May 17, 2021

ಅಟ್ಲಾಂಟಾ ವಿಮಾನ ಪತನ.. ಥಿಂಕ್ ಪಾಸಿಟಿವ್

*#ಥಿಂಕ್_ಪಾಸಿಟಿವ್‌.* 

        ಅಟ್ಲಾಂಟಿಕ್ ಮಹಾಸಾಗರದಲ್ಲಿ ಸುಮಾರು ವರ್ಷಗಳ ಹಿಂದೆ ಒಂದು ವಿಮಾನ ಪತನ ಆಯಿತು...
ವಿಮಾನ ನಾಪತ್ತೆ ಆದ ಸುದ್ದಿ ತಿಳಿದರು ಅದು ಎಲ್ಲಿ ಪತನ ಆಯಿತು ಎಂದು ತಿಳಿಯದೇ ಹುಡುಕಾಟ ನಡೆಸಿದರು ನಾಲ್ಕು ಐದು ದಿನಗಳ ನಂತರ
ವಿಮಾನ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪತನ ಆಗಿದೆ ಎಂದು ತಿಳಿದುಬಂತು..
ಅದರಲ್ಲಿ ಯಾರಾದರೂ ಬದುಕಿ ಉಳಿಯುವ ಸಾಧ್ಯತೆ ಎಲ್ಲರೂ ಕೈ ಬಿಟ್ಟಿದ್ದರು
ಸೈನಿಕರ ಸರ್ಚ್ ಟೀಂ ಸಾಗರದಲ್ಲಿ ಹುಡುಕಾಟ ಶುರು ಮಾಡಿದರು
ಕೊನೆಗೂ ಸರ್ಚ್ ಟೀಂ ವಿಮಾನದ ಅವಶೇಷ ಪತ್ತೆ ಹಚ್ಚಿದರು
ಎಲ್ಲಿ ನೋಡಿದರೂ ಹೆಣಗಳು ಕಾಣುತ್ತಿದ್ದವು
ಅನತಿ ದೂರದಲ್ಲಿ ಅವರಿಗೆ ಕಂಡು ಬಂದ ದೃಶ್ಯ ನೋಡಿ ಸೈನಿಕರಿಗೆ ತಮ್ಮ ಕಣ್ಣುಗಳನ್ನೇ ನಂಬಲು ಆಗಲಿಲ್ಲ
ತೇಲುತ್ತಿರುವ ವಿಮಾನದ ಒಂದು ತುಂಡು ಮೇಲೆ ಒಬ್ಬಳು ಮಹಿಳೆ ಒಂದು ಸಣ್ಣ ಮಗುವನ್ನು ಎದೆಗೆ ಅಪ್ಪಿಕೊಂಡು ಮಲಗಿರುವ ದೃಶ್ಯ ಕೂಡಲೇ ಅಲ್ಲಿಗೆ ಹೋಗಿ ಅವರನ್ನು ಪರೀಕ್ಷೆ ಮಾಡಿ ನೋಡಿದರು ತಾಯಿ ಮಗು ಇನ್ನೂ ಉಸಿರಾಡುತ್ತಿದ್ದರು..
ಅವರು ಜೀವಂತ ಇರುವುದು ಖಾತ್ರಿ ಮಾಡಿಕೊಂಡು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿಸಿದರು..
ಇಡೀ ಜಗತ್ತಿಗೆ ಇದೊಂದು ಪವಾಡ ಎಂದು ಅನಿಸಿತು..
ಮೈ ಹೆಪ್ಪುಗಟ್ಟಿಸುವ ಚಳಿ ಸುತ್ತಲೂ ನೀರು ತೇಲುತ್ತಿರುವ ಹೆಣಗಳು ಆಹಾರ ಇಲ್ಲ ನೀರು ಇಲ್ಲ ಎಂತಹ ಗಟ್ಟಿ ಗುಂಡಿಗೆ ಇದ್ದರೂ ಅಂತಹ ಸನ್ನಿವೇಶದಲ್ಲಿ ಬದುಕಿ ಉಳಿಯುವುದು ನಿಜಕ್ಕೂ ಒಂದು ಪವಾಡ..
ಆಕೆ ಚೇತರಿಸಿಕೊಂಡ ಬಳಿಕ ಅವಳನ್ನು ಸಂದರ್ಶನ ಮಾಡಿದಾಗ ಆಕೆ ಹೇಳಿದ ಮಾತು
ಆಕಾಶದಲ್ಲಿ ವಿಮಾನ ಸ್ಪೋಟ ಆಯಿತು ಏನಾಯಿತು ಎಂದು ಅರಿವು ಆಗುವಷ್ಟರಲ್ಲಿ ನಾವು ವಿಮಾನದಿಂದ ಸಿಡಿದು ಗಾಳಿಯಲ್ಲಿ ತೇಲುತ್ತಾ ನೀರಿಗೆ ಬಂದು ಬಿದ್ದೆವು
ಸುತ್ತಲೂ ನೋಡಿದಾಗ ಬರೀ ನೀರು ಕೆಲವರು ಈಜಲು ಪ್ರಯತ್ನಿಸಿದರು ಕೆಲವರು ಆದ ಅಪಘಾತಕ್ಕೆ ನೀರಿಗೆ ಬೀಳುವ ಮೊದಲೇ ಮೃತಪಟ್ಟಿದ್ದರು
ಮಗು ನನ್ನ ತೊಡೆ ಮೇಲೆ ಇದ್ದುದರಿಂದ ನೀರಿಗೆ ಬೀಳುವ ವರೆಗೆ ಮಗುವನ್ನು ಅಪ್ಪಿಕೊಂಡೆ ಇದ್ದೆ ನಾನು ಈಜಲು ಪ್ರಯತ್ನಿಸಿದೆ ಮಗು ಹಿಡಿದುಕೊಂಡು ಈಜಲು ಆಗಲಿಲ್ಲ..
ತೇಲುತ್ತಿರುವ ವಿಮಾನದ ತುಣುಕು ಕಣ್ಣಿಗೆ ಬಿತ್ತು ಏನಾದರೂ ಆಗಲಿ ನಾನು ಸಾಯುವುದಿಲ್ಲ ಬದುಕಿಯೇ ಬದುಕುತ್ತೇನೆ ಎಂದು ಕಷ್ಟಪಟ್ಟು ಈಜಿ ಅದರ ಮೇಲೆ ಏರಿ ಕುಳಿತೆ 
ನನಗೆ ಭರವಸೆ ಇತ್ತು ಯಾರಾದರೂ ಕಾಪಾಡುತ್ತಾರೆ ಎಂದು
ನನ್ನ ಧೈರ್ಯವೇ ನನ್ನನ್ನು ಬದುಕಿಸಿತು ...

ಇದನ್ನು ನಾನು ಎಲ್ಲೂ ಓದಿದ್ದು ಯಾವಾಗ ಎಂದು ನೆನಪಿಲ್ಲ
ಸಾವನ್ನು ಎದುರಿಸುವ ಶಕ್ತಿ ಇರುವುದು ಮನಸ್ಸಿಗೆ ಮಾನಸಿಕ ಧೈರ್ಯ ಇದ್ದರೆ ಎಂತಹ ಕಾಯಿಲೆ ಬಂದರೂ ಸಾವನ್ನು ಎದುರಿಸಬಹುದು
ಕೊನೆಯ ಕ್ಷಣದವರೆಗೂ ಧೈರ್ಯ ಕಳೆದುಕೊಳ್ಳಬಾರದು 
ಮನಸ್ಸಿನಲ್ಲಿ ಭಯ ಭೀತಿ ಉಂಟಾದರೆ ಉಸಿರಾಟ ಏರುಪೇರು ಆಗುತ್ತದೆ 
ಉದ್ವೇಗ ಉಂಟಾಗುತ್ತದೆ ನನಗೆ ಏನೂ ಆಗುತ್ತದೆ ನಾನು ಸಾಯುತ್ತೇನೆ ಎಂಬ ಭಾವನೆ ಮನಸ್ಸಿನಲ್ಲಿ ಬಂದರೆ ಯಾವುದೇ ಔಷಧಿ ಕೂಡ ಬದುಕಿಸಲು ಸಾಧ್ಯವಿಲ್ಲ..
ಮಾನಸಿಕ ಧೈರ್ಯ ಇದ್ದರೆ ಎಂತಹ ಮಾರಣಾಂತಿಕ ಕಾಯಿಲೆ ಬಂದರೂ ಗುಣ ಆಗಬಹುದು ಇಲ್ಲವೇ ಕಾಯಿಲೆ ತೀವ್ರತೆ ಕಡಿಮೆ ಮಾಡುತ್ತದೆ..
ಹುಟ್ಟಿದ ಮನುಷ್ಯ ಸಾಯಲೇ ಬೇಕು ನಿಜ ಆದ್ರೆ ಭಯ ಭೀತಿ ಸಾವಿಗೆ ಬೇಗ ಆಹ್ವಾನ ಕೊಡುತ್ತದೆ.
ನಿಮ್ಮ ಸುತ್ತಮುತ್ತ ನೋಡಿ ಪುಟ್ ಪಾತ್ ಮೇಲೆ ರೈಲ್ವೆ ಪ್ಲಾಟ್ಫಾರ್ಮ್ ಮೇಲೆ ಮಲಗುವ ನಿರ್ಗತಿಕರನ್ನು 
ಯಾವುದೇ ಕಾಯಿಲೆ ಕಸಾಲೆ ಭಯ ಇಲ್ಲದೆ ನಾಳಿನ ಜೀವನದ ಬಗ್ಗೆ ಚಿಂತೆ ಇಲ್ಲದೆ ನೆಮ್ಮದಿಯಾಗಿ ಮಲಗುತ್ತಾರೆ ಬದುಕುತ್ತಾರೆ. ಮನೆಯಲ್ಲಿ ಒಬ್ಬ ಸದಸ್ಯ ಭಯ ಪಟ್ಟರೆ ಭಯ ಸಾಂಕ್ರಾಮಿಕ ರೋಗದಂತೆ ಮನೆಯ ಸದಸ್ಯರೆಲ್ಲರೂ ಭಯ ಪಡುತ್ತಾರೆ. 
ನೀವು ಭಯಪಟ್ಟುಕೊಳ್ಳುವುದು ಬಿಟ್ಟು ಎಲ್ಲರಿಗೂ ಧೈರ್ಯ ತುಂಬಿ
ಎಂತಹ ಸನ್ನಿವೇಶ ಬಂದರೂ ಧೈರ್ಯ ಕಳೆದುಕೊಳ್ಳಬೇಡಿ

ಹಾಗಂತ ಧೈರ್ಯ ತಂದುಕೊಳ್ಳಲು ದುಶ್ಚಟಗಳಿಗೆ ದಾಸರಾಗಬೇಡಿ. ದುಶ್ಚಟಗಳು ಯಾವತ್ತಿಗೂ ಶರೀರಕ್ಕೆ ಹಾನಿ ಮಾಡುತ್ತದೆ

#ಥಿಂಕ್_ಪಾಸಿಟಿವ್‌ 
🙏🙏🙏🙏🙏 

( ವಾಟ್ಸ್‌ಅಪ್‌‌ನಲ್ಲಿ ಬಂದಿದ್ದು )

No comments:

Post a Comment

If you have any doubts. please let me know...