ಒಬ್ಬ ರೈತನಿಗೆ ಹಳೆಯ ಒಂದು ಕೈ ಗಡಿಯಾರವಿತ್ತು. ಅದನ್ನು ಆತನ ಅಪ್ಪಾಜಿಯವರು ಗಿಫ್ಟ್ ಕೊಟ್ಟದ್ದಾಗಿತ್ತು. ಒಂದು ದಿನ ಆತ ಕೆಲಸ ಮಾಡುತ್ತಿರುವಾಗ ಆ ಗಡಿಯಾರವು ಬೈಹುಲ್ಲಿನ ರಾಶಿಯೊಳಗೆ ಕಳೆದು ಹೋಯಿತು..... ಆತ ತುಂಬಾ ಹುಡುಕಾಡಿದರೂ ಸಿಗಲೇ ಇಲ್ಲ. ದುಃಖಿತಸ್ತನಾದ ಆತ ಪಕ್ಕದ ಮನೆಯ ಮಕ್ಕಳನ್ನು ಕರೆದು ವಿಷಯ ತಿಳಿಸಿದ. ಆ ಮಕ್ಕಳೆಲ್ಲರೂ ಬೈಹುಲ್ಲಿನ ರಾಶಿಯನ್ನು ತಿರುಗಿಸಿ, ಮಗುಚಿ ಎಲ್ಲಾ ಹುಡುಕಿದರೂ ಕೂಡಾ ಗಡಿಯಾರ ಸಿಗಲೇ ಇಲ್ಲ....
ಹಾಗೆ ಬೇಜಾರಲ್ಲಿ ಕುಳಿತಿರುವಾಗ ಬಾಲಕನೊಬ್ಬ ಆತನ ಹತ್ತಿರ ಬಂದು ಹೇಳಿದ - ಅಂಕಲ್ ನಾನೊಮ್ಮೆ ಪ್ರಯತ್ನಿಸಲೇ?
ಆತ ಆ ಬಾಲಕನನ್ನು ಕುತೂಹಲದಿಂದ ನೋಡಿದ...
ಮತ್ತು ಹೇಳಿದ -
“ಮಗುವೇ ನಾವೆಲ್ಲರೂ ಬೈಹುಲ್ಲನ್ನು ಮಗುಚಿ ತಿಜುಕಿ ಎಲ್ಲಾ ಹುಡುಕಿದರೂ ಗಡಿಯಾರ ಸಿಗಲಿಲ್ಲ.... ಮತ್ತೆ ನೀನೊಬ್ಬನೇ .... ಅದೇನು ಮಾಡುತ್ತಿಯೋ... ?
ಬಾಲಕ - “ಆದರೂ ನಾನೊಮ್ಮೆ ಪ್ರಯತ್ನಿಸುವೆ”
ರೈತ - “ ಅದಕ್ಕೇನಂತೆ ಪ್ರಯತ್ನಿಸು ನೋಡೋಣ....”
ಆ ಬಾಲಕ ಬೈ ಹುಲ್ಲಿನ ರಾಶಿಯ ಹತ್ರ ಹೋದ.
ಸುಮಾರು ಹತ್ತು ನಿಮಿಷದ ನಂತರ ಆ ಕಳೆದು ಹೋದ ಗಡಿಯಾರದೊಂದಿಗೆ ವಾಪಾಸ್ ಬಂದ...!
ಆ ಬಾಲಕನನ್ನು ನೋಡಿದ ರೈತನಿಗೆ ಆಶ್ಚರ್ಯವಾಯಿತು.
ಆತ ಸಂತೋಷದಿಂದ ಕೇಳಿದ- “ ಕಂದಾ ನಿನ್ನಿಂದ ಇದೇಗೆ ಸಾಧ್ಯವಾಯಿತು?”
ಬಾಲಕ - “ನಾನು ಬೇರೇನೂ ಮಾಡಿಲ್ಲ. ಆ ಬೈ ಹುಲ್ಲಿನ ರಾಶಿಯ ಒಳಗೆ ಸುಮ್ಮನೆ ಕೂತುಕೊಂಡೆ ಮತ್ತು. ಶಬ್ದವನ್ನು ಆಲಿಸತೊಡಗಿದೆ... ಆಗ "ಟಿಕ್ ಟಿಕ್ " ಅಂತ ಗಡಿಯಾರದ ಶಬ್ದ ಕೇಳಿಸಿತು.. ಶಬ್ದ ಕೇಳಿಸಿದ ಜಾಗವನ್ನು ಹುಡುಕಾಡಿದೆ. ಆಗ ಗಡಿಯಾರ ಸಿಕ್ಕಿತು.....!”
ನೋಡಿ ಸ್ನೇಹಿತರೆ - ಯಾವ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ... ಕಿರುಚಾಡಿದರೋ ಅಥವಾ ಒಬ್ಬರನ್ನೊಬ್ಬರು ದೂರುತ್ತಾ ಇದ್ದರೋ ಸಮಸ್ಯೆ ನಿವಾರಣೆಯಾಗದು.
No comments:
Post a Comment
If you have any doubts. please let me know...