಟಿಸಿದ ಆ ಅಗ್ನಿಜ್ವಾಲೆಗಳಿಂದ ಸಿಂಹಮುಖಿ ಎಂಬ ಭಯಾನಕ ರಕ್ಕಸನೊಬ್ಬ ಹುಟ್ಟಿಕೊಳ್ಳುತ್ತಾನೆ. ಆಗ ಶಿವ, ತನ್ನ ತಪಸ್ಸಿಗೆ ಭಂಗ ತಂದ ರಾಹುವನ್ನು ನುಂಗಿಹಾಕುವಂತೆ ಆ ಸಿಂಹಮುಖಿ ರಕ್ಕಸನಿಗೆ ಆದೇಶಿಸುತ್ತಾನೆ.
ಇದರಿಂದ ನಡುಗಿ ಹೋದ ರಾಹು, ತನ್ನಿಂದಾದ ಪ್ರಮಾದವನ್ನ ಕ್ಷಮಿಸುವಂತೆ ಶಿವನನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಶಿವನಿಂದ ಸೃಷ್ಟಿಯಾದ ಆ ಸಿಂಹಮುಖಿ ರಕ್ಕಸನಿಂದಲೂ ತನ್ನನ್ನು ರಕ್ಷಿಸುವಂತೆ ಕೇಳುತ್ತಾನೆ. ರಾಹುವಿನ ಕ್ಷಮಾಯಾಚನೆಯಿಂದ ತಣ್ಣಗಾದ ಶಿವ, ಆತನನ್ನು ಬಿಟ್ಟುಬಿಡುವಂತೆ ಸಿಂಹಮುಖಿಗೆ ಹೇಳುತ್ತಾನೆ. ಆದರೆ ಆ ಹೊತ್ತಿಗಾಗಲೇ ಭಯಾನಕ ಹಸಿವಿನಿಂದ ಕುದ್ದುಹೋಗಿದ್ದ ಆ ಸಿಂಹಮುಖಿ, ತನ್ನ ಹಸಿವು ನೀಗಿಸಿದರೆ ಮಾತ್ರ ರಾಹುವನ್ನು ಬಿಡುವುದಾಗಿ ಹೇಳುತ್ತಾನೆ. ಆಗ ಪರಶಿವ, ‘‘ನಿನ್ನನ್ನೇ ನೀನು ತಿಂದು ಹಸಿವು ನೀಗಿಸಿಕೋ..!’’ ಎನ್ನುತ್ತಾನೆ. ಶಿವನ ಆಜ್ಞೆಯಂತೆ ಆ ಸಿಂಹಮುಖಿ ಕಾಲಿನ ಭಾಗದಿಂದ ತನ್ನನ್ನು ತಾನೇ ತಿನ್ನಲು ಆರಂಭಿಸುತ್ತಾನೆ. ಮೊದಲು ಕಾಲು, ಆನಂತ್ರ ಹೊಟ್ಟೆ, ಎದೆಯ ಭಾಗ.. ಹೀಗೆ ಒಂದೊಂದಾಗಿ ತನ್ನೆಲ್ಲ ಅವಯವಗಳನ್ನು ತಾನೇ ತಿಂದು ಮುಗಿಸಿದ ಸಿಂಹಮುಖಿ, ಕೊನೆಗೆ ಉಳಿದಿದ್ದ ತನ್ನೆರಡು ಕೈಗಳನ್ನೂ ತಿನ್ನೋದಕ್ಕೆ ಶುರುವಿಟ್ಟುಕೊಳ್ಳುತ್ತಾನೆ. ಇನ್ನೇನು ಆ ರಕ್ಕಸ ತನ್ನೆರಡು ಕೈಗಳನ್ನು ತಿಂದು ಮುಗಿಸಬೇಕು ಎನ್ನುವಷ್ಟರಲ್ಲಿ ಶಿವ, ಆ ರಕ್ಕಸನಿಗೆ ತಿನ್ನೋದನ್ನು ನಿಲ್ಲಿಸುವಂತೆ ಸೂಚಿಸಿಸುತ್ತಾನೆ.
ಕೊನೆಗೆ ತಿನ್ನದೇ ಉಳಿದಿದ್ದು ಸಿಂಹಮುಖಿ ರಕ್ಕಸನ ಮುಖ ಮಾತ್ರ. ಆ ಸಿಂಹಮುಖಿ ತಿನ್ನದೇ ಉಳಿಸಿದ ಆತನದ್ದೇ ಮುಖಕ್ಕೆ ಪರಶಿವ, ಕೀರ್ತಿಮುಖ ಅನ್ನೋ ಬಿರುದನ್ನು ನೀಡುತ್ತಾನೆ. ತನ್ನನ್ನು ತಾನು ಇಲ್ಲವಾಗಿಸಿಕೊಂಡ ಈ ರಕ್ಕಸನ ಮುಖ ದೇಗುಲಗಳಲ್ಲಿ ಕೀರ್ತಿಮುಖವಾಗಿ ವಿರಾಜಿಸಲಿ ಎಂದು ಆಶೀರ್ವದಿಸಿದನಂತೆ ಪರಶಿವ. ಇದು ಶಿವಪುರಾಣದಲ್ಲಿ ವರ್ಣಸಲ್ಪಟ್ಟಿರುವ ಕೀರ್ತಿಮುಖದ ಕಥೆ.
ಗರ್ಭಗುಡಿಯ ಪ್ರಭಾವಳಿಯಲ್ಲಿ ರಾಕ್ಷಸ ಮುಖವನ್ನು ಕೇವಲ ಅಲಂಕಾರಕ್ಕಾಗಿ ಮಾಡಿದ್ದಲ್ಲ. ಈ ಕೀರ್ತಿಮುಖದ ಮೂಲಕ ನಮ್ಮ ಹಿರಿಯರು ಅದ್ಭುತ ಜೀವನ ಪಾಠವನ್ನು ಹೇಳೋದಕ್ಕೆ ಯತ್ನಿಸಿದ್ದಾರೆ. ಮನುಷ್ಯನ ಆತ್ಮೋನ್ನತಿಯಾಗಬೇಕಾದ್ರೆ, ತನ್ನೊಳಗಿರೋ ಅಹಂ ಇಲ್ಲವಾಗಿಸಿಕೊಳ್ಳಬೇಕು. ತನ್ನ ದೇಹವನ್ನು ತಾನೇ ತಿಂದು ಮುಗಿಸಿದ ಆ ಅಸುರನಂತೆ ನಮ್ಮೊಳಗಿನ ಅಹಂ ನೀಗಿಸಿಕೊಳ್ಳಬೇಕು. ಆಗ ಮಾತ್ರವೇ ಆತ್ಮೋತ್ನತಿ ಸಾಧ್ಯ ಎಂಬುದು ಈ ಕೀರ್ತಿಮುಖ ಹಿಂದಿರುವ ರಹಸ್ಯ ಮತ್ತು ಸಂದೇಶ.
ಇಂಥ ಅದ್ಬುತ ಜೀವನ ಸಂದೇಶ ನೀಡುವ ಈ ಕೀರ್ತಿಮುಖ, ದೇಗುಲಗಳ ಗೋಡೆಯನ್ನ ಅಲಂಕರಿಸಿದ್ದು ಗುಪ್ತರ ಕಾಲದಲ್ಲಿ. ಸುಮಾರು 2500 ವರ್ಷಗಳ ಹಿಂದೆ. ಭಾರತೀಯ ವಾಸ್ತುಶಿಲ್ಪ ಮಾತ್ರವಲ್ಲ, ಬೌದ್ಧರ ವಾಸ್ತುಶೈಲಿಯಲ್ಲೂ ಈ ಕೀರ್ತಿಮುಖವನ್ನು ಬಳಸಲಾಗಿದೆ. ಚೀನಾದಿಂದ ಹಿಡಿದು ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳಲ್ಲೂ ಈ ಕೀರ್ತಿಮುಖ, ದೇಗುಲಗಳ ವಾಸ್ತುವಿನ್ಯಾಸದ ಒಂದು ಭಾಗವಾಗಿ ಬಳಕೆಯಾಗಿದೆ. ಈ ಕೀರ್ತಿಮುಖವನ್ನ ಕಲ್ಯಾಣಿ ಚಾಲುಕ್ಯರು ತಾವು ನಿರ್ಮಿಸಿದ ದೇಗುಲಗಳಲ್ಲಿ ವಾಸ್ತು ಹಾಗೂ ಅಲಂಕಾರಿಕ ಭಾಗವಾಗಿ ಬಳಸೋದಕ್ಕೆ ಆರಂಭಿಸಿದರು. ಕೀರ್ತಿಮುಖದ ಹಿಂದಿರುವ ಪೌರಾಣಿಕ ಕಥೆಗಳು ಅದೇನೇ ಇರಲಿ, ಆದರೆ ಇದು ನೀಡುವ ಅದ್ಭುತ ಜೀವನ ಸಂದೇಶವನ್ನು ಜನರಿಗೆ ತಲುಪಿಸೋದೇ ನಮ್ಮ ಹಿರಿಯರ ಉದ್ದೇಶವಾಗಿತ್ತು.

April 29, 2021

ವಿದ್ಯಾಸಮಂ‌ ನಾಸ್ತಿ ಶರೀರಭೂಷಣಂ

ಸುಭಾಷಿತಮ್
🔹🔹🔹🔹🔹
*ವಿದ್ಯಾಸಮಂ‌ ನಾಸ್ತಿ ಶರೀರಭೂಷಣಂ*
*ಮಾತಾಸಮಂ ‌ನಾಸ್ತಿ ಶರೀರಪೋಷಣಂ |* 
*ನಿದ್ರಾಸಮಂ ನಾಸ್ತಿ ಶರೀರತೋಷಣಂ*
*ಚಿಂತಾಸಮಂ ನಾಸ್ತಿ ಶರೀರಶೋಷಣಮ್ ||*

*ವಿದ್ಯಾಸಮಂ‌ ನಾಸ್ತಿ ಶರೀರಭೂಷಣಂ* : ಭೂಷಣ ಅಂದರೆ "ಅಲಂಕಾರ".... ಒಬ್ಬ ವ್ಯಕ್ತಿಗೆ ನಿಜವಾಗಿ ಯಾವುದು "ಅಲಂಕಾರ" ? ಅದಕ್ಕಂದರು ವಿದ್ಯೆಗೆ ಸಮನಾದ ಅಲಂಕಾರ ಮತ್ತೊಂದಿಲ್ಲ...‌ *"ವಾಗ್ಭೂಷಣಂ ಭೂಷಣಂ"* ಈ ಭೂಮಿಯ ಮೇಲೆ ಬದುಕುವ ಜೀವಿಗಳಲ್ಲಿ, ಭಗವಂತ ಮನುಷ್ಯನಿಗೆ ಮಾತ್ರ ಮಾತನಾಡುವ ಬಾಯಿ ಕೊಟ್ಟ... ಮಿಕ್ಕೆಲ್ಲ ಪ್ರಾಣಿಗಳಲ್ಲಿ ಅದು ಕೇವಲ ಆಹಾರ ಸ್ವೀಕರಿಸುವ ಕರ್ಮೇಂದ್ರಿಯವಾಗಿ ಮಾತ್ರ ಉಳಿದಿದೆ... ಅಂತಹ‌ *"ವಾಕ್"* ಮಾತನಾಡುವ ಕಲೆ ಬರುವುದು ವಿದ್ಯೆಯಿಂದ/ಜ್ಞಾನದಿಂದ... ಅದರಿಂದ ಈ ಶರೀರದಲ್ಲಿರುವ ವ್ಯಕ್ತಿ ಗುರುತಿಸಲ್ಪಡುವುದು ವಿದ್ಯೆಯಿಂದ/ಜ್ಞಾನದಿಂದ...

*ಮಾತಾಸಮಂ ‌ನಾಸ್ತಿ ಶರೀರಪೋಷಣಂ* : ನಮ್ಮ ಈ ಶರೀರದ ಪೋಷಣೆ ಆಹಾರದಿಂದ... ತಾಯಿಗೆ ಮಾತ್ರ ಗೊತ್ತು ತನ್ನ ಮಗವಿಗೆ ಹಸಿವಾಗದಂತೆ ನೋಡಿಕೊಂಡು ಮಕ್ಕಳನ್ನು ಬೆಳೆಸುವ ಕಲೆ..‌. ಅದರಿಂದ ಈ ಶರೀರ ಪೋಷಣೆಯಲ್ಲಿ ತಾಯಿಗೆ ಸಮನಾದ ವ್ಯಕ್ತಿ ಮತ್ತೊಬ್ಬರಿಲ್ಲ... 

*ನಿದ್ರಾಸಮಂ ನಾಸ್ತಿ ಶರೀರತೋಷಣಂ* - ಈ ಶರೀರದ ಸೌಖ್ಯಕ್ಕೆ ಮೂಲ ಕಾರಣವೇ *ನಿದ್ರೆ*... ನಮಗಿರುವ ಅವಸ್ಥೆಗಳು ಮೂರು... ಅವೇ *"ಎಚ್ಚರ-ಕನಸು-ನಿದ್ರೆ"* ಹಗಲಿನಲ್ಲಿ ನಾವು ಎಚ್ಚರವಾಗಿರುತ್ತೇವೆ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ...  ಹಗಲೆಲ್ಲಾ ನಿರಂತರ ದುಡಿದು ದಣಿದ ಶರೀರಕ್ಕೆ ಆಯಾಸವಾಯಿತು. ರಾತ್ರಿಯಾಯಿತು.  ಮನುಷ್ಯ ಮಲಗಿ ನಿದ್ರಿಸಿದ. ಕನಸಿನ ಪ್ರಪಂಚ ತೆರೆದುಕೊಂಡಿತು. ಕನಸಿನಲ್ಲೂ ಸುಖ-ದುಃಖಗಳ ಅನುಭವವಾಯಿತು... ನಂತರ ಪೂರ್ಣನಿದ್ರೆಗೆ ಜಾರಿದ... Deep Sleep / Sound Sleep...  ಗಾಢನಿದ್ರೆಯಲ್ಲಿ ಯಾವ ಎಚ್ಚರವೂ ಇಲ್ಲ *"ಕೇವಲ‌ ಆನಂದ"*.. ಅದೂ ಕೂಡ ದುಃಖದ ಸ್ಪರ್ಶವೇ ಇಲ್ಲದ ಆನಂದ.. ಯಾರಿಗೂ ನಿದ್ರೆಯಲ್ಲಿ ದುಃಖವಾದ ದಾಖಲೆಯೇ ಇಲ್ಲ..‌.  ಅಂತಹ ಆನಂದ ನಿದ್ರೆಯಲ್ಲಿ ಇತ್ತು. Ofcourse, ಆನಂದ ಇತ್ತು ಅಂತ ಗೊತ್ತಾಗುವುದು ನಮಗೆ ಎಚ್ಚರವಾದ ಮೇಲೆಯೇ... *"ಆನಂದವಾಗಿ ನಿದ್ರೆ ಮಾಡಿದೆ ಅಂತೀವಿ"* ...‌ ಅದರಿಂದ ಶರೀರ ತೋಷಣೆಯಲ್ಲಿ ( ಶರೀರ ಸೌಖ್ಯದಲ್ಲಿ) ನಿದ್ರೆಗೆ ಸಮನಾದ ಸಂಗತಿಯೇ ಮತ್ತೊಂದಿಲ್ಲ... Ofcourse *"ಭಾರ್ಯಾ ಸಮಂ ನಾಸ್ತಿ ಶರೀರತೋಷಣಂ"* ಅಂತಲೂ ಇದೆ... ಅಂದರೆ ಹೆಂಡತಿಯಿಂದ ಪಡೆಯುವ ಆನಂದಕ್ಕೆ ಸಮನಾದ ಶರೀರ ತೋಷಣೆ ಮತ್ತೊಂದಿಲ್ಲ ಅಂತ. ಅದೂ ನಿಜವೇ. ಆದರೆ ಅದು ಕೇವಲ ಗೃಹಸ್ಥರಿಗೆ ಸಂಬಂಧಪಟ್ಟ ವಿಷಯ... ಅದು ಒಂದು ಮುಖದ ಸುಖ. ಆ ಸುಖದ ನಂತರವೂ ನಿದ್ರೆಯಿಂದಲೇ ಪೂರ್ಣ ಸುಖ...  In General ನಿದ್ರೆಗೆ ಸಮನಾದ ಶರೀರಸುಖ ಮತ್ತೊಂದಿಲ್ಲ... ‌
*ಚಿಂತಾಸಮಂ ನಾಸ್ತಿ ಶರೀರಶೋಷಣಮ್* - ಭಗವಂತ ಕೊಟ್ಟ ಈ ಶರೀರವನ್ನು ಹಾಳುಮಾಡಿಕೊಳ್ಳಬೇಕಾದರೆ ಚಿಂತೆ (ಕೊರಗು) ಒಂದೇ ಸಾಕು...‌ ಮನುಷ್ಯ ಚಿಂತೆಗೆ ಸಿಲುಕಿದನೆಂದರೆ, ಅವನ ಅವನತಿ‌ಯ ಕಾಲ ಹತ್ತಿರ ಬಂತು ಅಂತಲೇ ಅರ್ಥ...‌ ಚಿಂತೆ ಮಾಡಿ ಮಾಡಿ ಶರೀರ ಕೃಶವಾಗಿ ಹೋಗುತ್ತದೆ... ‌ಚಿಂತೆ ನಮ್ಮನ್ನು ಹೇಗೆ ಹಾಳು ಮಾಡುತ್ತೆ ಅನ್ನುವುದಕ್ಕೆ ಮತ್ತೊಂದು ಸುಭಾಷಿತವೇ ಇದೆ. ಅದು ಹೀಗಿದೆ : 
*ಚಿತಾಯಾಶ್ಚ ಚಿಂತಾಯಾಶ್ಚ*
*ಬಿಂದು ಮಾತ್ರಂ ವಿಶೇಷತಃ |*
*ಚಿತಾ ದಹತಿ ನಿರ್ಜೀವಂ*
*ಚಿಂತಾ ದಹತಿ ಜೀವಿತಮ್ ||*

*ಚಿತೆಗೂ ಚಿಂತೆಗೂ* ಇರುವ ವ್ಯತ್ಯಾಸ ಕೇವಲ ಒಂದು‌ ಸೊನ್ನೆ ಮಾತ್ರ... ಚಿತೆ ಶರೀರವನ್ನು ಸುಟ್ಟರೆ... ಚಿಂತೆ ಬದುಕಿರುವವರ ಶರೀರವನ್ನೇ ಸುಟ್ಟು ಬಿಡುತ್ತದೆ... ‌

ಅದರಿಂದ ಶರೀರ ಶೋಷಣೆಯಲ್ಲಿ ಚಿಂತೆಗೆ ಸಮನಾದ ಸಂಗತಿಯೇ ಇಲ್ಲ ಅನ್ನುತ್ತದೆ ಈ ಸುಭಾಷಿತ... ‌
🙏🙏🙏

April 27, 2021

ಪುನಃ ಪುನಃ ಹುಟ್ಟು ಪಡೆಯುವವಳು ಉಷೋದೇವಿ

ಪುನಃ ಪುನಃ ಹುಟ್ಟು ಪಡೆಯುವವಳು.

ರಾಹೂಗಣನ ಮಗ ಗೋತಮರ ಒಂದು ಸೂಕ್ತದ ಕುರಿತು ಬರೆದಿದ್ದೆ ಉಷೋದೇವಿಯ ಪ್ರಾರ್ಥನೆಯನ್ನು ಕುರಿತಾದದ್ದು. ಅದರಲ್ಲಿ ಒಂದು ಋಕ್ಕನ್ನು ನಾನು ಬಿಟ್ಟು ಮುಂದಿನದ್ದನ್ನು ಬರೆದಿದ್ದೆ. ಅರ್ಚಂತಿ ನಾರೀರಪಸೋ ನ ವಿಷ್ಟಿಭಿಃ ಸಮಾನೇನ ಯೋಜನೇ ಎನ್ನುವ ಇದೊಂದು ಋಕ್ಕು ಎಷ್ಟು ಅರ್ಥಗಳನ್ನು ಕೊಟ್ಟಿದೆ. ದಿನದ ಆರಂಭದಲ್ಲಿ ಕಾಣಿಸುವ ಈ ಉಷಸ್ಸುಗಳು ಜಗತ್ತಿನ ಚರಾಚರ ಜೀವಿಗಳಿಗೂ ಆ ದಿನದ ಮಾರ್ಗದರ್ಶಕರು. ಪವಿತ್ರವಾದ ಕರ್ಮಗಳನ್ನು ಆಚರಿಸುವವನೂ, ಯಜ್ಞಕ್ಕೆ ಬೇಕಾಗುವ ಸೋಮವನ್ನು ಕೊಡುವವನೂ, ಉದಾರ ದಾನಿ ಮತ್ತು ಯಜ್ಞ ಮಾಡಿಸುವವರಿಗೆ ಉಪಕಾರಿಯೂ ಅವರಿಗೆ ಆಹಾರಾಭಾವ ಆಗದಂತೆ ನೋಡಿಕೊಳ್ಳುವವನೂ ಆಗಿರುವವನು. ಯುದ್ಧಭೂಮಿಯಲ್ಲಿ ಸೈನಿಕರು ಅತ್ಯಂತ ದೂರದ ಪ್ರದೇಶದ ತನಕ ಚದುರಿ ಹೋಗಿರುವಂತೆ ಅಂತರಿಕ್ಷದ ಅತ್ಯಂತ ಎತ್ತರದ ಮತ್ತು ಬಹು ದೂರದ ಸ್ಥಾನದಲ್ಲಿ ತನ್ನ ನೈಸರ್ಗಿಕ ಕಿರಣಗಳನ್ನು ಒಮ್ಮೆಲೇ ಹರಡುವಂತೆ ಮಾಡುವ ಸೂರ್ಯನನ್ನು ಕುರಿತಾಗಿ ಸ್ತುತಿಸಲಾಗಿದೆ.  
ಇಲ್ಲಿ ನಾರೀ ಎನ್ನುವ ಶಬ್ದಕ್ಕೆ ನೇತ್ರ ಎನ್ನುವ ಅರ್ಥವನ್ನು ಬಾಷ್ಯಕಾರರು ಕೊಟ್ಟಿದ್ದಾರೆ. ನಾರೀಃ ಎನ್ನುವ ಶಬ್ದವು ನೃ ಎನ್ನುವ ಧಾತುವಿನಿಂದ ಹುಟ್ಟಿದ್ದು. ಎಲ್ಲರನ್ನೂ ಉನ್ನತಿಯತ್ತ ಕೊಂಡೊಯ್ಯುವ ಗುಣ ಇರುವುದು ನಾರಿಗೆ. ಅದಕ್ಕಾಗಿಯೇ ನಾರೀ ನೇತ್ರ್ಯಃ ಎಂದು ಭಾಷ್ಯಕಾರ ಸಾಯಣಾಚಾರ್ಯರು ಹೇಳುತ್ತಾರೆ. ಅಂದರೆ ಕತ್ತಲಿನಿಂದ ಬೆಳಕಿನೆಡೆಗೆ ಕೊಡೊಯ್ಯುವ ಸಾಮರ್ಥ್ಯ ಇರುವುದು ನಾರಿಗೆ. ನಾರೀರಪಸೋ ನ ವಿಷ್ಟಿಭಿಃ ಎನ್ನುವುದನ್ನು ಅರ್ಥೈಸುವಾಗ ಕಾರ್ಯಕುಶಲಿಗಳಾದ ನಾರಿಯರು ಎಂದು ಹೇಳಿದ್ದಾರೆ. ಇಂತಹ ನಾರಿಯರು ನಮ್ಮ ಅಂದರೆ ನರರ ಅಭಿವೃದ್ಧಿಯನ್ನೇ ಬಯಸುವವರು. ಆ ನಾರಿಯರಂತೆ ಕಿರಣಗಳು ಇನ್ನೊಬ್ಬರ ಏಳಿಗೆಗೆ ಕಾರಣವಾಗಿವೆ ಎನ್ನಲಾಗಿದೆ. 

ಪುನಃ ಪುನರ್ಜಾಯಮಾನಾ ಪುರಾಣೀ ಸಮಾನಂ ವರ್ಣಮಭಿ ಶುಂಭಮಾನಾ | ಎನ್ನುವ ಈ ಋಕ್ಕು ಇನ್ನು ಸುಂದರವಾಗಿದೆ. ಪುನಃ ಪುನರ್ಜಾಯಮಾನಾ ಎನ್ನುವುದಕ್ಕೆ ಪ್ರತಿದಿವಸಂ ಸೂರ್ಯೋದಯಾತ್ಪೂರ್ವಂ ಪ್ರಾದುರ್ಭವಂತಿ. ಎನ್ನುವುದು ಪುನಃ ಪುನಃ ಅಥವಾ ಒಂದೇ ರೀತಿಯಾಗಿ ಹುಟ್ಟುತ್ತಾ ಪ್ರಾಚೀನಳಾದ ಉಷೋದೇವಿಯು ಕಾಂತಿಯುಕ್ತಳಾಗಿದ್ದಾಳೆ. ಇಷ್ಟೇ ಅಲ್ಲ್ಲ ಶುಭ್ರಾಕಾಶದಲ್ಲಿ ಪ್ರತಿದಿನವೂ ಸ್ವಲ್ಪವೂ ಸಹ ಬದಲಾವಣೆ ಇಲ್ಲದ ರೂಪದವಳಾಗಿದ್ದಳು. ಮತ್ತು ಬೇಡನ ಮಡದಿಯೊಬ್ಬಳು ಹೇಗೆ ರಭಸದಿಂದ ಹಾರುವ ಹಕ್ಕಿಗಳ ರೆಕ್ಕೆಯನ್ನು ಕತ್ತರಿಸಿ ಹಾಕುತ್ತಾಳೊ ಅದರಂತೆ ಮರಣ ಧರ್ಮವನ್ನು ಪಡೆದಿರುವ ಜೀವರಾಶಿಗಳಿಗೆ ಮುಪ್ಪನ್ನು ಕೊಟ್ಟು ಮರಣವನ್ನು ಕಲ್ಪಿಸುವವಳು. ಅಂದರೆ ಇಲ್ಲಿ ಉಷಸ್ಸು ಸದಾಕಾಲ ತಾರುಣ್ಯವನ್ನು ಹೊಂದಿರುವಂತಹದ್ದು. ಆದರೆ ಉಷಸ್ಸು ಸೂರ್ಯಕಿರಣದೊಂದಿಗೆ ಕಾಲನ ಜೊತೆ ಮುಂದಕ್ಕೆ ಹೋಗಿ ಮುಪ್ಪನ್ನು ಪಡೆದು ಸಾವಿನಲ್ಲಿ ಅಂತ್ಯವನ್ನು ಪಡೆಯುತ್ತದೆ. ಅಂದರೆ ತಾರುಣ್ಯ ಪಡೆದವನು ಕಾಲಾಂತರದಲ್ಲಿ ತಾರುಣ್ಯದಿಂದ ಮುಪ್ಪಿಗೆ ಜಾರುವುದನ್ನು ಹೇಳಲಾಗಿದೆ. ಪುನಃಪುನರ್ಜಾಯಮಾನ ಎನ್ನುವುದು ಉಷಸ್ಸಿನ ಸ್ವರೂಪದ ವರ್ಣನೆ ಒಂದಾದರೆ ನಿಸರ್ಗದ ಬದಲಾವಣೆಯನ್ನು ಸೂಚಿಸುತ್ತದೆ. ಇಲ್ಲಿ ಹೊಸ ಹುಟ್ಟು ಅನ್ನುವುದಕ್ಕಿಂತ ಸೂರ್ಯೋದಯಕ್ಕೆ ಮೊದಲಿನ ಹುಟ್ಟು ಎಂದು ತಿಳಿಯುವುದೇ ಸರಿಯಾದದ್ದು. ಅಂದರತೆ ಅನಾದಿಯಿಂದಲೂ ಈ ಸೂರ್ಯೋದಯಕ್ಕೂ ಮೊದಲಿನ ಉಷಸ್ಸಿನ ಈ ಸೊಬಗು ಈಗಿನದ್ದಲ್ಲ ಅತ್ಯಂತ ಪ್ರಾಚೀನ ಎನ್ನುವುದನ್ನೇ ಪುರಾಣೀ ಎಂದಿರುವುದು. ಋಗ್ವೇದದ ಮೂರನೇ ಮಂಡಲದ ೬೧ನೇ ಸೂಕ್ತದಲ್ಲಿ ಪುರಾಣೀ ದೇವಿ ಎಂದೇ ಉಷಸ್ಸನ್ನು ಕರೆಯಲಾಗಿದೆ. ಅಂದರೆ ಪ್ರತಿದಿನವವೂ ಹೊಸತನ್ನು ಪಡೆದು ನಾವೀನ್ಯವನ್ನು ಪಡೆದುಕೊಳ್ಳುವವಳು ಎನ್ನಲಾಗಿದೆ. ಇರಲಿ ಅದೇನೇ ಇರಲಿ ಇಲ್ಲಿ ಒಂದಂತೂ ಸತ್ಯ. ನಾರೀ ಎನ್ನುವವಳು ಸಾಮಾನ್ಯವಾಗಿ ದೂರಾಲೋಚನೆ ಹೊಂದಿರುವವಳು. ತನ್ನ ಚಾತುರ ನಡೆಯಿಂದ ಉನ್ನತಿಗಂತೂ ಕಾರಣಳು. ಅಂದರೆ ಉಷಸ್ಸು ಹೇಗೆ ಅಭಿವೃದ್ಧಿ ಹೊಂದುತ್ತಾಳೆ ಎನ್ನುವುದಕ್ಕೆ ನಾರೀ ಎನ್ನುವುದನ್ನು ಸಮೀಕರಿಸಿದಂತೆ ಭಾಸವಾಗುತ್ತದೆ.

#ನಾರೀ_ಚತುರೆ
ಸದ್ಯೋಜಾತರು

April 26, 2021

ಲಿಂಗ ದೀಕ್ಷೆ ಪಡೆದ ಡಾ ರಾಜಕುಮಾರ ಕುಟುಂಬ

#ಪೂಜ್ಯ_ಶ್ರೀ_ಸಿಂದಗಿ_ಶಾಂತವೀರ_ಪಟ್ಟಾಧ್ಯಕ್ಷರಿಂದ_ಲಿಂಗದೀಕ್ಷೆ_ಪಡೆಯುತ್ತಿರುವ #ಡಾ_ರಾಜಕುಮಾರ_ಹಾಗೂ_ಅವರ_ಕುಟುಂಬ.
ಗದುಗಿನ ಪಂಡಿತ್ ಪುಟ್ಟರಾಜ  ಗವಾಯಿಗಳವರು 1974ರ ಜನವರಿ ತಿಂಗಳಲ್ಲಿ ಮದ್ರಾಸದ ಡಾ . ರಾಜಕುಮಾರ ಅವರ ಮನೆಯಲ್ಲಿ ಸಂಗೀತ ಕಚೇರಿಯಲ್ಲಿ ಭಾಗವಹಿಸಿದರು . ಈ ಸಂಗೀತ ಕಾರ್ಯಕ್ರಮದ ನಂತರ ಪುಟ್ಟರಾಜ ಗವಾಯಿಗಳವರಿಗೆ ತಮ್ಮ ಶಿಷ್ಯರಾದ ವಿರೇಶ ಮಧರಿ ( ವೈಯಲಿನ್ ವಾದಕರು ) ಅವರ ಮನೆಯಲ್ಲಿ ಪೂಜಿ ಪ್ರಸಾದಕ್ಕೆ ವ್ಯವಸ್ಥೆಯಾಗಿತ್ತು . ಪುಟ್ಟರಾಜರ ಸಂಗೀತ ವ್ಯಾಮೋಹಕ್ಕೆ ಒಳಗಾದ ರಾಜಕುಮಾರ ಅವರು ಪುಟ್ಟರಾಜರನ್ನು ತಮ್ಮ ಮನೆಯಲ್ಲಿಯೇ ಪೂಜೆ ಪ್ರಸಾದ ಸ್ವೀಕರಿಸಲು ಅಂದು ಬಿನ್ನವಿಸಿಕೊಂಡರು. 

 ರಾಜಕುಮಾರರ ಅಪೇಕ್ಷೆಗೆ ಸ್ಪಂದಿಸಿದ ಪುಟ್ಟರಾಜರು "ಲಿಂಗಪೂಜೆ ಹೃದಯದ ಸಂಗೀತ ” ನಿಮ್ಮ ಹೃದಯದ ಕೂಗು ನನಗೆ ಅರ್ಥವಾಗಿದೆ . “ ಪೂಜೆಯಲ್ಲಿ ಹೃದಯವಿಲ್ಲದ ಶಬ್ದಗಳಿರುವುದಕ್ಕಿಂತ ಶಬ್ದಗಳೇ ಇಲ್ಲದ ಹೃದಯವಿರುತ್ತದೆ " ಎಂಬುದು ಬಸವಾದಿ ಪ್ರಥಮರೆ ಮಾತು . “ ಆಯಿತು . . . ಆಗಬಹುದು ... ಆದರೆ! ತಾವು  ಇಷ್ಟಲಿಂಗಧಾರಣೆ ಮಾಡಿಕೊಳ್ಳಬೇಕಲ್ಲ . . . ” ಎಂದು ಮಾತು ಮುಗಿಸುವಷ್ಟರಲ್ಲಿ ಪುನಃ   ರಾಜಕುಮಾರ ಅವರು “ ನೀವೇ ನನಗೆ ಇಷ್ಟಲಿಂಗಧಾರಣೆ ದಯಪಾಲಿಸಬೇಕು ” ಎಂದರು . " ಉಂಹೂ ಅದು ಸಂತೆಯಲ್ಲ . ತಕ್ಷಣ ಕೊಡಲು ಬರುವುದಿಲ್ಲ . ತಮ್ಮ ಲಿಂಗಧಾರಣೆಗೆ ಒಬ್ಬ ಯೋಗ್ಯ ಗುರು ಬೇಕು . ಆ ಅರ್ಹತೆ ನನಗೆ ಇಲ್ಲ . ನಿಮ್ಮ ಕೋರಿಕೆಯನ್ನು ಹಾವೇರಿಯಲ್ಲಿರುವ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರಿಗೆ ಕರುಣಿಸಲು ನಾನು ಕೇಳಿಕೊಳ್ಳುತ್ತೇನೆ . ತಮಗೆ ಲಿಂಗಧಾರಣೆ ಆದ ನಂತರ ತಮ್ಮ ಮನೆಯಲ್ಲಿ ನನ್ನ ಪೂಜೆ ಪ್ರಸಾದ ಎಂದು ಪುಟ್ಟರಾಜರು ಡಾ . ರಾಜಕುಮಾರ ಅವರಿಗೆ ಅರುಹಿದರು . 

ಘನತೆಗೆ ವಿನಯವೇ ಅಡಿಪಾಯ ಡಾ . ರಾಜಕುಮಾರರು ಪುಟ್ಟರಾಜರ ಸಲಹೆಯಂತೆ ಹಾವೇರಿಯಲ್ಲಿರುವ ತಪೋನಿಷ್ಠ ಸಿಂದಗಿ ಶಾಂತವೀರ ಪಟ್ಟಾಧಕರನ್ನು  ಮದ್ರಾಸದ ತಮ್ಮ ಮನೆಗೆ 1974 ಜೂನ್ ತಿಂಗಳಲ್ಲಿ ಗೌರವಾದರದಿಂದ ಬರಮಾಡಿಕೊಂಡರು . ತಮ್ಮ ಶ್ರೀಮತಿ ಪಾರ್ವತಮ್ಮ , ಮಕ್ಕಳಾದ ಶಿವರಾಜಕುಮಾರ್ , ರಾಘವೇಂದ್ರ ರಾಜಕುಮಾರ ಹಾಗೂ ಪುನೀತರನ್ನು ಒಳಗೊಂಡಂತೆ ಎಲ್ಲರಿಗೂ ಶಾಂತವೀರ ಪಟ್ಟಾಧ್ಯಕ್ಷರಿಂದ  ಇಷ್ಟಲಿಂಗಧಾರಣೆಯ ದೀಕ್ಷೆ ಪಡೆದುಕೊಂಡರು . ಅಂದು ಎಲ್ಲರಿಗೂ ದೀಕ್ಷೆ ದಯಪಾಲಿಸಿದ ಪಟ್ಟಾಧ್ಯಕ್ಷರು ರಾಜಕುಮಾರರನ್ನು ಹರಸುತ್ತಾ . . . “ ದೇವನ ಸಾಕ್ಷಾತ್ಕಾರಕ್ಕೆ ಸಾಧನ ಸ್ಪಷ್ಟರೂಪ ದರ್ಶನಕ್ಕೆ ಇಷ್ಟಲಂಗ ಕನ್ನಡಿ , ಫಲದಲ್ಲಿ ಅನಾಸಕ್ತನಾಗು , ಸತ್ಯಾನ್ವೇಷಣೆಯ ಗುರಿಹೊಂದು , ನೋಡುಗರನ್ನು ಅತ್ಯದ್ಭುತವಾಗಿ ಗೌರವಿಸು . . . . ಅವರೇ ನಿನ್ನ ಪಾಲಿನ ದೇವರು . ನಿನ್ನ ಅಭಿನಯ ನಿನ್ನ ಕಾಲ ಬಳಿ ಸ್ವರ್ಗವನ್ನು ಸೃಷ್ಟಿಸುತ್ತದೆ . ದೂರವಾದವರನ್ನು  ಆದೂರ ಮಾಡುತ್ತದೆ . ಹಿಂದಿರುಗಬೇಡ ಮುನ್ನುಗು . ” ಎಂದು ಉಪದೇಶಿಸಿದರು . ಈ ಸಂದರ್ಭದಲ್ಲಿ ರಾಜಕುಮಾರರಿಗಾಗಿ ಹಾವೇರಿಯ ತಮ್ಮ ಮಠದಿಂದ ಹತ್ತಾರು ಬೆಳ್ಳಿಯ ಲಿಂಗದಕಾಯಿಗಳನ್ನು ( ಗುಂಡಗಡಿಗೆ ) ಅದರೊಳಗೆ ವೈಜ್ಞಾನಿಕ ರೀತಿಯ ಇಷ್ಟಲಿಂಗಗಳನ್ನು ತಂದಿದ್ದರು . 

 ಇಷ್ಟಲಿಂಗಧಾರಕರಾದ ಡಾ . ರಾಜಕುಮಾರ ಅವರು ಶರಣರ ವಚನ ಹಾಗೂ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು . ಇದನ್ನು ಅವರು ನಟಿಸಿದ ಅನೇಕ ಪಾತ್ರಗಳಲ್ಲಿ ಕಾಣಬಹುದು . ವೀರಪ್ಪನ್ ರಾಜ್ ರನ್ನು ಅಪಹರಿಸಿದಾಗ ಜೊತೆಗಿದ್ದುದೇ ಇಂತಹ ಶರಣರ ಆದರ್ಶಗಳು , “ ಸರ್ಗ ನರಕದ ಕಲ್ಪನೆ ಕೇವಲ ಬಾಯಿಮಾತಿನಲ್ಲಿ. ಚಿತ್ತಶುದ್ದಿಗಾಗಿ ಇಷ್ಟಲಿಂಗಬೇಕು . ನಂಬಿದ ಕಾಯಕದ ಕಾಲಬಳಿ ಸ್ವರ್ಗ ಬಿದ್ದಿದೆ . ಲಿಂಗಧಾರಣೆಯ ಸಂಸ್ಕಾರ ತಾಯಿ ಗರ್ಭವತಿಯಾದ ಏಳು ತಿಂಗಳಲ್ಲಿ ಪ್ರಾರಂಭ. ತಾಯಿಯ ಗರ್ಭದಲ್ಲಿರುವಾಗ ಮಗುವೂ ತಾಯಿಯ ಮೂಲಕ ಆಹಾರ ಉಸಿರು , ಪಡೆಯುವುದು. ಅದೇರೀತಿ ಧರ್ಮವನ್ನು ಪಡೆಯಬೇಕೆಂಬುದೇ ಈ ಲಿಂಗಧಾರಣೆಯ ಘನ ಉದ್ದೇಶ . . . " ಎಂಬಂತಹ ದಿವ್ಯ ಸಂದೇಶಗಳನ್ನು ನಾನು ಪಟ್ಟಾಧ್ಯಕ್ಷರಿಂದ ತಿಳಿದುಕೊಂಡೆ ಹಾಗೂ ಅಳವಡಿಸಿಕೊಂಡೆ ಎಂದು 1980ರ ಫೆಬ್ರವರಿ 16ರಂದು ಶಾಂತವೀರ ಪಟ್ಟಾಧ್ಯಕ್ಷರು ಲಿಂಗೈಕ್ಯರಾದಾಗ ಡಾ . ರಾಜಕುಮಾರ ಅವರು ಪಟ್ಟಾಧ್ಯಕ್ಷರಿಗೆ ನುಡಿ ನಮನ ಸಲ್ಲಿಸಿ ಪತ್ರ ಬರೆದರು . 

 ಡಾ . ರಾಜಕುಮಾರ ಅವರು ಶಾಂತವೀರ ಪಟ್ಟಾಧ್ಯಕ್ಷರಿಂದ ಲಿಂಗದೀಕ್ಷೆಯಾದ ಕೆಲವು ತಿಂಗಳುಗಳ ನಂತರ ಡಾ . ಪಂಡಿತ ಪುಟ್ಟರಾಜರನ್ನು ಮತ್ತೆ ಮತ್ತೆ ಮದ್ರಾಸಿನ ತಮ್ಮ ಮನೆಗೆ ಕರೆಯಿಸಿಕೊಂಡದ್ದಲ್ಲದೆ , ತಾವು ಗದುಗಿನ ಪುಣ್ಯಾಶ್ರಮಕ್ಕ ಹೋಗಿ ಅಂಧ ಮಕ್ಕಳಿಗಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಪುಟ್ಟರಾಜರಿಗೆ ಹಲವು ರೀತಿಯಲ್ಲಿ ಸಹಾಯಾರ್ಥ ಕಾರ್ಯಕ್ರಮಗಳನ್ನು ನೀಡಿದ್ದು ಈಗ ಇತಿಹಾಸ , ಹೀಗೆ ಪುಟ್ಟರಾಜ ಗವಾಯಿಗಳ ಮೂಲಕ ಏರ್ಪಟ ಡಾ . ರಾಜಕುಮಾರ ಹಾಗೂ ಹಾವೇರಿಯ ಸಿಂದಗಿ ಶಾಂತವೀರ ಪಟಾಧ್ಯಕ್ಷರ ಸಮಾಗಮಗಳು ಈ ನಾಡಿನ ಸಾಂಸ್ಕೃತಿಕ - ಧಾರ್ಮಿಕ ಕ್ಷೇತ್ರಗಳಲ್ಲಿ ಮೈಲುಗಲ್ಲುಗಳಾಗಿವೆ , ಡಾ . ರಾಜಕುಮಾರ ಅವರಿಗೆ “ ಅಭಿಮಾನಿ ದೇವರು ” ಗಳ ಕಲ್ಪನೆ ಬಂದದ್ದು ಇಂತಹ ತಪೋನಿಷ್ಠ ಪೂಜ್ಯರುಗಳಿಂದ ಎಂದು ಸ್ಪಷ್ಟವಾಗಿ ಹೇಳಬಹುದು .

April 23, 2021

ವಿ ಎ ಸ್ಮಿತ್ ಮತ್ತು ಅಕ್ಬರ್ ದ ಗ್ರೇಟ್

 

ವಿನ್ಸೆಂಟ್ ಆರ್ಥರ್ ಸ್ಮಿತ್ ಅಥವಾ ವಿ ಏ ಸ್ಮಿತ್ 1843ರಲ್ಲಿ ಇಂಗ್ಲೆಂಡ್ನ ದಬ್ಲಿನ್ ಎನ್ನುವಲ್ಲಿ ಹುಟ್ಟುತ್ತಾರೆ. 1871ರಲ್ಲಿ ಭಾರತೀಯ ಸಿವಿಲ್ ಸೇವೆಯಲ್ಲಿ ತೇರ್ಗಡೆಹೊಂದಿ ಬ್ರಿಟೀಷ್ ಸರಕಾರದ ಅಡಿಯಲ್ಲಿ ಭಾರತದಲ್ಲಿ ಉದ್ಯೋಗವನ್ನು ಕೈಗೊಳ್ಳುತ್ತಾರೆ. ಮುಂದೆ ಭಾರತದಲ್ಲಿ ಮ್ಯಾಜಿಸ್ಟ್ರೆಟ್ ಆಗುತ್ತಾರೆ, ಜಿಲ್ಲಾ ನ್ಯಾಯಾಧೀಶರಾಗಿ ಮುಂದೆ ಕಮಿಷನರ್ ಆಗಿ ನಿವೃತ್ತಿ ಹೊಂದುತ್ತಾರೆ. 1910ರಲ್ಲಿ ಅವರು ಆಕ್ಸ್ಫರ್ಡ್ನ ಇಂಡಿಯನ್ ಇನ್ಸ್ಟಿಟ್ಯೂಟ್ನಲ್ಲಿ ಕ್ಯುರೇಟರ್ ಆಗುತ್ತಾರೆ. ಭಾರತದಿಂದ ನಿರ್ಗಮಿಸಿ ಇಂಗ್ಲೆಂಡ್ನಲ್ಲಿ ವಾಸ್ತವ್ಯ ಆರಂಭಿಸಿದ ನಂತರ ಇವರು ಅನೇಕ ಪುಸ್ತಕಗಳನ್ನು ಬರೆಯುತ್ತಾರೆ. ಬೌದ್ಧ ಧರ್ಮದ ಅನೇಕ ರಾಜರ ಕುರಿತಾಗಿ, ಅಶೋಕನ ಕುರಿತಾಗಿ ಮತ್ತು ಮೊಘಲ್ ಅರಸರನ್ನು ಹೊಗಳಿ ಪುಸ್ತಕಗಳನ್ನು ಬರೆಯುತ್ತಾರೆ. ಅಕ್ಬರ್ ಇವರಿಗೆ ಅತ್ಯಂತ ಇಷ್ಟದ ದೊರೆಯಾಗಿ ಕಾಣಿಸಿಕೊಳ್ಳುತ್ತಾನೆ. ಅಕ್ಬರ್ನನ್ನು ಅಕ್ಬರ್ ದ ಗ್ರೇಟ್ ಅಂದ ಮಹಾನುಭಾವ ಇವರು.   The early history of India ಮತ್ತು The Oxford history of India ಮಹತ್ವದ ಕೃತಿಗಳು. ಭಾರತೀಯ ನ್ಯಾಯಾಂಗಕ್ಕೆ ಸಂಬಂಧಿಸಿದ ಕೃತಿಗಳನ್ನೂ ಇವರು ರಚಿಸಿದ್ದಾರೆ. 1920ರಲ್ಲಿ ಕೊನೆಯುಸಿರೆಳೆಯುತ್ತಾರೆ. ಈಗ ವಿಷಯಕ್ಕೆ ಬರುತ್ತೇನೆ. ವಿ ಎ ಸ್ಮಿತ್ ಅವರನ್ನು ಭಾರತೀಯ ಇತಿಹಾಸದ ಪಿತಾಮಹನೆಂದು ಕರೆಯುತ್ತಾರೆ. ಅಂತಹ ಸ್ಮಿತ್ ಅವರಿಗೆ ಭಾರತೀಯ ಇತಿಹಾಸ ತನ್ನ ಪ್ರಾಚೀನತೆಯನ್ನು ಉಳಿಸಿಕೊಳ್ಳುವುದು ಸಹ್ಯವಾಗುತ್ತಿರಲಿಲ್ಲ. ದೊಡ್ಡ ಚರ್ಚ್ನ ಮಾತನ್ನು ಇವರು ಸುಳ್ಳಿದ್ದರೂ ಸತ್ಯವನ್ನಾಗಿಸಬೇಕಿತ್ತು. ಕ್ರಿಸ್ತ ಪೂರ್ವದಲ್ಲಿದ್ದ ವಿಕ್ರಮಾದಿತ್ಯನನ್ನು ಇಲ್ಲವಾಗಿಸಲು ಬಹಳ ಶ್ರಮಪಟ್ಟವರಲ್ಲಿ ಮೊದಲಿಗರು ಇವರು. ಸ್ಮಿತ್ ಅವರು ವಿಕ್ರಮ ಶಕೆಯ ಕುರಿತಾಗಿ ಹೇಳುವಾಗ ಭಾರತೀಯ ಇತಿಹಾಸದಲ್ಲಿ ಶಕ ಪೂರ್ವದ 58 - 57ರ ವಿಕ್ರಮ ಶಕೆ ಅತ್ಯಂತ ಜನಪ್ರಿಯವಾದ ಶಕೆ. ರಾಜಾವಿಕ್ರಮಾದಿತ್ಯ ಅಥವಾ ಬಿಕ್ರಮ ಎನ್ನುವವನು ಉಜ್ಜಯಿನಿಯಲ್ಲಿ ಆ ಕಾಲದಲ್ಲಿ ಆಳಿದ್ದ ಎನ್ನುವುದು ಸಹ ನಂಬಲು ಸಾಧ್ಯವೂ ಇಲ್ಲ, ಅರ್ಹವೂ ಅಲ್ಲ. ವಿಕ್ರಮನ ಆಳ್ವಿಕೆಯ ಕಾಲಮಾನವೇ ತಪ್ಪಾದ ಕಾಲಮಾನದ ನಿರ್ಧಾರ. ಈತನ ಆಳ್ವಿಕೆ ಮೊದಲು ಮಾಲವದಲ್ಲಿತ್ತು ಎನ್ನುವುದು ನಿಜವಾಗಿದ್ದರೂ, ಈತನ ಕಾಲಮಾನ ಉಜ್ಜೈನಿಯ ಕೆಲವು ಜ್ಯೋತಿಷಿಗಳ ನಂಬುಗೆಯೂ ಆಗಿರಬಹುದು. ಆದರೆ ಈ ವಿಕ್ರಮ ಶಕೆಯ ಮೊದಲಿನ ಹೆಸರು ಮಾಲವ ಶಕೆ ಎಂದೇ ಇತ್ತು. ಆಮೇಲೆ ವಿಕ್ರಮ ಶಕೆ ಎಂದು ಕರೆಯಲಾಯಿತು. ಅಂದರೆ ವಿಕ್ರಮನ ಕಾಲಾನಂತರದಲ್ಲಿ ಅನೇಕ ವಿಕ್ರಮ ಮತ್ತು ವಿಕ್ರಮಾದಿತ್ಯ ಎನ್ನುವ ಹೆಸರಿನ ರಾಜರು ಆಳಿ ಹೋಗಿದ್ದರು. ಕ್ರಿ. ಶ. 390ರಲ್ಲಿ ಉಜ್ಜೈನಿಯನ್ನು ಗೆದ್ದ ಎರಡನೇ ಚಂದ್ರಗುಪ್ತನನ್ನೇ ವಿಕ್ರಮಾದಿತ್ಯ ಎಂದು ಕರೆದು ಗುಪ್ತರು ತಮ್ಮ ಹೆಸರನ್ನು ಬದಲಿಸಿಕೊಂಡು ವಿಕ್ರಮ ಶಕೆ ಎಂದು ಕೊಟ್ಟಿರಬಹುದು ಎನ್ನುತ್ತಾ ಇದನ್ನೇ ಆನಂತರದಲ್ಲಿ ವಲ್ಲಭಿ ಮತ್ತು ಶಾಲಿವಾಹನ ಶಕೆ ಎಂದಿರಬಹುದು ಎನ್ನುತ್ತಾರೆ.

The popular belief which associates the Vikrama era of 58 - 57 B.C. with a Rājā Vikramāditya or Bikram of Ujjain at that date may be erroneous. No such person is known. It is, however, true that the earliest known use of the era was in Mālwā and it may have been invented by the astronomers of Ujjain. - The Oxford History of India.

ಇವರ The Early History of India  ೧೪೨ರಲ್ಲಿ ಹೇಳಿದ್ದು ಹೀಗೆ. . .
Unfortunately no monuments have been discovered which can be referred with certainty to the period of Chandragupta or his son, and the archaeologist is unable to bring the tangible evidence afforded by excavation to support the statements of the Greek observers. 

ಎಲ್ಲವಕ್ಕೂ ಪುರಾವೆಗಳನ್ನು ಕೇಳುವ ಈ ಜನರಿಗೆ ನಮ್ಮಲ್ಲಿನ ಸಂಸ್ಕೃತಿ, ಪರಂಪರೆಯ ಪರಿಚಯ ಇಲ್ಲ. ತಮ್ಮ ಮೂಗಿನ ನೇರಕ್ಕೆ ಕಂಡದ್ದು ಮಾತ್ರ ಇತಿಹಾಸವೋ ಅಥವಾ ಘಟಿತ ಘಟನೆಯೋ ಅನ್ನಿಸಿ ಅದೂ ಸಹ ತಪ್ಪಾದ ಕಾಲವನ್ನು ಕೊಡುವ ಮಹಾನ್ ಕೆಲಸ ಮಾಡಿ ಅದನ್ನೇ ಇಂದಿಗೂ ಸತ್ಯವೆಂದು ನಂಬುವಂತೆ ಮಾಡಿದ ಪುಣ್ಯಾತ್ಮರು. ಅದೆಷ್ಟೋ ಹಿಂದಿದ್ದ ಬಿಂದುಸಾರನನ್ನು ಅದ್ಯಾವುದೋ ಕಾಲಕ್ಕೆ ತಂದು ನಿಲ್ಲಿಸಿದ ಕೀರ್ತಿ ವಿ ಎ ಸ್ಮಿತ್ ರಂತವರಿಗೆ ಸಲ್ಲುತ್ತದೆ. ಇತಿಹಾಸದಲ್ಲಿ ಪಂಥಗಳನ್ನು ಹುಟ್ಟುಹಾಕುವಲ್ಲಿ ಇಂಥವರ ಪಾತ್ರ ಪ್ರಮುಖ. ನಿಜ ಇತಿಹಾಸದ ಜೊತೆ ಇಲ್ಲ ಸಲ್ಲದನ್ನು ಬೆರೆಸುವ ಇತಿಹಾಸ ಯಾವತ್ತಿಗೂ ಆರೋಗ್ಯದಾಯಕವಲ್ಲ. ವಿಕ್ರಮಾದಿತ್ಯ ಇಷ್ಟವಾಗದ, ಅವನನ್ನು ಇಲ್ಲವಾಗಿಸುವ ಸ್ಮಿತ್ ಅವರಿಗೆ ಅಕ್ಬರ್ ಗ್ರೇಟ್ ಆಗುತ್ತಾನೆ. ಆಗಲೇ ಬೇಕು. ಯಾಕೆಂದರೆ ಬ್ರಿಟೀಷ್ ಆಡಳಿತದ ಕೆಳಗೆ ಕೆಲಸ ಮಾಡಿದವರು !!!
#ಮಿಹಿರಕುಲಿಯಿಂದ
ಸದ್ಯೋಜಾತರು

ಅಗ್ನಿಹೋತ್ರ ಮಂತ್ರ



ಶ್ರೀ ಗುರುಭ್ಯೋನಮಃ

ಹರಃ ಓಂ

*ಗಣಪತಿ ಪ್ರಾರ್ಥನೆ*:

ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ !
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ !!

*ಗುರು ಪ್ರಾರ್ಥನೆ*:

ಗುರು ಬ್ರಹ್ಮ ಗುರು ವಿಷ್ಣುಃ ಗುರು ದೇವೋ ಮಹೇಶ್ವರಹಃ ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

*ಓಂ  ಅಪವಿತ್ರ*

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿವಾ !!
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಶ್ಯುಚಿಂ !!

(ಶಿರಸ್ಸಿಗೂ ಮತ್ತು ಶರೀರಕ್ಕೂ ಪ್ರೋಕ್ಷಿಸಿಕೊಳ್ಳುವುದು)

*ಆಚಮನ*:

ಓಂ ಕೇಶವಾಯ ಸ್ವಾಹಾ
ಓಂ ನಾರಾಯಣಾಯ ಸ್ವಾಹಾ
ಓಂ ಮಾಧವಾಯ ಸ್ವಾಹಾ:

(ಎಡಗೈ ಯಿಂದ ಉದ್ದರಣೆ ಯಲ್ಲಿ ನೀರು ತೆಗೆದುಕೊಂಡು ಒಂದೊಂದು ಮಂತ್ರ ಹೇಳಿ ಕುಡಿಯುವುದು)

ಓಂ ಗೋವಿಂದಾಯ ನಮಃ 

(ಅರ್ಘ್ಯ ಪಾತ್ರೆ ಯಲ್ಲಿ ಅರ್ಘ್ಯ ಬಿಡುವುದು)

*ಪ್ರಾಣಾಯಾಮ*:

ಓಂ ಪ್ರಣವಸ್ಯ ಪರಬ್ರಹ್ಮ 
ಋಷಿಃ ಪರಮಾತ್ಮಾ ದೇವತಾ ದೈವೀ ಗಾಯತ್ರೀ ಛಂದಃ ಪ್ರಾಣಾಯಾಮೇ ವಿನಿಯೋಗಃ !!

ಓಂ ಭೂಃ  ಓಂ ಭುವಃ  ಓಂ ಸುವಃ  ಓಂ ಜನಃ  ಓಂ ತಪಃ ಓಂ ಸತ್ಯಂ !! 
ಓಂ ತತ್ಸವಿತರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ !!

ಓಂಮಾಪೋ ಜ್ಯೋತಿರಸೋ ಅಮೃತಂ ಬ್ರಹ್ಮ ಭೂರ್ಭೋವಸ್ಸುವರೋಂ:

*ಸಂಕಲ್ಪ*:

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ   ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ  ಕಲಿಯುಗೇ ಪ್ರಥಮಪಾದೇ   ಜಂಬೂದ್ವೀಪೇ  ಭರತವರ್ಷೇ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ  ದಕ್ಷಿಣೇತೀರೇ  ಶಾಲಿವಾಹನಶಕೆ ಬೌದ್ಧಾವತಾರೇ  ಶ್ರೀ ರಾಮಕ್ಷೇತ್ರೇ   ಅಸ್ಮಿನ್ ವರ್ತಮಾನೇ ವ್ಯವಹಾರಿಕೇ ಚಾಂದ್ರ ಮಾನೇನ ಪ್ರಭವಾದಿ ಷಷ್ಠಿ  ಸಂವತ್ಸರಾಣಾಂ  ಮಧ್ಯೇ- - - ಸಂವತ್ಸರೇ - - - ಆಯನೇ - - - ಖುತೌ - - - ಮಾಸೇ - - - ಪಕ್ಷೇ - - - ತಿಥೌ - - - ವಾಸರ ಯುಕ್ತಾಯಾಂ  ಶುಭ  ನಕ್ಷತ್ರ  ಶುಭ ಯೋಗ  ಶುಭಕರಣ  ಏವಂಗುಣ  ವಿಶೇಷಣ  ವಿಶಿಷ್ಟಾಯಾಂ  ಶುಭತಥೌ  ಮಮಉಪಾತ್ತಸಮಸ್ತಮಸ್ತದುರಿತಕ್ಷಯದ್ವಾರ   ಶ್ರೀ ಪರಮೇಶ್ವರ  ಪ್ರೀತ್ಯರ್ಥಂ   ಅಸ್ಮಾಕಂ ಗೋತ್ರ - - - ನಕ್ಷತ್ರ - - - ರಾಶಿ - - - ಸಹಕುಟುಂಬಾನಾಂ ಕ್ಷೇಮ  ಸ್ಥೈರ್ಯ  ವಿಜಯ  ವೀರ್ಯ  ಅಭಯ  ಆಯುಃ   ಆರೋಗ್ಯ ಐಶ್ವರ್ಯಾಭಿವೃದ್ದ್ಯರ್ಥಂ   ಧರ್ಮಾರ್ಥ  ಕಾಮಮೋಕ್ಷ ಚತುರ್ವಿಧ  ಫಲ  ಪುರುಷಾರ್ಥ ಸಿಧ್ಯರ್ಥಂ   ಸಕಲ  ಮನೋರಥ ಪ್ರಾಪ್ಯಾರ್ಥಂ  ಶ್ರೀ ಅಗ್ನಿಹೋತ್ರ ಪೂಜಾ  ಅಹಂ ಕರಿಶ್ಯೇ:

*ಅಗ್ನಿ ಪ್ರಾರ್ಥನೆ*

ದ್ವಿಶೇರ್ಷಕಂ  ಸಪ್ತಹಸ್ತಂ  ಚ  ತ್ರಿಪಾದಂ ಸಪ್ತಜಿಹ್ವಕಂ  ವರದಂ  ಶಕ್ತಿ  ಹಸ್ತಂಚ  ಭಿಬ್ರಾಣಂ  ಸ್ರುಕಸ್ರಾಪೌತಥಾಃ  ಅಭೀತದಂ ಚರ್ತುಧರಂ  ವಾವೇಚಾಜ್ಯಧರಂ ಕರೇಃ  
ಇತಿಪ್ರತ್ಯಕ್ಷಂ ಅಗ್ನಿಧ್ಯಾತ್ವ.

*ಗಣಪತಿ*  

ಓಂ  *ಏಕದಂತಾಯ* ವಿದ್ಮಹೇ  ವಕ್ರತುಂಡಾಯ ಧೀಮಹಿ ತನ್ನೋ ದಂತಿಃ  ಪ್ರಚೋದಯಾತ್:   ಸ್ವಾಹಾ
ಓಂ *ಗಣಪತಿ  ದೇವಾಯ* ಇದಂ ನಮಮ:

*ಸೂರ್ಯ*

ಓಂ *ಭಾಸ್ಕರಾಯ*  ವಿದ್ಮಹೇ, ಮಹಾದ್ಯುತಿಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್:   ಸ್ವಾಹಾ
ಓಂ *ಸೂರ್ಯ ದೇವಾಯ*  ಇದಂ ನಮಮ:

*ಪಂಚ ಭೂತಗಳು*

*1*. *ಪೃಥ್ವಿ*

 ಓಂ  *ಪೃಥ್ವಿದೇವಾಯೈಚ* ವಿದ್ಮಹೇ, ಸಹಸ್ರ ಮೂರ್ತಾಯ 
ಧೀಮಹಿ,   ತನ್ನೋ *ಪೃಥ್ವಿ* ಪ್ರಚೋದಯಾತ್  ಸ್ವಾಹಾ:
ಓಂ  *ಪೃಥ್ವಿ ದೇವಾಯ* ಇದಂ ನಮಮ:

*2*. *ವರುಣ*

ಓಂ  *ಜಲಬಿಂಬಾಯ* ವಿದ್ಮಹೇ, ನೀಲ ಪುರುಷಾಯ ಧೀಮಹಿ, ತನ್ನೋ *ವರುಣ* ಪ್ರಚೋದಯಾತ್ ಸ್ವಾಹಾ:
ಓಂ  *ವರುಣ ದೇವಾಯ* ಇದಂ  ನಮಮ:

*3*. *ಅಗ್ನಿ*

ಓಂ  *ವೈಶ್ವಾನರಾಯ* ವಿದ್ಮಹೇ,  ಲಾಲೀಲಾಯ  ಧೀಮಹಿ,  ತನ್ನೋ *ಅಗ್ನಿ* ಪ್ರಚೋದಯಾತ್  ಸ್ವಾಹಾ:
ಓಂ  *ಅಗ್ನಿ ದೇವಾಯ*  ಇದಂ  ನಮಮ:

*4*. *ವಾಯು*

ಓಂ  *ಪವನ ಪುರುಷಾಯ* ವಿದ್ಮಹೇ,  ಸಹಸ್ರಮೂರ್ತಯೇಚ ಧೀಮಹಿ, ತನ್ನೋ *ವಾಯು* ಸ್ವಾಹಾ:
ಓಂ  *ವಾಯು ದೇವಾಯ* ಇದಂ  ನಮಮ:

*5*. *ಆಕಾಶ*

ಓಂ  *ಆಕಾಶಾಯಚ*  ವಿದ್ಮಹೇ, ನಭೋದೇವಾಯ ಧೀಮಹಿ,  ತನ್ನೋ *ಗಗನಂ* ಪ್ರಚೋದಯಾತ್  ಸ್ವಾಹಾ: 
ಓಂ  *ಆಕಾಶ ದೇವಾಯ* ಇದಂ ನಮಮ:

*ನವಗ್ರಹಗಳು*

*1*. *ಸೂರ್ಯ*

ಓಂ  *ಆದಿತ್ಯಾಯ* ವಿದ್ಮಹೇ, ಸಹಸ್ರಕಿರಣಾಯ ಧೀಮಹಿ, ತನ್ನೋ  ಭಾನು  ಪ್ರಚೋದಯಾತ್ ಸ್ವಾಹಾ:
ಓಂ *ಸೂರ್ಯಗ್ರಹ ದೇವಾಯ* ಇದಂ ನಮಮ:

*2*. *ಚಂದ್ರ*

ಓಂ  *ಪದ್ಮಧ್ವಜಾಯ* ವಿದ್ಮಹೇ, ಹೇಮರೂಪಾಯ  ಧೀಮಹಿ,  ತನ್ನೋಚಂದ್ರ  ಪ್ರಚೋದಯಾತ್  ಸ್ವಾಹಾ:
ಓಂ  *ಚಂದ್ರಗ್ರಹ ದೇವಾಯ* ಇದಂ ನಮಮ:

*3*. *ಅಂಗಾರಕ*

ಓಂ  *ವೀರಧ್ವಜಾಯ* ವಿದ್ಮಹೇ,  ವಿಘ್ನಹಸ್ತಾಯ  ಧೀಮಹಿ,  ತನ್ನೋಭೌಮ  ಪ್ರಚೋದಯಾತ್  ಸ್ವಾಹಾ:
ಓಂ  *ಅಂಗಾರಕ ಗ್ರಹ ದೇವಾಯ* ಇದಂ ನಮಮ:

*4*. *ಬುಧ*

ಓಂ  *ಗಜಧ್ವಜಾಯ*  ವಿದ್ಮಹೇ,  ಸುಖಹಸ್ತಾಯ  ಧೀಮಹಿ,  ತನ್ನೋ ಬುಧ  ಪ್ರಚೋದಯಾತ್ ಸ್ವಾಹಾ:
ಓಂ  *ಬುಧಗ್ರಹ ದೇವಾಯ* ಇದಂ ನಮಮ:

*5*. *ಗುರು*

ಓಂ  *ವೃಷಭಾಧ್ವಜಾಯ* ವಿದ್ಮಹೇ,  ಕ್ರುನಿಹಸ್ತಾಯ ಧೀಮಹಿ,  ತನ್ನೋಗುರು  ಪ್ರಚೋದಯಾತ್ ಸ್ವಾಹಾ:
ಓಂ  *ಗುರುಗ್ರಹ ದೇವಾಯ* ಇದಂ ನಮಮ:

*6*. *ಶುಕ್ರ*

ಓಂ  *ಭೃಗುಸುತಾಯ* ವಿದ್ಮಹೇ,  ದಿವ್ಯದೇಹಾಯ ಧೀಮಹಿ, ತನ್ನೋಶುಕ್ರ  ಪ್ರಚೋದಯಾತ್ ಸ್ವಾಹಾ:
ಓಂ *ಶುಕ್ರ ಗ್ರಹ ದೇವಾಯ* ಇದಂ ನಮಮ:

*7*. *ಶನಿ*

ಓಂ  *ಶನೈಶ್ಚರಾಯ*  ವಿದ್ಮಹೇ, ಸೂರ್ಯ ಪುತ್ರಾಯ  ಧೀಮಹಿ, ತನ್ನೋ ಮಂದ  ಪ್ರಚೋದಯಾತ್ ಸ್ವಾಹಾ:
ಓಂ *ಶನೈಶ್ಚರ ಗ್ರಹ ದೇವಾಯ* ಇದಂ ನಮಮ:

*8*. *ರಾಹು*

ಓಂ  *ನಾಕಧ್ವಜಾಯ* ವಿದ್ಮಹೇ, ಪದ್ಮ ಹಸ್ತಾಯ ಧೀಮಹಿ, ತನ್ನೋರಾಹು ಪ್ರಚೋದಯಾತ್ ಸ್ವಾಹಾ:
ಓಂ *ರಾಹುಗ್ರಹ ದೇವಾಯ* ಇದಂ ನಮಮ:

*9*. *ಕೇತು*

ಓಂ *ಗದಾಹಸ್ತಾಯ* ವಿದ್ಮಹೇ,  ಅಮೃತೇಶಾಯ ಧೀಮಹಿ, ತನ್ನೋಕೇತು ಪ್ರಚೋದಯಾತ್ ಸ್ವಾಹಾ:
ಓಂ *ಕೇತುಗ್ರಹ ದೇವಾಯ* ಇದಂ ನಮಮ:

*ನವಗ್ರಹಗಳಿಗೆ ಒಂದೇ ಮಂತ್ರ*

ಓಂ  *ತತ್ಕಾರಕಾಯ* ವಿದ್ಮಹೇ, ನವಗ್ರಹಾಯ ಧೀಮಹಿ, ತನ್ನೋಭವ ಪ್ರಚೋದಯಾತ್ ಸ್ವಾಹಾ:
ಓಂ *ನವಗ್ರಹ ದೇವಾಯ* ಇದಂ ನಮಮ:

*ಧನ್ವಂತರಿ ಮಂತ್ರ*

ಓಂ  *ವಾಸುದೇವಾಯ* ವಿದ್ಮಹೇ, ವೈದ್ಯರಾಜಾಯ ಧೀಮಹಿ, 
ತನ್ನೋ ಧನ್ವಂತರಿ ಪ್ರಚೋದಯಾತ್ ಸ್ವಾಹಾ:
ಓಂ *ಧನ್ವಂತರಿ ದೇವಾಯ* ಇದಂ ನಮಮ:

*ಗಾಯತ್ರಿ ಮಂತ್ರ*

ಓಂಭೂರ್ಭವಸ್ವಹಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ, ಧಿಯೋಯೋನಃ ಪ್ರಚೋದಯಾತ್ ಸ್ವಾಹಾ:
ಓಂ *ಗಾಯತ್ರಿ ದೇವಿಯೇ* ಇದಂ ನಮಮ: 

*ಸಪ್ತ ನಮಸ್ಕಾರಗಳು*

*1*. *ಗಣಪತಿ*

ಓಂ *ಏಕದಂತಾಯ* ವಿದ್ಮಹೇ, ವಕ್ರತುಂಡಾಯ ಧೀಮಹಿ,  ತನ್ನೋದಂತಿ ಪ್ರಚೋದಯಾತ್ ಸ್ವಾಹಾ:
ಓಂ *ಗಣಪತಿ ದೇವಾಯ* ಇದಂ ನಮಮ:

*2*. *ಹಿಮಾಲಯ ಗಣಪತಿ*

ಓಂ *ತತ್ಪುರುಷಾಯ* ವಿದ್ಮಹೇ, ಈಶ್ವರ ಪುತ್ರಾಯ ಧೀಮಹಿ, ತನ್ನೋ ಹಿಮಾಲಯ ಗಣಪತಿ ಪ್ರಚೋದಯಾತ್ ಸ್ವಾಹಾ:
ಓಂ *ಹಿಮಾಲಯ ಗಣಪತಿ ದೇವಾಯ* ಇದಂ ನಮಮ:

3. *ದುರ್ಗಾ*

ಓಂ  *ಮಹಾ ದೇವೈಚ* ವಿದ್ಮಹೇ, ದುರ್ಗಾಯೈಚ  ಧೀಮಹಿ, ತನ್ನೋದೇವಿ ಪ್ರಚೋದಯಾತ್ ಸ್ವಾಹಾ:
ಓಂ *ದುರ್ಗಾ ದೇವಿಯೇ* ಇದಂ ನಮಮ:

4. *ಶಿವ*

ಓಂ  *ತತ್ಪುರುಷಾಯ* ವಿದ್ಮಹೇ, ಮಹಾದೇವಯ ಧೀಮಹಿ, ತನ್ನೋರುದ್ರ ಪ್ರಚೋದಯಾತ್ ಸ್ವಾಹಾ:
ಓಂ *ರುದ್ರ ದೇವಾಯ* ಇದಂ ನಮಮ:

*5*. *ಆಂಜನೇಯ*

ಓಂ *ಆಂಜನೇಯಾಯ* ವಿದ್ಮಹೇ, ವಾಯುಪುತ್ರಾಯ ಧೀಮಹಿ, ತನ್ನೋಹನುಮ ಪ್ರಚೋದಯಾತ್ ಸ್ವಾಹಾ:
ಓಂ *ಆಂಜನೇಯ ದೇವಾಯ* ಇದಂ ನಮಮ:

*6*. *ಸೂರ್ಯ*

ಓಂ  *ಪ್ರಭಾಕರಾಯ*
 ವಿದ್ಮಹೇ, ದಿನಕರಾಯ
 ಧೀಮಹಿ,  ತನ್ನೋ ಸೂರ್ಯ ಪ್ರಚೋದಯಾತ್ ಸ್ವಾಹಾ:
ಓಂ *ಸೂರ್ಯ ದೇವಾಯ* ಇದಂ ನಮಮಃ

7. *ವಿಷ್ಣು*

ಓಂ  *ನಾರಾಯಣಾಯ* ವಿದ್ಮಹೇ, ವಾಸುದೇವಾಯ ಧೀಮಹಿ, ತನ್ನೋವಿಷ್ಣು ಪ್ರಚೋದಯಾತ್ ಸ್ವಾಹಾ:
ಓಂ *ವಿಷ್ಣು ದೇವಾಯ*  ಇದಂ ನಮಮ:

*ಪೂಜೆ*

*ಹರಿದ್ರಾಚೂರ್ಣಂ  ಕುಂಕುಮಚೂರ್ಣಂ  ಸಮರ್ಪಯಾಮಿ*
(ಹರಿಶಿಣ  ಕುಂಕುಮ);

*ಅಕ್ಷತಾನ್ ಸಮರ್ಪ ಯಾಮಿ*
(ಅಕ್ಷತೆ);

*ಪುಷ್ಪಂ ಸಮರ್ಪಯಾಮಿ*
(ಪುಷ್ಪ)

*'ಧೂಪಂ' ಮಾಘ್ರಾಪಯಾಮಿ*
(ಗಂಧದ ಕಡ್ಡಿಯನ್ನು ಹಚ್ಚಿ ಸಮರ್ಪಿಸುವುದು)

*ದೀಪಂ ಸಮರ್ಪಯಾಮಿ*
(3 ಬತ್ತಿಯ ದೀಪವನ್ನು ಹಚ್ಚಿ ಆರತಿ ಮಾಡುವುದು)

*ನೈವೇದ್ಯ*
(ನಾರಿಕೇಳ ಫಲಂ ಕದಳೀ ಫಲಂ ನೀವೇದಯಾಮಿ)

*ಮಂಗಳಾರತಿ*

*ಪೂರ್ಣಾಹುತಿ ಮಂತ್ರ*

ಓಂ  ಪೂರ್ಣಮದ  ಪೂರ್ಣಮಿದಂ  ಪೂರ್ಣಾತ್  ಪೂರ್ಣಮುದಚ್ಚತೇ  ಪೂರ್ಣಸ್ಯ  ಪೂರ್ಣಮಾದಾಯ  ಪೂರ್ಣಮೇವವಶಿಶ್ಯತೇ:

*ಪ್ರದಕ್ಷಿಣೆ ಮಂತ್ರ*

ಯಾನಿಕಾನಿಚ  ಪಾಪಾನಿ  ಜನ್ಮಂತರ  ಕೃತಾನಿಚ  ತಾನಿ  ತಾನಿ  ವಿನಶ್ಯಂತಿ  ಪ್ರದಕ್ಷಿಣಂ  ಪದೇ  ಪದೇ:

*ಕ್ಷಮಾಪಣಾ  ಮಂತ್ರ*

ಮಂತ್ರಹೀನಂ,  ಕ್ರಿಯಾಹೀನಂ,  ಭಕ್ತಿಹೀನಂ,  ಜನಾರ್ಧನ  ಯತ್  ಪೂಜಿತಂ  ಮಹಾದೇವ  ಪರಿಪೂರ್ಣಂ  ತತಾಸ್ತುಮೇ:

*ಫಲಶ್ರುತಿ  ಮಂತ್ರ*

ಸ್ವಸ್ತಿ:  

ಶ್ರದ್ಧಾಂ  ಮೇಧಾಂ  ಯಶಃ  ಪ್ರಜ್ಞಾಂ  ಬುದ್ಧಿಂ  ಶ್ರಿಯಂ  ಬಲಮ್  ಆಯುಷ್ಯಂ  ತೇಜಂ  ಆರೋಗ್ಯಂ  ದೇಹಿಮೇ  ಹವ್ಯವಾಹನ;  ಶ್ರಿಯಂ  ದೇಹಿಮೇ  ಹವ್ಯವಾಹನ  ಓಂ ನಮೋನಮಃ:

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*

 *ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

ಗಿಡಮೂಲಿಕೆಗಳ ವಿಶೇಷತೆ ಮತ್ತು ತಾಂತ್ರಿಕ ಕ್ರಿಯೆ

 ಗಮನಿಸಿ: - ಇದನ್ನು ತಿಳುವಳಿಕೆಗಾಗಿ ಮಾತ್ರ ಪೋಸ್ಟ್ ಮಾಡಲಾಗಿದೆ.  ಸರಿಯಾದ ಮಾರ್ಗದರ್ಶನವಿಲ್ಲದೆ ಇವುಗಳನ್ನು ಬಳಸಬೇಡಿ..

ನೀವು ಬದನಿಕೆಗಳ ಬಗ್ಗೆ ಕೇಳಿರುತ್ತೀರಾ.  ಆದರೆ ಈ ಗಿಡಮೂಲಿಕೆಗಳಂತೆಯೇ ಪ್ರಕೃತಿಯಲ್ಲಿ ಇನ್ನು ಅನೇಕ ಪ್ರಬಲವಾದ ಗಿಡಮೂಲಿಕೆಗಳಿವೆ. ಇವುಗಳಿಗೆ ಕೆಲವು ಪ್ರತ್ಯೇಕ ತಿಥಿ ನಕ್ಷತ್ರಗಳಲ್ಲಿ ವಿಶೇಷವಾದ ಶಕ್ತಿ ಇರುತ್ತವೆ.  ನಾವು ಆ ಸಮಯದಲ್ಲಿ ಅವುಗಳನ್ನು ಸಂಗ್ರಹಿಸಿ ಮತ್ತು ತಾಂತ್ರಿಕ ರೀತಿಯಲ್ಲಿ ಪೂಜೆ ಮಾಡಿ  ಬಳಸಿದರೆ ಅವು ಅದ್ಭುತವಾಗಿ ಕಾರ್ಯನಿರ್ವಹಿಸುತ್ತವೆ.  ಒಂದೊಂದು  ಮೂಲಿಕೆಗಳು ಒಂದೊಂದು ಕೆಲಸಗಳನ್ನು ಮಾಡುತ್ತವೆ  ಆದ್ದರಿಂದ ಅವುಗಳನ್ನು ತಿಳಿದುಕೊಂಡು  ಮತ್ತು ಸಂಗ್ರಹಿಸಿ ಸರಿಯಾದ ಫಲಿತಾಂಶಗಳನ್ನು ಪಡೆಯಬಹುದು..  ಆದರೆ ಇವುಗಳನ್ನು ಸರಿಯಾದ ಮಂತ್ರ, ತಂತ್ರ, ಸಮಯ, ಸಂದರ್ಭವನ್ನು ಅರಿತು ಅದಕ್ಕೆ ಅನುಗುಣವಾಗಿ ಶಾಸ್ತ್ರರೋಕ್ತವಾಗಿ ಪೂಜಿಸಿ ತಂದರೆ ಅವು ಸಂಜೀವಿನಿಯಂತೆ ಕಾರ್ಯ ನಿರ್ವಯಿಸುತ್ತವೆ... ಇಲ್ಲದಿದ್ದರೆ ಇದು ಸಾಮಾನ್ಯ ಕಡ್ಡಿಗಳಿಗಿಂತ  ಕೆಟ್ಟದಾಗಿರುತ್ತದೆ...

 ಮಂತ್ರ, ತಂತ್ರ ಶಾಸ್ತ್ರದಲ್ಲಿ 8 ರೀತಿಯ ಪದ್ಧತಿಗಳಿವೆ... ಅವುಗಳಲ್ಲಿ ಆಕರ್ಷಣೆ, ಸ್ಥಾಂಭನಾ, ವಿದ್ವೇಷಣ, ಉಚ್ಚಟನಾ, ಮೋಹನ, ವಶೀಕರಣ, ಅದೃಶ್ಯ, ವಿಜಯೋತ್ಸವ, ಮತ್ತು ಇವುಗಳಲ್ಲಿ ಇನ್ನು ಅನೇಕ  ಅಸಂಖ್ಯಾತ ಉಪ-ವಿಧಾನಗಳು ಸೇರಿವೆ.  ಶೀಘ್ರದಲ್ಲೇ ಅದರ  ಬಗ್ಗೆ ಪ್ರತ್ಯೇಕವಾಗಿ ಪೋಸ್ಟ್ ಮಾಡುತ್ತೇನೆ.  ಇದೀಗ ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ...

 👉🏿 ಆಕರ್ಷಕ ಗಿಡಮೂಲಿಕೆಗಳು: - ಅಮಾವಾಸ್ಯೆಯ ಯಾವುದೇ ಭಾನುವಾರದಂದು ಮರಳುಮಾತಂಗಿ, ಬ್ರಹ್ಮಧಂಡಿ, ಸೂರ್ಯಕಾಂತಿ ಮುಂತಾದ ಗಿಡಮೂಲಿಕೆಗಳನ್ನು ಸಂಗ್ರಹಿಸಿ ತಾಂತ್ರಿಕ ರೀತಿಯಲ್ಲಿ ಪೂಜಿಸಿ ಅಪೇಕ್ಷಿತ ವ್ಯಕ್ತಿಯಿಂದ ಆಹಾರದಲ್ಲಾಗಲಿ ಅಥವಾ ಕುಡಿಯುವ ದ್ರವದಲ್ಲಾಗಲಿ ಕೊಟ್ಟರೆ ಗಂಡ ಹೆಂಡತಿಯ ಮದ್ಯೆ ಅನ್ಯೋನ್ಯತೆ ಬೆಳೆಯುತ್ತದೆ ಮತ್ತು ಪ್ರೇಮಿಗಳ ಮದ್ಯೆ ಜಗಳ, ಕೋಪವಿದ್ದರೆ, ಬೇರೆಯಾಗುವ ಸಂದರ್ಭವಿದ್ದರೆ ಇದರಿಂದ ಅನ್ಯೋನ್ಯತೆ ಬೆಳೆಯುತ್ತದೆ...

 👉🏿 ಸ್ಥಂಭನಾ ಮೂಲಿಕೆಗಳು: ಬುರುಗ ಜಿರುಗು, ತೆಲ್ಲಜಿಲ್ಲೆಡು, ಅಲೋ ವೆರಾ, ತೆಲ್ಲಗುರಿವಿಂದ ಗಿಡಮೂಲಿಕೆಗಳನ್ನು ಯಾವುದೇ ಗುರುವಾರ ಸಂಗ್ರಹಿಸಿ ಅವುಗಳನ್ನು ಸರಿಯಾದ ತಾಂತ್ರಿಕ ಪದ್ಧತಿಯಲ್ಲಿ ಜಪ, ಪೂಜಾದಿಗಳನ್ನು ಮಾಡಿ ಧರಿಸಿದರೆ ಯಾರನ್ನು ಬೇಕಾದರೂ ಸ್ಥಂಭನಾ ಮಾಡಬಹುದು...

 👉🏿ವಿದ್ವೇಷಣ ಮೂಲಿಕೆಗಳು: - ಮಾಲತಿ ಹೂವುಗಳು,  ಅಂದುಗ ಮರದ ತೊಗಟೆ, ಪರಸ್ಪರ ದ್ವೇಷಿಸುವ ಪ್ರಾಣಿಗಳ ಮಲವನ್ನು ಮತ್ತು ಕೂದಲನ್ನು ಮಂಗಳವಾರ ಅಮಾವಾಸ್ಯೆಯಂದು ತಾಂತ್ರಿಕ ರೀತಿಯಲ್ಲಿ ಸಂಗ್ರಹಿಸಿ ಕೆಲವು ಗಿಡಮೂಲಿಕೆಗಳೊಂದಿಗೆ ಬೆರೆಸಿ ಯಾರ ಮೇಲೆ ಪ್ರಯೋಗಿಸುತ್ತೇವೋ ಅವರಲ್ಲಿ  ದ್ವೇಷವನ್ನು ಉಂಟುಮಾಡಬಹುದು...

 👉🏿ಉಚ್ಚಟನಾ ಮೂಲಿಕೆಗಳು: - ಬ್ರಹ್ಮದಂದಿ, ಬಿಳಿ ಸಾಸಿವೆ, ರಾವಿಚೆಟ್ಟು, ಮೆಡಿಕೊಮ್ಮಾದಂತಹ ಗಿಡಮೂಲಿಕೆಗಳನ್ನು ಬಳಸಿ ಉಚ್ಚಟನಾ ಮಾಡಬಹುದು ಎಂದು ತಂತ್ರಶಾಸ್ತ್ರ ಹೇಳುತ್ತದೆ..

 👉🏿ಮೋಹನಾ ಮೂಲಿಕೆಗಳು: - ಸಹದೇವಿ, ತುಳಸಿ, ಮಾರೆಡು, ಅಶ್ವಗಂಧ, ಬಾಳೆಗಿಡ, ರತ್ನಕ್ಷಾರಿ, ತೆಲ್ಲಗುರಿವಿಂದ, ಉತ್ತರೇನಿ, ಗುಂಟಗಲಗರ, ದಾಳಿಂಬೆ ಇವುಗಳನ್ನು  ಪುಷ್ಯಮಿ ನಕ್ಷತ್ರದಿನದಂದು ಅಥವಾ ಯಾವುದಾದರೂ ಅಮಾವಾಸ್ಯ ದಿನದಲ್ಲಾಗಾಲಿ ತಾಂತ್ರಿಕ ರೀತಿಯಲ್ಲಿ ಸಂಗ್ರಹಿಸಿ ಅದನ್ನು ಚೂರ್ಣ ಮಾಡಿ ತಿಲಕವಾಗಿ ಇಟ್ಟುಕೊಂಡರೆ ಪ್ರತಿಯೊಬ್ಬರೂ ಮೋಹನವಾಗುತ್ತಾರೆ...

 👉🏿ವಶೀಕರಣ ಮೂಲಿಕೆಗಳು: - ಸಹದೇವಿ, ಎರ್ರಗನ್ನೆರು, ಬದನಿಕಾ, ಮೆಡಿವೆರು, ಕಪ್ಪು ಪಚ್ಚೆ ಬೇರುಗಳು, ಮಯೂರಿಶಿಖಾ, ಮಾವು ಬದನಿಕಾ, ಸಂಪಂಗಿ, ತೆಲ್ಲಗುರಿವಿಂದ, ತೆಲ್ಲಜಿಲ್ಲೆಡು, ಸಸ್ಯದ ಬೀಜಕೋಶಗಳನ್ನು ಯಾವುದೇ ಅಮಾವಾಸ್ಯೆಯ ದಿನದಂದು ತಾಂತ್ರಿಕ ರೀತಿಯಲ್ಲಿ ಸಂಗ್ರಹಿಸಿ ಅದನ್ನು ಚೂರ್ಣ ಮಾಡಿ ತಿಲಕವಾಗಿ ಇಟ್ಟುಕೊಂಡರೆ ಪ್ರತಿಯೊಬ್ಬರೂ ವಶೀಕರಣವಾಗುತ್ತಾರೆ...

👉🏿ಅದೃಶ್ಯ ಮೂಲಿಕೆಗಳು: - ಉಡುಗಾ ಬೀಜಗಳು, ಮೊಡುಗಾ ಬೀಜಗಳು, ನಲ್ಲಬುರುಗ, ತಮರಪೀಚು, ಗೂಬೆ ಮಲ, ಅಮಾವಾಸ್ಯೆಯ ದಿನದಂದು ತಾಂತ್ರಿಕ ವಿಧಾನದಿಂದ ಸಂಗ್ರಹಿಸಿ ಅವುಗಳನ್ನು ತೈಲ ಮಾಡಿ ದೇಹಕ್ಕೆಲಾ ಲೇಪನ ಮಾಡಿಕೊಂಡರೆ ಇತರರಿಗೆ ಗೋಚರಿಸುವುದಿಲ್ಲ.

 👉🏿ವಿಜಯಕರ ಮೂಲಿಕೆಗಳು: - ತುಳಸಿ, ಮಾರೆಡು, ಶ್ರೀಗಂಧದ ತೆಲ್ಲಗರಿಕ, ತೆಲ್ಲಗುರಿವಿಂದ, ಎರ್ರಾಚಿತ್ರಮೂಲಂ, ಮಡ್ಡಿ, ಸಹದೇವಿ, ಜಮ್ಮಿ, ಉತ್ತರೇನಿ, ನಲ್ಲಾ ಉಮ್ಮೆಟ್ಟಾ, ಎರ್ರಗನ್ನೆರು, ಸರ್ಪಕ್ಷಿ ವೆರು, ಈ ಮರಗಳ ಗಿಡಮೂಲಿಕೆಗಳನ್ನು ಗ್ರಹಣದ ಸಮಯದಲ್ಲಿ ಅಥವಾ ಅಮಾವಾಸ್ಯೆಯ ದಿನ ತಾಂತ್ರಿಕ ಪದ್ಧತಿಯಲ್ಲಿ ಸಂಗ್ರಹಿಸಿ  ನೀವು ನಿಯಮಿತವಾಗಿ ಪೂಜಿಸಿದರೆ, ನೀವು ವಿವಿಧ ತೊಂದರೆಗಳಿಂದ ಹೊರಬಂದು ಯಶಸ್ಸನ್ನು ಸಾಧಿಸುವಿರಿ.

 ದಶಮಾಹಾವಿದ್ಯೆಯಲ್ಲಿನ ಒಂದು ವಿದ್ಯೆಯಲ್ಲಿನ ಸಹಸ್ರನಾಮ ಸ್ತೋತ್ರಗಳನ್ನು ಮತ್ತು ಪ್ರತಿ ಮೂಲಿಕೆಯ ಹೆಸರನ್ನು ರಹಸ್ಯವಾಗಿ ಇಟ್ಟಿದ್ದಾರೆ ನಮ್ಮ ಹಿರಿಯರು...  ಅದೇ ರೀತಿ ಗ್ರಹಗಳಿಗೂ ನಮ್ಮ ಮೂಲಿಕೇಗಳಿಗೂ ಸಂಬಂಧವಿದೆ !!  ಮೇಲೆ ತಿಳಿಸಿದ ಎಂಟು ಬಗೆಯ ಕೆಲಸಗಳಿಗೆ ಮಾತ್ರವಲ್ಲ, ಇನ್ನೂ ಹಲವು ಇವೆ .. ಆಳವಾದ ಸಂಶೋಧನೆಗೆ ಸಾಕಷ್ಟು ಅಗತ್ಯವಿದೆ.  !!  ಎಲ್ಲರಿಗೂ ಅರಿವು ಮೂಡಿಸಲು ನಾನು ಇವುಗಳ ಬಗ್ಗೆ ಕರ್ತವ್ಯ ನೀತಿಗಳನ್ನು ಪೋಸ್ಟ್ ಮಾಡುತ್ತೇನೆ.  ಅವರು ತಮ್ಮ ದೈನಂದಿನ ಜೀವನದಲ್ಲಿ ಇವುಗಳನ್ನು ಬಳಸುತ್ತಾರೆ ಎಂದು ನಾನು ಭಾವಿಸುತ್ತೇನೆ.  ಗುರುಮುಖೆನ ತಿಳಿಯುವುದು ಒಳ್ಳೆಯದು.

April 22, 2021

ಋಜ್ರಾಶ್ವ

ಋಜ್ರಾಶ್ವ . . . . 

ವೃಷಾಗಿರ ಎನ್ನುವ ಒಬ್ಬ ಮಹಾರಾಜನಿದ್ದ. ಆತ ತುಂಬಾ ಧಾರ್ಮಿಕನಾಗಿದ್ದ. ಸ್ವತಃ ಅನೇಕ ಯಾಗಗಳನ್ನು ಮಾಡಿಸಿದವನು.  ಇವನಿಗೆ ಐದು ಜನ ಮಕ್ಕಳಿದ್ದರು. ಆ ಐದೂ ಜನ ಮಕ್ಕಳು ರಾಜರ್ಷಿಗಳು ಎನ್ನಿಸಿಕೊಂಡವರು. ಋಜ್ರಾಶ್ವ, ಅಂಬರೀಷ, ಸಹದೇವ, ಭಯಮಾನ, ಮತ್ತು ಸುರಾಧಸ ಎನ್ನುವವರು. ಎಂದು ಋಗ್ವೇದದ ಮೊದಲ ಮಂಡಲದಲ್ಲಿ ಸಿಗುತ್ತದೆ. ಇವರು ಇಂದ್ರನನ್ನು ಕುರಿತಾಗಿ ಸ್ತುತಿಸಿ ಸೂಕ್ತ ದೃಷ್ಟಾರರೆನ್ನಿಸಿಕೊಂಡವರು. 

ಈ ಋಜ್ರಾಶ್ವ ಕಾಲಾಂತರದಲ್ಲಿ ಕುರುಡನಾಗುತ್ತಾನೆ. ಅದರ ಕುರಿತಾಗಿಯೇ ಒಂದು ಕಥೆ ದೊರಕುತ್ತದೆ. ಅಶ್ವಿನೀ ದೇವತೆಗಳ ವಾಹನ ಕತ್ತೆ. ಒಮ್ಮೆ ಅಶ್ವಿನೀ ದೇವತೆಗಳ ಕತ್ತೆಗಳು ಹೆಣ್ಣು ತೋಳದ ರೂಪ ಧರಿಸಿ ಋಜ್ರಾಶ್ವನ ಬಳಿ ಬಂದು ಆಹಾರವನ್ನು ಕೇಳುತ್ತದೆ. ಆಗ ಋಜ್ರಾಶ್ವ ತನ್ನ ಬಳಿ ಇದ್ದ ಆಡುಗಳನ್ನು ಕೊಡದೇ, ತನ್ನ ರಾಜ್ಯದ ಪ್ರಜೆಗಳಿಂದ ಪಡೆದು ನೂರು ಆಡಿನ ಮರಿಗಳನ್ನು ಕಡಿದು ಹೆಣ್ಣು ತೋಳಕ್ಕೆ ಕೊಡುತ್ತಾನೆ. ಆಗ ವೃಷಾಗಿರನಿಗೆ ಸುದ್ಧಿ ತಲುಪುತ್ತದೆ. ವೃಷಾಗಿರ ಸಿಟ್ಟುಗೊಂಡು ಮಗನಿಗೆ ಹೇಳುತ್ತಾನೆ. ಜನರ ಸಂಪತ್ತಿನ ಲೂಟಿ ಮಾಡಿರುವೆ ನೀನು. ಇದು ಪರಮಾಪರಾಧ. ನಿನ್ನ ಈ ಕೆಲಸಕ್ಕೆ ನಿನಗೆ ಶಿಕ್ಷೆಯಾಗಲೇ ಬೇಕು ಎಂದು ಶಪಿಸುತ್ತಾನೆ. ಆಗ ಋಜ್ರಾಶ್ವ ತನ್ನ ಕಣ್ಣುಗಳ ದೃಷ್ಟಿ ಕಳೆದುಕೊಳ್ಳುತ್ತಾನೆ. ಇದನ್ನು ಋಗ್ವೇದದ ಒಂದನೇ ಮಂಡಲದ ೧೧೬ನೇ ಸೂಕ್ತದಲ್ಲಿ ವಿವರಿಸಿದ್ದು ಶತಂ ಮೇಷಾನ್ವೃಕ್ಯೇ ಎಂದು ಆರಂಭವಾಗುವ ಭಿಷಜಾವನರ್ವನ್ ಎಂದು ಕೊನೆಗೊಳ್ಳುವ ಋಕ್ಕಿನಲ್ಲಿ. 

ಆಗ ರಾಜ್ಯಾಡಳಿತ ನಡೆಸಲು ರಾಜನಾದವನು ಯಾವುದೇ ಅಂಗ ವೈಕಲ್ಯವೋ ಅಥವಾ ಇನ್ನಾವುದೇ ಶಾರೀರಿಕ ನ್ಯೂನತೆಗಳಿದ್ದರೊ ರಾಜನಾಗುವಂತಿರಲಿಲ್ಲ. ಇಲ್ಲಿ ಋಜ್ರಾಶ್ವ ಕುರುಡನಾಗಿದ್ದ. ಪ್ರಜೆಗಳ ಯಾವ ಕಷ್ಟ ಸುಖಗಳೂ ಆತನಿಗೆ ತಿಳಿಯುತ್ತಿರಲಿಲ್ಲ. ಆದುದರಿಂದ ಆತ ಇಂದ್ರನನ್ನು ಸ್ತುತಿಸುತ್ತಾನೆ. ಋಗ್ವೇದದ ಒಂದನೇ ಮಂಡಲದ ೧೧೨ನೇ ಸೂಕ್ತದಲ್ಲಿ ರೋಹಿಚ್ಛ್ಯಾವಾ . . . . ರಾಯ ಋಜ್ರಾಶ್ವಸ್ಯ ಎನ್ನುವುದಾಗಿ ಹೇಳುತ್ತಾ ರಾಜನಾದ ಋಜ್ರಾಶ್ವನಿಗೆ ಅಶ್ವಿನೀ ದೇವತೆಗಳು ಕಣ್ಣು ಬರುವಂತೆ ಚಿಕಿತ್ಸೆ ಮಾಡದರಂತೆ. ಆಗ ಇಂದ್ರ ತನ್ನ ರಥದಲ್ಲಿ ಕುಳಿತು ಬಂದು ಸಂಪತ್ತನ್ನು ದಾನ ಮಾಡಿದ ಎಂದು ಹೇಳಲಾಗಿದೆ. ಇದೊಂದೇ ಋಕ್ಕಿನಲ್ಲಿ ಅನೇಕ ವಿಷಯಗಳಿದ್ದು ಅದರ ವಿವರಣೆ ಇಲ್ಲಿ ಅಪ್ರಸ್ತುತವೆನ್ನಿಸುತ್ತದೆ. 

ಮುಂದಿನ ಋಕ್ಕಿನಲ್ಲಿ ವೃಷಾಗಿರನ ಐದು ಮಕ್ಕಳ ಹೆಸರು ಪ್ರಸ್ತಾಪವಾಗಿದೆ. ಋಜ್ರಾಶ್ವಃ ಪ್ರಷ್ಟಿಭಿರಂಬರೀಷಃ ಸಹದೇವೋ ಭಯಮಾನಃ  ಸುರಾಧಾಃ ಎಂದು ಹೆಸರನ್ನು ಉಲ್ಲೇಖಿಸಲಾಗಿದೆ. ಅಂದರೆ ವೃಷಾಗಿರನ ಮಕ್ಕಳಾದ ನಾವು ಐವರೂ ಸೇರಿಕೊಂಡು ನಿನ್ನನ್ನು ಸ್ತುತಿಸುತ್ತಿದ್ದೇವೆ. ನಮಗೆ ನಮ್ಮ ರಾಜ್ಯದ ಪ್ರಜೆಗಳಿಗೆ ಸುಭಿಕ್ಷವನ್ನುಂಟು ಮಾಡು ಎಂದು ಇಂದ್ರನನ್ನು ಸ್ತುತಿಸಿದ್ದಾರೆ.

ಅದೇನೇ ಇರಲಿ, ಹುಟ್ಟು ಕುರುಡುತನವಿರದೇ ಮಧ್ಯದಲ್ಲಿ ಕಾಣಿಸಿಕೊಳ್ಳುವ ಕುರುಡುತನಕ್ಕೆ ವೈದ್ಯಕೀಯ ಲೋಕದಲ್ಲಿ ಔಷಧಗಳಿವೆ ಅಥವಾ ಅದನ್ನು ಗುಣಪಡಿಸಬಹುದು ಎನ್ನುವ ಸಂದೇಶವಂತೂ ಇದರಿಂದ ದೊರಕುತ್ತದೆ.

#ಕುರುಡುತನ_ಋಜ್ರಾಶ್ವ
ಸದ್ಯೋಜಾತರು

ಷಡ್ವರ್ಗಗಳ ಉಪಯೋಗ

*ಷಡ್ವರ್ಗಗಳ ಉಪಯೋಗ* 

1) *ರಾಶಿ*  (ಡಿ -1) - ಎಲ್ಲಾ ವಿಭಾಗೀಯ ಪಟ್ಟಿಯಲ್ಲಿ ಆಧಾರವಾಗಿದೆ ಮತ್ತು ಮಾನವ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಮೊದಲ ಸುಳಿವನ್ನು ನೀಡುತ್ತದೆ.
2) *ಹೋರಾ ಚಾರ್ಟ್* (ಡಿ -2) - ಸಂಪತ್ತು, ಮಾತು ಮತ್ತು ಕುಟುಂಬಕ್ಕೆ ಬಳಸಲಾಗುತ್ತದೆ.
3) *ಡ್ರೆಕ್ಕಾನಾ* (ಡಿ -3) - ಸಹ-ಜನನ, ಧೈರ್ಯ ಮತ್ತು ಶಕ್ತಿಗಾಗಿ ಬಳಸಲಾಗುತ್ತದೆ.
4) *ಚತುರಂಶ* (ಡಿ -4) - ಮನೆ, ತಾಯಿ, ಆಸ್ತಿ, ಡೆಸ್ಟಿನಿ ಮತ್ತು ಸ್ಥಿರ ಆಸ್ತಿಗಳಿಗೆ ಬಳಸಲಾಗುತ್ತದೆ.
5) *ಸಪ್ತಮ್ಸಾ* (ಡಿ -7) - ಲೈಂಗಿಕ ಜೀವನ, ಮಕ್ಕಳ ಮತ್ತು ಮಕ್ಕಳನ್ನು ಉತ್ಪಾದಿಸುವ ಸಾಮರ್ಥ್ಯಕ್ಕಾಗಿ ಬಳಸಲಾಗುತ್ತದೆ.
6) *ನವಂಸಾ* (ಡಿ -9) - ಸಂಗಾತಿ, ವೈವಾಹಿಕ ಜೀವನ, ಅದೃಷ್ಟಕ್ಕಾಗಿ ಬಳಸಲಾಗುತ್ತದೆ ಮತ್ತು ಇದನ್ನು ಜನ್ಮ ಜನ್ಮ ಪಟ್ಟಿಯಲ್ಲಿನ ಸೂಕ್ಷ್ಮ ಆವೃತ್ತಿ ಎಂದೂ ಕರೆಯುತ್ತಾರೆ.
7) *ದಶಂಶ* (ಡಿ -10) - ವೃತ್ತಿ, ವೃತ್ತಿಪರ ಯಶಸ್ಸು, ಗೌರವ, ಸ್ಥಾನಮಾನ ಮತ್ತು ಭಂಗಕ್ಕೆ ಬಳಸಲಾಗುತ್ತದೆ.
8) *ದ್ವಾದಶಾಂಶ* (ಡಿ -12) - ಪೋಷಕರು ಮತ್ತು ವಂಶಾವಳಿಯ ಮಾಹಿತಿಗಾಗಿ ಬಳಸಲಾಗುತ್ತದೆ.
9) *ಷೋಡಶಾಂಶ* (ಡಿ -16) - ಸಾಮಾನ್ಯ ಸಂತೋಷ, ಚಲಿಸಬಲ್ಲ ಆಸ್ತಿ ಇತ್ಯಾದಿಗಳಿಗೆ ಬಳಸಲಾಗುತ್ತದೆ.
10) *ವಿಮ್ಶಮ್ಸಾ* (ಡಿ -20) - ಆಧ್ಯಾತ್ಮಿಕ ಚಟುವಟಿಕೆಗಳು, ಆಧ್ಯಾತ್ಮಿಕ ಆಚರಣೆಗಳಲ್ಲಿ ಪ್ರಗತಿ ಮತ್ತು ಪೂಜಾ ಫಲಿತಾಂಶಗಳಿಗಾಗಿ ಬಳಸಲಾಗುತ್ತದೆ.
11) *ಚತುರ್ವಿಮ್‌ಶಮ್ಸಾ* (ಡಿ -24) - ಶಿಕ್ಷಣ, ಕಲಿಕೆ ಮತ್ತು ಶಿಕ್ಷಣ ಮಾದರಿಯಲ್ಲಿ ಸಾಧನೆಗಾಗಿ ಬಳಸಲಾಗುತ್ತದೆ.
12) *ಸಪ್ತವಿಮ್ಶಮ್ಸಾ* (ಡಿ -27) - ದೈಹಿಕ ಶಕ್ತಿ ಮತ್ತು ತ್ರಾಣಕ್ಕೆ ಬಳಸಲಾಗುತ್ತದೆ.
13) *ತ್ರಿಂಷಾಂಶ* (ಡಿ -30) - ದುಃಖಗಳು, ಕಾಯಿಲೆಗಳು ಮತ್ತು ದುಷ್ಟತನಗಳಿಗೆ ಬಳಸಲಾಗುತ್ತದೆ.
14) *ಖವೇದಂಸಾ* (ಡಿ -40) - ಜೀವನದಲ್ಲಿ ಶುಭ ಪರಿಣಾಮಗಳಿಗೆ ಬಳಸಲಾಗುತ್ತದೆ.
15) *ಅಕ್ಷವೇದಂಸಾ* (ಡಿ -45) - ಸಾಮಾನ್ಯ ಪಾತ್ರ ಮತ್ತು ನಡವಳಿಕೆಗೆ ಬಳಸಲಾಗುತ್ತದೆ.
16) *ಶಾಸ್ಟಿಯಮ್ಸಾ* (ಡಿ -60) - ಜೀವನದ ಎಲ್ಲಾ ಅಂಶಗಳನ್ನು ನಿರ್ಣಯಿಸಲು ಬಳಸಲಾಗುತ್ತದೆ.
🍃🍃🍃🍃🍃🍃🍃🍃🍃🍃🍃
ಮೇಲೆ ತಿಳಿಸಲಾದ ವಿಭಾಗೀಯ ಚಾರ್ಟ್ಗಳ ಹೊರತಾಗಿ, ಪರಶಾರಿ ಅಲ್ಲದ ವಿಭಾಗೀಯ ಚಾರ್ಟ್ಗಳು ಎಂದು ಕರೆಯಲ್ಪಡುವ ಕೆಲವು ವಿಭಾಗೀಯ ಚಾರ್ಟ್ಗಳಿವೆ, 
 *ಪಂಚಂಶ* (ಡಿ -5) - ಹಿಂದಿನ ಜೀವನ ಯೋಗ್ಯತೆ, ಆಧ್ಯಾತ್ಮಿಕ ಒಲವು ಮತ್ತು ಮಂತ್ರ ಸಿದ್ಧಿಗಾಗಿ.
 *ಶಾಷ್ಟಮ್ಸಾ* (ಡಿ -6) - ಸಾಲ, ವಿವಾದಗಳು ಮತ್ತು ಕಾಯಿಲೆಗಳಿಗೆ ಸ್ಪಷ್ಟತೆಗಾಗಿ.
 *ಅಷ್ಟಮ್ಸಾ* (ಡಿ -8) - ಆನುವಂಶಿಕತೆ, ದೀರ್ಘಾಯುಷ್ಯ ಮತ್ತು ಅಪಘಾತಕ್ಕಾಗಿ.
 *ಲಾಭಮ್ಸಾ* (ಡಿ -11) - ಪತ್ತೆಯಾಗದ ಆದಾಯ, ಲೆಕ್ಕವಿಲ್ಲದ ಹಣ ಮತ್ತು  ಊಹಾಪೋಹಗಳಿಗೆ.
▪️▪️▪️▪️▪️▪️▪️▪️▪️▪️▪️
ಹೀಗೆ ಅನೇಕ ವಿಭಾಗೀಯ ಚಾರ್ಟ್ಗಳಿವೆ 🙏💐.

April 21, 2021

ಜಯ ಜಯ ಜಯ ರಘುವೀರಹರ ಹರ ಹರ ಮಹದೇವ

 ಜಯ ಜಯ ಜಯ ರಘುವೀರ
ಹರ ಹರ ಹರ ಮಹದೇವ|ಪ||

ಪಡುಗಡಲಿನ ತೆರೆ ದಡಗಳ ಬಡಿದು
ಕರೆಯುದ್ದಕು ಜಯಭೇರಿಯ ಹೊಡೆದು
ಹಾಡುತಲಿರುವುದ ನಾವಾಲಿಸುವಾ
ಎಲ್ಲರ ಕಂಠವ ಜತೆಗೂಡಿಸುವಾ ||೧||

ಗಡಗಳ ನಡುವಿನ ಹೆಗ್ಗಾಡಿನಲಿ
ಮೊರೆಯುವ ಬಿರುಗಾಳಿಯ ಹುಯ್ಲಿನಲಿ
ಕಗ್ಗಲ್ಲಿನ ನೀರವ ಸುಯ್ಲಿನಲಿ
ಏನದು ಕೇಳ್ವದು ವನದಲಿಗಳಲಿ ||೨||

ಶಿವನಶ್ವದ ರಣ ಕುಣಿತದ ಗೀತ
ಸ್ವಾಮಿ ಸಮರ್ಥರ ಸುರ ಸಂಗೀತ
ರಣವಾಸಿಯದೀ ವೀರೋದ್ಘೋಷ
ಸನ್ಯಾಸಿಯ ಒಲವಿನ ಹೃದ್ಘೋಷ ||೩||

ಹಿಂದೂ ಸ್ವಾತಂತ್ರ್ಯದ ಕ್ರಾಂತಿಪದ
ಪರಿಚಯ ನುಡಿ ಜಾಗೃತ ಭಾರತದ
ಭೋರಿಡಲಿ ನಿರಾಶೆಯ ಅಡಗಿಸುತ
ವೈರಿಯ ಎದೆ ಗಡಗಡ ನಡುಗಿಸುತ ||೪||

ಜಯ ಜಯ ಮಹಾವೀರ ಮಹಾಧೀರ ಧೌರೇಯ

ಶ್ರೀ ರಾಮ ನವಮಿಯ ಶುಭಾಶಯಗಳು

ಜಯ ಜಯ ಮಹಾವೀರ
ರಘುವೀರ ಗದ್ಯ - ವೇದಾಂತ ದೇಶಿಕಾರ 

ರಘುವೀರ ಗದ್ಯಂ ಅಥವಾ ಶ್ರೀಮಹಾವೀರವೈಭವಮ್ 

ಜಯತ್ಯಾಶ್ರಿತ ಸಂತ್ರಾಸ ಧ್ವಾನ್ತ ವಿಧ್ವಂಸನೋದಯಃ ।
ಪ್ರಭಾವಾನ್ ಸೀತಯಾ ದೇವ್ಯಾ ಪರಮ-ವ್ಯೋಮ ಭಾಸ್ಕರಃ ॥

ಜಯ ಜಯ ಮಹಾವೀರ !
ಮಹಾಧೀರ ಧೌರೇಯ !
ದೇವಾಸುರ ಸಮರ ಸಮಯ ಸಮುದಿತ ನಿಖಿಲ ನಿರ್ಜರ ನಿರ್ಧಾರಿತ
ನಿರವಧಿಕಮಾಹಾತ್ಮ್ಯ !
ದಶವದನ ದಮಿತ ದೈವತ ಪರಿಷದಭ್ಯರ್ಥಿತ ದಾಶರಥಿ-ಭಾವ !
ದಿನಕರ ಕುಲ ಕಮಲ ದಿವಾಕರ !
ದಿವಿಷದಧಿಪತಿ ರಣ ಸಹಚರಣ ಚತುರ ದಶರಥ ಚರಮಋಣ ವಿಮೋಚನ !
ಕೋಮಲಸುತಾ ಕುಮಾಅಭಾವ ಕಂಚು ಕಿತ ಕಾರಣಾಕಾರ !
ಕೌಮಾರ ಕೇಳಿ ಗೋಪಾಯಿತ ಕೌಶಿಕಾಧ್ವರ
ರಣಾಧ್ವರ ಧುರ್ಯ ಭವ್ಯ ದಿವ್ಯಾಸ್ತ್ರ ಬೃನ್ದ ವನ್ದಿತ !
ಪ್ರಣತ ಜನ ವಿಮತ ವಿಮಥನ ದುರ್ಲಲಿತದೋರ್ಲಲಿತ !
ತನುತರ ವಿಶಿಖ ವಿತಾಡನ ವಿಘಟಿತ ವಿಶರಾರು ಶರಾರು
ತಾಟಕಾ ತಾಟಕೇಯ !
ಜಡ-ಕಿರಣ ಶಕಲ-ಧರಜಟಿಲ ನಟ ಪತಿ-ಮಕುಟ ನಟನ-ಪಟು
ವಿಬುಧ-ಸರಿದ್-ಅತಿ-ಬಹುಲ ಮಧು-ಗಲನ ಲಲಿತ-ಪದ
ನಲಿನ-ರಜ-ಉಪ-ಮೃದಿತ ನಿಜ-ವೃಜಿನ ಜಹದುಪಲ-ತನು-ರುಚಿರ
ಪರಮ-ಮುನಿ ವರ-ಯುವತಿ ನುತ !
ಕುಶಿಕ-ಸುತಕಥಿತ ವಿದಿತ ನವ ವಿವಿಧ ಕಥ !
ಮೈಥಿಲ ನಗರ ಸುಲೋಚನಾ ಲೋಚನ ಚಕೋರ ಚನ್ದ್ರ !
ಖಂಡ-ಪರಶು ಕೋದಂಡ ಪ್ರಕಾಂಡ ಖಂಡನ ಶೌಂಡ ಭುಜ-ದಂಡ !
ಚಂಡ-ಕರ ಕಿರಣ-ಮಂಡಲ ಬೋಧಿತ ಪುಂಡರೀಕ ವನ ರುಚಿ ಲುಂಟಾಕ ಲೋಚನ !
ಮೋಚಿತ ಜನಕ ಹೃದಯ ಶಂಕಾತಂಕ !
ಪರಿಹೃತ ನಿಖಿಲ ನರಪತಿ ವರಣ ಜನಕ-ದುಹಿತ ಕುಚ-ತಟ ವಿಹರಣ
ಸಮುಚಿತ ಕರತಲ !
ಶತಕೋಟಿ ಶತಗುಣ ಕಠಿನ ಪರಶು ಧರ ಮುನಿವರ ಕರ ಧೃತ
ದುರವನಮ-ತಮ-ನಿಜ ಧನುರಾಕರ್ಷಣ ಪ್ರಕಾಶಿತ ಪಾರಮೇಷ್ಠ್ಯ !
ಕ್ರತು-ಹರ ಶಿಖರಿ ಕನ್ತುಕ ವಿಹೃತಿಮುಖ ಜಗದರುನ್ತುದ
ಜಿತಹರಿದನ್ತ-ದನ್ತುರೋದನ್ತ ದಶ-ವದನ ದಮನ ಕುಶಲ ದಶ-ಶತ-ಭುಜ
ನೃಪತಿ-ಕುಲ-ರುಧಿರಝರ ಭರಿತ ಪೃಥುತರ ತಟಾಕ ತರ್ಪಿತ
ಪಿತೃಕ ಭೃಗು-ಪತಿ ಸುಗತಿ-ವಿಹತಿ ಕರ ನತ ಪರುಡಿಷು ಪರಿಘ !
ಅನೃತ ಭಯ ಮುಷಿತ ಹೃದಯ ಪಿತೃ ವಚನ ಪಾಲನ ಪ್ರತಿಜ್ಞಾವಜ್ಞಾತ
ಯೌವರಾಜ್ಯ !
ನಿಷಾದ ರಾಜ ಸೌಹೃದ ಸೂಚಿತ ಸೌಶೀಲ್ಯ ಸಾಗರ !
ಭರದ್ವಾಜ ಶಾಸನಪರಿಗೃಹೀತ ವಿಚಿತ್ರ ಚಿತ್ರಕೂಟ ಗಿರಿ ಕಟಕ
ತಟ ರಮ್ಯಾವಸಥ !
ಅನನ್ಯ ಶಾಸನೀಯ !
ಪ್ರಣತ ಭರತ ಮಕುಟತಟ ಸುಘಟಿತ ಪಾದುಕಾಗ್ರ್ಯಾಭಿಷೇಕ ನಿರ್ವರ್ತಿತ
ಸರ್ವಲೋಕ ಯೋಗಕ್ಷೇಮ !
ಪಿಶಿತ ರುಚಿ ವಿಹಿತ ದುರಿತ ವಲ-ಮಥನ ತನಯ ಬಲಿಭುಗನು-ಗತಿ ಸರಭಸಶಯನ ತೃಣ
ಶಕಲ ಪರಿಪತನ ಭಯ ಚರಿತ ಸಕಲ ಸುರಮುನಿ-ವರ-ಬಹುಮತ ಮಹಾಸ್ತ್ರ ಸಾಮರ್ಥ್ಯ !
ದ್ರುಹಿಣ ಹರ ವಲ-ಮಥನ ದುರಾಲಕ್ಷ್ಯ ಶರ ಲಕ್ಷ್ಯ !
ದಂಡಕಾ ತಪೋವನ ಜಂಗಮ ಪಾರಿಜಾತ !
ವಿರಾಧ ಹರಿಣ ಶಾರ್ದೂಲ !
ವಿಲುಲಿತ ಬಹುಫಲ ಮಖ ಕಲಮ ರಜನಿ-ಚರ ಮೃಗ ಮೃಗಯಾನಮ್ಭ
ಸಂಭೃತಚೀರಭೃದನುರೋಧ !
ತ್ರಿಶಿರಃ ಶಿರಸ್ತ್ರಿತಯ ತಿಮಿರ ನಿರಾಸ ವಾಸರ-ಕರ !
ದೂಷಣ ಜಲನಿಧಿ ಶೋಶಾಣ ತೋಷಿತ ಋಷಿ-ಗಣ ಘೋಷಿತ ವಿಜಯ ಘೋಷಣ !
ಖರತರ ಖರ ತರು ಖಂಡನ ಚಂಡ ಪವನ !
ದ್ವಿಸಪ್ತ ರಕ್ಷಃ-ಸಹಸ್ರ ನಲ-ವನ ವಿಲೋಲನ ಮಹಾ-ಕಲಭ !
ಅಸಹಾಯ ಶೂರ !
ಅನಪಾಯ ಸಾಹಸ !
ಮಹಿತ ಮಹಾ-ಮೃಥ ದರ್ಶನ ಮುದಿತ ಮೈಥಿಲೀ ದೃಢ-ತರ ಪರಿರಮ್ಭಣ
ವಿಭವವಿರೋಪಿತ ವಿಕಟ ವೀರವ್ರಣ !
ಮಾರೀಚ ಮಾಯಾ ಮೃಗ ಚರ್ಮ ಪರಿಕರ್ಮಿತ ನಿರ್ಭರ ದರ್ಭಾಸ್ತರಣ !
ವಿಕ್ರಮ ಯಶೋ ಲಾಭ ವಿಕ್ರೀತ ಜೀವಿತ ಗೃಘ್ರ-ರಾಜದೇಹ ದಿಧಕ್ಷಾ
ಲಕ್ಷಿತ-ಭಕ್ತ-ಜನ ದಾಕ್ಷಿಣ್ಯ !
ಕಲ್ಪಿತ ವಿಬುಧ-ಭಾವ ಕಬನ್ಧಾಭಿನನ್ದಿತ !
ಅವನ್ಧ್ಯ ಮಹಿಮ ಮುನಿಜನ ಭಜನ ಮುಷಿತ ಹೃದಯ ಕಲುಷ ಶಬರೀ
ಮೋಕ್ಷಸಾಕ್ಷಿಭೂತ !
ಪ್ರಭಂಜನ-ತನಯ ಭಾವುಕ ಭಾಷಿತ ರಂಜಿತ ಹೃದಯ !
ತರಣಿ-ಸುತ ಶರಣಾಗತಿಪರತನ್ತ್ರೀಕೃತ ಸ್ವಾತನ್ತ್ರ್ಯ !
ದೃಢ ಘಟಿತ ಕೈಲಾಸ ಕೋಟಿ ವಿಕಟ ದುನ್ದುಭಿ ಕಂಕಾಲ ಕೂಟ ದೂರ ವಿಕ್ಷೇಪ
ದಕ್ಷ-ದಕ್ಷಿಣೇತರ ಪಾದಾಂಗುಷ್ಠ ದರ ಚಲನ ವಿಶ್ವಸ್ತ ಸುಹೃದಾಶಯ !
ಅತಿಪೃಥುಲ ಬಹು ವಿಟಪಿ ಗಿರಿ ಧರಣಿ ವಿವರ ಯುಗಪದುದಯ ವಿವೃತ ಚಿತ್ರಪುಂಗ ವೈಚಿತ್ರ್ಯ !
ವಿಪುಲ ಭುಜ ಶೈಲ ಮೂಲ ನಿಬಿಡ ನಿಪೀಡಿತ ರಾವಣ ರಣರಣಕ ಜನಕ ಚತುರುದಧಿ
ವಿಹರಣ ಚತುರ ಕಪಿ-ಕುಲ ಪತಿ ಹೃದಯ ವಿಶಾಲ ಶಿಲಾತಲ-ದಾರಣ ದಾರುಣ ಶಿಲೀಮುಖ !
ಅಪಾರ ಪಾರಾವಾರ ಪರಿಖಾ ಪರಿವೃತ ಪರಪುರ ಪರಿಸೃತ ದವ ದಹನ
ಜವನ-ಪವನ-ಭವ ಕಪಿವರ ಪರಿಷ್ವಂಗ ಭಾವಿತ ಸರ್ವಸ್ವ ದಾನ !
ಅಹಿತ ಸಹೋದರ ರಕ್ಷಃ ಪರಿಗ್ರಹ ವಿಸಂವಾದಿವಿವಿಧ ಸಚಿವ ವಿಪ್ರಲಮ್ಭ ಸಮಯ
ಸಂರಮ್ಭ ಸಮುಜ್ಜೃಮ್ಭಿತ ಸರ್ವೇಶ್ವರ ಭಾವ !
ಸಕೃತ್ಪ್ರಪನ್ನ ಜನ ಸಂರಕ್ಷಣ ದೀಕ್ಷಿತ !
ವೀರ !
ಸತ್ಯವ್ರತ !
ಪ್ರತಿಶಯನ ಭೂಮಿಕಾ ಭೂಷಿತ ಪಯೋಧಿ ಪುಲಿನ !
ಪ್ರಲಯ ಶಿಖಿ ಪರುಷ ವಿಶಿಖ ಶಿಖಾ ಶೋಷಿತಾಕೂಪಾರ ವಾರಿ ಪೂರ !
ಪ್ರಬಲ ರಿಪು ಕಲಹ ಕುತುಕ ಚಟುಲ ಕಪಿ-ಕುಲ ಕರ-ತಲತುಲಿತ ಹೃತ ಗಿರಿನಿಕರ ಸಾಧಿತ
ಸೇತು-ಪಧ ಸೀಮಾ ಸೀಮನ್ತಿತ ಸಮುದ್ರ !
ದ್ರುತ ಗತಿ ತರು ಮೃಗ ವರೂಥಿನೀ ನಿರುದ್ಧ ಲಂಕಾವರೋಧ ವೇಪಥು ಲಾಸ್ಯ ಲೀಲೋಪದೇಶ
ದೇಶಿಕ ಧನುರ್ಜ್ಯಾಘೋಷ !
ಗಗನ-ಚರ ಕನಕ-ಗಿರಿ ಗರಿಮ-ಧರ ನಿಗಮ-ಮಯ ನಿಜ-ಗರುಡ ಗರುದನಿಲ ಲವ ಗಲಿತ
ವಿಷ-ವದನ ಶರ ಕದನ !
ಅಕೃತ ಚರ ವನಚರ ರಣ ಕರಣ ವೈಲಕ್ಷ್ಯ ಕೂಣಿತಾಕ್ಷ ಬಹುವಿಧ ರಕ್ಷೋ
ಬಲಾಧ್ಯಕ್ಷ ವಕ್ಷಃ ಕವಾಟ ಪಾಟನ ಪಟಿಮ ಸಾಟೋಪ ಕೋಪಾವಲೇಪ !
ಕಟುರಟದ್ ಅಟನಿ ಟಂಕೃತಿ ಚಟುಲ ಕಠೋರ ಕಾರ್ಮುಕ !
ವಿಶಂಕಟ ವಿಶಿಖ ವಿತಾಡನ ವಿಘಟಿತ ಮಕುಟ ವಿಹ್ವಲ ವಿಶ್ರವಸ್ತನಯವಿಶ್ರಮ
ಸಮಯ ವಿಶ್ರಾಣನ ವಿಖ್ಯಾತ ವಿಕ್ರಮ !
ಕುಮ್ಭಕರ್ಣ ಕುಲ ಗಿರಿ ವಿದಲನ ದಮ್ಭೋಲಿ ಭೂತ ನಿಃಶಂಕ ಕಂಕಪತ್ರ !
ಅಭಿಚರಣ ಹುತವಹ ಪರಿಚರಣ ವಿಘಟನ ಸರಭಸ ಪರಿಪತದ್ ಅಪರಿಮಿತಕಪಿಬಲ
ಜಲಧಿಲಹರಿ ಕಲಕಲ-ರವ ಕುಪಿತ ಮಘವ-ಜಿದಭಿಹನನ-ಕೃದನುಜ ಸಾಕ್ಷಿಕ
ರಾಕ್ಷಸ ದ್ವನ್ದ್ವ-ಯುದ್ಧ !
ಅಪ್ರತಿದ್ವನ್ದ್ವ ಪೌರುಷ !
ತ್ರ ಯಮ್ಬಕ ಸಮಧಿಕ ಘೋರಾಸ್ತ್ರಾಡಮ್ಬರ !
ಸಾರಥಿ ಹೃತ ರಥ ಸತ್ರಪ ಶಾತ್ರವ ಸತ್ಯಾಪಿತ ಪ್ರತಾಪ !
ಶಿತಶರಕೃತಲವನದಶಮುಖ ಮುಖ ದಶಕ ನಿಪತನ ಪುನರುದಯ ದರಗಲಿತ ಜನಿತ
ದರ ತರಲ ಹರಿ-ಹಯ ನಯನ ನಲಿನ-ವನ ರುಚಿ-ಖಚಿತ ನಿಪತಿತ ಸುರ-ತರು ಕುಸುಮ ವಿತತಿ
ಸುರಭಿತ ರಥ ಪಥ !
ಅಖಿಲ ಜಗದಧಿಕ ಭುಜ ಬಲ ವರ ಬಲ ದಶ-ಲಪನ ಲಪನ ದಶಕ ಲವನ-ಜನಿತ ಕದನ
ಪರವಶ ರಜನಿ-ಚರ ಯುವತಿ ವಿಲಪನ ವಚನ ಸಮವಿಷಯ ನಿಗಮ ಶಿಖರ ನಿಕರ
ಮುಖರ ಮುಖ ಮುನಿ-ವರ ಪರಿಪಣಿತ!
ಅಭಿಗತ ಶತಮಖ ಹುತವಹ ಪಿತೃಪತಿ ನಿರೃತಿ ವರುಣ ಪವನ ಧನದಗಿರಿಶಪ್ರಮುಖ
ಸುರಪತಿ ನುತಿ ಮುದಿತ !
ಅಮಿತ ಮತಿ ವಿಧಿ ವಿದಿತ ಕಥಿತ ನಿಜ ವಿಭವ ಜಲಧಿ ಪೃಷತ ಲವ !
ವಿಗತ ಭಯ ವಿಬುಧ ವಿಬೋಧಿತ ವೀರ ಶಯನ ಶಾಯಿತ ವಾನರ ಪೃತನೌಘ !
ಸ್ವ ಸಮಯ ವಿಘಟಿತ ಸುಘಟಿತ ಸಹೃದಯ ಸಹಧರ್ಮಚಾರಿಣೀಕ !
ವಿಭೀಷಣ ವಶಂವದೀ-ಕೃತ ಲಂಕೈಶ್ವರ್ಯ !
ನಿಷ್ಪನ್ನ ಕೃತ್ಯ !
ಖ ಪುಷ್ಪಿತ ರಿಪು ಪಕ್ಷ !
ಪುಷ್ಪಕ ರಭಸ ಗತಿ ಗೋಷ್ಪದೀ-ಕೃತ ಗಗನಾರ್ಣವ !
ಪ್ರತಿಜ್ಞಾರ್ಣವ ತರಣ ಕೃತ ಕ್ಷಣ ಭರತ ಮನೋರಥ ಸಂಹಿತ ಸಿಂಹಾಸನಾಧಿರೂಢ !
ಸ್ವಾಮಿನ್ !
ರಾಘವ ಸಿಂಹ !
ಹಾಟಕ ಗಿರಿ ಕಟಕ ಲಡಹ ಪಾದ ಪೀಠ ನಿಕಟ ತಟ ಪರಿಲುಠಿತ ನಿಖಿಲನೃಪತಿ ಕಿರೀಟ
ಕೋಟಿ ವಿವಿಧ ಮಣಿ ಗಣ ಕಿರಣ ನಿಕರ ನೀರಾಜಿತಚರಣ ರಾಜೀವ !
ದಿವ್ಯ ಭೌಮಾಯೋಧ್ಯಾಧಿದೈವತ !
ಪಿತೃ ವಧ ಕುಪಿತ ಪರಶು-ಧರ ಮುನಿ ವಿಹಿತ ನೃಪ ಹನನ ಕದನ ಪೂರ್ವಕಾಲಪ್ರಭವ
ಶತ ಗುಣ ಪ್ರತಿಷ್ಠಾಪಿತ ಧಾರ್ಮಿಕ ರಾಜ ವಂಶ !
ಶುಚ ಚರಿತ ರತ ಭರತ ಖರ್ವಿತ ಗರ್ವ ಗನ್ಧರ್ವ ಯೂಥ ಗೀತ ವಿಜಯ ಗಾಥಾಶತ !
ಶಾಸಿತ ಮಧು-ಸುತ ಶತ್ರುಘ್ನ ಸೇವಿತ !
ಕುಶ ಲವ ಪರಿಗೃಹೀತ ಕುಲ ಗಾಥಾ ವಿಶೇಷ !
ವಿಧಿ ವಶ ಪರಿಣಮದಮರ ಭಣಿತಿ ಕವಿವರ ರಚಿತ ನಿಜ ಚರಿತನಿಬನ್ಧನ ನಿಶಮನ
ನಿರ್ವೃತ !
ಸರ್ವ ಜನ ಸಮ್ಮಾನಿತ !
ಪುನರುಪಸ್ಥಾಪಿತ ವಿಮಾನ ವರ ವಿಶ್ರಾಣನ ಪ್ರೀಣಿತ ವೈಶ್ರವಣ ವಿಶ್ರಾವಿತ ಯಶಃ
ಪ್ರಪಂಚ !
ಪಂಚತಾಪನ್ನ ಮುನಿಕುಮಾರ ಸಂಜೀವನಾಮೃತ !
ತ್ರೇತಾಯುಗ ಪ್ರವರ್ತಿತ ಕಾರ್ತಯುಗ ವೃತ್ತಾನ್ತ !
ಅವಿಕಲ ಬಹುಸುವರ್ಣ ಹಯ-ಮಖ ಸಹಸ್ರ ನಿರ್ವಹಣ ನಿರ್ವ ರ್ತಿತ
ನಿಜವರ್ಣಾಶ್ರಮ ಧರ್ಮ !
ಸರ್ವ ಕರ್ಮ ಸಮಾರಾಧ್ಯ !
ಸನಾತನ ಧರ್ಮ !
ಸಾಕೇತ ಜನಪದ ಜನಿ ಧನಿಕ ಜಂಗಮ ತದಿತರ ಜನ್ತು ಜಾತ ದಿವ್ಯ ಗತಿ ದಾನ ದರ್ಶಿತ ನಿತ್ಯ
ನಿಸ್ಸೀಮ ವೈಭವ !
ಭವ ತಪನ ತಾಪಿತ ಭಕ್ತಜನ ಭದ್ರಾರಾಮ !
ಶ್ರೀ ರಾಮಭದ್ರ !
ನಮಸ್ತೇ ಪುನಸ್ತೇ ನಮಃ ॥

ಚತುರ್ಮುಖೇಶ್ವರಮುಖೈಃ ಪುತ್ರ ಪೌತ್ರಾದಿ ಶಾಲಿನೇ ।
ನಮಃ ಸೀತಾ ಸಮೇತಾಯ ರಾಮಾಯ ಗೃಹಮೇಧಿನೇ ॥

ಕವಿಕಥಕ ಸಿಂಹಕಥಿತಂ
ಕಠೋತ ಸುಕುಮಾರ ಗುಮ್ಭ ಗಮ್ಭೀರಮ್ ।
ಭವ ಭಯ ಭೇಷಜಮೇತತ್
ಪಠತ ಮಹಾವೀರ ವೈಭವಂ ಸುಧಿಯಃ ॥

ಸಂಗ್ರಹ: ವೇ ಶ್ರೀ ಚನ್ನೇಶ ಶಾಸ್ತ್ರಿಗಳು©
ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು

ರಹೂಗಣ ಅಥವಾ ರಾಹೂಗಣ

ರಹೂಗಣ ಅಥವಾ ರಾಹೂಗಣ

ಆಂಗಿರಸ ಋಷಿಯ ವಂಶಸ್ಥರೋ ಅಥವಾ ಅವರ ಪರಂಪರೆಯಲ್ಲಿ ಬಂದ ಪ್ರಮುಖರಲ್ಲಿ ಅಯಾಸ್ಯ ಉಚಥ್ಯ ಕುತ್ಸ ಪುರುಮೀಳ್ಹ ರಹೂಗಣ ಎನ್ನುವವನು ಸಹ ಇದೇ ವಂಶದಲ್ಲಿ ಬರುವುದು. ಇವರನ್ನು ಆಂಗಿರಸಃ ಅಭಿವರ್ತಃ ಎಂದು ಕರೆಯುವ ರೂಢಿ. ಇನ್ನು ಕೆಲವೊಮ್ಮೆ ಅಭೀವರ್ತ ಆಂಗಿರಸ ಎಂದು ಕರೆಯಲಾಗುತ್ತದೆ. ಅದೇನೇ ಇರಲಿ ಈ ರಹೂಗಣ ಎನ್ನುವ ಹೆಸರಿನ ಋಷಿಯನ್ನು ರಾಹೂಗಣ ಎಂದೂ ಸಹ ಕರೆಯುತ್ತಾರೆ. ಈ ರಾಹೂಗಣನ ಮಗನೇ ಗೋತಮ. ಈ ಗೋತಮನು ಸಹ ಪ್ರಸಿದ್ಧನಾಗಿದ್ದ. ಎಲ್ಲ ಕಡೆ ಗೋತಮೋ ರಾಹೂಗಣಃ ಅಥವಾ ಗೋತಮೋ ರಹೂಗಣಃ ಎಂದು ಕರೆಸಿಕೊಂಡವನು. ಭರದ್ವಾಜ, ಕಶ್ಯಪ, ಗೋತಮ, ಅತ್ರಿ, ವಿಶ್ವಾಮಿತ್ರ, ಜಮದಗ್ನಿ, ವಶಿಷ್ಠರೆನ್ನುವ ಸಪ್ತರ್ಷಿಗಳ ಸಾಲಿನಲ್ಲಿ  ಸೇರಿರುವ ಗೋತಮ ಅನೇಕ ಸೂಕ್ತಗಳ ದೃಷ್ಟಾರ. ಋಗ್ವೇದದ ೧೦ನೇ ಮಂಡಲದ ೧೩೭ನೇ ಸೂಕ್ತ ಸಪ್ತರ್ಷಿಗಳದ್ದು. ಅಲ್ಲಿ ಮೂರನೇ ಋಕ್ಕನ್ನು ಕೊಟ್ಟವರು ಇದೇ ಗೋತಮರು. ಉತ ದೇವಾಃ ಎನ್ನುವ ಈ ಸೂಕ್ತವನ್ನು ಪಠಿಸಿದರೆ ರೋಗದಿಂದ ನರಳುತ್ತಿದ್ದು ಘನ ಮತ್ತು ದ್ರವಾಹಾರಗಳನ್ನೂ ಸಹ ಸೇವಿಸುವುದನ್ನು ನಿಲ್ಲಿಸಿದ್ದರೆ (ಅಜೀರ್ಣರೋಗ) ಅಂತಹ ರೋಗ ಶಮನವಾಗುತ್ತದೆ ಎನ್ನಲಾಗಿದೆ. ಅದರ ಕ್ರಮವನ್ನು ಋಗ್ವಿಧಾನದ ೪ನೇ ಅಧ್ಯಾಯದ ೪೬ ರಿಂದ ೪೯ ನೇ ಶ್ಲೋಕದಲ್ಲಿ ವಿವರಿಸಲಾಗಿದೆ. ಇನ್ನು ರಾಹೂಗಣರ ಮಗನಾದ ಗೋತಮರ ಒಂದು ಸೂಕ್ತ ಋಗ್ವೇದ ಒಂದನೇ ಮಡಲದ ೭೮ನೇ ಸೂಕ್ತ. ಅಲ್ಲಿ ಅಗ್ನಿಯನ್ನು ಸ್ತುತಿಸುತ್ತಾ ಅವೋಚಾಮ ರಹೂಗಣಾ ಅಗ್ನಯೇ ಎಂದು ರಹೂಗಣನ ಹೆಸರು ಪ್ರಸ್ತಾಪಿಸಿದ್ದಾರೆ. ಇನ್ನು ಋಗ್ವೇದದ ಒಂದನೇ ಮಂಡಲದ ೯೨ನೇ ಸೂಕ್ತಕ್ಕೆ ಗೋತಮನೇ ಋಷಿಯು. ಆದರೆ ಗೌತಮ ಬೇರೆ. ಕಾಲಮಾನವೂ ಬೇರೆ. 

ಇನ್ನು ನೋಡುವುದಾದರೆ ವಾಜಸನೇಯೀ ಸಂಹಿತೆಯಲ್ಲಿ ಕುರು ಸೃಂಜಯಾನಾಂ ಪುರೋಹಿತ ಆಸೀತ್ ಎಂದು ಬರುತ್ತದೆ. ಅಂದರೆ ಕುರು ಮತ್ತು ಸೃಂಜಯ ಎನ್ನುವ ಜನಾಂಗದ ರಾಜರುಗಳಿಗೆ ಪುರೋಹಿತರಾಗಿದ್ದರು. ಋಗ್ವೇದ ೧ನೇ ಮಂಡಲದ ೮೧ನೇ ಸೂಕ್ತದಲ್ಲಿ ಈ ವಂಶದ ರಾಜರ ಯುದ್ಧಗಲ ಜಯಕ್ಕಾಗಿ ಇಂದ್ರನನ್ನು ಪ್ರಾರ್ಥಿಸುತ್ತಾರೆ. ಇಂದ್ರನನ್ನು ಪ್ರಸನ್ನಗೊಳಿಸಿ ಯುದ್ಧದಲ್ಲಿ ಜಯ ಲಭಿಸುವಂತೆ ಮಾಡುತ್ತಾರೆ ಎನ್ನುವುದು ಸಾಯಣ ಭಾಷ್ಯದಲ್ಲಿ.

ಇನ್ನು ಇದೇ ರಾಹೂಗಣ ಮತ್ತು ಗೋತಮನು ವದೀಘಮಾಥವ ಎನ್ನುವ ರಾಜನಿಗೂ ಪುರೋಹಿತನಾಗಿದ್ದನು. ಈ ವಿದೇಘಮಾಥವ ಎನ್ನುವವನು ಮಥು ಎನ್ನುವ ವಂಶೀಯನು. ಈತನ ಕುರಿತಾಗಿ ಬ್ರಾಹ್ಮಣಗಳಲ್ಲಿ ಬರುವ ಒಂದು ಕಥೆ ಹೀಗಿದೆ. ವಿದೇಘ ಒಮ್ಮೆ ಅಗ್ನಿಯನ್ನು ತನ್ನ ಬಾಯಿಯಲ್ಲಿ ಹಾಕಿಕೊಂಡು ಅದು ಹೊರಗೆ ಬರಬಾರದು ಎನ್ನುವ ಉದ್ದೇಶದಿಂದ ಬಾಯಿ ಮುಚ್ಚಿಕೊಂಡಿರುತ್ತಿದ್ದ. ಮೌನವನ್ನು ಆಶ್ರಯಿಸಿದ್ದ. ಮಾತನಾಡಿದರೆ ಅಗ್ನಿ ಎಲ್ಲಿಯಾದರೂ ಹೊರಗೆ ಹಾರಿ ಹೊರಟು ಹೋಗಬಹುದೆನ್ನುವ ಭಯ ಆತನನ್ನು ಆವರಿಸಿತ್ತು. ಪುರೋಹಿತನಾಗಿದ್ದ ರಾಹೂಗಣ ಎಷ್ಟು ಪ್ರಯತ್ನ ಮಾಡಿದರೂ ಅಗ್ನಿಯನ್ನು ಹೊರತರಲು ಸಾಧ್ಯವಾಗುವುದಿಲ್ಲ. ರಾಜ ಬಾಯಿ ಬಿಡುತ್ತಿಲ್ಲ. ಅಗ್ನಿ ಹೊರಗೆ ಬರಲಾಗುತ್ತಿಲ್ಲ. ಒಂದು ದಿನ ಅಚಾನಕ್ಕಾಗಿ ರಾಹೂಗಣನ ಬಾಯಿಯಿಂದ ಘೃತ ಎನ್ನು ಪದ ಹೊರಬರುತ್ತದೆ. ತಕ್ಷಣವೇ ರಾಜನ ಬಾಯಿಯಲ್ಲಿದ್ದ ಅಗ್ನಿ ಸಿಡಿಯುತ್ತದೆ ಸ್ಫೋಟದ ರೂಪ ಪಡೆದು ಹೊರ ಬರುತ್ತದೆ. ಅಗ್ನಿ ಕೆನ್ನಾಲಿಗೆ ಚಾಚಿ ಇಡೀ ಪ್ರಪಂಚವನ್ನೇ ಸುಡುತ್ತಾನೋ ಎನ್ನುವ ರೀತಿಯಲ್ಲಿ ಹೊರಕ್ಕೆ ಬಂದು ಸುಡಲಾರಂಭಿಸುತ್ತಾನೆ. ಗಾಳಿಯೂ ಬಿಸಿಯೇರುತ್ತದೆ. ಅನೇಕ ನದಿಗಳು ಒಣಗಿ ಹೋಗುತ್ತವೆ. ಅವನ ಇಡೀ ಆಡಳಿತ ಪ್ರದೇಶ ನಾಶವಾಗುತ್ತದೆ. ರಾಹೂಗಣ ಮತ್ತು ವಿದೇಘನೂ ಕೆನ್ನಾಲಿಗೆಗೆ ಸಿಲುಕಿಕೊಳ್ಳುತ್ತಾರೆ ಅವರೂ ಭಸ್ಮವಾಗುತ್ತಿದ್ದರು. ಅಷ್ಟರಲ್ಲಿಯೇ ಆತನ ರಾಜ್ಯದ ಗಡಿಯಲ್ಲಿರುವ ಸದಾನೀರ ಎನ್ನುವ ನದಿಯಲ್ಲಿ ಅಡಗಿಕೊಳ್ಳುತ್ತಾರೆ. ಆಗ ಅಗ್ನಿಯು ತನ್ನ ಜ್ವಾಲೆಯನ್ನು ಕಡಿಮೆ ಗೊಳಿಸುತ್ತಾನೆ ಎನ್ನುವುದು ಶತಪಥ ಬ್ರಾಹ್ಮಣ. ಪ್ರಾಯಶಃ ಆ ನದಿಯ ನೀರನ್ನು ಹಾಯಿಸಿ ಅಗ್ನಿಶಮನ ಮಾಡಿರಬಹುದು. ಹೀಗೇ ರಹೂಗಣ ಮತ್ತು ರಾಹೂಗಣ ಎರಡೂ ಪದ ಪ್ರಯೋಗ ಸಿಗುತ್ತದೆ ಆದರೆ ಗೋತಮರಹೂಗಣನ ವಂಶೀಯನೂ, ಗೌತಮ ನೋಧಾ ಎಂದು ಕರೆಯಲ್ಪಡುತ್ತದೆ.

#ಕುರು_
ಸದ್ಯೋಜಾತರು

April 19, 2021

ಅಗ್ನಿ-ಅಂಗಿರಾ

ಅಂಗಿರಃ ಎನ್ನುವುದು ಪ್ರಮುಖವಾಗಿ ಅಗ್ನಿಯನ್ನು ಕುರಿತಾಗಿ ಹೇಳುವ ಪದ. ಅಂಗಾರಃ ಎನ್ನುವುದು ಅಗ್ನಿಯಿಂದ ಉಂಟಾದ ಕೆಂಡವನ್ನು ಕುರಿತಾಗಿ ಹೇಳಿವುದು. ಐತರೇಯ ಬ್ರಾಹ್ಮಣದಲ್ಲಿ "ಯೇಙ್ಗಾರಾ ಆ ಸಂಸ್ತೇಙ್ಗಿರಸೋ ಭವನ್" ಎಂದು ಬಂದಿದೆ. ಅಗ್ನಿಗೆ ಸಂಬಂಧಿಸಿದ ಅಂಗಾರಗಳು(ಕೆಂಡಗಳು) ಅಂಗಿರಸರೆನ್ನುವ ಹೆಸರನ್ನು ಪಡೆದವು ಎಂದು ಪ್ರಜಾಪತಿದುಹಿತೃಧ್ಯಾನೋಪಾಖ್ಯಾನದಲ್ಲಿ ಬರುತ್ತದೆ.
ಒಮ್ಮೆ ಪ್ರಜಾಪತಿಯು ತನ್ನ ಮಗಳನ್ನು ಕೆಟ್ಟ(ಕಾಮುಕ) ಭಾವನೆಯಿಂದ ಮನಸ್ಸಿನಲ್ಲಿ ಧ್ಯಾನಿಸುತ್ತಾನೆ. ಇದು ದೇವತೆಗಳ ಗಮನಕ್ಕೆ ಬರುತ್ತದೆ. ಆಗ ಅದನ್ನು ಹೇಗಾದರೂ ಮಾಡಿ ತಡೆಯಬೇಕೆಂದು ಯೋಚಿಸುತ್ತಾರೆ. ಆದರೆ ಈ ಕೆಲಸ ಮಾಡುವಷ್ಟು ಶಕ್ತಿ ಅವರಲ್ಲಿ ಇರಲಿಲ್ಲ. ದೇವತೆಗಳೆಲ್ಲಾ ಸೇರಿ ತಮ್ಮಲ್ಲಿರುವ ಘೋರವಾದ ಶಕ್ತಿಯನ್ನು ಒಂದು ಮಾಡಿ ಒಂದು "ರುದ್ರ" ಎನ್ನುವ ದೇವನನ್ನು ಗುರುತಿಸುತ್ತಾರೆ. ಆ ರುದ್ರನಲ್ಲಿ ಪ್ರಜಾಪತಿಯನ್ನು ಶಿಕ್ಷಿಸಲು ವಿನಂತಿಸಿಕೊಳ್ಳುತ್ತಾರೆ. ಆಗ ಇದನ್ನು ಗಮನಿಸಿದ ಪ್ರಜಾಪತಿಯು ಹೆದರಿಕೊಂಡು ಮೃಗರೂಪವನ್ನು ಧರಿಸಿ ಅಂತರಿಕ್ಷಕ್ಕೆ ನೆಗೆಯುತ್ತಾನೆ. ಅದೇ ಇಂದಿಗೂ ಕಾಣಿಸಿಕೊಳ್ಳುತ್ತಿರುವ ಮೃಗ ನಕ್ಷತ್ರ ಅಥವಾ ಮೃಗಶಿರಾ. ಆಗ ರುದ್ರನು ಆರ್ದ್ರಾ ನಕ್ಷತ್ರವಾಗಿ ನೆಗೆದು ಮೃಗಶಿರಾ ನಕ್ಷತ್ರದ ಪ್ರಜಾಪತಿಯ ಮೇಲೆ ಬಾಣ ಪ್ರಯೋಗಿಸುತ್ತಾನೆ. ಆದರೆ ಅದಾಗಲೇ ಬೃಹಸ್ಪತಿಯ ವೀರ್ಯಸ್ಖಲನವಾಗುತ್ತದೆ. ಅದನ್ನು ಮರುತ್ತುಗಳು ಬೇರೆ ಬೇರೆ ಕಡೆ ಹರಡಿ ಭಸ್ಮ ಮಾಡುತ್ತವೆ. ಆ ವೀರ್ಯದಿಂದ ಮೊದಲು ಆದಿತ್ಯನೂ, ಆಮೇಲೆ ಭೃಗುರ್ವಾರುಣಿಯೂ ಜನಿಸುತ್ತಾರೆ. ಉಳಿದ ಅಂಗಾರಗಳಿಂದ ಅಂಗಿರಸರೆನ್ನುವವರು ಹುಟ್ಟಿಕೊಳ್ಳುತ್ತಾರೆ. ಹೀಗೆ ಅಂಗಿರಸರು ಕೆಂಡದಿಂದಲೇ ಜನ್ಮ ತಳೆದಿದ್ದು ತಿಳಿಯುತ್ತದೆ. 

ವೇದಗಳಲ್ಲಿ ಅಂಗಿರ ಎನ್ನುವವರು ಬಹು ಪ್ರಾಚೀನ ಮತ್ತು ಅಷ್ಟೇ ಮಹತ್ವವನ್ನು ಪಡೆದವರು. ಅನೇಕ ಪ್ರಸಿದ್ಧರಾದ ಋಷಿಗಳಿಗೆ ಇವರೇ ಮೂಲ ಪುರುಷರಾಗಿದ್ದಾರೆ. "ತೇ ಅಂಗಿರಸಃ ಸೂನವಸ್ತೇ ಅಗ್ನೇಃ ಪರಿಜಜ್ಞಿರೇ" ಋಗ್ವೇದ ೧೦ಮಂಡಲದ ೬೨ ಸೂಕ್ತದಲ್ಲಿ ಅಂಗಿರಸ್ಸೆಂಬ ಋಷಿಗಳು ಅಗ್ನಿಯ ಪುತ್ರರು ಎನ್ನುವುದನ್ನು ತಿಳಿಸಿದೆ. "ಮನುಷ್ವದಗ್ನೇ ಅಂಗಿರಸ್ವದಂಗಿರೋ . . . " "ಪೂರ್ವೋ ಅಂಗಿರಾಃ . . . .  ||" ಎನ್ನುವುದಾಗಿ ಋಗ್ವೇದದ ಒಂದನೇ ಮಂಡಲವೇ ಇವರ ಕುರಿತಾಗಿ ಹೇಳುತ್ತಾ ಅನೇಕ ಪ್ರಸಿದ್ಧ ಋಷಿಗಳಿಗೆ ಮೂಲ ಮತ್ತು ಪ್ರಾಚೀನ ಋಷಿ ಎನ್ನುವುದನ್ನು ತಿಳಿಸಿಕೊಡುತ್ತದೆ. ಈ ಅಂಗಿರಾ ಋಷಿಯ ವಂಶದಲ್ಲಿ ’ಅಥರ್ವನ್’ ಎನ್ನುವವನು ಪ್ರಮುಖನು. ಇವನಿಗೆ ಬೃಹಸ್ಪತಿ, ಗೋತಮ ಮತ್ತು ವೃಷಣ ಎನ್ನುವ ಮೂವರು ಪುತ್ರರು. ವೃಷಣ ಎನ್ನುವವನು ಅಥರ್ವಣನಿಗೆ ಪಥ್ಯಾ ಎನ್ನುವ ಪತಿಯಲ್ಲಿ ಹುಟ್ಟಿದವನು. ವೇದದಲ್ಲಿ ಅನೇಕ ಕಡೆಯಲ್ಲಿ ಈತನ ಹೆಸರು ಕಂಡು ಬರುತ್ತದೆ. ಈ ವೃಷಣನ ಮಗ ’ಸುಧನ್ವಾನ್’ ಆಂಗಿರ ಎನ್ನುವವನು. ಈ ಸುಧನ್ವನಿಗೆ ಋಬು, ವಿಭ್ವನ್, ಮತ್ತು ವಾಜ ಎನ್ನುವುದಾಗಿ ಮೂರು ಜನ ಮಕ್ಕಳು. ಈ ಮೂವರೂ ವೇದದಲ್ಲಿ ಋಭುಗಳೆಂದೇ ಕರೆಯಲ್ಪಟ್ಟಿದ್ದಾರೆ. ಇವರೆಲ್ಲ ತ್ವಷ್ಟೃ ಪ್ರಜಾಪತಿಯ ಶಿಷ್ಯರು. ಈ ಅಂಗಿರಾ ಋಷಿಯ ವಂಶಸ್ಥರೇ ಬೃಹಸ್ಪತಿಗಳೆನ್ನುವವರು ಮೂವರಿದ್ದರು. ಋಭು ಮತ್ತು ಬೃಹಸ್ಪತಿಗಳನ್ನು ದೇವತೆಗಳೆಂದೇ ಭಾವಿಸಿ ಅನೇಕ ಋಕ್ಕುಗಳಲ್ಲಿ ಕೊಂಡಾಡಿದ್ದಾರೆ. ಇವರನ್ನು ಸ್ತುತಿಸುವ ಅನೇಕ ಋಕ್ಕುಗಳು ಸಿಗುತ್ತವೆ. ಮೂವರು ಬೃಹಸ್ಪತಿಗಳಲ್ಲಿ ಮೊದಲನೆಯವನು ಫಣಿ ಎನ್ನುವ ದಸ್ಯು ರಾಜನನ್ನು ಕೊಂದು ಅವನು ಅಪಹರಿಸಿದ್ದ ಗೋವುಗಳನ್ನು ಹಿಂದಕ್ಕೆ ಕರೆತಂದವನು. ಅಂಶುಮತೀ ಎಂಬ ನದೀ ದಡದಮೇಲೆ ರಾಜ್ಯವಾಳುತ್ತಿದ್ದ ದಾಸನೆನ್ನುವ ಮತ್ತೊಬ್ಬ ದಸ್ಯು ಮುಖಂಡನನ್ನು ತನ್ನ ಹತ್ತು ಸಾವಿರ ಬೆಂಬಲಿಗರೊಡನೆ ಎದುರಿಸಿ ಸೋಲಿಸಿದ ಎನ್ನುವುದಾಗಿ ತಿಳಿದು ಬರುತ್ತದೆ. ಬೃಹಸ್ಪತಿಯ ಮಗನಾದ ಭರದ್ವಾಜನೆಂಬ ಋಷಿಯು ಶಂಬರನೆಂಬ ದೈತ್ಯನನ್ನ ಕೊಂದ ದಿವೋದಾಸನಿಗೆ ಪುರೋಹಿತನಾಗಿದ್ದನಂತೆ. ಈತ ಬೃಹಸ್ಪತಿಯ ಮಗ. ವೇದದಲ್ಲಿ ಅಗ್ನಿಯ ಕುರಿತಾದಲ್ಲೆಲ್ಲಾ ಅಂಗಿರಾ ಶಬ್ದ ಕಂಡು ಬರುತ್ತದೆ. 
"ತಮಿತ್ಸು ಹವ್ಯಮಂಗಿರಃ ಸುದೇವಂ ಸಹಸೋ ಯಹೋ| ಜನಾ ಆಹುಃ ಸುಬರ್ಹಿಷಂ||" ಆರನೇ ಮಂಡಲದ ಮಂತ್ರವಿದು. ಇಲ್ಲಿ ಬಲ ಪುತ್ರನಾದ ಅಂಗಿರಸ್ ಎಂಬ ಅಗ್ನಿಯೇ ನಿನ್ನನ್ನು ಯಜಮಾನ, ಹವಿರ್ದಾನ ದೇವತೆ ಮತ್ತು ಯಜ್ಞ ಇವುಗಳೆಲ್ಲವುಗಳಲ್ಲಿಯೂ ಅದೃಷ್ಟಶಾಲಿಯೆಂದು ಎಲ್ಲ ಜನರೂ ಹೇಳುತ್ತಾರೆ ಎನ್ನುವುದು ಈ ಋಕ್ಕಿನ ಅರ್ಥವಾಗಿದ್ದರೂ ಇಲ್ಲಿ ಅಂಗಿರಃ ಎನ್ನುವುದು ಅಗ್ನಿಯನ್ನು ಕುರಿತಾಗಿ ಹೇಳಲಾಗಿದೆ. ತವೇತತ್ಸತ್ಯಮಂಗಿರಃ ಎಂದು ಒಂದನೇ ಮಂಡಲದಲ್ಲಿ ಅಗ್ನಿಯನ್ನು ಸಂಬೋಧಿಸಲಾಗಿದೆ. "ತ್ವಮಗ್ನೇ ಪ್ರಥಮೋ ಅಂಗಿರಾ ಋಷಿರ್ದೇವೋ ದೇವಾನಾಮಭವ ಶಿವಃ ಸಖಾ|| ಎನ್ನುವುದಾಗಿ ಇಲ್ಲಿಯೂ ಅಂಗಿರಾ ಋಷಿಯು ಅಗ್ನಿ ಎನ್ನಲಾಗಿದೆ. "ತ್ವಂ ನೋ ಅಗ್ನೇ ಅಂಗಿರಃ" ಎಂದು ಐದನೇ ಮಂಡಲದಲ್ಲಿ ಹೇಳಲಾಗಿದೆ. 
ಋಗ್ವೇದ ಒಂದನೇ ಮಂಡಲದ ೩೧ನೇ ಸೂಕ್ತದ ಋಷಿ ಹಿರಣ್ಯಸ್ತೂಪ ಎನ್ನುವವನು. ಈತ ತನ್ನನ್ನು ಅಂಗೀರಸ ವಂಶದವನೆಂದು ಹೇಳಿಕೊಂಡಿರುವುದಲ್ಲದೇ "ತ್ವಮಗ್ನೇ ಪ್ರಥಮೋ ಅಂಗಿರಾ ಋಷಿರ್ದೇವೋ ಎನ್ನುವುದಾಗಿ ಆರಂಭಿಸಿ ಎಲ್ಲಾ ಋಕ್ಕುಗಳನ್ನೂ ತ್ವಮಗ್ನೇ ಎಂದು ಹೇಳಿಕೊಳ್ಳುತ್ತಾನೆ. 

ಈ ಅಂಗೀರಸನು ಫಣಿಗಳಿಂದ ಅಪಹೃತವಾದ ಗೋವುಗಳನ್ನು ಸಂಪತ್ತನ್ನು ಮರಳಿ ಪಡೆದ ಎನ್ನುವುದು ಋಗ್ವೇದದ ಒಂದನೇ ಮಂಡಲದಿಂದ ತಿಳಿಯುತ್ತದೆ. ಹಾಗೆಯೇ ಇವರೆಲ್ಲರೂ ಯಜ್ಞಗಳ ನಿರ್ವಣೆಯಲ್ಲಿ ಬಹಳ ಮುಖ್ಯವಾದ ಪಾತ್ರವಹಿಸುತ್ತಿದ್ದುದು ತಿಳಿದು ಬರುತ್ತದೆ. 

ಅಂಗಿರಾ ಋಷಿ ವೇದಗಳಲ್ಲಿ ಪ್ರಮುಖನಾಗಿ ಕಾಣಿಸಿಕೊಂಡು ದೇವತ್ವವನ್ನು ಪಡೆದ ಋಷಿಯಾಗಿ ಗೋಚರಿಸುತ್ತಾನೆ. ಹುಟ್ಟಿನ ಮೂಲಕ್ಕೂ ಅಗ್ನಿಯೇ ಶಾಖರೂಪದಲ್ಲಿ ಶಕ್ತಿಯರೂಪದಲ್ಲಿ ಕಾರಣನಾಗುತ್ತಾನೆ. ಸಾವಿನ ಮೂಲಕ್ಕೂ ಆತನೇ ಕಾರಣನಾಗಿ ಮಧ್ಯದ ನಮ್ಮ ಜೀವನದ ಉದ್ದಕ್ಕೂ ಅಗ್ನಿ ನಮ್ಮ ಜೊತೆಗಿರುತ್ತಾನೆ. ಅಂತಹ ಅಗ್ನಿಯನ್ನೇ ಅಂಗಿರಾ ಅಥವಾ ಅಂಗಿರಸ ಎನ್ನುವುದಾಗಿ ಕರೆಯಲಾಗಿದೆ.

#ಅಂಗಾರ_ಅಂಗಿರಾ
 Sadyojath...

ದೇವಸ್ಥಾನದ ಗರ್ಭಗೃಹ ನಿರ್ಮಾಣ

*ದೇವಸ್ಥಾನದ ಗರ್ಭಗೃಹ ನಿರ್ಮಾಣ*

ದೇವಸ್ಥಾನ ನಿರ್ಮಾಣದ ವಿಷಯದಲ್ಲಿ ಗರ್ಭಗೃಹ ನಿರ್ಮಾಣವಾಗುವ ಪ್ರದೇಶವನ್ನು ಅಳೆತ್ತರದಷ್ಟಾಗಲೀ, ನೀರು ಅಥವಾ ಕಲ್ಲು ಸಿಗುವಷ್ಟಾಗಲೀ ಆಗೆದು ಷಡಾಧಾರಪ್ರತಿಷ್ಠೆಗೋಸ್ಕರ ಅಣಿಯಾಗಿಸಬೇಕು. (ಶುದ್ಧವಾದ ಮಣ್ಣು, ಮರಳು (ಹೊಗೆ) ಮತ್ತು ಶಿಲೆಗಳಿಂದ ಆ ಖಾತವನ್ನು ಮುಚ್ಚಬೇಕು) ಸೂರ್ಯಾಸ್ತ ಸಮಯದ ನಂತರ (ರಾತ್ರಿಯಲ್ಲಿ) ಅಲ್ಲಿ ಆಚಾರ್ಯನು ವಾಸ್ತು ಪೂಜೆಯನ್ನು ಮಾಡಿ, ಆಧಾರ ಶಿಲೆಯನ್ನು ಸ್ಥಾಪಿಸಬೇಕು. ಅನಂತರ ತಾಮ್ರಮಯ ಅಥವಾ ಶಿಲಾಮಯವಾದ ನಿಧಿಕಲಶದಲ್ಲಿ ಸ್ವರ್ಣ ವಜ್ರಾದಿಗಳನ್ನು ತುಂಬಿಸಿ, ದೇವತಾಶಕ್ತಿಯನ್ನು ಪೂಜಿಸಿ ಸ್ಥಾಪಿಸಬೇಕು. ನಿಧಿಕಲಶದ ಮೇಲೆ ಸ್ವರ್ಣಮಯವಾದ ಕೂರ್ಮವನ್ನೂ ಯೋಗನಾಳವನ್ನೂ ಸರಿಯಾಗಿ ಜೋಡಿಸಿ ಖಾತವನ್ನು ಪೂರ್ಣವಾಗಿ ಶುದ್ದ ಮೃತ್ತಿಕೆ ಮತ್ತು ಶಿಲಾದಿಗಳಿಂದ ಮುಚ್ಚಬೇಕು.

ಬಳಿಕ ನಿರ್ದಿಷ್ಟವಾದ ಉದ್ದ ಅಗಲಗಳುಳ್ಳ ಇಟ್ಟಿಗೆಗಳನ್ನು ತತ್ತದಾಮಗಮೋಕ್ತ ಸ್ಥಳದಲ್ಲಿ ಆಚಾರ್ಯನು ಉಪಧಾನಮಾಡಿ ಅವಟ ಮಧ್ಯದಲ್ಲಿ ಗರ್ಭಪಾತ್ರನ್ಯಾಸವನ್ನು ಮಾಡಬೇಕು. ಈ ಅವಟಮಧ್ಯದಲ್ಲಿ ಇಷ್ಟಕಾಂತರಾಳಗಳಲ್ಲಿ ಮೃತ್ತಿಕೆಗಳನ್ನೂ, ಮೂಲಗಳನ್ನೂ, ಬೀಜಗಳನ್ನೂ, ಧಾನ್ಯಗಳನ್ನೂ, ರತ್ನಗಳನ್ನೂ ಮತ್ತು ಧಾತುಗಳನ್ನೂ ಉಪಧಾನಮಾಡಬೇಕು. ತದಂಗ ಹೋಮವನ್ನು ಮಾಡಿ ಶಕ್ತಿಯನ್ನು ಪೂಜಿಸಿ, ರಾತ್ರಿಕಾಲದಲ್ಲಿ ಗರ್ಭಪಾತ್ರನ್ಯಾಸವನ್ನು ಮಾಡಬೇಕು. ಪ್ರಾಸಾದವನ್ನು ಪುರುಷರೂಪವಾಗಿ ಮುಂದೆ ರಚಿಸುವಾಗ ಪ್ರಾಸಾದ ತಳದಲ್ಲಿ ಮಾಡಲ್ಪಟ್ಟ ಗರ್ಭಪಾತ್ರನ್ಯಾಸವು ಗರ್ಭಾಧಾನ ಸಂಸ್ಕಾರದಂತೆ ಗೇಹಕ್ಕೆ ಒಂದು ವಿಶಿಷ್ಟವಾದ ಸ್ವರೂಪವನ್ನು ನೀಡುತ್ತದೆ. (ತಂ ಸ ೪)
ಸಂ: © ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ 9986175616

ಅವಕಾಶ ಬಂದಾಗ !

 ಬಾಗಿಲು ತಟ್ಟಿದಾಗ ನಾಳೆ ಬಾ ಎನ್ನುವವರು!*

ಬಹಳ ಹಿಂದೆ ಸೂಫಿ ಸಂತರೊಬ್ಬರಿದ್ದರಂತೆ. ಸದಾಕಾಲ ಆನಂದವಾಗಿರುತ್ತಿದ್ದರು. ಹಾಡುತ್ತ-ಕುಣಿಯುತ್ತ ದೇವರಸ್ಮರಣೆ ಮಾಡುತ್ತಾ ಇರುತ್ತಿದ್ದರು. ಒಮ್ಮೆ ಸಂತರನ್ನು ಭೇಟಿಯಾದ ಅಲ್ಲಿನ ಸುಲ್ತಾನರು ತಾವು ಸದಾ ಆನಂದವಾಗಿರುತ್ತೀರಿ. ಆದರೆ ಜಗತ್ತಿನ ಬಹುತೇಕ ಆನಂದವಾಗಿರುವುದಿಲ್ಲ. ಏನೋ ದುಃಖದಲ್ಲಿರುತ್ತಾರೆ. ತಾವು ಅವರಿಗೆಲ್ಲ ಆನಂದವನ್ನೇಕೆ ಕೊಡಬಾರದು? ಎಂದರಂತೆ.

ಸಂತರು ಜನರಿಗೆ ಆನಂದವನ್ನು ಕೊಡಲು ನಾನು ಸಿದ್ಧನಿದ್ದೇನೆ. ಆದರೆ ತೆಗೆದುಕೊಳ್ಳಲು ಅವರು ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದರಂತೆ. ಸುಲ್ತಾನರು ಆನಂದವನ್ನು ಕೊಡೆತ್ತೇನೆಂದಾಗ ಬೇಡವೆನ್ನುವ ಜನರಿರುತ್ತಾರೆಯೇ? ಎಂದರಂತೆ. ಸಂತರು ಆನಂದವೊಂದೇ ಅಲ್ಲ, ಒಳ್ಳೆಯದೆಲ್ಲ ಅವರ ಮುಂದಿದ್ದರೂ, ಅದನ್ನು ಗಮನಿಸದಿರುವ ಜನರಿದ್ದಾರೆ. ಬೇಕಿದ್ದರೆ ಅದನ್ನೀಗಲೇ ಪ್ರಯೋಗ ಮಾಡಬಹುದು! ಎಂದರು.  ಕುತೂಹಲದಿಂದ ಒಪ್ಪಿಕೊಂಡ ಸುಲ್ತಾನರನ್ನು ಸಂತರು ದೊಡ್ಡದೊಂದು ಕಾಲುವೆಯ ಬಳಿ ಕರೆದೊಯ್ದರು. ಕಾಲುವೆಯನ್ನು ಮರದ ಸೇತುವೆಯಿತ್ತು. ಸೇತುವೆಯ ಮೇಲೆ ಜನಸಂದಣಿ ಹೆಚ್ಚಾಗಿರುತ್ತಿತ್ತು. ಭಿಕ್ಷುಕನೊಬ್ಬ ಪ್ರತಿದಿನ ಸೇತುವೆಯನ್ನು ದಾಟಿ ಬಂದು ಈಕಡೆ ಕುಳಿತು ಭಿಕ್ಷೆ ಬೇಡುತ್ತಿದ್ದ.

ಸಂತರು ಸುಲ್ತಾನರಿಗೆ ಹೇಳಿ ಒಂದು ಸಾವಿರ ನಾಣ್ಯಗಳ ಥೈಲಿಯನ್ನು ಸೇತುವೆಯ ಮಧ್ಯೆ ಇಡಿಸಿಸಿದರು. ಸುಲ್ತಾನರ ಸೈನಿಕರನ್ನು ಸೇತುವೆಯ ಎರಡೂ ಕಡೆ ಕಾವಲಿಟ್ಟರು. ಸೈನಿಕರಿಗೆ ಭಿಕ್ಷುಕ ಸೇತುವೆಯನ್ನು ದಾಟಲು ಬಂದ ತಕ್ಷಣ ಉಳಿದ ಜನರನ್ನು ಸೇತುವೆಯ ಮೇಲೆ ಬಾರದಂತೆ ತಡೆಯಲು ಹೇಳಿದರು. ಅಲ್ಲಿಗೆ ಭಿಕ್ಷುಕ ಬಂದ. ಆತನೊಬ್ಬನೇ ಸೇತುವೆಯ ನಡೆದು ಬರುತ್ತಿದ್ದ. ಆತ ನಾಣ್ಯಗಳ ಥೈಲಿಯನ್ನು ಗಮನಿಸಲೇ ಇಲ್ಲ. ನೇರವಾಗಿ ಈ ಕಡೆ ಬಂದ. ತಾನು ಯಾವಾಗಲೂ ಕೂರುವ ಸ್ಥಳದಲ್ಲಿ ಕುಳಿತು ಭಿಕ್ಷೆ ಬೇಡತೊಡಗಿದ. ಸಂತರು ಸುಲ್ತಾನರನ್ನುದ್ದೇಶಿಸಿ ಸೇತುವೆಯ ಮಧ್ಯಭಾಗದಲ್ಲಿ ನಾಣ್ಯಗಳ ಥೈಲಿಯನ್ನು ಇಡಿಸಿದ್ದಿರಿ. ಸೇತುವೆಯನ್ನು ಭಿಕ್ಷುಕನೊಬ್ಬನೇ ದಾಟಿದ. ಆದರೂ ನಾಣ್ಯಗಳನ್ನು ತೆಗೆದುಕೊಳ್ಳಲಿಲ್ಲ. ಮತ್ತೆ ಭಿಕ್ಷೆ ಬೇಡುತ್ತಿದ್ದಾನೆ. ಎಂದರು. ಸುಲ್ತಾನರಿಗೆ ಭಿಕ್ಷುಕ ನಾಣ್ಯಗಳನ್ನೇಕೆ ತೆಗೆದುಕೊಳ್ಳಲಿಲ್ಲವೆಂಬ ಆಶ್ಚರ್ಯ!

ಅವರು ಭಿಕ್ಷುಕನ ಬಳಿ ಹೋಗಿ ಸೇತುವೆಯ ಮೇಲೆ ನಾಣ್ಯಗಳ ಥೈಲಿಯಿತ್ತು. ಅಲ್ಲಿ ಓಡಾಡುತ್ತಿರಲಿಲ್ಲ. ಆದರೂ ನೀನು ನಾಣ್ಯಗಳನ್ನು ತೆಗೆದುಕೊಂಡು ಜೀವನವಿಡೀ ಸಮೃದ್ಧಿಯಾಗಿ ಬದುಕಬಹುದಿತ್ತು! ಅದನ್ನು ತೆಗೆದುಕೊಳ್ಳದೆ ನೀನೇಕೆ ಭಿಕ್ಷೆ ಬೇಡುತ್ತಿದ್ದೀಯೇ? ಎಂದು ಕೇಳಿದರು. ಭಿಕ್ಷುಕ ಮಹಾಸ್ವಾಮಿ! ಪ್ರತಿದಿನ ನಾನು ಸೇತುವೆಯನ್ನು ದಾಟುವಾಗ ನೂರಾರು ಜನರಿರುತ್ತಿದ್ದರು. ಇಂದು ಮೊಟ್ಟಮೊದಲನೆ ಬಾರಿಗೆ ಸೇತುವೆಯ ಮೇಲೆ ಯಾರೂ ಇಲ್ಲದ್ದನ್ನು ಕಂಡು ನನಗೆ ಆಶ್ಚರ್ಯವಾಯಿತು. ನಾನು ಕಣ್ಮುಚ್ಚಿಕೊಂಡು ಸೇತುವೆಯ ಮೇಲೆ ನಡೆಯಬಲ್ಲೆನೇ ಎಂಬ ಯೋಚನೆ ಬಂತು. ಕಣ್ಮುಚ್ಚಿಕೊಂಡು ಸೇತುವೆಯನ್ನು ಸರಾಗವಾಗಿ ದಾಟಿದೆ. ನಾಣ್ಯಗಳ ಥೈಲಿಯನ್ನು ನಾನು ಗಮನಿಸಲಿಲ್ಲ

ತಕ್ಷಣ ಸಂತರು ಸುಲ್ತಾನರೇ! ತಾವು ಸಾವಿರ ನಾಣ್ಯಗಳನ್ನು ಕೊಡಬೇಕೆಂದು ಇಚ್ಛಿಸಿದರೂ ತೆಗೆದುಕೊಳ್ಳುವ ಭಾಗ್ಯ ಭಿಕ್ಷುಕನಿಗಿರಲಿಲ್ಲ. ಅವನು ಕಣ್ಮುಚ್ಚಿಕೊಂಡು ನಡೆದು ಅವಕಾಶವನ್ನು ಕಳೆದುಕೊಂಡ. ಹಾಗೆಯೇ ನಾನು ಆನಂದವನ್ನು ಕೊಡಲು ಸಿದ್ಧನಿದ್ದೇನೆ. ಜನ ಏನೇನೋ ಕಾರಣಗಳಿಂದ ಕಣ್ಣುಮುಚ್ಚಿ ನಡೆಯುತ್ತಿದ್ದರೆ, ಅವರಿಗೆ ನಾನು ಆನಂದವನ್ನು ಹೇಗೆ ಕೊಡಲಿ? ಎಂದರಂತೆ. ಸುಲ್ತಾನರು ಸಂತರ ಮಾತುಗಳಲ್ಲಿದ್ದ ಸತ್ಯವನ್ನು ಅರ್ಥಮಾಡಿಕೊಂಡರಂತೆ.

ಬದುಕಿನಲ್ಲಿ ಏನೇನೋ ಕಾರಣಗಳಿಗಾಗಿ ಕಣ್ಮುಚ್ಚಿ ನಡೆಯುತ್ತಿರುವವರು, ಬದುಕುತ್ತಿರುವವರು, ಎದುರಿಗೇ ಇರಬಹುದಾದ ಆನಂದವನ್ನು ಗುರುತಿಸದೇ ಇರುವವರು, ಸುವರ್ಣಾವಕಾಶ ರೂಪದಲ್ಲಿ ಬೇಕಾದರೂ ಬರಬಹುದೆಂಬುದನ್ನು ಅರಿಯದೇ, ಕಣ್ಮುಚ್ಚಿಕೊಂಡು ಕುಳಿತು ಅದನ್ನು ಕಳೆದುಕೊಳ್ಳುತ್ತಿರುವವರನ್ನು ನಾವೂ ಕಂಡಿರಬಹುದಲ್ಲವೇ? ನಾವು ಅಂತಹವರಾಗದಿದ್ದರೆ ಸಾಕಲ್ಲವೇ?

ಕೃಪೆ:ವಿಶ್ವವಾಣಿ.

April 18, 2021

ಋಗ್ವೇದ ಸೂಕ್ತಗಳ ಹೆಸರುಗಳು

  • From Rigveda
    • aa no bhadraa suukta
    • aayushya suukta
    • aghamarshhaNa suukta
    • Agni Suktam [09:11]
    • akshiibhyam te suukta
    • Alakshmee Naashana Suktam [01:18]
    • Ambhrnee Suktam [02:33]
    • Anna Suktam [14:49]
    • Apratiratham,
    • Baliththaa Suktam [01:42]………………..10
    • Bhagya Suktam [02:07]
    • bhUsUkta
    • Brahma,
    • Brahmanaagni Suktam [01:20]
    • Brahmanaspati,
    • Dasa Shanti
    • devIsukta
    • Dhruva Suktam [02:32]
    • Durgasuktam
    • duurvaa suukta……………………………..20
    • Ganapathy Suktam [18:48]
    • Gharma Suktam [02:50]
    • Ghosashanthi
    • Gnana Suktam [03:32]
    • Go Suktam [02:45]
    • Hiranyagarbha Suktam [03:10]
    • Keshee Suktam [01:42]
    • Kumara,
    • Manyu Suktam [04:30]
    • Manyu Suktam [07:18]…………………….30
    • medha suukta
    • mruttikaa suukta
    • Nakshatra Suktam [10:04]
    • nArAyaNasUkta
    • nAsadIya sUkta
    • Nashta Dravya Prapti Suktam [01:51]
    • Nathamamhona Suktam [02:12]
    • Navagraha Mantraha [08:42]
    • niiLaa suukta
    • Oshadhi Suktam [05:25]…………………..40
    • Pancha Suktam
    • Panchashanthi
    • Patanga Suktam [01:15]
    • Pavamaana Suktam [02:50]
    • Purusha Suktam [03:53]
    • Raja Yakshma Naashana Suktam [01:40]
    • Rakshogna Suktam [10:16]
    • Rathree Suktam [01:34]
    • Rishabha Suktam [01:24]
    • roganirvaaNa suukta………………………..50
    • Rudra Suktam [11:39]
    • sa.nGYAnasUkta
    • Samudra Suktam [03:28]
    • sarasvatii suukta
    • Saraswathi Suktam [09:50]
    • Sarpa,
    • Shanti Mantraha [22:27]
    • shrI sUkta
    • Sowra Suktam [14:00]
    • Sraddha Suktam [01:26]……………………60
    • Srisuktam
    • trisuparNa mantra
    • Vaastu Suktam [01:38]
    • Vaayu Suktam [01:24]
    • Varunasuktam
    • Vishnu Suktam1 [11:17]
    • Vishnu Suktam2 [00:44]
    • Viswakarma Suktam [03:52]
    • Vivaha Mantraha [11:46]
    • Yakshma Naashana Suktam [01:44]………70
  • (FrommahaanaaraayaNopanishhat)
    • duurvaa suukta
    • mruttikaa suukta
    • aghamarshhaNa suukta
    • trisuparNa mantra (to be chanted during serving of food)

ದೀಪದ ಬೆಳಕು ಎಲ್ಲಿಂದ ಬಂತು.?

| ಜ್ಞಾನ ಜ್ಯೋತಿ |

ಒಬ್ಬ ಸನ್ಯಾಸಿಗಳು ತಮ್ಮ ಪಾದ ಯಾತ್ರೆಯಲ್ಲಿದ್ದಾಗ, ಸಂಜೆಯಲ್ಲಿ ಒಂದು ಹಳ್ಳಿಯನ್ನು ತಲುಪಿದರು. ಅಂದು ಅಲ್ಲಿನ ಒಬ್ಬ ಬ್ರಾಹ್ಮಣರ ಮನೆಯಲ್ಲಿ ಬಿಡಾರ ಹೂಡಿದರು. ಆ ದಿನ‌ ರಾತ್ರಿ ಹಣತೆಯ ಬೆಳಕಿನಲ್ಲಿ ಸನ್ಯಾಸಿಗಳ ಪ್ರವಚನ ಏರ್ಪಾಟಾಗಿತ್ತು. ಹಳ್ಳಿಯ ಜನ ಪ್ರವಚನಕ್ಕೆ ಹಾಜರಾದರು. ಪ್ರವಚನಕ್ಕೆ ಆ ಹಳ್ಳಿಯ ಒಬ್ಬ ಅಹಂಕಾರಿ ಸಾಹುಕಾರನೂ ಬಂದಿದ್ದ. ಸನ್ಯಾಸಿಯನ್ನು ಪರೀಕ್ಷೆ ಮಾಡಲು ಏನಾದರೊಂದು ಪ್ರಶ್ನೆ ಕೇಳಿ ತನ್ನ ಅಹಂಕಾರದ ಬುದ್ದಿವಂತಿಕೆ ಪ್ರದರ್ಶಿಸುವುದು ಅವನ ಬಯಕೆಯಾಗಿತ್ತು.
ಸನ್ಯಾಸಿಗಳ ಪ್ರವಚನದ ನಡುವೆ, ಆ  ಸಾಹುಕಾರ ಎದ್ದುನಿಂತು, ಗುರುಗಳೇ ನನ್ನದೊಂದು ಸಂದೇಹವಿದೆ, ಅದಕ್ಕೆ ತಾವು ಉತ್ತರ ನೀಡಿ ಸಂದೇಹವನ್ನು ಪರಿಹರಿಸಬೇಕು ಎಂದ.
.....ಗುರುಗಳೆ ಇಲ್ಲಿ ಉರಿಯುತ್ತಿರುವ ಹಣತೆಯ ದೀಪದ ಬೆಳಕು ಎಲ್ಲಿಂದ ಬಂತು.?
ಸಾಹುಕಾರನ ಪ್ರಶ್ನೆಗೆ ಗುರುಗಳು ಗಂಭೀರವಾಗಿ ಉತ್ತರ ನೀಡಲು ಪ್ರಾರಂಭಿಸಿದರು.
ಅಷ್ಟರಲ್ಲಿ, ಅಲ್ಲೇ ಕುಳಿತಿದ್ದ ಆ ಮನೆಯ ಬ್ರಾಹ್ಮಣನ ಏಳೆಂಟು ವರ್ಷದ ಮಗಳಿಗೆ ಈ ಸಾಹುಕಾರನ ವ್ಯಂಗ್ಯ ಪ್ರಶ್ನೆ ಸನ್ಯಾಸಿಗಳನ್ನು ಗೇಲಿ ಮಾಡಲಿಕ್ಕಾಗಿ ಎಂಬುದನ್ನು ತಿಳಿದಳು. ಆ ಸಾಹುಕಾರನಿಗೆ ಅವನದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡುವುದು ಸರಿಯೆಂದು ತಿಳಿದು.......
ಕ್ಷಮಿಸಿ ಗುರುಗಳೆ, ಈ ಸಣ್ಣ ವಿಚಾರಕ್ಕೆ ಜ್ಞಾನಿಗಳಾದ ತಾವು ಉತ್ತರ ನೀಡುವ ಅವಶ್ಯಕತೆ ಇಲ್ಲ.‌ ಜೊತೆಗೆ ತಮ್ಮ ಕ್ಲಿಷ್ಟಕರವಾದ ವ್ಯಾಖ್ಯಾನದ ಉತ್ತರ ಸಾಹುಕಾರರಿಗೆ ಅರ್ಥವಾಗುವುದು ಕಷ್ಟವಾಗಬಹುದು, ಹಾಗಾಗಿ  ನಾನು ಅವರ ಪ್ರಶ್ನೆಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಉತ್ತರ ನೀಡುತ್ತೇನೆ ಎಂದಳು.
ತಕ್ಷಣವೇ, ಆ ಉರಿಯುತ್ತಿದ್ದ ಹಣತೆಯ ದೀಪವನ್ನು "ಉಫ್" ಎಂದು ಊದಿ ಆರಿಸಿದಳು, ದೀಪ ನಂದಿಹೋಯಿತು.
....ಸಾಹುಕಾರರೇ, ನೀವು ಹಣತೆಯಲ್ಲಿ ಉರಿಯುತ್ತಿದ್ದ ಬೆಳಕು ಎಲ್ಲಿಂದ ಬಂತು! ಎಂಬುದು ತಮ್ಮ ಪ್ರಶ್ನೆಯಾಗಿತ್ತು. ಈಗ ಆ ಹಣತೆಯಲ್ಲಿ ಬೆಳಕಿಲ್ಲ, ಬರೀ ಕತ್ತಲು ಮಾತ್ರ. ನಾನು "ಉಫ್'' ಎಂದು ಬಾಯಿಂದ ಗಾಳಿ ಬಿಟ್ಟಾಗ ಹಣತೆಯ ದೀಪ ನಂದಿಹೋಯಿತು. ಈಗ ತಾವೇ ಹೇಳಿ, ಆ ದೀಪದ ಬೆಳಕು ಎಲ್ಲಿ ಮಾಯವಾಯಿತು...? ಎಲ್ಲಿಂದ ಆ ಬೆಳಕು ಬಂದಿತ್ತೋ ಅಲ್ಲಿಗೆ ಹೊರಟು ಹೋಯಿತು ಅಲ್ಲವೇ...? ತಮಗೆ ಉತ್ತರ ಸಿಕ್ಕಿತೆ? ಎಂದಳು.
ಸಾಹುಕಾರ ಮರು ಮಾತಾಡದೆ ಅಲ್ಲಿಂದ ಹೊರಟುಹೋದ.

==========================
ಯಾರ ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯಗಳ ಆಚರಣೆಗಳಲ್ಲಿ ಆಸಕ್ತಿ, ಶ್ರದ್ಧೆ ಉಂಟೋ, ಅಲ್ಲಿ ಇಂತಹ ಪ್ರಶ್ನೆಗಳಿಗೆ ಮಕ್ಕಳು ಬಾಲ್ಯದಲ್ಲಿ ಇರುವಾಗಲೇ ತಕ್ಕ ಉತ್ತರ ನೀಡಲು ಸಮರ್ಥರಾಗಿರುವುದು ಸಹಜ. ನಮ್ಮ ಮಕ್ಕಳಿಗೆ ನಮ್ಮ ಮಹಾ ಕಾವ್ಯಗಳ ಕಥೆ ಹೇಳಬೇಕು. ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸಿ, ಆಚರಣೆಗಳಲ್ಲಿ ಆಸಕ್ತಿ ಮೂಡಿಸುವುದು ಹಿರಿಯರ ಕರ್ತವ್ಯ.

ಧನ್ಯವಾದಗಳು.
ವಿ.ಎಸ್.ಮಣಿ.

April 16, 2021

ಸಂಧ್ಯೋಪಾಸನೆ ಮತ್ತು ದಧಿಕ್ರಾವ್ಣೋ



ಆನೆಯನ್ನು ನಾವು ಗುಇರುತಿಸುವುದು ಅದರ ಮದದಿಂದ. ಅದು ಆನೆಯ ಲಕ್ಷಣ. ವೇಗವನ್ನು ನಾವು ಗುರುತಿಸುವುದು ಕುದುರೆಯಿಂದ. ಕುದುರೆಯ ವೇಗ ಅತ್ಯಂತ ತೀಕ್ಷ್ಣ. ಇದನ್ನೇ ಹಾರ್ಸ್ ಪವರ್ ಎನ್ನುತ್ತಾರೆಯೋ ಏನೋ ನನಗೆ ತಿಳಿಯದು. ವೇಗವನ್ನು ಮತ್ತು ಶಕ್ತಿಯನ್ನು ಅಳೆಯುವುದು ಆಶ್ವಶಕ್ತಿಯಿಂದ, ಅಂದರೆ ಕುದುರೆಯ ಶಕ್ತಿಯ ಮಾಪನದಿಂದ ಎನ್ನುವುದು ನನ್ನ ತಿಳುವಳಿಕೆ. ನನಗದು ತಿಳಿಯದು. ವೇಗ ಎನ್ನುವುದು ಶಕ್ತಿ ಅಥವಾ ಸಾಮರ್ಥ್ಯಕ್ಕೆ ಸಂಬಂಧಿಸಿದೆ. ಈ ಅಶ್ವಶಕ್ತಿಯ ಮಾಪನ ಪ್ರಪಂಚದಾದ್ಯಂತವೂ ಅನುಸರಿಸಲಾಗುತ್ತದೆ. ಎಲ್ಲಿಂದ ಈ ಆಶ್ವ ಶಕ್ತಿಯ ಆರಂಭವಾಯಿತು ? ಯಾವಾಗ ಇದು ಬಳಕೆಗೆ ಬಂತು.?
ಸಾಮಾನ್ಯವಾಗಿ ಕುದುರೆಗಳ ಬಳಕೆಯಾಗಿದ್ದು ಯುದ್ಧಗಳಲ್ಲಿ. ರಥವನ್ನು ಎಳೆಯಲಿಕ್ಕೆ ಬಳಸಲಾಯಿತು. ಅದೇ ಕುದುರೆಯ ಓಟದ ಶಕ್ತಿಯನ್ನು ಮಾಪನವನ್ನಾಗಿ ತೆಗೆದುಕೊಂಡದ್ದು ಪ್ರಪಂಚ. ಅದೇನೇ ಇರಲಿ ನಾನು ವಿಜ್ಞಾನದ ವಿಷಯ ಹೇಳುತ್ತಿಲ್ಲ ಆದರೆ. . . . .
ಹಿಂದೆಲ್ಲಾ ರಥಗಳನ್ನು ಎಳೆಯುತ್ತಿದ್ದ ಕುದುರೆಗಳನ್ನು ದಧಿಕ್ರಾ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ದಧಿಕ್ರಾ ಎನ್ನುವುದು ವಿಶೇಷವಾದ ಶಕ್ತಿಯುಳ್ಳ ಮತ್ತು ನಿಗದಿತ ಸಮಯದಲ್ಲಿ ಅಷ್ಟೇ ವೇಗದಿಂದ ಧಾವಿಸುವ ಕುದುರೆಗಳಿಗೆ. ನಿಗದಿತ ಸ್ಥಳದಿಂದ ಆರಂಭಿಸಿ ತಲುಪುವ ಬಿಂದುವಿಗೆ ಇರುವ ಕರಾರುವಾಕ್ಕಾದ ಮಿತಿ ಅದು. ಅಂದರೆ ವೇಗ ಮತ್ತು ಶಕ್ತಿಯನ್ನು ಅಳೆಯುತ್ತಿದ್ದುದು ಇದೇ ದಧಿಕ್ರಾ ಎನ್ನುವ ಕುದುರೆಗಳ ಅವಲಂಬನೆಯಿಂದ ಎಂದರೆ ಅಶ್ವಶಕ್ತಿಯ ಕಲ್ಪನೆ ಅಥವಾ ಪ್ರಯೋಗ ಬಂದದ್ದು ಆಗ. 

ಈ ದಧಿಕ್ರಾ ಎನ್ನುವುದು ಕಾಣಿಸಿಕೊಳ್ಳುವುದು ಋಗ್ವೇದದಲ್ಲಿ. ಮಿಕ್ಕ ವೇದಗಳಲ್ಲಿ ಇದು ಇಲ್ಲವೇ ಇಲ್ಲ ಎನ್ನುವಷ್ಟು. ಈ ದಧಿಕ್ರಾ ಎನ್ನುವುದನ್ನು ಕೇವಲ ದಧಿಕ್ರಾ ಎಂದು ಕೆಲವೆಡೆ ಹೇಳಿದ್ದರೆ ದಧಿಕ್ರಾವನ್ ಎಂದೂ ಮಿಕ್ಕೆಡೆ ಹೇಳಲಾಗಿದೆ. ರಥಗಳ ಸಾಲಿನಲ್ಲಿ ಮೊದಲು ನಿಲ್ಲಿಸುವುದು ಇದೇ ದಧಿಕ್ರಾ ಎನ್ನುವ ಕುದುರೆಗಳ ರಥವನ್ನು. ಸೂರ್ಯೋದಯದ ಕಾಲದಲ್ಲಿ ಮಂಜಿನಿಂದ ಆವರಿಸಿದ ಆಕಾಶವನ್ನು ಶುಭ್ರವನ್ನಾಗಿಸಿ ಸೂರ್ಯನ ಸುಂದರ ನಿರ್ಮಲ ಕಿರಣಗಳು ಭೂಮಿಯನ್ನು ತಲುಪುವಂತೆ ಮಾಡುವುದನ್ನು ದಧಿ ಎಂದು ಕರೆಯಲಾಗಿದ್ದರೂ, ಅದರ ನಂತರದ ಕ್ರಾ ಎನ್ನುವುದು ಚಲನೆಯನ್ನು ಸೂಚಿಸಿ ಕುದುರೆಯನ್ನು ಕುರಿತಾಗಿ ಹೇಳಲಾಗಿದೆ. ಇದಲ್ಲದೇ, ಕುದುರೆ ಸಹ ನಮಗೆ ದೊರೆತದ್ದು ಸೂರ್ಯನಿಂದಲೇ ಎನ್ನುವುದು ಅಲ್ಲಲ್ಲಿ ತಿಳಿದು ಬರುವುದರಿಂದ ಸೂರ್ಯನನ್ನೂ ಮತ್ತು ಕುದುರೆಯನ್ನೂ ದಧಿಕ್ರಾ ಎಂದು ಅನೇಕ ಕಡೆ ಹೇಳಲಾಗಿದೆ. ಅಗ್ನಿಗೆ ಸಹ ಸಂಬಂಧ ದಧಿಕ್ರಾದೊಂದಿಗೆ ಕಲ್ಪಿಸಿರುವುದು ಮತ್ತು ಉಷೋ ದೇವಿಯರ ಸಂಬಂಧ ಹೇಳುವುದು ಗಮನಿಸಿದರೆ ಸೂರ್ಯಮಂಡಲವೇ ದಧಿಕ್ರಾ ಇರಲೂ ಬಹುದು.

ಆದರೆ ಕುದುರೆಗೆ ದಧಿಕ್ರಾ ಎನ್ನುವ ಹೆಸರು ಇರುವ ಸಾಮ್ಯತೆಗೆ ಈ ಕಥೆ ಬಹಳ ಉಪಯುಕ್ತ.
ಯಾಮಥರ್ವಾ ಮನುಷ್ಪಿತಾ ದಧ್ಯಙ್ ಧಿಯಮತ್ನತ |
ತಸ್ಮಿನ್ಬ್ರಹ್ಮಾಣಿ ಪೂರ್ವಥೇಂದ್ರ ಉಕ್ಥಾ ಸಮಗ್ಮತಾರ್ಚನ್ನನು ಸ್ವರಾಜ್ಯಂ || ಋಗ್ವೇದ ಮೊದಲ ಮಂಡಲದ ಎಂಬತ್ತನೇ ಸೂಕ್ತದಲ್ಲಿ ದಧ್ಯಂಚ್ ಅಥವಾ ದಧೀಚಿ ಎನ್ನುವ ಋಷಿಯ ಪ್ರಸ್ತಾಪ ಬರುತ್ತದೆ. ಈ ದಧೀಚಿ ಪುರಾಣಗಳಲ್ಲಿ ಅತ್ಯಂತ ಪ್ರಸಿದ್ಧ ಋಷಿ. ಅಥರ್ವ ಎನ್ನುವ ಋಷಿಯ ಮಗನಾಗಿ ಜನಿಸಿದ ಈ ದಧೀಚಿ, ಒಂದು ಕಾಲದಲ್ಲಿ ಅಸುರರು ಈತನನ್ನು ನೋಡಿ ಓಡಿ ಹೋಗಿದ್ದರಂತೆ. ದಧೀಚಿ ಮೃತನಾದ ಬಳಿಕ ಜಗತ್ತಿಗೆ ಪುನಃ ಅಸುರರು ಉಪಟಳ ಕೊಡಲು ಆರಂಭಿಸುತ್ತಾರೆ. ನಿರ್ಭಯರಾಗಿ ಭೂಮಿಯನ್ನೆಲ್ಲಾ ವ್ಯಾಪಿಸಿ ಬಿಡುತ್ತಾರೆ. ಆಗ ಇಂದ್ರ ಅವರೊಡನೆ ಯುದ್ಧ ಮಾಡಲು ಅಶಕ್ತನಾಗುತ್ತಾನೆ. ಇಂದ್ರ ಈ ದಧೀಚಿ ಅಥವಾ ದಧ್ಯಂಚನನ್ನು ಹುಡುಕುತ್ತಾನೆ. ಆದರೆ ಋಷಿ ಸಿಕ್ಕುವುದಿಲ್ಲ, ಋಷಿ ಮೃತನಾಗಿದ್ದು ತಿಳಿದು ಬರುತ್ತದೆ. ಆಗ ಇಂದ್ರ ತನ್ನ ಜೊತೆಯಲ್ಲಿರುವವರಲ್ಲಿ ಆ ಋಷಿಯ ದೇಹದ ಯಾವುದಾದರೂ ಅವಶೇಷ ಇದೆಯೇ ಎಂದು ಕೇಳುತ್ತಾನೆ, ಅದಕ್ಕೆ ಅವರು "ದಧೀಚಿಯು ಒಂದಾನೊಂದು ಕಾಲದಲ್ಲಿ ತನಗೆ ದೊರಕಿದ್ದ ಮಧುವಿದ್ಯೆಯನ್ನು ಅಶ್ವಿನೀ ದೇವತೆಗಳಿಗೆ ಹೇಳಿಕೊಡುತ್ತಾನೆ. ವಾಸ್ತವದಲ್ಲಿ ಅದನ್ನು ಬೇರೆಯವರಿಗೆ ಉಪದೇಶಿಸುವಂತಿರಲಿಲ್ಲ. ಆದರೂ ಮಧುವಿದ್ಯೆಯನ್ನು ಹೇಳಿಕೊಡುತ್ತಾನೆ. ಇದನ್ನು ಹೇಳಿಕೊಟ್ಟ ಶಿಕ್ಷೆಯಾಗಿ ದಧೀಚಿಯ ತಲೆ ಕಡಿಯಲಾಗುತ್ತದೆ. ಆಗ ಅಶ್ವಿನೀ ದೇವತೆಗಳು ಕುದುರೆಯೊಂದರ ತಲೆಯನ್ನು ಜೋಡಿಸುತ್ತಾರೆ. ದಧ್ಯಂಚನ ಕುದುರೆಯಾಕಾರದ ತಲೆ ಮಾತ್ರ ಕುರುಕ್ಷೇತ್ರದ ಸಮೀಪವಿರುವ ಶರ್ಯಣಾವತ್ ಎನ್ನುವ ಒಂದು ಸರೋವರದಲ್ಲಿ ಬಿದ್ದು ತೇಲುತ್ತಿರುವುದನ್ನು ಹೇಳುತ್ತಾರೆ. ಅದನ್ನೇ ತೆಗೆದುಕೊಂಡು ಬರುತ್ತಾರೆ. ಅದರ ಮೂಳೆಯಿಂದಲೇ ಇಂದ್ರ ಅಸುರರನ್ನು ಸಂಹರಿಸುತ್ತಾನಂತೆ. ಒಂಬತ್ತಾವರ್ತಿ ಅಂದರೆ ಎಂಟುನೂರ ಹತ್ತು ಸಲ ಅಸುರರ ಮಾಯಾಜಾಲವನ್ನು ಬೇಧಿಸಿ ಜಯಿಸುತ್ತಾನೆ ಎನ್ನುವುದು ಭಾಷ್ಯಕಾರರ ಅಭಿಮತ.

ಇಲ್ಲಿ ದಧ್ಯಂಚನ ಹೆಸರೂ ಮತ್ತು ಆತನ ಶಿರೋಭಾಗ ಕುದುರೆಯಂತಿರುವುದನ್ನೂ ತುಲನೆ ಮಾಡಿದರೆ ದಧಿಕ್ರಾ ಎನ್ನುವುದು ಕುದುರೆಗೆ ಸಮೀಪದ ಪದವಾಗುತ್ತದೆ. ಇನ್ನು ಬೃಹದ್ದೇವತಾದಲ್ಲಿ ಮೋಡಗಳಿಗೆ ದಧಿಕ್ರಾ ಎನ್ನಲಾಗಿದೆ. ಋಗ್ವೇದದ ೭ ನೇ ಮಂಡಲದ ೪೪ನೇ ಸೂಕ್ತದಲ್ಲಿ ವಶಿಷ್ಠ ಮಹರ್ಷಿ ’ದಧಿಕ್ರಾಂ ವಃ ಪ್ರಥಮಮಶ್ವಿನೋಷಸಮಗ್ನಿಂ’ ಎನ್ನುತ್ತಾ ಈ ದಧಿಕ್ರಾ ಎನ್ನುವುದು ಅಶ್ವಗಳ ಅಭಿಮಾನ ದೇವತೆ ಎನ್ನುವಂತೆ ಹೇಳಿರುವುದು ಕಂಡು ಬರುತ್ತದೆ. ಇನ್ನು ಮೂರನೇ ಮಂಡಲದ ೨೦ನೇ ಸೂಕ್ತದಲ್ಲಿ ಗಾಥೀ ಎನ್ನುವ ಋಷಿಯೂ ಸಹ ದಧಿಕ್ರಾ ಎನ್ನುವುದು ಕುದುರೆ ಎನ್ನುತ್ತಾನೆ. ಋಷಿಯು ಇಲ್ಲಿ ಅಗ್ನಿಯನ್ನು ಸ್ತುತಿಸಿದ್ದರೂ ಅಶ್ವದ ಶಕ್ತಿಯ ಪ್ರಖರತೆ ಹೇಳಿದ್ದಾನೆ. ಅಂದರೆ ಈ ಆಶ್ವದ ಶಕ್ತಿಯನ್ನು ಆ ಕಾಲದಲ್ಲಿಯೇ ಮಾಪನವಾಗಿಯೋ ಅಥವಾ ಅದರ ಶಕ್ತಿ ಮತ್ತು ಸಾಮರ್ಥ್ಯವನ್ನು ಕಂಡಿದ್ದಾರೆ ಎನ್ನುವುದು ನಿಃಸ್ಸಂಶಯ.
ಋಗ್ವೇದದ ೪ನೇ ಮಂಡಲದ ೩೯ನೇ ಸೂಕ್ತದಲ್ಲಿ
ದದಿಕ್ರಾವ್ಣೋ ಅಕಾರಿಷಂ ಜಿಷ್ಣೋರಶ್ವಸ್ಯವಾಜಿನಃ | ಸುರಭಿನೋಮುಖಕರತ್ಪ್ರಣ ಆಯೂಂ ಷಿ ತಾರಿಷತ್ || 
ಈ ಮಂತ್ರದಲ್ಲಿ ಅಶ್ವವನ್ನು ಮತ್ತು ಅದರ ಅಭಿಮಾನಿ ದೇವತೆಯನ್ನು ಪ್ರಾರ್ಥಿಸಿ, ನಾನು ಸುಗಂಧಯುಕ್ತವಾಗಿ ಕಾಂತಿಯಿಂದ ಕಂಗೊಳಿಸುವಂತಾಗಲಿ. ನನಗೆ ಅಶ್ವದ ಶಕ್ತಿಯನ್ನು ಮತ್ತು ಸಮಯದ ಪಾಲನೆಯ ಶಕ್ತಿಯನ್ನು ಕೊಡು, ನನ್ನ ಮುಖ ಸುಗಂಧಯುಕ್ತವಾಗಲಿ ಮತ್ತು ಆಯುಷ್ಯವನ್ನು ದಿನದಿಂದ ದಿನಕ್ಕೆ ವರ್ಧಿಸು ಎನ್ನುವಂತೆ ವಾಮದೇವ ಮಹರ್ಷಿ ದಧಿಕ್ರಾ ದೇವತೆಯನ್ನು ಕೇಳಿಕೊಂಡಿದ್ದಾರೆ. ಅಂದರೆ ಈ ಮಂತ್ರವನ್ನು ಸಂಧ್ಯಾವಂದನೆಯ ಸಮಯದಲ್ಲಿಯೂ ಸಹ ಸಾಮಾನ್ಯವಾಗಿ ದಿನವೂ ಒಮ್ಮೆಯಾದರೂ ಹೇಳುತ್ತೇವೆ. ಇಲ್ಲಿ ದಧಿಕ್ರಾ ದೇವತೆಯನ್ನು ದಿನವೂ ನಾವು ಪ್ರಾರ್ಥಿಸುತ್ತೇವೆ. ಅಂದರೆ ನಮ್ಮ ಜೀವನ ಸಮಯ ಪಾಲನೆಯಿಂದ ಮಿತವಾಗಿ ಹಿತವಾಗಿರಬೇಕೆನ್ನುವ ಬಯಕೆಯಿಂದ ದಧಿಕ್ರಾ ದೇವತೆಯನ್ನು ಪ್ರಾರ್ಥಿಸುತ್ತೇವೆ ಅಂತಾಯಿತು.

#ಸಮಯಪಾಲನೆ_ಕುದುರೆಯಿಂದ
ಸದ್ಯೋಜಾತರು

April 15, 2021

ಆಕಳ_ಹಾಲಿನಲ್ಲಿರುವ_ಅಭಿಮಾನಿ_ದೇವತೆಗಳು

ಗೃಹ_ಪ್ರವೇಶದಲ್ಲಿ ಯಾಕೆ ಹಾಲನ್ನು ಉಕ್ಕಿಸಬೇಕು ,
ಆಕಳಹಾಲಿಗೆ ಯಾಕಿಷ್ಟು ಮಹತ್ವ  ಇದೆ ಅಂದರೆ  ಆ ಹಾಲಿನ ಪ್ರತಿಯೊಂದು ಹಂತದಲ್ಲೂ ಒಬ್ಬೊಬ್ಬ ಅಭಿಮಾನಿ ದೇವತೆಗಳಿದ್ದಾರೆ , 

ಅಗ್ನಿ ಹೋತ್ರ ,ಹವನ , ಭಗವಂತನ ನೈವೇದ್ಯಕ್ಕೆ , ಅಭಿಷೇಕಕ್ಕೆ   ಆಕಳಹಾಲು ಅಮೃತಕ್ಕೆ ಸಮಾನ
ಮೊದಲು ಹಾಲು  ಕೆಚ್ಚಲಿನಲ್ಲಿರುತ್ತದೆ. 

ಐತರೇಯ ಆರಣ್ಯಕದಲ್ಲಿ ಹೇಳುವಂತೆ ‘ರೌದ್ರಂ ಗವಿಸತ್’.
ಕೆಚ್ಚಲಲ್ಲಿರುವ ಹಾಲಿಗೆ ರುದ್ರದೇವರು ದೇವತೆ.
ನಂತರ ಹಾಲನ್ನು ಕರೆಯುವುದಕ್ಕಾಗಿ ಕರುವನ್ನು ಬಿಡುತ್ತೇವೆ. 

ಕೆಚ್ಚಲಿಗೆ ಕರು ಬಾಯಿ ಹಾಕುವಾಗ ಅದರ ದೇವತೆ ವಾಯು.

ನಂತರ ಹಾಲು ಕರೆಯುವುದು; ಕೆಚ್ಚಲಿನಿಂದ ಪಾತ್ರೆಗೆ ಹಾಲು ಬೀಳುವ ಹಂತದ ದೇವತೆ ಅಶ್ವಿನೀ ದೇವತೆಗಳು.
ಆನಂತರ ಪಾತ್ರೆಯಲ್ಲಿ ಹಾಲು ತುಂಬುತ್ತದೆ. 

‘ಸೌಮ್ಯಂ ದುಗ್ಧಂ’ – ಹಾಲುತುಂಬಿದ ಪಾತ್ರೆಯ ದೇವತೆ ಚಂದ್ರ. 

ಈ ಹಾಲನ್ನು ಒಲೆಯ ಮೇಲೆ ಇಟ್ಟೆವು; ಈ ಹಂತದ ದೇವತೆ ವರುಣ.
ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತದೆ. ಉಕ್ಕುವ ಹಾಲಿನ ದೇವತೆ ಆದಿತ್ಯ(ಪೂಷಾ).

ಹಾಲು ಉಕ್ಕಿ ಕೆಳಕ್ಕೆ ಹರಿಯಿತು; ಈ ಉಕ್ಕಿ ಹರಿಯುವ ಹಾಲಿನ ದೇವತೆ ಮರುತ್ತು.

[ಹಾಲು ಉಕ್ಕಿ ಹರಿಯಬೇಕು, ಅದು ಪರಮ ಮಾಂಗಲಿಕ. ಇದಕ್ಕಾಗಿ ಗೃಹ ಪ್ರವೇಶಕಾಲದಲ್ಲಿ ಹಾಲನ್ನು ಉಕ್ಕಿಸುತ್ತಾರೆ].

ಹಾಲು ಉಕ್ಕಿ ಬಿದ್ದಾಗ  ಅದನ್ನು ಹಾಗೆಯೇ ಒರೆಯಿಸಬಾರದು  ಅರಿಷಿಣ ಕುಂಕುಮ ಹಾಕಿ ನಂತರ ಒರೆಸಬೇಕು 
ಹಾಲು ಉಕ್ಕಿದಮೇಲೆ ಬೆಂಕಿ ಕಡಿಮೆ ಮಾಡುತ್ತೇವೆ. 

ಆಗ ಹಾಲಿನ ಮೇಲೆ ಸಣ್ಣಸಣ್ಣ ಬಿಂದುಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ಚುಕ್ಕೆಬಿದ್ದ ಹಾಲಿಗೆ ದೇವತೆ ವಿಶ್ವೇದೇವತೆಗಳು.

ಆ ನಂತರ ಚುಕ್ಕೆ ಹೋಗಿ ಕೆನೆ ಕಾಣಿಸಿಕೊಳ್ಳುತ್ತದೆ. ಕೆನೆ ಕಟ್ಟಿದ ಹಾಲಿಗೆ ಮಿತ್ರ ನಾಮಕ ಆದಿತ್ಯ ದೇವತೆ.

ಇಂತಹ ಹಾಲನ್ನು ಒಲೆಯಿಂದ ಕೆಳಗಿಳಿಸುತ್ತೇವೆ. ಹೀಗೆ ಕೆಳಕ್ಕಿಟ್ಟ ಹಾಲಿಗೆ ದ್ಯಾವಾ-ಪ್ರಥ್ವೀ ದೇವತೆಗಳು.

ಹಾಲು ತಣ್ಣಗಾದ ಮೇಲೆ ಅದನ್ನು ಎತ್ತಿಕೊಂಡು ಹೋಗುತ್ತೇವೆ. ಆ ಹಂತದಲ್ಲಿ ಸವಿತ್ರ ಅದರ ದೇವತೆ.

ಈ ಹಾಲನ್ನು ಯಜ್ಞಶಾಲೆಯೊಳಗೆ ಒಯ್ಯುತ್ತೇವೆ. ಆಗ ಸ್ವಯಂ ವಿಷ್ಣು ಅದರ ದೇವತೆ.

ಇಂತಹ ಹಾಲನ್ನು ಪುರೋಹಿತರ ಪಕ್ಕದಲ್ಲಿ ಇಟ್ಟೆವು. ಆಗ ಅದಕ್ಕೆ ಬೃಹಸ್ಪತಿ ದೇವತೆ.

ನಂತರ ಮೊದಲನೇ ಆಹುತಿ. ಆ ಆಹುತಿಯ ದೇವತೆ ಅಗ್ನಿ [ಅಗ್ನಯೇ ಪೂರ್ವಾಹುತಿಃ].

‘ಅಗ್ನಯೇ ಸ್ವಾಹಾ-ಅಗ್ನಯ ಇದಂ ನ ಮಮ’ ಎಂದು ಆಹುತಿ ಕೊಡುವುದು.

ನಂತರ – ಪ್ರಜಾಪತೆಯೇ ಸ್ವಾಹ ಪ್ರಜಾಪತಯ ಇದಂ ನ ಮಮ ಎಂದು ಆಹುತಿ ಕೊಡುತ್ತಾರೆ.

ಕೊನೆಯದಾಗಿ ‘ಇಂದ್ರಮ್ ಹುತಮ್’- ಎಂದು ಇಂದ್ರನಿಗೆ ಆಹುತಿ ಕೊಡುತ್ತಾರೆ.

ಈತ ಹದಿನಾರನೇ ದೇವತೆ.

ಹೀಗೆ ಯಜ್ಞ ,ಹೋಮ ,ಹವನ ಎಲ್ಲವೂ ಆಕಳ ಹಾಲಿಲ್ಲದೆ ಅಪೂರ್ಣ , ಗೋಮಾತೆಗೆ ಪ್ರತಿದಿನ  ಪೂಜೆ ಪ್ರದಕ್ಷಣೆ ನಮಸ್ಕಾರ ಮಾಡಿದರೆ ಮೂವತ್ತಮೂರು ಕೋಟಿ ದೇವತೆಗಳು ಸಂತ್ರಪ್ತರಾಗುತ್ತಾರೆ...

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

ಆತ್ಮ ವಿಶ್ವಾಸವೆಂಬ ಅಕ್ಷಯ ನಿಧಿ

 

ಈ ಜಗತ್ತಿನಲ್ಲಿ ಜನಿಸಿದ ಮಾನವನಿಗೆ ಭಗವಂತನು ಅತ್ಯಂತ ಸುಂದರವೂ, ಯುಕ್ತವೂ ಆದ ಶರೀರವನ್ನು ನೀಡಿದ್ದಾನೆ. ಈ ಶರೀರದಲ್ಲಿ ಐದು ಇಂದ್ರಿಯಗಳನ್ನೂ, ಅವುಗಳನ್ನು ಬಳಸಲು ಸೂಕ್ತವಾದ ಬುದ್ಧಿಯನ್ನೂ ನೀಡಿದ್ದಾನೆ. ಎಷ್ಟೇ ಉಪಯುಕ್ತ ಸಾಧನಗಳು ಇದ್ದರೂ ಅವುಗಳನ್ನು ಸಂದರ್ಭಕ್ಕೆ ಸರಿಯಾಗಿ ಸಮರ್ಪಕವಾಗಿ ಬಳಸಿಕೊಳ್ಳುವ ಆತ್ಮವಿಶ್ವಾಸದ ಕೊರತೆಯಿಂದಾಗಿ ಅನೇಕ ಬಾರಿ ವಿಫಲನಾಗಿ ಬಿಡುವುದುಂಟು. ಈ ನಿಟ್ಟಿನಲ್ಲಿ ಆತ್ಮವಿಶ್ವಾಸದ ಮಹತ್ವವನ್ನು ನಿರೂಪಿಸುವಂತಹ ಒಂದು ಪ್ರಸಂಗ ಇಲ್ಲಿದೆ.
ಅಮೆರಿಕ ದೇಶದ ನ್ಯೂಯಾರ್ಕ್‌ ನಗರದಲ್ಲಿ ಎಡ್ವರ್ಡ್‌ ಐನಿಸ್‌ ಎಂಬ ಒಬ್ಬ ಶ್ರೀಮಂತನಿದ್ದನು. ಆತ ಧರ್ಮ-ಕರ್ಮ, ಭಗವಂತ ಇತ್ಯಾದಿ ವಿಚಾರಗಳಲ್ಲಿ ಅಪಾರ ವಿಶ್ವಾಸ ಉಳ್ಳವನಾಗಿದ್ದ. ತನ್ನ ಬಂಧು-ಬಳಗದವರ ಪೈಕಿ ಬಹಳ ಬಡವನಾಗಿದ್ದರೂ ಅವನಲ್ಲಿ ಅದ್ಭುತ ಆತ್ಮವಿಶ್ವಾಸವಿತ್ತು. ಆದ್ದರಿಂದಲೇ ಎಲ್ಲರೂ ಆತನನ್ನು ಗೌರವಿಸುತ್ತಿದ್ದರು. ಒಮ್ಮೆ ಊರಿಂದ ಹೊರಗೆ ನೆರೆಯ ನಗರಕ್ಕೆ ಹೋಗುತ್ತಿರುವಾಗ ತಾನು ನಡೆಯುತ್ತಿರುವ ದಾರಿಯ ಪಕ್ಕದ ಪರಿಸರದ ಭೂಮಿಯಡಿಯಲ್ಲಿ ಸಾಕಷ್ಟು ಬಂಗಾರದ ನಿಧಿ ಇದೆ ಎಂದೆನಿಸಿತು. ಪಕ್ಕದ ಊರಲ್ಲಿ ಅವನ ಪರಿಚಯದ ಒಬ್ಬ ಜ್ಯೋತಿಷಿಯಿದ್ದರು. ಅವರೊಡನೆ ಈ ಬಂಗಾರದ ನಿಧಿಯ ಬಗ್ಗೆ ಸಲಹೆ ಕೇಳಿದ. ಐನಿಸ್‌ನ ಬಳಿ ಹಣವಿರದಿದ್ದರೂ ಆತನ ಆತ್ಮವಿಶ್ವಾಸದ ಬಗ್ಗೆ ಜ್ಯೋತಿಷಿಗೆ ಪೂರ್ಣ ಭರವಸೆ ಇದ್ದುದರಿಂದ 'ನೀನು ಮುನ್ನಡೆಯುವಂತವನಾಗು. ಭಗವತ್‌ ಕೃಪೆಯಿಂದ ಯಶಸ್ವಿಯಾಗಬಲ್ಲೆ' ಎಂದು ಸಲಹೆ ನೀಡಿದರು.
ಅಂತೆಯೇ ಐನಿಸ್‌ ತನ್ನ ಬಳಿಯಿದ್ದ ಸಾಧನ-ಸಂಪತ್ತು ಮತ್ತು ಗೆಳೆಯರ ನೆರವು ಪಡೆದು, ಬಂಗಾರದ ನಿಧಿ ಇದ್ದಿರಬಹುದಾದ ಜಮೀನನ್ನು ಖರೀದಿಸಿ, ಅಲ್ಲಿ ಅಗೆತವನ್ನು ಆರಂಭಿಸಿಯೇ ಬಿಟ್ಟ. ಹಾಗೆ ಅಗೆದಾಗ ಕೆಲವು ಬೆಳ್ಳಿಯ ತುಂಡುಗಳು ದೊರೆತರೂ ಬಂಗಾರ ಸಿಗಲೇ ಇಲ್ಲ. ಆಗ ಆತ ತನ್ನ ಕುಟುಂಬದ ಹಿರಿಯ ಮಹಿಳೆಯಾದ ಮಾರಿಯಾ ಮಾರ್ಲೆ ಎಂಬಾಕೆಯೊಡನೆ ನುಡಿದ- ''ನನ್ನ ಆತ್ಮವಿಶ್ವಾಸದಲ್ಲಿ ನನಗೆ ಪೂರ್ಣ ನಂಬಿಕೆಯಿದೆ. ಅಲ್ಲಿ ಬಂಗಾರ ಇದ್ದೇ ಇದೆ. ನನಗೆ ಸಿಗದಿದ್ದರೂ ಮುಂದೆ ಸಿಗಲಿದೆ,'' ಎಂದು ಹೇಳಿ ಮಡಿದೇ ಬಿಟ್ಟ.
ಆತನ ಮೃತ್ಯುವಿನ 16 ವರ್ಷಗಳ ಬಳಿಕ ಮಾರಿಯಾ ಮಾರ್ಲೆ ಎಂಬ ಮಹಿಳೆ ಮತ್ತೆ ಅಗೆತವನ್ನು ಆರಂಭಿಸಿದಳು. 600 ಅಡಿ ಆಳಕ್ಕೆ ಹೋದಾಗ ಚಿನ್ನ, ಬೆಳ್ಳಿ, ತಾಮ್ರ, ಸತುಗಳ ನಿಧಿಯೇ ದೊರೆಯಿತು. ಇದರಿಂದ ಲಕ್ಷಾಂತರ ಡಾಲರ್‌ಗಳ ಲಾಭವಾದಾಗ ಆ ಮಹಿಳೆ ನುಡಿದರು- ''ಆತ್ಮವಿಶ್ವಾಸವೇ ಒಂದು ಮಹಾ ನಿಧಿ ಇದ್ದಂತೆ. ಇದರಿಂದ ಮನುಷ್ಯನ ಸ್ವಂತಕ್ಕೆ ಲಾಭವಾಗದಿದ್ದರೂ ಇತರರ ಕಲ್ಯಾಣಕ್ಕೆ ನೆರವಾಗುವುದರಲ್ಲಿ ಸಂಶಯವಿಲ್ಲ,'' ಆ ಮಹಿಳೆ ಆ ನಿಧಿಯನ್ನು ಎಡ್ವರ್ಡ್‌ನ ಹೆಸರಲ್ಲಿ ಲೋಕಕಲ್ಯಾಣಕ್ಕೆ ಬಳಸಲು ನಿರ್ಧರಿಸಿದಳು.
ಹೀಗೆ ಆತ್ಮವಿಶ್ವಾಸದ ಫಲವು ತಕ್ಷ ಣವೇ ದೊರಕದಿದ್ದರೂ ಪ್ರಯತ್ನವನ್ನು ಮುನ್ನಡೆಸಿದಲ್ಲಿ ಯಶಸ್ಸು ದೊರೆಯುವುದರಲ್ಲಿ ಸಂದೇಹವಿಲ್ಲ. ಆತ್ಮವಿಶ್ವಾಸವುಳ್ಳವರು, ಆಶಾವಾದಿಗಳಾಗಿ ಭಗವಂತನನ್ನು ನಂಬಿಸಿ ಕಾರ್ಯವನ್ನು ಮುನ್ನಡೆಸಿದಾಗ ಸಫಲತೆ ದೊರೆತೇ ತೀರುವುದು. ಆತ್ಮವಿಶ್ವಾಸವುಳ್ಳವರು ಭಗವತ್‌ ಕೃಪೆಯೊಡನೆ ಪರಿಶ್ರಮ ವಹಿಸಿದಾಗ ಯಶಸ್ಸು ಗಳಿಸುವುದು ಖಂಡಿತ.
ಕೃಪೆ: ವೀರೇಂದ್ರ ಹೆಗ್ಗಡೆಯವರು.

April 14, 2021

ಶಂ ನೋ ಮಿತ್ರಃ ಶಂ ವರುಣಃ

ಶಂ ನೋ ಭವತ್ವರ್ಯಮಾ 

ಶಂ ನೋ ಮಿತ್ರಃ ಶಂ ವರುಣಃ | ಶಂ ನೋ ಭವತ್ವರ್ಯಮಾ| ಶಂ ನ ಇಂದ್ರೋ ಬೃಹಸ್ಪತಿಃ | 
ಶಂ ನೋ ವಿಷ್ಣುರುರುಕ್ರಮಃ |
ಪ್ರಾಣ ಸಂಚಲನಕ್ಕೆ ಅಥವಾ ಪ್ರಾಣವೃತ್ತಕ್ಕೆ ಅಭಿಮಾನಿ ದೇವತೆಯಾದ ಮಿತ್ರ ಎನ್ನುವ ದೇವತೆ ನಮಗೆ ಸುಖವನ್ನು ಕೊಟ್ಟು ಒಳ್ಳೆಯದನ್ನು ಮಾಡಲಿ. ಈ ಮಿತ್ರನು ದಿವೋ ದೇವತೆ. ಅಂದರೆ ಹಗಲಿಗೆ ಅಭಿಮಾನ ದೇವತೆ ಎನ್ನುವುದು ತೈತ್ತಿರೀಯ ಬ್ರಾಹ್ಮಣದಲ್ಲಿ ಸಾಯಣಾಚಾರ್ಯರು. ರಾತ್ರಿಗೆ ವರುಣನು ಅಭಿಮಾನದೇವತೆಯಾಗಿದ್ದು ಅಪಾನಕ್ರಿಯೆಯನ್ನು ಸರಾಗವಾಗಿ ಮಾಡುವ ಸಾಮರ್ಥ್ಯಹೊಂದಿರುವವನಾಗಿ ನಮಗೆ ಸುಖವನ್ನು ಒದಗಿಸಲಿ. ಶಂ ನೋ ಭವತ್ವರ್ಯಮಾ ಎನ್ನುವುದು ಎಷ್ಟು ಮಹತ್ವವನ್ನು ಹೊಂದಿದೆ. ನಮ್ಮ ಕಣ್ಣುಗಳಿಗೆ ಆದಿತ್ಯ ಮಂಡಲಕ್ಕೆ ಅಭಿಮಾನಿ ದೆವತೆಯಾದ ಅರ್ಯಮಾ, (ಸೂರ್ಯ) ಶುಭವನ್ನು ಉಂಟುಮಾಡಲಿ. ಅಂದರೆ ಕಣ್ಣುಗಳು ಜ್ಞಾನದ ಸಂಕೇತ. ಜ್ಞಾನವನ್ನು ಸೂರ್ಯ ವರ್ಧಿಸಲಿ. ನಮ್ಮ ಬಾಹು ಬಲಗಳು ವರ್ಧಿಸಿ ನಮಗೆ ಶಕ್ತಿಯನ್ನು ಕೊಡುವ ದೇವತೆ ಇಂದ್ರ ಆತ ನಮಗೆ ಸುಖವನ್ನು ಒದಗಿಸಲಿ ಎಂದಿರುವುದನ್ನೆ ಶಂನ ಇಂದ್ರೋ ಎಂದು ಮುಂದೆ ಬಂದಿರುವುದು. ನಮ್ಮ ಬುದ್ಧಿ ಮತ್ತು ಮಾತಿಗೆ ಅಭಿಮಾನಿ ದೇವತೆಯಾಗಿರುವವನು ಗುರು. ಅದನ್ನೇ 'ವಾಚೀ ಬುದ್ಧೌ ಚ ಅಭಿಮಾನೀ ಬೃಹಸ್ಪತಿಃ.' ನಮ್ಮ ಕಾಲುಗಳಿಗೆ ಬಲವನ್ನು ಕೊಡುವವನು ವಿಷ್ಣು. ’ಶಂನೋ ವಿಷ್ಣುರುರುಕ್ರಮಃ’ ಎಂದಿರುವುದು ಅದನ್ನೆ, ತ್ರಿವಿಕ್ರಮಾವತಾರಿಯಾಗಿ ಪಾದಗಳನ್ನು ಪಸರಿಸಿದ ವಿಷ್ಣುವು ಕಾಲುಗಳನ್ನು ಅಂದರೆ ನಮ್ಮ ಜೀವನವನ್ನು ರಕ್ಷಿಸಿ ಸುಖ ಸಂತೋಷವನ್ನು ನೀಡಲಿ ಎನ್ನುವುದು ಒಂದರ್ಥವಾದರೆ. ವಿಷ್ಣುವು ತನ್ನ ಮೂರು ಪಾದಗಳ ಸಂಕೇತವನ್ನು ಪೂರ್ವಾಹ್ನದ ಪಾದ ಮತ್ತು ಅಪರಾಹ್ನದ ಪಾದ ಸಾಯಂ ಪಾದವಾಗಿ ಗಣಿಸಿ ಸೂರ್ಯ ಚಲನೆಯು ನಮ್ಮ ದೈಹಿಕ ವ್ಯವಹಾರಗಳಿಗೆ ಮತ್ತು ಮನಸ್ಸು ಬುದ್ದಿಗಳನ್ನು ನಿಯಂತ್ರಿಸಿ ನಮ್ಮನ್ನು ಸಲಹಲಿ ಎಂದು ಇನ್ನೊಂದು ಅರ್ಥ. ಅಥವಾ ಪ್ರಾಣವೇ ಮೊದಲಾದ ಅವಯವಗಳ ಅಭಿಮಾನಿ ದೆವತೆಯನ್ನಾಗಿ ಸ್ತುತಿಸುವ ಮಂತ್ರ ಅಂದರೆ ಇದು ಬ್ರಹ್ಮಾಂಡವನ್ನೇ ತನ್ನೊಳಗೆ ಅಡಗಿಸಿಕೊಂಡಿರುವ ವಿರಾಟ್ ಪುರುಷನನ್ನು ಕುರಿತಾಗಿ ಹೇಳಿದ ಮಂತ್ರ. ಇದನ್ನು ತೈತ್ತಿರೀಯ ಆರಣ್ಯಕದ ಶೀಕ್ಷೋಪನಿಷತ್ ಎಂದು ಕರೆಯಲಾಗಿದೆ. 

ರಾಹೂಗಣ ಎನ್ನುವವನ ಮಗ ಗೋತಮನು  ಋಗ್ವೇದದ ಒಂದನೇ ಮಂಡಲದ ೯೦ನೇ ಸೂಕ್ತದಲ್ಲಿ ವಿಶ್ವೇದೇವತೆಗಳನ್ನು ಸ್ತುತಿಸುತ್ತಾ ಇದೇ ಮಂತ್ರ ಹೇಳಲಾಗಿದ್ದು ಅಲ್ಲಿ ಹಗಲಿನ ದೇವನಾದ ಸೂರ್ಯ ಮತ್ತು ರಾತ್ರಿಯ ಅಭಿಮಾನಿ ದೇವನಾದ ವರುಣನು ನಮಗೆ ಸುಖವನ್ನು ಒದಗಿಸಲಿ. ಅಹೋರಾತ್ರಗಳ ವಿಭಾಗವನ್ನು ನಿಯಮಿಸುವ ಅರ್ಯಮನು ನಮಗೆ ಸುಖವನ್ನು ಕೊಡಲಿ. ಬೃಹಸ್ಪತಿ ಮತ್ತು ಇಂದ್ರರು ನಮಗೆ ಸುಖದಾಯಕರಾಗಲಿ. ದೀರ್ಘಪಾದದ ವಿಷ್ಣು ನಮಗೆ ಭಾಗ್ಯದಾಯಕನಾಗಲಿ ಎಂದಿರುವುದು ಸಿಗುತ್ತದೆ. ಇಲ್ಲಿ ಬೃಹಸ್ಪತಿಗೆ ಒಂದು ಗುರು ಎನ್ನುವ ಅರ್ಥವಾದರೆ ಇಮ್ನೊಂದು ಎಲ್ಲ ದೇವತೆಗಳಿಗೆ ದೇವತೆ ಎಂದು. ಉರುಕ್ರಮಃ ಎನ್ನುವುದೂ ಸಹ ದೊಡ್ಡದಾದ ಪಾದಗಳುಳ್ಳ ತ್ರಿವಿಕ್ರಮ ಎಂದು.

#ಶಂ_ನೋ_ವಿಷ್ಣುರುರುಕ್ರಮಃ
ಸದ್ಯೋಜಾತ

ಕರೋನಾಗೆ ವಿದುರ ನೀತಿ ಅನುಸರಿಸಿ

#ವಿದುರ_ನೀತಿ

ಮಹಾತ್ಮಾ ವಿದುರನಿಗೆ ತನ್ನ ಗುಪ್ತಚರರಿಂದ ದುರ್ಯೋಧನನಿಂದ ಪಾಂಡವರ ನಾಶಕ್ಕಾಗಿ ಮಾಡುವ ಎಲ್ಲಾ ಕುಟಿಲತೆಯ ಬಗ್ಗೆ ಸೂಚನೆ ಸಿಗುತಿತ್ತು. ಆದರೆ ಪಾಂಡವರನ್ನು ವಾರಣಾವತಕ್ಕೆ ಕಳುಹಿಸದಂತೆ ಮಾಡುವುದು ವಿದುರನ ಕೈಯಲ್ಲಿ ಸಾಧ್ಯವಿರಲಿಲ್ಲ. (ಅರಗಿನ ಮನೆಯಲ್ಲಿ ಪಾಂಡವರನ್ನು ಕೊಲ್ಲುವ ಉಪಾಯ ದುರ್ಯೋಧನ ಮಾಡಿದ್ದ). ಆದರೆ ಅವರನ್ನು ರಕ್ಷಿಸುವ ಪ್ರಯತ್ನ ಮಾಡುವುದು  ಸಾಧ್ಯವಿತ್ತು. ಅದೇ ರೀತಿ ಅವರನ್ನು ರಕ್ಷಿಸುವ ಉಪಾಯವನ್ನು ಸತತವಾಗಿ ಚಿಂತಿಸುತ್ತಿದ್ದ.

ವಾರಣಾವತಕ್ಕೆ ತೆರಳುವ ಮೊದಲು ಪಾಂಡವರು ಕುಂತೀ ಸಮೇತ ಮಹಾತ್ಮ ವಿದುರನ ಆಶೀರ್ವಾದ ಪಡೆಯುವುದಕ್ಕೆ ಬರುತ್ತಾರೆ. ಸಂಧರ್ಭ ನೋಡಿ ವಿದುರ ಧರ್ಮರಾಯನಲ್ಲಿ ವಿಚಾರಿಸುತ್ತಾನೆ. ಒಂದು ವೇಳೆ ಭಯಾನಕ  ಕಾಡ್ಗಿಚ್ಚು ಉಂಟಾದರೆ, ಕಾಡಿನಲ್ಲಿ ಯಾವ ಪ್ರಾಣಿ ಸುರಕ್ಷಿತವಾಗಿ ಉಳಿಯುವ ಸಾಧ್ಯವೆಂದು ಕೇಳುತ್ತಾನೆ. ಆಗ ಧರ್ಮರಾಯ ಕಾಡ್ಗಿಚ್ಚು ಹತ್ತಿಕೊಂಡಾಗ ಸ್ವಚ್ಛಂದವಾಗಿ, ನಿರ್ಭಯದಿಂದ ಸಂಚರಿಸುವ, ಸಿಂಹ, ಹುಲಿ, ಚಿರತೆ, ಆನೆ ಮತ್ತು ಎಲ್ಲಕ್ಕಿಂತ ವೇಗವಾಗಿ ಓಡುವ ಜಿಂಕೆ ಬೆಂಕಿಯಿಂದ ಸುಟ್ಟು ಸಾಯುತ್ತವೆ. ಆದರೆ ಬಿಲದಲ್ಲಿರುವ ಇಲಿ ಬದುಕಿ ಉಳಿಯುತ್ತದೆ. ಅದು ಬೆಂಕಿ ನಂದಿದ ಮೇಲೆ ಬಿಲದಿಂದ ಹೊರಬಂದು ಜೀವನ ಸಾಗಿಸುತ್ತದೆ. ಆಗ ವಿದುರ ಹೇಳುತ್ತಾನೆ, ಧರ್ಮರಾಯ, ನಿನ್ನ ಉತ್ತರದಿಂದ ನನಗೆ ಸಮಾಧಾನವಾಯಿತು. ಸುರಕ್ಷಿತವಾಗಿ ಹೋಗಿಬರುವಂತೆ ಆಶೀರ್ವಾದ ನೀಡುತ್ತಾನೆ.

ಇಡೀ ವಿಶ್ವಕ್ಕೆ ಬಂದಿರುವ ಅನಾರೋಗ್ಯ ಆಪತ್ತು ಕೂಡ ಒಂದು ಭಯಾನಕ ಅಗ್ನಿಯಾಗಿದೆ. ಯಾರು ತಮ್ಮ ತಮ್ಮ ಮನೆಯಲ್ಲಿರುತ್ತಾರೋ ಅವರು ಸುರಕ್ಷಿತವಾಗಿರುತ್ತಾರೆ. ದಯವಿಟ್ಟು ಈ ಅಗ್ನಿ ಶಾಂತವಾಗುವ ನಿರೀಕ್ಷೆಯಲ್ಲಿರಿ...

 || *ಸರ್ವೇ ಜನಃ ಸುಖಿನೋ ಭವಂತು* |l

ಯಥಾದೃಷ್ಟಿ: ತಥಾ ಸೃಷ್ಟಿ


        ಪ್ರಪಂಚ, ಸಂಸಾರ, ಜಗತ್ತು ಮತ್ತು ಸೃಷ್ಟಿ ಇವೆಲ್ಲವುಗಳು ಪರ್ಯಾಯ ಶಬ್ದಗಳು. ಸೃಷ್ಟಿ ಎಂದರೆ  ನಿರ್ಮಿತಿ ಅಥವಾ ನಿರ್ಮಾಣ  ಎಂದರ್ಥ.ಇದು  ನಿರಂತರವಾಗಿ ನಡೆಯುವ ಒಂದು ಪ್ರಕ್ರಿಯೆ.ಅಂತೆಯೇ ಇದಕ್ಕೆ ಪುನರಾವೃತ್ತಿ ಎಂದೂ ಕರೆಯುವರು. ಇಲ್ಲಿ  ಉತ್ಪತ್ತಿ, ಸ್ಥಿತಿ ಮತ್ತು ಲಯಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಆರಂಭದ ಗೊತ್ತುಗುರಿಯಿಲ್ಲದ ಎಂದೂ  ಸಮಾಪ್ತಿ ಯಾಗದ ಪ್ರಕ್ರಿಯೆಯೇ ಸೃಷ್ಟಿ. 4 ಯುಗಗಳು ಒಂದು ಸಾವಿರ  ಸಾರೆ ಪುನರಾವರ್ತನೆಗೊಂಡಾಗ ಸೃಷ್ಟಿಕರ್ತನಾದ ಬ್ರಹ್ಮನಿಗೆ ಒಂದು ದಿವಸ ವಾಗುವುದು. ಇದೇ ಪ್ರಮಾಣದಲ್ಲಿ ಅವನ ನೂರು ವರ್ಷಗಳು ಮುಗಿದಾಗ ಈ  ಸೃಷ್ಟಿಯು ಪ್ರಳಯವಾಗುವುದು. ಆಗ ಮತ್ತೊಬ್ಬ ಬ್ರಹ್ಮನು ಉದಿಸಿ ಬಂದು ಈ  ಸೃಷ್ಟಿಯನ್ನು ತನ್ನ ನೂರು ವರ್ಷಗಳವರೆಗೆ ಮಾಡುತ್ತಲೇ ಇರುತ್ತಾನೆ. ಹೀಗೆ ನಿರಂತರವಾಗಿ ನಡೆಯುವ ಒಂದು ಅಖಂಡ ಪ್ರಕ್ರಿಯೆಯೇ     ಸೃಷ್ಟಿಯು.
ಜಾತಸ್ಯ ಹಿ ಧ್ರುವೋ ಮೃತ್ಯು: ಧ್ರುವಂ ಜನ್ಮ ಮೃತಸ್ಯ ಚ!
ಜಂತುರ್ಮರಣಜನ್ಮಭ್ಯಾಂ   ಪರಿಭ್ರಮತಿ  ಚಕ್ರವತ್!!
ಎಂಬುದಾಗಿ ಶ್ರೀ ಸಿದ್ಧಾಂತಶಿಖಾಮಣಿಯಲ್ಲಿ.    ಶ್ರೀ ಜಗದ್ಗುರು ರೇಣುಕ ಭಗವತ್ಪಾದರು  ಸೃಷ್ಟಿಯ ಪುನರಾವರ್ತನೆಯನ್ನು ಸ್ಪಷ್ಟಪಡಿಸಿದ್ದಾರೆ.
ಶ್ರೀ ಜಗದ್ಗುರು ಶಂಕರಾಚಾರ್ಯರೂ ಸಹ  "ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ" ಎಂಬುದಾಗಿ ಹೇಳಿ  ಅದೇ ಮಾತನ್ನೇ  ಸಮರ್ಥಿಸಿದ್ದಾರೆ. 
        ಜಗತ್ತಿನ ಸಕಲ ಜೀವಿಗಳು ಆಹಾರ, ನಿದ್ರೆ, ಭಯ ಮತ್ತು ಮೈಥುನಗಳೆಂಬ  ಸಾಮಾನ್ಯ ಕ್ರಿಯೆಗಳಲ್ಲಿ ತಮ್ಮ ಆಯುಷ್ಯವನ್ನು  ಕಳೆದುಕೊಂಡು ಮತ್ತೆ
ಪ್ರಾರಬ್ಧಕರ್ಮಾನುಸಾರವಾಗಿ ಯಾವುದೋ ಒಂದು ಯೋನಿಯಲ್ಲಿ  ಜನ್ಮತಾಳಿ ಮತ್ತೆ ಮತ್ತೆ ಅದೇ ಅದೇ ವ್ಯವಹಾರಗಳನ್ನು ಮಾಡುತ್ತಲೇ ಇರುತ್ತವೆ. ಹೀಗೆ ಮಾಡುತ್ತಿರುವ  ಈ ಜೀವಿಗಳು ಒಂದೊಂದು ಯೋನಿಯಲ್ಲಿ ಎಷ್ಟು ಸಾರಿ ಜನ್ಮತಾಳಿ ಬಂದಿದ್ದಾರೆ  ಎಂಬುದರ ಬಗ್ಗೆ ಅಂಕಿ-ಸಂಖ್ಯೆಗಳ ಲೆಕ್ಕವೇ ಇಲ್ಲ. ಅದನ್ನೇ ಶ್ರೀ ಮನ್ ನಿಜಗುಣ ಶಿವಯೋಗಿಗಳು
ಕೈವಲ್ಯ ಪದ್ಧತಿಯ ಜೀವಸಂಬೋಧನೆ ಸ್ಥಲದಲ್ಲಿ
"ಧರೆಯನೆಲ್ಲವನು ಸಣ್ಣಿಸಿಧೂಳಿಮಾಡಲಾ  ಪರಮಾಣುಗಳವೆನಿತನಿತು  ದೇಹವನು ಧರಿ ಸುತೊಂದೊಂದು  ಜೀವದ ಬಸುರೊಳು ಬಂದು ಮರಳಿ ನೀನತ್ತ ತಿರುಗದಂತೆ ರಚಿಸಿದೆ." ಎಂಬ ಈ ಪದ್ಯದಲ್ಲಿ ವಿಷಯ ಭೋಗಿಯಾದ ಜೀವನು ಇದಷ್ಟು ಸಾರಿ ಹುಟ್ಟಿ ಸತ್ತಿದ್ದಾರೆಂಬುದನ್ನು ಬಹಳ ಮನೋಜ್ಞವಾಗಿ ವರ್ಣಿಸಿದ್ದಾರೆ.
       ಈ ಸೃಷ್ಟಿಯಲ್ಲಿ ಬರುವ ಪ್ರತಿಯೊಂದು ವಸ್ತು ಹಾಗೂ ವ್ಯಕ್ತಿಗಳು ಭಿನ್ನ ಭಿನ್ನರೇ ಆಗಿರುತ್ತಾರೆ. ನೋಡಲು ಸಮಾನವಾಗಿ ಕಂಡರೂ  ಪರಸ್ಪರರಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಅಂತೆಯೇ ಈ  ಸೃಷ್ಟಿಯು ವಿಷಮವಾದದ್ದು. ಈ ವಿಷಮತೆಗೆ  ಸೃಷ್ಟಿಕರ್ತನಾದ ದೇವರೇ ಕಾರಣವೆಂದರೆ ಅವನ ಮೇಲೆ ವೈಷಮ್ಯ  ದೋಷವು  ಪ್ರಾಪ್ತವಾಗುವದು  ಆದ್ದರಿಂದ ಪ್ರಾಣಿಗಳ ಅದೃಷ್ಟವೇ ವಿಷಮತೆಗೆ ಕಾರಣ ಎಂಬುದಾಗಿ ಸರ್ವ ದಾರ್ಶನಿಕರು ಒಪ್ಪಿಕೊಂಡಿದ್ದಾರೆ.
ಒಂದು ವಸ್ತು ನಿರ್ಮಾಣವಾಗಬೇಕಾದರೆ ಅದಕ್ಕೊಂದು ಪ್ರಯೋಜನ ಇದ್ದೇ ಇರುತ್ತದೆ. ಈ ಜಗತ್ತಿನಲ್ಲಿ ಭೋಗ ಇಲ್ಲವೇ ಮೋಕ್ಷ  ಇವೆರಡೇ  ಮುಖ್ಯವಾದ ಪ್ರಯೋಜಗಳು. ಅಂತೆಯೇ  ಅನಂತ ಜೀವಿಗಳ ಭೋಗ- ಮೋಕ್ಷಕ್ಕಾಗಿ   ಈಶ್ವರನಿಂದ ನಿರ್ಮಿತವಾದ ಚಿತ್ರವಿಚಿತ್ರವಾದ  ಈ ವಿಶ್ವವೇ   ಸೃಷ್ಟಿಯು. 
        ಶಬ್ದಸ್ಪರ್ಶಾದಿ  ವಿಷಯಗಳು  ಕೇವಲ ಭೋಗಕ್ಕಾಗಿಯೇ ಅಲ್ಲ ಅವುಗಳನ್ನು ಪುನಃ ಪುನಃ ಅನುಭವಿಸಿ ಅದರಲ್ಲಿಯ  ಕ್ಷಣಿಕತೆ, ಅನಿತ್ಯತೆ ಮತ್ತು ಅಸಾರತೆಯನ್ನು ಅರಿತು ಅದರಿಂದ ವಿಮುಖನಾಗಿ  ವೈರಾಗ್ಯವನ್ನು ಹೊಂದಿ ಶಿವಭಕ್ತಿಯನ್ನು ಮಾಡಿ  ಕೊನೆಗೆ ಮುಕ್ತಿಯನ್ನು ಪಡೆಯುವದೇ  ಆಗಿರುತ್ತದೆ.  ಅಂತೆಯೇ ಸೃಷ್ಟಿಯಲ್ಲಿಯ ಅನಂತ ಜೀವಿಗಳು ವಿಷಯ ಭೋಗದಲ್ಲಿಯೇ ಲಿಪ್ತ ರಾಗಿದ್ದರೂ    ಕೋಟಿಗೊಬ್ಬರಂತೆ ಈ ಭೋಗದಿಂದ ವಿರಕ್ತರಾಗಿ ಭಗವಂತನಲ್ಲಿ   ಅನನ್ಯವಾದ ಭಕ್ತಿಯನ್ನು ಮಾಡಿ ಸದ್ಗುರುವಿನಿಂದ ಜ್ಞಾನವನ್ನು ಪಡೆದುಕೊಂಡು ಸ್ವತ:  ಜೀವನ್ಮುಕ್ತಿಯನ್ನು ಪಡೆದು ಅನ್ಯರಿಗೂ ಮೋಕ್ಷದ ಮಾರ್ಗವನ್ನು ತೋರಿಸಿದ ಆಚಾರ್ಯರು, ಸಂತರು, ಶರಣರು ಮತ್ತು  ಪ್ರವಾದಿಗಳು ಅನೇಕರು ಆಗಿಹೋಗಿದ್ದಾರೆ. ಆದ್ದರಿಂದ  ಭೋಗ ಮೋಕ್ಷಗಳೆರಡೂ ಈ  ಸೃಷ್ಟಿಯ ಪ್ರಯೋಜನಗಳೆಂದು ತಿಳಿದುಕೊಳ್ಳಬೇಕು. 
    ಶಿವನ ಈ ಸೃಷ್ಟಿಯ ರಹಸ್ಯವು ಅತ್ಯಂತ ಗೂಢವಾದದ್ದು. ಯಾರೇ ಎಷ್ಟೇ ತಿಳಿದುಕೊಂಡರೂ  ಸಹ ಇನ್ನೂ ತಿಳಿಯಬೇಕಾದದ್ದು ಬಹಳಷ್ಟಿರುತ್ತದೆ. ಆದರೂ ಈ ದೇಶದ ಆಚಾರ್ಯರು ದಾರ್ಶನಿಕರು ಸಾಧು ಸಂತರು ತಮ್ಮ ತಮ್ಮ ಚಿಂತನೆಗನುಸಾರವಾಗಿ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಅವರೆಲ್ಲರ ವಿಚಾರಧಾರೆಯನ್ನು ಇಲ್ಲಿ ಸಂಕ್ಷೇಪವಾಗಿ ಕ್ರೋಡಿಕರಿಸಲಾಗಿದೆ.
             ಸನಾತನ ವೀರಶೈವಧರ್ಮದ ಮೂಲ ಸಂಸ್ಥಾಪನಾಚಾರ್ಯರಾದ ಶ್ರೀ ಜಗದ್ಗುರು ಪಂಚಾಚಾರ್ಯರು ಪ್ರಪ್ರಥಮವಾಗಿ ಪಡ್ವಿಡಿ, ವೃಷ್ಟಿ, ಲಂಬನ, ಮುಕ್ತಾಗುಚ್ಛ ಮತ್ತು ಪಂಚವರ್ಣಗಳೆಂಬ  ಪಂಚಸೂತ್ರಗಳ ಮುಖಾಂತರ ಈ ಸೃಷ್ಟಿಯು ಶಿವನ ಲೀಲೆ ಎಂಬುದಾಗಿ ಹೇಳಿ  ಇದು ಜೀವಿಗಳ ಭೋಗ ಮೋಕ್ಷಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಸೂತ್ರರೂಪದಲ್ಲಿ ತಿಳಿಸಿಕೊಟ್ಟಿದ್ದಾರೆ.                           "ಲೋಕವತ್ತು ಲೀಲಾ ಕೈವಲ್ಯಂ" ಎಂಬ ಬ್ರಹ್ಮಸೂತ್ರದಲ್ಲಿ  ವ್ಯಾಸ ಮಹರ್ಷಿಯೂ  ಸಹ  ಸೃಷ್ಟಿಯು ಶಿವನ ಲೀಲೆ ಎಂದೇ ಪ್ರತಿಪಾದಿಸಿದ್ದಾನೆ . ತನ್ನ  ಯಾವುದೇ ವಿಶೇಷವಾದ  ಪ್ರಯೋಜನವಿಲ್ಲದೇ ವಿನೋದಕ್ಕಾಗಿ ಮಾಡುವ ಕಾರ್ಯಕಲಾಪಗಳು ಲೀಲೆ ಎಂದು ಕರೆಯಲ್ಪಡುತ್ತವೆ. ನಿತ್ಯತೃಪ್ತನೂ ನಿಸ್ಪೃಹನೂ ಆದ ಶಿವನು ಸೃಜ್ಯಪ್ರಾಣಿಗಳ ಪ್ರಾರಬ್ಧಕರ್ಮದ ಭೋಗಕ್ಕಾಗಿ ತನಗೆ ಯಾವ ಆಯಾಸವಿಲ್ಲದೆ  ಲೀಲಾಜಾಲವಾಗಿ ಕೇವಲ ತನ್ನ ಸಂಕಲ್ಪ ಮಾತ್ರದಿಂದ ಈ ಸೃಷ್ಟಿಯನ್ನು ಮಾಡಿರುವುದರಿಂದ ಇದು  ಶಿವನ ಲೀಲೆ ಎಂದು ಕರೆಸಿಕೊಳ್ಳುತ್ತದೆ.
       ಶಕ್ತಿ ವಿಶಿಷ್ಟನಾದ ಶಿವನು ತನ್ನಲ್ಲಿ ಅವಿನಾಭಾವ ಸಂಬಂಧದಿಂದ ಇರುವ  ಶಕ್ತಿಯಲ್ಲಿಯ ಶುದ್ಧ ಸತ್ವಗುಣದ  ಉಪಾಧಿಯಿಂದ ಕೂಡಿಕೊಂಡು ಸಕಲ ಜೀವಿಗಳಿಗೆ ಪ್ರೇರಕನಾಗಿ  ಈಶ್ವರನೆಂದು  ಕರೆಯಿಸಿಕೊಳ್ಳುತ್ತಾನೆ. ಸಮ್ಮಿಶ್ರ ಉಪಾಧಿಯಿಂದ ಕೂಡಿಕೊಂಡು ಅವನೇ ಅನಂತ ಜೀವಿಗಳ ರೂಪದಲ್ಲಿ ಭೋಕ್ತೃ ಎನಿಸಿಕೊಳ್ಳುತ್ತಾನೆ. ಅದರಂತೆ ಅವನೇ ಶುದ್ಧ ತಮೋಗುಣ ಉಪಾಧಿಯಿಂದ ಕೂಡಿದವನಾಗಿ ಭೋಜ್ಯವಾದ ವಿಶ್ವರೂಪವನ್ನು ತಾಳುತ್ತಾನೆ. ಹೀಗೇ ತಾನೇ ಪ್ರೇರಕನಾಗಿ ಭೋಕ್ತೃವಾಗಿ ಮತ್ತು ಭೂಜ್ಯನಾಗಿ ಲೀಲೆಯನ್ನು ಮಾಡುತ್ತಿರುವುದರಿಂದ ಈ ಸೃಷ್ಟಿಯು ಶಿವನ ಲೀಲೆ ಎಂಬುದಾಗಿ ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಶ್ರೀ ಸಿದ್ಧಾಂತಶಿಖಾಮಣಿಯ ಪಿಂಡಸ್ಥಲಲ್ಲಿಪ್ರತಿಪಾದಿಸಿದ್ದಾರೆ.
          ಲೋಕದಲ್ಲಿಯ  ತಂದೆ-ತಾಯಿಗಳು ತಮ್ಮ ಮಕ್ಕಳಿಗಾಗಿ ಅನಂತ ಭೋಗ ಭಾಗ್ಯಗಳ ಸಾಮಗ್ರಿಗಳನ್ನು ಕೂಡಿಸಿ ಅವರಿಗೆ ತಂದುಕೊಡುವಂತೆ  ಶಿವನು  ತನ್ನ ಅಂಶರೂಪರಾದ ಸಕಲಜೀವಿಗಳಿಗೆ ಅವರವರ ಪ್ರಾರಬ್ಧಕರ್ಮಾನುಸಾರವಾಗಿ ಅನಂತ ಭೋಗಭಾಗ್ಯಗಳನ್ನು ಕೊಟ್ಟು ಅವರನ್ನು ತೃಪ್ತಿಪಡಿಸಿ ಅದು ಅವರಿಗೆ ಸಾಕೆನಿಸಿದಾಗ ಅವರಿಗೆ ಮುಕ್ತಿಯನ್ನು ದಯಪಾಲಿಸುವದಕ್ಕಾಗಿಯೇ  ಭಗವಂತನು  ಈ ಸೃಷ್ಟಿಯ ಲೀಲೆಯನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾನೆ. ಜಗತ್ತಿನ ಎಲ್ಲ ಜೀವಿಗಳು ಮುಕ್ತರಾಗುವ ವರೆಗೆ ಈ ಸೃಷ್ಟಿಯು ನಿರಂತರವಾಗಿ ನಡೆಯುತ್ತಲೇ ಇರುತ್ತದೆ.ಈ ಸೃಷ್ಟಿಯು ಎಂದು ಆರಂಭವಾಯಿತು ಎಂಬುದರ ಬಗ್ಗೆ ಯಾರಿಗೂ ಹೇಳಲಿಕ್ಕೆ ಸಾಧ್ಯವಾಗುವುದಿಲ್ಲ. ಅಂತೆಯೆ ಸರ್ವ ದಾರ್ಶನಿಕರು ಸರ್ವಮತಾಚಾರ್ಯರು ಈ ಸೃಷ್ಟಿಯನ್ನು ಅನಾದಿ ಎಂಬುದಾಗಿ ಕರೆದಿದ್ದಾರೆ.
ಆದರೂ ಪಾಲ್ಗುಣ ಮಾಸದಲ್ಲಿ ತರುಮರಾದಿಗಳು  ನನ್ನ ಎಲ್ಲ ಎಲೆಗಳನ್ನು ಕಳಚಿಕೊಂಡು ಚೈತ್ರಮಾಸದಲ್ಲಿ ಚಿಗುರೆಲೆಗಳಿಂದ ಕಂಗೊಳಿಸುವುದರಿಂದ ಚೈತ್ರಮಾಸದ ಶುಕ್ಲಪಕ್ಷದ ಪ್ರತಿಪದೆಯನ್ನು ಯುಗದ ಆದಿ ದಿನ ಎಂಬುದಾಗಿ ಕರೆದಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅದನ್ನೇ ವರ್ಷದ ಆರಂಭದ ದಿನವೆಂದು ಅದೇ ಯುಗಾದಿಯಂದು  ಆಚರಿಸುತ್ತ ಬಂದಿದ್ದೇವೆ. ಆದ್ದರಿಂದ ಜನೆವರಿ 1 ನೇ ತಾರೀಖು  ನಮ್ಮ ಹೊಸವರ್ಷದ ದಿನವಲ್ಲ ಎಂಬುದನ್ನು ಸರ್ವರೂ ಅರ್ಥ ಮಾಡಿಕೊಳ್ಳಬೇಕು. 
            ಇನ್ನು ಸಂಸಾರದಲ್ಲಿರುವ ಜೀವಿಗಳು ತಮ್ಮ ತಮ್ಮ ಕರ್ಮಾನುಸಾರವಾಗಿ ಸಾಂಸಾರಿಕ ಸುಖ ದುಃಖಗಳನ್ನು ಅನುಭವಿಸಬೇಕಾದರೆ ಅವರಿಗೆ ಒಂದು ಸ್ಥೂಲದೇಹದ ಅವಶ್ಯಕತೆ ಇರುತ್ತದೆ. ಅಂತೆಯೇ ಸ್ಥೂಲದೇಹಕ್ಕೆ ಭೋಗಾಯತನ   ಎಂಬುದಾಗಿ ಕರೆದಿದ್ದಾರೆ. ಜೀವಿಗಳ ಸುಖ-ದುಃಖ ಭೋಗಕ್ಕೆ ಶರೀರವೇ  ಆಧಾರವಾದುದು. ಅಂತೆಯೇ  ಪರಮಾತ್ಮನು ಅನಂತ ಭೋಗ್ಯ ಪದಾರ್ಥಗಳನ್ನು ಸೃಷ್ಟಿಸುವುದರ ಜೊತೆಗೆ ಆ ಪದಾರ್ಥಗಳನ್ನು ಉಪಯೋಗಿಸುವುದಕ್ಕಾಗಿ  ಜೀವಿಗಳಿಗೆ 84ಲಕ್ಷ ಪ್ರಕಾರದ ಶರೀರಗಳನ್ನು ನಿರ್ಮಿಸಿದ್ದಾನೆ.
ಈ ಎಂಬತ್ತುನಾಲ್ಕುಲಕ್ಷ ಪ್ರಕಾರದ ಶರೀರಗಳನ್ನು
ಮಹರ್ಷಿ ವ್ಯಾಸರು ಸ್ಕಂದಪುರಾಣದಲ್ಲಿ ಸಪ್ತ ಜನ್ಮಗಳನ್ನಾಗಿ  ವಿಂಗಡಿಸಿದ್ದಾರೆ. ಅವರ ಪ್ರಕಾರ ದೇವತೆಗಳು 16ಲಕ್ಷ, ಮಾನವರು 9 ಲಕ್ಷ, ಜಲಚರ ಪ್ರಾಣಿಗಳು 10 ಲಕ್ಷ, ಪಕ್ಷಿಗಳು 10 ಲಕ್ಷ, ಚತುಷ್ಪಾದ ಪಶುಗಳು 10 ಲಕ್ಷ, ಸರ್ಪಗಳು 11 ಲಕ್ಷ, ಗಿಡ ಮರಾದಿ ಸ್ಥಾವರಗಳು 18 ಲಕ್ಷ ಹೀಗೆ ಸಪ್ತ ಜನ್ಮಗಳಲ್ಲಿ 84ಲಕ್ಷ ಪ್ರಕಾರದ ಶರೀರಗಳನ್ನು ವಿಭಜಿಸಿದ್ದಾರೆ. ಜೀವಿಗಳಿಗೆ ಪ್ರಾಪ್ತವಾಗುವ 84ಲಕ್ಷ ಪ್ರಕಾರದ ಶರೀರಗಳನ್ನು ಪ್ರಾಯ: ನಮ್ಮ ದೇಶದ ಎಲ್ಲ ಋಷಿಮುನಿಗಳು ಮತ್ತು ಮತಾಚಾರ್ಯರು ಮತ್ತು ಸಂತ ಶರಣರು ಒಪ್ಪಿಕೊಂಡಿದ್ದಾರೆ.
            ಸದ್ಯ:  ವಿಜ್ಞಾನವು ಸಾಕಷ್ಟು ಮುಂದುವರೆದಿದ್ದು ಅದರ ಸಂಶೋಧನೆಯು ನಿರಂತರವಾಗಿ  ನಡೆಯುತ್ತಲೇ ಇರುತ್ತದೆ.
ಈ  ವೈಜ್ಞಾನಿಕ ಸಂಶೋಧನೆಯ ಪ್ರಕಾರ ಈ ಸೃಷ್ಟಿಯಲ್ಲಿ ವ್ಯಕ್ತವಾಗಿರುವ ತೋರುವ ಜೀವಿಗಳ ಶರೀರಗಳು 87 ಲಕ್ಷ ಮತ್ತು ಅವ್ಯಕ್ತವಾಗಿರುವ ಅಂದರೆ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ವಾಗಿರುವ ಶರೀರಗಳು ಒಂದು ಲಕ್ಷಕೋಟಿ ಎಂಬುದಾಗಿ ಹೇಳಿದ್ದಾರೆ. ಒಂದು ದೃಷ್ಟಿಯಿಂದ ಈ ಸಂಪೂರ್ಣ ಸೃಷ್ಟಿಯು ಅನಂತ ಜೀವಿಗಳಿಂದಲೇ  ತುಂಬಿಕೊಂಡಿದೆ. ಈ ಸೃಷ್ಟಿಯಲ್ಲಿಯ  ಜೀವಿಗಳು ತಾವು ಬದುಕಬೇಕಾದರೆ ಇನ್ನೊಂದು ದುರ್ಬಲ ಜೀವಿಯನ್ನು ಕೊಂದೇ ತಾನು ಬದುಕುತ್ತದೆ. ಅಂತೆಯೇ "ಜೀವೋ ಜೀವಸ್ಯ ಜೀವನಂ" ಎಂಬುದಾಗಿ ಹೇಳಿದ್ದಾರೆ.
          ಶಿವನೇ ಭೋಜ್ಯರೂಪನಾಗಿ ಪರಿಣಮಿಸಿದ ಈ ಸೃಷ್ಟಿಯಲ್ಲಿ  ಭೂ:, ಭುವ:,ಸ್ವ: ಮಹ:, ಜನ:,ತಪ:,ಸತ್ಯಂ ಎಂಬ ಊರ್ಧ್ವದ ಸಪ್ತಲೋಕಗಳು, ಅದರಂತೆ ಅತಲ,ವಿತಲ,ಸುತಲ,ತಲಾತಲ,ರಸಾತಲ,ಮಹಾತಲ ಮತ್ತು ಪಾತಾಲಗಳೆಂಬ ಸತ್ತ ಅಧೋಲೋಕಗಳು, ಜಂಬೂ, ಶಾಕ, ಕುಶ, ಕ್ರೌಂಚ,ಶಾಲ್ಮಲ,ಮೇದ,  ಮತ್ತು ಪುಷ್ಕರಗಳೆಂಬ ಸಪ್ತ ದೀಪಗಳು, ಲವಣ, ಕ್ಷೀರ, ಘೃತ ಮೊದಲಾದ ಸಪ್ತಸಾಗರಗಳು, ಗಂಗಾ ಯಮುನಾ, ಬ್ರಹ್ಮಪುತ್ರಾ, ಕಾವೇರಿ ಮುಂತಾದ ಅನಂತ ಪವಿತ್ರ ನದಿನದಗಳು, ಭಾರತ, ಹರಿ ವರ್ಷ ಮೊದಲಾದ ಎಂಟು ವರ್ಷಗಳು, ಹಿಮಾಲಯ, ಮೇರು, ನೀಲ, ಮಹೇಂದ್ರ, ವಿಂಧ್ಯ, ಮಲಯ ಮತ್ತು ಕೈಲಾಸ  ಮುಂತಾದ ಇಪ್ಪತ್ತು ಕುಲ ಪರ್ವತಗಳು, ಇವೆಲ್ಲವುಗಳಿಂದ ಕೂಡಿದ ಈ ವಿಶಾಲ ವಿಶ್ವವೇ ಈಶ್ವರನಿಂದ ನಿರ್ಮಿತವಾದ ಸೃಷ್ಟಿಯು. ಈ ಸೃಷ್ಟಿಯ ಬಗ್ಗೆ ಮಹರ್ಷಿವ್ಯಾಸನು ತಾನು  ರಚಿಸಿದ ವನ್ಹಿ  ಪುರಾಣದಲ್ಲಿ ವಿಸ್ತಾರವಾಗಿ ತಿಳಿಸಿದ್ದಾನೇ.
          ಜಗತ್ತಿನ ಎಲ್ಲ ಜೀವಿಗಳ ಉಪಭೋಗಕ್ಕಾಗಿ  ಕಂಬಾರ ಕಬ್ಬಿಣದ ಸಾಮಗ್ರಿಗಳನ್ನು , ಕುಂಬಾರ ಮಣ್ಣಿನ ಪಾತ್ರೆ ಮುಂತಾದ ಸಾಮಗ್ರಿಗಳನ್ನು, ಅಕ್ಕಸಾಲಿಗ ಬೆಳ್ಳಿ ಬಂಗಾರದ ಆಭರಣಗಳನ್ನು ಮತ್ತು ಅಭಿಯಂತರು ಮನೆ, ಮಠ, ಮಂದಿರ, ಭವನ, ಬ್ರಿಜ್ ಹಾಗೂ ವಿವಿಧ ವಾಹನಗಳನ್ನು ನಿರ್ಮಿಸುವುದನ್ನು ಪ್ರತ್ಯಕ್ಷವಾಗಿ ಕಾಣುತ್ತೇವೆ. ಹೀಗೆ ಪ್ರತಿಯೊಂದು ವಸ್ತುವಿಗೂ ನಿರ್ಮಾಣದ ಸಾಮಗ್ರಿಗಳು ಹಾಗೂ ನಿರ್ಮಾಣ ಮಾಡುವ ವ್ಯಕ್ತಿ ಇರುವುದನ್ನು ಕಾಣುತ್ತೇವೆ.  ನಿರ್ಮಾಣಗೊಂಡ ಈ ವಸ್ತುಗಳನ್ನು ಪಡೆದುಕೊಂಡು ಜೀವಿಗಳು ಸುಖವನ್ನು ಮತ್ತು ದುಃಖವನ್ನು ಅನುಭವಿಸುವದನ್ನು  ಮತ್ತು ಕೊನೆಗೆ ವಸ್ತುಗಳು ಬೇಡವೆನಿಸಿದಾಗ ಅವುಗಳ ತ್ಯಾಗ ಮಾಡುವುದನ್ನು ಸಹ ನೋಡುತ್ತೇವೆ. ಅದರಂತೆ ಜಗತ್ತಿನಲ್ಲಿ ಜನ್ಮತಾಳಿದ ಎಲ್ಲ ಜೀವಿಗಳು ಈ ಸೃಷ್ಟಿಯ ವಸ್ತುಗಳಿಂದ ಸುಖದುಃಖಗಳನ್ನು ಅನುಭವಿಸಿ   ಕೊನೆಗೆ ಇದರ ಬಗ್ಗೆ ವಿರಕ್ತಿ ಉಂಟಾದಾಗ ಇದೆಲ್ಲವನ್ನು ಶ್ರೀ ತ್ಯಾಗ ಮಾಡಿ ಮೋಕ್ಷವನ್ನು ಪಡೆದುಕೊಳ್ಳುತ್ತಾರೆ. ಹೀಗೆ
ಈ ಸೃಷ್ಟಿಯು ಆಸಕ್ತಿಯುಳ್ಳ ಜೀವಿಗಳ ಭೋಗಕ್ಕೆ ಹಾಗೂ ನಿರಾಸಕ್ತರಾದವರಿಗೆ ಮೋಕ್ಷಕ್ಕೆ ಕಾರಣವಾಗಿರುತ್ತದೆ. ಹಾಗಂದ ಮೇಲೆ ಈ  ವಿಶಾಲವಾದ ಪ್ರಪಂಚವನ್ನು ಯಾರು ಮಾಡಿದರು ಯಾವ ಸಾಮಗ್ರಿಗಳಿಂದ ಮಾಡಿದರು ಮತ್ತುಯಾರಿಗಾಗಿ ಮಾಡಿದರು ಎಂಬ ಜಿಜ್ಞಾಸೆಯು ಉಂಟಾಗುವುದು ಸಹಜ. ಈ ಜಿಜ್ಞಾಸೆಯ ಪರಿಹಾರಕ್ಕಾಗಿ ಪುರಾಣಿಕರು, ದಾರ್ಶನಿಕರು ಮತ್ತು ವಿಜ್ಞಾನಿಗಳು ತಮ್ಮದೇ ಆದ ಆಲೋಚನಾ ಶಕ್ತಿಯಿಂದ ಬೇರೆ ಬೇರೆ ರೀತಿಯಾಗಿ ಸಮರ್ಥನೆಯನ್ನು ಮಾಡಿಕೊಂಡು ಬಂದಿದ್ದಾರೆ. ಅದನ್ನೇ ಇಲ್ಲಿ ವಿಶೇಷವಾಗಿ ಚರ್ಚಿಸಲಾಗುವುದು.
    ಇಷ್ಟು ವಿಶಾಲವಾದ ವಿಶ್ವವನ್ನು ರಚಿಸುವುದು ಯಾವ ಮನುಷ್ಯರಿಂದಲೂ ಸಾಧ್ಯವಿಲ್ಲದ ಕಾರಣ ಇದನ್ನು ರಚಿಸಿದ ಸರ್ವ ಸಮರ್ಥನಾದ ಒಬ್ಬ ಈಶ್ವರನು  ಇರಲೇಬೇಕೆಂಬ  ಅನುಮಾನ ಪ್ರಮಾಣದಿಂದ ಪುರಾಣಿಕರು ಹಾಗೂ ದಾರ್ಶನಿಕರು  ಈಶ್ವರನನ್ನು ಒಪ್ಪಿಕೊಂಡಿದ್ದಾರೆ.
ಒಬ್ಬನೇ ಆದ ಆ ಈಶ್ವರನೇ
ಏಕಾ ಮೂರ್ತಿಸ್ರ್ತಯೋ ಭಾಗಾ:
          ಬ್ರಹ್ಮವಿಷ್ಣುಮಹೇಶ್ವರಾ:
ಎಂಬ ಉಕ್ತಿಯ  ಪ್ರಮಾಣದಂತೆ ಒಬ್ಬನೇ ಆದ ಆ  ಈಶ್ವರನು ಮೂರು ಸ್ವರೂಪವನ್ನು ತಾಳಿ ಬ್ರಹ್ಮನಾಗಿ ಸೃಷ್ಟಿಯನ್ನು, ವಿಷ್ಣುವಾಗಿ ಅದರ  ಪಾಲನೆಯನ್ನು ಮತ್ತು ರುದ್ರನಾಗಿ ಸೃಷ್ಟಿಯ ಸಂಹಾರವನ್ನು ಮಾಡುತ್ತಾನೆ ಎಂಬುದು ಪುರಾಣಿಕರ ವಿಚಾರ.
          ಈ ಸೃಷ್ಟಿ ಸಿದ್ಧಾಂತವು ಅತ್ಯಂತ ರಹಸ್ಯಮಯ ವಾದದ್ದು. ಇದಮಿತ್ಥಂ ಎಂಬುದಾಗಿ ಯಾರಿಂದಲೂ ಹೇಳಲು ಸಾಧ್ಯವಾಗುವುದಿಲ್ಲ. ಆದರೂ ಸಹ ನಮ್ಮ ದೇಶದ ಮಹರ್ಷಿಗಳು ತಮ್ಮ ತಪಸ್ಸು ಹಾಗೂ ಅಲೌಕಿಕವಾದ ಚಿಂತನೆಯಿಂದ  ಈ ಸೃಷ್ಟಿ ಸಿದ್ಧಾಂತವನ್ನು ಎಲ್ಲರಿಗೂ ತಿಳಿಸುವುದಕ್ಕಾಗಿ ಭಿನ್ನ ಭಿನ್ನ ಪದ್ಧತಿಗಳನ್ನು ಅನುಸರಿಸಿದ್ದಾರೆ.  ಆ ಪದ್ಧತಿಗಳೇ ಇಂದು ದರ್ಶನಗಳೆಂದು ಕರೆಸಿಕೊಳ್ಳುತ್ತವೆ. ಈ ದರ್ಶನಗಳಲ್ಲಿ ಆಸ್ತಿಕ ದರ್ಶನ ಮತ್ತು ನಾಸ್ತಿಕ ದರ್ಶನ ಎಂಬುದಾಗಿ ಎರಡು ವಿಧಗಳು. ವೇದ ಹಾಗೂ ದೇವರನ್ನು ಒಪ್ಪಿ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸುವ ದರ್ಶನಗಳು ಆಸ್ತಿಕ ದರ್ಶನಗಳು.  ವೇದವನ್ನು ಒಪ್ಪದೆ ದೇವರನ್ನು ನಂಬದೆ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸುವ ದರ್ಶನಗಳು ನಾಸ್ತಿಕ ದರ್ಶನಗಳು ಎಂಬುದಾಗಿ ಕರೆಸಿಕೊಳ್ಳುತ್ತವೆ.
      ನ್ಯಾಯ ವೈಶೇಷಿಕ ಸಾಂಖ್ಯ ಯೋಗ ಪೂರ್ವ ಮಾಂಸ ವೇದಾಂತ ಮತ್ತು ವೀರಶೈವ ದರ್ಶನಗಳು ಈಶ್ವರನನ್ನು ವೇದಗಳನ್ನು ಒಪ್ಪಿ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸಿರುವುದರಿಂದ ಇವುಗಳು ಆಸ್ತಿಕ ದರ್ಶನಗಳೆಂದು ಕರೆಯಲ್ಪಡುತ್ತವೆ. ಇನ್ನು ಚಾರ್ವಾಕ ಬೌದ್ಧ ಮುಂತಾದ ದರ್ಶನಗಳು ದೇವರನ್ನು ಹಾಗು ವೇದಗಳನ್ನು ಒಪ್ಪದೆ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಆದ್ದರಿಂದ ಅವುಗಳಿಗೆ ನಾಸ್ತಿಕ ದರ್ಶನಗಳೆಂದು ನಮ್ಮ ಪೂರ್ವಜರು ಕರೆದಿದ್ದಾರೆ.
     ಇಲ್ಲಿ ನಾವು ಕೇವಲ ಆಸ್ತಿಕ ದರ್ಶನಗಳನ್ನು ಅವಲಂಬಿಸಿ ಸಂಕ್ಷಿಪ್ತವಾಗಿ ಸೃಷ್ಟಿ ಸಿದ್ಧಾಂತವನ್ನು  ಪ್ರತಿಪಾದಿಸಿದ್ದೆವೆ.
       ದೃಶ್ಯಾದೃಶ್ಯಗಳಿಂದ ಕೂಡಿದ ಈ ಸೃಷ್ಟಿಯು ಅಗಮ್ಯ ಹಾಗೂ ಅಪಾರ. ಯಾವುದೇ ಒಂದು ವಸ್ತುವನ್ನು ನಿರ್ಮಿಸಬೇಕಾದರೆ ಅದಕ್ಕೆ ಕೆಲವು ಕಾರಣ ಸಾಮಗ್ರಿಗಳು ಬೇಕಾಗುತ್ತವೆ. ಅವುಗಳಿಗೆ ಶಾಸ್ತ್ರಗಳಲ್ಲಿ ಸಾಮಾನ್ಯವಾಗಿ ಉಪಾದಾನ ಕಾರಣ ನಿಮಿತ್ತ ಕಾರಣ ಮತ್ತು ಸಹಕಾರಿ ಕಾರಣಗಳೆಂಬುದಾಗಿ ಕರೆಯುತ್ತಾರೆ.  ಕಾರ್ಯದ ಜೊತೆಗೆ ಸದಾ ಇದ್ದುಕೊಂಡು ಕಾರ್ಯಕ್ಕೆ ಕಾರಣವಾದದ್ದೇ ಉಪಾದಾನಕಾರಣ. ಮಡಿಕೆಗೆ ಮಣ್ಣು ವಸ್ತ್ರಕ್ಕೆ ಎಳೆಗಳು ಉಪಾದಾನ ಕಾರಣಗಳು. ಮಣ್ಣನ್ನು ಬಿಟ್ಟು ಮಡಿಕೆಯನ್ನು ಮಾಡಲಾಗುವುದಿಲ್ಲ. ಎಳೆಗಳನ್ನು ಬಿಟ್ಟು ವಸ್ತ್ರವನ್ನು ನಿರ್ಮಿಸಲು ಆಗುವುದಿಲ್ಲ. ಆದ್ದರಿಂದ ಮಣ್ಣು ಹಾಗೂ ಎಳೆಗಳು ಘಟ ಮತ್ತು ವಸ್ತ್ರಕ್ಕೆ ಉಪಾದಾನ ಕಾರಣಗಳೆಂದು  ಕರೆಯಲ್ಪಡುತ್ತವೆ.
        ಘಟವನ್ನು ನಿರ್ಮಿಸಲು ಕುಂಬಾರನು  ನಿಮಿತ್ತ ಕಾರಣನು ಮತ್ತು ಅವನಿಗೆ ಬೇಕಾಗುವ ದಂಡ ಚಕ್ರ ಮುಂತಾದ  ಸಾಮಗ್ರಿಗಳು ಸಹಕಾರಿ ಕಾರಣಗಳು. ಅದೇ ರೀತಿಯಾಗಿ ಬಟ್ಟೆಯನ್ನು ನಿರ್ಮಿಸಲು ನೇಕಾರನು ನಿಮಿತ್ತ ಕಾರಣ ಮತ್ತು ಅವನಿಗೆ ಬೇಕಾಗಿರುವ ಮಗ್ಗ ಮುಂತಾದ ಸಾಮಗ್ರಿಗಳು ಸಹಕಾರಿ ಕಾರಣಗಳು. ಹೀಗೆ ಯಾವುದೇ ಒಂದು ವಸ್ತುವನ್ನು ಸೃಷ್ಟಿ ಮಾಡುವಾಗ ಇಷ್ಟು ಸಾಮಗ್ರಿಗಳನ್ನು ಸರ್ವರೂ  ಒಪ್ಪಿಕೊಂಡಿದ್ದಾರೆ.
    ಈ  ಸೃಷ್ಟಿಯು ಬಹು ದೊಡ್ಡ ಕಾರ್ಯ ವಾಗಿರುವುದರಿಂದ ಇದು ಹೇಗೆ ಸೃಷ್ಟಿಯಾಯಿತು? ಇದನ್ನು ಯಾರು ಸೃಷ್ಟಿಸಿದರು? ಅನ್ನುವ ವಿಚಾರದಲ್ಲಿ ನಮ್ಮ ಆಸ್ತಿಕ ದಾರ್ಶನಿಕರು ಭಿನ್ನ ಭಿನ್ನ ಮಾರ್ಗವನ್ನು ಅವಲಂಬಿಸಿದ್ದಾರೆ.   ಸದ್ಯ ಅದನ್ನೇ ಸಂಕ್ಷೇಪವಾಗಿ ವಿವರಿಸುತ್ತೇವೆ.
             ಈ ರಹಸ್ಯಮಯ ವಾದ ಸೃಷ್ಟಿ ಸಿದ್ಧಾಂತವನ್ನು  ಸತ್ಕಾರ್ಯವಾದ ಮತ್ತು     ಅಸತ್ಕಾರ್ಯವಾದ  ಎಂದು ಎರಡು ವಿಧವಾಗಿ ವಿಂಗಡಿಸಿದ್ದಾರೆ. ಎಳ್ಳಿನಲ್ಲಿ ಎಣ್ಣಣ್ಣೆಯು ಮೊದಲೇ ಇತ್ತು ಅಂತೆಯೇ ಎಳ್ಳಿನಿಂದ ಎಣ್ಣೆಯು ಉತ್ಪನ್ನವಾಗುತ್ತದೆ ಎಂದು ಹೇಳುವುದಕ್ಕೆ ಸತ್ಕಾರ್ಯ ವಾದವೆಂದು ಕರೆಯುವರು.  ತಂತುಗಳಲ್ಲಿ ಮೊದಲು ವಸ್ತ್ರವಿರಲಿಲ್ಲ ತಂತುಗಳನ್ನು ಜೋಡಿಸಿ ನೈದಾಗ ವಸ್ತ್ರವು ಉತ್ಪನ್ನವಾಗುತ್ತದೆ ಎಂದು ಹೇಳುವ ವಾದಕ್ಕೆ ಅಸತ್ಕಾರ್ಯ ವಾದವೆಂದು ಕರೆಯುವರು.  ಸತ್ಕಾರ್ಯ ವಾದವು  ಪರಿಣಾಮವಾದ ಮತ್ತು ವಿವರ್ತವಾದ ಎಂಬುದಾಗಿ ಪುನಹ ಎರಡು ವಿಧ ವಾಗಿರುತ್ತದೆ. ಸಾಂಖ್ಯ ಮತ್ತು ವೀರಶೈವ ದರ್ಶನಗಳು ಪರಿಣಾಮ ವಾದಿಗಳು ಅದರಲ್ಲಿಯೂ ಸಾಂಖ್ಯರು ಪ್ರಕೃತಿ ಪರಿಣಾಮವಾದಿಗಳು, ವೀರಶೈವರು ಶಕ್ತಿವಿಶಿಷ್ಟ ಪರಶಿವನ ಪರಿಣಾಮ ವಾದಿಗಳು, ಎಂಬುದು ವಿಶೇಷ. ಇನ್ನು ಅದ್ವೈತ ವೇದಾಂತಿಗಳು ವಿವರ್ತವಾದ ವನ್ನು ಪ್ರತಿಪಾದಿಸುತ್ತಾರೆ.
  ನ್ಯಾಯ -ವೈಶೇಷಿಕರು ಅಸತ್ಕಾರ್ಯವಾದಿಗಳು.
ಇದಕ್ಕೆ ಆರಂಭವಾದ ಎಂಬುದಾಗಿಯೂ ಕರೆಯುತ್ತಾರೆ. ಈ ಸೃಷ್ಟಿ ಸಿದ್ಧಾಂತವನ್ನು ಪ್ರತಿಪಾದಿಸುವಾಗ ನ್ಯಾಯ -ವೈಶೇಷಿಕ ದಾರ್ಶನಿಕರು 9 ದ್ರವ್ಯಗಳನ್ನು ಒಪ್ಪಿದ್ದು, ಅವುಗಳಲ್ಲಿ ಪೃಥ್ವಿ, ಅಪ್ಪು, ತೇಜ, ಮತ್ತು ವಾಯು ಈ ನಾಲ್ಕು ದ್ರವ್ಯಗಳನ್ನು ಅನಿತ್ಯವೆಂಬುದಾಗಯೂ  ಉಳಿದ ಆಕಾಶ, ಕಾಲ, ದಿಕ್ಕು,ಆತ್ಮ ಮತ್ತು ಮನಸ್ಸುಗಳನ್ನು ನಿತ್ಯ ದ್ರವ್ಯಗಳನ್ನಾಗಿ ಸ್ವೀಕರಿಸಿದ್ದಾರೆ. ಅಂತೆಯೇ  ಇವರು ನಿತ್ಯ ದ್ರವ್ಯಗಳ ಉತ್ಪತ್ತಿಯನ್ನು ಹೇಳುವುದಿಲ್ಲ. ಕೇವಲ ಅನಿತ್ಯ ದ್ರವ್ಯಗಳ ಉತ್ಪತ್ತಿ ಮತ್ತು ವಿನಾಶವನ್ನು ಪ್ರತಿಪಾದಿಸುತ್ತಾರೆ. ಅನಿತ್ಯ ದ್ರವ್ಯಗಳಾದರೂ ಪ್ರಲಯ ಕಾಲದಲ್ಲಿ ಅಣು ರೂಪವನ್ನು ಧರಿಸಿ ನಿತ್ಯರೂಪಗಳಾಗುತ್ತವೆ. ಪುನಹ ಸೃಷ್ಟಿಯ ಸಮಯದಲ್ಲಿ ಆ ನಿತ್ಯ ಅಣು ಗಳ ಸಂಯೋಜನೆಯಿಂದಲೇ ಸ್ಥೂಲವಾದ ಸೃಷ್ಟಿಯು ನಿರ್ಮಾಣಗೊಳ್ಳುವುದು. ಎರಡು ಪರಮಾಣುಗಳು ಪರಸ್ಪರ ಕೂಡಿದಾಗ ಒಂದು ದ್ವ್ಯಣುಕವಾಗುತ್ತದೆ. ಇಂತಹ 3 ದ್ವ್ಯಣುಕಗಳು ಪರಸ್ಪರ ಕೂಡಿಕೊಂಡಾಗ ಒಂದು ತ್ರ್ಯಣುಕವಾಗುವುದು. ಅಣು ಪರಮಾಣುಗಳು ಯಾರ ಕಣ್ಣಿಗೆ ಕಾಣುವುದಿಲ್ಲ ಆದರೆ ತ್ರ್ಯಣಕ ಪರಮಾಣು ಮಾತ್ರ ಬೆಳಕಿಂಡೆಯ ಬಿಸಿಲಿನಲ್ಲಿ ದೃಷ್ಟಿಗೋಚರ ವಾಗುವವು. ಈ ತ್ರ್ಯಣುಕದ  60ನೇ ಒಂದು  ಭಾಗವೇ ಪರಮಾಣುವೆಂದು ಕರೆಯಿಸಿಗೊಳ್ಳುವದು. ಹೀಗೆ ಈ ತ್ರ್ಯಣುಕಗಳು ಪರಸ್ಪರ ಸಂಯೋಜನೆಗೊಂಡು ಸ್ಥೂಲರೂಪವನ್ನು ತಳೆದಾಗ ಪೃಥ್ವಿ ಅಪ್ಪು ತೇಜ ಮತ್ತು ವಾಯು ಗಳೆಂಬ ಮಹಾಭೂತಗಳು ಉತ್ಪತ್ತಿಯಾಗುತ್ತವೆ. ಹೀಗೆ ಪರಮಾಣುಗಳು ಸಂಯೋಜನೆಗೊಂಡು ಸೃಷ್ಟಿಕ್ಕಯಾಗುವುದಕ್ಕೆ ಮುಂದೆ ಹುಟ್ಟಲಿರುವ ಎಲ್ಲ ಜೀವರಾಶಿಗಳ ಪ್ರಾರಬ್ಧಕರ್ಮವೇ ಕಾರಣವಾಗಿರುತ್ತದೆ. ಈ  ಪ್ರಾರಬ್ಧಕರ್ಮದ ದೆಶೆಯಿಂದ ಈಶ್ವರನಲ್ಲಿ ಸೃಷ್ಟಿಯನ್ನು ಮಾಡುವ ಇಚ್ಛೆಯು ಉತ್ಪನ್ನವಾಗುವದು. ಹೇಗೆ ಪ್ರಾಣಿಗಳ ಪ್ರಾರಬ್ಧದಿಂದ ಪ್ರೇರಣೆಗೊಂಡ ಈಶ್ವರನು ಸೃಷ್ಟಿಯನ್ನು ಮಾಡುವದಕ್ಕಾಗಿ ಬ್ರಹ್ಮನನ್ನು ಸೃಷ್ಟಿಸುತ್ತಾನೆ.ಆ  ಬ್ರಹ್ಮನು ಸಹ ಅತ್ಯಂತ ನಿಸ್ಪೃಹ ಯನಾಗಿರುವದರಿಂದ   ಯಾವುದೇ ಪಕ್ಷಪಾತವನ್ನು ಮಾಡದೇ ಎಲ್ಲ ಪ್ರಾಣಿಗಳನ್ನು  ಅವರವರ ಪ್ರಾರಬ್ಧಕ್ಕನುಗುಣವಾಗಿ 84ಲಕ್ಷ ಪ್ರಕಾರದ ಯೋನಿಗಳಲ್ಲಿ ಜನ್ಮ ತಾಳುವಂತೆ ಮಾಡುತ್ತಾನೆ. ಹೀಗೆ ಆರಂಭವಾದಿಗಳಾದ ನ್ಯಾಯ ವೈಶೇಷಿಕ ಆಚಾರ್ಯರ ವಿಚಾರದಂತೆ ಸೃಷ್ಟಿಯಾಗುತ್ತದೆ.ಇಲ್ಲಿ ಪರಮಾಣುಗಳು ಉಪಾದಾನ ಕಾರಣಗಳು, ಪರಮಾಣುಗಳ ಪರಸ್ಪರ ಸಂಯೋಗವು ಸಹಕಾರಿ ಕಾರಣವು ಮತ್ತು ಆಯಾ ಪ್ರಾಣಿಗಳ ಅದೃಷ್ಟ ಮತ್ತು ಈಶ್ವರನು  ನಿಮಿತ್ತ ಕಾರಣವೆಂದು  ತಿಳಿದುಕೊಳ್ಳಬೇಕು.
        ಸೃಷ್ಟಿಕರ್ತನಾದ ಬ್ರಹ್ಮನ ನೂರು ವರ್ಷಗಳು ಪೂರ್ಣಗೊಂಡಾಗ  ಸೃಷ್ಟಿಯು ಪ್ರಳಯವಾಗುವುದು.   ಆಗ ಪೃಥ್ವಿ ಅಪ್ಪು ತೇಜ ಮತ್ತು ವಾಯುಗಳು ಪರಮಾಣು ರೂಪವನ್ನು ತಳೆದು ಸೃಷ್ಟಿಯು ಇಲ್ಲದಂತಾಗುವುದು. ಇದು ನ್ಯಾಯ ವೈಶೇಷಿಕರ ಸೃಷ್ಟಿ ಸಿದ್ಧಾಂತವು.
     ಆಧುನಿಕ ವಿಜ್ಞಾನಿಗಳೂ ಸಹ   ಈ ಪರಮಾಣು ವಾದವನ್ನು ಸ್ವೀಕರಿಸಿ ಪರಮಾಣುಗಳ ಸಂಯೋಜನೆಯಿಂದಲೇ  ಸೃಷ್ಟಿಯಾಗುವುದು ಎಂದು ಹೇಳುತ್ತಾರೆ. ಆದರೆ ನ್ಯಾಯ ವೈಶೇಷಿಕರಂತೆ ಇವರು ಪರಮಾಣುಗಳ ಸಂಯೋಜನೆಗೆ ಜೀವಿಗಳ ಪ್ರಾರಬ್ಧವನ್ನಾಗಲಿ ಈಶ್ವರನನ್ನಾಗಲಿ  ಒಪ್ಪುವುದಿಲ್ಲ. ಯಾರ ಪ್ರೇರಣೆಯಿಲ್ಲದೆ ಪರಮಾಣುಗಳು ಕೂಡಿಕೊಂಡು ಸೃಷ್ಟಿಯನ್ನು ಮಾಡುತ್ತವೆ. ಪುನ: ತಾವೇ ವಿಭಜನೆಗೊಂಡು ಪ್ರಳಯವನ್ನುಂಟುಮಾಡುತ್ತವೆ . ಎಂಬುದಾಗಿ ತಿಳಿಸುತ್ತಾರೆ 
      ಸಾಂಖ್ಯ ಮತ್ತು ಯೋಗ ದರ್ಶನಗಳ ಆಚಾರ್ಯರು  ಪ್ರಕೃತಿಯ ಪರಿಣಾಮವೇ ಸೃಷ್ಟಿ ಎಂಬುದಾಗಿ ಪ್ರತಿಪಾದಿಸುತ್ತಾರೆ.
     ಈ ಸಿದ್ಧಾಂತದಲ್ಲಿ ಪ್ರಕೃತಿಯು ಜಡರೂಪ ವಾದದ್ದು ಪುರುಷರು ಚೇತನ ನಾಗಿದ್ದರೂ ಅಸಂಗಿ ಯಾಗಿರುತ್ತಾನೆ. ಆದ್ದರಿಂದ ಇವರಿಬ್ಬರೂ  ಸ್ವತಂತ್ರರಾಗಿ ಸೃಷ್ಟಿಯನ್ನು ಮಾಡಲು ಸಮರ್ಥರಾಗಿರುವುದಿಲ್ಲ. ಆದರೆ ಪುರುಷನಿಂದ ಅಧಿಷ್ಠಿತವಾದ ಪ್ರಕೃತಿಯೇ ಶ್ರೀ ಸೃಜ್ಯಮಾನ ಪ್ರಾಣಿಗಳ ಪರಿಪಕ್ವವಾದ ಕರ್ಮದಿಂದ ಕ್ಷೋಭೆಗೊಂಡು ಮಹತ್ತತ್ವ ರೂಪವನ್ನು ತಾಳುತ್ತದೆ. ಅದರಿಂದ ಬುದ್ಧಿ ತತ್ತ್ವವು, ಆ ಬುದ್ಧಿತತ್ತ್ವದಿಂದ ಅಹಂಕಾರ,   ಆ ಅಹಂಕಾರ ತತ್ತ್ವದಿಂದ  ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಮನಸ್ಸು ಮತ್ತು ಪಂಚತನ್ಮಾತ್ರೆಗಳೆಂಬ 16 ತತ್ತ್ವಗಳು ಉತ್ಪನ್ನವಾಗುತ್ತವೆ. ಇವುಗಳಲ್ಲಿಯ ಆ ಪಂಚತನ್ಮಾತ್ರೆಗಳಿಂದ ಆಕಾಶದಿ ಪಂಚಮಹಾಭೂತಗಳು ಉತ್ಪನ್ನವಾಗುತ್ತವೆ. ಹೀಗೆ ಪ್ರಕೃತಿ ತತ್ವವು ಮೇಲೆ ಹೇಳಿದ ತತ್ವಗಳ ರೂಪದಲ್ಲಿ ಪರಿಣಾಮಗೊಳ್ಳುವದು.  ಇಲ್ಲಿ ಅಂಧ ಪಂಗು ನ್ಯಾಯದಿಂದ ಸೃಷ್ಟಿಯನ್ನು ಪ್ರತಿಪಾದಿಸಲಾಗಿದೆ.
     ಈ ದರ್ಶನದಲ್ಲಿಯೂ  ಕೂಡ ಪುರುಷನಿಗೆ ಭೋಗ ಮೋಕ್ಷಗಳನ್ನು  ಕೊಡುವುದಕ್ಕಾಗಿಯೇ ಪ್ರಕೃತಿಯು ಪ್ರವೃತ್ತವಾಗುವುದು. ಯಾವ ಪುರುಷನಿಗೆ ಪ್ರಕೃತಿ-ಪುರುಷರ ವಿವೇಕ ಜ್ಞಾನ ವಾಗುವುದೋ  ಅವನಿಗೆ ಪ್ರಕೃತಿಯು ಮೋಕ್ಷವನ್ನು ಮತ್ತು ವಿವೇಕ ಜ್ಞಾನವಾಗದ ಪುರುಷರಿಗೆ ಮತ್ತೆ ಭೋಗವನ್ನು ಕೊಡುವುದಕ್ಕಾಗಿ ಪ್ರಕೃತಿಯು ಪುನ:ಪುನ: ಸೃಷ್ಟಿಯನ್ನು ಮಾಡುತ್ತಲೇ ಇರುತ್ತದೆ. ಎಂಬುದು ಸಾಂಖ್ಯ ಯೋಗದರ್ಶನಾಚಾರ್ಯರ ಅಭಿಮತ.
        ಮೀಮಾಂಸಾ ದರ್ಶನದಲ್ಲಿ ಈ ಸೃಷ್ಟಿಯನ್ನು ನಿತ್ಯ ವನ್ನಾಗಿ ಒಪ್ಪಿಕೊಂಡಿದ್ದಾರೆ. ಇದು ಎಂದೂ ಸಂಪೂರ್ಣವಾಗಿ ನಾಶವಾಗುವುದಿಲ್ಲ. ಆದರೆ ಖಂಡ ಸೃಷ್ಟಿ ಮತ್ತು ಖಂಡಪ್ರಳಯಗಳು ಮಾತ್ರ ನಡೆಯುತ್ತವೆ. ಅವುಗಳನ್ನು ಸಹ ಯಾರೂ ಮಾಡುವುದಿಲ್ಲ ಅವುಗಳು ಸ್ವಾಭಾವಿಕವಾದ ಕ್ರಿಯೆಗಳು.ಈ ಸಿದ್ಧಾಂತದಲ್ಲಿ ಜೀವಿಗಳ ಶರೀರಗಳು ಭೋಗಾಯತನಗಳು , ಇಂದ್ರಿಯಗಳು ಭೋಗ ಸಾಧನೆಗಳು ಮತ್ತು ಪ್ರಪಂಚದಲ್ಲಿಯ ಶಬ್ದಸ್ಪರ್ಶಾದಿಗಳು ಭೋಗದ  ವಿಷಯಗಳಾಗಿರುತ್ತವೆ. ಇವರಲ್ಲಿ ಕೆಲವರು ನೈಯಾಯಿಕರಂತೆ ಪರಮಾಣುಗಳ ಸಂಯೋಜನೆಯಿಂದ ಸೃಷ್ಟಿ ಮತ್ತು ಅವುಗಳ ವಿಭಜನೆಯಿಂದ ಸೃಷ್ಟಿಯ ವಿನಾಶ ಎಂಬುದಾಗಿಯೂ  ಒಪ್ಪಿಕೊಂಡಿದ್ದಾರೆ.
    ಇನ್ನು ಅದ್ವೈತ ವೇದಾಂತಿಗಳು
"ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರ:" ಅಂದರೆ  ಬ್ರಹ್ಮ ಒಂದೇ ಸತ್ಯ ಜಗತ್ತು ಮಿಥ್ಯ ವಾದದ್ದು ಜೀವಾತ್ಮನು ಸಹ ಬ್ರಹ್ಮನೇ ಆಗಿರುತ್ತಾನೆ. ಎಂಬ ವಾದವನ್ನು ಮಂಡಿಸುತ್ತಾರೆ.
ಅವರ ಪ್ರಕಾರ ಹಗ್ಗದಲ್ಲಿ ತೋರುವ ಹಾವಿನಂತೆ, ಕಪ್ಪೆಚಿಪ್ಪಿನಲ್ಲಿ ತೋರುವ ಬೆಳ್ಳಿಯಂತೆ, ಮೊಂಡ ಮರದಲ್ಲಿ ಕೋರುವ ಕಳ್ಳನಂತೆ  ಈ ಪ್ರಪಂಚವು ಪರಬ್ರಹ್ಮದಲ್ಲಿ ಭ್ರಾಂತಿಯಿಂದ  ತೋರುತ್ತದೆ. ಆದ್ದರಿಂದ ಇದು ಬ್ರಹ್ಮದ ವಿವರ್ತ ಎಂಬುದಾಗಿ ಹೇಳುತ್ತಾರೆ. ಆದರೂ ಈ ಪ್ರಪಂಚಕ್ಕೆ ವ್ಯಾವಹಾರಿಕ ಸತ್ಯವನ್ನು ಒಪ್ಪಿಕೊಂಡು ಇದು ಮಾಯೆಯ ಪರಿಣಾಮ ಎಂಬುದಾಗಿಯೂ  ಹೇಳುತ್ತಾರೆ. ಈ ಸಿದ್ಧಾಂತದಲ್ಲಿ "ನೇಹ ನಾನಾಸ್ತಿ   ಕಿಂಚನ", "ಸರ್ವಂ ಖಲ್ವಿದಂ  ಬ್ರಹ್ಮ"ಎಂಬ ಸೃತಿ ಪ್ರಮಾಣದಂತೆ ಎಲ್ಲವೂ ಪರಬ್ರಹ್ಮ ಸ್ವರೂಪವೇ. ಆದರೂ ಜೀವಿಗಳ ಅಜ್ಞಾನದಿಂದ ತೋರುವ ಈ ಸೃಷ್ಟಿಯನ್ನು ಅಲ್ಲಗಳೆಯುವುದಕ್ಕಾಗಿ ಅಧ್ಯಾರೋಪ ಮತ್ತು ಅಪವಾದಗಳ ಮೂಲಕ ಈ ಸೃಷ್ಟಿಯನ್ನು ಮಾಯೆಯ ಪರಿಣಾಮವಾಗಿ ಹೇಳಿ ಅದರ ಮಿಥ್ಯಾತ್ವವನ್ನು ತಿಳಿಸಿ ಜೀವನಿಗೆ ಬ್ರಹ್ಮಜ್ಞಾನವನ್ನು ಮಾಡಿಕೊಡುತ್ತಾರೆ.
       ಇನ್ನು ಸನಾತನ ವೀರಶೈವ ಸಿದ್ಧಾಂತದಲ್ಲಿ ಶಕ್ತಿ ವಿಶಿಷ್ಟನಾದ ಪರಶಿವನೇ  ಈ ಸೃಷ್ಟಿಗೆ ಉಪಾದಾನ ಮತ್ತು ನಿಮಿತ್ತ ಕಾರಣನಾಗಿರುತ್ತಾನೆ. 
ಪತ್ರಶಾಖಾದಿರೂಪೇನ  ಯಥಾ ತಿಷ್ಠತಿ ಪಾದಪ:।
ತಥಾ ಭೂಮ್ಯಾದಿರೂಪೇನ ಶಿವ ಏಕೋ ವಿರಾಜತೇ।।
ಅಂದರೆ ಬೇರು, ಬೊಡ್ಡೆ, ಟೊಂಗೆಗಳ ರೂಪದಲ್ಲಿ ವೃಕ್ಷವೇ ತೋರುವಂತೆ ಭೂಮ್ಯಾದಿಗಳ  ರೂಪದಲ್ಲಿ ಶಿವನೇ ತೋರುತ್ತಿರುತ್ತಾನೆ. ಆದ್ದರಿಂದ ನಿಷೇಧಾತ್ಮಕ ವಿಚಾರಕ್ಕೆ ಆಸ್ಪದ ಕೊಡದೆ  ಸರ್ವವೆಲ್ಲವನ್ನು ಶಿವಮಯವನ್ನಾಗಿ ಪ್ರತಿಪಾದಿಸಲಾಗಿದೆ. ಸಂಪೂರ್ಣ ಸೃಷ್ಟಿಯು ಶಿವರೂಪವಾದದ್ದು  ಶಿವನಿಗಿಂತ ಬೇರೆ ಯಾವುದೂ ಇಲ್ಲ ಮತ್ತು ನಾನೂ ಶಿವಸ್ವರೂಪನೇ ಆಗಿದ್ದೇನೆ ಎಂಬ ದೃಢವಾದ ಜ್ಞಾನವಾಗಲು ಆ ಜೀವಿಯು ಸಂಸಾರದಿಂದ ಮುಕ್ತನಾಗುತ್ತಾನೆ. ಆದ್ದರಿಂದ ವೀರಶೈವ ಸಿದ್ಧಾಂತದಲ್ಲಿ ಯಾವುದೂ ಮಿಥ್ಯವಾದುದಲ್ಲ. ಸುವರ್ಣವು  ಯಾವುದೇ ಅಲಂಕಾರರೂಪವನ್ನು ತಾಳಿದರೂ ಸುವರ್ಣಕ್ಕೆ ಯಾವುದೇ ಚ್ಯುತಿಬಾರದಿರುವಂತೆ ಶಿವನು  ಸೃಷ್ಟಿಸ್ವರೂಪವನ್ನು ತಾಳಿದರೂ ಶಿವನ ಮೂಲಸ್ವರೂಪಕ್ಕೆ ಯಾವ ಚ್ಯುತಿಯೂ ಬರುವುದಿಲ್ಲ.
              ಈ ರೀತಿಯಾಗಿ ಭಾರತೀಯ ದಾರ್ಶನಿಕರು ಸೃಷ್ಟಿಯ ವಿಚಾರದಲ್ಲಿ ತಮ್ಮ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. "ಯಥಾದೃಷ್ಟಿ: ತಥಾ ಸೃಷ್ಟಿ:"ಎಂಬ ಉಕ್ತಿಗಣುಸಾರವಾಗಿ ಯಾರು ಈ ಸೃಷ್ಟಿಯನ್ನು ಹೇಗೆ ಭಾವಿಸುತ್ತಾರೆಯೋ ಅದು  ಅವರಿಗೆ  ಹಾಗೆಯೇ ತೋರುತ್ತದೆ. ಆದ್ದರಿಂದ ಇದನ್ನು ಜಡಮಯವಾಗಿ ಕಾಣದೆ ಚಿದ್ರೂಪವಾಗಿ ಕಾಣುವುದೇ ಹೆಚ್ಚು ಸೂಕ್ತವೆನಿಸುತ್ತದೆ. ಸೃಷ್ಟಿಯ ಬಗ್ಗೆ ಇರುವ ಜಡದೃಷ್ಠಿಯನ್ನು ಕಳೆದುಕೊಂಡರೆ ಅದರಲ್ಲಿಯ ಆಸಕ್ತಿಯು  ಕಡಿಮೆಯಾಗಿ ಪ್ರತಿಯೊಬ್ಬರು ಇದೇ ಜನ್ಮದಲ್ಲಿ ಸದ್ಗತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದು. ಅದರಿಂದ ಸೃಷ್ಟಿಯ ವಿಧಾನದಲ್ಲಿ ವಾದಿಸದೇ ಸೃಷ್ಟಿಯನ್ನೇ ಶಿವನಾಗಿ ಭಾವಿಸುವುದು ಕಲ್ಯಾಣ ಕರವಾದುದು   ಎಂಬುದು ನಮ್ಮ ಭಾವನೆಯಾಗಿದೆ.

ಲೇಖಕರು: " ಸರ್ವದರ್ಶನತೀರ್ಥ"        "ವೇದಾಂತಾಚಾರ್ಯ"  "ವಿದ್ಯಾವಾರಿಧಿ" "ವಿದ್ಯಾವಾಚಸ್ಪತಿ"  ಶ್ರೀ ಕಾಶಿ ಜಗದ್ಗುರು ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಜಗದ್ಗುರು ವಿಶ್ವಾರಾಧ್ಯ ಜ್ಞಾನ ಸಿಂಹಾಸನ ಜಂಗಮವಾಡಿ ಮಠ ವಾರಣಾಸಿ*

April 12, 2021

“ನನಗೆ ದೆಹಲಿಗೆ ಬರೋಕೆ ಆಗಲ್ಲ ನನ್ನ ಬಳಿ ಅಷ್ಟು ದುಡ್ಡಿಲ್ಲ, ದಯಮಾಡಿ ನೀವೇ ಅದನ್ನ ನನಗೆ ಪೋಸ್ಟ್ ಮೂಲಕ ಕಳಿಸಿಕೊಡಿ ಮೋದಿಜೀ” ಹಲದರ್ ನಾಗ್

ಯಾವ ವ್ಯಕ್ತಿಯ ಹೆಸರಿನ ಹಿಂದೆ ಇದುವರೆಗೂ ‘ಶ್ರೀ’ ಸೇರಿಸಿಲ್ಲ, ಇದುವರೆಗೂ ಆತನ ಬಳಿ ಕೇವಲ 3 ಜೊತೆ ಬಟ್ಟೆಗಳಿವೆ, ಒಂದು ಜೊತೆ ರಬ್ಬರ್ ಚಪ್ಪಲ್, ಒಂದೇ ಒಂದು ಕನ್ನಡಕ ಅದೂ ಹಳೆಯದ್ದು ಹಾಗು ಆತ ಕೇವಲ 732 ರೂಪಾಯಿಯ ಮಾಲೀಕನಾಗಿದ್ದಾನೆ. ಹೌದು ಇದೇ ಅತೀ ಸಾಮಾನ್ಯ ವ್ಯಕ್ತಿ ಈಗ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಮೂಲತಃ ಒರಿಸ್ಸಾದವರಾಗಿದ್ದು ಇವರ ಹೆಸರು ಹಲಧರ್ ನಾಗ್ ಎಂಬುದಾಗಿದೆ.
ಅಷ್ಟಕ್ಕೂ ಇವರಿಗೆ ಯಾಕೆ ಪದ್ಮಶ್ರೀ ಪ್ರಶಸ್ತಿ ಅಂತ ಯೋಚಿಸುತ್ತಿದ್ದೀರ? ಬನ್ನಿ ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ. ಹಲಧರ್ ನಾಗ್ ರವರು ಕೋಸಲಿ ಭಾಷೆಯ ಪ್ರಸಿದ್ಧ ಕವಿಯಾಗಿದ್ದಾರೆ. ವಿಶೇಷವೆಂದರೆ ಅವರು ಇದುವರೆಗೂ ಅವರು ಬರೆದ ಕವಿತೆಗಳು ಹಾಗು 20 ಮಹಾಕವ್ಯಗಳೇನಿವೆಯೋ ಅವುಗಳೆಲ್ಲಾ ಈಗಲೂ ಅವರ ನಾಲಿಗೆಯ ಮೇಲೆಯೇ ಇವೆ. ಅವರು ಬರೆದ ಯಾವ ಕಾವ್ಯಗಳ ಬಗ್ಗೆ ಯಾವ ಕ್ಷಣದಲ್ಲಿ ಕೇಳಿದರೂ ಸುಲಲಿತವಾಗಿ ಅವರು ಅವುಗಳನ್ನ ಹೇಳುತ್ತಾರೆ. ಈಗ ಸಂಭಲಪುರ್ ವಿಶ್ವವಿದ್ಯಾಲಯಯಲ್ಲಿ ಅವರು ಬರೆದ ಒಂದು ಕಾವ್ಯ ‘ಹಲಧರ್ ಗ್ರಂಥಾವಳಿ-2’ ಅನ್ನು ಪಠ್ಯಕ್ರಮದಲ್ಲೂ ಸೇರ್ಪಡೆ ಮಾಡಲಾಗಿದೆ.
ಸದಾ ಸರಳ, ಬಿಳಿ ಲುಂಗಿ, ಮುಖಕ್ಕೆ ಟವಲ್ ಬಟ್ಟೆಯ ಮಾಸ್ಕ್ ಹಾಗು ಬನಿಯಾನ್ ಹಾಕಿಕೊಳ್ಳುವ ನಾಗ್ ರವರು ಬರಿಗಾಲಿನಲ್ಲೇ ಓಡಾಡುತ್ತಾರೆ. ಇಂತಹ ಹೀರೋನನ್ನ ಚಾನಲೆಗಳಾಗಲಿ ಮೀಡಿಯಾಗಳಲಿ ಅಲ್ಲ ಬದಲಾಗಿ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿಗಾಗಿ ದೆಹಲಿಯಿಂದ ದೂರದ ಓರಿಸ್ಸಾದಿಂದ ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದೆ.
      ಓರಿಯಾ ಲೋಕ-ಕವಿ ಹಲಧರ್ ನಾಗ್ ರವರ ಬಗ್ಗೆ ನೀವು ಕೇಳಿದರೆ ನೀವು ಅವರನ್ನ ಪ್ರೇರಣಾಮೂರ್ತಿಯಾಗಿ ಕಾಣಲು ಪ್ರಾರಂಭಿಸುತ್ತೀರ. ಹಲಧರ್ ನಾಗ್ ಒಂದು ಬಡ ದಲಿತ ಕುಟುಂಬದವರಾಗಿದ್ದಾರೆ. 10 ವರ್ಷದ ವಯಸ್ಸಿನಲ್ಲೇ ಅವರ ತಂದೆ ತಾಯಿಯ ದೇಹಾಂತ್ಯವಾಗಿತ್ತು. ಅವರು ಶಿಕ್ಷಣ ಮುಂದುವರೆಸಲು ಸಾಧ್ಯವಾಗದೆ ಮೂರನೆಯ ತರಗತಿಗೇ ಶಾಲೆ ತೊರೆಯಬೇಕಾಯಿತು. ಅನಾಥನಾಗಿ ಜೀವನ ಕಳೆಯಬೇಕಾಯಿತು. ಹೊಟ್ಟೆ ತುಂಬಿಸಿಕೊಳ್ಳಲು ಢಾಬಾದಲ್ಲಿ ಮುಸುರೆ ಪಾತ್ರೆಗಳನ್ನ ತೊಳೆತುತ್ತ ಕೆಲ ವರ್ಷಗಳು ಕಳೆದರು. ಬಳಿಕ ಒಂದು ಶಾಲೆಯಲ್ಲಿ ಅಡುಗೆ ಮಾಡುವ ಕೆಲಸ ಸಿಕ್ಕಿತು. ಕೆಲ ವರ್ಷಗಳ ಬಳಿಕ ಬ್ಯಾಂಕ್ ನಿಂದ ಒಂದು ಸಾವಿರ ರೂ ಸಾಲ ಪಡೆದು ಪೆನ್-ಪೆನ್ಸಿಲ್ ಹಾಗು ಇತರ ವಸ್ತುಗಳ ಪುಟ್ಟ ಅಂಗಡಿಯನ್ನ ತಾವು ರಜಾ ದಿನಗಳಲ್ಲಿ ಯಾವ ಶಾಲೆಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರೆ ಅದೇ ಶಾಲೆಯ ಎದುರು ತೆರೆದರು. ಇದು ಅವರ ಜೀವನೋಪಾಯದ ಮಾರ್ಗದ ಕಥೆ.
   ಈಗ ಅವರ ಸಾಹಿತ್ಯ ವಿಶೇಷದ ಬಗ್ಗೆ ಮಾತನಾಡುವುದಾದರೆ ಹಲಧರ್ ನಾಗ್ ರವರು 1995 ರಲ್ಲಿ ಓರಿಯಾ ಭಾಷೆ ಹಲ್ಲು “ರಾಮ-ಶಬರಿ” ನಂತಹ ಹಲವಾರು ಧಾರ್ಮಿಕ ಪ್ರಸಂಗಗಳ ಮೇಲೆ ಬರೆದು ಬರೆದು ಜನರಿಗೆ ತಿಳಿಸಲು ಶುರುಮಾಡಿದರು. ತಮ್ಮ ಭಾವನೆಗಳಿಂದ ಕೂಡಿದ ಕವಿತೆಗಳನ್ನ ಜನರಿಗೆ ತಿಳಿಸುತ್ತ ತಿಳಿಸುತ್ತ ಅವರು ಅದೆಷ್ಟು ಖ್ಯಾತನಾಮರಾದರೆಂದರೆ ಈ ವರ್ಷ ಅವರಿಗೆ ರಾಷ್ಟ್ರಪತಿಗಳಿಂದ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪಡೆಯುವಂತಾದರು.

ಅಷ್ಟೇ ಅಲ್ಲ ಕೇವಲ 3 ನೆಯ ತರಗತಿಯವರೆಗೆ ಓದಿರುವ ಹಲಧರ್ ನಾಗ್ ರವರ ಕೃತಿಗಳ ಮೇಲೆ ಈಗ 5 ಜನರು PHd ಮಾಡುತ್ತಿದ್ದಾರೆ‌. ಇಂತಹ ಅತ್ಯದ್ಭುತ ಎಲೆಮರೆ ಕಾಯಿಯಂತಿರುವ ವ್ಯಕ್ತಿಯನ್ನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಮೋದಿ ಸರ್ಕಾರಕ್ಕೆ ಧನ್ಯವಾದಗಳು.

The President, Shri Pranab Mukherjee presenting the Padma Shri Award to Shri Haladhar Nag, at a Civil Investiture Ceremony, at Rashtrapati Bhavan, in New Delhi on March 28, 2016.

ಇಲ್ಲಿ ಗಮನಿಸುವ ಮತ್ತೊಂದು ಅಂಶವೇನೆಂದರೆ ಹಲಧರ್ ನಾಗ್ ರವರಿಗೆ ತಾವು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿ ಪ್ರಶಸ್ತಿ ಪಡೆಯಲು ದೆಹಲಿಗೆ ಹೋಗಬೇಕು ಎಂದಾಗ ದೆಹಲಿಗೆ ಹೋಗಲು ನನ್ನ ಬಳಿ ಅಷ್ಟು ಹಣವಿಲ್ಲ, ನೀವು ಅದನ್ನ ಪೋಸ್ಟ್ ಮೂಲಕವೇ ನನಗೆ ಕಳಿಸಿಕೊಡಿ ಎಂದಿದ್ದರಂತೆ‌. ಬಳಿಕ ಅಧಿಕಾರಿಗಳು ಹಾಗು ರಾಜ್ಯ ಸರ್ಕಾರ ಅವರ ವೆಚ್ಚವನ್ನು ಭರಿಸುವ ಮೂಲಕ ಅವರನ್ನ ದೆಹಲಿಗೆ ಕಳಿಸಿಕೊಟ್ಟರು.


ನಾವು ಪುಸ್ತಕಗಳಲ್ಲಿ ಪ್ರಕೃತಿಯನ್ನ ಆಯ್ಕೆಮಾಡಿಕೊಳ್ಳುತ್ತೇವೆ ಆದರೆ ಪದ್ಮಶ್ರೀ ಪ್ರಶಸ್ತಿಯಂತೂ ಪ್ರಕೃತಿಯಿಂದಲೇ ಪುಸ್ತಕವನ್ನ ಆಯ್ಕೆ ಮಾಡಿಕೊಂಡಿದೆ