August 31, 2021

ಗೌರೀರ್ಮಿಮಾಯ ಸಲಿಲಾನಿ


ಬ್ರಹ್ಮ ಎಂದರೆ ಜ್ಞಾನ. ಪರಮೋಚ್ಚ ಜ್ಞಾನ. ಶಬ್ದವನ್ನು ನಮ್ಮ ಹಿರಿಯರು ಬ್ರಹ್ಮ ಎನ್ನುವ ಅತ್ಯುತ್ಕೃಷ್ಟವಾದ ಸ್ಥಾನವನ್ನು ನೀಡಿ ಅದಕ್ಕೆ ವಿಶೇಷ ಸ್ಥಾನವನ್ನು ನೀಡಿದ್ದರು. ಶಬ್ದದಿಂದಲೇ ಮಾತು ಹುಟ್ಟಿದ್ದು. ವಾಕ್ ಅಥವಾ ಮಾತಿಗೆ ಭಾಷೆ ಮಾಧ್ಯಮವಾಗಿ ರೂಪುಗೊಂಡಿತು. ಭಾಷೆ ವ್ಯಕ್ತವಾಗುವುದು ಲಿಪಿಯ ಮಾಧ್ಯಮದಿಂದ. ಹೀಗೇ ಶಬ್ದಕ್ಕಿರುವ ಮಹತ್ವವನ್ನು ವೇದ, ಉಪನಿಷತ್ತು ಪುರಾಣವೇ ಮೊದಲಾದವುಗಳು ಕೊಂಡಾಡಿವೆ. ವಾಕ್ಯ ರಚನೆಯ ಬದ್ದತೆಯನ್ನು ಸಾರಿವೆ. ಅದನ್ನೇ ಇಲ್ಲಿ. . . . 

ದೇವೀಂ ವಾಚಮಜನಯಂತ ದೇವಾಸ್ತಾಂ ವಿಶ್ವರೂಪಾಃ ಪಶವೋ ವದಂತಿ |
ಸಾ ನೋ ಮಂದ್ರೇಷಮೂರ್ಜಂ ದುಹಾನಾ ಧೇನುರ್ವಾಗಸ್ಮಾನುಪಸುಷ್ಟುತೈತು ||
ಪ್ರಕಾಶಮಾನಳಾದ ವಾಗ್ದೇವಿಯನ್ನು ದೇವತೆಗಳು ಸೃಷ್ಟಿಸಿದರು. ಅದೇ ವಾಗ್ದೇವಿಯನ್ನು ಬೇರೆ ಬೇರೆ ರೂಪ ಹೊಂದಿರುವ ಪಶುಗಳೂ ಪ್ರಶಂಸಿಸುತ್ತವೆ. ಅದೇ ವಾಗ್ದೇವಿಯು ನಮಗೆ ಹರ್ಷಕಾರಕಳಾಗಿ ಅನ್ನವನ್ನೂ ಕ್ಷೀರಾದಿ ರಸಗಳನ್ನೂ ಕರೆಯುತ್ತಲೂ ಪ್ರಭೂತವಾದ ಕ್ಷೀರ ಹೊಂದಿದ ಧೇನುವಿನ ರೂಪವನ್ನು ಆಶ್ರಯಿಸಿ ಅತಿಶಯವಾಗಿ ಸ್ತುತಿಸಲ್ಪಡುತ್ತಾ ನಮ್ಮಲ್ಲಿಗೆ ದಯಮಾಡಲಿ. 
ಇದು ಋಗ್ವೇದದ ೮ನೇ ಮಂಡಲದಲ್ಲಿ ಬರುತ್ತದೆ. ವಾಗ್ದೇವತೆಯನ್ನು ದೇವತೆಗಳು ಸೃಷ್ಟಿಸಿದರಂತೆ. ಈ ವಾಗ್ದೇವತೆಯ ರೂಪವನ್ನು ಹೊಂದಿದ ವಾಕ್ಕನ್ನು (ಮಾತು ಮತ್ತು ಭಾಷೆಗಳನ್ನು)ಬೇರೆ ಬೇರೆ ರೂಪವನ್ನು ಹೊಂದಿರುವ ಪ್ರಾಣಿಗಳೂ ಬಳಸುತ್ತವೆ. ಅಂದರೆ ವ್ಯಕ್ತ ಶಬ್ದಗಳಿಂದಲೂ ಅರ್ಥಗಳಿಂದ ಕೂಡಿರುವ ವಾಕ್ಯಗಳನ್ನು ಮನುಷ್ಯರು ಮಾತನಾಡುತ್ತಾರೆ. ಅವ್ಯಕ್ತವಾಗಿರುವ ಅಸ್ಪಷ್ಟವಾಗಿರುವ ವರ್ಣಾತ್ಮಕವಲ್ಲದ ಶಬ್ದಗಳನ್ನು ಗೋವುಗಳೂ ಮತ್ತು ಇತರ ಪ್ರಾಣಿಗಳು ಬಳಸುತ್ತವೆ. ಇವುಗಳನ್ನೇ ಅವ್ಯಕ್ತ ವಾಕ್ಯಗಳೆಂದು ಹೇಳಲ್ಪಡುತ್ತವೆ. ಈ ಅವ್ಯಕ್ತ ಸಂಕೇತಗಳು ಮನುಷ್ಯರಿಗೆ ತಿಳಿಯುವುದಿಲ್ಲ. ಇಂತಹ ವ್ಯಕ್ತಾವ್ಯಕ್ತ ಶಬ್ದ ಸ್ವರೂಪಳಾದ ವಾಗ್ದೇವತೆಯು ನಮಗೆ ಹಾಲನ್ನು ಕರೆಯುವ ಧೇನುವಿನಂತೆ ಪ್ರೀತಿಪಾತ್ರಳಾಗಿ ಹಿತಕರವಾದ ಅನ್ನಾದಿಗಳನ್ನು ಅಂದರೆ ಹಾಲು ಮೊಸರು ತುಪ್ಪ ಮೊದಲಾದವನ್ನೂ, ರಸಾದಿಗಳನ್ನು ಎಂದರೆ ಸಸ್ಯಗಳಿಂದ ಉತ್ಪನ್ನವಾಗುವ ಪುಷ್ಟಿಕರವಾದ ಆಹಾರಗಳನು ಯಥೇಚ್ಚವಾಗಿ ಕರೆಯುತ್ತಾ ಅಂದರೆ ಅನುಗ್ರಹಿಸುತ್ತಾ ನಮ್ಮ ಸಮೀಪಕ್ಕೆ ಬರಲಿ ಮತ್ತು ನಮ್ಮಿಂದ ಸ್ತುತಿಸಲ್ಪಡಲಿ ಎನ್ನುವ ಅಭಿಪ್ರಾಯ ಇರುವುದು ಯಾಸ್ಕ ಮಹರ್ಷಿಗಳ ನಿರುಕ್ತದಲ್ಲಿ. 
ಪೂರ್ತಾ ಸೂಕ್ತ ಎನ್ನುವುದು ವಾಗ್ದೇವತೆಯ ಕುರಿತಾಗಿದ್ದು, ಅದು ವಾಕ್ ಸ್ವರೂಪವನ್ನೇ ಹೊಂದಿದೆ. ಭೂಮಿಯಲ್ಲಿ ಹರಿಯುವ ನದೀ, ನೀರು ಮತ್ತು ಇಲ್ಲಿನ ಸಸ್ಯವರ್ಗಗಳನ್ನು ಕುರಿತಾಗಿ ಸ್ಮರಿಸಲ್ಪಡುವುದನ್ನು ಪೂರ್ತಾಸೂಕ್ತ ಎಂದು ಕರೆಯಲಾಗಿದೆ ಎಂದು ಬೃಹದ್ದೇವತೆಯಲ್ಲಿ ಹೇಳಲಾಗಿದೆ. ವಾಗ್ದೇವತೆಗೆ ಮೂರು ಸ್ವರೂಪವಿದೆ ಎನ್ನುವುದು ಇದರ ಅಭಿಪ್ರಾಯ. ಪೃಥಿವೀ, ಮಧ್ಯಮಾ ಮತ್ತು ಅಂತರಿಕ್ಷ ಸ್ಥಾನವನ್ನು ಇದರಲ್ಲಿ ಹೇಳಲಾಗಿದೆ. 

ಅಂತರಿಕ್ಷಸ್ಥಾನವನ್ನೇ ಸ್ವರ್ಗಸ್ಥಾನ ಎಂದು ಹೇಳಲಾಗುತ್ತದೆ. ಅರಣ್ಯ, ರಾತ್ರೀ, ಶೃದ್ಧಾ, ಉಷಾ, ಪೃಥ್ವೀ ಅಪ್ ಎನ್ನುವ ದೇವತೆಗಳನ್ನು ಸ್ತುತಿಸುವಾಗ ವಾಕ್ಕುಗಳು ಆಯಾ ಋಕ್ಕುಗಳಿಗೆ ಅನುಸಾರವಾಗಿ ಇರುವುದು. ಈ ದೇವತೆಯು ಸ್ವರ್ಗಸ್ಥಳಾಗಿ ವಾಕ್ ಅದಿತಿ ಮತ್ತು ಸರಸ್ವತೀ ಎನ್ನುವ ಈ ಮೂರು ಹೆಸರಿನಿಂದ ಸ್ತುತಳಾದಾಗ ಆಯಾಯ ಸೂಕ್ತಕ್ಕೆಲ್ಲಾ ಪೂರ್ತಿಯಾಗಿ ಅದೇ ದೇವತೆಯಾಗಿರುತ್ತಾಳೆ. ಇದೇ ವಾಗ್ದೇವತೆಯು ಸೂರ್ಯಾ ದೇವಿಯಾಗಿ ಸ್ತುತಿಸಲ್ಪಟ್ಟಾಗ ಆಕೆ ಸ್ವರ್ಗೀಯ ಸ್ಥಾನ ಪಡೆದುಕೊಳ್ಳುತ್ತಾಳೆ. 
ವಾಕ್ ಅಥವಾ ಮಾತು ಎನ್ನುವುದು ಎಲ್ಲವನ್ನು ಗ್ರಹಿಸತಕ್ಕದ್ದು ಅನ್ನುವುದು ಬೃಹದಾರಣ್ಯಕದ ಉದಾಹರಣೆ. ವಾಗ್ವೈಗ್ರಹಃ ಸ ನಾಮ್ನಾತಿಗ್ರಾಹೇಣ ಗೃಹೀತೋ ವಾಚಾ ಹಿ ನಾಮಾನ್ಯಭಿವದತಿ ಮಾತು ಎನ್ನುವುದು ನಾಮಾತ್ಮಕವಾಗಿದೆ. ಮಾತಿನಿಂದಲೇ ಎಲ್ಲ ಆಗುಹೋಗುಗಳೂ ಮತ್ತು ಅದರಿಂದಲೇ ಜಗತ್ತಿನ ವ್ಯವಹಾರ ನಡೆಯುತ್ತದೆ.

ವಾಗ್ವೈ ಬ್ರಹ್ಮೇತಿ ಯಥಾ ಮಾತೃವಾನ್ ಪಿತೃಮಾನಾಚಾರ್ಯವಾನ್ ಎಂದು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಜನಕ ಮತ್ತು ಯಾಜ್ಞವಲ್ಕ್ಯನ ಸಂಭಾಷಣೆಯಲ್ಲಿ ಕಂಡು ಬರುತ್ತದೆ. ಇದರಲ್ಲಿ ಮಾತಿಗೂ ಬ್ರಹ್ಮನಿಗೂ ಇರುವ ತಾದಾತ್ಮ್ಯವನ್ನು ತೋರಿಸುವ ವಾಕ್ಕಿನ ಮಹತ್ವವನ್ನು ತೋರಿಸಲಾಗಿದೆ. ವಾಕ್ಕಿನ ಪ್ರಶಂಸೆ ಇದರಲ್ಲಿ ಕಂಡು ಬರುತ್ತದೆ.
ಮಾತು ಎನ್ನುವುದು ಒಂದು ಆಲಯವಿದ್ದಂತೆ. ಆಕಾಶವೇ ಅದಕ್ಕೆ ಪ್ರತಿಷ್ಟೆ, ಈ ವಾಕ್ ಎನ್ನುವುದು ಋಗ್ವೇದವೇ ಮೊದಲಾದವುಗಳೂ, ಇತಿಹಾಸಗಳೂ, ಸಕಲ ಶಾಸ್ತ್ರ ಸ್ಮೃತಿಗಳೂ, ಯಜ್ಞ ಯಾಗಾದಿಗಳಲ್ಲೇ ಪ್ರಾಪಂಚಿಕವಾದ ಎಲ್ಲಾ ವಿಷಯಗಳೂ ಇದರಿಂದಲೇ ತಿಳಿಯಲ್ಪಡುತ್ತವೆ. ಈ ವಾಕ್ ಎನ್ನುವುದರಿಂದಲೇ ಇಡೀ ಜಗತ್ತಿನ ನಿಯಂತ್ರಣ ಮಾಡಲ್ಪಡುತ್ತಿದೆ. ಲೋಕವ್ಯವಹಾರಕ್ಕೆಲ್ಲಾ ಮೂಲ ಇದೇ ವಾಕ್ಕು.

ನಮ್ಮ ಮಾತುಗಳೆಲ್ಲಾ ಹೃದಯ ಎನ್ನುವ ಆಕಾಶದಿಂದ ಹುಟ್ಟುತ್ತದೆ ಎನ್ನುವುದು ಛಾಂದೋಗ್ಯ ಉಪನಿಷತ್ತಿನಲ್ಲಿ ಹೇಳಲ್ಪಟ್ಟಿದೆ ಅದನ್ನೇ ಅಲ್ಲಿ ಯಾವಾನ್ ವಾ ಅಯಮಾಕಾಶಸ್ತಾವಾನೇಷೋಂತರ್ಹೃದಯ ಎಂದಿದೆ. ನಮ್ಮ ಹೃದಯ ಎನ್ನುವುದು ಬೃಹ್ಮನ ಆವಾಸಸ್ಥಾನ ಅಂತಹ ಹೃದಯದಿಂದಲೇ ಎಲ್ಲ ಹುಟ್ಟುಗಳು ಸಂಭವಿಸುತ್ತವೆ. ಇದನ್ನೇ ತೈತ್ತಿರೀಯಸಂಹಿತೆಯಲ್ಲಿಯೂ ಹೇಳಲಾಗಿದೆ. 

ಗೌರೀರ್ಮಿಮಾಯ ಸಲಿಲಾನಿ ತಕ್ಷತ್ಯೇಕಪದೀ ದ್ವಿಪದೀ ಸಾ ಚತುಷ್ಪದೀ |
ಅಷ್ಟಾಪದೀ ನವಪದೀ ಬಭೂವುಷೀ ಸಹಸ್ರಾಕ್ಷರಾ ಪರಮೇ ವ್ಯೋಮನ್ ||
ಸ್ವರ್ಗಲೋಕದಲ್ಲಿರುವ ಮಾಧ್ಯಮಿಕಾ ವಾಕ್ಕು ಅಥವಾ ಮಾತು ಶಬ್ದಮಾಡುತ್ತಾಳೆ. ನೀರನ್ನು ದೊರಕಿಸಿಕೊಡುವವಳಾಗಿ ಒಂದು ಎರಡು ನಾಲ್ಕು ಎಂಟು ಮತ್ತು ಒಂಬತ್ತು ಅಧಿಷ್ಠಾನಗಳುಳ್ಳವಳಾಗಿಯೂ ಇರುತ್ತಾ ಉತ್ಕೃಷ್ಟವಾದ ಸ್ವರ್ಗದಲ್ಲಿ ಅಪರಿಮಿತವಾದ ವ್ಯಾಪ್ತಿವುಳ್ಳವಳಾಗುತ್ತಾಳೆ.
ಶಬ್ದವನ್ನು ಇಲ್ಲಿ ಬ್ರಹ್ಮತ್ವಕ್ಕೆ ಏರಿಸಲಾಗಿದೆ. ಶಬ್ದ ಮತ್ತು ಮಾತು ಎರಡೂ ದೈವತ್ವಕ್ಕೇರಿದ್ದು ಮಾತ್ರವಲ್ಲ ಬ್ರಹ್ಮನ ಸ್ಥಾನ ಪಡೆದುಕೊಂಡಿವೆ. ಇಲ್ಲಿ ಏಕಪದಿ ಎನ್ನುವುದು ಮಧ್ಯಮ ರೂಪವಾದ ಒಂದು ಪಾದವನ್ನು ಅಥವಾ ಅಧಿಷ್ಠಾನವುಳ್ಳವಳು ಎಂಬ ಅರ್ಥ ಧ್ವನಿಸುತ್ತದೆ. ಹೀಗೇ ಮಿಕ್ಕವುಗಳೂ ಅವುಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಸಾಗುತ್ತವೆ. ಪ್ರಪಂಚಕ್ಕೆಲ್ಲಾ ಶಬ್ದ ಮತ್ತು ವಾಕ್ಕಿನ ಮಹತ್ವ ಈ ಋಕ್ಕಿನಲ್ಲಿ ಅರ್ಥವನ್ನು ಕೊಡುತ್ತದೆ.
ಗೌರಿ ಎನ್ನುವುದಕ್ಕೆ ಅರ್ಥವನ್ನು ಕೊಡುತ್ತಾ ವಿಶ್ವವ್ಯಾಪಿಯಾದ ಬ್ರಹ್ಮತ್ವವನ್ನು ಹೊಂದಿದ ಶಬ್ದ ಎನ್ನುವುದಾಗಿ ಹೇಳಲಾಗಿದೆ.
ಪ್ರಧಾನಮರ್ಥಃ ಶಬ್ದೋ ಹಿ ತದ್ಗುಣಾಯತ್ತ ಇಷ್ಯತೇ |
ತಸ್ಮಾನ್ನಾನವಯೋಪಾಯೈಃ ಶಬ್ದಾನರ್ಥವಶಂ ನಯೇತ್ ||
ಒಂದು ಶಬ್ದದ ಮುಖ್ಯವಾದ ಅರ್ಥವು ಆ ವಸ್ತುವಿನ ಗುಣವನ್ನನುಸರಿಸಿರುವುದು. ಆದರಿಂದ ಒಂದು ಶಬ್ದದ ಅರ್ಥವನ್ನು ಹೇಳುವಾಗ ಆ ಶಬ್ದಕ್ಕೆ ನಾನಾವಿಧವಾದ(ರೂಪ ನಿಷ್ಪತ್ತಿಯೇ ಮೊದಲಾದ) ಉಪಾಯಗಳಿಂದ ಅರ್ಥವನ್ನು ಹೊಂದಿಸಬೇಕು. 
ಒಂದು ವಾಕ್ಯದಲ್ಲಿ ಅಸಂಬದ್ಧವಾದ ಅದು ಸಂದರ್ಭೋಚಿತವಲ್ಲದ ಅರ್ಥವೂ ವ್ಯತ್ಯಾಸವಾಗಿರುವ ಪದವಿದ್ದರೆ ಅಂತಹದ್ದನ್ನು ತ್ಯಜಿಸಬೇಕು. ಎಂದರೆ ಆ ಶಬ್ದಕ್ಕೆ ಯಾವ ಅರ್ಥವನ್ನೂ ಹೇಳಬಾರದು. ಒಂದು ಅವಶ್ಯಕವಾದ ಶಬ್ದವು ವಾಕ್ಯದಲ್ಲಿ ಇಲ್ಲದೇ ಇದ್ದರೆ ವಾಕ್ಯದ ಅರ್ಥವನ್ನು ಹೊಂದಿಸುವುದಕ್ಕಾಗಿ ಆ ಶಬ್ದವನ್ನು ಅಧ್ಯಾಹಾರ ಮಾಡಿಕೊಳ್ಳಬೇಕು. ಹೀಗೆ ಬೃಹದ್ದೇವತಾದಲ್ಲಿ ಬಹಳ ವಿಸ್ತಾರವಾಗಿ ಶಬ್ದ ಮತ್ತು ವಾಕ್ಯದ ಕುರಿತಾಗಿ ಹೇಳಿದೆ. ಇನ್ನು ಭಾಷೆಯ ಕುರಿತು ನೋಡುತ್ತಾ ಹೋದರೆ ಶಬ್ದ ಎನ್ನುವುದು ಬ್ರಹ್ಮತ್ವ ಪಡೆದಮೇಲೆ ಅಂತಹ ಶಬ್ದದ ವ್ಯಕ್ತ ರೂಪವೇ ಭಾಷೆ. ಇಂತಹ ಭಾಷೆ ಪ್ರಾದೇಶಿಕ ಭಿನ್ನತೆ ಇದ್ದರೂ ಮೂಲದಲ್ಲಿ ಸಂವಹನದ ಮಾಧ್ಯಮ ಎನ್ನುವುದು ಸ್ಪಷ್ಟ.

#ಶಬ್ದಾನರ್ಥವಶಂ_ನಯೇತ್  
Sadyojatha 

ಶರಣರು ಕಂಡ ಆಹಾರ ಪದ್ಧತಿ

ಬಸವಾದಿ ಶರಣರು ಬದುಕಿ ಹೋದ ರೀತಿಯೇ ವಿಶಿಷ್ಟವಾದುದು. ಅವರ ವಿಚಾರಗಳು, ಜೀವನ ಶೈಲಿ ಎಲ್ಲವೂ ಸರಳ ಹಾಗೂ ಆಕರ್ಷಕವಾಗಿದ್ದವು. ಬದುಕಿನ ಎಲ್ಲಾ ಮಗ್ಗಲಿನ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಂಡುಕೊಂಡ ಅವರು, ತಮ್ಮ ದೈನಂದಿನ ಬದುಕಿನಲ್ಲೂ ಶುಚಿತ್ವ ಕಾಯ್ದುಕೊಂಡರು. ಅತ್ಯಂತ ಕ್ಲಿಷ್ಟಮಯವಾದ ಸಾಮಾಜಿಕ ಧಾರ್ಮಿಕ ಅಧ್ಯಾತ್ಮಿಕ ಜೀವನವನ್ನು ಸರಳಗೊಳಿಸಿದ ಶರಣರು, ದುಡಿಮೆ ಕಾಯಕ ಆಚರಣೆ ಅನುಷ್ಠಾನ ಮುಂತಾದ ಹೊಸ ಹೊಸ ಅನ್ವೇಷಣೆಗಳ ಜೊತೆಗೆ ಆಹಾರ ಪದ್ಧತಿಯತ್ತಲೂ ವಿಶೇಷ ಗಮನ ನೀಡಿದರು.


ಶರಣರ ಒಂದೊಂದು ವಿಚಾರಗಳೂ ವಿನೂತನವಾಗಿದ್ದು, ಇಂದಿಗೂ ಅವರ ನಡೆ-ನುಡಿಗಳು ಅಧ್ಯಯನಯೋಗ್ಯವಾಗಿವೆ. ಹಂಗಿನ ಅರಮನೆಗಿಂತ ದುಡಿಮೆಯ ಗುಡಿಸಲು ಶ್ರೇಷ್ಠ ಎಂದು ನಂಬಿ ಬದುಕಿದ ಅವರಿಗೆ ಆಹಾರವು ಕೇವಲ ಪದಾರ್ಥವಾಗಿರಲಿಲ್ಲ. ಅದು ಸತ್ಯ ಶುದ್ಧ ಕಾಯಕದಿಂದ ಬಂದ ಪ್ರಸಾದವಾಗಿತ್ತು. ಆಹಾರವನ್ನು ಪ್ರಸಾದವೆಂದು ಕರೆದು, ಪದಾರ್ಥಕ್ಕೆ ಹೊಸ ಪಾವಿತ್ರ್ಯತೆ ಕಲ್ಪಿಸಿಕೊಟ್ಟರು.
ದಾನವನ್ನು ಶರಣರು ಎಂದೂ ಒಪ್ಪಲಿಲ್ಲ. ಆದರೆ ದಾಸೋಹವನ್ನು ಬೆಳೆಸಿದರು. ದಾನವು ಒಬ್ಬ ವ್ಯಕ್ತಿಯ ಅಂಕಿತಕ್ಕೆ, ದಾಕ್ಷಿಣ್ಯಕ್ಕೆ ಒಳಗಾಗುವುದು. ದಾನದಲ್ಲಿ ಕೊಟ್ಟವನು ದೊಡ್ಡವನು ಮತ್ತು ತೆಗೆದುಕೊಂಡವನು ಸಣ್ಣವನೆನಿಸಿಕೊಳ್ಳುತ್ತಾನೆ. ಇಂತಹ ಅಸಮಾನತೆಯನ್ನು ಹೋಗಲಾಡಿಸಲೆಂದೇ ಬಸವಣ್ಣನವರು ದಾಸೋಹ ಪದ್ಧತಿಯನ್ನು ಶರಣ ಸಂಕುಲಕ್ಕೆ ಪರಿಚಯಿಸಿದರು. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ ಎಂದು ಅತ್ಯಂತ ಕಳಕಳಿಯಿಂದ ಕೇಳಿಕೊಂಡಿದ್ದಾರೆ.
ಪಡಿ ಮತ್ತು ಪದಾರ್ಥವು ಪ್ರಸಾದವಾಗುವ ಪವಿತ್ರ ಕ್ರಿಯೆಯು ಕಾಯಕ ಮತ್ತು ದಾಸೋಹದ ಮೂಲಕ ನೆರವೇರುತ್ತದೆ. ಕಾಯಕ (Collection of Wealth) ಮತ್ತು ದಾಸೋಹ (Distribution of Wealth) ಎರಡು ಅಪೂರ್ವ ತತ್ವಗಳು. ಕಾಯಕವು ವೃತ್ತಿ ಗೌರವ ಸಮಾನತೆ ಕಂಡುಕೊಂಡರೆ ದಾಸೋಹವು ಸಾಮಾಜಿಕ ಸಾರ್ವತ್ರಿಕ ಸಮಾನತೆಗಳನ್ನು ಎತ್ತಿ ಹಿಡಿಯುತ್ತದೆ. ದಾನವನ್ನು ಉಗ್ರವಾಗಿ ವಿರೋಧಿಸಿದ ಶರಣರು ದಾಸೋಹವನ್ನು ಅಷ್ಟೇ ಸರಳವಾಗಿ ಒಪ್ಪಿದರು. ಕಾಯಕದಿಂದ ಬಂದ ಕಾರೆಯ ಸೊಪ್ಪಾದರೂ ಅದು ಲಿಂಗಕ್ಕೆ ಅರ್ಪಿತ ಎನ್ನುವುದು ಶರಣರ ಗಟ್ಟಿ ಧ್ವನಿ.
ಪ್ರಸಾದವು ಶರಣರಿಗೆ ಕೇವಲ ಆಹಾರವಾಗಲಿಲ್ಲ. ಅದು ಬದುಕಿನ ಅವಶ್ಯಕತೆಯ ಜೊತೆಗೆ ಪ್ರಾಮಾಣಿಕ ಜೀವನದ ಸಂಕೇತವೂ ಆಗತೊಡಗಿತ್ತು .
ಬಸವಣ್ಣನವರು ಹೇಳುತ್ತಾರೆ-
ಕೊಲ್ಲೆನಯ್ಯಾ ಪ್ರಾಣಿಗಳ ಮೆಲ್ಲೆನಯ್ಯಾ ಬಾಯಿಚ್ಚೆಗೆ
ಒಲ್ಲೆನಯ್ಯ ಪರಸತಿಯರ ಸಂಗವ… ಎಂದು.

ಇಲ್ಲಿ ಮನುಷ್ಯನು ತನ್ನ ಬದುಕಿಗಾಗಿ ಏನೆಲ್ಲಾ ಕೃತ್ಯಗಳಿಗೆ ಕೈಹಾಕುತ್ತಾನೆ! ನಾಲಿಗೆಯ ಚಪಲಕ್ಕಾಗಿ ಪ್ರಾಣಿಗಳ ಹಿಂಸೆಗೆ ಮುಂದಾಗುತ್ತಾನೆ. ನಿರ್ದಾಕ್ಷಿಣ್ಯವಾಗಿ ಕೊಂದು ಅವುಗಳ ಮಾ೦ಸ ತಿನ್ನುತ್ತಾನೆ.
ಪರಸತಿಯರ ಸಂಗವ ಮಾಡುತ್ತಾನೆ. ಇವೆಲ್ಲ ಅಪರಾಧ ಎನ್ನುತ್ತಾರೆ ಬಸವಣ್ಣ. ಪ್ರಾಣಿ ಹತ್ಯೆ ಮಾಡಿ ಮಾ೦ಸ ತಿನ್ನುವವರೇ ಹೊಲೆ ಮಾದಿಗರು ಎಂದು ಟೀಕಿಸಿದ್ದಾರೆ.

ಕೊಲುವವನೆ ಮಾದಿಗ ಹೊಲಸು ತಿ೦ಬುವವನೆ ಹೊಲೆಯ
ಕುಲವೇನೋ ಆವಂದಿರ ಕುಲವೇನೋ?
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲ ಸಂಗನ ಶರಣರೆ ಕುಲಜರು.

ಒಡಲ ಕಳವಳಕ್ಕೆ, ಬಾಯ ಸವಿಗೆ
ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗನಲ್ಲ,
ಬೇಡೆ ಬೇಡೆ ನಿಮ್ಮ ನ೦ಬಿದ ಸದ್ಭಕ್ತರ
ಅವರೊಕ್ಕುದನು೦ಬೆನೆ೦ದ೦ತೆ ನಡೆವೆ
ಎನ್ನೊಡೆಯ ಕೂಡಲ ಸಂಗಮದೇವನೊಲ್ಲದವರ ಹಿಡಿದೆನಾದಡೆ
ನಿಮ್ಮ ಪಾದದ ಆಣೆ.
ಸ್ವಾರ್ಥದ ಲವಲೇಶವೂ ಇಲ್ಲದ ನಡೆ ಬಸವಣ್ಣನವರದು. ಒಡಲ ಕಳವಳಕ್ಕೆ ಹಸಿವಾಗಿ ಮತ್ತು ಬಾಯ ಸವಿಯ ರುಚಿಗಾಗಿ ಆಸೆ ಪಟ್ಟು ಬಯಸಿ ಉಂಡರೆ ಅದು ಪ್ರಮಾದ. ಕಾರಣ ಶರಣರ ತೊತ್ತಿನ ಮಗನಾದ ನಾನು ಅವರನ್ನು ಬೇಡೆನು, ಕಾಡೆನು. ಅವರೊಕ್ಕುದನು೦ಬೆನೆ೦ದ೦ತೆ ನಡೆವೆ… ಕಾಯಕ ಮಾಡಿ, ಶರಣರ ಆಜ್ಞೆಯಂತೆ ಆದಾಯವನ್ನು ಸಮಷ್ಟಿಗೆ ಬಳಸುವೆ, ಇದು ಪ್ರಮಾಣವೆಂದು ತಿಳಿಸುತ್ತಾರೆ.
ಊಟ ಮಾಡುವುದು ಕೂಡ ಅತ್ಯಂತ ಮುಖ್ಯವಾದ ವಿಧಾನ. ಪ್ರಕ್ಷುಬ್ಧ ಮನಸ್ಥಿತಿಯಲ್ಲಿ ಊಟಕ್ಕೆ ಕೂರುವುದಾಗಲಿ, ಗಡಿಬಿಡಿಯಿಂದ ತುತ್ತು ನುಂಗುವುದಾಗಲಿ ಸರಿಯಲ್ಲ. ಪ್ರಸಾದವು ಸತ್ಯ ಶುದ್ಧವಾಗಿರಬೇಕು, ಕಾಯಕ ಮೂಲದಿಂದ ಬಂದಿರಬೇಕು ಮತ್ತು ಪ್ರಸಾದ ಸೇವನೆಯ ಸಮಯದಲ್ಲಿ ಚಿತ್ತ ಶಾಂತರಾಗಿ ಶ್ರದ್ಧೆಯಿಂದ ಊಟ ಮಾಡಬೇಕು. ಇದನ್ನೆ ಬಸವಣ್ಣನವರು ಹೀಗೆ ಹೇಳಿದ್ದಾರೆ:

ಮೌನದಲು೦ಬುವುದು ಆಚಾರವಲ್ಲ
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು
ಕರಣವೃತ್ತಿಗಳಡಗುವವು
ಕೂಡಲ ಸಂಗನ ನೆನೆವುತ್ತ ಉಂಡಡೆ.

ಪ್ರಸಾದವು ಕೈಗೆ ಬಂದ ಮೇಲೆ ಮೌನದಲ್ಲಿ ಉಣ್ಣುವುದು, ಮನದಲ್ಲಿ ಏನಾದರೂ ಲೆಕ್ಕಾಚಾರ ಹಾಕುತ್ತಾ ಸೇವಿಸುವುದು ಸರಿಯಾದ ಆಚಾರವಲ್ಲ. ತಟ್ಟೆಯ ಪ್ರಸಾದವನ್ನು ಲಿಂಗಾರ್ಪಿತವ ಮಾಡಿದ ಬಳಿಕ ಶರಣರನ್ನು ಮತ್ತು ಅವರ ಕಾಯಕವನ್ನು ನೆನೆಯುತ್ತಾ ಊಟ ಮಾಡಬೇಕು. ಆಗ ಪ್ರಸಾದವು ತಟ್ಟೆಗೆ ಬರುವ ಮುನ್ನ ಅದರ ಹಿಂದಿನ ಪರಿಶ್ರಮ ನೆನೆದು ಮನಸ್ಸು ವಿನಮ್ರವಾಗುತ್ತದೆ. ಕೃತಜ್ಞತೆ ಮೂಡುತ್ತದೆ. ಇದರಿಂದ ಕರಣ ಇಂದ್ರಿಯ ನಿರ್ನಾಳ ಗ್ರಂಥಿಗಳು ಸರಿಯಾಗಿ ಕೆಲಸ ಮಾಡಬಲ್ಲವು.
ಇದೇ ರೀತಿ ಇನ್ನೋರ್ವ ವಚನಕಾರ್ತಿ ಅಕ್ಕಮ್ಮ ನಮ್ಮ ಊಟ ಹೇಗಿರಬೇಕೆಂದು ಸೊಗಸಾಗಿ ಹೇಳುತ್ತಾಳೆ-

ಬೆಳ್ಳೆ, ಭಂಗಿ, ನುಗ್ಗಿ, ಉಳ್ಳೆ ಮೊದಲಾದವನೆಲ್ಲವ ಬಿಡಬೇಕು.
ಬೆಳ್ಳೆಯಲ್ಲಿ ದೋಷ, ಭಂಗಿ ನುಗ್ಗಿಯಲ್ಲಿ ಲಹರಿ, ಉಳ್ಳೆಯಲ್ಲಿ ದುರ್ಗುಣ.
ವ್ರತ ಲಿಂಗಕ್ಕೆ ಸಲ್ಲವಾಗಿ ಈ ನಾಲ್ಕು ಬಂದ ಬಂದಲ್ಲಿ ದೋಷವುಂಟು.
ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ
ವ್ರತಕ್ಕೆ ಅಹುದಲ್ಲ ಅಂಬುದನರಿಯಬೇಕು.

ಈ ವಚನದಲ್ಲಿ ಬೆಳ್ಳುಳ್ಳಿ, ಅತಿಯಾದ ಖಾರದಪುಡಿ, ಭಂಗಿ, ನುಗ್ಗೆಕಾಯಿ ಮತ್ತು ಈರುಳ್ಳಿ ಪದಾರ್ಥಗಳನ್ನು ತಿನ್ನುವುದರಿಂದ ಮನೋನಿಗ್ರಹ ಸಾಧಿಸುವುದು ಕಷ್ಟವಾಗುತ್ತದೆ. ಇಂದ್ರಿಯ ಚಾಪಲ್ಯ ಹೆಚ್ಚುತ್ತದೆ. ಇಂತಹ ಪದಾರ್ಥಗಳು ಕಡಿಮೆ ಇದ್ದಷ್ಟೂ ಸಾಧನೆಗೆ, ವ್ರತಾಚರಣೆಗೆ ಅನುಕೂಲ. ಇದು ಆರೋಗ್ಯ ದೃಷ್ಟಿಯಿ೦ದಲೂ ದೇಹಕ್ಕೆ ಹಿತಕರ.

ಪ್ರಸಾದವು ಕಠಿಣ ಪರಿಶ್ರಮದ ಫಲವಾಗಿರಬೇಕು. ಕೊಟ್ಟವನ ಹಮ್ಮು ಬಿಮ್ಮು ಅಂತಸ್ಥಿಕೆ ಹೊಗಳುವಿಕೆ ಇರಬಾರದು ಮತ್ತು ದಾಸೋಹದಲ್ಲಿ ವ್ಯವಹಾರ ಯಾಂತ್ರಿಕತೆಗಳು ತಲೆಹಾಕಬಾರದು.
ಇದನ್ನು ಆಯ್ದಕ್ಕಿ ಲಕ್ಕಮ್ಮ ಈ ರೀತಿ ಹೇಳಿದ್ದಾಳೆ:

ಮಾಡಿ ನೀಡಿ ಹೋದೆನೆ೦ಬಾಗ ಕೈಲಾಸವೇನು ಕೈಕೂಲಿಯೆ?
ಮುಂದೊಂದ ಕಲ್ಪಿಸದೆ ಹಿಂದೊಂದ ಭಾವಿಸದೆ ಸಲೆ ಸಂದಿದ್ದಾಗವೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವಿದ್ದ ಠಾವೆ ಕೈಲಾಸ. – ಆಯ್ದಕ್ಕಿ ಲಕ್ಕಮ್ಮ -೭೩೬ ಸಂ -೫
ಸಂದರ್ಭ ಸಮಯವಿದ್ದಾಗಲೆಲ್ಲ ಸಮಾಜಮುಖಿ ಕೆಲಸ ಮಾಡಿದರೆ ಅಂತಹ ಭಕ್ತನ ಅಂಗಳವೇ ಕೈಲಾಸ ಎಂದು ಲಕ್ಕಮ್ಮ ಹೇಳಿದ್ದಾಳೆ.

ಇದನ್ನು ಚೆನ್ನಬಸವಣ್ಣ ತಮ್ಮ ವಚನದಲ್ಲಿ ಮತ್ತೊಂದು ರೀತಿಯಲ್ಲಿ ಹೇಳಿದ್ದಾರೆ:

ಗುರುವೆಂಬ ಗೂಳಿ ಮುಟ್ಟಲು ಶಿಷ್ಯನೆ೦ಬ ಮಣಿಕ ತೆನೆಯಾಯಿತ್ತು .
ಲಿಂಗವೆಂಬ ಕಿಳುಗರು, ತನುವೆ ಕೆಚ್ಚಲು, ಮನವೇ ಮೊಲೆವಾಲು.
ಅರಿದಲ್ಲಿ ಐಕ್ಯ, ಮರೆದಲ್ಲಿ ಸಾಹಿತ್ಯ
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಅನಾಚಾರಿಗಲ್ಲದೆ ಪ್ರಸಾದವಿಲ್ಲ. -ಚೆನ್ನಬಸವಣ್ಣ ಸ ವ ಸ೦ -೩ ಸಂ -೧೧೯೦

ಗುರುವೆಂಬ ಗೂಳಿ ಶಿಷ್ಯನೆ೦ಬ ಮಣಿಕಕ್ಕೆ ಕೂಡಿತ್ತು, ಆಗ ಹುಟ್ಟಿದ ಕಿಳುಗರುವಿಗೆ ತನುವೆ ಕೆಚ್ಚಲು ಮನವೆ ಮೊಲೆ ಹಾಲು, ಅರಿದಲ್ಲಿ ಐಕ್ಯ, ಮರೆದಲ್ಲಿ ಸಾಹಿತ್ಯ. ಬದುಕಿನ ಸರಳತೆಯನ್ನು ಶರಣರು ಪ್ರಾಂಜಲ ಮನಸ್ಸಿನಿಂದ ಚರ್ಚಿಸಿದ್ದಾರೆ. ಅರಿವಿಲ್ಲದವರಿಗೆ, ದುಡಿಯದವರಿಗೆ ಅನಾಚಾರಿಗೆ ಪ್ರಸಾದವಿಲ್ಲ. ಇದು ಚೆನ್ನಬಸವಣ್ಣನವರ ಕಟ್ಟಾಜ್ಞೆ. ಅನಾಚಾರಿಗಳು ಇಂತಹ ಪ್ರಸಾದ ಪವಿತ್ರ ಕಾರ್ಯಕ್ಕೆ ಪಾತ್ರರಲ್ಲ.

ಕೇವಲ ಆಹಾರ ಪದ್ಧತಿಯಿಂದ ಜಾತಿ ನಿರ್ಣಯಿಸುವ ಹೇಯ ಕೃತ್ಯವನ್ನು ದೇಶದ ಮೊದಲನೆಯ ದಲಿತ ವಚನಕಾರ್ತಿ ಉರಿಲಿಂಗಿಪೆದ್ದಿಗಳ ಪುಣ್ಯ ಸ್ತ್ರೀ ಕಾಳವ್ವೆ ಈ ರೀತಿ ಖಂಡಿಸಿದ್ದಾಳೆ:

ಕುರಿ ಕೋಳಿ ಕಿರಿಮೀನು ತಿ೦ಬುವರಿಗೆಲ್ಲ ಕುಲಜ ಕುಲಜರೆಂದೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆ೦ಬರು
ಅವರೆಂತು ಕೀಳು ಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರು��ಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ; ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನ್ನು ಸಗ್ಗಲೆಯ ನೀರನ್ನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ
ಉರಲಿಂಗ ಪೆದ್ದಿಗಳ ಅರಸು ಒಲ್ಲನವ್ವಾ. -ಕಾಳವ್ವೆ ಸ ವ ಸ೦ ೫-ಸಂಖ್ಯೆ -೭೩೩ ಪುಟ ೨೨೫

ಅಂದಿನ ಕಾಲದ ಉಚ್ಚ ಕುಲದವರಾದ ವಿಪ್ರರು ಕುರಿ ಕೋಳಿ ತಿನ್ನುತ್ತಿದ್ದರು. ಆದರೆ ಆಕಳು ತಿನ್ನುವ ಮಾದಿಗರಿಗೆ ಕೀಳು ಎನ್ನುತ್ತಿದ್ದರು. ಆಕಳಿನ ಕ್ಷೀರ ಮತ್ತು ಸಗ್ಗಳೆಯ ನೀರನ್ನು ಕೂಡಿಸಿ ಕುಡಿಯುವವರು ಎಂತಹ ಉಚ್ಚ ಕುಲದವರು ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾಳೆ ಕಾಳವ್ವೆ.
ಆಹಾರ ಅತ್ಯಂತ ಸರಳ ಹಾಗೂ ವಂಚನೆ ರಹಿತ ದುಡಿಮೆಯಿಂದ ಕೂಡಿರಲು ದೈವವೇ ತನಗೂ ಇಟ್ಟುಕೊಳ್ಳದೆ ಪ್ರಸಾದವನ್ನು ಭಕ್ತಂಗೆ ಕರುಣಿಸುವುದು ಎಂದು ಚೆನ್ನಬಸವಣ್ಣ ಹೇಳಿದ್ದಾರೆ:

ಸವಿಕರದಿಂದ ಪರಿಕರದಿಂದ ರುಚಿಕರದಿಂದ ಪದಾರ್ಥಕರದಿಂದ
ತನು ಮನ ಧನ ವಂಚನೆಯಿಲ್ಲದೆ
ಶರಣ ಮಾಡುವಲ್ಲಿ ನೀಡುವಲ್ಲಿ
ಕೂಡಲ ಚೆನ್ನಸಂಗಯ್ಯ ನಿಮಗೆ
ಎಂದೂ ತನಗೆನ್ನದ ಕಾರಣ.
-ಚೆನ್ನಬಸವಣ್ಣ ಸಂಪುಟ ೩-ಸಂಖ್ಯೆ ೨೭೬ ಪುಟ ೮೭
ಸತ್ಯ ಶುದ್ಧವಾದ ವಂಚನೆ ರಹಿತ ಆದಾಯವು ಶರಣರ ಕಾರ್ಯಗಳಲ್ಲಿ, ನೀಡುವಲ್ಲಿ ಕೊಟ್ಟರೆ ಕೂಡಲ ಚೆನ್ನಸಂಗಯ್ಯನೂ ಸಹಾಯ ಮಾಡುವನು.
ಅಂಬಲಿಯು ಅತ್ಯಂತ ಸರಳ ಮತ್ತು ರುಚಿಕರ ಖಾದ್ಯ. ಸುಲಭ ಜೀರ್ಣವಾಗುವ, ಯಕೃತ್ತಿಗೆ (LIVER) ಹಿತವಾಗುವ ಪ್ರಸಾದವಾದ ಅಂಬಲಿಯು ಸಾಧಕರಿಗೆ ಅಮೃತವಿದ್ದಂತೆ.

ನಡೆ ಚೆನ್ನ ನುಡಿ ಚೆನ್ನ ಎಲ್ಲಿ ನೋಡಿದಡಲ್ಲಿ ಚೆನ್ನ
ಪ್ರಮಥರೊಳು ಚೆನ್ನ ಪುರಾತನರೊಳು ಚೆನ್ನ
ಸವಿದು ನೋಡಿ ಅಂಬಲಿ
ರುಚಿಯಾಯಿತ್ತೆಂದು
ಕೂಡಲಸಂಗಮದೇವಂಗೆ ಬೇಕೆಂದು
ಕೈದೆಗೆದ ನಮ್ಮ ಚೆನ್ನ.
-ಬಸವಣ್ಣ ಷ ವ ಸ೦ ೧-ಸಂಖ್ಯೆ ೭೯೫ ಪುಟ ೨೦೨

ಮಾದಾರ ಚೆನ್ನಯ್ಯ ಬಸವಣ್ಣನವರ ಹಿರಿಯ ಸಮಕಾಲೀನ ಶರಣರು. ಅವರು ಸಿದ್ಧಪಡಿಸುವ ಅ೦ಬಲಿ ಎಲ್ಲರಿಗೂ ಹಿತವಾಗುವಂತಿತ್ತು. ಅಂತಹ ಅಂಬಲಿ ರುಚಿಗೆ ಸ್ವತಃ ಸಂಗಯ್ಯನು ತನಗೆ ಬೇಕೆಂದು ಭಿನ್ನವಿಸಿದಾಗ ಅಡ್ಡಗಟ್ಟಿದ ಕೈಯನ್ನು ಚೆನ್ನಯ್ಯ ತೆಗೆದನು ಎಂದು ಬಸವಣ್ಣನವರು ಹೇಳಿದ್ದಾರೆ. ಸತ್ಯ ಶುದ್ಧ ನಡೆ ನುಡಿ ವ್ಯಕ್ತಿತ್ವ ಹೊಂದಿದ ಮಾದಾರ ಚೆನ್ನಯ್ಯನ ಅ೦ಬಲಿಯು ಎಲ್ಲರ ಪ್ರೀತಿಗೆ ಗೌರವಕ್ಕೆ ಪಾತ್ರವಾಗುತ್ತದೆ. ಇಲ್ಲಿ ಜಾತಿ ನಿರ್ನಾಮಗೊಂಡು ಸಮಾನ ಮನಸ್ಸಿನ ಶುದ್ಧ ಪ್ರಸಾದವನ್ನು ಯಾರಾದರೂ ಸಮಷ್ಟಿಗೆ ಸಿದ್ಧಪಡಿಸಿದರೆ ಅದು ದೈವತ್ವಕ್ಕೆ ಪಾತ್ರವಾಗುವುದೆ೦ಬುದು ಬಸವಣ್ಣನವರ ನಿಲುವು.
ಅಲ್ಲಮರು ಕಲ್ಯಾಣದ ಶರಣ ಸಂಕುಲದಲ್ಲಿ ಒಬ್ಬ ಹಿರಿಯ ಜ್ಞಾನಿ, ಮೇಧಾವಿ. ದೊಡ್ಡ ಅನುಭಾವಿಗಳು. ಆಹಾರದ ಬಗ್ಗೆ ಅವರು ನೋಡುವ ದೃಷ್ಟಿಕೋನವೇ ಬೇರೆ. ಅವರಿಗೆ ಆಹಾರವೊಂದು ಜೀವ ನಿರ್ವಹಣೆಗೆ ಬೇಕಾದ ಸಾಮಗ್ರಿ, ಆದರೆ ಅದು ಲಿಂಗಾರ್ಪಿತವಾಗಿರಬೇಕು.

ಜೀವಕ್ಕೆ ಜೀವವೇ ಆಧಾರ

ಜೀವ ತಪ್ಪಿಸಿ ಜೀವಿಸಬಾರದು .
“ಪೃಥ್ವಿ ಬೀಜಂ ತಥಾ ಮಾ೦ಸ೦ ಅಪ್ ದ್ರವ್ಯಂ ಸುರಾಮಯಂ
ಆತ್ಮಾ ಜೀವಸಮಾಯುಕ್ತಂ ಜೀವೋ ಜೀವೇನ ಭಕ್ಷಯೇತ್”
ಎಂದುದಾಗಿ ಅಹಿಂಸಾ ಪರಮೋ ಧರ್ಮವೆಂಬ ಶ್ರಾವಕರನು ಕಾಣೆ.
ಲಿಂಗಾರ್ಪಿತವಾದುದೆಲ್ಲ ಶುದ್ಧ : ಉಳಿದುದೆಲ್ಲ ಜೀವನ್ಮಯ ಕಾಣಾ, ಗುಹೇಶ್ವರ.
ಶರಣ ಸಂಕುಲಕ್ಕೆ ಬೇರೆ ಬೇರೆ ಪ್ರದೇಶದಿಂದ ಜನ ಬಂದರು. ನಯನಾರರು, ಅಂಡಾಳರು, ಶೈವ ಪರ೦ಪರೆಯ ಕಾಳಾಮುಖಿಗಳು, ಕಾಪಾಲಿಕರು, ನಾಥ ಪರ೦ಪರೆಯ ಯೋಗಿಗಳು, ನಾಗಾಗಳು… ಹೀಗೆ ಬಂದ ಅನೇಕ ಪಂಥದವರ ಆಹಾರ ಪದ್ಧತಿಯು ಬೇರೆ ಬೇರೆಯಾಗಿತ್ತು.
ಮಹಾಮನೆಯಲ್ಲಿ ಅತ್ಯಂತ ಸತ್ಯ ಶುದ್ಧ ಸಸ್ಯಾಹಾರಿ ಆಹಾರವು ಕಡ್ಡಾಯವಾಗಿತ್ತು. ಆಗ ಹೊರ ದೇಶಗಳಿಂದ ಬಂದ ಶರಣರಿಗೆ ಇರುಸು ಮುರುಸು ಆಗಿರಬಹುದು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಮರು ಜೀವಕ್ಕೆ ಜೀವವೇ ಆಧಾರ, ಜೀವ ತಪ್ಪಿಸಿ ಜೀವಿಸಬಾರದು. ಬೀಜದಲ್ಲೂ ಸಸ್ಯದಲ್ಲೂ ಜೀವವಿದೆ. ಕಾರಣ ಅಹಿಂಸೆ ಪರಮೋ ಧರ್ಮವೆಂಬ ಶ್ರಾವಕರ ನಿಲುವನ್ನು, ಜೈನರ ವಿಚಾರ ಗಟ್ಟಿಯಾಗಿ ನಿಲ್ಲದು ಎಂಬ ಶಂಕೆಯನ್ನು ವ್ಯಕ್ತಪಡಿಸಿ, ಲಿಂಗಾರ್ಪಿತವಾದದ್ದೆಲ್ಲವೂ ಶುದ್ಧ, ಉಳಿದುದೆಲ್ಲ ಜೀವನ್ಮಯ ಕಾಣಾ ಗುಹೇಶ್ವರ ಎಂದು ಸಮಜಾಯಿಸಿ ಆಹಾರ ಮತ್ತು ಪ್ರಸಾದದ ಘನತೆಯನ್ನು ಹೆಚ್ಚಿಸಿದ್ದಾರೆ.

ಒಂದು ವಚನದಲ್ಲಿ ಬಸವಣ್ಣನವರೂ ಹೀಗೆ ಹೇಳುತ್ತಾರೆ:

ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾ೦ಸ
ಬಾಯಲ್ಲಿ ಸುರೆಯ ಗಡಿಗೆ, ಕೊರಳಲ್ಲಿ ದೇವನಿರಲು
ಅವರ ಲಿಂಗನೆಂಬೆ ಸಂಗನೆಂಬೆ
ಕೂಡಲ ಸಂಗಮದೇವ ಅವರ ಮುಖಿಲಿಂಗಿಗಳೆ೦ಬೆನು. ಸಂಖ್ಯೆ ೭೨೦ ಪುಟ ೧೮೦

ಶರಣರು ಪರಿವರ್ತನೆಗೆ ಹಾತೊರೆದವರು. ಬದುಕಿನ ಕ್ರಮವನ್ನೇ ಪ್ರಶ್ನಿಸಿ ಭಕ್ತರನ್ನು ದೂರ ಇಡದೆ ಅವರನ್ನು ಪ್ರಮುಖ ವಾಹಿನಿಗೆ ತಂದು ಅವರನ್ನು ಸತ್ಯವಂತರನ್ನು, ಶುದ್ಧ ಸಿದ್ಧಕರನ್ನು ಮಾಡಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲಬೇಕು. ಬೇರೆ ಬೇರೆ ಆಹಾರ ಪದ್ಧತಿಯ ಶರಣರು ಮುಂದೆ ಕಾಲಕಳೆದಂತೆ ಸಸ್ಯಾಹಾರಿಗಳಾದರು.
ಅಂತೆಯೇ ಕಾಬೂಲದಿಂದ ಬಂದ ಪೀರ ಮಹಮ್ಮದ ಮುಂದೆ ಕಲ್ಯಾಣದ ಮುಸುರೆ ಗುಂಡಿಯಲ್ಲಿದ್ದು ಹನ್ನೆರಡು ವರ್ಷ ಕನ್ನಡ ಕಲಿತು ಶರಣರು ಉಂಡುಟ್ಟ ಪ್ರಸಾದವೂ ವ್ಯಯವಾಗದಂತೆ ನೋಡಿಕೊಂಡು ಅದರಲ್ಲಿನ ಅಲ್ಪ ಸ್ವಲ್ಪ ಆಹಾರವನ್ನೇ ತಾವು ಪ್ರಸಾದವೆಂದು ಸ್ವೀಕರಿಸಿ, ಇತರರಿಗೂ ಹಂಚಿ ಗುಪ್ತವಾಗಿ ಬದುಕಿದ್ದರು. ಮುಂದೆ ಇವರೇ ಮರುಳ ಶಂಕರದೇವನಾಗಿ ಪ್ರಸಿದ್ಧಿ ಪಡೆದರು. ಪ್ರಸಾದ ಅಪವ್ಯಯವಾಗಬಾರದು, ಸತ್ಯ ಶುದ್ಧವಾಗಿರಬೇಕು ಎಂಬುದಕ್ಕೆ ಇಂತಹ ಹಲವಾರು ಶರಣರ ನಿದರ್ಶನಗಳು ಸಿಗುತ್ತವೆ.
ಶರಣರು ಸಸ್ಯಾಹಾರಿಗಳಾಗಿದ್ದರು ಎಂದು ಆರ್ ಸಿ ಕಾರ್ ಅವರು The Monograph of Lingayata religion -RC.CARR .1906 ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಬಸುರಿಗೆ ಮಾಡಿದ ಸುಖ ದುಃಖಗಳು ಶಿಶುವಿಗೆ ಮೂಲವೆಂದು ಶರಣರು ಹೇಳಿದಂತೆ ಈ ಜೀವ ಕೋಶಕ್ಕೆ ಆಹಾರವನ್ನು ಪದಾರ್ಥವಾಗಿರಿಸದೆ ಪ್ರಸಾದವೆ೦ಬ ಪವಿತ್ರ ಫಲವನ್ನು ಕಂಡುಕೊಂಡು ಶರಣರು ಮಾನವತೆಯ ಮಹಾಸಿದ್ಧಿ ಸಾಧಿಸಿದರು. ಶರಣರು ನೀಡಿದ ಉನ್ನತ ವಿಚಾರ, ಆದರ್ಶಗಳು ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಕಲ್ಯಾಣ ನಾಡಿನ ಶರಣರು ನಿತ್ಯ ಸತ್ಯ ಶೋಧಕರು. ತಾವು ಕಂಡ ತಾತ್ವಿಕ ನಿಲುವನ್ನು ಇನ್ನೊಬ್ಬರಿಗೂ ಉಣಬಡಿಸಿದವರು.
ಪ್ರಸಾದವಿದ್ದಲ್ಲಿ ಎಂಜಲವಿಲ್ಲ, ಜಾತಿಯಿಲ್ಲ, ಭೇದವಿಲ್ಲ. ಅದು ಸಮತೆ ಸಾಮರಸ್ಯ ಕಂಡುಕೊಳ್ಳುವ ಸೂತ್ರ. ಕಾಯಕ, ದಾಸೋಹ, ಪ್ರಸಾದ ಶರಣರು ಜಗತ್ತಿಗೆ ನೀಡಿದ ಉತ್ಕೃಷ್ಟ ವಿಚಾರಗಳು. ಡಾ. ಶಶಿಕಾಂತ ಪಟ್ಟಣ

ವಿಶೇಷ ದೇಗುಲಗಳು

A. *🙏 ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು..🙏*
1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ
2. ಕೊಲ್ಲಾಪುರ  ಲಕ್ಷ್ಮಿ ದೇಗುಲ
3. ಬೆಂಗಳೂರು ಗವಿ ಗಂಗಾಧರ ದೇಗುಲ
4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ
5. ಮೋಗಳೇಶ್ವರ್
6. ಕೋದಂಡರಾಮ ಕಡಪ ಜಿಲ್ಲೆ

 
B. *🙏ನಿರಂತವಾಗಿ ಜಲ ಪ್ರವಹಿಸುವ ದೇವಾಲಯಗಳು🙏*
1. ಮಹಾನಂದಿ
2. ಜಂಬುಕೇಶ್ವರ್
3. ಬುಗ್ಗ ರಾಮಲಿಂಗೇಶ್ವರ
4. ಕರ್ನಾಟಕ ಕಮಂಡಲ ಗಣಪತಿ
5. ಹೈದರಾಬಾದ್ ಕಾಶಿ ಬುಗ್ಗೆ ಶಿವಾಲಯ
6. ಮಲ್ಲೇಶ್ವರಂ.. ಬೆಂಗಳೂರು
6. ರಾಜರಾಜೇಶ್ವರ ಬೆಲ್ಲಂಪಲ್ಲಿ ಶಿವಾಲಯ
7. ಸಿದ್ದಗಂಗಾ ತುಮಕೂರು

C. *🙏ನಿರಂತರ ಜ್ವಾಲರೂಪದಲ್ಲಿ ದರುಶನ ನೀಡೋ ದೇಗುಲಗಳು🙏*
1. ಜ್ವಾಲಾಮುಖಿ.. ಜ್ವಾಲದೇವಿ
2. ಅರುಣಾಚಲ ಈಶ್ವರ್
3. ಮಂಜುನಾಥ

D. *🙏ಶ್ವಾಸ ತಗೊಳ್ಳುವ ಕಾಲಹಸ್ತೀಶ್ವರ್.🙏*

E. *🙏ಪೂಜೆಗಾಗಿ ಸಮುದ್ರ ಹಿಂದೆ ಹೋಗುವ ದೇವಸ್ಥಾನ🙏*
1. ಗುಜರಾತ್ ನಿಷ್ಕಳಂಕ ಮಹಾದೇವ್
2. 40 ವರ್ಷಕ್ಕೊಮ್ಮೆ ಸಮುದ್ರ ಜಲಪೂಜೆ ನಡೆಯುವ ಪುಂಗನೂರ್ ಶಿವಾಲಯ

F. *🙏 ತಿಂಗಳಿಗೊಮ್ಮೆ ಸ್ತ್ರೀ ಬಹಿಷ್ಟು ಆಗೋ ದೇಗುಲ🙏*
1. ಅಸ್ಸಾಂ ಕಾಮಕ್ಯ ದೇವಿ
2. ಕೇರಳ ದುರ್ಗಾ ಮಾತ

G. *🙏 ಬಣ್ಣ ಬದಲಾಗುವ ದೇಗುಲ🙏*
1. ಉತ್ತರಾಯಣ ಮತ್ತು ದಕ್ಷಿಣಾಯಣ  ಕ್ಕೆ ಒಮ್ಮೆ ಬಣ್ಣ ಬದಲಾಗುವ ಅತಿಶಯ ವಿನಾಯಕ ದೇಗುಲ T. N.
2. ಹುಣ್ಣಿಮೆಗೆ ಬಿಳಿ ಮತ್ತು ಅಮಾವಾಸ್ಯೆ ಗೆ ಕಪ್ಪು ಬಣ್ಣ ಆಗುವ ಗೋದಾವರಿ ಪಂಚರಾಮ ಸೋಮೇಶ್ವರ ದೇಗುಲ

H.  *🙏ನಿರಂತರ ಬೆಳೆಯುವ ಮೂರ್ತಿಗಳು🙏*
1. ಕಾಣಿಪಾಕಂ
2. ಯಾಗಂಟಿ ಬಸವಣ್ಣ
3. ಬಸವನಗುಡಿಯ ಬಸವ, ಬೆಂಗಳೂರು
4. ಬಿಕ್ಕವೊಳು ಲಕ್ಷ್ಮಿ ಗಣಪತಿ

I. *🙏6 ತಿಂಗಳಿಗೆ ಒಮ್ಮೆ ತೆರೆಯುವ ದೇವಾಲಯಗಳು🙏*
1. ಕೇದಾರನಾಥ
2. ಬದರಿನಾಥ್
ಇಲ್ಲಿ 6 ತಿಂಗಳು ಬಾಗಿಲು ಮುಚ್ಚಿದರು ದೀಪ ಬೆಳಗುತ್ತದೆ
3. ಗುಹ್ಯ ಕಾಳಿ ಮಂದಿರ

J. *🙏ವರ್ಷಕ್ಕೊಮ್ಮೆ ತೆರೆಯುವ ದೇವಾಲಯ🙏*
ಅಮರನಾಥ ದೇವಾಲಯ
ಹಾಸನಾಂಬ ದೇಗುಲ ಹಾಸನ..
ಇಲ್ಲಿ ಇಡೀ ವರ್ಷ ಇಟ್ಟ ಪ್ರಸಾದ ಹಾಳಾಗದೆ ತಾಜಾ ಆಗಿ ಇರುತ್ತೆ.

K. *🙏12 ವರ್ಷಕ್ಕೊಮ್ಮೆ ಸಿಡಿಲು ಬಡಿದು ಹಾಗೆ ಮುಚ್ಚುವ ಬಿಜೀಲಿ ಮಹಾದೇವ ಆಲಯ H. p*.

L. *🙏ಸ್ವಯಂ ಪ್ರಸಾದ ಸೇವಿಸೋ🙏*
1. ಕೇರಳ ಶ್ರೀ ಕೃಷ್ಣ ದೇವಾಲಯ.. 
2. ಬೃಂದಾವನ ರಾಧಾಕೃಷ್ಣ

M. *🙏ನೀರಿನಲ್ಲಿ ದೀಪ ಬೆಳಗುವ ಮಂದಿರ🙏*
ಘದಿಯ ಘಾಟ್ ಮಾತಾಜಿ ಮಂದಿರ.. M.P.

N. *🙏ಮನುಷ್ಯನ ಶಾರೀರಕ ಆಕೃತಿ ರೀತಿ ಕಾಣುವ ಮಂದಿರ🙏*
1. ಹಿಮಾಚಲ ನರಸಿಂಹ ದೇವಾಲಯ
2. ಇಷ್ಟ ಕಾಮೇಶ್ವರಿ . ಶ್ರೀಶೈಲ

O. *🙏ಪಾನಕ ಚಪ್ಪರಿಸುತ್ತ ಕುಡಿಯೋ ದೇವರು🙏*
ಪಾನಕಾಲ ನರಸಿಂಹ ದೇವರು A. P.

P. *🙏ಛಾಯಾ ವಿಶೇಷ🙏*
ಛಾಯಾ ಸೋಮೇಶ್ವರ.. ಸ್ಥಂಬದ ನೆರಳು ಕಾಣುತ್ತೆ
2. ಹಂಪಿ ವಿರೂಪಾಕ್ಷ.. ಗೋಪುರದ ನೆರಳು ವಿರುದ್ಧ ದಿಕ್ಕಿನಲ್ಲಿ ಮೂಡುವುದು..

Q. *🙏ನೀರಿನಲ್ಲಿ ತೇಲುವ ದೇವರು🙏*
Nepal vishnu (ಸಾವಿರ ಟನ್ ವಿಗ್ರಹ)
ತಿರುಪತಿ ಬಾಲಾಜಿ
ಅನಂತ ಪದ್ಮನಾಭ ಕೇರಳ
ರಾಮೇಶ್ವರ
ಕಂಚಿ
ಚಿಲುಕೂರಿ ಬಾಲಾಜಿ
ಪಂದರಿನಾಥ
ಬದ್ರಾಚಲಂ
ಅನ್ನವರಂ

R   *🙏 ಪೂರಿ ಜಗನ್ನಾಥ್ ವಿಶೇಷ🙏*
ಹಕ್ಕಿಗಳು ಹಾರೋದಿಲ್ಲ
ಸಮುದ್ರ ಘೋಷ ಇಲ್ಲ
ಗೋಪುರದ ನೆರಳು ಬೀಳದು
ದೇವರಿಗೆ ಸಮರ್ಪಿಸಿದ ಒಡನೆ ಪರಿಮಳಿಸುವ ಪ್ರಸಾದ..

ಇಷ್ಟು ವಿಶೇಷಗಳು ನಮ್ಮ ಭಾರತೀಯ ದೇವಾಲಯಗಳು.. ಇನ್ನೂ ಎಷ್ಟೋ ಸಾವಿರ ವಿಶೇಷ ದೇಗುಲಗಳು ಈ ಭರತ ಖಂಡದಲ್ಲಿ ಇವೆ..

August 29, 2021

ಶಿಖರ ತೈಲಾಭಿಷೇಕ

ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ವೀರಶೈವ ಧರ‍್ಮವು ಜಾತಿ ಪದ್ಧತಿಯನ್ನು ಖಂಡಿಸುತ್ತಲೇ ಸತ್ವಯುತವಾದ ಮಾನವನ ಆಧ್ಯಾತ್ಮಿಕ ಸಾಧನೆಗಾಗಿ ಅನೇಕ ಆಚರಣೆಗಳನ್ನು ವಿಧಿವತ್ತಾಗಿ ನಿರೂಪಿಸಿತು. ವೀರಶೈವ ಧರ್ಮದ ಪ್ರಚಾರ ಕಾರ್ಯವು ಈ ಸರಳ ಆಚರಣೆಗಳ ಮೂಲಕ ನಡೆದು ಭಾರತದ ಹಲ ಕೆಲವು ಪ್ರದೇಶವನ್ನು ವ್ಯಾಪಿಸಿತು. ಕರ್ನಾಟಕದ ಬಳ್ಳಾರಿ ಜಿಲ್ಲೆಯ ಉಜ್ಜಯಿನಿ, ಚಿಕ್ಕಮಂಗಳೂರಿನ ಬಾಳೆಹೊನ್ನೂರು, ಆಂಧ್ರಪ್ರದೇಶದ ಶ್ರೀಶೈಲ, ಉತ್ತರ ಪ್ರದೇಶದ ಕೇದಾರ ಮತ್ತು ಕಾಶೀ ಕ್ಷೇತ್ರಗಳಲ್ಲಿ ತನ್ನ ಖಚಿತತೆಯ ಅಸ್ತಿಭಾರವನ್ನು ನೆಲೆಗೊಳಿಸಿಕೊಂಡಿತು. ನಿತ್ಯವೂ ವೀರಶೈವ ಧರ‍್ಮದ ವಿಧಿ-ವಿಧಾನಗಳನ್ನು ಪರಿಪಾಲಿಸುತ್ತಾ ಜನರ ಅಂತರಂಗ ಮತ್ತು ಬಹಿರಂಗದ ಶುದ್ಧಿಗೆ ಬೋಧಪ್ರದವಾಗಿ ಕೊಡುಗೆ ನೀಡಿರುವ ಶ್ರೀಕ್ಷೇತ್ರ ಉಜ್ಜಯಿನಿ ಐತಿಹಾಸಿಕ ಕೇಂದ್ರ.
ವಿಜಯನಗರದ ಅರಸ ಕ್ರಷ್ಣರಾಯರಿಗೆ (ಕೃಷ್ಣದೇವರಾಯ) (ಕರ್ನಾಟಕದ ಕೈಫಿಯತ್ತುಗಳು) ಪಟ್ಟಕಟ್ಟಿದ ನಂತರ ರಾಜ್ಯದಲ್ಲಿನ ಪಾಳೆಗಾರರನ್ನು ಕರೆಯಿಸಿ ಸನ್ಮಾನ ಮಾಡುವಾಗ ಕುಮಾರರಾಮನ ವಂಶಸ್ಥನಾದ ಬೊಮ್ಮಂತರಾಜ ಮರಳನ ಪಾಳೆಯಗಾರನಿಗೆ ಸನ್ಮಾನ ಮಾಡುತ್ತಾರೆ. ಆಗ ಬೊಮ್ಮಂತರಾಜನು ‘ನಮಗೆ ಈ ಹಿಂದೆ ಕೊಟ್ಟಿರುವ ನಾಡ ದಳವಾರಿಕೆಯೇ ಇರಲಿ ಇನ್ನೇನು ಬೇಡ’ ಎನ್ನುತ್ತಾನೆ. ಅದಕ್ಕೆ ಕ್ರಿ(ಕೃ)ಷ್ಣರಾಯರು ಸಂತೋಷಪಟ್ಟು ಏಳು ತಾಲ್ಲೂಕುಗಳನ್ನು ದಯಪಾಲಿಸುತ್ತಾರೆ. ಬೊಮ್ಮಂತ ರಾಜನು ಆ ಏಳು ತಾಲೂಕುಗಳನ್ನು ತನ್ನ ದಳವಾರಿಕೆಯಲ್ಲಿ ಆಡಳಿತ ನಡೆಸುತ್ತಿರುತ್ತಾನೆ. ಅವನಿಗೆ ಮಕ್ಕಳಿಲ್ಲದ ಕೊರಗು ಕಾಡುತ್ತಿರುವಾಗ ಮನೆದೇವರಾದ ಜೆಟ್ಟಂಗರಾಯ ಕನಸ್ಸಿನಲ್ಲಿ ಬಂದು “ಅಷ್ಟಪುತ್ರರು ಆಗುತ್ತಾಯಿದ್ದಾರೆಂದು”ಹೇಳಿ ಹೋದರು. ನಂತರ ಗರ್ಭೋತ್ಪತ್ತಿಯಾಗಿ ಪ್ರತಿ ಸಂವತ್ಸರಕ್ಕೆ ಒಬ್ಬರಂತೆ ಏಳುಮಂದಿ ಜನಿಸುತ್ತಾರೆ (ಕರ್ನಾಟಕದ ಕೈಫಿಯತ್ತುಗಳು).
ಮುಂದೆ ಬೊಮ್ಮಂತರಾಜನು ತನ್ನ ಒಬ್ಬ ಮಗನಿಗೆ ಪಟ್ಟಗಟ್ಟಿದರೆ ದೇವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ದೇವರ ವರ ಪ್ರಸಾದದಿಂದ ಹುಟ್ಟಿದ ಏಳು ಮಂದಿಗೂ ಒಂದೊಂದು ತಾಲ್ಲೂಕುಗಳನ್ನು ದಳವಾರಿಕೆಗೆ ಕೊಡಬೇಕೆಂದು ನಿಶ್ಚಯಿಸಿ ಏಳೂ ತಾಲ್ಲೂಕುಗಳನ್ನು ಈ ಮುಂದಿನಂತೆ ಪಟ್ಟಗಟ್ಟುತ್ತಾನೆ. “1) ಹಿರಿಯ ಮಗ ಹಿರೆಬೊಮ್ಮಂತ ರಾಜನಿಗೆ ಕುತ್ತಾನೆ (ಕುಡಿತಿನಿ) ತಾಲ್ಲೂಕು. 2) ಎರಡನೇ ಮಗ ಬಿಸಾಳನಾಯಕನಿಗೆ ಸೊಂಡೂರು. 3) ಮೂರನೇ ಮಗ ರಾಜಪ್ಪ ನಾಯಕನಿಗೆ - ಬಾಣರಾವಿ (ಬಾಣಾಪುರ). 4) ನಾಲ್ಕನೆ ಮಗ ವೀರಪ್ಪ ನಾಯಕನಿಗೆ - ಉಜ್ಜನಿ. 5) ಐದನೆ ಮಗ ಯಿಮ್ಮಡಿ ನಾಯಕನಿಗೆ - ಗುಡೆಕೋಟೆ. 6) ಆರನೆ ಮಗ ಹಿರೆಮಲ್ಕರ್ಜಿನಾಯಕನಿಗೆ – ಜರಿಮಲೆ. 7) ಏಳನೆ ಮಗ ಚಿನ್ನಯ್ಯ ರಾಜನಿಗೆ – ವಡ್ಡು ದರೋಜಿ ತಾಲ್ಲೂಕುಗಳನ್ನು ಕೊಟ್ಟು ಅವರನ್ನು ನೇಮಿಸಿದನು. ತಾನು ಅಂದರೆ ಬೊಮ್ಮಂತರಾಜ ನಡುವಿನ ಮಗನಾದ ವೀರಪ್ಪನಾಯಕನ ಬಳಿ (ವುಜನಿ ಸೀಮೆಯಲ್ಲಿ) ವಾಸಮಾಡುತ್ತಾನೆ” ಎಂದು ಕರ್ನಾಟಕದ ಕೈಫಿಯತ್ತುಗಳು ತಿಳಿಸುತ್ತವೆ. ಆದರೆ ಇನ್ನೊಂದು ಕೈಫಿಯತ್ತಿನ ಪ್ರಕಾರ (ಶ್ರೀಕುಮಾರದೇವರ ಕ್ಷೇತ್ರದ) “ಯಿಮ್ಮಡಿರಾಜನಿಗೆ ವುಜನಿ ತಾಲ್ಲೂಕು ಕೊಟ್ಟನು”ಎಂದು ಉಲ್ಲೇಖಿತವಾಗಿದೆ. ಬೊಮ್ಮಂತರಾಜ ತನ್ನ ಜೀವಿತಾವಧಿಯ ಕೊನೆ ದಿನಗಳಲ್ಲಿ ವಾಸಿಸುವುದು ಉಜ್ಜನಿಯ ತನ್ನ ಮನೆದೇವರ ಸಾನಿಧ್ಯದಲ್ಲಿ. ಮರುಳಸಿದ್ಧಸ್ವಾಮಿಗೆ ನೇಮದಲ್ಲಿ ಶಿಖರಕ್ಕೆ ತೈಲ ಹಾಕಿಸುತ್ತೇನೆ ಎಂದುಕೊಂಡ. ಅಂತೆಯೇ ಪ್ರತಿ ವರ್ಷದ ತೈಲಾಭಿಷೇಕದ ಸಂದರ್ಭದಲ್ಲಿ ಆ ವಂಶಸ್ಥರು ತಂದ ತೈಲವೇ ಮೊದಲನೆಯದಾಗಿ ಸುರಿಯುತ್ತಾರೆ. ನಂತರ ಭಕ್ತಾದಿಗಳು ಕೊಟ್ಟ ತೈಲವನ್ನು ಸುರಿಯಲಾಗುತ್ತದೆ.
ಬಳ್ಳಾರಿಯಿಂದ 90 ಕಿ.ಮೀ., ಹೊಸಪೇಟೆಯಿಂದ 65 ಕಿ.ಮೀ., ದಾವಣಗೆರೆಯಿಂದ 70 ಕಿ.ಮೀ. ಮತ್ತು ಚಿತ್ರದುರ್ಗದಿಂದ 70 ಕಿ.ಮಿ. ದೂರದಲ್ಲಿರುವ ಉಜ್ಜಯಿನಿಯು ವೀರಶೈವ ಪಂಚಪೀಠಗಳಲ್ಲಿ ಪ್ರಮುಖವಾದುದಾಗಿದೆ. ಮಧ್ಯ ಪ್ರದೇಶದ ಕಾಳಿಂಗ ನಗರದ ಉಜ್ಜಯಿನಿಯು ಅಂದಿನ ಮುಸ್ಲಿಮರ ದಾಳಿಯಿಂದ ತತ್ತರಿಸಿಹೋಯಿತು. ವೀರಶೈವ ಧರ‍್ಮದ ಉಳಿವಿಗಾಗಿ ದಕ್ಷಿಣ ಭಾರತದ ಕಡೆಗೆ ಅಲ್ಲಿನ ಗುರುಗಳು ತಮ್ಮ ಶಿಷ್ಯರೊಂದಿಗೆ ಬಂದರು. ಈ ರೀತಿ ಉಜ್ಜಯಿನಿಗೆ ಆಗಮಿಸಿದ ಮಧ್ಯಪ್ರದೇಶದ ಗುರುಗಳು ಉಜ್ಜಯಿನಿಯಲ್ಲಿ ನೆಲೆನಿಂತು ಧರ‍್ಮ ಜಾಗೃತಿ ಕಾರ‍್ಯ ನಡೆಸುತ್ತಾರೆ. ಅಂದಿನಿಂದ ಉಜ್ಜಯಿನಿಯು ಕರ್ನಾಟಕ ಚರಿತ್ರೆಯಲ್ಲಿ ಹೊಸದೊಂದು ಅಧ್ಯಾಯಕ್ಕೆ ಕಾರಣವಾಯಿತು. ಈ ಚಾರಿತ್ರಿಕ ಮತ್ತು ಧಾರ‍್ಮಿಕ ಸ್ಥಳ ಇಂದಿಗೂ ತನ್ನ ಪಾವಿತ್ರ್ಯತೆ ಮತ್ತು ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡು ಬಂದಿದೆ.
ಸುಮಾರು 2500 ಮನೆಗಳನ್ನು ಹೊಂದಿರುವ ಉಜ್ಜಿಯಿನಿ ಹಿಂದೆ ಕೂಡ್ಲಿಗಿ ತಾಲೂಕಿಗೆ ಸೇರಿತ್ತು. ಈಗ ಕೊಟ್ಟೂರು ತಾಲೂಕು ಮತ್ತು ಹೋಬಳಿಗೆ ಸೇರಿದ ಗ್ರಾಮವಾಗಿದೆ. ಎಲ್ಲಾ ಜನಾಂಗದ ಜನರು ವಾಸಿಸುವ ಈ ಪುಣ್ಯಕ್ಷೇತ್ರ ಐತಿಹಾಸಿಕ ಮಹತ್ವ ಹೊಂದಿದ್ದರೂ ಆಧುನಿಕವಾಗಿ  ಜನರ ಸಂಪರ್ಕದಿಂದ ದೂರವಿದೆ. ಉಜ್ಜಯಿನಿಗೆ ಮೊದಲಿದ್ದ ಹೆಸರು ಕ್ಯಾತನಾಳು (ಇದು ಎಲ್ಲೂ ಉಲ್ಲೇಖವಿಲ್ಲ) ಜನರ ಮಾತಿನಲ್ಲಿ ಮರೆಯಾಗುತ್ತಿದೆ. ಕ್ರಿ.ಶ.1058ರಲ್ಲಿ ಮರುಳಾರಾಧ್ಯರು ಬಂದು ನೆಲಸಿದ ನಂತರ ಉಜ್ಜಯಿನಿಯಾಗಿರಬೇಕು. ಕ್ರಮೇಣ ಕ್ಯಾತನಾಳು ಹೆಸರು ಮಾಸಿ ಉಜ್ಜಯಿನಿಯಾಗಿದೆ. ಇಂದು ಜನಭಾಷೆಯಲ್ಲಿ ಸುಲಭತೆಯನ್ನು ಪಡೆದು ಉಜ್ಜನಿ, ಉಜ್ಜಿನಿ, ವುಜ್ನಿ ಎಂದೆಲ್ಲಾ ಬಳಕೆಯಾಗುತ್ತದೆ.
‘ಹಂಪೆಯ ಹೊರನೋಡು ಉಜ್ಜಯಿನಿಯ ಒಳನೋಡು’ಎಂಬ ನಾಣ್ಣುಡಿಯಿಂದಲೇ ಉಜ್ಜಯಿನಿಯ ಮರುಳಸಿದ್ಧೇಶ್ವರನ ದೇವಾಲಯದ ನವರಂಗದ ಸಹಸ್ರದಳ ಕಮಲವು ಇತಿಹಾಸ ಪ್ರಸಿದ್ಧವಾಗಿದೆ. ಛಾಯಾಚಿತ್ರ್ ಗಮನಿಸಬಹುದು.  ಈ ಕಮಲದಲ್ಲಿ ಅಷ್ಟದಿಕ್ಪಾಲಕರು, ಅವರ ವಾಹನಗಳು ಮತ್ತು ಸೂಕ್ಷ್ಮ ಕುಸುರಿಯ ಚಿತ್ರಗಳು ಕಾಣುತ್ತವೆ. ಇದೇ ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ಮೇಲೆ ಗೋಪುರವಿದೆ. ಈ ಗೋಪುರವು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ವೇಸರ ಶೈಲಿಯಲ್ಲಿ ನಿರ‍್ಮಾಣವಾದದ್ದಾಗಿದೆ.
ಉಜ್ಜಿನಿಯನ್ನು ಕೇಂದ್ರವಾಗಿಟ್ಟುಕೊಂಡು ಕರ್ನಾಟಕ ಸಂಸ್ಕೃತಿಯ ಕೆಲ ಕುರುಹುಗಳನ್ನು ಅರಿಯಬಹುದು. ಕರ್ನಾಟಕದ ಸಂಸ್ಕೃತಿಗೆ ಉಜ್ಜಯಿನಿಯು ಕೊಟ್ಟ ಕೊಡುಗೆಯನ್ನು ಗಮನಿಸುವುದಾದರೆ ಮರುಳಸಿದ್ದೇಶ್ವರ ದೇವಸ್ಥಾನವು ಸುಂದರವಾದ ಪ್ರಾಂಗಣವನ್ನು ಹೊಂದಿದ್ದು, ಕಲ್ಯಾಣ ಚಾಲುಕ್ಯರ ಕಾಲದ ಶೈಲಿಯಲ್ಲಿ ನಿರ‍್ಮಿತವಾಗಿದೆ. ನಂತರದ ಅರಸರಿಂದ ದಾನದತ್ತಿ ಪಡೆದುಕೊಂಡು ಬೆಳವಣಿಗೆ ಹೊಂದಿ ಪಂಚಕೂಟ ದೇವಾಲಯವಾದ ಇದು ದ್ವಾರಗೋಪುರ, ನಂದಿಮಂಟಪ, ಲಕ್ಷ್ಮಿಸ್ಥೂಪ, ಮಹಾಮಂಟಪ, ನವರಂಗ, ಸುಕನಾಸಿ ಮತ್ತು ಗರ್ಭಗೃಹಗಳನ್ನು ಒಳಗೊಂಡಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ಲಕ್ಷ್ಮಿಸ್ಥೂಪ ಮತ್ತು ಸಹಸ್ರದಳ ಕಮಲ. ಕರ್ನಾಟಕದ ವಾಸ್ತು ಶಿಲ್ಪದಲ್ಲಿ ವಿಶೇಷವಾಗಿ ಕಾಣುವಂತಹ ನಿದರ್ಶನಗಳಾಗಿವೆ. ಭುವನೇಶ್ವರಿಯಲ್ಲಿರುವ ಸಹಸ್ರ ದಳ ಕಮಲ ಉಜ್ಜಯಿನಿಯ ಪ್ರಮುಖ ಆಕರ್ಷಣೆ. ಉಜ್ಜಯಿನಿಯ ಒಳನೋಟಕ್ಕೆ ಅಭೂತ ಪೂರ್ವ ಸಾಕ್ಷಿಯಾಗಿರುವ ಈ ಕಮಲ ಶಿಲ್ಪಿಯ ಕಲಾ ಕೌಶಲ್ಯವನ್ನು ಸ್ಪಷ್ಟಪಡಿಸುತ್ತದೆ. ಮೇಣವನ್ನು ಸೂಜಿಯಿಂದ ಕೆತ್ತುವಂತೆ ಕಲ್ಲನ್ನು ಸೂಕ್ಷ್ಮವಾಗಿ ಕೆತ್ತಿ ಸುಂದರ ಶಿಲ್ಪವನ್ನು ನಿರ‍್ಮಿಸಿದ್ದಾನೆ ಶಿಲ್ಪಿ. ಅಷ್ಟದಿಕ್ಪಾಲಕರು ಅವರೊಂದಿಗೆ ಸುಂದರ ಲತೆಗಳು ಹಾಗೂ ಚಂದದ ವಿಗ್ರಹಗಳನ್ನು ಇದರಲ್ಲಿ ಕಾಣಬಹುದಾಗಿದೆ. ಇದನ್ನು ನೋಡುತ್ತಿರುವಾಗ ಕಲ್ಲಿನಲ್ಲಿ ಮೂಡಿರುವ ಶಿಲ್ಪವೇ ಇದು! ಎಂಬ ಅಚ್ಚರಿ. ಹಂಪೆಯ ಇಡೀ ಪರಿಸರವೇ ಹೊರನೋಟಕ್ಕೆ ಕಾರಣವಾದರೆ ಇದೊಂದೆ ಶಿಲ್ಪ ಉಜ್ಜಯಿನಿಯ ಒಳನೋಟಕ್ಕೆ ಹೆಸರಾಗಿದೆ.
‘ಹಂಪೆಯ ಹೊರನೋಡು ಉಜ್ಜಯಿನಿ ಒಳನೋಡು’ಈ ನಾಣ್ಣುಡಿ ಎರಡು ದೃಷ್ಟಿಗಳಿಂದ ಬಳಕೆಯಾಗಿದೆ. ಸಾಮಾನ್ಯ ಅರ್ಥದಲ್ಲಿ ದೇವಸ್ಥಾನದ ನವರಂಗದ ಭುವನೇಶ್ವರಿಯಲ್ಲಿ ಸಹಸ್ರದಳ ಕಮಲ ಹಾಗು ಮೂರ್ತಿಗಳನ್ನು ಕೇಂದ್ರೀಕರಿಸುತ್ತದೆ. ಆದರೆ ಅಂತರ್ ದೃಷ್ಟಿಯ ನೋಟದಲ್ಲಿ ಹಂಪೆಯು ಮಾನವನ ಬಾಹ್ಯ ಚಟುವಟಿಕೆಗಳನ್ನು ಹೋಲುತ್ತದೆ. ಆದರೆ ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ದೇವಸ್ಥಾನವು ಸಂಪೂರ್ಣವಾಗಿ ಮಾನವ ದೇಹವನ್ನು ಹೋಲುತ್ತದೆ. ಶಿಖರ ಭಾಗದಿಂದ ಹಿಡಿದು ಪಾದಗಳವರೆಗೆ ನಿರೂಪಗೊಂಡಿರುವ ಈ ದೇವಸ್ಥಾನವು ದೇಹವೇ ದೇಗುಲದ ಕಲ್ಪನೆಯನ್ನು ಮತ್ತೊಂದು ರೀತಿಯಲ್ಲಿ ಸಾಕಾರಗೊಳಿಸುತ್ತದೆ.
ದೇಹದಲ್ಲಿ ಪ್ರಮುಖ ಅಂಗ ಶಿರ ಮತ್ತು ಮೆದುಳು. ಈ ಶಿರ ಮತ್ತು ಮೆದುಳನ್ನು ಶಿಖರ ಮತ್ತು ಗರ್ಭಗುಡಿಯ ಶ್ರೀಮೂರ್ತಿಗಳು ಪ್ರತಿನಿಧಿಸುತ್ತವೆ. ಶಿಖರಕ್ಕೆ ಅರ್ಪಿಸುವ ತೈಲವು ತಲೆಗೆ ಎಣ್ಣೆ ಹಚ್ಚುವ ಕ್ರಿಯೆಯನ್ನು ಮೆದುಳು ತಂಪಿರಬೇಕೆಂಬ ನಂಬಿಕೆಯನ್ನು ಸೂಚಿಸುತ್ತದೆ. ಕಾರ‍್ಯನಿರತ ಕೈಗಳನ್ನು ಅಕ್ಕ-ಪಕ್ಕದ ಗರ್ಭಗುಡಿಗಳು ಪ್ರತಿನಿಧಿಸಿದರೆ ಪಾದುಕೆಗಳು ಪಾದಗಳನ್ನು ಪ್ರಸ್ತುತ ಪಡಿಸುತ್ತವೆ. ದೇಹದಲ್ಲಿ ಭಾವುಕ, ಪ್ರಜ್ಞಾವಂತ ಹಾಗೂ ಶಾಂತತೆಯು ಸ್ಥಳವಾದ ಹೃದಯವನ್ನು ಸಹಸ್ರದಳ ಕಮಲ ಪ್ರತಿನಿಧಿಸುತ್ತದೆ. ಇಂತಹ ಸೂಕ್ಷ್ಮ ಹಾಗೂ ಆಧ್ಯಾತ್ಮದ ಪರಿಕಲ್ಪನೆಯ ನೆಲೆಯಲ್ಲಿ ರಚನೆಗೊಂಡಿರುವ ದೇವಸ್ಥಾನ ಕರ್ನಾಟಕದಲ್ಲಿಯೇ ವಿಶಿಷ್ಟವೆಂದರೆ ಅತಿಶಯೋಕ್ತಿಯಲ್ಲ.
ಗರ್ಭಗುಡಿಯು ಮೂಲಮೂರ್ತಿಯನ್ನು ಹೊಂದಿದೆ ಗರ್ಭಗುಡಿಯ ಮೇಲಿರುವುದೇ ಶಿಖರ. ದ್ವಾರದ ಗೋಪುರ ಮತ್ತು ಗರ್ಭಗೃಹದ ಶಿಖರ ಭಿನ್ನವಾಗಿವೆ. ದ್ರಾವಿಡ ಮತ್ತು ವೇಸರ ಶೈಲಿಯ ಗೋಪುರ ಆಕರ್ಷಕವಾಗಿದೆ. ಈ ಶಿಖರಕ್ಕೆ ಪ್ರತಿ ವರ್ಷ ಅಕ್ಷಯ ಷಷ್ಠಿ ದಿನದಂದು ತೈಲಾಭಿಷೇಕ ಮಾಡಲಾಗುತ್ತದೆ. ಇದಕ್ಕಿರುವ ಚರಿತ್ರೆ ಎಂದರೆ ಜರಿಮಲೆ ಪಾಳೇಗಾರರು ತನ್ನ ಅದಿದೈವ ಮರುಳಸಿದ್ದೇಶ್ವರನಿಗೆ ಪ್ರತಿವರ್ಷ ತೈಲಾಭಿಷೇಕದ ಮೊದಲ ತೈಲವನ್ನು ಅವರೇ ಭಕ್ತಿಯಿಂದ ಅರ್ಪಿಸುತ್ತಾರೆ. ಇದಕ್ಕೆ ಅವರ ಮೇಲೆ ಮರುಳಸಿದ್ದೇಶ್ವರನ ಶಾಪವಿರುವುದಾಗಿಯೂ ಆ ಶಾಪ ವಿಮೋಚನೆಗೆ ತೈಲ ನೀಡುತ್ತಿರುವ ಐತಿಹ್ಯವಿದೆ. ಪಾಳೆಯಗಾರ ಬೇಟೆಗೆ ಹೋದಾಗ ಈಗಿನ ಉಜ್ಜಯಿನಿಯ ದೇವಾಲಯವು ಅಡವಿಯಾಗಿತ್ತು. ಪೊದೆಯೊಂದರಲ್ಲಿ ಅಡಗಿದ್ದ ಬಿಳಿಹಂದಿಯನ್ನು ಬೇಟೆಯಾಡಲು ಬಾಣ ಹೂಡಿ ಹೊಡೆದ. ಆ ಬಾಣ ಅದೇ ಪೊದೆಯೊಳಗಿದ್ದ ಋಷಿವರ‍್ಯರಿಗೆ ನಾಟಿತು. ಆ ಋಷಿವರ‍್ಯರೇ ಮರುಳಾರಾಧ್ಯರು. ಅವರಲ್ಲಿ ಕ್ಷಮೆ ಕೋರಿ, ಅವರ ತಲೆಗೆ ಎಣ್ಣೆ ಹಚ್ಚಿ ತಂಪು ಮಾಡಿದ. ಅಂದಿನಿಂದ ಧಡಿ ಎಣ್ಣೆ ಕಳಿಸುತ್ತೇನೆಂದು ತಿಳಿಸಿದ್ದಾರೆಂಬ ಐತಿಹ್ಯ ಒಂದೆಡೆ ಇದೆ.
ಇನ್ನೊಂದೆಡೆ ಜರಿಮಲೆ ಪಾಳೆಗಾರರು ಹೈದರಾಲಿಯ ಸಂಬಂಧಿ ಹೆಂಗಸೊಬ್ಬಳನ್ನು ಅಪಹರಿಸಿ ಉಜ್ಜಯಿನಿಯ ಮಠದಲ್ಲಿ ಇಟ್ಟರು. ಹೆಣ್ಣನ್ನು ಅಪಹರಿಸಿ ಮಠದಲ್ಲಿ ಬಂಧಿಸಿದ ಕಾರಣವಾಗಿ ಗುರುಗಳು ಕುಪಿತರಾಗಿ “ನನ್ನ ದರುಶನಕ್ಕೆ ವಂಶ ಪಾರಂಪರ‍್ಯವಾಗಿ ಬರಕೂಡದು”ಎಂದು ಶಾಪಗೈದರು. ಹೀಗಾಗಿ ಅವರು ದರುಶನ ಪಡೆಯುವಂತಿಲ್ಲ. ತನ್ನ ತಪ್ಪಿನ ಅರಿವಾಗಿ ಪಾಳೇಗಾರರು ಪ್ರತಿವರ್ಷ ಶಿಖರಕ್ಕೆ ತೈಲ ಕಳುಹಿಸುತ್ತೇನೆಂದು ಹೇಳಿ ಅದರಂತೆ ನಡೆದುಕೊಳ್ಳುತ್ತಿದ್ದಾರೆ.
ಈ ಕಥೆ-ಶಾಪಗಳೇನೆ ಇರಲಿ, ಇಂತಹ ಪರಂಪರೆಯು ಆದ್ಯಂತವಾಗಿ ನಡೆದುಕೊಂಡು ಬಂದಿರುವುದು ಗಮನಾರ್ಹ. ಭಾರತದಲ್ಲಿ ಮೂರ್ತಿಗಳಿಗೆ ತೈಲಾಭಿಷೇಕ ಮಾಡುತ್ತಿರುವ ವಾಡಿಕೆಗಳಿವೆ. ಆದರೆ ಗರ್ಭಗೃಹದ ಇಡೀ ಶಿಖರಕ್ಕೆ ತೈಲಾಭಿಷೇಕ ಮಾಡುತ್ತಿರುವುದು ಭಕ್ತಿಯ ಪರಾಕಾಷ್ಠತೆಯಲ್ಲದೆ ಮತ್ತೇನೂ ಅಲ್ಲ. ಈ ತೈಲಾಭಿಷೇಕದಿಂದಾಗಿ ಶಿಖರದಲ್ಲಿರುವ ಸೂಕ್ಷ್ಮ ಕೆತ್ತನೆ ಕಾಣದಾಗಿದೆ. ಇದು ವಾಸ್ತುಶಿಲ್ಪವನ್ನು ಮುಚ್ಚಿಟ್ಟಂತಾಗಿದೆ. ಚಾಲುಕ್ಯರ ಕಾಲದಿಂದ ಆರಂಭವಾಗಿ ಯಾದವ, ವಿಜಯನಗರ ಅರಸರ ಕಾಲದಲ್ಲಿ (ದಾನದತ್ತಿ) ಪಡೆದುಕೊಂಡು ಅಭಿವೃದ್ಧಿ ಹೊಂದುತ್ತಾ ಬಂದಿದೆ. ಕರ್ನಾಟಕ ಶಿಲ್ಪಕಲೆಯಲ್ಲಿ ವೈಭವವನ್ನು ಸಾರಬಹುದಾದ ಈ ದೇವಾಲಯ ತೈಲಾಭಿಷೇಕವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.
ಪಂಚಪೀಠದ ಪರಂಪರೆಯ ಗುರುವರ್ಗದ ಮಠಗಳಲ್ಲಿ ಉಜ್ಜಯಿನಿ ಪೀಠವು ಎರಡನೆಯದಾಗಿದೆ. ಪರಶಿವನ ಐದು ಮುಖಗಳಲ್ಲಿ ಎರಡನೆಯ ಮುಖದಿಂದ ಆವಿರ್ಭಾವವಾದ ಪೀಠ. ಈ ಪೀಠವು ದೇಶದಾದ್ಯಂತ 28000 ಶಾಖಾ ಮಠಗಳನ್ನು ಹೊಂದಿತ್ತು. ಅವುಗಳಲ್ಲಿ ಈಗ 6000 ಮಠಗಳು ಮಾತ್ರ ಅಸ್ತಿತ್ವದಲ್ಲಿವೆ. ಪಂಚಪೀಠಗಳ ಪೀಠಾಚಾರ್ಯರು ಸಮಸ್ತ ವೀರಶೈವ ಧಾರ‍್ಮಿಕ ಸಾಮ್ರಾಜ್ಯದ ಅಧಿಪತಿಗಳು, ಧಾರ‍್ಮಿಕ ವಿಧಿ-ವಿಧಾನಗಳ ನಿರ್ಮಾತೃಗಳು. ಗೋತ್ರ-ಸ್ತೋತ್ರಗಳ ಆರಂಭಕಾರರು. ಸೃಷ್ಠಿಯ ಆದಿ ಅಂತ್ಯಗಳ ಕರ್ತರು. ಇಂತಹ ಆಚಾರ‍್ಯರಿಗೆ ಐದು ಉಪಾಚಾರ‍್ಯರಿದ್ದಾರೆ. ಅವರನ್ನು ಪಂಚಾವೃತ್ಯಾಚಾರ್ಯರೆಂದು ಕರೆಯುತ್ತಾರೆ. ಪರಶಿವನ ಐದು ಮುಖಗಳಿಂದ ಆಚಾರ‍್ಯರು ಉದಿಸಿದಂತೆ ಶಿವನ ಬೇರೆ ಬೇರೆ ಐದು ಅಂಗಗಳಿಂದ ಪಂಚಾಚಾರ‍್ಯರ ಸಹಾಯಕ್ಕಾಗಿ ಪಂಚಾವೃತ್ಯಾಚಾರ‍್ಯರು ಉದಿಸಿದ ನಂಬಿಕೆಯಿದೆ. ಪಂಚಪೀಠಗಳಲ್ಲಿ ಉಜ್ಜಯಿನಿ ಮತ್ತು ಬಾಳೆಹಳ್ಳಿ (ಬಾಳೆಹೊನ್ನೂರು) ಮಾತ್ರ ಕರ್ನಾಟಕದಲ್ಲಿವೆ. ಹಿಮವತ್ ಕೇದಾರ-ಹಿಮಾಲಯ, ಕಾಶಿ-ಉತ್ತರ ಪ್ರದೇಶ ಹಾಗೂ ಶ್ರೀಶೈಲ-ಆಂಧ್ರಪ್ರದೇಶ ರಾಜ್ಯಗಳಲ್ಲಿವೆ. ಇ. ಥರ್ಸ್ಟಸ್ ಎನ್ನುವ ವಿದ್ವಾಂಸರು “ಈ ಐವರು ಮಹಾಗೋತ್ರ ಕರ್ತರು ಭರತ ಖಂಡದ ಬೇರೆ ಬೇರೆ ಭಾಗಗಳಲ್ಲಿ ಐದು ದೊಡ್ಡ ಮಠಗಳನ್ನು ಸ್ಥಾಪಿಸಿದರು, ಇವು ಸಿಂಹಾಸನದ ಮಠಗಳೆಂದು ಕರೆಯಲ್ಪಡುತ್ತವೆ” (Castes and tribes of Southern India)  ಎಂದಿದ್ದಾರೆ. ಪ್ರತಿ ವರ್ಷ ಅಕ್ಷತ್ತದಗಿ ಅಮವಾಸೆಯ ಐದನೇ ದಿನ (ವೈಶಾಖ ಶುದ್ಧ ಪಂಚಮಿ ದಿನ), ದಾರುಕಾಚಾರ‍್ಯರ ಜಯಂತಿಯ ದಿನದಂದು ಮರುಳಸಿದ್ದೇಶ್ವರನ ರಥೋತ್ಸವ ಜರುಗುತ್ತದೆ. ಈ ರಥೋತ್ಸವ ಎನ್ನಿಸಿಕೊಳ್ಳುವುದು ಒಂದು ನಿಟ್ಟಿನಲ್ಲಿ ಮಾತ್ರ. ಆದರೆ ಇದರ ಹಿಂದಿನ ಉದ್ದೇಶವೇ ಬೇರೆ. ಅದೆಂದರೆ, ಶ್ರೀ ಮರುಳಸಿದ್ದೇಶ್ವರ ಹಾಗೂ ಶ್ರೀಗೌರಿಯ ವಿವಾಹ ಮಹೋತ್ಸವ ಸಂದರ್ಭ. ರಥೋತ್ಸವದ ಐದು ದಿನಗಳ ಮೊದಲು ಕಂಕಣ ಕಟ್ಟುವಿಕೆ ಪ್ರಕ್ರಿಯೆ ನಡೆಯುತ್ತದೆ. ನಂತರದ ದಿನ ಮದು-ಮಗನಾಗುವುದು ಈ ಎರಡು ಕ್ರಿಯೆಗಳು ಹಿಂದೂ ಸಂಪ್ರದಾಯದ ಮದುವೆಯ ಆಚರಣೆಗಳಾಗಿವೆ. ಕಂಕಣ ಬಿಚ್ಚುವ ಕಾರ‍್ಯವೂ ಇಲ್ಲಿ ನಡೆಯುತ್ತದೆ. ಐದು ದಿನಗಳ ಕಾಲ ಮಹೋತ್ಸವಗಳು ಜರುಗುತ್ತವೆ. ಹೀಗಾಗಿ ಇದೊಂದು ದೇವರ ವಿವಾಹ ಕಾರ‍್ಯವೇ ಸರಿ.
ಉಜ್ಜಯಿನಿಯ ಅಧಿಪತಿ ಎನಿಸಿಕೊಂಡಿರುವ ಶ್ರೀ ಮರುಳ ಸಿದ್ಧೇಶ್ವರನ ರಥೋತ್ಸವ ಮತ್ತು ಜಾತ್ರೆ ವೀರಶೈವ ಪರಂಪರೆಯಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಈ ರಥೋತ್ಸವವು 2 ಪರಿಕಲ್ಪನೆಗಳನ್ನು ಮೂಡಿಸುತ್ತದೆ. ಒಂದು ಮದುವೆಯ ಸಂದರ್ಭ, ಮತ್ತೊಂದು ಜಾತ್ರಾ ಮಹೋತ್ಸವ. ಒಂದನೆಯದನ್ನು ತಿಳಿಯುವುದಾದರೆ ಮರುಳಸಿದ್ಧನ ದೇವಸ್ಥಾನದ ಪಕ್ಕದಲ್ಲಿ ಗೌರಮ್ಮ ದೇವಿಯ ದೇವಾಲಯವಿದೆ. ಮರುಳಸಿದ್ಧೇಶ್ವರನಿಗೂ ಗೌರಮ್ಮ ದೇವಿಗೂ ನಡೆಯುವ ವಿವಾಹ ಸಂದರ್ಭವೆಂದು ಕಲ್ಪಿಸುತ್ತಾರೆ. ರಥೋತ್ಸವದ ದಿನ ರಾತ್ರಿಯ ಕಾರ‍್ಯಕ್ರಮಗಳು ಇದನ್ನು ಸಾಕ್ಷೀಕರಿಸುತ್ತವೆ. ನಂತರದ ದಿನ ಗರ್ಭಗುಡಿಯ ಮೇಲಿರುವ ಕಪ್ಪು ಶಿಖರಕ್ಕೆ ತೈಲಾಭಿಷೇಕ ಕಾರ‍್ಯಕ್ರಮ ಜರುಗುತ್ತದೆ.
ವೈಶಾಖ ಶುದ್ಧ ಷಷ್ಠಿ ಅಥವಾ ರಥೋತ್ಸವದ ನಂತರದ ದಿನ ಮರುಳಸಿದ್ಧೇಶ್ವರನ ಗರ್ಭಗೃಹದ ಶಿಖರಕ್ಕೆ ‘ತೈಲಾಭಿಷೇಕ’ ನಡೆಯುತ್ತದೆ. ಉಜ್ಜಯಿನಿ ಭಕ್ತ ಪರಂಪರೆಯ ಹಾಗೂ ಗುರುಗಳ ಶಾಪಕ್ಕೆ ತುತ್ತಾದ ಜರಿಮಲೆ ಪಾಳೇಗಾರನ ಭಕ್ತಿಯ ತೈಲದಿಂದ ಮೊದಲ್ಗೊಂಡು ನಂತರ ಭಕ್ತರು ಕೊಟ್ಟ ತೈಲವನ್ನು ಇಡೀ ಶಿಖರಕ್ಕೆ ಧಾರೆಯೆರೆಯುತ್ತಾರೆ. ಈ ಸುಂದರ ಹಾಗೂ ಭಕ್ತಿಯ ಆಚರಣೆಯನ್ನು ನೋಡಲು ಸಾವಿರಾರು ಭಕ್ತರು ನೆರೆದಿರುತ್ತಾರೆ. ಊರಿನ ಜನತೆ ಹಾಗೂ ಬಂಧು-ಬಳಗದವರು ತಮ್ಮ ತಮ್ಮ ಮನೆಗಳ ಮೇಲೆ ನಿಂತೇ ವೀಕ್ಷಿಸುತ್ತಾರೆ. ಕರ್ನಾಟಕದ ಇತಿಹಾಸದ ಮಟ್ಟಿಗೆ ತೈಲಾಭಿಷೇಕವನ್ನು ಮೂರ್ತಿಗಳಿಗೆ ಮಾಡುವುದನ್ನು ತಿಳಿದಿದ್ದೇವೆ. ಅದು 12 ವರ್ಷಕ್ಕೊಮ್ಮೆಯಂತೆ ಶ್ರವಣ ಬೆಳಗೊಳದ ಗೊಮ್ಮಟನಿಗೆ ನಡೆಯುವ ಮಹಾಮಸ್ತಕಾಭಿಷೇಕ ಇರಬಹುದು. ಅಥವಾ ಇನ್ನಾವುದೇ ಗರ್ಭಗುಡಿಯ ಮೂರ್ತಿಗೆ ವಿಶೇಷ ಪೂಜಾ ಸಮಾರಂಭಗಳಂದು ಕ್ಷೀರ, ತೈಲ ಇತ್ಯಾದಿ ಅಭಿಷೇಕಗಳಿರಬಹುದು. ಆದರೆ ಗರ್ಭಗುಡಿಯ ಇಡೀ ಶಿಖರಕ್ಕೆ ಅದು ಪ್ರತಿವರ್ಷವೂ ಆಚರಿಸಲ್ಪಡುವ ಈ ಕ್ರಿಯೆ ಉಜ್ಜಯಿನಿಯಲ್ಲಿ ಮಾತ್ರ. ಇದು ನಿಜಕ್ಕೂ ವಿಭಿನ್ನ ಮತ್ತು ವಿಶಿಷ್ಠವೇ ಸರಿ.
ಕರ್ನಾಟಕದ ಇತಿಹಾಸದಲ್ಲಿಯೇ ಒಂದು ಮಹತ್ತ್ರ ಧಾರ‍್ಮಿಕ ಕ್ರಿಯೆ ನಡೆಯುತ್ತಿರುವುದು ಹೆಮ್ಮೆಯೇ ಸರಿ. ಇದು ಭಾರತದಲ್ಲಿ ಅಷ್ಟೆ ಅಲ್ಲ, ಏಷ್ಯಾ ಖಂಡದಲ್ಲಿಯೇ ಇಂತಹ ವೈಭವ ಪೂರ್ಣವಾದ ಮತ್ತು ವೈಶಿಷ್ಠಪೂರ್ಣವಾದ ಆಚರಣೆ ಇಲ್ಲ. ಈ ಆಚರಣೆ ಶಿಲ್ಪವೈಭವವನ್ನು ಕಳೆಗುಂದಿಸುತ್ತದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಸುಂದರ ಬಳಪದ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಶಿಖರದ ಸ್ತೂಪಿ, ಮಹಾಸುಕನಾಸಿ, ಕೋಷ್ಟಕ ಕಂಬ, ಗೂಡು, ಅಧಿಷ್ಠಾನದ ಕೆತ್ತನೆ ಮತ್ತು ಮೂರ್ತಿಗಳು ತಮ್ಮ ಸುಂದರತೆಯನ್ನು ಹೊಂದಿವೆ. ಇಲ್ಲಿರುವ ಶಿಲ್ಪವೈಭವ ಎಣ್ಣೆ ಮಜ್ಜನದೊಂದಿಗೆ ಧೂಳಿನ ಲೇಪವೂ ಸೇರಿದೆ ಎಂಬುದು ನಿಜ. ಆದರೆ ಇಲ್ಲಿನ ಪರಂಪರೆಯ ಹಾಗೂ ಭಕ್ತಿಯ ಪರಾಕಾಷ್ಠತೆಯಲ್ಲಿ ಅದು ಮರೆ ಮಾಚಿದೆ.
ವಿಜೃಂಭಣೆಯ ಶ್ರೀಮರುಳಸಿದ್ಧೇಶ್ವರನ ರಥೋತ್ಸವ ನಾಡಿನಾದ್ಯಂತ ಹೆಸರಾಗಿದೆ. ಬಾಹ್ಯದಲ್ಲಿ ಐದು ದಿನಗಳ ಕಾಲ ನಡೆಯುವ ಈ ರಥೋತ್ಸವ ಆಂತರ‍್ಯದಲ್ಲಿ ಸುಮಾರು 21 ದಿನಗಳ ಕಾಲದ ಆಚರಣೆಯನ್ನು ಹೊಂದಿದೆ. ರಥದ ಗಾಲಿ ಹೊರಹಾಕುವ ಕ್ರಿಯೆಯಿಂದ ಆರಂಭವಾಗಿ ಕಂಕಣ ವಿಸರ್ಜನೆಯವರೆಗೆ ಈ ಧಾರ‍್ಮಿಕ ಕ್ರಿಯಾ ವಿಧಿಗಳು ನಿರಂತರವಾಗಿ ನಡೆಯುತ್ತವೆ. ಕಂಕಣ ಕಟ್ಟುವಿಕೆಯವರೆಗೆ ಅಂತಹ ಮಹತ್ವದ ಆಚರಣೆಗಳಿಲ್ಲ. ಈ ಕಂಕಣ ಕಟ್ಟುವಿಕೆಯು ಹಿಂದೂ ಸಂಪ್ರದಾಯದ ಜನರ ಮದುವೆಗಳಲ್ಲಿ ನಡೆಯುವ ಧಾರ‍್ಮಿಕ ಕ್ರಿಯ ವಿಧಿ ಇಂತಹ ಕ್ರಿಯೆಯು ದೇವರಿಗೂ ಸಾಮಿಪ್ಯಿಸಿರುವುದು ಗಮನಾರ್ಹ.
ಮರುಳಸಿದ್ಧೇಶ್ವರ ತನ್ನ ಕ್ಷೇತ್ರದ ದರ್ಶನವನ್ನರಸಿ ಬರುವ ಯಾತ್ರಾರ್ಥಿಗಳಿಗೆ ದರ್ಶನದೊಂದಿಗೆ ಪ್ರಸಾದವನ್ನು ವಿತರಿಸುವ ನಿತ್ಯಾನ್ನಕ್ಷೇತ್ರವಾಗಿ ಪರಿಣಮಿಸಿರುವ ಹಾಗೂ ದೂರದ ಯಾತ್ರಿಗಳಿಗೆ ವಸತಿ ಸೌಲಭ್ಯವೂ ಇದೆ. ಕನ್ನಡ ನಾಡಿನಲ್ಲಿ ಅಮರ ಶಿಲ್ಪಿ ಜಕ್ಕಣಾಚಾರ‍್ಯ ಕಟ್ಟಿದ ದೇವಾಲಯಗಳು ಅದೆಷ್ಟೋ. ಎಲ್ಲೂ ಇಲ್ಲದ ಜಕಣ್ಣಾಚಾರ‍್ಯನ ಆತನ ಪ್ರತಿಮೆ ಇಲ್ಲಿದೆ. ಕರ್ನಾಟಕದಲ್ಲಿ ಆಳಲ್ಪಟ್ಟ ಚಾಲುಕ್ಯ, ಹೊಯ್ಸಳ ಮತ್ತು ವಿಜಯ ನಗರದ ಅರಸರುಗಳ ಕಾಲದಲ್ಲಿ ವೈಭವವಾಗಿ ಉಜ್ಜಯಿನಿ ಮೆರೆದಿದೆ.
ಈ ಪೀಠದಲ್ಲಿ ಧಾರ‍್ಮಿಕ ನ್ಯಾಯಾಲಯವಿತ್ತು. ಇದು ಬ್ರಿಟಿಷರ ಪೂರ್ವದಿಂದಲೂ ಧಾರ‍್ಮಿಕ ಸಂಬಂಧೀ ವ್ಯಾಜ್ಯಗಳಿಗೆ ತೀರ್ಪು ನೀಡುತ್ತಾ ಬಂದಿತ್ತು. ಮೌಖಿಕ ಸಂಹಿತೆ ಮತ್ತು ಸಂವಿಧಾನದ ರೂಪದಲ್ಲಿದ್ದ ಜಗದ್ಗುರುಗಳ ತೀರ್ಪು ಶಾಸನದಷ್ಟೆ ಶಾಶ್ವತ ಎಂಬುದನ್ನು ಬ್ರಿಟಿಷ್ ಸರ್ಕಾರವೇ ಮಾನ್ಯ ಮಾಡಿದೆ. ನ್ಯಾಯ ಪೀಠದ ಬಳಕೆ ಈಗಿಲ್ಲವಾದರೂ ಈ ಮೊದಲು ಬಳಕೆಯಲ್ಲಿತ್ತು. ಮುಖ್ಯ ನ್ಯಾಯಾಧೀಶರಾದ ಶ್ರೀಗಳು ಮುಖ್ಯ ಆಸನದಲ್ಲಿ ಆಸೀನರಾಗಿರುತ್ತಿದ್ದರು. ಈ ನ್ಯಾಯ ಪೀಠದಿಂದ ಧರ್ಮ ಸಂಬಂಧಿ ವ್ಯಾಜ್ಯಗಳಿಗೆ, ಶಾಖಾಮಠ, ಮಠದಯ್ಯ ಹಾಗೂ ಗ್ರಾಮಗಳ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಸದ್ಧರ್ಮ ಪೀಠದ ಈ ನ್ಯಾಯ ಪೀಠ ಧಾರ‍್ಮಿಕ ಸಮಸ್ಯೆಗಳನ್ನು ಇತ್ಯರ್ಥ ಮಾಡುತ್ತಿದ್ದುದರಿಂದ ಸದ್ಧರ್ಮ ಪೀಠವಾಗಿತ್ತು. ಈ ನ್ಯಾಯಪೀಠವನ್ನು ಮುಂದುವರಿಸುವ ಸದಿಚ್ಛೆ ಈಗಿನ ಶ್ರೀಗಳದ್ದಾಗಿದೆ.
ಕರ್ನಾಟಕದ ವಾಸ್ತುಶಿಲ್ಪ ಚರಿತ್ರೆಯಲ್ಲಿ ಈಗಾಗಲೇ ದಾಖಲಾಗಬೇಕಾಗಿದ್ದ ಉಜ್ಜಯಿನಿ ಇನ್ನೂ ದಾಖಲಾಗದಿರುವುದು ಸಂಶೋಧಕರ ನಿರಾಸಕ್ತಿ ಕಾರಣ. ಸುಂದರ ಕಪ್ಪು ಶಿಖರ, ನಂದಿ, ಸಹಸ್ರದಳ ಕಮಲಗಳು ಮುಗಿಲೆತ್ತರಕ್ಕೆ ನಿಂತ ಗೊಮ್ಮಟೇಶ್ವರನಷ್ಟೆ ಪ್ರಸಿದ್ಧ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾದ ನಂದಿ ಮತ್ತು ಕಮಲಗಳು ಶಿಲ್ಪಶ್ರೇಷ್ಠವಾಗಿವೆ. ಐತಿಹಾಸಿಕ ಶಿಖರ ತೈಲಾಭಿಷೇಕ ವಿಶಿಷ್ಠ ಆಚರಣೆಯನ್ನು ನೋಡುವುದೇ  ಒಂದು ಸಡಗರ...

ದುರಾಸೆಯ ದುಷ್ಪರಿಣಾಮ

ದಿನಕ್ಕೊಂದು ಕಥೆ

ದುರಾಸೆಯ ದುಷ್ಪರಿಣಾಮ

ಓರ್ವ ಭಿಕ್ಷುಕ. ಅವನು ದೇವರ ಮೇಲೆ ಶ್ರದ್ಧೆ ಇದ್ದ ಕಾರಣ ಅವನು ದಿನವಿಡೀ ನಾಮಜಪ ಮಾಡುತ್ತಿದ್ದ. ಭಗವಂತನು ಅವನ ನಾಮಜಪದಿಂದ ಪ್ರಸನ್ನನಾಗಿ ಪ್ರತಕ್ಷನಾದ. "ನಾನು ನಿನ್ನ ನಾಮಜಪದಿಂದ ಬಹಳ ಪ್ರಸನ್ನನಾಗಿದ್ದೇನೆ, ನಿನಗೆ ಬೇಕಾದದ್ದನ್ನು ಕೇಳು" ಎಂದು ಭಗವಂತ ಕೇಳಿದ. ಆಗ ಭಿಕ್ಷುಕನು ದುರಾಸೆಯಿಂದ ಚಿನ್ನದ ನಾಣ್ಯಗಳನ್ನು ಕೇಳಿದ. ಭಗವಂತನು 'ಚಿನ್ನದ ನಾಣ್ಯಗಳನ್ನು ಯಾವ ಪಾತ್ರೆಯಲ್ಲಿ ತೆಗೆದುಕೊಳ್ಳುವೆ ?' ಎಂದು ಕೇಳಿದಾಗ ಭಿಕ್ಷುಕನು ತನ್ನ ಅಂಗಿಯನ್ನು ಮುಂದೆಮಾಡಿದ.

ಭಗವಂತನು ಚಿನ್ನದ ನಾಣ್ಯಗಳನ್ನು ಕೊಡುವ ಮೊದಲು "ಎಲ್ಲಿಯ ವರೆಗೆ ನೀನು ಚಿನ್ನದ ನಾಣ್ಯಗಳನ್ನು ಕೇಳುವುದು ಬಿಡುವುದಿಲ್ಲ ಅಲ್ಲಿಯವರೆಗೆ ನಾನು ನಿನ್ನ ಅಂಗಿಯಲ್ಲಿ ಚಿನ್ನದ ನಾಣ್ಯಗಳನ್ನು ಹಾಕುತ್ತಲೇ ಇರುವೆ, ಆದರೆ ಭೂಮಿಯ ಮೇಲೆ ಚಿನ್ನದ ನಾಣ್ಯಗಳು ಬೀಳಬಾರದು. ನೆಲದ ಮೇಲೆ ಬಿದ್ದರೆ ಈ ನಾಣ್ಯಗಳು ಮಣ್ಣಾಗುವವು" ಎಂದು ಹೇಳಿದನು. ಭಿಕ್ಷುಕನು ಒಪ್ಪಿಕೊಂಡ. ಭಗವಂತನು ಭಿಕ್ಷುಕನ ಅಂಗಿಯಲ್ಲಿ ಚಿನ್ನದ ನಾಣ್ಯಗಳನ್ನು ಹಾಕತೊಡಗಿದ. ಅಂಗಿಯು ತುಂಬುತ್ತ ಹೋಯಿತು ಹಾಗೂ ಭಿಕ್ಷುಕನ ದುರಾಸೆಯು ಹೆಚ್ಚುತ್ತ ಹೋಯಿತು. ಅವನು ‘ಸಾಕು’ ಎಂದು ಹೇಳಲಿಲ್ಲ, ದೇವರು ಕೊಡುವುದನ್ನು ನಿಲ್ಲಿಸಲಿಲ್ಲ. ಕೊನೆಯಲ್ಲಿ ಚಿನ್ನದ ನಾಣ್ಯಗಳ ಭಾರವನ್ನು ಆ ಅಂಗಿಯು ತಡೆದುಕೊಳ್ಳಲಿಲ್ಲ, ಅಂಗಿಯು ಹರಿದು ಹೋಯಿತು. ಅದರಿಂದ ಎಲ್ಲ ನಾಣ್ಯಗಳು ನೆಲದ ಮೇಲೆ ಬಿದ್ದು ಮಣ್ಣಾದವು.

ನೀತಿ :-- ಮನಸ್ಸಿನಲ್ಲಿ ದುರಾಸೆ ಇರುವುದರಿಂದ ಇಷ್ಟೊಂದು ನಾಣ್ಯಗಳು ದೊರೆತರೂ ಭಿಕ್ಷುಕನು ಬಡವನಾಗಿಯೇ ಉಳಿದ...

ಶಂ ನೋ ಭವತ್ವರ್ಯಮಾ



ಶಂ ನೋ ಮಿತ್ರಃ ಶಂ ವರುಣಃ | ಶಂ ನೋ ಭವತ್ವರ್ಯಮಾ| ಶಂ ನ ಇಂದ್ರೋ ಬೃಹಸ್ಪತಿಃ | 
ಶಂ ನೋ ವಿಷ್ಣುರುರುಕ್ರಮಃ |
ಪ್ರಾಣ ಸಂಚಲನಕ್ಕೆ ಅಥವಾ ಪ್ರಾಣವೃತ್ತಕ್ಕೆ ಅಭಿಮಾನಿ ದೇವತೆಯಾದ ಮಿತ್ರ ಎನ್ನುವ ದೇವತೆ ನಮಗೆ ಸುಖವನ್ನು ಕೊಟ್ಟು ಒಳ್ಳೆಯದನ್ನು ಮಾಡಲಿ. ಈ ಮಿತ್ರನು ದಿವೋ ದೇವತೆ. ಅಂದರೆ ಹಗಲಿಗೆ ಅಭಿಮಾನ ದೇವತೆ ಎನ್ನುವುದು ತೈತ್ತಿರೀಯ ಬ್ರಾಹ್ಮಣದಲ್ಲಿ ಸಾಯಣಾಚಾರ್ಯರು. ರಾತ್ರಿಗೆ ವರುಣನು ಅಭಿಮಾನದೇವತೆಯಾಗಿದ್ದು ಅಪಾನಕ್ರಿಯೆಯನ್ನು ಸರಾಗವಾಗಿ ಮಾಡುವ ಸಾಮರ್ಥ್ಯಹೊಂದಿರುವವನಾಗಿ ನಮಗೆ ಸುಖವನ್ನು ಒದಗಿಸಲಿ. ಶಂ ನೋ ಭವತ್ವರ್ಯಮಾ ಎನ್ನುವುದು ಎಷ್ಟು ಮಹತ್ವವನ್ನು ಹೊಂದಿದೆ. ನಮ್ಮ ಕಣ್ಣುಗಳಿಗೆ ಆದಿತ್ಯ ಮಂಡಲಕ್ಕೆ ಅಭಿಮಾನಿ ದೆವತೆಯಾದ ಅರ್ಯಮಾ, (ಸೂರ್ಯ) ಶುಭವನ್ನು ಉಂಟುಮಾಡಲಿ. ಅಂದರೆ ಕಣ್ಣುಗಳು ಜ್ಞಾನದ ಸಂಕೇತ. ಜ್ಞಾನವನ್ನು ಸೂರ್ಯ ವರ್ಧಿಸಲಿ. ನಮ್ಮ ಬಾಹು ಬಲಗಳು ವರ್ಧಿಸಿ ನಮಗೆ ಶಕ್ತಿಯನ್ನು ಕೊಡುವ ದೇವತೆ ಇಂದ್ರ ಆತ ನಮಗೆ ಸುಖವನ್ನು ಒದಗಿಸಲಿ ಎಂದಿರುವುದನ್ನೆ ಶಂನ ಇಂದ್ರೋ ಎಂದು ಮುಂದೆ ಬಂದಿರುವುದು. ನಮ್ಮ ಬುದ್ಧಿ ಮತ್ತು ಮಾತಿಗೆ ಅಭಿಮಾನಿ ದೇವತೆಯಾಗಿರುವವನು ಗುರು. ಅದನ್ನೇ ವಾಚೀ ಬುದ್ಧೌ ಚ ಅಭಿಮಾನೀ ಬೃಹಸ್ಪತಿಃ. ನಮ್ಮ ಕಾಲುಗಳಿಗೆ ಬಲವನ್ನು ಕೊಡುವವನು ವಿಷ್ಣು. ’ಶಂನೋ ವಿಷ್ಣುರುರುಕ್ರಮಃ’ ಎಂದಿರುವುದು ಅದನ್ನೆ, ತ್ರಿವಿಕ್ರಮಾವತಾರಿಯಾಗಿ ಪಾದಗಳನ್ನು ಪಸರಿಸಿದ ವಿಷ್ಣುವು ಕಾಲುಗಳನ್ನು ಅಂದರೆ ನಮ್ಮ ಜೀವನವನ್ನು ರಕ್ಷಿಸಿ ಸುಖ ಸಂತೋಷವನ್ನು ನೀಡಲಿ ಎನ್ನುವುದು ಒಂದರ್ಥವಾದರೆ. ವಿಷ್ಣುವು ತನ್ನ ಮೂರು ಪಾದಗಳ ಸಂಕೇತವನ್ನು ಪೂರ್ವಾಹ್ನದ ಪಾದ ಮತ್ತು ಅಪರಾಹ್ನದ ಪಾದ ಸಾಯಂ ಪಾದವಾಗಿ ಗಣಿಸಿ ಸೂರ್ಯ ಚಲನೆಯು ನಮ್ಮ ದೈಹಿಕ ವ್ಯವಹಾರಗಳಿಗೆ ಮತ್ತು ಮನಸ್ಸು ಬುದ್ದಿಗಳನ್ನು ನಿಯಂತ್ರಿಸಿ ನಮ್ಮನ್ನು ಸಲಹಲಿ ಎಂದು ಇನ್ನೊಂದು ಅರ್ಥ. ಅಥವಾ ಪ್ರಾಣವೇ ಮೊದಲಾದ ಅವಯವಗಳ ಅಭಿಮಾನಿ ದೆವತೆಯನ್ನಾಗಿ ಸ್ತುತಿಸುವ ಮಂತ್ರ ಅಂದರೆ ಇದು ಬ್ರಹ್ಮಾಂಡವನ್ನೇ ತನ್ನೊಳಗೆ ಅಡಗಿಸಿಕೊಂಡಿರುವ ವಿರಾಟ್ ಪುರುಷನನ್ನು ಕುರಿತಾಗಿ ಹೇಳಿದ ಮಂತ್ರ. ಇದನ್ನು ತೈತ್ತಿರೀಯ ಆರಣ್ಯಕದ ಶೀಕ್ಷೋಪನಿಷತ್ ಎಂದು ಕರೆಯಲಾಗಿದೆ. 

ರಾಹೂಗಣ ಎನ್ನುವವನ ಮಗ ಗೋತಮನು  ಋಗ್ವೇದದ ಒಂದನೇ ಮಂಡಲದ ೯೦ನೇ ಸೂಕ್ತದಲ್ಲಿ ವಿಶ್ವೇದೇವತೆಗಳನ್ನು ಸ್ತುತಿಸುತ್ತಾ ಇದೇ ಮಂತ್ರ ಹೇಳಲಾಗಿದ್ದು ಅಲ್ಲಿ ಹಗಲಿನ ದೇವನಾದ ಸೂರ್ಯ ಮತ್ತು ರಾತ್ರಿಯ ಅಭಿಮಾನಿ ದೇವನಾದ ವರುಣನು ನಮಗೆ ಸುಖವನ್ನು ಒದಗಿಸಲಿ. ಅಹೋರಾತ್ರಗಳ ವಿಭಾಗವನ್ನು ನಿಯಮಿಸುವ ಅರ್ಯಮನು ನಮಗೆ ಸುಖವನ್ನು ಕೊಡಲಿ. ಬೃಹಸ್ಪತಿ ಮತ್ತು ಇಂದ್ರರು ನಮಗೆ ಸುಖದಾಯಕರಾಗಲಿ. ದೀರ್ಘಪಾದದ ವಿಷ್ಣು ನಮಗೆ ಭಾಗ್ಯದಾಯಕನಾಗಲಿ ಎಂದಿರುವುದು ಸಿಗುತ್ತದೆ. ಇಲ್ಲಿ ಬೃಹಸ್ಪತಿಗೆ ಒಂದು ಗುರು ಎನ್ನುವ ಅರ್ಥವಾದರೆ ಇನ್ನೊಂದು ಎಲ್ಲ ದೇವತೆಗಳಿಗೆ ದೇವತೆ ಎಂದು. ಉರುಕ್ರಮಃ ಎನ್ನುವುದೂ ಸಹ ದೊಡ್ಡದಾದ ಪಾದಗಳುಳ್ಳ ತ್ರಿವಿಕ್ರಮ ಎಂದು.

ಸದ್ಯೋಜಾತರು

August 27, 2021

ಗೋಹತ್ಯೆ'ಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ

ಅಂದು 2005 ರ ಅಕ್ಟೋಬರ್ 28 ಕಾಲಿಂಗ್ ಬೆಲ್ ಒತ್ತಿದ್ದರು. ಬಾಗಿಲು ತೆರೆದರೆ, ಹಸನ್ಮುಖಿ ಆತ್ಮೀಯ ಮಿತ್ರ ಹಲವರು ಮಿತ್ರರೊಡನೆ ನಿಂತಿದ್ದರು. ಏನು ಇಷ್ಟು ಖುಷಿ ದೇವರೇ ಎಂದಾಗ, ಮೌನವಾಗಿ ಎರಡು ಕೈಯಲ್ಲೂ ಹಿಡಿಯಲಾರದ ದೊಡ್ಡ ಬಂಡಲ್ ಕೈಗಿತ್ತರು. ಕಣ್ಣಾಡಿಸಿ ನೋಡಿದರೆ ಜಡ್ಜ್‌ಮೆಂಟ್ ಕಾಪಿ. ಗೋಹತ್ಯೆಯ ವಿರುದ್ಧ ಅವರು ಏಕಾಂಗಿಯಾಗಿ ಗೆದ್ದು ಬಂದ ಕಥೆ ಎಲ್ಲರ ಮುಂದೆ ಹೇಳುತ್ತಿದ್ದರೆ, ರಾತ್ರಿ ಮೂರುಗಂಟೆಯಾದರೂ ಯಾರಿಗೂ ಗೊತ್ತೇ ಆಗಲಿಲ್ಲ. ಆ ವ್ಯಕ್ತಿತ್ವವೇ ಅಂತಹುದು. ಅವರ ಆ ಜಡ್ಜ್‌ಮೆಂಟ್ ಕಾಪಿ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಇತ್ತು. ಇಂದು ಯಾರೋ ಮಹಾನುಭಾವರು ಕನ್ನಡೀಕರಿಸಿದ್ದಾರೆ. ಓದಿ ಗೆಳೆಯರೇ. 

ಧನ್ಯವಾದ: ಅಹೋರಾತ್ರ

------------------------------------------------------------------------------------------------------

'ಗೋಹತ್ಯೆ'ಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದಗಳನ್ನು ಓದಿ ,ಇತರರಿಗೂ ತಿಳಿಸಿ

ಈ ಪ್ರಕರಣದ ಪ್ರಮುಖ ವಕೀಲರು ಶ್ರೀ ಸೊಲೈಸೊರಬ್ಜಿ = ಶುಲ್ಕ 20 ಲಕ್ಷ, ಶ್ರೀ ಕಪಿಲ್ ಸಿಬಲ್ ಶುಲ್ಕ= 22 ಲಕ್ಷ ಮತ್ತು ಮಹೇಶ್ ಜೇಠ್ಮಲಾನಿ =35 ಲಕ್ಷ ತಗೊಂಡು ಗೋಮಾಂಸ ವ್ಯಾಪಾರಿಗಳ ಪರವಾಗಿ ಪ್ರಕರಣವನ್ನು ವಾದಿಸುತ್ತಿದ್ದವರು.

ಶ್ರೀ ಶ್ರೀ ರಾಜೀವ್ ಭಾಯ್ ಅವರಿಗೆ ವಕೀಲರನ್ನು ನೇಮಿಸಲು ಸಾಕಷ್ಟು ಹಣವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು: ನ್ಯಾಯಾಲಯವು "ನಿಮಗೆ ಕಾನೂನು ನೆರವಿಗಾಗಿ ವಕೀಲರನ್ನು ನೀಡಿದರೆ ಏನು?" ಎಂದು ಕೇಳಿದಾಗ, ಶ್ರೀ ರಾಜೀವ್ 'ಭಾಯ್, "ಇದರಿಂದ ಬಹಳ ಸಂತೋಷವಾಗಿದೆ ಆದರೆ ಈ ಪ್ರಕರಣವನ್ನು ನಾವೇ ವಾದಿಸಲು ನೀವು ಅವಕಾಶ ನೀಡಬೇಕು" ಎಂದು ಹೇಳಿದರು. ನ್ಯಾಯಾಲಯವು ಹಾಗೇ ಮಾಡಲು ಅನುಮತಿ ನೀಡಿದ್ದರಿಂದ, ಕಾನೂನು ಸಹಾಯಕ್ಕಾಗಿ 'ಶ್ರೀ.ಎಂ.ಇ.ಎಸ್ಕುರಿ ಎಂಬ ವಕೀಲರನ್ನು ನೇಮಕ ಮಾಡುವುದರೊಂದಿಗೆ ಪ್ರಕರಣವು ರಾಜೀವ್'ಭಾಯಿಯವರ ವಾದದೊಂದಿಗೆ ಮುಂದುವರಿಯುತ್ತದೆ.

ಈಗ ಈ ಗೋಮಾಂಸವ್ಯಾಪಾರಿಗಳ ವಾದಗಳನ್ನು ಅವಲೋಕಿಸೋಣ.

ವಾದ 1: ಸರ್ಕಾರಕ್ಕೆ ಗೋವನ್ನು ರಕ್ಷಿಸುವಲ್ಲಿ ಯಾವುದೇ ಉದ್ದೇಶವಿಲ್ಲ. ಗೋಮಾಂಸ ರಫ್ತಿನೊಂದಿಗೆ, ನಮ್ಮ ಭಾರತೀಯ ಆರ್ಥಿಕತೆ ಬಲಗೊಳ್ಳುತ್ತಿದೆ.

ವಾದ 2: ಗೋವುಗಳು ಆಹಾರ ಸಿಗದೇ ಹಸಿವಿನಿಂದ ಬಳಲುವುದಕ್ಕಿಂತ ಅವನ್ನು ಕೊಲ್ಲುವುದು ಉತ್ತಮ.

ವಾದ 3: ನಮ್ಮ ಭೂಮಿಯಲ್ಲಿ ಜನರಿಗೇ ಸ್ಥಾನವಿಲ್ಲ. ಜಾನುವಾರುಗಳಿಗೆ ಸ್ಥಳಾವಕಾಶ ಹೇಗೆ?

ವಾದ4: ನಮ್ಮ ಹೆಚ್ಚಿನ ವಿದೇಶೀ ವಿನಿಮಯದ ಹಣ ಮಾಂಸಾಹಾರ ರಫ್ತುಗಳಿಂದಾಗಿ ಬಂದದ್ದು.

ವಾದ5: ಮಾಂಸವನ್ನು ತಿನ್ನುವುದು ಮುಸ್ಲಿಮರ ಧಾರ್ಮಿಕ ಹಕ್ಕು.

(ಮುಸ್ಲಿಂ ಧರ್ಮದಲ್ಲಿ "ಅತ್ಯಂತ ಹಿಂಸಾತ್ಮಕ ಖುರೈಶಿ" ಮಾಡಿದ ಅತ್ಯಂತ ವ್ಯರ್ಥವಾದ ಹಕ್ಕುಗಳು ಇವು)

ಶ್ರೀ ರಾಜೀವ್ ಭಾಯ್ "ಈ ಎಲ್ಲಾ ಹಕ್ಕುಗಳನ್ನು ಭಾರತೀಯರು ತುಂಬಾ ಕಷ್ಟದಿಂದ ಸಹಿಸಿಕೊಂಡಿದ್ದಾರೆ" ಎಂಬ ವಿಷಯದ ಬಗ್ಗೆ ನ್ಯಾಯಾಲಯವು ಕೇಳಿದ ಎಲ್ಲಾ ಅಂಕಿಅಂಶಗಳನ್ನೂ ಸಲ್ಲಿಸಿದರು.

ಶ್ರೀ ರಾಜೀವ್ ಭಾಯ್ ಅವರ ಉತ್ತರಗಳನ್ನು ಪರಿಶೀಲಿಸೋಣ.

ಆರೋಗ್ಯಕರ ಗೋವು 3 ರಿಂದ 3.5 ಕ್ವಿಂಟಾಲ್ ತೂಗುತ್ತದೆ. ಮಾಂಸಕ್ಕಾಗಿ ವಧಿಸಲ್ಪಟ್ಟಾಗ ಸುಮಾರು 70 ಕೆಜಿ ಮಾಂಸವನ್ನು ಪಡೆಯಲಾಗುತ್ತದೆ. ಈ ಮಾಂಸಕ್ಕೆ ಕೆ.ಜಿ.ಗೆ 50 ರೂ.ನಂತೆ 3,500/- ಹಸುವಿನ ರಕ್ತಕ್ಕೆ 30-35 ಕೆಜಿಗೆ ರೂ. 1500. ಮೂಳೆಗಳಿಗೆ ಸಿಗುವ ಹಣ 1,000/- ದಿಂದ 1,200/- ರೂ

ಹೀಗೆ ಸ್ವಾರ್ಥಕ್ಕಾಗಿ ಒಂದು ಗೋ ಹತ್ಯೆಯಿಂದ ಗಳಿಸುವುದು ಸುಮಾರು7000/- ರೂಗಳು.

ಆರೋಗ್ಯವಾಗಿರುವ ಗೋವು ದಿನಕ್ಕೆ 10 ಕೆ.ಜಿ.ಗೋಮಯ ಮತ್ತು 3 ಲೀ. ಗೋಮೂತ್ರವನ್ನು ನೀಡುತ್ತದೆ. ೧ ಕಿಲೋಗ್ರಾಂ(ಕೆ.ಜಿ.) ಗೋಮಯದಿಂದ 33 ಕೆ.ಜಿ.ಗೊಬ್ಬರವನ್ನು ಉತ್ಪಾದಿಸಲಾಗುತ್ತದೆ. ಇದನ್ನು'ಸಾವಯವಗೊಬ್ಬರ' ಎಂದು ಕರೆಯಲಾಗುತ್ತದೆ.

ಶ್ರೀ ರಾಜೀವ್ ಭಾಯ್'ಯವರೇ"ಅದು ಹೇಗೆ ಸಾಧ್ಯ?" ಎಂದು ಮಾನ್ಯ ನ್ಯಾಯಾಲಯವು ಅವರನ್ನು ಕೇಳಿತು. ನ್ಯಾಯಾಲಯಕ್ಕೆ ಅವರು ಈ ವಿಷಯದ ಬಗ್ಗೆ ವಿವರಿಸಿ, ಆ ಅಂಶಗಳನ್ನು ನ್ಯಾಯಾಲಯವು ಅಂಗೀಕರಿಸಿದ ನಂತರ, ಶ್ರೀ ರಾಜೀವ್'ಭಾಯ್ 33 ಕೆ.ಜಿ.ಸಾವಯವ ಗೊಬ್ಬರವನ್ನು ಉತ್ಪಾದಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. "ಐಆರ್‌ಸಿ ವಿಜ್ಞಾನಿ"ಗಳು ಗೋಮಯದ ಗೊಬ್ಬರವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ಅದನ್ನು 'ಅತ್ಯುತ್ತಮ ಸಾವಯವಗೊಬ್ಬರ' ಎಂದು ಘೋಷಿಸಿದರು. ಈ ಸಾವಯವಗೊಬ್ಬರವು ಭೂಮಿಗೆ 18 ವಿಧಗಳ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ವಿಜ್ಞಾನಿಗಳು ತೀರ್ಮಾನಿಸಿ ತಿಳಿಸಿದ್ದಾರೆ. ಈ ಸೂಕ್ಷ್ಮ ಪೋಷಕಾಂಶಗಳು ಕೃಷಿ ಕ್ಷೇತ್ರದಲ್ಲಿ ಮ್ಯಾಂಗನೀಸ್, ಫಾಸ್ಫೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಕೋಬಾಲ್ಟ್, ಸಿಲಿಕಾನ್ ಇತ್ಯಾದಿ ಸಸ್ಯಪೋಷಕಾಂಶಗಳ ಇರುವನ್ನು ಖಚಿತಪಡಿಸುತ್ತವೆ. ಆದರೆ ರಾಸಾಯನಿಕ ಗೊಬ್ಬರಗಳಲ್ಲಿ ಕೇವಲ 3 ಖನಿಜಾಂಶಗಳಿವೆ.  ರಾಸಾಯನಿಕ ಗೊಬ್ಬರಗಳಿಗಿಂತ ಗೋಮೂತ್ರಗೋಮಯಾಧಾರಿತ ಸಾವಯವಗೊಬ್ಬರವು 10ಪಟ್ಟು ಹೆಚ್ಚು ಪರಿಣಾಮಕಾರ ಎಂದು ಶ್ರೀರಾಜೀವ್ ಭಾಯ್ ತಮ್ಮ ವಾದದಲ್ಲಿ ಹೇಳಿದ್ದಾರೆ. ಈ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.

ಶ್ರೀ ರಾಜೀವ್ ಭಾಯ್ ಅವರು ನ್ಯಾಯಾಲಯವನ್ನು ಕಾನೂನಿನ ಪ್ರಕಾರ ನ್ಯಾಯಾಲಯವು ಅನುಮತಿಸಿದರೆ, ನ್ಯಾಯಾಧೀಶರು ಮನೆಗೆ ಬಂದು - ತಾವು ಮತ್ತು ತಮ್ಮ ಕುಟುಂಬವು ಕಳೆದ 15 ವರ್ಷಗಳಿಂದ 1 ಕೆ.ಜಿ. ಗೋಮಯದಿಂದ 33 ಕೆ.ಜಿ. ಸಾವಯವ ಗೊಬ್ಬರವನ್ನು ಹೇಗೆ ಮಾಡುತ್ತಿದೆ? ಎಂಬುದನ್ನು ನೋಡಲು ಆಹ್ವಾನಿಸಿದರು.

ಶ್ರೀ ರಾಜೀವ್ ಭಾಯ್ ತಮ್ಮ ಹೇಳಿಕೆಯಲ್ಲಿ- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕಿಲೋ ಗ್ರಾಂ ಸಾವಯವಗೊಬ್ಬರದ ಬೆಲೆಯು ಕನಿಷ್ಠ ರೂ.6 ಆಗಿದ್ದರೆ, ಗೋಮಾತೆಯು ದಿನಕ್ಕೆ 1,800/- ರೂ.ಗಳಿಂದ 2,000/- ರೂ.ಆದಾಯ ನೀಡುವಳು. (1 ಕೆ.ಜಿ.ಹಸುವಿನ ಗೊಬ್ಬರದಿಂದ 330 ಕೆ.ಜಿ.ಸಾವಯವ ಗೊಬ್ಬರತಯಾರಾಗುವುದು. 330 × 6/-ರೂ. ಈ ಗೋವುಗಳಿಗೆ ಭಾನುವಾರ ಇಲ್ಲ! ಹಾಗಾಗಿ ಈ ಲೆಕ್ಕಾಚಾರದ ಪ್ರಕಾರ) ಒಂದು ವರ್ಷದಲ್ಲಿ ಅಂದರೆ ರೂ.1800 × 365 = 365 ದಿನಗಳಲ್ಲಿ 6 ಲಕ್ಷ 57ಸಾವಿರ/- ರೂ.ಬೆಲೆಬಾಳುವುದು-ಎಂದು ವಾದಮಂಡಿಸಿದರು.

ಶ್ರೀ ರಾಜೀವ್ ಭಾಯ್ ಅವರ ಪ್ರಕಾರ, ಗೋಮಾತೆಯ 20 ವರ್ಷಗಳ ಆದಾಯವು 1 ಕೋಟಿ, 31 ಲಕ್ಷ ಮತ್ತು 40 ಸಾವಿರ ರೂ.ಗಳನ್ನು ಮೀರಿದೆ ಎಂದು ತಿಳಿಸಿದಾಗ ಆಶ್ಚರ್ಯಚಕಿತರಾದರು.

"ಸಾವಿರಾರು ವರ್ಷಗಳ ಹಿಂದಿನಿಂದಲೂ ಲಕ್ಷ್ಮೀ ಗೋಮಯದಲ್ಲಿ ವಾಸಿಸುತ್ತಿದ್ದಳು" ಎಂದು ನಮ್ಮ ಪೂರ್ವಜರು ಭಾವಿಸಿದ್ದರು ಎಂದು ಶ್ರೀರಾಜೀವ್'ಭಾಯ್ ಸುಪ್ರೀಂಕೋರ್ಟ್'ನಲ್ಲಿ ಅಂಕಿಅಂಶಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿ, ಅದನ್ನು ಅಪಹಾಸ್ಯ ಮಾಡುವವರಿಗೆ ಕಪಾಳಮೋಕ್ಷ ಮಾಡಿದರು.

"ಮೆಕಾಲೆಯ ಶಿಕ್ಷಣಪದ್ಧತಿ"(?)ಯಲ್ಲಿ ಓದಿಕೊಂಡವರು "ಲಕ್ಷ್ಮಿಯು ನಮ್ಮ "ಗೋಮಯದಲ್ಲಿ ವಾಸಿಸುತ್ತಾಳೆ"ಎಂಬಂಶವನ್ನು ಹಲವು ವರ್ಷಗಳಿಂದ ಕುಚೋದ್ಯಮಾಡುವುದನ್ನು ತಪ್ಪುಎಂದು ಈ ರೀತಿ ಸಾಬೀತು ಮಾಡಿದ್ದಾರೆ.ಆ ಬಗ್ಗೆ ಶ್ರೀ ರಾಜೀವ್ ಭಾಯ್ ಅವರ ವಿವರಣೆಯು ಹೀಗಿದೆ.

"ಒಂದು ಗೋವು ದಿನಕ್ಕೆ 2 ಅಥವಾ 2.25 ಲೀ. ಗೋಮೂತ್ರ ನೀಡುತ್ತದೆ. ಇದು ಹಲವಾರು ರೋಗಗಳಿಗೆ ಪರಿಹಾರಕವಾಗಿದ್ದು ಮಧುಮೇಹ, ಕ್ಷಯ, ಸಂಧಿವಾತ, ಮೂಳೆ ರೋಗಗಳಂತಹ ವಿವಿಧ ರೋಗಗಳನ್ನು ಗುಣಪಡಿಸಿ ನಿವಾರಿಸುತ್ತದೆ."

ಭಾರತೀಯ ಮಾರುಕಟ್ಟೆಯಲ್ಲಿ 1 ಲೀ. ಗೋಮೂತ್ರದ ಬೆಲೆ ರೂ 500/-. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಬೆಲೆ ಇನ್ನೂ ಹೆಚ್ಚಾಗಿದೆ. ಯುಎಸ್'ನಲ್ಲಿ "ಗೋಟ್ರಾಮ್ ಪೇಟೆಂಟ"ನ್ನು ಸಹ ಪಡೆದಿರುವರು. ಗೋಮೂತ್ರಕ್ಕೆ 3 ಪೇಟೆಂಟ್‌ಗಳಿವೆ. ಯುಎಸ್'ಸರ್ಕಾರವು ಭಾರತದಿಂದ ಗೋಮೂತ್ರವನ್ನು ಆಮದು ಮಾಡಿಕೊಳ್ಳುತ್ತಿದೆ ಮತ್ತು ಅದರಿಂದ ಕ್ಯಾನ್ಸರ್ ಮತ್ತು ಮಧುಮೇಹಕ್ಕೆ 'medicines' ತಯಾರಿಸುತ್ತಿದೆ.

ಯುಎಸ್'ಗೆ ಗೋಮೂತ್ರ ರಫ್ತು ದರವು ಪ್ರಸ್ತುತ (ದಾವೆ ನಡೆಯುತ್ತಿದ್ದಾಗಿನ ಕಾಲದಲ್ಲಿ) 1,200/-ರೂಪಾಯಿ. ಈ ಲೆಕ್ಕಾಚಾರದ ಪ್ರಕಾರವಾಗಿ ಗೋಮೂತ್ರಕ್ಕೆ ದಿನಕ್ಕೆ 3,000/- ರೂ.

3000 × 365 =10 ಲಕ್ಷ 95ಸಾವಿರರೂ.ಗಳು.

ಗೋವಿನ ಜೀವನದ ಕೇವಲ 20 ವರ್ಷಗಳಲ್ಲಿ ಆದಾಯ ರೂ.

2 ಲಕ್ಷ19ಸಾವಿರ ರೂ.ಗಳು

ಇನ್ನು ಈ ಗೋಮಯವು "ಮೀಥೇನ್" ಎಂಬ ಅನಿಲವನ್ನು ಉತ್ಪಾದಿಸುತ್ತದೆ. ನಾವು ಅದನ್ನು ನಮ್ಮ ಅಡುಗೆಮನೆಗಳಲ್ಲಿ ಅಡುಗೆಬೇಯಿಸಲು ಬಳಸಬಹುದು. ಈ ಅನಿಲದಿಂದ ನಾವು ನಮ್ಮ ದ್ವಿಚಕ್ರವಾಹನ ಮತ್ತು ನಮ್ಮ ಚತುಶ್ಚಕ್ರವಾಹನ(ಕಾರು)ಗಳನ್ನು ಓಡಿಸಬಹುದು.

ತೀರ್ಪುಗಾರರಾದ ನ್ಯಾಯಾಧೀಶರಿಗೆ ಈ ವಾದವನ್ನು ನಂಬಲು ಸಾಧ್ಯವಾಗಲಿಲ್ಲ. ಆಗ ಶ್ರೀ ರಾಜೀವ್'ಭಾಯ್, "ನೀವು ಅನುಮತಿ ನೀಡಿದರೆ, ನಾನು ನಿಮ್ಮ ಕಾರಿನಲ್ಲಿ ಮಿಥೇನ್'ಗ್ಯಾಸ್ ಸಿಲಿಂಡರ್ ಜೋಡಿಸುತ್ತೇನೆ. ನಿಮ್ಮ ಕಾರನ್ನು ಅದರಿಂದ ಓಡಿಸಿದ ನಂತರ ನೀವು ಅದನ್ನು ಪರೀಕ್ಷೆಮಾಡಿಸಿ" ಎಂದು ಹೇಳಿದರು. ಅವರ ಈ ವಾದದಂತೆ ತೀರ್ಪುಗಾರ ನ್ಯಾಯಾಧೀಶರು 'ಮೀಥೇನ್' ಅನಿಲದಿಂದ 3 ತಿಂಗಳುಗಳ ಕಾಲ ತಮ್ಮ ಕಾರನ್ನು ಓಡಿಸಿದರು. ಪ್ರತೀ ಕಿಲೋಮೀಟರಿಗೆ 50 ರಿಂದ 60 ಪೈಸೆಗಿಂತ ಹೆಚ್ಚು ಖರ್ಚು ಮಾಡದೇ ಅವರು ತಮ್ಮ ಕಾರನ್ನು ಓಡಿಸಿದರು.

ಈ ಹಿಂದೆ ಡೀಸೆಲ್ ಬೆಲೆ ಪ್ರತಿ ಕಿ.ಮೀ.ಗೆ 40 ರೂಗಳಿಂದ ಕಾರ್ ನಡೆಸುತ್ತಿದ್ದರು. ಆದರೆ ಗೋಮಯದ ಮಿಥೇನ್ದಿಂದ ವಾತಾವರಣವು ಮಲಿನವಾಗುವುದಿಲ್ಲ ಹಾಗೂ ಮಿತವ್ಯಯಿಯೂ ಹೌದು ಎಂದು ಆ ನ್ಯಾಯಾಧೀಶರು ಶ್ರೀರಾಜೀವ್'ಭಾಯ್ ವಾದಿಸಿದ್ದನ್ನು ಕೇಳಿ ನಿಜವೆಂದು ಒಪ್ಪಿ, ಭಾಯ್'ಯವರನ್ನು ಮುಂದಿನ ಅಂಶಗಳನ್ನು ಪ್ರಸ್ತಾಪಿಸಲು ಅನುಮತಿಯನ್ನಿತ್ತರು. 10 ಕೆ.ಜಿ. ಹಸುವಿನ ಗೊಬ್ಬರದಲ್ಲಿ ಎಷ್ಟು ಮೀಥೇನ್ ಅನಿಲವನ್ನು ಉತ್ಪಾದಿಸಬಹುದು? ಮತ್ತು 20 ವರ್ಷಗಳಲ್ಲಿ ಅದರಿಂದ ದೇಶಕ್ಕೆ ಎಷ್ಟು ಉಳಿತಾಯವಾಗುತ್ತದೆ? ಎಂದು ವಿವರಿಸಿ, ಅವರು ತಮ್ಮ ಅಂಕಿ-ಅಂಶಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ದೇಶದಲ್ಲಿ 17ಕೋಟಿ ಗೋವುಗಳಿದ್ದು 32 ಲಕ್ಷಕೋಟಿ ರೂ. ಬೆಲೆಬಾಳುವುವು ನಮ್ಮ ದೇಶದ ಎಲ್ಲಾ ಸಾರಿಗೆಯು ಮೀಥೇನ್ ಆಧಾರಿತವಾಗಿದ್ದರೆ, ನಾವು ಅರಬ್ಬರ ದೇಶಗಳಿಂದ ಪೆಟ್ರೋಲ್-ಡೀಸೆಲ್ ಅನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ. ನಮ್ಮ ವಿದೇಶೀವಿನಿಮಯವನ್ನುಇಂಧನಕ್ಕಾಗಿ ಖರ್ಚು ಮಾಡುವ ಅಗತ್ಯವಿಲ್ಲ. ನಮ್ಮ ರೂಪಾಯಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲಗೊಳ್ಳುತ್ತದೆ. ಗೋ-ಆಧಾರಿತ ಹಣಕಾಸುವ್ಯವಸ್ಥೆಯ ಕಾರಣದಿಂದಾಗಿ ಇದು ಸಾಧ್ಯವಾಗುವುದು.ಹಿಂದೆ ಇತಿಹಾಸಕಾಲದಲ್ಲಿ ಗೋ-ಆಧಾರಿತ ಹಣಕಾಸುವ್ಯವಸ್ಥೆಯಿಂದಾಗಿಯೇ ಭಾರತದೇಶವೇ ಪ್ರಮುಖ ರಾಷ್ಟ್ರವಾಗಿತ್ತು.

ಈ ವಾದವನ್ನು ಕೇಳಿದ ಸುಪ್ರೀಂಕೋರ್ಟ್ ಆಘಾತಕ್ಕೊಳಗಾಯಿತು ಮತ್ತು ಶ್ರೀ ರಾಜೀವ್ ಭಾಯ್ ಅವರ ಅಂಕಿಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿತು. ಭಾರತದ ಸುಪ್ರೀಂ ಕೋರ್ಟ್(ಎಸ್ಸಿ) ತನ್ನ ಹೇಳಿಕೆಯಲ್ಲಿ- "ರಾಜೀವ್ ಭಾಯ್ ತಿಳಿಸಿರುವ ಸತ್ಯವನ್ನು ಅರಿತುಕೊಂಡಿದ್ದೇವೆ. ಮತ್ತು "ಗೋ-ಕೇರ್" (ಗೋ-ಆಧಾರಿತಹಣಕಾಸುವ್ಯವಸ್ಥೆಯು) ಭಾರತದೇಶದ ಆರ್ಥಿಕಾಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತದೆ" ಎಂದು ಒಪ್ಪಿಕೊಂಡಿದೆ.

ಶ್ರೀ ರಾಜೀವ್ ಭಾಯ್ ಅವರ ವಾದಗಳನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಾಗ ಗೋಕೊಲೆಗಡುಕರ ತಲೆತಿರುಗಿ, ಬೆವರಿ, ಉಸಿರುಗಟ್ಟಿತ್ತು. ಪ್ರಕರಣವು ತಮ್ಮ ಕೈಯಿಂದ ಜಾರುತ್ತಿದೆ ಎಂದು ಅವರು ಅರಿತುಕೊಂಡರು.

ಈ ಹಿಂದೆ "ಸರ್ಕಾರವು 1 ಗೋವಿನಿಂದ 7,000 ರೂ.ಗಿಂತ ಹೆಚ್ಚು ಗಳಿಸುತ್ತಿಲ್ಲ"ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಆಗ ಕೊಲೆಗಡುಕರು "ಗೋಮಾಂಸಭಕ್ಷಣೆ ಮುಸ್ಲಿಮರ ಇಸ್ಲಾಮಿಕ್ ಹಕ್ಕು" ಎಂದು ವಾದಿಸಿದರು.

ಶ್ರೀ ರಾಜೀವ್'ಭಾಯ್  "ಈ ಧಾರ್ಮಿಕ ಹಕ್ಕನ್ನು ಈ ಹಿಂದೆ ಎಷ್ಟು ಇಸ್ಲಾಮಿಕ್ ಆಡಳಿತಗಾರರು ಬಳಸಿದ್ದಾರೆ? ಈ ಧಾರ್ಮಿಕ ಹಕ್ಕನ್ನು ಪ್ರತಿಪಾದಿಸುವ ಇಸ್ಲಾಮಿಕ್ ಗ್ರಂಥಗಳು ಯಾವುವು?" ಎಂದು ವಿಚಾರಮಾಡಿದ ನಂತರ ಸುಪ್ರೀಂಕೋರ್ಟ್ ಈ ವಿಷಯಗಳನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಿತು. ಈ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸಮಿತಿಗೆ ಆದೇಶಿಸಲಾಯಿತು. “ಇಸ್ಲಾಮಿಕ್ ಆಡಳಿತಗಾರರು ಮತ್ತು ಧಾರ್ಮಿಕ ಗ್ರಂಥಗಳು ಮಾಂಸ ತಿನ್ನುವ ಬಗ್ಗೆ ಏನು ಹೇಳಿದರು?ಎನ್ನುವ ಬಗ್ಗೆ ಸಮಿತಿಯು ಐತಿಹಾಸಿಕ ದಾಖಲೆಗಳನ್ನು ಶೋಧಿಸಿ, ತೀರ್ಮಾನಿಸಿತು.

"ಇಸ್ಲಾಮಿಕ್ ಆಡಳಿತಗಾರರು ಗೋವಧೆಯನ್ನು ಬೆಂಬಲಿಸಲಿಲ್ಲ. ವಾಸ್ತವವಾಗಿ, ಕೆಲವು ಆಡಳಿತಗಾರರು ಗೋವಧೆಯ ವಿರುದ್ಧ ಕಾನೂನುಗಳನ್ನು ಜಾರಿಗೆ ತಂದರು. ಅವರ ಮುಖ್ಯಸ್ಥನಾಗಿದ್ದ ಬಾಬರ್ ತನ್ನ "ಬಾಬರ್ ನಮನ" ದಲ್ಲಿ ಗೋವಧೆಯು ಅಪರಾಧ ಮತ್ತು ಈ ದೇಶದಲ್ಲಿ ಇಂತಹ ಅಪರಾಧವು ನಡೆಯಬಾರದು ಎಂದಿದ್ದ ಆ ಕಾಲದ ಕಾನೂನ್ನು ದಾಖಲಿಸಿದ್ದಾರೆ.

ಇದೇ ವೇಳೆ, ಟಿಪ್ಪುಸುಲ್ತಾನನ ತಂದೆ, ದಕ್ಷಿಣದಲ್ಲಿ ಹೈದರ್ ಅಲಿಯು, "ಗೋವನ್ನು ಕೊಂದವನು ನರಕವನ್ನು ಪಡೆಯುವನು"ಎಂದು ತಿಳಿಸಿದ್ದು ಕಂಡುಬರುತ್ತದೆ. ಅನೇಕರು ಇದರಿಂದಾಗಿ ಶಿಕ್ಷೆಗೊಳಗಾಗಿದ್ದರು.

ಟಿಪ್ಪುಸುಲ್ತಾನನು ರಾಜನಾಗಿದ್ದಾಗ, ಅವನು "ಗೋವಧೆಗೆ ಶಿಕ್ಷೆ- ಕೈ ಕತ್ತರಿಸುವುದು" ಎಂದು ಘೋಷಿಸಿದ್ದನು' ಎಂದು ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದಾಗ ಶ್ರೀ ರಾಜೀವ್'ಭಾಯ್ ಅವರ ವಾದವು ಮತ್ತಷ್ಟು ಬಲಪಡೆಯಿತು.

"ಗೋವಧೆಯು ಧಾರ್ಮಿಕಹಕ್ಕಾಗಿದ್ದರೆ, ಇಸ್ಲಾಂಧರ್ಮವನ್ನು ಆಳಿದ ಚಕ್ರವರ್ತಿಗಳಾದ- ಬಾಬರ್, ಹುಮಾಯೂನ್ ಮತ್ತು ಅಂತಿಮವಾಗಿ ಔರಂಗಜೇಬನು ಗೋವಧೆಯ ವಿರುದ್ಧ ಕಾನೂನುಗಳನ್ನು ರಚಿಸಿದ್ದರು ಮತ್ತು ನಂತರ ಅನುಷ್ಠಾನಿಸಲು ಮುಂದಾಳುಗಳಾಗಿದ್ದರು" ಎಂಬ ಐತಿಹಾಸಿಕ ಅಂಶದ ಪ್ರಸ್ತುತಿಯ ನಂತರ ಶ್ರೀರಾಜೀವ್'ಭಾಯ್ ತಮ್ಮ ಪ್ರಮುಖ ವಾದವನ್ನು ಪ್ರಾರಂಭಿಸಿದರು. ಸುಪ್ರೀಂಕೋರ್ಟ್‌ನ ಅನುಮತಿಯೊಂದಿಗೆ, ಪವಿತ್ರ ಕುರಾನ್, ಹದಿದ್ ಮತ್ತು ಉಳಿದ ಇಸ್ಲಾಮಿಕ್ ಧರ್ಮಗ್ರಂಥಗಳನ್ನು ಗೋವಧೆಯ ಬಗ್ಗೆ ಏನು ಹೇಳುವುದು? ಎಂದು ಪರಿಶೀಲಿಸಲು ಮನವಿಮಾಡಲಾಯಿತು. ಯಾವುದೇ ಇಸ್ಲಾಮಿಕ್'ಗ್ರಂಥ/ಪುಸ್ತಕವು ಗೋವಧೆಯನ್ನು ಬೆಂಬಲಿಸುವುದಿಲ್ಲ. ಮತ್ತು "ಸರ್ಕಾರವು ಗೋವನ್ನು ರಕ್ಷಿಸಲಿ, ಅದು ನಿಮ್ಮನ್ನು ರಕ್ಷಿಸುತ್ತದೆ" ಎಂದು

"'ಹದಿದ್'"ನಲ್ಲಿ ಹೇಳಿರುವರು.

ಪ್ರವಾದೀ ಮೊಹಮ್ಮದ್'ನು ಒಬ್ಬ ಮುಗ್ಧಜೀವಿ, ಮತ್ತು ಅವರನ್ನು ಪಿತೃ, ಪ್ರಭು, ಕರುಣಾಮಯಿ ಎಂದು ವರ್ಣಿಸಿದ್ದಾರೆ. ಪ್ರವಾದಿ ಮಹಮ್ಮದ್ ಅವರ ಭವಿಷ್ಯವಾಣಿಯಲ್ಲಿ, "ಗೋಹತ್ಯೆಯನ್ನು ಮಾಡಿದವನಿಗೆ ನರಕದಲ್ಲೂ ಸ್ಥಾನವಿಲ್ಲ." ಎಂದು ಘೋಷಿಸಿರುವರು. ಎಂಬ ಅಂಶವನ್ನು ನ್ಯಾಯಾಲಯಕ್ಕೆ ತಮ್ಮ ವಾದವನ್ನು ಪ್ರಸ್ತುತಪಡಿಸಿದಾಗ ತಿಳಿಸಿರುವರು. ಮುಕ್ತಾಯದ ಹಂತದಲ್ಲಿ, ಶ್ರೀ ರಾಜೀವ್'ಭಾಯ್ ಅವರು ಪವಿತ್ರ ಕುರಾನ್, ಮೊಹಮ್ಮದ್, ಪ್ರವಾದಿ, ಹದೀದ್ ಮತ್ತು "ಗೋವಾಡ್" 'ನಲ್ಲಿ ಇಸ್ಲಾಂಧರ್ಮವು ಹೇಗೆ ? ಎಂದು ವಿವರಿಸುತ್ತಾರೆ. ಮೆಕ್ಕಾ ಮತ್ತು ಮದೀನಾದ ಮುಸ್ಲಿಂ ಮುದುಕವಯಸ್ಕ ಜನರಿಗೆ - "ಈ ಪ್ರಾಣಿಭಕ್ಷಣಕ್ರಮ ಯಾವ ಪುಸ್ತಕ(ಗ್ರಂಥ)ದಲ್ಲಿ ತಿಳಿಸಲಾಗಿದೆ? ಹೇಳಿರಿ... ಎಂದು ಪ್ರಶ್ನಿಸಿದಾಗ ಅವರು"ಅದು ನಮಗೆ ಗೊತ್ತಿಲ್ಲ. ತಿಳಿದಿಲ್ಲ" ಎಂದು ತಿಳಿಸಿದುದನ್ನೂ ಸುಪ್ರೀಂಕೋರ್ಟಿಗೆ ವಿಜ್ಞಾಪಿಸಿದಾಗ ಗೋವುಕೊಲೆಗಾರರು ಓಡಿಹೋದರು.

ಸುಪ್ರೀಂ ಕೋರ್ಟ್ ಪದೇಪದೇ "ಗೋವಧೆ ಧಾರ್ಮಿಕ ಹಕ್ಕು"ಎಂಬುದಕ್ಕೆ ಆಧಾರ ತೋರಿಸಿರಿ ಎಂದು ಆಜ್ಞಾಪೂರ್ವಕ ಆಗ್ರಹಿಸಿತು.

ಈ ಅತ್ಯಂತ ನಿರ್ಣಾಯಕವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ನ್ಯಾಯಾಲಯವು 2005 ರ ಅಕ್ಟೋಬರ್ 26 ರಂದು ತನ್ನ ತೀರ್ಪನ್ನು ಪ್ರಕಟಿಸಿತು.

ಈ ತೀರ್ಪನ್ನು ನೀವು ಸುಪ್ರೀಂ ಕೋರ್ಟ್'ನ ವೆಬ್‌ಸೈಟ್‌ನಲ್ಲಿ ಇಂದಿಗೂ ವೀಕ್ಷಿಸಬಹುದು.

ಸುಪ್ರೀಂ ಕೋರ್ಟ್ ತನ್ನ 61 ಪುಟಗಳ ಐತಿಹಾಸಿಕವಾದ ತೀರ್ಪಿನೊಂದಿಗೆ ದಾಖಲೆ ನಿರ್ಮಿಸಿದೆ."ಗೋವಧೆ/ಹತ್ಯೆಯು ಕಾನೂನಿನ ಪ್ರಕಾರ ಅಪರಾಧವಾಗಿದೆ. ಪ್ರತಿಯೊಬ್ಬ ನಾಗರಿಕನು ಸರ್ಕಾರದ ಸಾಂವಿಧಾನಿಕ ಆದೇಶದಂತೆ ಕರ್ತವ್ಯವಾಗಿ ಗೋವನ್ನು ರಕ್ಷಣೆಮಾಡಬೇಕು" ಅದನ್ನು ಬಲಪಡಿಸಲು ನಾವು ಸಂವಿಧಾನವನ್ನು ರಚಿಸಿದ್ದೇವೆ. ಈಗ ಇದು ಹಸುಗಳ ರಕ್ಷಣೆಯನ್ನೂ ಒಳಗೊಂಡಿದೆ".

ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ "ಎಲ್ಲಾ 34(28+6) ರಾಜ್ಯ ಹಾಗೂ ಕೇಂದ್ರಾಡಳಿತಪ್ರದೇಶಗಳೂ ಗೋಸಂರಕ್ಷಣೆಯನ್ನು ನೋಡಿಕೊಳ್ಳಬೇಕು. ಪ್ರತಿಯೊಬ್ಬ ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಕಾರ್ಯದರ್ಶಿಗಳೂ ಈ ಕಾನೂನಿನ ರಕ್ಷಣೆಯಲ್ಲಿ ಜವಾಬ್ದಾರರು" ಎಂದು ಹೇಳಿಕೆಯಿತ್ತಿದೆ.

ಕರ್ತವ್ಯನಿರತಾದ ಹಿಂದೂ ರಕ್ಷಣಾ ಸಿಪಾಯಿಗಳು ಹಂದಿಕೊಬ್ಬುಲೇಪಿತ ಗುಂಡುಗಳನ್ನು ಬಾಯಿಂದ ಕಚ್ಚಿ ಕೋವಿಗೆ ತುಂಬಲು ನಿರಾಕರಿಸಿದಾಗ, ಆ ಸಿಪಾಯಿಗಳಿಗೆ ಅದಕ್ಕಾಗಿ ಆಗ್ರಹಿಸಿದ ಬ್ರಿಟಿಷ್'ಅಧಿಕಾರಿಯನ್ನು ದೇಶಭಕ್ತ"ಶ್ರೀ ಮಂಗಲ್ ಪಾಂಡೆಯು ಗುಂಡಿಕ್ಕಿ ಕೊಂದರು. ಈ ಘಟನೆಯು ನಮ್ಮ ಮೊದಲ ಸ್ವಾತಂತ್ರ್ಯ ಅಭಿಯಾನ ಮತ್ತು ಗೋಕೇರ್ (ಗೋಸಂರಕ್ಷಣಾಂದೋಲನವ)ಅನ್ನು ಪ್ರಾರಂಭಿಸಲು ಕಾರಣವಾಯಿತು. ಶ್ರೀ ಮಂಗಲ್'ಪಾಂಡೆ ಮಾಡಿದ ತ್ಯಾಗ, ಬಲಿದಾನವನ್ನು ನಾವು ಮರೆತರೆ ನಮ್ಮ ಕೃತಜ್ಞತಾಬುದ್ಧಿಯನ್ನು ಕಳೆದುಕೊಂಡು, ಕೃತಘ್ನರಾಗುತ್ತೇವೆ.

ಗೋವಿನ ಆರೈಕೆ, ಸಂರಕ್ಷಣೆಯು ಪ್ರತಿಯೊಬ್ಬ ಭಾರತೀಯ ನಾಗರೀಕನ ಕರ್ತವ್ಯವಾಗಿದೆ. ಆ ಕರ್ತವ್ಯವು ಸಂವಿಧಾನ ಬದ್ಧವಾಗಿದೆ. ಗೋಹತ್ಯಾ ತಪ್ಪು, ಎಲ್ಲಿಯಾದರೂ ಸಂಭವಿಸಿದಲ್ಲಿ ಅದನ್ನು ತಡೆಯುವುದು ಅಪರಾಧವಲ್ಲ. ಇದು ಸುಪ್ರೀಂಕೋರ್ಟ್‌ನ ತೀರ್ಪು. ವಂದೇ ಗೋಮಾತರಂ ಭಾರತೀಯರ ರಾಷ್ಟ್ರೀಯ ಸಾಕು ಪ್ರಾಣಿಯಾದ ದನಕರುಹಸುಗಳು “ಶ್ರೀಲಕ್ಷ್ಮೀನಿವಾಸಿ”ಗಳೂ ಹೌದು !!

"ಶುಭಂ-ಸ್ವಸ್ತಿ- ಮಂಗಲಂ" ಗೋವುಗಳನ್ನು ರಕ್ಷಣೆ ಮಾಡಿ ದಯಮಾಡಿ ದೇಶಭಕ್ತರು ಮತ್ತು ಧರ್ಮದ ಬಗ್ಗೆ ಗೋವಿನ ಬಗ್ಗೆ ಗೌರವ ಇದ್ದರೆ ಶೇರ್ ಮಾಡಿ ಎಲ್ಲರಿಗೂ ವಿಚಾರ ತಿಳಿಸಿ.

August 26, 2021

ಯಜ್ಞೇನ ಯಜ್ಞಮಯಜಂತ ದೇವಾಃ

 ಯಜ್ಞ ಎಂದಾಕ್ಷಣ ಅದರಲ್ಲಿ ಬಲಿಯನ್ನು ಕಲ್ಪಿಸಿಕೊಂಡು ಹಿಂದಿನ ನಮ್ಮವರೆಲ್ಲಾ ಪ್ರಾಣಿ ಹಿಂಸಕರಾಗಿದ್ದರು ಮತ್ತು ಮಾಂಸಾಹಾರ ಸಾಮಾನ್ಯವಾಗಿತ್ತು ಎನ್ನುವ ಮಂದಿಗೆ ಕೆಲವೊಂದು ಮಂತ್ರಗಳ ಹಿನ್ನೆಲೆ ತಿಳಿದಿರಬೇಕು ಮತ್ತು ಒಂದು ಸೂಕ್ತದ ಎಲ್ಲಾ ಮಂತ್ರಗಳನ್ನು ನೋಡಿ ಮಾತನಾಡಬೇಕು ಎನ್ನುವ ಪರಿಜ್ಞಾನ ಕಡಿಮೆ ಇರುತ್ತದೆ. ಯಜ್ಞ ನಡೆಯುತ್ತದೆ ಎಂದರೆ ಯೂಪ ನೆಡುತ್ತಾರೆ ಅದು ಬಲಿ ಪೀಠ ಎನ್ನುವುದು ಕಲ್ಪನೆ ಅಷ್ಟೆ. ಈಗ ಒಂದು ಮಂತ್ರ ಗಮನಿಸುವೆ. . . .

ಯಜ್ಞೇನ ಯಜ್ಞಮಯಜಂತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ |
ತೇ ಹ ನಾಕಂ ಮಹಿಮಾನಃ ಸಚಂತ ಯತ್ರ ಪೂರ್ವೇ ಸಾಧ್ಯಾಃ ಸಂತಿ ದೇವಾಃ ||
ಯಜ್ಞವನ್ನು ಮಾಡುವವರು ಯಜ್ಞದಿಂದಲೇ ಯಜ್ಞವನ್ನು ಮಾಡಿದರು. ಯಜ್ಞವನ್ನು ಯಜ್ಞದಿಂದಲೇ ಮಾಡಿದ ಕರ್ಮವು ಅತ್ಯಂತ ಶ್ರೇಷ್ಠವಾಗಿದ್ದವು. ಅದಕ್ಕಿಂತ ಹಿಂದಿನವರು ಮತ್ತು ಹಿಂದೆ ಮಾಡಿದ ಯಾಗದಲ್ಲಿ ಬಳಸಿದ ಯಜ್ಞ ಸಾಧನಗಳನ್ನು ಹೊಂದಿದವರೂ ಮತ್ತು ದೇವತ್ವವನ್ನು ಪಡೆದವರೂ ಜೊತೆ ಸೇರಿ ಸ್ವರ್ಗವನ್ನು ಅನುಭವಿಸಿದರು. ಈ ಯಾಗದ ಯಜಮಾನರೂ ಸಹ ತಮ್ಮ ಸಾಮರ್ಥ್ಯದಿಂದ ಸ್ವರ್ಗವನ್ನು ಅನುಭವಿಸುತ್ತಾರೆ.
ಇದು ಸಾಮಾನ್ಯವಾಗಿ ದಿನವೂ ನಾವು ಹೇಳುವ ಮಂತ್ರದ ಒಂದು ಭಾಗ. ಸಾಮಾನ್ಯವಾಗಿ ಈ ಮಂತ್ರ ಮತ್ತು ತೈತ್ತೀರೀಯ ಆರಣ್ಯಕ(೧:೩೧:೬)ದ ರಾಜಾಧಿ ರಾಜಾಯ. . . ಎನ್ನುವ ಮಂತ್ರಗಳು ಪ್ರಮುಖವಾಗಿ ನಾವು ಬದುಕುತ್ತಿರುವ ಈ ರಾಷ್ಟ್ರ ಮತ್ತು ನಮ್ಮ ವಯಕ್ತಿಕ ಬದುಕಿನ ದಾರಿದ್ರ್ಯ ನಿವಾರಣೆ ಮಾಡುತ್ತವೆ ಎನ್ನುವ ನಂಬುಗೆಯೂ ಅನೇಕರಲ್ಲಿದೆ. ಅದೇನೇ ಇರಲಿ ನನ್ನ ವಿಷಯ ಅದಲ್ಲ, ಇಲ್ಲಿರುವ ಯಜ್ಞಮಯಜಂತ ದೇವಾಃ ಎನ್ನುವುದು. ಅಗ್ನೇರೇವ ಮೂರ್ತಿಭೇದೇನ ದೇವತ್ವಂ ಚ ಪಶುತ್ವಂ ಚ ದೃಷ್ಟವ್ಯಂ ಎನ್ನುವುದಾಗಿ ಸಾಯಣಾಚಾರ್ಯರು ಹೇಳುತ್ತಾರೆ. ಅಂದರೆ ಅಗ್ನಿಯನ್ನೆ ದೇವರೆಂದೂ, ಪಶುಗಳೆಂದು ತಿಳಿಯಬೇಕು ಎನ್ನುತ್ತಾರೆ. ಇಲ್ಲಿ ದೇವಾಃ ಎನ್ನುವುದು ಅಗ್ನಿಯನ್ನು ಕುರಿತಾಗಿಯೂ ಮತ್ತು ಯಜಮಾನರನ್ನು ಕುರಿತಾಗಿಯೂ ಆಗಬಹುದು.
ಇನ್ನು ತ ಏತೇ ಸರ್ವೇ ಪಶವೋ ಯದಗ್ನಿಃ | ತಸ್ಮಾದಗ್ನೌ ಪಶವೋ ರಮಂತೇ ಶತಪಥ ಬ್ರಾಹ್ಮಣದಲ್ಲಿ ಬರುವ ಈ ಮಂತ್ರ ಅಗ್ನಿಯೇ ಆಹುತಿಯಾಗಿರುವ ಪಶುಗಳು. ಪಶುಗಳೆಲ್ಲಊ ಅಗ್ನಿಯ ಸಮೀಪದಲ್ಲಿರಲು ಸಂತೋಷ ಪಡುತ್ತವೆ ಆದುದರಿಂದ ಅಗ್ನಿ ಇರುವಲ್ಲಿ ಪಶು ಸಂಪತ್ತು ಯಥೇಚ್ಛವಾಗಿ ಒದಗಿ ಬರುವುದು ಎನ್ನುವಲ್ಲಿ ಪಶುಗಳೆಂದರೆ ಅಗ್ನಿ ಎನ್ನುವುದನ್ನು ಕಟ್ಟಿಕೊಡಲಾಗಿದೆ. ಹೀಗೇ ಪ್ರಜಾಪತಿಯೂ ಸಹ ಅಗ್ನಿಯ ಇನ್ನೊಂದು ರೂಪ ಎನ್ನಲಾಗಿದೆ. ಅಂದರೆ ಪಶುಯಾಗ ಅಥವಾ ಪಶುವಿಧಿ ಎನ್ನುವುದು ಸಾಮಾನ್ಯವಾದ ಯಜ್ಞಕ್ಕೂ ಹೇಳಬಹುದಾಗಿದೆ. ಅಲ್ಲಿ ಪಶುಬಲಿ ಮಾಡಲೇ ಬೇಕೆನ್ನುವ ಅರ್ಥವಲ್ಲ. ಈ ರೀತಿ ಅಗ್ನಿಯನ್ನೇ ಪಶುವೆಂದು ತಿಳಿಯುವ ಯಜ್ಞಾಚರಣೆಯೇ ತಾನಿ ಧರ್ಮಾಣಿ ಪ್ರಥಮಾನ್ಯಾಸನ್ ಆ ರೀತಿಯ ಕರ್ಮಗಳೇ ಅತ್ಯಂತ ಶ್ರೇಷ್ಠವಾದವುಗಳಾಗಿದ್ದವು ಎನ್ನುವಲ್ಲಿ ಯಜ್ಞದಲ್ಲಿನ ಪಶುಬಲಿಯ ವಿವರಣೆ ಅತ್ಯಂತ ಸಮಂಜಸವಾಗಿಯೇ ಕಾಣುತ್ತದೆ. 

August 23, 2021

ಸ ಚಿತ್ರ ಚಿತ್ರಂ ಚಿತಯಂತಮಸ್ಮೇ


ನವಗ್ರಹಗಳಲ್ಲಿ ಒಬ್ಬನಾದ ಚಂದ್ರ ಸ್ವಾಯಂಭುವ ಮನ್ವಂತರದವನಂತೆ. ಈತ ಅತ್ರಿ ಮಹರ್ಷಿಯ ಮಗ ಎನ್ನುವುದಾಗಿ ಭಾಗವತ ಪುರಾಣ ಹೇಳುತ್ತದೆ. ಬ್ರಹ್ಮನು ಒಮ್ಮೆ ಅತ್ರಿ ಮುನಿಯನ್ನು ಸೃಷ್ಟಿ ಕಾರ್ಯದಲ್ಲಿ ನಿಯಮಿಸಿದ. ಅತ್ರಿ ತಪೋನಿರತನಾಗಿದ್ದ ಸಮಯದಲ್ಲಿ ಆತನ ಕಣ್ಣಿನಿಂದ ದಿವ್ಯವಾದ ತೇಜಸ್ಸೊಂದು ಹೊರ ಹೊಮ್ಮುತ್ತದೆ. ಆ ತೇಜಸ್ಸನ್ನು ಹತ್ತು ದಿಕ್ಕುಗಳು ಸ್ವೀಕರಿಸಿದವು ಆದರೆ ಆ ತೇಜಸ್ಸಿನ ವೇಗವನ್ನು ಹಿಡಿದಿಟ್ಟುಕೊಳ್ಳಲು ಆಗಲಿಲ್ಲ. ಆಗ ಅದನ್ನು ಕ್ಷೀರ ಸಾಗರದಲ್ಲಿ ಬಿಟ್ಟವು. ಬ್ರಹ್ಮ ಆ ತೇಜಸ್ಸನ್ನೆಲ್ಲಾ ಒಟ್ಟು ಗೂಡಿಸಿ ಪುರುಷಾಕಾರ ಕೊಟ್ಟು ಒಬ್ಬ ವ್ಯಕ್ತಿಯಾಗುವಂತೆ ಮಾಡಿ ಆತನಿಗೆ ಚಂದ್ರ ಎನ್ನುವ ಹೆಸರಿಡುತ್ತಾನೆ. ಆತನನ್ನು ಗ್ರಹಮಂಡಲದಲ್ಲಿ ಒಬ್ಬನಾಗಿರುವಂತೆ ನಿಯಮಿಸುತ್ತಾನೆ. ಆಮೇಲೆ ಕ್ರಮೇಣ ಈತನನ್ನು ಸೋಮನೆನ್ನುವ ಹೆಸರಿನಿಂದ ಸಹ ಕರೆಯಲಾರಂಭಿಸುತ್ತಾರೆ. ಇದು ಬ್ರಹ್ಮಾಂಡ ಪುರಾಣದಲ್ಲಿ ಬರುವ ಕಥೆ.

ಚಂದ್ರನನ್ನು ಇಷ್ಟಪಡದ ಜೀವಿ ಇದ್ದಿರಲಿಕ್ಕಿಲ್ಲ. ಜಗತ್ತಿನ ಪ್ರತಿಯೊಂದು ಜೀವಿಯ ಮೇಲೂ ಚಂದ್ರ ಅಗಾಧವಾದ ಪ್ರಭಾವವನ್ನು ಬೀರುತ್ತಾನೆ. ಚಿಕ್ಕ ಮಗುವನ್ನು ಸಮಾಧಾನ ಪಡಿಸಲೂ ಉಪಯೋಗಿಸುವುದು ಚಂದ್ರನನ್ನೇ. ಚಂದಮಾಮಾ ಎಂದು ಸಂಬಂಧವಾಚಕನಾಗಿ ಕರೆಸಿಕೊಳ್ಳುವ ಈತ ಮನಸ್ಸಿನ ಮೇಲೆ ಪರಿಣಾಮ ಬೀರುವವನು. ಸಾಂದ್ರ ಬೆಳಕನ್ನು ಕರುಣಿಸುವ ಚಂದ್ರ ಜ್ಯೋತಿಷ್ಯದಲ್ಲೂ ಸಹ ಮನುಷ್ಯನ ಹುಟ್ಟಿನ ರಾಶಿಯನ್ನು ನಿರ್ಧರಿಸುತ್ತಾನೆ.
ಚಂದ್ರನು ಶಿವನ ತಲೆಯಲ್ಲಿ ಕೆಲವೊಮ್ಮೆ ಬಲಕ್ಕೂ ಕೆಲವೊಮ್ಮೆ ಎಡಕ್ಕೂ ಇರುವುದು ಗಮನಕ್ಕೆ ಬರುತ್ತದೆ. ಈತನನ್ನು ಅಗ್ನಿಯ ಸ್ಥಾನದಲ್ಲಿ ವೇದ ನಮಗೆ ದೊರಕಿಸಿಕೊಡುತ್ತದೆ. ಇಲ್ಲಿ ಅಗ್ನಿ ಎನ್ನುವುದು ಶಕ್ತಿಗೆ.  ಇಂತಹ ಶಕ್ತಿಯ ಪರಿಭ್ರಮಣವನ್ನು ಆ ಕಾಲದಲ್ಲಿಯೇ ಹೇಳಲಾಗಿತ್ತು. ಯಾವ ಇಂದಿನ ಸಾಧನವೂ ಇಲ್ಲದೇ ಅಂದು ಚಂದ್ರ ಚಲನಶೀಲ ಮತ್ತು ದ್ಯಾವಾ ಪೃಥಿವಿಗಳಿಗೆ ಆತನ ಸಂಪರ್ಕವನ್ನು ಹೇಳಲಾಗಿರುವುದು ಆಶ್ಚರ್ಯವನ್ನು ತರುತ್ತದೆ.

ಸ ಚಂದ್ರೋ ವಿಪ್ರಮರ್ತ್ಯೋ ಮಹೋ ವ್ರಾಧ ನ್ತಮೋ ದಿವಿ |
ಪ್ರಪ್ರೇತ್ತೇ ಅಗ್ನೇ ವನುಷಃ ಸ್ಯಾಮ || ಇದು ಋಗ್ವೇದ ಒಂದನೇ ಮಂಡಲದ ಇಪ್ಪತ್ತೊಂದನೇ ಸೂಕ್ತ.
ಮೇಧಾವಿಯಾದ ಎಲೈ ಅಗ್ನಿಯೇ, ಯಾವ ಮಾನವನು ನಿನ್ನನ್ನು ಯಜ್ಞಾದಿಗಳಿಂದ ಪೂಜಿಸುತ್ತಾನೆಯೋ ಆ ಮಾನವನು ಸ್ವರ್ಗಲೋಕದಲ್ಲಿ ಮನೋಹ್ಲಾದಕರ ಚಂದ್ರನ ಸ್ಥಾನವನ್ನು ಪಡೆಯುತ್ತಾನೆ. ದೇವತೆಗಳಿಗಿಂತಲೂ ಹೆಚ್ಚಿನ ಸ್ಥಾನ ಹೊಂದುತ್ತಾನೆ. ಆದುದರಿಂದ ಅಗ್ನಿಯೇ ನಾವೂ ಸಹ ನಿನ್ನನ್ನು ಆರಾಧಿಸುತ್ತೇವೆ ನೀನೂ ನಮ್ಮನ್ನು ಅದೇ ರೀತಿ ಅನುಗ್ರಹಿಸು ಎನ್ನಲಾಗಿದೆ. ಇಲ್ಲಿ ಚಂದ್ರನನ್ನು ಅಗ್ನಿಯನ್ನಾಗಿ ಹೇಳಲಾಗಿದೆ.

‘ಚಂದ್ರಃ’ ನನ್ನು ಎರಡು ರೀತಿಯಲ್ಲಿ ಅರ್ಥೈಸಲಾಗಿದೆ. ಒಂದು ಅಗ್ನಿಯನ್ನು ಆರಾಧಿಸುವವನು“ಸರ್ವೇಷಾಂ ಆಹ್ಲಾದಕಃ ಚಂದ್ರಃ ಎಂದಾಗಿ ಎಲ್ಲರಿಗೂ ಆಹ್ಲಾದವನ್ನುಂಟು ಮಾಡುವ ಚಂದ್ರನ ಕಾಂತಿಯಂತೆ ಕಾಂತಿಯನ್ನುಂಟುಮಾಡುವವನು. ಮತ್ತೊಂದು ಚಂದ್ರಸ್ಚಂದತೇಃ ಚಂದಃ ಕಾಂತಿಕರ್ಮಣಃ ಕಾಂತಿಯುತವಾದುದೂ ನೋಡಲು ರಮ್ಯವಾದುದು ಎಂಬ ಅರ್ಥವನ್ನು ಕೊಡುತ್ತದೆ ಎನ್ನುವುದು ನಿರುಕ್ತಕಾರರ ಅಭಿಮತ. ಚಂದ್ ಎನ್ನುವ ಧಾತುವಿನಿಂದ ಚಂದ್ರ ಪದ ಹುಟ್ಟಿದೆ ಎಂದು ಹೇಳಿ ಅಗ್ನಿಯ ಆರಾಧಕನು ಕಾಂತಿಯುಕ್ತನಾಗುತ್ತಾನೆ. ಹಾಗೂ ಯಜಮಾನಾನಾಂ ಚಂದ್ರತ್ವ ಪ್ರಾಪ್ತಿಃ ಎನ್ನುವುದು ಛಾಂದೋಗ್ಯ ಉಪನಿಷತ್ತಿನ ಮಾತು. ಯಜಮಾನನಿಗೆ ಚಂದ್ರತ್ವ ಪ್ರಾಪ್ತಿಯಾಗುತ್ತದೆ ಎನ್ನುತ್ತದೆ.

ಸಂಚಕ್ಷ್ಯಾ ಮರುತಶ್ಚಂದ್ರವರ್ಣಾ ಅಚ್ಚಾಂತ ಮೇ ಛಧಯಾಥಾ ಚ ನೂನಂ || ಇದು ಒಂದನೇ ಮಂಡಲದ ಇಪ್ಪತ್ತಮೂರನೇ ಸೂಕ್ತದಲ್ಲಿ ಬರುವ ಋಕ್ಕು. ಇಲ್ಲಿ ಮರುತಶ್ಚಂದ್ರವರ್ಣಾಃ ಎಂದು ಬಂದಿದೆ, ಚಿನ್ನದಂತೆ ಅತ್ಯಂತ ರಮಣೀಯವಾದ ಬಣ್ಣವನ್ನು ಹೊಂದಿರುವವನು ಎಂದು ಅರ್ಥೈಸಲಾಗಿದೆ.

ಸ ಚಿತ್ರ ಚಿತ್ರಂ ಚಿತಯಂತಮಸ್ಮೇ ಚಿತ್ರಕ್ಷತ್ರ ಚಿತ್ರತಮಂ ವಯೋಧಾಂ |
ಚಂದ್ರಂ ರಯಿಂ ಪುರುವೀರಂ ಬೃಹಂತಂ ಚಂದ್ರ ಚಂದ್ರಾಭಿರ್ಗೃಣತೇ ಯುವಸ್ವ || ಇದು ಋಗ್ವೇದದ ಆರನೇ ಮಂಡಲದ ಋಕ್ಕು.
ಆಕರ್ಷಕನೂ, ವಿಚಿತ್ರವಾದ ಬಲವುಳ್ಳವನೂ, ಆಹ್ಲಾದಕರ ರೂಪವುಳ್ಳವನೂ ಆದ ಎಲೈ ಅಗ್ನಿಯೇ ಪ್ರಸಿದ್ಧನಾದ ನೀನು ಆಹ್ಲಾದವನ್ನುಂಟುಮಾಡುವ ಸ್ತುತಿಗಳಿಂದ ನಿನ್ನನ್ನು ಸ್ತುತಿಸುವ ನಮಗೆಲ್ಲಾ ಆಕರ್ಷಕವಾದುದೂ, ನಮ್ಮ ಕರ್ತವ್ಯವನ್ನು ಜ್ಞಾಪಿಸತಕ್ಕದ್ದೂ, ಆಶ್ಚರ್ಯಕಾರಕವಾದುದೂ, ಅನ್ನವನ್ನು ಕೊಡತಕ್ಕದ್ದೂ, ವೀರ ಪುತ್ರಾದಿಗಳಿಂದ ಕೂಡಿದುದೂ, ಪ್ರಭೂತವಾದುದೂ ಆದ ಸಂಪತ್ತನ್ನು ವಿಭಾಗಮಾಡಿ ಕೊಡು. ಎಂದು ಈ ಸೂಕ್ತ ದೃಷ್ಟಾರ ಋಷಿ ಹೇಳುತ್ತಾನೆ.

ಚಂದ್ರಮಾ ಅಪ್ಸ್ವನ್ತತರಾ ಸುಪರ್ಣೋ ಧಾವತೇ ದಿವಿ|
ಇದು ಒಂದನೇ ಮಂಡಲದ ೧೦೫ನೇ ಸೂಕ್ತದ ಋಕ್ಕು. ಅಂತರಿಕ್ಷದಲ್ಲಿರುವ ಮಂಜಿನಿಂದಾವೃತವಾದ(ಉದಕಮಯ)ಮಂಡಲದ ಮಧ್ಯದಲ್ಲಿ ಮನೋಹರವಾಗಿ ಸಂಚರಿಸುತ್ತಿರುವ ಚಂದ್ರನು ಒಂದೇ ವೇಗದಲ್ಲಿ(ನಿರ್ದಿಷ್ಟವಾದ ವೇಗದಲ್ಲಿ) ಸ್ವರ್ಗಲೋಕದಲ್ಲಿ ಸಂಚರಿಸುತ್ತಿರುತ್ತಾನೆ. ಹೊಂಬಣ್ಣದ ಅಂಚಿನೊಂದಿಗೆ ಪ್ರಕಾಶಮಾನವಾದ ಎಲೈ ಚಂದ್ರಕಿರಣಗಳೇ ನಾನು ಬಾವಿಯಲ್ಲಿ ಬಿದ್ದಿರುವುದರಿಂದ ನಿಮ್ಮ ಪ್ರಕಾಶ ಯಾವುದು ಎನ್ನುವುದನ್ನು ನಾನು ತಿಳಿದುಕೊಳ್ಳಲು ಅಶಕ್ತನಾಗಿದ್ದೇನೆ. ನನ್ನ ಕಣ್ಣುಗಳು ಅದನ್ನು ಅರಿಯಲಾರವು. ಎಲೈ ದ್ಯಾವಾಪೃಥಿವಿಗಳೇ ನನ್ನನ್ನು ಈ ಬಾವಿಯಿಂದ ಮೇಲಕ್ಕೆತ್ತಿ ನನ್ನನ್ನು ಪಾರುಮಾಡಿ ಎಂದು ತ್ರಿತನು ಬೇಡಿಕೊಳ್ಳುತ್ತಾನೆ. 

ತಮುಕ್ಷಮಾಣಂ ರಜಸಿ ಸ್ವ ಆ ದಮೇ ಚಂದ್ರಮಿವ ಸುರುಚಂ ಹ್ವಾರ ಆ ದಧುಃ |
ಇದು ಎರಡನೇ ಮಂಡಲದ ಎರಡನೇ ಸೂಕ್ತ. ಚಿನ್ನದಂತೆ ಹೊಳೆಯುವ ಕಾಂತಿಯುಳ್ಳವನೂ, ಅಂತರಿಕ್ಷದಲ್ಲಿ ಸಂಚರಿಸುವವನೂ, ತನ್ನ ಜ್ವಾಲಾರೂಪದ ಅವಯವಗಳಿಂದ ಚೈತನ್ಯವನ್ನುಂಟು ಮಾಡುವವನೂ, ಉದಕದಂತೆ ರಕ್ಷಕನೂ, ದ್ಯಾವಾ ಪೃಥಿವಿಗಳೆರಡನ್ನೂ ವ್ಯಾಪಿಸಿರುವವನೂ, ಅಂತರಿಕ್ಷದಲ್ಲಿ ಎಲ್ಲೆಡೆ ಮಳೆ ಸುರಿಸುವವನೂ, ಪೂಜ್ಯನೂ ಆದ ಚಂದ್ರನಂತಿರುವ ಅಗ್ನಿಯನ್ನು ಸ್ವಕೀಯವೂ ನಿರ್ಜನವೂ ಆದ ಯಾಗ ಗೃಹದಲ್ಲಿ ಸ್ಥಾಪಿಸುತ್ತಾರೆ.

ಚಂದ್ರಮಾ ಮನಸೋ ಜಾತಶ್ಚಕ್ಷೋ ಸೂರ್ಯೋ ಅಜಾಯತ |
ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾದ್ವಾಯುರಜಾಯತ || ಋಗ್ವೇದ ೧೦ : ೯೦
ಈ ವಿರಾಟ್ ಪುರುಷನ ಮನಸ್ಸಿನಿಂದ ಚಂದ್ರನೂ, ಕಣ್ಣಿನಿಂದ ಸೂರ್ಯನೂ, ಮುಖದಿಂದ ಇಂದ್ರ ಮತ್ತು ಅಗ್ನಿಯರೂ, ಪ್ರಾಣದಿಂದ ವಾಯುವೂ ಹುಟ್ಟಿದನು. ಚಂದ್ರಮಾಶ್ಚಾಯನ್ ದ್ರಮತಿ ಎನ್ನುವುದು ನಿರುಕ್ತದ ಮಾತು. ಚಂದ್ರ ಅವನ ಪಥದಲ್ಲಿ ಪ್ರಕಾಶಮಾನನಾಗಿ ಸುತ್ತುತ್ತಾನಂತೆ ಅದಕ್ಕಾಗಿಯೇ ಆತನಿಗೆ ಚಂದ್ರ ಎಂದು ಕರೆಯಲಾಗುತ್ತದೆ. ಭೂಮಿ ಮತ್ತು ಆಕಾಶಗಳೆರಡರಲ್ಲೂ ಪ್ರಕಾಶವನ್ನು ಕೊಡುವವನು. ಮನಸ್ಸಿಗೆ ಅತ್ಯಂತ ಮುದವನ್ನು ಕೊಡುವವನು ಎಂದು ಹೇಳುವುದರೊಂದಿಗೆ ಚಂದ್ರ ಮನಸ್ಸಿನಂತೆ ಮೃದು ಎನ್ನುವುದನ್ನೂ ಸೂಚಿಸಲಾಗಿದೆ. ಚಂದ್ರಮಾ ಮನಸೋ ಜಾತಃ ವಿರಾಟ್ ಪುರುಷನ ಮನಸ್ಸಿನಿಂದಲೇ ಜನಿಸಿದವನು ಚಂದ್ರ.

ಪರಮ ಪುರುಷನ ಕಣ್ಣುಗಳಿಂದ ಸೂರ್ಯನ ಜನವಾಯಿತು ಎನ್ನುವಲ್ಲಿ ಕಣ್ಣಿಗೂ ಬೆಳಕಿಗೂ ಸಂಬಂಧವನ್ನು ಚಕ್ಷೋಃ ಸೂರ್ಯೋ ಅಜಾಯತ ಎನ್ನಲಾಗಿದ್ದು, ಸೂರ್ಯನೇ ಜಗತ್ತಿನ ಜೀವಿಗಳಿಗೆ ಕಾರಣನು ಎನ್ನುವುದು ಸೂಕ್ಷ್ಮವಾದ ಅರ್ಥ. ಮನಸ್ಸು ಸದಾ ಪ್ರಶಾಂತವಾದ ಆಹ್ಲಾದವಾದ ವಾತಾವರಣ ಇಷ್ಟ ಪಡುತ್ತದೆ ಎನ್ನುವುದನ್ನೇ ಚಂದ್ರಮಾ ಮನಸೋ ಜಾತಃ ಎನ್ನಲಾಗಿದೆ. ಜೀವಿಗಳ ದೇಹದ ಒಳಗಿರುವ ವಾಯುವಿಗೆ ಪ್ರಾಣ ಎಂದು ಕರೆಯುವುದಾದರೆದೇಹದಿಂದ ಹೊರತಾಗಿ ಪ್ರಕೃತಿಯಲ್ಲಿ ಇರುವ ವಾಯುವು ವಾಯು ಎಂದು ಕರೆಯಲಾಗುತ್ತದೆ. ಅಂದರೆ ವಾಯುವಿನ ಗುರುತು ಹಚ್ಚುವುದೇ ಪ್ರಾಣ. ಹೀಗೇ ಪ್ರಕೃತಿ ಮತ್ತು ಜೀವಿಗಳ ಅವಿನಾಭಾವ ಸಂಬಂಧವನ್ನು ಹೇಳಲಾಗಿದೆ.

#ಚಂದ್ರಮಾ_ಮನಸೋಜಾತಃ_ಪುನರ್ಮನನ
ಶ್ರೀ ಸದ್ಯೋಜಾತರು..

August 22, 2021

ಅರಸನ ಆಯ್ಕೆ


ಒಂದು ಊರಿನಲ್ಲಿ ಒಬ್ಬ ಅರಸನಿದ್ದನು. ಅವನು ತುಂಬಾ ಚತುರ, ಪ್ರಾಮಾಣಿಕ ಹಾಗೂ ಧೈರ್ಯಶಾಲಿಯಾಗಿದ್ದನು. ಅವನ ಆಡಳಿತ ಕಾಲದಲ್ಲಿ ಪ್ರಜೆಗಳೆಲ್ಲರೂ ಕ್ಷೇಮದಿಂದಿದ್ದರು. ಹಾಗಾಗಿ ಆಸ್ಥಾನಿಕರು ಮತ್ತು ಪ್ರಜೆಗಳೆಲ್ಲರೂ ಅವನನ್ನು ತುಂಬಾ ಪ್ರೀತಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು. ಒಮ್ಮೆ ರಾಜನಿಗೆ ಒಂದು ಆಲೋಚನೆ ಉಂಟಾಯಿತು. ಇದುವರೆಗೂ ನನ್ನ ಪ್ರಜೆಗಳು ನನ್ನ ಆಡಳಿತದಿಂದ ಸುಖವಾಗಿದ್ದಾರೆ. ಈಗ ನನಗೆ ವೃದ್ಧಾಪ್ಯ ಸಮೀಪಿಸುತ್ತಿದೆ. ನನ್ನ ನಂತರದಲ್ಲಿ ಈ ಸಿಂಹಾಸನವನ್ನು ಏರುವವನು ಪ್ರಾಮಾಣಿಕವಾದ ಆಡಳಿತ ನಡೆಸಿ, ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದಕ್ಕಾಗಿ ಕೇವಲ ತನ್ನವರಿಗಲ್ಲದೆ ತನ್ನ ಪ್ರಾಂತ್ಯದ ಎಲ್ಲಾ ಯುವಕರಿಗೂ ಒಂದು ಅವಕಾಶ ಕೊಡಬೇಕೆಂದು, ಅದಕ್ಕಾಗಿ ಒಂದು ಸಣ್ಣ ಪರೀಕ್ಷೆ ಮಾಡಬೇಕೆಂದು ಯೋಚಿಸಿ ಈ ವಿಚಾರವನ್ನು ತನ್ನ ಆಪ್ತಸಲಹೆಗಾರನಿಗೆ ತಿಳಿಸಿದನು. 

ಮಂತ್ರಿಯು ಅವನ ಯೋಚನೆಯನ್ನು ಪ್ರೋತ್ಸಾಹಿಸಿ ಒಂದು ನಿಗದಿತ ಸಮಯದಲ್ಲಿ ಪ್ರಾಂತ್ಯದ ಎಲ್ಲಾ ತರುಣರಿಗೂ ರಾಜನ ಆಸ್ಥಾನಕ್ಕೆ ಬರಲು ಡಂಗೂರ ಸಾರಿಸಿದನು. ಎಲ್ಲಾ ತರುಣರಿಗೂ ತಮಗೆ ಆಸ್ಥಾನದಿಂದ ಬಂದ ಕರೆಗೆ ಆಶ್ಚರ್ಯ ಹಾಗೂ ಕುತೂಹಲ ಉಂಟಾಯಿತು. ಅಂದು ಎಲ್ಲರೂ ಶಿಸ್ತಿನಿಂದ ರಾಜನ ಮುಂದೆ ಹಾಜರಿದ್ದರು. ರಾಜ ಎಲ್ಲರ ಕೈಯಲ್ಲೂ ಒಂದೊಂದು ಬೀಜವನ್ನಿಟ್ಟು ಈ ಬೀಜವನ್ನು ಚೆನ್ನಾಗಿ ಪೋಷಿಸಿ ಆರು ತಿಂಗಳ ನಂತರ ತಂದು ತೋರಿಸುವಂತೆ ಹೇಳಿದನು. ತರುಣರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕುಂಡದಲ್ಲಿ ಫಲವತ್ತಾದ ಮಣ್ಣು ಮತ್ತು ಗೊಬ್ಬರ ಹಾಕಿ ಪೋಷಿಸತೊಡಗಿದರು. ಅದು ಸುಂದರವಾದ ಹೂವಿನ ಗಿಡವಾಗಿ ಬೆಳೆಯಿತು. ಒಂದೊಂದು ಕುಂಡದಲ್ಲಿಯೂ ಬೆಳೆದ ಹೂಗಳು ಅತ್ಯಾಕರ್ಷಕವಾಗಿದ್ದವು. ಎಲ್ಲರಿಗೂ ತಮ್ಮ ಪರಿಶ್ರಮದ ಮೇಲೆ ಅಪಾರ ನಂಬಿಕೆ ಇತ್ತು. 

ಆರು ತಿಂಗಳ ನಂತರ ರಾಜನ ಆಜ್ಞೆಯ ಮೇರೆಗೆ ಎಲ್ಲರೂ ತಾವು ಬೆಳೆದ ಹೂ ಕುಂಡಗಳನ್ನು ಅತಿ ಹೆಮ್ಮೆಯಿಂದ ರಾಜನ ಆಸ್ಥಾನಕ್ಕೆ ತಂದಿರಿಸಿದರು, ಕ್ರಮಬದ್ಧವಾಗಿ ಜೋಡಿಸಿದ ಆ ಕುಂಡಗಳು ಆಸ್ಥಾನವನ್ನು ಒಂದು ಸುಂದರ ಉದ್ಯಾನವನ್ನಾಗಿ ಮಾಡಿತ್ತು. ಆಸ್ಥಾನದಲ್ಲಿರುವವರಿಗೆ ತಾವು ಸ್ವರ್ಗದಲ್ಲಿರುವಂತೆ ಭಾಸವಾಯಿತು. ರಾಜನು ತುಂಬಾ ಸಂತೋಷಗೊಂಡು ಒಬ್ಬೊಬ್ಬರನ್ನೇ ಕರೆದು ಅವರು ಬೆಳೆಸಿದ ರೀತಿಯನ್ನು ಸಮಾಧಾನದಿಂದ ಕೇಳಿ, ಪರಿಶ್ರಮವನ್ನು ಶ್ಲಾಘಿಸಿ ಬೆನ್ನು ತಟ್ಟಿ ಹುರಿದುಂಬಿಸಿದನು. ಆದರೂ ಅವರಾರಿಗೂ ರಾಜನ ಉದ್ದೇಶ ಅರ್ಥವಾಗಲಿಲ್ಲ. 

ಕೊನೆಯಲ್ಲೊಬ್ಬ ಮಣ್ಣು ತುಂಬಿದ ಕುಂಡವನ್ನು ತನ್ನ ಮುಂದೆ ಇಟ್ಟುಕೊಂಡು ನಾಚಿಕೆಯಿಂದ ತಲೆತಗ್ಗಿಸಿ ನಿಂತಿದ್ದನು. ಅವನೊಬ್ಬ ಬಡಹುಡುಗ. ಹೆಸರು ಲಾವ್. ರಾಜನು ಅವನನ್ನು ತನ್ನ ಬಳಿಗೆ ಕರೆದಾಗ ಬಡಪಾಯಿ ಲಾವ್ ಹೆದರಿಕೊಂಡು ರಾಜನ ಮುಂದೆ ಬಂದು ತಲೆಬಾಗಿ ನಿಂತನು. ಉಳಿದವರು ಗಿಡವಿಲ್ಲದ ಕುಂಡವನ್ನು ನೋಡಿ ಅಪಹಾಸ್ಯ ಮಾಡಿ ನಕ್ಕರು. ರಾಜನು ಆತನನ್ನು ಕರೆದು ಕುಂಡದ ಈ ಸ್ಥಿತಿಗೆ ಕಾರಣ ಕೇಳಿದಾಗ, ಆ ತರುಣ ಹೇಳಿದ, "ಕ್ಷಮಿಸಿ ಮಹಾರಾಜ ನಾನು ಎಲ್ಲರಂತೆ ಫಲವತ್ತಾದ ಮಣ್ಣು ಮತ್ತು ಗೊಬ್ಬರವನ್ನು ಹಾಕಿ ಕಾಲ ಕಾಲಕ್ಕೆ ನೀರನ್ನು ಹಾಕಿದ್ದೇನೆ. ಆದರೂ ತಾವು ಕೊಟ್ಟಿ ಬೀಜ ಮೊಳಕೆಯೊಡೆಯಲಿಲ್ಲ. ಹಾಗಾಗಿ ಬರಿದಾದ ಕುಂಡವನ್ನು ತಂದಿದ್ದೇನೆ. ಇದಕ್ಕಾಗಿ ನೀವು ವಿಧಿಸುವ ಶಿಕ್ಷೆಗೆ ನಾನು ಸಿದ್ಧನಿದ್ದೇನೆ" ಎಂದು ವಿನಮ್ರನಾಗಿ ಕೈಕಟ್ಟಿ ನಿಂತ. ತಕ್ಷಣ ರಾಜ ಸಿಂಹಾಸನದಿಂದ ಎದ್ದು ಬಂದು ಆನಂದದಿಂದ ಲಾವ್ ನನ್ನು ಬಾಚಿ ಅಲಂಗಿಸಿಕೊಂಡನು. ಅಲ್ಲಿದ್ದವರಿಗೆ ರಾಜನ ವರ್ತನೆಯಿಂದ ಆಶ್ಚರ್ಯವಾಯಿತು. 

ನಂತರ ರಾಜ ಸಭೆಯನ್ನು ಉದ್ದೇಶಿಸಿ ಹೇಳಿದ, "ಸಭಿಕರೇ, ನನ್ನ ನಂತರ ರಾಜ್ಯದ ಆಡಳಿತವನ್ನು ನೋಡಿಕೊಳ್ಳಲು ಒಬ್ಬ ಸಮರ್ಥ ಯುವಕ ಬೇಕೆಂದು ಒಂದು ಪರೀಕ್ಷೆ ಮಾಡಿದೆ. ಅದರಲ್ಲಿ ಲಾವ್ ಉತ್ತೀರ್ಣನಾಗಿದ್ದಾನೆ. ನಾನು ಕೊಟ್ಟ ಬೀಜಗಳು ಬೆಂದು ಕಾಳುಗಳು. ಬೆಂದು ಕಾಳುಗಳು ಎಂದಿಗೂ ಬೆಳೆಯುವುದಿಲ್ಲ. ಎಲ್ಲರೂ ಕಾಳನ್ನು ಬದಲಿಸಿ ಸುಂದರವಾಗ ಹೂಗಿಡಗಳನ್ನು ಬೆಳೆಸಿ ನನ್ನ ಮೆಚ್ಚುಗೆ ಗಳಿಸಲು ಯತ್ನಿಸಿದರು. ಆದರೆ ಲಾವ್ ತನ್ನ ಪ್ರಾಮಾಣಿಕತೆ ಹಾಗೂ ಧೈರ್ಯದಿಂದ ನಿಜ ಸಂಗತಿಯನ್ನು ತಿಳಿಸಿದ್ದಾನೆ. ಉತ್ತಮ ರಾಜನಾಗುವ ಎಲ್ಲಾ ಅರ್ಹತೆ ಇವನಲ್ಲಿರುವ ಕಾರಣ ಇಂದಿನಿಂದ ಇವನೇ ಈ ರಾಜ್ಯದ ಉತ್ತರಾಧಿಕಾರಿಯಾಗುತ್ತಾನೆ" ಎಂದು ಘೋಸಿದ. ಮಂತ್ರಿಗಳು ಹರ್ಷದಿಂದ ರಾಜನಿಗೆ ಜೈಕಾರ ಹಾಕಿದರು. ತರುಣರ ತಂಡ ನಾಚಿಕೆಯಿಂದ ತಲೆತಗ್ಗಿಸಿತು.

August 21, 2021

ಕಾಲ ಬದಲಾಗಿದೆಯಾ?! No chance!

ನನ್ನ ಎಲ್ಲಾ ಹಿಂದೂ ಅಕ್ಕ, ಅಣ್ಣ, ತಮ್ಮ, ತಂಗಿ ಹಾಗೂ ನನ್ನ ಎಲ್ಲಾ ಹಿಂದೂ ಬಾಂಧವರೇ ನಿಮಗೆ ಕೈ ಮುಗಿಯುವೆ🙏🏻. ದಯವಿಟ್ಟು  ಇದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ..

ಕಾಲ ಬದಲಾಗಿದೆಯಾ??
      No chance
       ಬದಲಾಗಿಲ್ಲ.  

ಸಾಮಾಜಿಕ ಜಾಲತಾಣದಲ್ಲಿ ಅನ್ಯ ಧರ್ಮೀಯರ ಜೊತೆ *Selfie* ತೆಗೆಸಿಕೊಂಡ ಹಿಂದೂ ಹುಡುಗಿಯರ ಫೋಟೊಗಳು ಕಾಣಸಿಗುತ್ತವೆ.....
ಆದರೆ, ಹಿಂದೂ ಯುವಕರ ಜೊತೆ ಅನ್ಯ ಧರ್ಮೀಯ ಯುವತಿಯರ *Selfie* ಫೋಟೊಗಳು ಕಾಣಸಿಗುವುದಿಲ್ಲ ಯಾಕೆ?

ಉತ್ತರ ಹೀಗಿರಬಹುದೆ :
ನಮ್ಮ ಅಪ್ಪ, ಅಮ್ಮ, ಮಗಳಿಗೆ ಉತ್ತಮ ಸಂಸ್ಕ್ರತಿ, ಸಂಸ್ಕಾರ ಕಲಿಸಿರುವುದಿಲ್ಲ, ಯಾರ ಭಯವಿಲ್ಲ, ನಮ್ಮ ಹೆಣ್ಣು ಮಕ್ಕಳಿಗೆ...

ಮಹಿಳೆಯರಲ್ಲಿ ಕ್ಷಮೆ ಕೇಳುತ್ತಾ,
ಒಂದು ಸಣ್ಣ ವಿಚಾರ:-

ಕಾಲ ನಮಗಷ್ಟೆ Change ಆಗಿದೆಯಾ...!?
ಇಂದಿಗೂ ಮುಸ್ಲಿಂ ಮಹಿಳೆಯರು *ಬುರ್ಖಾ* ತೊಡುವುದು ನಿಲ್ಲಿಸಿದ್ದಾರಾ..?
ಕ್ರಿಶ್ಚಿಯನ್ ಮಹಿಳೆಯರು *ಶಿಲುಬೆ* ತೊಡುವುದು ನಿಲ್ಲಿಸಿದ್ದಾರಾ..?
ಹಿಂದೂ ಮಹಿಳೆಯರು *ಕುಂಕುಮ* ಇಡುವುದನ್ನು, *ಕಾಲುಂಗುರ* ತೊಡುವುದನ್ನು, *ಮಾಂಗಲ್ಯ* ಧರಿಸುವುದನ್ನೇ ಮರೆತಿದ್ದಾರೆ ಅಲ್ಲವೇ?
ಕೇಳಿದ್ರೆ *My life, my rule, my fashion* ನನ್ನ ಇಷ್ಟ ಅಂತಾರೆ....
ಹಿಂದೂ ಮಹಿಳೆಯರಿಗಷ್ಟೆ *fashion* ಇರೋದಾ...?

ಇನ್ನು ಹುಡುಗರ ವಿಚಾರ..
ಮುಸ್ಲಿಮರು *Skull cap, ಟೋಪಿ, ನಮಾಜ್* ನಿಲ್ಲಿಸಿದ್ದಾರಾ..?

ಮುಸ್ಲಿಂ ಮಹಿಳೆಗೆ ಬಸ್ಸಿನಲ್ಲಿ  Seat ಬಿಟ್ಟು ಕೊಡೋದು ನಿಲ್ಲಿಸಿದ್ದಾರ..?

ರಸ್ತೆ ದಾಟಲು ಅನುವು ಮಾಡಿಕೊಡುವುದು ನಿಲ್ಲಿಸಿದ್ದಾರಾ..?

ನಮ್ *ಹಿಂದೂ ಹುಡುಗರು* atleast ಹಣೆಗೆ *ತಿಲಕ* ಇಡೋದಕ್ಕೂ ಹಿಂದೆ ಮುಂದೆ ನೋಡ್ತಾರೆ..
ದೇವಸ್ಥಾನಕ್ಕೆ ಹೋಗೋದು ವರ್ಷಕ್ಕೊಮ್ಮೆಯಾಗಿದೆ ಎಂದು ಹೇಳಬೇಕಿಲ್ಲ.. ಗೊತ್ತಿರೋದೆ ಅಲ್ವ..?

ನಮ್ಮ *ಹಿಂದೂ ಯುವಕ ಯುವತಿಯರ* *Facebook wall* ನಲ್ಲಿ
*Muslim wishes* ನೋಡಿದಿರಿ *Christmas wishes* ನೋಡಿದಿರಿ...
But *Muslim or Chrisrian fb wall ಗಳಲ್ಲಿ ಗಣೇಶ, ಹೋಳಿ, ದೀಪಾವಳಿ wishes* ನೋಡಿದೀರಾ..?
ಸಾಧ್ಯವಿಲ್ಲ..
ಇದನ್ನೆಲ್ಲಾ ವಿಷ್ಲೇಶಿಸಿದಾಗ ನಮಗೆ ತಿಳಿಯೋ ಸತ್ಯ:-
ಮಕ್ಕಳಿಗೆ ನಾವು ( *parents* ) ಸರಿಯಾಗಿ ಮನೆಯಲ್ಲಿ ಧರ್ಮ ಶಿಕ್ಷಣ ಕೊಡುತ್ತಿಲ್ಲ ಎಂದರ್ಥ.

ನಾವು ಮಕ್ಕಳನ್ನು ಕರೆದುಕೊಂಡು *mall* ಗೆ ಹೋಗುತ್ತೇವೆಯೇ ವಿನಃ ವಾರಂತ್ಯದಲ್ಲಿ ದೇಗುಲಕ್ಕಲ್ಲಾ.. ಸತ್ಯವಾ?..

ಇದು ಇಂದಿನ *parents* ಮಕ್ಕಳಿಗೆ ಕೊಡುತ್ತಿರುವ ಶಿಕ್ಷಣ... ಸರಿಯೇ...?
ಯಾಕೆ ಬೇರೆಯವರ ತಾಯಿ ನಮಗೂ ತಾಯಿಯಲ್ಲವೇ..

( *So called ಸಾಧಕರು* ) ಬಗ್ಗೆ ಪುಟಗಟ್ಟಲೆ ಬರೆಯೋ ನಾವು, ರಾಮನ, ಕೃಷ್ಣನ ಬಗ್ಗೆ ಬರೆಯೋದಿಲ್ಲ ಯಾಕ್ ಹೇಳಿ?...
ಅಯ್ಯೋ *ಮುಸ್ಲಿಂ friends* ಬೇಜಾರು ಮಾಡ್ಕೋತಾರೆ ಅಂತಾ... ಅಲ್ವಾ?
ನೋಡಿ ಬಸ್ಸಿನಲ್ಲಿ ಗಂಟೆಗಟ್ಟಲೆ ಪ್ರಯಾಣ ಮಾಡ್ತೀವಿ, ಸಿನಿಮಾ ಥಿಯೇಟರ್ ಗಳಲ್ಲಿ ಗಂಟೆಗಟ್ಟಲೆ ಕಳಿತೀವಿ, ಅದೂ ದುಡ್ಡು ಕೊಟ್ಟು... ದುಡ್ಡಿಲ್ಲದೇ ದೇವರ ಮುಂದೆ ಕಾಲು ಗಂಟೆ ಧ್ಯಾನ ಮಾಡೋಕೆ ನಮಗೆ *time* ಇಲ್ಲ.. ಮಕ್ಕಳಿಗೆ ಕಲಿಸುವ ಮಾತು ಬೇರೆ ಇರಲಿ , ನಮಗೇ ಟೈಮ್ ಇಲ್ಲ.. ಇನ್ನೊಂದು... ಇವೆಲ್ಲಾ 
ನಮ್ಮೊಬ್ಬರ ಕೈಯಿಂದ ಆಗುತ್ತಾ..! ಅಂತೀವಿ... ಯಾಕೀ ಉಡಾಫೆ ಮಾತು..!?
Atleast ನಾವು ನೀವು ಪ್ರಯತ್ನ ಮಾಡೋಣ...

ಇಡೀ ಹಿಂದೂ ಸಮಾಜವನ್ನು ಅಧೋಗತಿಗೆ ತರ್ತಿರೋದು *ನೀವೇ ನೀವೇ ನೀವೇ*.... 

ಹನಿ ಹನಿ ಕೂಡಿದರೆ ಹಳ್ಳ ಅಲ್ಲವೇ...
ತುಂಬಾ ಇದೆ ಹೇಳ್ತಾ ಹೋದ್ರೆ..

ಇಲ್ಲಿಯ ಈ ಮಣ್ಣು ಸಾಧಾರಣ ಮಣ್ಣಲ್ಲ..
ವಿದ್ಯಾರಣ್ಯ, ವಾಲ್ಮೀಕಿಯ ಶುದ್ಧಗೈದು ರಾಮಾಯಣ ಬರೆಸಿದ ಪುಣ್ಯಭೂಮಿ ಇದು..
ಇಲ್ಲಿ ವಿಷ್ಲೇಶಿಸಿರುವ ವಿಷಯ ಸಮಸ್ತ ಹಿಂದೂ ಸಮಾಜದವರಿಗಾಗಿ.. 

ಶೇರ್ ಮಾಡಿ, ಅದಕ್ಕೂ ಭಯವೇ? ಸಂಕೋಚವೇ? ಅಳುಕೇ?

*BE PROUD TO BE A HINDU - YOU BELONG TO THE MIGHTIEST, MOST POWERFUL & STRONGEST OF THE NOBLE RELIGIONS THIS WORLD EVER CREATED IN THE HISTORY OF MANKIND.*

*SUCH A GREAT RELIGION CAN NEVER BE AGAIN CREATED NOR BE DESTROYED BUT WE PEOPLE CAN WEAKEN IT BY OUR NEGLIGENCE.*

*JAI HIND, JAI HINDUSTHAN*

August 20, 2021

ಕುಬೇರ ಮತ್ತು ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್

ಕುಬೇರ ಮತ್ತು ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್ 

ಕುವೇರ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವವನೇ ಕುಬೇರ ಎಂದೂ ಸಹ ಕರೆಯಲ್ಪಡುತ್ತಾನೆ. ಈತ ವಿಶ್ರವಸನೆಂಬ ಬ್ರಹ್ಮನಿಗೆ ಹುಟ್ಟಿದವನು. ಅದಕ್ಕಾಗಿ ವೈಶ್ರವಣ ಎಮದೂ ಕರೆಯಲಾಗುತ್ತದೆ. ಕುಬೇರ ಎಂದು ಕೆಲವು ಕಡೆಗಳಲ್ಲಿ ಹೇಳಿದರೆ, ಮಹಾಭಾರತದ ವನಪರ್ವದಲ್ಲಿ ಪುಲಸ್ತ್ಯ ಮಹರ್ಷಿಗೆ ಗೋ ಎಂಬಾಕೆಯಲ್ಲಿ ಜನಿಸಿದವನು ಎಂದು ಹೇಳಲಾಗಿದೆ. ಈತನನ್ನು ಉತ್ತರ ದಿಕ್ಕಿಗೆ ಅಧಿಪತಿ ಎಂದು ಹೇಳಲಾಗುತ್ತದೆ. ಆದುದರಿಂದ ಈತನನ್ನು ಸೋಮನೆನ್ನುವ ಇನ್ನೊಂದು ಹೆಸರಿನಿಂದ ಸಹ ಕರೆಯಲಾಗುತ್ತದೆ. ಅದೇ ಕಾರಣಕ್ಕೆ ಉತ್ತರಾಶಾಪತಿ ಎಂದೂ ಹೇಳುತ್ತಾರೆ. ಸಂಪತ್ತಿನ ಒಡೆಯನಾದುದರಿಂದ ಧನಪತಿ, ಅಥವಾ ಧನಾಧಿಪ ಎಂದು ಕರೆಯಲಾಗುತ್ತದೆ. ವಿತ್ತೇಶ, ಅರ್ಥಪತಿ ಮತ್ತು ಶ್ರೀದಃ ಎಂದರೂ ಇದೇ ಕುಬೇರ. ಇಳಾವಿಲನ ಮಗನಾದ್ದರಿಂದ ಏಳಾವಿಲ ಅಥವಾ ಐಡಾವಿಲ ಎಂದೂ ಕರೆಯುತ್ತಾರೆ. ಇನ್ನು ಯಕ್ಷರಿಗೆ ಅಧಿಪತಿಯಾಗಿದ್ದರಿಂದ ಯಕ್ಷೇಶ ಎನ್ನಲಾಗುತ್ತದೆ. ನಲಕೂಬರನೆಂಬ ಮಗನನ್ನು ಹೊಂದಿದ್ದ ಈತ ಅಲಕಾನಗರವನ್ನು ಆಳುತ್ತಿದ್ದ ಎನ್ನುವುದು ಪುರಾಣಗಳಿಂದ ತಿಳಿದು ಬರುತ್ತದೆ. ಈತನ ಪತ್ನಿಯನ್ನು ಋದ್ಧಿ ಎಂದು ಕೆಲವೆಡೆ ಹೇಳಿದ್ದರೆ, ಈತನ ಮಡದಿಯನ್ನು ಭದ್ರೆ ಎನ್ನುವುದಾಗಿ ಮಹಾಭಾರತದ ಆದಿಪರ್ವದಲ್ಲಿ ಹೇಳಲಾಗಿದೆ. ಕುಬೇರನಿಗೂ ಮುಚುಕುಂದನಿಗೂ ನಡೆದ ಕ್ಷತ್ರಿಯ ಧರ್ಮದ ಸಂವಾದ ಈ ಹಿಂದೆ ನಾನು ಬರೆದಾಗಿದೆ. ಈತ ಲಂಕೆಯನ್ನು ಆಳುತ್ತಿದ್ದ, ಆಗ ಈತನ ಮಲತಾಯಿ ಮಕ್ಕಳಾದ ರಾವಣ ಕುಂಭಕರ್ಣರೇ ಮೊದಲಾದವರು ಇವನನ್ನು ಯುದ್ಧದಲ್ಲಿ ಸೋಲಿಸಿ ಲಂಕೆಯನ್ನೂ ಮತ್ತು ಈತನಲ್ಲಿದ್ದ ಪುಷ್ಪಕ ವಿಮಾನವನ್ನು ಕಸಿದುಕೊಂಡು ಕಳಿಸಿದ್ದು ರಾಮಾಯಣದಲ್ಲಿ ಮತ್ತು ದೇವೀಭಾಗವತದಲ್ಲಿ ಸಿಗುತ್ತದೆ. ಹೀಗೇ ಇವಿಷ್ಟೂ ಪುರಾಣಗಳಲ್ಲಿಯಾದರೆ ವೇದಗಳಲ್ಲಿ ಕುಬೇರನ ಹೆಸರು ನೇರವಾಗಿ ಪ್ರಸ್ತಾಪಿಸಿದಂತಿಲ್ಲ. ಶತಪಥಬ್ರಾಹ್ಮಣದಲ್ಲಿ ಕುಬೇರನ ಹೆಸರು ಕಾಣಿಸಿಕೊಳ್ಳುತ್ತದೆ. ಆದರೆ ಕುಬೇರ ಅನ್ನುವ ಹೆಸರಿಲ್ಲದಿದ್ದರೂ ದೇವಸಖ ಎನ್ನುವ ಹೆಸರಿನಿಂದ ಸ್ತುತಿಸಲ್ಪಟ್ಟದ್ದು ನೋಡಬಹುದು.

ಓಂ ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿನಾ ಸಹ |
ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ || ಎನ್ನುವ ಈ ಮಂತ್ರದಲ್ಲಿ ದೇವಸಖಃ ಎಂದಿರುವುದು ಇದೇ ಕುಬೇರನನ್ನು. ಕುಬೇರನ ಮಂತ್ರಿಯೇ ಮಣಿಭದ್ರ ಎನ್ನುವವನು. ಈ ಕುಬೇರನ ಅಭಿಮಾನಿ ದೇವತೆ ಕೀರ್ತಿ ಎನ್ನುವುದು ಭಾಷ್ಯಕಾರರ ಅಭಿಮತ. ಈ ಮಂತ್ರದ ಭಾವಾರ್ಥವನ್ನು ನೋಡುವುದಾದರೆ, ಹೇ ದೇವಿಯೇ ಮಹಾದೇವನ ಮಿತ್ರನಾದ ದೇವಸಖನೆಂದು ಕರೆಯಲ್ಪಡುವ ಕುಬೇರನೂ, ಮತ್ತು ಕೀರ್ತಿಗೆ ಅಭಿಮಾನಿ ದೇವತೆಯಾದ ದಕ್ಷಕನ್ಯೆಯೂ, ಕುಬೇರನ ಕೋಶಾಧ್ಯಕ್ಷನಾದ ಮಣಿಭದ್ರನೆಂಬವನ ಜೊತೆ ನನಗೆ ಅನುಗ್ರಹ ಮಾಡುವುದಕ್ಕಾಗಿ ನನ್ನ ಸಮೀಪಕ್ಕೆ ಬರಲಿ ಎನ್ನುವುದಾಗಿ ಆನಂದ ಋಷಿ ಕೇಳಿಕೊಳ್ಳುತ್ತಾನೆ. ಈ ರಾಷ್ಟ್ರದಲ್ಲಿ ನಾನು ಜನಿಸಿರುವುದೇ ನಿನ್ನ ಅನುಗ್ರಹ ಸಂಪಾದನೆಗಾಗಿ. ಆದುದರಿಂದ ನನಗೆ ಕುಬೇರನು ಅತ್ಯುನ್ನತವಾದ ಕೀರ್ತಿ ಮತ್ತು ಐಶ್ವರ್ಯದೊಡನೆ ಸುಖ ಮತ್ತು ಭೋಗವಸ್ತುಗಳನ್ನು ನೀಡಲಿ ಎನ್ನುವ ಆಶಯ ವ್ಯಕ್ತಪಡಿಸಿದ್ದಾನೆ.
ಹಿಂದೊಮ್ಮೆ ಕುಬೇರನು ಉಗ್ರವಾದ ತಪ್ಪಸ್ಸನ್ನು ಆಚರಿಸುತ್ತಾನೆ. ತಪಸ್ಸಿಗೆ ಮೆಚ್ಚಿ ಪರಮೇಶ್ವರ ಪ್ರತ್ಯಕ್ಷನಾಗುತ್ತಾನೆ. ಈತನ ತಪಸ್ಸಿಗೆ ಮೆಚ್ಚಿ ಸಂಪತ್ತಿನ ಒಡತಿಯಾದ ಲಕ್ಷ್ಮಿಯನ್ನು ಕುಬೇರನ ವಶದಲ್ಲಿರುವಂತೆ ಅನುಗ್ರಹಿಸುತ್ತಾನೆ. ಮುಂದೆ ಕುಬೇರನ ಗೃಹದಲ್ಲಿ ಲಕ್ಷ್ಮೀ ಸದಾ ವಾಸಮಾಡುತ್ತಾಳೆ. ಈ ಕಾರಣಕ್ಕಾಗಿಯೇ, ಅಂದರೆ ಲಕ್ಷ್ಮಿಯ ಅನುಗ್ರಹ ಬೇಕಿದ್ದರೆ ಈ ಮಂತ್ರ ಪಠಣಮಾಡಿ ಅನುಗ್ರಹ ಪಡೆದುಕೊಳ್ಳಬೇಕು. ಕುಬೇರನ ಪ್ರಾರ್ಥನೆಯಿಂದ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಎಂದು ಈಶಾನ ಸಂಹಿತೆ ಹೇಳುತ್ತದೆ. 

’ಕೀರ್ತಿಶ್ಚ ಮಣಿನಾ ಸಹ’ ಎನ್ನುವ ಈ ಭಾಗದ ಕುರಿತಾಗಿ ಭಾಷ್ಯಕಾರರಲ್ಲಿ ಎರಡು ಅರ್ಥಗಳಿದ್ದು ಮಣಿ ಎನ್ನುವುದು ಸಂಪತ್ತೂ ಆಗಬಹುದು ಅಥವಾ ಕುಬೇರನ ಕೋಶಾಧ್ಯಕ್ಷನೂ ಆಗಬಹುದು. ಎರಡೂ ಭಾವ ಒಂದೇ. ಇನ್ನು ಕೀರ್ತಿ ಎನ್ನುವವಳು ಯಶಸ್ಸಿನ ಅಭಿಮಾನ ದೇವತೆ. ಕೀರ್ತಿ ಎನ್ನುವುದು ಯಶಸ್ಸಿನ ದೇವತೆ ಮಾತ್ರವಲ್ಲ ಲಕ್ಷ್ಮಿಯ ಒಂದು ಶಕ್ತಿಯ ವಿಧವೂ ಹೌದು ಆದುದರಿಂದಲೇ ’ಉಪೈತು ಮಾಂ’ ನನ್ನನ್ನು ಸಮೀಪಿಸಲಿ ಮತ್ತು ’ಕೀರ್ತಿಮೃದ್ಧಿಂ ದದಾತು ಮೇ’ ನನಗೆ ಯಶಸ್ಸು, ಕೀರ್ತಿ ಮತ್ತು ಇವೆರಡರ ಜೊತೆಗೆ ಸಂಪತ್ತು ಸಹ ದೊರಕಲಿ ಎನ್ನುವುದು ಋಷಿಯ ಕೋರಿಕೆ. ಈಗ ಸಹ ಈ ಪರಿಸ್ಥಿತಿ ಭಿನ್ನವಾಗಿಲ್ಲ ಅನ್ನಿಸುತ್ತದೆ. ಕೀರ್ತಿ ಮತ್ತು ಯಶಸ್ಸುಗಳೆಲ್ಲ ಶ್ರೀಮಂತರನ್ನೇ ಆಶ್ರಯಿಸುತ್ತವೆ. ಬಡವ ಇನ್ನೂ ಬಡವನಾಗುತ್ತಾ ಇರುತ್ತಾನೆ. ಯಶಸ್ಸು ಕೀರ್ತಿ ಎಲ್ಲ ದೂರದ ಮಾತಾಗಿರುತ್ತದೆ. ಇನ್ನು ಬಡತನವಿದ್ದೂ ಯಾವುದೋ ಕೀರ್ತಿಗಳಿಸಿಕೊಂಡರೂ ಅದು ನಗಣ್ಯವೆನ್ನಿಸಿಬಿಡುತ್ತದೆ. ಬಡವನನ್ನು ಕಂಡರೆ ಶ್ರೀಮಂತರು ಮಾತ್ರವಲ್ಲ ಬಂಧು ಬಾಂಧವರೆಲ್ಲ ದೂರ ಸರಿಯುತ್ತಾರೆ. ಆತನ ವಿದ್ಯೆ ಸಹ ಆತನ ಬಡತನ ನೀಗಿಸುವುದಿಲ್ಲ. ಬಡವನ ಮನೆಯ ಕುಬೇರ ಸಹ ಲಕ್ಷ್ಮೀರಹಿತನಾಗಿರುತ್ತಾನೆ. ಅದೇನೇ ಇರಲಿ ಈ ಮಂತ್ರದಂತೆ ರಾತ್ರಿಯಲ್ಲಿ ಈ ಋಕ್ಕಿನ ಪಠಣದಿಂದ ಅಷ್ಟೈಶ್ವರ್ಯಗಳ ಜೊತೆಗೆ ಸಿದ್ಧಿ ಋದ್ಧಿ ಉಂಟಾಗುತ್ತದಂತೆ. ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್! ಈ ಜನ್ಮ ಇಂತಹ ಉನ್ನತ ಧ್ಯೇಯ ಹೊಂದಿದ ರಾಷ್ಟ್ರದಲ್ಲಾಗಿದೆ. ಅದುವೇ ನಮ್ಮ ಭಾಗ್ಯ! ಅದುವೇ ಸಂಪತ್ತು.

#ದೇವಸಖಃ_ಕುಬೇರ 
ಸದ್ಯೋಜಾತರು

ಜಮದಗ್ನಿ ಮಹರ್ಷಿ

ಜಮದಗ್ನಿ ಮಹರ್ಷಿ ಮಾತ್ರವಲ್ಲ ಒಂದು ಶಕ್ತಿ

ಗೃಣಾನಾ ಜಮದಗ್ನಿನಾ ಯೋನಾವೃತಸ್ಯ ಸೀದತಂ |
ಪಾತಂ ಸೋಮಮೃತಾವೃಧಾ ||
ಜಮದಗ್ನಿಯಿಂದ ಸ್ತುತಿಸಲ್ಪಡುವ ಮಿತ್ರಾವರುಣರೇ, ನೀವು ಈ ಯಜ್ಞ ವೇದಿಕೆಯಲ್ಲಿ ಕುಳಿತು, ಯಜ್ಞ ವರ್ಧಕರಾಗಿ ಸೋಮವನ್ನು ಪಾನ ಮಾಡಿರಿ. ಎನ್ನುವುದು ಋಗ್ವೇದ ಮೂರನೇ ಮಂಡಲದ ಐದನೇ ಸೂಕ್ತದಲ್ಲಿ ಬರುವ ಋಕ್ಕು. 
ಇಲ್ಲಿ ಜಮದಗ್ನಿಗೆ ಸಾಯಣಾಚಾರ್ಯರು ಎರಡು ವಿಧವಾಗಿ ಅರ್ಥ ಹೇಳಿದ್ದಾರೆ. ಮೊದಲನೆಯದಾಗಿ ಜಮದಗ್ನಿ ಎನ್ನುವ ಹೆಸರನ್ನು ಹೊಂದಿರುವ ಮಹರ್ಷಿ ಎನ್ನುವುದಾಗಿದ್ದರೆ, ಇನ್ನೊಂದು ಜಮದಗ್ನಿ ಎನ್ನುವುದು ಪ್ರಜ್ವಲಿತವಾದ ಅಗ್ನಿ ಎಂದಾಗುತ್ತದೆ. ಯಜ್ಞಕ್ಕಾಗಿ ಅಗ್ನಿಯನ್ನು ಪ್ರಜ್ವಲಿತನನ್ನಾಗಿ ಮಾಡಿದ ವಿಶ್ವಾಮಿತ್ರ ಎನ್ನುವುದು ಇನ್ನೊಂದು ಅರ್ಥ. 
ಜಮದಗ್ನಿ ಮಹರ್ಷಿ ಇಂದ್ರ ಮತ್ತು ವಿಶ್ವಾಮಿತ್ರ ಇಬ್ಬರಿಗೂ ಮಿತ್ರರಾಗಿದ್ದರು. ಜಮದಗ್ನಿ, ಭೃಗುವಿನ ಮಗನಾದುದರಿಂದ ಹೆಚ್ಚಿನ ಕಡೆ ಜಮದಗ್ನಿ ಭಾರ್ಗವ ಎಂದು ಎನ್ನುವುದಾಗಿ ಕರೆಯಲಾಗಿದ್ದು ಆ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. 
ಸುತೇ ಸಾತೇನ ಯದ್ಯಾಗಮಂ ವಾಂ ಪ್ರತಿ ವಿಶ್ವಾಮಿತ್ರ ಜಮದಗ್ನೀ ದಮೇ || ಎನ್ನುವಲ್ಲಿ ಇಂದ್ರನು ಜಮದಗ್ನಿ ಮತ್ತು ವಿಶ್ವಾಮಿತ್ರರಿಬ್ಬರನ್ನೂ ಜೊತೆಯಲ್ಲಿಯೇ ಸಂಬೋಧಿಸಿ ತನ್ನ ಅನುಗ್ರಹವನ್ನು ವ್ಯಕ್ತಪಡಿಸಿದ್ದಾನೆ. ಅನೇಕ ಕಡೆಗಳಲ್ಲಿ ವಿಶ್ವಾಮಿತ್ರರ ಜೊತೆಯಲ್ಲಿಯೇ ಕಾಣಿಸಿಕೊಳ್ಳುವ ಜಮದಗ್ನಿ ಹತ್ತನೇ ಮಂಡಲದ ನೂರ ಅರವತ್ತೇಳನೇ ಸೂಕ್ತದಲ್ಲಿ ಜೊತೆಯಾಗಿದ್ದಾರೆ. "ವಿಶ್ವಾಮಿತ್ರೇ ಜಮದಗ್ನೀ ವಶಿಷ್ಠೇನಾಸ್ಪರ್ಧೇತಾಗಂ" ಎಂದು ತೈತ್ತಿರೀಯ ಸಂಹಿತೆಯ ೩:೧-೭:೩ ರಲ್ಲಿ ಸಿಗುತ್ತದೆ. ಇಲ್ಲಿ ವಶಿಷ್ಠರೊಂದಿಗೆ ಹೋರಾಡಲು ಸಮರ್ಥ ಎನ್ನಲಾಗಿದೆ. 

ವಿಶ್ವಾಮಿತ್ರ ಮತ್ತು ಜಮದಗ್ನಿ ಸೇರಿ ವಶಿಷ್ಠರೊಂದಿಗೆ ಹೋರಾಡುತ್ತಿದ್ದಾಗ ಮಮಾಗ್ನೇ ವರ್ಚೋ ಎನ್ನುವ ಹತ್ತನೇ ಮಂಡಲದ ೧೨೮ನೇ ಸೂಕ್ತದ ದರ್ಶನವನ್ನು ಜಮದಗ್ನಿ ಪಡೆದುಕೊಳ್ಳುತ್ತಾರೆ. ಈ ಸೂಕ್ತದ ಸಹಾಯದಿಂದ ವಶಿಷ್ಠನ ಶಕ್ತಿಯನ್ನು ತಾನು ಪಡೆದುಕೊಳ್ಳುತ್ತಾರೆ ಎನ್ನುವುದು ತೈತ್ತಿರೀಯ ಸಂಹಿತೆ ಮತ್ತು ಬೃಹದ್ದೇವತೆಯಲ್ಲಿನ ಅಭಿಪ್ರಾಯ.
ಸುದಾಶಶ್ಚ ಮಹಾಯಜ್ಞೇ ಎನ್ನುವ ಬೃಹದ್ದೇವತಾ ವಾಕ್ಯವು ಸುದಾಸನ ಮಹಾ ಯಜ್ಞವೊಂದರಲ್ಲಿ ವಿಶ್ವಾಮಿತ್ರರನ್ನು ವಶಿಷ್ಠರ ಮಗ ಶಕ್ತಿ ಎನ್ನುವವನು ಹೊಡೆದುರುಳಿಸಿದಾಗ ಮೂರ್ಚಿತರಾಗಿ ಜ್ಞಾನ ಶೂನ್ಯನಾಗಿ ವಿಶ್ವಾಮಿತ್ರರು ಬೀಳುತ್ತಾರೆ. ಇಲ್ಲಿಯೂ ಸಹ ವಿಶ್ವಾಮಿತ್ರರಿಗೆ ಜಮದಗ್ನಿ ಮಹರ್ಷಿ ಸಹಾಯ ಮಾಡುತ್ತಾರೆ ಎನ್ನುವ ಕಥೆ ಬರುತ್ತದೆ. 

ಪ್ರಜಾಪತಿರ್ವಿರಾಜ ಮಪಶ್ಯತ್ತಯಾ ಭೂತಂ ಚ ಭವ್ಯಂ ಚಾಸೃಜತ ತಾಮೃಷಿಭ್ಯಸ್ತಿರೋದಧಾತ್ತಾಂ ಜಮದಗ್ನಿಸ್ತಪದಾ ಪಶ್ಯತ್ತಯಾ ವೈ ಸ ಪೃಶ್ನೀನ್ಕಾಮಾನ ಸೃಜತ ಎಂದು ತೈತ್ತಿರೀಯ ಸಂಹಿತೆಯಲ್ಲಿ ಹೇಳಲ್ಪಟ್ಟಿದೆ. ಇದರಲ್ಲಿ ಜಮದಗ್ನಿ ಎನ್ನುವ ಪದಕ್ಕಿರುವ ಅರ್ಥ ವೈಶಾಲ್ಯವನ್ನು ಹೇಳಲಾಗಿದೆ. ಜಮದಗ್ನಿ ಎನ್ನುವವರು ಪ್ರಜಾಪತಿಯ ಮಗನೆಂತಲೂ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನೂ ತನ್ನ ದಿವ್ಯ ದೃಷ್ಟಿಯಿಂದ ವೀಕ್ಷಿಸಿ ಈ ಪ್ರಪಂಚಕ್ಕೆ ಜ್ಞಾನ ರೂಪವಾದ ಪ್ರಕಾಶವನ್ನು ಉಂಟುಮಾಡುವವರು ಎನ್ನಲಾಗಿದೆ. ಪ್ರಜಾಪತಿಯು ವಿರಾಟ್ ದರ್ಶನವನ್ನು ಪಡೆವನು. ಅದರ ಸಹಾಯದಿಂದಲೇ ಭೂತ ಮತ್ತು ಭವಿಷ್ಯತ್ತುಗಳನ್ನು ಸೃಷ್ಟಿಮಾಡಿದನಂತೆ. ಆದರೆ ಇವೆರಡನ್ನೂ ಋಷಿಗಳ ಗೋಚರಕ್ಕೆ ಬೀಳದಂತೆ ಮಾಡಿದನಂತೆ. ಆಗ ಜಮದಗ್ನಿಯು ತನ್ನ ತಪಸ್ಸಿನ ಮಹಿಮೆಯಿಂದ ಅವುಗಳ ದರ್ಶನವನ್ನು ಪಡೆಯುತ್ತಾರೆ. ಅವುಗಳಿಂದ ಜಗತ್ತಿನ ಅನೇಕ ವಿಷಯಗಳನ್ನು ಸೃಷ್ಟಿಸುತ್ತಾರೆ. ಹೀಗೆ ಜಮದಗ್ನಿಯ ದಿವ್ಯವಾದ ಶಕ್ತಿಯನ್ನು ವಿವರಿಸಲಾಗಿದೆ. 

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಇಮಾವೇವ ಗೋತಮ ಭಾರಧ್ವಾಜೌ | ಅಯಮೇವ ಗೋತಮಃ ಅಯಂ ಭಾರಧ್ವಾಜಃ | ಇಮಾವೇವ ವಿಶ್ವಾಮಿತ್ರ ಜಮದಗ್ನಿಃ ಎಂದು ಶರೀರದ ತತ್ವವನ್ನು ವಿವರಿಸುವ ಸಂದರ್ಭದಲ್ಲಿ ಹೇಳಲಾಗಿದೆ. ಗೋತಮ ಮತ್ತು ಭರಧ್ವಾಜರು ಶ್ರೋತೃ ತತ್ವ ಪ್ರತಿಪಾದಕರಾದರೆ ವಿಶ್ವಾಮಿತ್ರ ಜಮದಗ್ನಿ ಚಕ್ಷುಸ್ತತ್ತ್ವ ಪ್ರತಿಪಾದಕರು. ವಿಶ್ವಾಮಿತ್ರ ಬಲಗಣ್ಣಾದರೆ ಜಮದಗ್ನಿಯೇ ಎಡಗಣ್ಣು ಎನ್ನುವುದು ಈ ಉಪನಿಷತ್ತಿನ ಅರ್ಥವಾದರೂ ಇದು ಭೌತಿಕವಾದ ಅವಯವಗಳ ಕುರಿತಾಗಿರದೇ ಅಗಾಧವಾದ ಜ್ಞಾನದ ಕಣ್ಣುಗಳ ಕುರಿತಾಗಿ ಹೇಳಿದ್ದು. 

"ಚಕ್ಷುರ್ವೈ ಜಮದಗ್ನಿರ್ ಋಷಿರ್ಯದೇನೇನ ಜಗತ್ಪಶ್ಯತ್ಯಥೋ" ಎನ್ನುವುದು ಶತಪಥ ಬ್ರಾಹ್ಮಣದಲ್ಲಿ. ಜಮದಗ್ನಿಯೇ ಕಣ್ಣು ಈ ಜಗತ್ತೆಲ್ಲವೂ ಯಾವುದರಿಂದ ನೋಡಲ್ಪಡುತ್ತದೆಯೋ ಅಂತಹ ಜ್ಞಾನವನ್ನು ನಮಗೆ ನೀಡಿದಾತನೇ ಜಮದಗ್ನಿ. ಪ್ರಜಾಪತಿಯಿಂದ ಸೃಷ್ಟಿಗೊಂಡ ಜಗತ್ತಿನ ಚರಾಚರ ವಸ್ತು ಮತ್ತು ವಿಷಯಗಳ ಕುರಿತಾದ ಜ್ಞಾನವನ್ನು ನೀನೇ ಈ ಪ್ರಪಂಚಕ್ಕೆ ನೀಡಿರುವೆ ಎನ್ನುವ ಅರ್ಥವನ್ನು ಧ್ವನಿಸುತ್ತದೆ. "ಯದಕ್ಷರಂ ಭೂತ ಕೃತಂ" ಎಂದು ಆರಂಭಗೊಳ್ಳುವ ತೈತ್ತಿರೀಯ ಆರಣ್ಯಕದ ಮಾತು ಜಮದಗ್ನಿಯ ಕುರಿತಾಗಿರುವುದು. ಜಮದಗ್ನಿಯು ಅಕ್ಷರಾತ್ಮಕನಾದ ಪರಮಾತ್ಮನ ಸಾಕ್ಷಾತ್ ರೂಪ ಎನ್ನುವುದನ್ನು ತಿಳಿಸಿಕೊಡುತ್ತದೆ.
ಸಸರ್ಪರೀರಮತಿಂ ಬಾಧಮಾನಾ ಬೃಹನ್ಮಿಮಾಯ ಜಮದಗ್ನಿ ದತ್ತಾ |
ಆ ಸೂರ್ಯಸ್ಯ ದುಹಿತಾ ತತಾ ನ ಶ್ರವೋ ದೇವೇಷ್ವಮೃತಮಜುರ್ಯಂ || 
ಇದು ವಾಗ್ದೇವತೆಯನ್ನು ಕುರಿತಾಗಿರುವುದು. ಸುದಾಸನ ಯಜ್ಞವನ್ನು ವಿಶ್ವಾಮಿತ್ರ ನೆರವೇರಿಸುತ್ತಿದ್ದ. ಆಗ ವಶಿಷ್ಠರ ಮಗನಾದ ಶಕ್ತಿ ಎನ್ನುವವನು ವಿಶ್ವಾಮಿತ್ರನ ಶಕ್ತಿಯನ್ನೂ ಮತ್ತು ಮಾತನ್ನೂ (ಸ್ವರ) ಸ್ತಂಬನ ಮಾಡುತ್ತಾನೆ. ಇದರಿಂದಾಗಿ ವಿಶ್ವಾಮಿತ್ರ ಸತ್ವಹೀನರಾಗಿ ಮತ್ತು ಜ್ಞಾನ ಶೂನ್ಯರಾಗಿ ಬೀಳುತ್ತಾರೆ. ಆಗ ಜಮದಗ್ನಿ ಮಹರ್ಷಿಯು ಸೂರ್ಯ ಮಂಡಲದಿಂದ ಸೂರ್ಯನ ಪುತ್ರಿಯಾದ ವಾಗ್ದೇವತೆಯನ್ನು ತಂದು ವಿಶ್ವಾಮಿತ್ರರಿಗೆ ಕೊಡುವುದರಿಂದ ವಿಶ್ವಾಮಿತ್ರ ಪುನಃ ಜ್ಞಾನ ಚಕ್ಷುಗಳಿಂದ ಯಜ್ಞದಲ್ಲಿ ಭಾಗಿಯಾಗಲು ಸಮರ್ಥರಾಗುತ್ತಾರೆ. ಇಲ್ಲಿ ಸೂರ್ಯನೆನ್ನುವ ಜ್ಞಾನ ರಾಶಿಯಿಂದ ವಾಗ್ದೇವತೆ ಎನ್ನುವ ಜ್ಞಾನದ ಒಂದು ಪ್ರಮುಖ ಅಂಶವನ್ನು ವಿಶ್ವಾಮಿತ್ರರಿಗೆ ಜಮದಗ್ನಿ ಕೊಡಿಸುತ್ತಾರೆ. ಅಂದರೆ ಇಲ್ಲಿ ಜಮದಗ್ನಿ ಈ ಜಗತ್ತಿನ ಜ್ಞಾನ ಪ್ರಸಾರಕ್ಕೆ ಪ್ರಮುಖರಾಗುತ್ತಾರೆ. ಜಡವಾದ ಜಗತ್ತನ್ನು ಚೇತನಾಶೀಲನನ್ನಾಗಿ ಮಾಡಲು ಜಮದಗ್ನಿ ಕಾರಣರಾಗುತ್ತಾರೆ, ಮತ್ತು ನಮ್ಮ ಮಾತುಗಳನ್ನು ನಿರ್ಧರಿಸಿ ನಿಯಂತ್ರಿಸುವಲ್ಲಿಯೂ ಜಮದಗ್ನಿ ಕಾರಣರಾಗುತ್ತಾರೆ. ಅದನ್ನೇ ನಿರುಕ್ತಕಾರರು ಪ್ರಜ್ವಾಲಿತಾಗ್ನಿಃ ಎಂದಿರುವುದು. ಅಂದರೆ ಆರದೇ ಇರುವ ಸದಾಕಾಲ ಬೆಳಗುತ್ತಿರುವ ಅಗ್ನಿ ಎಂದು. ಗದ್ಯ ಮತ್ತು ಪದ್ಯ ರೂಪದಿಂದ ಜಗದ್ವಾಪಕವಾಗಿ ಪ್ರಸಾರ ಹೊಂದಿರುವ ವಾಗ್ದೇವತೆಯು ಪಂಚಜನ(ಐದು ವಿಧವಾದ ಜನರಲ್ಲಿಯೂ)** ಪಂಚ ಜನ ಎನ್ನುವುದರ ಅರ್ಥ ವೈಶಾಲ್ಯ ದೊಡ್ದದಿದೆ ಅದು ಇಲ್ಲಿ ನಾನು ಬರೆಯುತ್ತಿಲ್ಲ. ಪಂಚ ವಿಧದ ಜನರಲ್ಲಿಯೂ ವಾಕ್ಸಾಮರ್ಥ್ಯ ಮತ್ತು ಜ್ಞಾನದ ಹರಿವು ಉಂಟಾಗುವಂತೆ ಮಾಡಿದ್ದು ಇದೇ ಜಮದಗ್ನಿ. ಇವರನ್ನು ವೃದ್ಧ ಜಮದಗ್ನಿ ಎಂದು ಈ ಋಕ್ಕು ಹೇಳುತ್ತದೆ.

ಹೀಗೇ ವೇದದಲ್ಲಿ ಜಮದಗ್ನಿ ಜಗತ್ತಿಗೆ ಜ್ಞಾನವನ್ನು ಮತ್ತು ನಮಗೆ ಮಾತನಾಡುವ ಸಾಮರ್ಥ್ಯವನ್ನು ಒದಗಿಸಿಕೊಟ್ಟವರು ಎನ್ನುವುದು ತಿಳಿದು ಬರುತ್ತದೆ. ಅತ್ಯಂತ ದೀರ್ಘ ಕಾಲ ಬಾಳಿ ಬದುಕಿದವರು ಜಮದಗ್ನಿ.

#ಜಮದಗ್ನಿ_ವಿಶ್ವಾಮಿತ್ರ
ಸದ್ಯೋಜಾತರು

August 19, 2021

ಉಪಾಯವಿದ್ದರೆ ಯಾವ ಅಪಾಯದಿಂದಲೂ ಪಾರಗಬಹುದು

ದಿನಕ್ಕೊಂದು ನೀತಿ ಕಥೆ
ಕಾಡಿನಲ್ಲಿ ನರಿಯೊಂದು ಆಹಾರ ಅರಸುತ್ತಾ ಹೊರಟಿತ್ತು, ಸ್ವಲ್ಪ ದೂರ ಹೊರಟಾಗ ತನಗರಿವಿಲ್ಲದೇ ಹಾಳುಬಾವಿಯೊಂದರಲ್ಲಿ ಬಿದ್ದುಬಿಟ್ಟಿತು. ಬಿದ್ದ ರಭಸಕ್ಕೆ ಅದಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ ಹೊರಬರುವ ಪ್ರಯತ್ನ ಮಾತ್ರ ವ್ಯರ್ಥವಾಯಿತು. ಉಪಾಯದಿಂದ ಪಾರಾಗುವ ಪ್ರಯತ್ನ ಮಾಡದೇ ಹೋದರೆ ತಾನು ಸತ್ತೇ ಹೋಗುವೆನೆಂದು ಭಾವಿಸಿ ಅತ್ತಿತ್ತ ನೋಡಿತು. ಹಾಳುಬಾಯಿಯ ಅನತಿ ದೂರದಲ್ಲೇ ಹೆಮ್ಮರಗಳು ಬೆಳೆದಿರುವುದು ಗೋಚರಿಸಿತು. ಅಲ್ಲಿ ಅನೇಕ ಪಕ್ಷಿಗಳಿದ್ದವು. ಆಗ ಅದಕ್ಕೊಂದು ಉಪಾಯ ಹೊಳೆಯಿತು.

" ಕಾಡಿನ ಪ್ರಾಣಿಗಳನ್ನು ಅಪಾಯದಿಂದ ಪಾರುಮಾಡುವ ವಿಷಯವು ನನಗೆ ತಿಳಿದಿದೆ. ಕೂಡಲೇ ನನ್ನನ್ನು ಮೇಲಕ್ಕೆತ್ತಿರಿ' ಂದು ಶಕ್ತಿಮೀರಿ ಕೂಗಿಕೊಳ್ಳತೊಡಗಿತು. ಹೆಮ್ಮರದಲ್ಲಿದಲ್ಲಿದ್ದ ಹಕ್ಕಿಗಳು ಅಲ್ಲಿಗೆ ಹಾರಿಬಂದವು. ಆಗ ನರಿಯು, "ಬಂಧುಗಳೇ, ಈ ಕಾಡಿನ ಪ್ರಾಣಿಗಳಿಗೆ ಪ್ರಾಣಾಪಾಯವಿದೆ. ಹಾಗಾಗಿ ಈ ಕೂಡಲೇ ಅವರಿಗೆ ವಿಷಯ ತಿಳಿಸಬೇಕಾಗಿದೆ. ಕಾಡಿನ ಪ್ರಾಣಿಗಳಿಗೆ ನನ್ನನ್ನು ರಕ್ಷಿಸಲು ತಿಳಿಸಿರಿ' ಎಂದು ಹೇಳಿತು. 

ಪಕ್ಷಿಗಳೆಲ್ಲವೂ ಹಾಳುಬಾವಿಯಲ್ಲಿದ್ದ ನರಿಯ ವಿಷಯವನ್ನು ಕಾಡುಪ್ರಾಣಿಗಳಿಗೆ ತಿಳಿಸಿದವು. ಅವೆಲ್ಲ ಬಂದಾಗ ನರಿ ಬಾರಿ ಬಾರಿ ಕೂಗಿಕೊಂಡಿತು, " ಬಂಧುಗಳೇ ನೀವು ತುಂಬ ಅಪಾಯದಲ್ಲಿದ್ದೀರಿ' ಅವು ಯಾವುದೋ ಮುಖ್ಯವಾದ ವಿಷಯವೇ ಇರಬೇಕೆಂದು ಕಲ್ಲು, ಮಣ್ಣನ್ನು ತಂದು ಹಾಳುಬಾವಿಯಲ್ಲಿ ಸುರಿಯತೊಡಗಿದವು. ನರಿಯು ಅದರ ಮೇಲೆ ನಿಂತು ಮೇಲೆ ಮೇಲೆ ಬರತೊಡಗಿತು. ಬಹಳ ಹೊತ್ತಾದ ಮೇಲೆ ಬಾವಿಯು ಸಂಪೂರ್ಣ ಮುಚ್ಚಿಕೊಂಡಿತು. ಆಗ ನರಿಯು ನೆಲದ ಮೇಲೆ ಬಂದಿಳಿಯಿತು. 

ಕಾಡಿನ ಪ್ರಾಣಿಗಳು ಕುತೂಹಲದಿಂದ "ನರಿಯಣ್ಣ, ನಮಗೆ ಯಾವ ಅಪಾಯವಿದೆ?' ಎಂದು ಕುತೂಹಲದಿಂದ ಪ್ರಶ್ನಿಸತೊಡಗಿದವು. ಆಗ ನರಿಯು ಕಲ್ಲುಮಣ್ಣುಗಳಿಂದ ತುಂಬಿದ ಹಾಳುಬಾವಿಯನ್ನು ತೋರಿಸುತ್ತಾ, " ಬಂಧುಗಳೇ, ನಾನು ಯಾವ ಹೊಸ ವಿಷಯವನ್ನು ನಿಮಗೆ ಹೇಳಬೇಕೆಂದಿರುವೆನೋ ಅದನ್ನು ಅದನ್ನು ನೀವು ಈಗಾಗಲೇ ಮಾಡಿದ್ದೀರಿ' ಎಂದು ನರಿಯು ಅಲ್ಲಿಂದ ಹೊರಟಿತು. ಆಗ ಕಾಡಿನ ಪ್ರಾಣಿಗಳೆಲ್ಲವೂ ಕಲ್ಲು ಮಣ್ಣುಗಳಿಂದ ಭರ್ತಿಯಾದ ಹಾಳುಬಾವಿಯನ್ನು ವಿಸ್ಮಯದಿಂದ ನೋಡತೊಡಗಿದವು.

ನೀತಿ : ಉಪಾಯವಿದ್ದರೆ ಯಾವ ಅಪಾಯದಿಂದಲೂ ಪಾರಗಬಹುದು
ಕೃಪೆ ಉದಯವಾಣಿ

ಹೋಮಗಳು

ಹೋಮಗಳು
(  ಸಂಗ್ರಹಿಸಿದ್ದು  )

ಯಾವ ಮನೋಕಾಮನೆಗಳಿಗೆ ಯಾವ ಯಾವ ಹೋಮಗಳನ್ನು ಮಾಡಬೇಕು?

೧. ಗಣಹೋಮ

ಎಲ್ಲಾ ಕಷ್ಟಗಳನ್ನು ಮತ್ತು ಕಾರ್ಯದಲ್ಲಿ ಬರುತ್ತಿರುವ ವಿಘ್ನಗಳನ್ನು ನಿವಾರಣೆಗೊಳಿಸಲು.

೨. ವಲ್ಲಭ ಗಣಪತಿ ಹೋಮ

ಗಣಪತಿ ಅನುಗ್ರಹ ಪ್ರಾಪ್ತಿಗಾಗಿ.

೩. ಶ್ರೀ ಶಕ್ತಿ ಗಣಪತಿ ಹೋಮ

ಗಣಪತಿ ಅನುಗ್ರಹ ಪ್ರಾಪ್ತಿಗಾಗಿ.

೪. ಶೀಘ್ರ ವಿವಾಹ ಪ್ರಾಪ್ತಿಗಾಗಿ

    ಹರಿದ್ರಾ ಗಣಪತಿ ಹೋಮ
    ಬಾಲ ಗಣಪತಿ ಹೋಮ
    ತ್ರೈಲೋಕ್ಯ ಮೋಹನ ಗಣಪತಿ ಹೋಮ

ಜಾತಕದಲ್ಲಿ ಸೂಚಿಸಿದಂತೆ, ವಿವಾಹವಾಗುವಲ್ಲಿ ಬರುವ ವಿಘ್ನನಿವಾರಣೆಗೆ ಆಚರಿಸಬೇಕು.

೫. ಲಕ್ಷ್ಮೀಗಣಪತಿ ಹೋಮ

ಲಕ್ಷ್ಮಿ ಪ್ರಾಪ್ತಿಗಾಗಿ ಆಚರಿಸಬೇಕು.

೬. ಚಿಂತಾಮಣಿ ಗಣಪತಿ ಹೋಮ

ಮನಸ್ಸಿನ ಎಲ್ಲಾ ಕಾಮನೆಗಳನ್ನು ಪಡೆಯಲು ಈ ಹೋಮ ಮಾಡಬೇಕು.

೭. ವಿದ್ಯಾ ಪ್ರಾಪ್ತಿಗಾಗಿ

    ಮೇಧಾ ಗಣಪತಿ ಹೋಮ
    ಬುದ್ಧಿ ಗಣಪತಿ ಹೋಮ
    ಸಿದ್ಧಿ ಗಣಪತಿ ಹೋಮ
    ಅಷ್ಟ ದ್ರವ್ಯ ಗಣಹೋಮ

ಜಾತಕದ ಸೂಚನೆಯಂತೆ ಆಚರಿಸಬೇಕು.

೮. ಸಾಲದ ಬಾಧೆ ನಿವಾರಣೆಗೆ

    ಋಣ ಹರಣ ಗಣಪತಿ ಹೋಮ
    ಕ್ಷಿಪ್ರ ಗಣಪತಿ ಹೋಮ
    ಸ್ವರ್ಣ ಗಣಪತಿ ಹೋಮ
    ಸಂಕಟಹರ ಗಣಪತಿ ಹೋಮ 

ಗುರುಗಳ ಆದೇಶದಂತೆ ಆಚರಿಸಬೇಕು.

೯. ವಿನಾಯಕ ಶಾಂತಿ

ಮಾಡುತ್ತಿರುವ ಕಾರ್ಯದಲ್ಲಿ ವಿಘ್ನ ಬರದಿರಲೆಂದು ಈ ಹೋಮವನ್ನು ಆಚರಿಸಬೇಕು.
೧೦. ವಿದ್ಯಾ ಪ್ರಾಪ್ತಿಯಲ್ಲಿ ಬರುತ್ತಿರುವ ದೋಷ ನಿವಾರಣೆಗಾಗಿ

    ವಾಕ್ ಸರಸ್ವತಿ ಹೋಮ
    ನೀಲಾ ಸರಸ್ವತಿ ಹೋಮ
    ದಕ್ಷಿಣಾ ಮೂರ್ತಿ ಹೋಮ

ಗುರುಗಳ ಅನುಮತಿಯಂತೆ ಆಚರಿಸಬೇಕು.

೧೧. ಗ್ರಹ ಬಾಧೆಯಿಂದ ಜೀವನದಲ್ಲಿ ಬರುವ ರೋಗ ಪೀಡಾ ಪರಿಹಾರಕ್ಕಾಗಿ ಮತ್ತು ಅಕಾಲ ಮೃತ್ಯು ನಿವಾರಣೆಗಾಗಿ ಮಾಡಬೇಕಾದ ಹೋಮಗಳು

    ಮಹಾ ಮ್ರತ್ಯುಂಜಯ ಹೋಮ
    ಅಮೃತ ಮ್ರತ್ಯುಂಜಯ ಹೋಮ
    ಅಭಯಾಯುಷ್ಯ ಹೋಮ
    ಉಗ್ರ ನರಸಿಂಹ ಹೋಮ
    ದೂರ್ವಾ ಮೃತ್ಯುಂಜಯ ಹೋಮ
    ಆಯುಷ್ಯ(ಚರು)ಹೋಮ 

೧೨. ವಿರೋಧಿಗಳು ಮಾಡುವ ಮಂತ್ರ, ತಂತ್ರ,ಯಂತ್ರಾದಿ ದುಷ್ಕರ್ಮ ಉಚ್ಛಾಟನೆಗಾಗಿ,ರಕ್ಷೆಗಾಗಿ

    ಮಹಾ ಸುದರ್ಶನ ಹೋಮ
    ಅಘೋರಾಸ್ತ್ರ ಹೋಮ
    ಪ್ರತ್ಯಂಗಿರಾ ಹೋಮ
    ಬಗಲಾಮುಖಿ ಹೋಮ
    ಶರಭೇಶ್ವರ ಹೋಮ
    ಶೂಲಿನಿ ದುರ್ಗಾ ಹೋಮ
    ದತ್ತಾತ್ರೇಯ ಮಾಲಾಮಂತ್ರ ಹೋಮ
    ಆಂಜನೇಯ ಮಂತ್ರ ಹೋಮ

೧೩. ಮಹಾಲಕ್ಷ್ಮಿ ಅನುಗ್ರಹ ಪ್ರಾಪ್ತಿ ಮತ್ತು ಉದ್ಯೋಗ, ವ್ಯವಹಾರ ಜಯ ಪ್ರಾಪ್ತಿಗಾಗಿ .
    ಶ್ರೀಸೂಕ್ತ ಹೋಮ
    ಲಕ್ಷ್ಮೀ ಹೋಮ(ಕಮಲದ ಹೂವಿನಿಂದ)
    ಲಕ್ಷ್ಮಿ ನೃಸಿಂಹ ಹೋಮ
    ಲಕ್ಷ್ಮಿ ನಾರಾಯಣ ಹೃದಯ ಹೋಮ
    ಕುಬೇರ ಲಕ್ಷ್ಮೀ ಹೋಮ
    ಚಂಡಿಕಾ ಹೋಮ(ನವ,ಶತ,ಸಹಸ್ರ)

೧೪. ರೋಗ ನಿವೃತ್ತಿಗಾಗಿ ಮಾಡಬೇಕಾದ ಹೋಮಗಳು

    ಧನ್ವಂತರಿ ಹೋಮ
    ಅಪಸ್ಮಾರ ದಕ್ಷಿಣಾಮೂರ್ತಿ ಹೋಮ
    ನವಗ್ರಹ ಹೋಮ(ಪ್ರತ್ಯೇಕ ಗ್ರಹಶಾಂತಿ)
    ಸುಬ್ರಹ್ಮಣ್ಯ ಹೋಮ

ಜಾತಕದಲ್ಲಿ ಸೂಚಿಸಿದಂತೆ ರೋಗಕ್ಕೆ ಅನುಸಾರವಾಗಿ ಮಾಡಬೇಕು.

೧೫. ಸ್ತ್ರೀ ಮತ್ತು ಪುರುಷರ ವಿವಾಹಕ್ಕೆ ಬರುತ್ತಿರುವ ಅಡ್ಡಿ, ಆತಂಕಗಳ ನಿವಾರಣೆಯಾಗಿ ಶೀಘ್ರ ವಿವಾಹ ಪ್ರಾಪ್ತಿಯಾಗಲು ಮಾಡಬೇಕಾದ ಹೋಮ

    ಉಗ್ರ ನೃಸಿಂಹ ಹೋಮ(೨೮ ಸಾವಿರ ಜಪ ಮಾಡಬೇಕು)
    ಸ್ವಯಂವರ ಪಾರ್ವತಿ ಹೋಮ(೧೦ ಸಾವಿರ ಜಪ ಮಾಡಬೇಕು)
    ಬಾಣೇಶಿ ಹೋಮ(೧೦ ಸಾವಿರ ಜಪ ಮಾಡಬೇಕು)
    ಅಶ್ವಾರೂಢ ಪಾರ್ವತಿ ಹೋಮ(೧೦ ಸಾವಿರ ಜಪ ಮತ್ತು ಹೋಮ ಮಾಡಬೇಕು)

೧೬. ಜನ್ಮಾಂತರದಲ್ಲಿ ಮಾಡಿದ ಪಾಪಕರ್ಮದ ಫಲವಾಗಿ ಮಕ್ಕಳು ಆಗದೆ ಇದ್ದಾಗ ಮಾಡಬೇಕಾದ ಹೋಮಗಳು

    ಸಂತಾನ ಗೋಪಾಲಕೃಷ್ಣ ಹೋಮ
    ನಾಗರಾಜ ಮಂತ್ರ ಹೋಮ
    ಪುರುಷ ಸೂಕ್ತ ಹೋಮ
    ಶ್ರೀ ವಿದ್ಯಾ ಹೋಮ
    ಶ್ರೀ ರುದ್ರ ಹೋಮ(ಲಘು ರುದ್ರ,ಶತ ರುದ್ರ,ಮಹಾ ರುದ್ರ,ಅತಿ ರುದ್ರ) ಜಾತಕವನ್ನು ಪರಿಶೀಲಿಸಿ ಯೋಗ್ಯ ಸಲಹೆ ಪಡೆದು ಆಚರಿಸಬೇಕು.

೧೭. ಕಳೆದು ಹೋದ ವಸ್ತು ಪ್ರಾಪ್ತಿಗಾಗಿ ಈ ಹೋಮವನ್ನು ಮಾಡಬೇಕು.

ಕಾರ್ತವೀರ್ಯಾರ್ಜುನ ಜಪ ಹೋಮ

೧೮. ನಮ್ಮ ಕ್ಷೇತ್ರಗಳನ್ನು, ಬೆಳೆಗಳನ್ನು ರಕ್ಷಿಸಲು, ದುಷ್ಟ ಪ್ರಾಣಿಗಳು ಮತ್ತು ದುರ್ಜನರಿಂದ ರಕ್ಷಣೆ ಪಡೆಯಲು ಮಾಡಬೇಕಾದ ಹೋಮಗಳು.

    ವನ ದುರ್ಗಾ ಹೋಮ
    ಭೂ ವರಾಹ ಹೋಮ
    ರಾಮತಾರಕ 
    ಹನೂಮನ್ಮಂತ್ರ ಹೋಮ

ಗಾಯತ್ರೀ ಮಂತ್ರ



ಇದು  ಗಾಯತ್ರೀ ಹಬ್ಬದ  ಸಂದರ್ಭ.  ‘ವೇದಾನಾಂ ಮಾತಾ ಅಮೃತಸ್ಯ ನಾಭಿಹ್”, ‘ಗಾಯತ್ರಿಂ ಛಂದಸಾಂ ಮಾತಾ”, “ಗಾಯತ್ರಿ ಸರ್ವಾಣಿ ಸವನಾನಿ ವಹತಿ” ಮುಂತಾದ ವೇದಗಳಲ್ಲಿ ಉಲ್ಲೇಖಿತ ವಾಕ್ಯಗಳು “ದೇವೀ ಗಾಯತ್ರಿ ಮಾತೆ”ಯನ್ನು ವೇದಮಾತೆ ಎಂದು ಸ್ಪಷ್ಟೀಕರಿಸುತ್ತದೆ.  ಭಗವದ್ಗೀತೆಯಲ್ಲಿ, ಭಗವಾನ್ ಕೃಷ್ಣರು “ಗಾಯತ್ರಿಂ ಛಂದಸಾಂ ಅಹಂ” – ಅಂದರೆ “ಮಂತ್ರಗಳಲ್ಲಿ ನಾನು ಗಾಯತ್ರೀ ಮಂತ್ರ” ಎಂದು ಹೇಳುತ್ತಾರೆ.  

ವೇದ ಪುರಾಣಗಳಲ್ಲಿ ಬಣ್ಣಿಸಿರುವಂತೆ ಗಾಯತ್ರೀ ಮಂತ್ರದ ಉದ್ಘಾರದಿಂದ ನಾವು ಪಾಪಗಳೆಂದು ಎಣಿಸುವ ಸಕಲ  ಬಂಧನಗಳಿಂದ ಮುಕ್ತತೆ ಒದಗುತ್ತದೆ.  ಪರಾಶರ ಸ್ಮೃತಿಯಲ್ಲಿನ  “ಗಾಯತ್ರೀ ಜಪಕ್ರಿದ್ಭವತ್ಯ ಸರ್ವಪಾಪಾಯ ಪ್ರಮುಚ್ಯತೆ”, ಭವಿಷ್ಯ ಪುರಾಣದಲ್ಲಿನ “ಸರ್ವಪಾಪಾಣಿ ನಾಶ್ಯಂತಿ ಗಾಯತ್ರೀ ಜಪತೋ ನ್ರಿಪ್” ಮುಂತಾದ ಹಲವಾರು ಪುರಾಣಗಳ ಉಲ್ಲೇಖಗಳು ನಾವು “ಗಾಯತ್ರೀ ಮಂತ್ರದ” ಜಪದ ಸಹಾಯದಿಂದ  ನಮ್ಮ ಮಾನಸಿಕ ಬಂಧನಗಳೆಂಬ ಪಾಪಗಳಿಂದ ಮುಕ್ತರಾಗಬಹುದು   ಎಂಬುದನ್ನು ನಿರೂಪಿಸುತ್ತದೆ.

ಮಂತ್ರಗಳೆಂದರೆ ಸಂಸ್ಕೃತದಲ್ಲಿ “ಮನನಾತ್ ತ್ರಾಯತೇ ಇತಿ ಮಂತ್ರಹ” ಅಂದರೆ “ಯಾವುದು, ತನ್ನನ್ನು   ಪುನರುಚ್ಚಾರ ಮಾಡುವುದರಿಂದ  ನಮ್ಮನ್ನು ಕಾಪಾಡುತ್ತದೋ ಅದೇ ಮಂತ್ರ”.  ಗಾಯತ್ರೀ ಮಂತ್ರದ ಬಗ್ಗೆ “ಗಾಯಂತಂ ತ್ರಾಯತೇ ಇತಿ ಗಾಯತ್ರೀ” ಅಂದರೆ “ಇದನ್ನು ಹಾಡುವುದರಿಂದ ನಮಗೆ ರಕ್ಷೆ ಸಿಗುತ್ತದೆ” ಎಂಬ ಉಲ್ಲೇಖಗಳಿವೆ.  ಹಾಡುವುದು ಎಂದರೆ ಸಂತಸದಿಂದ ಅನುಭಾವಿಸಬೇಕು ಎಂಬ ಮಾತೂ ಕೂಡಾ ಆಗುತ್ತದೆ.  ನಾವು ಸಂಗೀತವನ್ನು ಕೇಳಿ ಆನಂದಿಸುತ್ತೇವೆ.  ಜೊತೆಗೆ ಅದನ್ನು ಅನುಭಾವಿಸುತ್ತೇವೆ.  ಅಂತೆಯೇ ಗಾಯತ್ರೀ ಮಂತ್ರವನ್ನು ಸಂತಸದಿಂದ ಆನಂದಿಸಿ ನಂತರ ಪ್ರಶಾಂತವಾದ ಅನುಭಾವಕ್ಕಿಳಿಯಬಹುದು.  

ಇದನ್ನು ಸ್ತ್ರೀಯರು ಹಾಡಬಾರದು, ಕೇವಲ ಹಿಂದೂಗಳು ಮಾತ್ರ ಹಾಡಬೇಕು ಎಂಬ ಯಾವುದೇ ನಿರ್ಬಂಧಗಳೂ ಇಲ್ಲ.

ॐ भूर्भुवः॒ स्वः ।
तत्स॑वितुर्वरे॑ण्यं ।
भ॒र्गो॑ दे॒वस्य॑ धीमहि। ।
धियो॒ यो नः॑ प्रचो॒दया॑त्॥ 

ಓಂ ಭೂರ್ಭುವಸ್ಸುವಃ,
ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ,
ಧಿಯೋ ಯೋ ನಃ ಪ್ರಚೋದಯಾತ್

ಈ ಮಂತ್ರದ ಪ್ರಾಥಮಿಕ ಅರ್ಥ ಹೀಗಿದೆ:

“ನಾನು ಭೂಮಿ, ಆಕಾಶ, ಅಂತರಿಕ್ಷಗಳೆಂಬ ನೆಲೆಗಳನ್ನೂ,  ಆಧ್ಯಾತ್ಮಿಕ ಸಮತೋಲನದ ನೆಲೆಯನ್ನೂ, ಮಾನವನ ಅಧ್ಯಾತ್ಮ  ಜ್ಞಾನದ ನೆಲೆಯನ್ನೂ , ಸಕಲ ಬಂಧನಗಳಿಂದ ಮುಕ್ತವಾದ ಭಾವದ ನೆಲೆಯನ್ನೂ, ಪರಿಪೂರ್ಣವಾದ ಸತ್ಯವೆಂಬ ನೆಲೆಯನ್ನೂ ಆವಾಹಿಸುತ್ತಿದ್ದೇನೆ.  ಎಲ್ಲಾ ದಿವ್ಯತೆಗಳಲ್ಲಿಯೂ ಶ್ರೇಷ್ಠವಾದ “ಓ, ಅಧ್ಯಾತ್ಮದ ಬೆಳಕೇ, ನಾವು ನಿಮ್ಮನ್ನು ಧ್ಯಾನಿಸುತ್ತಿದ್ದೇವೆ.  ನಮ್ಮ ಮನಗಳನ್ನು ಪ್ರಕಾಶಗೊಳಿಸು” 

ಈ ಮಂತ್ರದ ಉಚ್ಚಾರದಿಂದ ನಮ್ಮ ದೇಹದಲ್ಲಿರುವ ಏಳೂ ಚಕ್ರಗಳಲ್ಲಿಯೂ  ತೇಜಸ್ಸು ಉತ್ಪನ್ನಗೊಂಡು ಆ ತೇಜಸ್ಸನ್ನು ಆಧ್ಯಾತ್ಮಿಕವಾದ ತೇಜದಲ್ಲಿ ಸಮ್ಮಿಲನಗೊಳಿಸುತ್ತದೆ.  ಜೊತೆಗೆ ನಮ್ಮ ಮನಸ್ಸು, ಹೃದಯ ಮತ್ತು ಆತ್ಮಗಳನ್ನು ಲೋಕದ ಸೃಷ್ಠಿಗೆ ಮೂಲಭೂತವಾದ ದಿವ್ಯತೆಯ ಬೆಳಕಿನೊಂದಿಗೆ ಒಂದುಗೊಳಿಸುತ್ತದೆ.

ಕನ್ನಡದ ಹಿರಿಯರಾದ ಮಾಸ್ತಿಯವರು ತಮ್ಮ ಕವಿತೆಯಲ್ಲಿ ಈ ಭಾವವನ್ನು ಹೀಗೆ ಕಟ್ಟಿಕೊಟ್ಟಿದ್ದಾರೆ:

ಬಾ ಸವಿತಾ ಬಾ ಸವಿತಾ ಬಾ ಸವಿತಾ

ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ
ಒಳಿತಲ್ಲದುದೆ ಒಳಿತೆಂಬುದರ
ಚಳಕವೆಲ್ಲಕೆ ವಿನಾಶವ ತಾ

ಬಾ ಸವಿತಾ ಬಾ ಸವಿತಾ ಬಾ ಸವಿತಾ

ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ
ಛಲ ತೊಟ್ಟ ಮಲ್ಲ ವಾಹಿನಿ ಬಾ
ನಿಲವಿಲ್ಲಾ ಜಗದಿ ಕತ್ತಲೆಗೆಂದು
ಗೆಲವನು ಸಾರುವ ಭಾಸವ ತಾ

ಬಾ ಸವಿತಾ ಬಾ ಸವಿತಾ ಬಾ ಸವಿತಾ

ಓಂ ತತ್ ಸವಿತುರ್ವರೇಣ್ಯವೆಂದೆವು
ಅಂತಲ್ಲದೆ ಬೇರೇನನು ನಂಬೆವು
ಪಂಥವ ಬೆಳಗಿಸಿ ನಿರೂಪಿಸಿ ಕಾಂಬೆವು
ಶಾಂತ ಸುಂದರ ಶಿವದಾ ಸವಿತಾ

ಬಾ ಸವಿತಾ ಬಾ ಸವಿತಾ ಬಾ ಸವಿತಾ ಬಾ ಸವಿತಾ

ಸರ್ವರಿಗೂ ಈ ದಿವ್ಯತೆಯ ಬೆಳಕು ಲಭಿಸಲಿ.  ಈ ಲೋಕ ಸಕಲ ಜ್ಞಾನ ಸುಖ ಶಾಂತಿ ನೆಮ್ಮದಿಗಳಿಂದ ಈ ಬೆಳಕಿನಲ್ಲಿ ಸಮ್ಮಿಳಿತಗೊಂಡಿರಲಿ.

'ಕನ್ನಡ  ಸಂಪದ

August 18, 2021

ಚುಟುಕು ಸಾಹಿತ್ಯ ಚಕ್ರವರ್ತಿ ಹೆಚ್ ದುಂಡಿರಾಜ

ಹನಿಗವನಗಳ ರಾಜ,ಚುಟುಕು ಚಕ್ರವರ್ತಿ ಶ್ರೀ ಹೆಚ್ ಡುಂಡಿರಾಜ್ 
ಹನಿಗವನಗಳ ರಾಜ, ಚುಟುಕು ಚಕ್ರವರ್ತಿ ಎಂದೇ ಜನಪ್ರಿಯರಾಗಿರುವ ಎಚ್.ಡುಂಡಿರಾಜ್ ಪದ್ಯ ಹಾಗು ಗದ್ಯ ಎರಡರಲ್ಲೂ ಗಣನೀಯ ಕೃಷಿಮಾಡಿರುವ ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದಾರೆ. ಈವರೆಗೆ ಇವರ ೫೭ ಕೃತಿಗಳು ಪ್ರಕಟವಾಗಿವೆ. ಇವುಗಳಲ್ಲಿ ೪೫೦೦ ಕ್ಕೂ ಹೆಚ್ಚು ಹನಿಗವನಗಳು, ೩೫೦ಕ್ಕೂ ಹೆಚ್ಚು ಇಡಿಗವನಗಳು, ೫೩೦ಕ್ಕೂ ಹೆಚ್ಚು ಲೇಖನಗಳು, ೧೫ ನಾಟಕಗಳು ಹಾಗೂ ಒಂದು ಪ್ರವಾಸ ಕಥನ ಸೇರಿವೆ. ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ೩೬ ವರ್ಷ ಸೇವೆ ಸಲ್ಲಿಸಿ ೨೦೧೬ರಲ್ಲಿನಿವೃತ್ತರಾದ ಇವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
*ಜೀವನ*
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿಕುದ್ರು ಎಂಬ ಹಳ್ಳಿಯಲ್ಲಿ ವೆಂಕಟರಮಣಭಟ್ ಮತ್ತು ರಾಧಮ್ಮ ಅವರ ಮಗನಾಗಿ ೧೮ನೇ ಆಗಷ್ಟ್, ೧೯೫೬ ರಂದು ಜನಿಸಿದರು. ಹಟ್ಟಿಕುದ್ರು ಮತ್ತು ಬಸ್ರೂರಿನಲ್ಲಿ ಪ್ರಾಥಮಿಕ ಹಾಗು ಹೈಸ್ಕೂಲ್ ಶಿಕ್ಷಣ ಮುಗಿಸಿ ಬೆಂಗಳೂರಿನ ವಿಜಯಾಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು. ೧೯೭೨-೭೮ ರಲ್ಲಿ ಹೆಬ್ಬಾಳದ ಕೃಷಿಕಾಲೇಜಿನಲ್ಲಿ ಬಿ.ಎಸ್ಸಿ(ಕೃಷಿ) ಒದಿದರು. ೧೯೭೮-೮೦ರಲ್ಲಿ ದಾರವಾಡ ಕೃಷಿ ಕಾಲೇಜಿನಲ್ಲಿ, ಅತ್ಯಧಿಕ ಅಂಕ ಗಳಿಸಿದ್ದಿಕ್ಕಾಗಿ ಸ್ವರ್ಣ ಪದಕದೊಂದಿಗೆ ಎಂ.ಎಸ್ಸಿ (ಕೃಷಿ) ಪೂರೈಸಿದರು.

೧೯೮೦ರಲ್ಲಿ ಕಾರ್ಪೋರೇಶನ್ ಬ್ಯಾಂಕ್‌ನಲ್ಲಿ ಕೃಷಿ ಅಧಿಕಾರಿಯಾಗಿ ವೃತ್ತಿ ಆರಂಭಿಸಿ ಮಂಗಳೂರು, ಉಡುಪಿ, ಕಾರ್ಕಳ, ಬ್ರಹ್ಮಾವರ, ಬೆಳಗಾವಿ, ನಾಸಿಕ್, ಮುಂಬೈ ಹಾಗೂ ಬೆಂಗಳೂರಿನಲ್ಲಿ ಒಟ್ಟು ೩೬ ವರ್ಷ ವಿವಿಧ ಹುದ್ದೆಗಳ ನಿರ್ವಹಿಸಿ, ೨೦೧೬ರಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದರು.

ಈಗ ಮಡದಿ ಭಾರತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮಗಳು ಸಹಜಾ, ಅಳಿಯ ಸಂದೀಪ್ ಹಾಗು ಮೊಮ್ಮಗಳು ದಿವಿಜಾ. ಮಗ ಸಾರ್ಥಕ ಮತ್ತು ಸೊಸೆ ಉತ್ಕಲಾ

*ಸಾಹಿತ್ಯ*
ವಿದ್ಯಾರ್ಥಿಯಾಗಿದ್ದಾಗಲೆ ಮಕ್ಕಳ ಕವನಗಳ ರಚನೆಯಲ್ಲಿ ತೊಡಗಿದ್ದರು. ಕಾಲೇಜಿನಲ್ಲಿ ಕೈ ಬರಹಪತ್ರಿಕೆ, ಭಿತ್ತಿಪತ್ರಿಕೆ ಪ್ರಕಟಣೆ, ನಾಟಕಗಳಲ್ಲಿ ಅಭಿನಯ ಇತ್ಯದಿಗಳ ಮೂಲಕ ಸದಾ ಚಟುವಟಿಕೆಯಿಂದ ಕೂಡಿದ್ದರು. ಬೆಂಗಳೂರಿನಲ್ಲಿ ಅಣ್ಣ, ಸಾಹಿತ್ಯ ಪ್ರೇಮಿ ಶಿವರಾಮ್ಭಟ್ವರ ಮನೆಯಲ್ಲಿದ್ದ ಸಾಹಿತ್ಯ ಕೃತಿಗಳ ಅಧ್ಯಯನದಿಂದ ಚಿಗುರಿದ ಸಾಹಿತ್ಯಾಸಕ್ತಿ ವೃತ್ತಿಜೀವನದ ಜತೆಗೆ ಪ್ರವೃತ್ತಿಯಾಗಿ ಮುಂದುವರಿಯಿತು. ೨೧ನೇ ವಯಸ್ಸಿನಿಂದಲೇ ಅವರು ಬರೆದ ಕವನ, ಹನಿಗವನ, ಹಾಸ್ಯಲೇಖನ, ಸಾಹಿತ್ಯಿಕ ಬರಹಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿತು. ವಿಶೇಷಾಂಕಗಳಲ್ಲಿ ಹನಿಗವನಗಳ ಪ್ರಕಟಣೆ. ಆಕಾಶವಾಣಿ ಹಾಗೂ ಟಿವಿ ವಾಹನಗಳಲ್ಲಿ ಅನೇಕ ಕವನಗಳು ಹಾಗೂ ನಾಟಕಗಳು ಪ್ರಸಾರಗೊಂಡಿವೆ. ರಂಗ ಹಾಗೂ ರೇಡಿಯೋ ನಾಟಕಗಳಲ್ಲಿಅಭಿನಯಿಸಿದ್ದಾರೆ. ಇವರ ಓಡುವವರು, ಹುಡುಕಾಟ, ಅಜ್ಜಿಕತೆ, ಕೊರಿಯಪ್ಪನ ಕೊರಿಯೋಗ್ರಫಿ, ಅಧ್ವಾನಪುರ ನಾಟಕಗಳು ಹಲವಾರುಪ್ರದರ್ಶನಗಳನ್ನುಕಂಡಿವೆ. ಇವರು ರಚಿಸಿದ ಕೆಲವು ನಾಟಕಗಳು ವಿದೇಶಗಳಲ್ಲೂ ಪ್ರದರ್ಶನ ಕಂಡಿವೆ. ಇತ್ತೀಚಿನ ನಾಟಕ ಪುಕ್ಕಟೆ ಸಲಹೆ ೪೫ ಪ್ರದರ್ಶನಗಳನ್ನುಕಂಡಿದೆ.

ಅಂಕಣಕಾರರಾಗಿಯೂಪ್ರಸಿದ್ಧರಾಗಿರುವ ಡುಂಡಿರಾಜ್ ವಿಜಯಕರ್ನಾಟಕ, ಪ್ರಜಾವಾಣಿ, ಕಸ್ತೂರಿ, ತುಷಾರ, ವಿಜಯವಾಣಿ ಹಾಗೂ ಉದಯವಾಣಿ ಪತ್ರಿಕೆಗಳಿಗೆ ಅಂಕಣ ಬರೆದಿದ್ದಾರೆ. ಉದಯವಾಣಿ ಪತ್ರಿಕೆಯಲ್ಲಿ ‘ಹನಿದನಿ’ಎಂಬ ದೈನಿಕ ಅಂಕಣದಲ್ಲಿ ೨೦೧೧ರ ಸೆಪ್ಟೆಂಬರ್ ತಿಂಗಳಿನಿಂದ ನಿರಂತರವಾಗಿ ಪ್ರತಿ ದಿನವೂ ಹೊಸ ಹನಿಗವನ ಬರೆಯುತ್ತಿದ್ದಾರೆ.

ಹಾಸ್ಯಭಾಷಣಕಾರರಾಗಿಯೂಜನಪ್ರಿಯರಾಗಿರುವ ಡುಂಡಿರಾಜ್ ಕರ್ನಾಟಕ ಮಾತ್ರವಲ್ಲದೆ, ದೆಹಲಿ, ಮುಂಬೈ, ಚೆನ್ನೆöÊ, ಅಮೆರಿಕಾ, ಇಂಗ್ಲೆAಡ್, ಸಿಂಗಾಪೂರ್, ದುಬೈ, ಕತಾರ್ ಹಾಗು ಬಹರೈನ್ನ್ ‌ನಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಹಲವುನಾಟಕಗಳಿಗೆ, ನಕ್ಕಳಾರಾಜಕುಮಾರಿ, ಕೋತಿಗಳುಸಾರ್ಕೋತಿಗಳು, ನಿಂಬೆಹುಳಿ ಹಾಗೂ ಹಾರುವ ಹಂಸಗಳು ಚಲನಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಭಾವಗೀತೆಗಳಿಗೆ ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ಬಿ.ವಿ.ಕಾರಂತ್, ಉಪಾಸನಾ ಮೋಹನ್, ಮನೋರಂಜನ್ ಪ್ರಭಾಕರ್, ವಿ. ಮನೋಹರ್, ಬಿ.ವಿ.ಶ್ರೀನಿವಾಸ್ ಮುಂತಾದವರು ರಾಗ ಸಂಯೋಜನೆ ಮಾಡಿದ್ದಾರೆ. ನಾಡಿನ ಖ್ಯಾತ ಗಾಯಕ ಗಾಯಕಿಯರು ಹಾಡಿರುವ ಈ ಗೀತೆಗಳ ಧ್ವನಿಮುದ್ರಿಕೆಗಳು ಜನಪ್ರಿಯವಾಗಿವೆ.

*ಕೃತಿಗಳು*
*ಹನಿಗವನಸಂಕಲನಗಳು:*

೧.ಪಾಡ್ಯ ಬಿದಿಗೆ ತದಿಗೆ (೧೯೮೫)
೨.ನವನೀತ (೧೯೯೧)
೩.ನೂರು ಹನಿಗವನಗಳು (೧೯೯೨)
೪.ಇನ್ನೂರು ಹನಿಗವನಗಳು (೧೯೯೫)
೫.ಪಂಚ್ಕಜಾಯ (೧೯೯೭)
೬.ಹನಿಕೇತನ (೧೯೯೯)
೭.ಅಳಿಲು ಸೇವೆ (೨೦೦೦)
೮.ಹನಿ ಖಜಾನೆ (೨೦೦೦) (ಇದುವರೆಗಿನ ಹನಿ ಗವನಗಳು)
೯.ಹನಿ ಹನಿ ಪ್ರೀತಿ (೨೦೦೯) (ಆಯ್ದ ಹನಿಗವನಗಳು)
೧೦.ಹನಿ ಹನಿ ಹಾಸ್ಯ (೨೦೦೯) (ಆಯ್ದ ಹನಿಗವನಗಳು)
೧೧.ಹನಿಗಣಿ (೨೦೧೦)
೧೨.ಹನಿಗಾರಿಕೆ (೨೦೧೨)
೧೩.ಹನಿ ದರ್ಶಿನಿ (೨೦೧೩)
೧೪.ಹನಿ ವಾಹಿನಿ (೨೦೧೪)
೧೫.ಹನಿ ಮೋಹಿನಿ(೨೦೧೫)
೧೬.ಹನಿ ರಂಜನಿ (೨೦೧೬)
೧೭.ಹನಿ ಮಾರ್ದನಿ (೨೦೧೮)
೧೮.ಡುಂಡಿ ಸೂಜಿ (ಆಯ್ದ ಹನಿಗವನಗಳು) (೨೦೧೮)
೧೯.ಪಂಚ್ನಾಮಾ (೨೦೧೮)
೨೦.ಮಿನಿ ಮಿನುಗು(೨೦೧೯)
೨೧.ಕರೊನಾರೀ ಸಹೋದರ(೨೦೨೦)

(ಅಕ್ಷತಾಲಕ್ಷತಾ ಮತ್ತು ಕನಕನಕಿಂಡಿ ಕವನ ಸಂಕಲನಗಳಲ್ಲಿಇಡಿ ಗವನಗಳ ಜೊತೆಗೆ ಹನಿಗವನಗಳೂ ಇವೆ.)

*ಕವನಸಂಕಲನಗಳು*

೧.ನಮ್ಮ ಗೋಡೆಯ ಹಾಡು (೧೯೮೨)
೨.ನೀನಿಲ್ಲದೆ (೧೯೮೬)
೩.ನನ್ನ ಕವಿತೆ ನನ್ನ ಹಾಗೆ (೧೯೯೨)
೪.ಆಯದಕ ವನಗಳು (೧೯೯೮)
೫.ಏನಾಯಿತು (೧೯೯೯)
೬.ಅಕ್ಷತಾ-ಲಕ್ಷತಾ (೨೦೦೪)
೭.ಬನ್ನಿ ನಮ್ಮ ಹಾಡಿಗೆ (ಗೀತೆಗಳು) (೨೦೦೪)
೮.ಇಂಚರ ಬಂದಳು ಇಂಚರ (ಮಕ್ಕಳಕವಿತೆಗಳು)  (೨೦೧೩)
೯.ಕನಕನ ಕಿಂಡಿ (೨೦೧೭)
೧೦.ಇಡಿ ಕಿಡಿ ಕವನಗಳು (ಆಯ್ದಕವನಗಳು) (೨೦೧೭)
೧೧.ಲಾಲಿ ಪಾಪು ಚೀಪು ಚೀಪು (೨೦೨೦) (ಮಕ್ಕಳಕವನಗಳ ಇ-ಪುಸ್ತಕ ಮತ್ತು ಆಡಿಯೋ ಪುಸ್ತಕ)
*ಪ್ರಬಂಧ/ ಅಂಕಣಬರಹಗಳಸಂಗ್ರಹ*

೧.ಯಾರಿಗೂ ಹೇಳ್ಬೇಡಿ (೨೦೦೦)
೨.ಮಾತು ಕ(ವಿ)ತೆ (೨೦೦೫)
೩.ಮತ್ತಷ್ಟುಮಾತು-ಕ(ವಿ)ತೆ (೨೦೦೬)
೪.ಪರವಾಗಿಲ್ಲ (೨೦೦೭)
೫.ಬಾರಯ್ಯ ಲಂಬೋದರ (೨೦೦೮)
೬.ಟೈಮಿಲ್ಲ ಸಾರ್ಟೈಮಿಲ್ಲ (೨೦೦೮)
೭.ಡುಂಡಿಮ (೨೦೧೦)
೮.ಕಾರ್ಡಿದ್ರೆ ಕೈಲಾಸ (೨೦೧೧)
೯.ಡುಂಡಿ ನಗೆ ಬಂಡಿ (ಆಯ್ದನಗೆಬರಹಗಳು) (೨೦೧೩)
೧೦.ಅನಿವಾಸಿಗಳೇ ವಾಸಿ(ಪ್ರವಾಸಕಥನ) (೨೦೧೩)
೧೧.ಬೋಳಾಯ ತಸ್ಮೆöÊ ನಮಃ (೨೦೧೫)
೧೨.ನೊಣಾನುಬಂಧ (೨೦೧೮)
೧೩.ಕರೆಗಳುಸಾರ್ಕರೆಗಳು (೨೦೧೯)
೧೪.ಕಾಯುವಕಾಯಕ (೨೦೧೯)

*ನಾಟಕಗಳು*

೧.ಓಡುವವರು(೧೯೮೧)
೨.ಹುಡುಕಾಟ(೧೯೮೫)
೩.ಅಧ್ವಾನಪುರ(೧೯೮೯)
೪.ಕೊರಿಯಪ್ಪನ ಕೊರಿಯೋಗ್ರಫಿ (ಎರಡುನಾಟಕಗಳು) (೧೯೯೧)
೫.ಅಜ್ಜಿಕತೆ (ಮಕ್ಕಳನಾಟಕ) (೧೯೯೪)
೬.ಸಿನಿಮಹಾತ್ಮೆ (ಮೂರುನಾಟಕಗಳು) (೧೯೯೬)
೭.ಕಾಯೋಕಲ್ಪ ಮತ್ತು ಇತರ ನಾಟಕಗಳು (೨೦೦೩)
೮.ಇಪ್ಪತ್ತೊಂದರೆಶತಮಾನ (೨೦೦೩)
೯.ಮಗು ಕಳೆದು ಹೋಗಿದೆ (೨೦೦೬)
೧೦.ಪುಕ್ಕಟೆಸಲಹೆ (೨೦೧೧)


*ಸಂಪಾದಿತ*

ಸೂಜಿಮಲ್ಲಿಗೆ (ಹನಿಗವನಗಳು) (೧೯೯೬) ಪ್ರ: ಕನ್ನಡಸಾಹಿತ್ಯಪರಿಷತ್,   ಬೆಂಗಳೂರು


*ಧ್ವನಿಸುರುಳಿ/ಧ್ವನಿಮುದ್ರಿಕೆಗಳು :*

೧.ಡುಂಡಿ ಕಾಮಿಡಿ ಉಪನ್ಕಾಯ್ (ಹನಿಗವನಗಳು) ನಿ: ಸಿ.ಅಶ್ವಥ್ ಮತ್ತು ಟಿ.ಎಸ್. ನಾಗಾಭರಣ
೨.ಸಲ್ಲಾಪ (ಭಾವಗೀತೆಗಳು) ನಿ: ಸಿ.ಅಶ್ವಥ್
೩.ಹುಣ್ಣಿಮೆ (ಭಾವಗೀತೆಗಳು) ನಿ: ಸಿ.ಅಶ್ವಥ್
೪.ನಾವಿರೋದೆಹೀಗೆ (ಹಾಸ್ಯಗೀತೆಗಳು) ನಿ: ಬಿ.ವಿ. ಶ್ರೀನಿವಾಸ್
೫.ಕಿರುನಗೆ (ಭಾವಗೀತೆಗಳು) ನಿ: ಉಪಾಸನಾಮೋಹನ್
೬. ಹಾಸ್ಯಗಂಗೆ (ಹಾಸ್ಯಭಾಷಣದಡಿವಿಡಿ) ನಿ: ಝಂಕಾರ್ಆಡಿಯೊ

*ಡುಂಡಿರಾಜ್ಸಾಹಿತ್ಯದಕುರಿತುಕೃತಿಗಳು:*

೧.ವಿನೋದಸೌಧದಸಾಹಿತಿಡುಂಡಿರಾಜ್- ಲೇ: ಡಾ.ಜಿ.ಎನ್. ಉಪಾಧ್ಯ
೨. ಡುಂಡಿಮಲ್ಲಿಗೆ- ಸಂ: ಡಾ.ಎಚ್.ಎಸ್.ಸತ್ಯನಾರಾಯಣಮತ್ತುಎನ್.ರಾಮನಾಥ್
*ಪ್ರಶಸ್ತಿ, ಗೌರವಗಳು*
ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ. (೨೦೦೬)
ಅಖಿಲ ಭಾರತ ಬಾನುಲಿ ನಾಟಕ ರಚನಾ ಸ್ಪರ್ಧೆಯಲ್ಲಿ ಅತ್ಯುತ್ತಮ ಹಾಸ್ಯ ನಾಟಕ ಪುರಸ್ಕಾರ. (೧೯೮೯-೯೦)
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ.(೧೯೯೪)
ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹನಿಗವನ ಗೋಷ್ಠಿಯ ಅಧ್ಯಕ್ಷತೆ (೧೯೯೬)
ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚುಟುಕು ಗೋಷ್ಠಿಯ ಅಧ್ಯಕ್ಷತೆ. (೨೦೦೬)
ಕಡೆಂಗೋಡ್ಲು ಕಾವ್ಯ ಪ್ರಶಸ್ತಿ.(೧೯೮೨)
ಮುದ್ದಣ ಕಾವ್ಯ ರಾಜ್ಯಪ್ರಶಸ್ತಿ(೧೯೮೫)
ಕುಂದಪ್ರಭ - ಕೋ.ಮ.ಕಾರಂತ ಪುರಸ್ಕಾರ(೨೦೦೬)
ವಿಶ್ವೇಶ್ವರಯ್ಯ ಪ್ರಶಸ್ತಿ (೨೦೦೭)
ಆರ್ಯಭಟಪ್ರ ಶಸ್ತಿ (೨೦೦೭)
ಚುಟುಕು ಸಾರ್ವಭೌಮ ಪ್ರಶಸ್ತಿ(೨೦೦೮)
ಚುಟುಕು ಚಕ್ರವರ್ತಿ ಪ್ರಶಸ್ತಿ (೨೦೧೧)
ಚುಟುಕು ರತ್ನ ಪ್ರಶಸ್ತಿ (೧೯೯೬)
ಭಾರ್ಗವಪ್ರ ಶಸ್ತಿ(೧೯೯೩)
ಶ್ರೀ ಪೇಜಾವರ ಮಠದ ರಾಮವಿಠಲಪ್ರಶಸ್ತಿ (೨೦೧೨)
ಸುರಭಿ ಪ್ರತಿಷ್ಠಾನದ ಬಿಂದುಶ್ರೀ ಪ್ರಶಸ್ತಿ (೨೦೧೩)
ಬೆಳಗಾವಿಯ ಜಿನದತ್ತ ದೇಸಾಯಿ ಸಹಸ್ರ ಚಂದ್ರ ದರ್ಶನ ಸಮಿತಿ ಏರ್ಪಡಿಸಿದ್ದ ಹನಿಗವನ ಕೃತಿಗಳ ರಾಜ್ಯ ಮಟ್ಟದ ಸ್ಫರ್ಧೆಯಲ್ಲಿ ‘ಹನಿಗಣಿ’ಸಂಕಲನಕ್ಕೆ ಪ್ರಥಮ ಬಹುಮಾನ(೨೦೧೧)
‘ಹನಿಮೋಹಿನಿ’ಕೃತಿಗೆ ವಿಶ್ವೇಶ್ವರಯ್ಯ ರಾಷ್ತ್ರೀಯ ಸಾಹಿತ್ಯ ಪ್ರಶಸ್ತಿ(೨೦೧೬)
‘ಬೋಳಾಯತಸ್ಮೆಯೇನಮಃ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಡಿ. ಮಾಣಿಕರಾವ್ ಸ್ಮರಣಾರ್ಥ ಸಾಹಿತ್ಯ ದತ್ತಿಪ್ರ ಶಸ್ತಿ(೨೦೧೬)
ರಂಗಶ್ರೀ ಪ್ರಶಸ್ತಿ (೨೦೧೮)
ಶ್ರೀ ಸಿದ್ಧತೋಟೇಂದ್ರ ಚುಟುಕುರತ್ನ ಪ್ರಶಸ್ತಿ (೨೦೧೮)
ದುಬೈನಲ್ಲಿ ನಡೆದ ಪ್ರಥಮ ಯು.ಎ.ಇ. ಚುಟುಕು ಸಮ್ಮೇಳನದ ಅಧ್ಯಕ್ಷತೆ (೨೦೧೧)
ಅಮೆರಿಕದ ಅಟ್ಲಾಂಟಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲಿ ಹಾಗೂ ಅಲ್ಲಿನ ವಿವಿಧ ನಗರಗಳಲ್ಲಿ ಕಾವ್ಯವಾಚನ (೨೦೧೨)
ಸಿಂಗಾಪೂರ್ ಕನ್ನಡಸಂಘದಿಂದ ಸನ್ಮಾನ (೨೦೧೩)
ಇಂಗ್ಲೆಂಡಿನ ಬ್ರೆ ಡ್ಫೋರ್ಡ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯು.ಕೆ. ಕನ್ನಡ ಬಳಗದಿಂದ ಸನ್ಮಾನ (೨೦೧೭)
ಕತಾರ್ ರಾಜ್ಯೋತ್ಸವದಲ್ಲಿ ಸನ್ಮಾನ (೨೦೧೭)
೧೯೮೨ - ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ( ನಮ್ಮ ಗೋಡೆಯ ಹಾಡು)
೧೯೮೫ - ಮುದ್ದಣ ಕಾವ್ಯ ರಾಜ್ಯ ಪ್ರಶಸ್ತಿ (ನೀನಿಲ್ಲದೆ)
೧೯೮೯-೯೦ - ಅತ್ಯುತ್ತಮ ಹಾಸ್ಯ ನಾಟಕ - ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆ ( ನಾಳೆ ಬನ್ನಿ)
೧೯೯೦ - ಕರ್ನಾಟಕ ಸರಕಾರದ ಬಹುಮಾನ (ನವನೀತ)
೧೯೯೪ - ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (ಅಜ್ಜಿ ಕಥೆ)
೧೯೯೬ - ಚುಟುಕುರತ್ನ ಪ್ರಶಸ್ತಿ
೧೯೯೬ - ಅಧ್ಯಕ್ಷತೆ - ಹನಿಗವನಗೋಷ್ಠಿ , ೬೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
೨೦೦೬-೦೭ - ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪುರಸ್ಕಾರ(ರೇಡಿಯೋ ರಂಗ ನಾಟಕಕ್ಕೆ ಸಲ್ಲಿಸಿರುವ ಸೇವೆಗೆ)
*ಮಾಹಿತಿ ಕೃಪೆ: ಅಂತರ್ಜಾಲ*
*ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ*

"ದೇವರು ಎಲ್ಲಿ ವಾಸಿಸುತ್ತಾನೆ"?

#ನಮ್ಮೊಳಗಿನ “ನಾನು” ಯಾರು? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ನಮ್ಮ ದೇಹ, ವಿದ್ಯೆ, ಉದ್ಯೋಗ, ಇನ್ನಾವುದೋ ವಿಶೇಷತೆಗಳಿಂದ ಗುರುತಿಸಿಕೊಳ್ಳುತ್ತಿದ್ದೇವೆಯೇ ಹೊರತು ಅದರಿಂದಾಚೆಗೆ ನಾನು ಎಂದರೆ ಯಾರು? ಏನು? ಎಂಬುದು ಉತ್ತರವಿಲ್ಲದ ಪ್ರಶ್ನೆ.
    #ದೇಹಮಾತ್ರವೇ ನಮಗೆ ನಾನು ಎಂಬುದರ ರೂಪವಾಗಿ ಹೊರಗಣ್ಣಿಗೆ ಕಾಣುತ್ತಿರುತ್ತದೆ. ಆದರೆ ನಮ್ಮ ಆತ್ಮವು ಏನು? ಎಲ್ಲಿಂದ ಬಂದುದು? ಎಂಬುದಕ್ಕೆ ಕಾರಣವಾಗಿ ನಾವು ಕಂಡುಕೊಂಡಿದ್ದು ದೇವರು. ಎಲ್ಲವನ್ನೂ ನಿಯಂತ್ರಿಸುವ ಶಕ್ತಿಯಾದ ಈ ನಿರಾಕಾರ, ನಿರ್ಮಲವಾದ ಪರಮಾತ್ಮ ಎಲ್ಲಿ ನೆಲೆಸುತ್ತಾನೆ? ಎಂಬ ಪ್ರಶ್ನೆಗೆ ಶ್ವೇತಾಶ್ವತರ ಉಪನಿಷತ್ತಿನಲ್ಲಿದೆ.
 
 *ನವದ್ವಾರೇ ಪುರೇ ದೇಹೀ ಹಂಸೋ ಲೇಲಾಯತೇ ಬಹಿಃ, ವಶೀ ಸರ್ವಸ್ಯ ಲೋಕಸ್ಯ ಸ್ಥಾವರಸ್ಯ ಚರಸ್ಯ ಚ || (೩. ೧೮)*

1) ಜೀವಿಯ ದೇಹದಲ್ಲಿಯೇ ದೇವರು ವಾಸಿಸುತ್ತಾನೆ. ಈ ದೇವತ್ತೊಮ ಅಥವಾ ಪರಮಪುರುಷನು ಜೀವಿಗಳ ದೇಹದಲ್ಲಿದ್ದುಕೊಂಡೇ ವಿಶ್ವವನ್ನು ನಿಯಂತ್ರಿಸುತ್ತಾನೆ. ನವದ್ವಾರಗಳುಳ್ಳ ಶರೀರವೆಂಬ ಪುರದಲ್ಲಿ ದೇವರು ಇದ್ದುಕೊಂಡೇ ಹೊರಗೆಲ್ಲ ಚಲಿಸುತ್ತಾನೆ ಎಂಬುದು ಶ್ವೇತಾಶ್ವತರೋಪನಿಷತ್ತಿನಲ್ಲಿದೆ.

2)ಈ ದೇವನು ಕೈಕಾಲುಗಳಿಲ್ಲದವನು ಆದರೆ ವೇಗವಾಗಿ ಚಲಿಸುವವನೂ ಕೈಗಳಿಲ್ಲದಿದ್ದರೂ ಎಲ್ಲವನ್ನೂ ಪಡೆಯುವವನೂ ಕಣ್ಣುಗಳಿಲ್ಲದೆಯೂ ನೋಡಬಲ್ಲವನೂ ಕಿವಿಗಳಿಲ್ಲದೆಯೂ ಕೇಳಬಲ್ಲವನೂ ಮನಸ್ಸಿಲ್ಲದೆಯೂ ಎಲ್ಲವನ್ನೂ ಅರಿಯಬಲ್ಲವನೂ ಆಗಿದ್ದಾನೆಂದು ಮುಂದಿನ ಶ್ಲೋಕದಲ್ಲಿ ಈ ಉಪನಿಷತ್ತಿನಲ್ಲಿ ವಿವರಿಸಲಾಗಿದೆ.

3)ಇಂತವನನ್ನು ಅರಿಯಬಲ್ಲವರು ಯಾರೂ ಇಲ್ಲ. ಹಾಗಾಗಿ ದೇವನು ಸರ್ವಕಾರಣನಾದ ಪರಿಪೂರ್ಣ ಸ್ವರೂಪನು ಮಹಾಂತನು ಎಂದು ಋಷಿಗಳು ಹೇಳುತ್ತಾರೆ.

3) ಭಗವದ್ಗೀತೆಯ ಐದನೆಯ ಅಧ್ಯಾಯದಲ್ಲಿ ಇಂತಹ ದೇವನು ನೆಲೆಯಿರುವ ನಮ್ಮ ದೇಹ ಮತ್ತು ಮನಸ್ಸು ಪರಿಶುದ್ಧವಾಗಿರಬೇಕು ಎಂದು ಹೇಳಲಾಗಿದೆ. ಕರ್ಮಫಲಗಳಿಗೆ ಮಾರುಹೋಗುವವನು ತೊಡಕಿನಲ್ಲಿ ಸಿಲುಕಿಕೊಳ್ಳುತ್ತಾನೆ. ಕರ್ಮಫಲಗಳನ್ನು ಯೋಚಿಸದೆ ಒಂದೇ ರೀತಿಯಾದ ನಿಷ್ಠೆಯಿಂದಿರುವವನ ಆತ್ಮ ಪರಿಶುದ್ಧವಾದ ಶಾಂತಿಯನ್ನು ಹೊಂದಲು ಸಾಧ್ಯ.
  ಸರ್ವಕರ್ಮಾಣಿ ಮನಸಾ ಸನ್ನ್ಯಸ್ಯಾಸ್ತೇ ಸುಖಂ ವಶೀ, ನವದ್ವಾರೇ ಪುರೇ ದೇಹೀ ನೈವ ಕುರ್ವನ್ನ ಕಾರಯನ್ ||೧೩||ಅಧ್ಯಾಯ ೫||

* ದೇಹಸ್ಥ ಜೀವಿಯು ತನ್ನ ಸ್ವಭಾವಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾನಸಿಕವಾಗಿ ಎಲ್ಲ ಕರ್ಮಗಳನ್ನೂ ತ್ಯಜಿಸಿದಾಗ ಅವನು ನವದ್ವಾರಗಳ ನಗರದಲ್ಲಿ ಸುಖವಾಗಿ ವಾಸಿಸುತ್ತಾನೆ. ಅವನು ಕಾರ್ಯಗಳನ್ನು ಮಾಡಿಸುವುದೂ ಇಲ್ಲ, ಮಾಡುವುದೂ ಇಲ್ಲ ಎಂದು ಗೀತೆ ಹೇಳುತ್ತದೆ.

*ನವದ್ವಾರಗಳಿಂದಲೇ ನಮ್ಮ ದೇಹ ನಿರ್ಮಿತವಾಗಿದೆ. ಎರಡು ಕಣ್ಣುಗಳು, ಎರಡು ಕಿವಿಗಳು, ಎರಡು ಮೂಗಿನ ಹೊಳ್ಳೆಗಳು, ಒಂದು ಬಾಯಿ, ಗುದದ್ವಾರ ಮತ್ತು ಜನನೇಂದ್ರಿಯ ಇವೇ ದೇಹದ ನವರಂಧ್ರಗಳು. ಇವುಗಳನ್ನೇ ಪುರವನ್ನಾಗಿಸಿಕೊಂಡು ದೇವರು ವಾಸಿಸುತ್ತಾನೆ.

*ಇವೆಲ್ಲವುಗಳ ನಿಯಂತ್ರಣವೇ ಉತ್ತಮ ಸ್ವಭಾವಕ್ಕೆ ಕಾರಣವಾಗುತ್ತದೆ. ಮನುಷ್ಯನು ಈ ನವರಂಧ್ರಗಳಿರವುದರಿಂದಲೇ ಬದುಕುತ್ತಿದ್ದಾನೆ. ಈ 

*ನವದ್ವಾರಗಳನ್ನು ಮೊದಲು ಪರಿಶುದ್ಧವಾಗಿಡಬೇಕೆಂಬುದು ಇದರ ಮತಿತಾರ್ಥ.
ನವದ್ವಾರಗಳೂ ದೇವರ ವಾಸಸ್ಥಾನವಾದ್ದರಿಂದ ನಾವು ನೋಡುವ, ಕೇಳುವ ಸಂಗತಿಗಳು ಉತ್ತಮವಾದುದೇ ಆಗಿರಬೇಕು. ಸೇವಿಸುವ ಆಹಾರಗಳು ದೇಹವನ್ನು ಸಮಸ್ಥಿತಿಯಲ್ಲಿ ಇಡುವಂತಿರಬೇಕು. ಮೂಗು ಹುಡುಕಿದ ಪರಿಮಳವನ್ನು ಅರಸಿಕೊಂಡು ಕಣ್ಣು ಹೋಗುತ್ತದೆ. ಅದು ಒಳ್ಳೆಯದೇ ಆಗಿದ್ದರೆ ಒಳಿಯಾಗುತ್ತದೆ. ಇಲ್ಲವೆಂದಾದಲ್ಲಿ ಕೆಟ್ಟದಾಗುತ್ತದೆ.

*ಹಾಗಾಗಿ ಪರಿಮಳವನ್ನೂ ಪರಂಬರಿಸುವ ಯುಕ್ತಿ ನಮ್ಮಲ್ಲಿರಬೇಕು. ದೇಹದ ಪರಿಶುದ್ಧತೆಯಿಂದ ಆತ್ಮವೂ ಶುದ್ಧವಾಗಿ ಶಾಂತಿಯನ್ನು ಹೊಂದುತ್ತದೆ. ದೇವರು ವಾಸಿಸುವ ದೇಹ ದೇವರ ಗುಡಿ. ಈ ಗುಡಿಯನ್ನು ಶುದ್ಧವಾಗಿಟ್ಟುಕೊಳ್ಳುವುದು ನಮ್ಮ ಗುರಿಯಾಗಬೇಕು. ನಮ್ಮೊಳಗಿನ ದೇವರನ್ನು ನಾವು ಕಂಡುಕೊಂಡಾಗ ಸಿಗುವ ಆನಂದವೇ ದೈವತ್ವ.
 
 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)

August 17, 2021

ಅನ್ನದಾನದ ಪುಣ್ಯ ಯಾವುದು?


ಕಥೆ:-
ಒಂದು ಊರಲ್ಲಿ ತಾಯಿ ಮಗ ಇದ್ದರು. ತಾಯಿ ಅವರಿವರ ಮನೆಯ ಕಸಮುಸರೆ ತೊಳೆದು ತಂದುದರಲ್ಲಿ ಮನೆಗೆ ಬಂದವರಿಗೆ ದಾನ ಮಾಡಿ, ಉಳಿದುದನ್ನು ಇಬ್ಬರೂ ತಿನ್ನುತ್ತಿದ್ದರು. 

ಒಂದೊಂದು ದಿನ ಬಹಳ ಮಂದಿ ಭಿಕ್ಷೆಗೆ ಬಂದರೆ ಮಗನಿಗಷ್ಟು ಇಟ್ಟು ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತಿದ್ದಳು. ಮಗ ಹೀಗೇ ಬೆಳೆದು ದೊಡ್ಡವನಾದ. ವಯಸ್ಸಿಗೆ ಬಂದ. ತಾಯಿ ಬರೇ ಅನ್ನದಾನವೊಂದನ್ನು ಬಿಟ್ಟಿದ್ದರೆ ಅವರು ದೊಡ್ಡ ಶ್ರೀಮಂತರಾಗಬೇಕಿತ್ತು. ಆಗಲಿಲ್ಲ. 
ತಾಯಿ ಹೀಗೇಕೆ ಮಾಡುತ್ತಿರಬಹುದೆಂದು ಮಗನಿಗೆ ಯೋಚನೆಯಾಯಿತು.

ಒಂದು ದಿನ ಮಗ,ತಾಯಿ, ಇದೇಕೆ ಹೀಗೆ ಅನ್ನದಾನ ಮಾಡುತ್ತೀ? ಒಂದೊಂದು ದಿನ ನೀನೇ ಉಪವಾಸವಿದ್ದು ಬೇರೆಯವರಿಗೆ ಅನ್ನದಾನ ಮಾಡುತ್ತೀ, ಅನ್ನದಾನವೊಂದನ್ನು ಬಿಟ್ಟಿದ್ದರೆ, ನಾವು ಎಷ್ಟೊಂದು ಶ್ರೀಮಂತರಾಗುತ್ತಿದ್ದೆವು. ಅದೇನು ಅನ್ನದಾನದ ಮಹತ್ವ? ಹೇಳು’ ಎಂದ. ಅದಕ್ಕೆ ತಾಯಿ,

‘ಮಗೂ, ದಾನಗಳಲ್ಲಿ ಅನ್ನದಾನವೇ ಹೆಚ್ಚಿನದು. ಬಡತನ ಶ್ರೀಮಂತಿಕೆ ಕೊನೆತನಕ ಇರುವುದಿಲ್ಲ. ಆದರೆ ಅನ್ನದಾನದ ಪುಣ್ಯ ಕೊನೆತನಕ ಇರುವಂಥಾದ್ದು’ ಎಂದಳು.

‘ಆ ಪುಣ್ಯ ಯಾವುದು?’ ಪ್ರಶ್ನಿಸಿದ ಮಗ.

‘ಅದನ್ನು ಹೇಳುವುದು ನಮ್ಮಂಥ ನರಮನುಷ್ಯರಿಂದ ಹೇಗಾದೀತು? ಅದು ಶಿವನಿಗೆ ಗೊತ್ತು. ಅವನನ್ನೇ ಹೋಗಿ ಕೇಳು’ ಎಂದು ತಾಯಿ ಹೇಳಿದಳು.

ಸರಿ, ಅದರಂತೆ ಮಗ ತಾಯಿಯ ಅಪ್ಪಣೆ ಪಡೆದುಕೊಂಡು ಶಿವನ ಬಳಿಗೆ ಹೊರಟ.

ಹೋಗುತ್ತ ಹೋಗುತ್ತ ದೊಡ್ಡದೊಂದು ಅಡವಿ ಬಂತು. ಅಲ್ಲಿ ಗಿಡಮರ ದಟ್ಟವಾಗಿ ಬೆಳೆದಿದ್ದವು. ಇವನು ಬೆಟ್ಟ ಹತ್ತಿ ಇಳಿಯುವಷ್ಟರಲ್ಲಿ, ಸಂಜೆಯಾಯಿತು. ಮುಂದೆ ಏನು ಮಾಡಬೇಕೆಂದು ಹೊಳೆಯದಾಯಿತು. ಆಗ ಅಲ್ಲಿಗೊಬ್ಬ ಬೇಡ ಬಂದ. ಈ ಹುಡುಗನನ್ನು ನೋಡಿ ಅವನಿಗೆ ಕರುಣೆ ಬಂತು. ಹೀಗೇ ಬಿಟ್ಟರೆ ಹುಡುಗ ಹುಲಿ ಸಿಂಹಗಳ ಬಾಯಿಗೆ ಬೀಳುತ್ತಾನೆಂದುಕೊಂಡು,

‘ಏ ಹುಡುಗಾ, ಸಂಜೆ ಸಮಯದಲ್ಲಿ ಹೀಗೆ ಕಾಡಿನಲ್ಲಿ, ಅಡ್ಡಾಡಿದರೆ ಏನು ಗತಿಯಾದೀತು? ಇದು ಹುಲಿ-ಸಿಂಹಗಳಿರುವ ಸ್ಥಳ. ಇಂದು ರಾತ್ರಿ ನಮ್ಮ ಗುಡಿಸಿನಲ್ಲಿದ್ದು ನಾಳೆ ಹೋದೀಯಂತೆ ಬಾ’ ಅಂದ. ಹುಡುಗನಿಗೂ ಅಷ್ಟೇ ಬೇಕಾಗಿತ್ತು. ಬೇಡನೊಂದಿಗೆ ಹೋದ.

ಗುಡಿಸಿಲಿಗೆ ಹೋಗಿ ಬೇಡ ಹೆಂಡತಿಗೆ ಹೇಳಿದ. ‘ಅಲೆದಾಡುತ್ತಿದ್ದ, ನಾನೇ ಕರೆದು ತಂದೆ. ಇಂದಿದ್ದು ನಾಳೆ ಹೋಗುತ್ತಾನೆ. ಹಸಿದಿದ್ದಾನು, ಇವನಿಗೆ ಹಣ್ಣು ಹಾಲು ಕೊಡು.’

ಅವಳು ‘ಅದೆಲ್ಲಾ ನನ್ನಿಂದ ಆಗದು. ಬೇಕಿದ್ದರೆ ನಿನ್ನ ಪಾಲಿನ ಹಣ್ಣು ಹಾಲು ಕೊಡು. ಇಲ್ಲದಿದ್ದರೆ ಬಿಡು’ ಎಂದಳು. ಬೇಡ ತನ್ನ ಪಾಲಿನ ಹಣ್ಣು, ಹಾಲು ಕೊಟ್ಟ. ‘ಹುಡುಗಾ, ದಣಿದಿದ್ದೀಯಪ್ಪ, ಮಲಗು’ ಅಂದು ಕರುಣೆಯಿಂದ ಹುಡುಗನ ಕಾಲು ತಿಕ್ಕಿದ. ಹಾಸಿಗೆ ಹಾಸಿ ಮಲಗಿಸಿದ.

 ತನಗೆ ಮಲಗಲು ಸ್ಥಳ ಇರದದ್ದರಿಂದ ಬಾಗಿಲ ಹೊರಗೆ ಕಾಲು ಚಾಚಿ ಒಳಗೆ ತಲೆಯಿಟ್ಟು ಬಾಗಿಲು ತೆರೆದೇ ಮಲಗಿದ. ಆದರೆ ರಾತ್ರಿ ಹುಲಿ ಬಂದು ಹೊರಗರ್ಧ ಒಳಗರ್ಧ ಮಲಗಿದ್ದ ಬೇಡನನ್ನು ಕೊಂದು ತಿಂದುಹಾಕಿತು. ರಕ್ತದ ರುಚಿ ಹತ್ತಿ ಒಳಗೆ ಹೋಗಿ ಅವನ ಹೆಂಡತಿಯನ್ನೂ ತಿಂದು ಹಾಕಿತು. ಹೊಟ್ಟೆ ತುಂಬಿದ ಹುಲಿ ಆ ಹುಡುಗನನ್ನು ನೋಡದೆ ಹಾಗೇ ಹೋಯಿತು. ಮುಂಜಾನೆ ಇವನೆದ್ದು ನೋಡಿದರೆ ಇಬ್ಬರ ಎಲುಬುಗಳನ್ನು ಬಿಟ್ಟು ಬೇರೇನೂ ಇರಲಿಲ್ಲ. ಪಾಪ ಬಹಳ ಅನ್ಯಾಯವಾಯಿತೆಂದು ಹಳಹಳಸಿ ಮತ್ತೆ ಪ್ರಯಾಣ ಮಾಡಿದ.

ದಾರಿಯಲ್ಲಿ ಒಬ್ಬ ರಾಜ ತಲೆಯ ಮೇಲೆ ಕೈ ಹೊತ್ತು ಕೂತಿದ್ದ. ಇವನನ್ನು ನೋಡಿ –

‘ಹುಡುಗಾ, ಎಲ್ಲಿ ಹೊರಟಿರುವೆ?’ ಅಂದ.

‘ಒಂದು ಪ್ರಶ್ನೆಯಿದೆ. ಅದನ್ನು ಕೇಳಲು ಶಿವನ ಬಳಿಗೆ ಹೋಗುತ್ತಿದ್ದೇನೆ’ ಎಂದ.

‘ಹಾಗಿದ್ದರೆ ನನ್ನದೂ ಒಂದು ಪ್ರಶ್ನೆ ಇದೆ. ಕೇಳಿಕೊಂಡು ಬರುತ್ತೀಯಾ?’ ಎಂದ ರಾಜ.

‘ಏನದು?’

‘ಕೋಟಿ ಹಣ ಖರ್ಚು ಮಾಡಿ ಒಂದು ಕೆರೆ ಕಟ್ಟಿಸಿದೆ. ತಟ್ಟಂತ ಒಂದು ಹನಿ ನೀರಿಲ್ಲ. ಯಾಕೆಂದು ಕೇಳಿಕೊಂಡು ಬರುತ್ತೀಯಾ’.

ಆಗಲೆಂದು ಹುಡುಗ ಮುಂದೆ ಹೊರಟ.

ಮುಂದೆ ಹೋಗುವಷ್ಟರಲ್ಲಿ ಒಬ್ಬ ಕುಂಟ ಕುಳಿತಿದ್ದ. ಅವನೂ, ‘ತಮ್ಮಾ, ನನ್ನ ಕುಂಟುತನಕ್ಕೆ ಏನು ಕಾರಣವೆಂದು ಕೇಳಿಕೊಂಡು ಬಾ’ ಅಂದ. ಆಗಲೆಂದು ಹುಡುಗ ಮುಂದೆ ಹೊರಟ.

ಮುಂದೆ ದಾರಿಯಲ್ಲಿ ಒಂದು ಹುತ್ತ ಸಿಕ್ಕಿತು. ಅದರಲ್ಲಿ ಅರ್ಧ ಒಳಗೂ ಸಿಕ್ಕಿಕೊಂಡು ಹಿಂದಕ್ಕೂ ಮುಂದಕ್ಕೂ ಚಲಿಸಲಾರದ ಒಂದು ಸರ್ಪವಿತ್ತು. ಅದಕ್ಕೂ ತನ್ನ ಪ್ರಯಾಣದ ಉದ್ದೇಶ ಹೇಳಿದ. ಅದು ‘ನನ್ನ ಇಂಥ ಸ್ಥಿತಿಗೆ ಏನು ಕಾರಣ ಕೇಳಿಕೊಂಡು ಬಾ’ ಎಂದಿತು. ಹುಡುಗ ಆಗಲೆಂದು ಹೇಳಿ ಮುಂದಕ್ಕೆ ಹೊರಟ.

ಹೋದ, ಹೋದ. ಸೀದಾ ಕೈಲಾಸ ಪರ್ವತಕ್ಕೇ ಹೋದ. ಅಲ್ಲಿ ಶಿವ ಪಾರ್ವತಿ ಕುಳಿತಿದ್ದರು. ಹೋಗಿ ನಮಸ್ಕರಿಸಿದ. ‘ಶಂಭೋ, ಅನ್ನದಾನದ ಪುಣ್ಯ ಏನು? ಹೇಳಬೇಕು’ ಎಂದ. ಅದಕ್ಕೆ ಶಿವನು,

‘ನೋಡು ಮಗು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನೀನು ಹೋಗಿ ನಾನು ಕೊಟ್ಟ ಪ್ರಸಾದ ಕೊಡು. ಹಡೆಯುತ್ತಾಳೆ. ಹುಟ್ಟಿದ ಆ ಕೂಸನ್ನು ಕೇಳಿದರೆ ಅದು ನಿನಗೆ ಅನ್ನದಾನದ ಪುಣ್ಯ ಏನೆನ್ನುವುದನ್ನು ಹೇಳುತ್ತದೆ’ ಎಂದ.

ಹಾಗೆಯೇ ರಾಜನ ಕೆರೆಯಲ್ಲಿ ನೀರು ಬೀಳದಿರುವ ಕಾರಣ ಕೇಳಿದ. ಅದಕ್ಕೆ ಶಿವನು ಹೇಳಿದ –

‘ರಾಜನಿಗೆ ಬೆಳೆದ ಒಬ್ಬ ಮಗಳಿದ್ದಾಳೆ. ಅವಳನ್ನು ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದೆ.’

‘ಹಾಗೆ ಕುಂಟನ ಕಾಲು ಯಾಕೆ ಹೋಗಿವೆ?’

‘ತನಗೆ ತಿಳಿದ ವಿದ್ಯೆಯನ್ನು ಆತ ಯಾರಿಗಾದರೂ ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬರುತ್ತವೆ.’

‘ಸರ್ಪವೊಂದು ಹುತ್ತದ ಒಳಗೂ ಹೋಗದೆ ಹೊರಗೂ ಬರಲಾರದೆ ಸಿಕ್ಕಿಕೊಂಡಿದೆಯಲ್ಲ. ಏನು ಕಾರಣ?’

‘ತನ್ನ ನೆತ್ತಿಯ ರತ್ನವನ್ನು ಯಾರಾದರೂ ಯೋಗ್ಯನಿಗೆ ದಾನ ಮಾಡದಲ್ಲಿ ಅದು ಸರಿದಾಡಬಹುದು.’

– ಹೀಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೇಳಿಕೊಂಡು ಶಿವಪಾರ್ವತಿಯರಿಗೆ ನಮಸ್ಕರಿಸಿ, ಪ್ರಸಾದ ತೆಗೆದುಕೊಂಡು ತಿರುಗಿ ಬಂದ.

ಬರುವಾಗ ದಾರಿಯಲ್ಲಿ ಮೊದಲು ಸರ್ಪ ಸಿಕ್ಕಿತು. ‘ಹುಡುಗಾ, ಕೇಳಿದೆಯಾ ನನ್ನ ಪ್ರಶ್ನೆ?’ ಎಂದಿತು.

‘ಹೌದು ಕೇಳಿದೆ. ನಿನ್ನ ನೆತ್ತಿಯಲ್ಲೊಂದು ರತ್ನ ಇದೆಯಂತೆ. ಅದನ್ನು ಯೋಗ್ಯನಿಗೆ ದಾನ ಮಾಡಿದರೆ ನೀನು ಸರಿದಾಡಬಹುದಂತೆ’ ಎಂದ.

‘ಹಾಗಿದ್ದರೆ ಇಕೊ, ನಿನಗೇ ಅದನ್ನು ದಾನ ಮಾಡುತ್ತೇನೆ. ತಕೋ’ ಎಂದು ತನ್ನ ನೆತ್ತಿಯ ರತ್ನವನ್ನು ಹುಡುಗನಿಗೆ ಕೊಟ್ಟಿತು. ಆ ಕೂಡಲೇ ಅದಕ್ಕೆ ಸರಿದಾಡುವ ಶಕ್ತಿ ಬಂದು, ಆನಂದದಿಂದ ಹೆಡೆ ತೆಗೆದು ಆಡಲಾರಂಭಿಸಿತು. ಹುಡುಗ ಮತ್ತೆ ತನ್ನ ದಾರಿ ಹಿಡಿದ.

ಮುಂದೆ ಬರುವಷ್ಟರಲ್ಲಿ ಕುಂಟ ಸಿಕ್ಕಿದ. ‘ಹುಡುಗಾ, ನನ್ನ ಪ್ರಶ್ನೆ ಕೇಳಿದೆಯಾ?’ ಎಂದು ಕೇಳಿದ.

‘ಕೇಳಿದೆ. ನಿನ್ನ ಹತ್ತಿರ ಇರುವ ವಿದ್ಯೆಯನ್ನೆಲ್ಲ ಒಬ್ಬ ಯೋಗ್ಯನಿಗೆ ದಾನ ಮಾಡಿದರೆ ನಿನ್ನ ಕಾಲು ಬರುತ್ತವಂತೆ.’’ ಎಂದ ಹುಡುಗ.

‘ಹಾಗಿದ್ದರೆ ನಿನ್ನಂತ ಯೋಗ್ಯ ಯಾರಿದ್ದಾರು? ಇಕೊ, ನನಗೆ ಗೊತ್ತಿರುವ ವಿದ್ಯೆಯನ್ನು ನಿನಗೆ ದಾನ ಮಾಡುತ್ತೇನೆ.’

– ಎಂದು ಹೇಳಿ ಕುಂಟ ತನ್ನ ಅರವತ್ತ ನಾಲ್ಕು ವಿದ್ಯೆಗಳನ್ನೆಲ್ಲ ಇವನಿಗೆ ಧಾರೆಯೆರದ. ಅವನಿಗೆ ಕಾಲು ಬಂದವು. ಆನಂದದಿಂದ ಕುಣಿದಾಡಿದ. ಹುಡುಗ ಮತ್ತೆ ತನ್ನ ದಾರಿಯನ್ನು ಹಿಡಿದು ಹೊರಟ.

ಇನ್ನಷ್ಟು ಮುಂದೆ ಬಂದ. ತಲೆಯ ಮೇಲೆ ಕೈ ಹೊತ್ತಿದ್ದ ರಾಜ ಸಿಕ್ಕಿದ. ಇವನನ್ನು ಕಂಡೊಡನೆ ‘ಹುಡುಗಾ, ನನ್ನ ಮಾತನ್ನು ಕೇಳಿದೆಯಾ?’ ಎಂದ.

‘ಹೌದು, ಕೇಳಿದೆ. ನಿನ್ನ ಬೆಳೆದ ಮಗಳನ್ನು ಒಬ್ಬ ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದಂತೆ’.

‘ನಿನಗಿಂತ ಯೋಗ್ಯ ವರ ಇನ್ನಾರಿದ್ದಾರು! ಬಾ’ ಎಂದು ಹೇಳಿ ರಾಜ ತನ್ನ ಮಗಳನ್ನು ಆ ಹುಡುಗನಿಗೆ ಮದುವೆ ಮಾಡಿಕೊಟ್ಟ. ಬೆಳಗಾಗುವಷ್ಟರಲ್ಲಿ ಕೆರೆ ನೀರಿನಿಂದ ತುಂಬಿ ತುಳುಕಲಾರಂಭಿಸಿತು.

ಹುಡುಗ ಹೆಂಡತಿಯನ್ನು ಕರೆದುಕೊಂಡು ನೇಪಾಳ ದೇಶಕ್ಕೆ ಬಂದ. ಆ ದೇಶದ ರಾಜನ ಹೆಂಡತಿ ದಿನ ತುಂಬಿದ್ದರೂ ಹಡೆಯಲಾರದೆ ಸಂಕಟ ಪಡುತ್ತಿದ್ದಳು. ಹುಡುಗ ಹೋಗಿ ಶಿವನ ಪ್ರಸಾದ ಕೊಟ್ಟ. ಅವಳು ಆ ಕ್ಷಣವೇ ಬಂಗಾರದಂಥ ಮಗನನ್ನು ಹಡೆದಳು. ‘ಆ ಕೂಸಿಗೊಂದು ಪ್ರಶ್ನೆ ಕೇಳಬೇಕಾಗಿದೆ. ದರ್ಬಾರಿಗೆ ತರಿಸಬೇಕು’ ಎಂದು ಹುಡುಗ ಹೇಳಿದ. ಎಲ್ಲರಿಗೂ ಆಶ್ಚರ್ಯವಾಯಿತು. ಆದರೂ ಕೂಸನ್ನು ದರ್ಬಾರಿಗೆ ತಂದು ಬಂಗಾರದ ತಟ್ಟೆಯಲ್ಲಿಟ್ಟರು. ಹುಡುಗ ಹೇಳಿದ –

‘ಮಗು, ಶಿವ ನನ್ನನ್ನು ನಿನ್ನ ಬಳಿ ಕಳಿಸಿದ್ದಾನೆ. ಅನ್ನದಾನದ ಪುಣ್ಯ ಯಾವುದು?’

ಈ ಮಾತನ್ನು ಕೇಳಿ ತಟ್ಟೆಯಲ್ಲಿದ್ದ ಮಗು ಪಕ ಪಕ ನಕ್ಕು ಮಾತಾಡಿತು.

‘ಅಯ್ಯ, ಶಿವನನ್ನು ಕಂಡು ಬಂದರೂ ನಿನಗೆ ಈ ವಿಚಾರ ತಿಳಿಯಲಿಲ್ಲವೆ? ನೀನು ಶಿವನನ್ನು ಕಾಣುವುದಕ್ಕೆ ಹೊರಟಿದ್ದಿ. ಅಡವಿಯಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದಿ. ಆಗ ಒಬ್ಬ ಬೇಡ ಬಂದು ನಿನ್ನನ್ನು ತನ್ನ ಗುಡಿಸಿಲಿಗೆ ಕರೆದೊಯ್ದು ಹಣ್ಣು ಹಾಲು ಕೊಟ್ಟದ್ದು ನೆನಪಿದೆಯೆ?’

‘ಹೌದು.’

‘ಹಾಗೆ ಮಾಡಿದ ಬೇಡ ನಾನೇ. ಅಂದೆ ನನ್ನನ್ನೂ ನನ್ನ ಹೆಂಡತಿಯನ್ನೂ ಹುಲಿ ತಿಂದಿತು; ಅನ್ನದಾನ ಮಾಡಿದ್ದಕ್ಕೆ ನಾನಿಂದು ರಾಜಕುಮಾರನಾಗಿ ಹುಟ್ಟಿದ್ದೇನೆ. ನನ್ನ ಹೆಂಡತಿ ಅಂದು ನಿನಗೆ ಅನ್ನ ಕೊಡಲು ಒಪ್ಪಲಿಲ್ಲ. ಈ ಕಿರಿಕ್ ಮಾಡಿದ ಅವಳು ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ. ಬೇಕಾದರೆ ಹೋಗಿ ನೋಡು’ ಎಂದು ಆ ಮಗು ಹೇಳಿತು.

ಆಗ ಈ ಹುಡುಗ ತಿರುಗಿ ತನ್ನ ತಾಯಿಯ ಬಳಿಗೆ ಬಂದು ತಾನೂ ಅನ್ನದಾನ ಮಾಡುತ್ತ ಸುಖದಿಂದ ಇದ್ದ...!!!

(ಸಂಗ್ರಹಿಸಿದ್ದು)

When did the Hindu temple culture start in India?


First of all, which is the oldest Hindu temple that still exists?
 I haven't been able to find any one temple that Historians have labelled as the oldest temple. In my view, the Dashavatara Vishnu Temple (meaning "ten incarnations") located at Deogarh, Uttar Pradesh in Central India built around 500 CE may be one of the earliest Hindu stone temples still surviving today. Picture below -

As the OP has mentioned, the Buddhist Stupas at Sanchi or Bharhut or Dhamek, have origins that are 700 years earlier (Ashoka's reign around 250 BC) than the oldest temples.

Did the Hindu Temple culture exist prior to 500 AD? Is it a borrowed concept from Buddhist Stupas? The answer to these questions involves some historical evidence but significant hypothesis as well.

Let's go far back to start with (please bear with the longish answer. Couldn't help it as story of India is so long!) -

5,000 year ago - Indus Valley Civilization - Religion in the Indus valley seems to have involved temple rituals and ritual bathing in the 'great bath' found at Mohenjo-Daro. There is some evidence of animal sacrifice at Kalibangan and there are archaeological finds indicating sculpture from that period (for instance the famous statue of dancing girl). The Pashupati Seal has been identified by few scholars as an early prototype of the Hindu god Shiva (or, his Vedic predecessor, Rudra). After the collapse of the Indus Valley civilization around 1900 BC, there is little record of sculpture for next 1,500 years until the Buddhist era. There's one hypothesis that links Dravidian culture to the Indus Valley Civilization but no evidence as such.

1500BC - 500BC - Vedic Period - Few key things stand out from this period like animal sacrifice, Fire worship, and rituals involving recitation of Vedas. Vedi is the term for "sacrificial altar" that were an elevated enclosure, generally strewed with Kusha grass, and having receptacles for the sacrificial fire.

Its possible that the temple structures in Vedic age were not made of stones or bricks, which came much later. They were possibly made of clay with thatched roofs made of straw or leaves which have not survived till modern times.

Atharvaveda was last to be written of the 4 Vedas around 700 BC. One of earliest mentions of Sanskrit word Silpa or Silpin is in Atharvaveda which refers to the craftsmen and builders (of temples).

322BC - 185 BC - Mauryan Empire - Ashoka being a strong promoter of Buddhism, it was at peak during his reign. Stupas like Sanchi, Bharhut, Dhamek originated in this period (and were extended further by later kings).

The 4th century BC text, Astadhyayi mentions male deity arcas (images/idols) of Agni, Indra, Varuna, Rudra, Mrda, Pusa, Surya, Soma being worshipped, as well as the worship of arcas of female goddesses such as Indrani, Varunani, Usa, Bhavani, Prthivi and Vrsakapayi.

Kautilya’s Arthasastra from 3rd Century BC describes a city of temples, each enshrining various Vedic and Puranic deities.

Note that we don't have any surviving remains of palace of Chandragupta Maurya or Ashoka. Possibly because they were constructed of wood and other materials that did not survive 2,000 years. Temples of this period may have gone through the same challenge.

100 AD onward - A new type of worship known as Bhakti or devotional Hinduism spread across the Indian sub-continent, and the old Vedic gods were replaced in importance by deities like Shiva, Vishnu, Krishna, Brahma, and Devi. These gods would become the central figures of Hinduism and their worship required temples where the devoted could offer their thanks and reveal their hopes for a better life.

From the 1st century BC through 3rd Century AD, the evidence and details about ancient temples increases. The ancient literature refers to these temples as Pasada (or Prasada), stana, mahasthana, devalaya, devagrha, devakula, devakulika, ayatana and harmya.

320 AD - 550 AD - Gupta Empire - Also known as Golden Age of India.

GUPTA CAVE SHRINES
The earliest examples of religious architecture were cave-temples. Inside the shrine, ritual sculptures were placed such as a Shiva linga (phallus) and the walls were richly decorated with more carvings showing scenes from mythology. Notable examples are found at Udayagiri in Madhya Pradesh where one cave bears a date mark of 401 AD.

FREE STANDING TEMPLES
Not satisfied with caves the Guptas were the first dynasty to build permanent free-standing Hindu temples and so they began a long tradition of Indian temple architecture. The first materials used were wood and terracotta, but architects gradually moved on to brick and stone, especially sandstone, granite, schist, and marble. No mortar was used in the older temples and so precise cutting of dressed stones was required. Early free-standing temples survive at Deogarh and include the 6th century Dasavatara temple dedicated to Vishnu (picture at top of answer).

Subsequently, this growth phase of Hindu temples charts its rise and fall alongside the fate of the various dynasties that reigned India during the period majorly contributing and influencing the building of temples, especially in South India.

In South India, this period is credited with some of the earliest stone temples of the region, with Chalukya temples dated to be from the 5th century

6th century - 13th century - Glorious temples were constructed in what is now Karnataka, Orissa, Tamil Nadu, Madhya Pradesh, Maharashtra, Rajasthan, West Bengal, Uttar Pradesh.

In north India, Brihat-samhita by Varāhamihira is the widely cited ancient Sanskrit manual from 6th century describing the design and construction of Nagara style of Hindu temples.

By the 6th century AD, several Sanskrit manuals for constructing palatial temples were in circulation in India. These manuals describe the education, characteristics of good artists and architects. The general education of a Hindu Shilpin in ancient India included Lekha or Lipi (alphabet, reading and writing), Rupa (drawing and geometry), Ganana (arithmetic).

Manasara, a text of South Indian origin, estimated to be in circulation by the 7th century AD, is a guidebook on South Indian temple design and construction

Isanasivagurudeva paddhati is another Sanskrit text from the 9th century describing the art of temple building in India in south and central India

The Silpa Prakasa of Odisha, authored by Ramacandra Bhattaraka Kaulacara sometime in ninth or tenth century CE, is another Sanskrit treatise on Temple Architecture

In South India, the Pallavas (600 - 900 AD) sponsored the building of the rock-cut chariot-shaped temples of Mahabalipuram, including the famous shore temple, the Kailashnath and Vaikuntha Perumal temples in Kanchipuram in southern India. They were followed by Cholas, Pandyas, Vijayanagar kings. The Cave Temples of Badami, the Virupaksha temple at Pattadakal, the Durga Temple at Aihole and the Kailasanatha temple at Ellora are standing examples of the grandeur of this era. Other important architectural marvels of this period are the sculptures of Elephanta Caves and the Kashivishvanatha temple.

Buddhism/Buddhist Stupas Vs Hinduism/Hindu Temples - Buddhism and Hinduism share a complex relationship from 6th century BC (when Buddhism came to being) till 12th century AD (when Buddhism diminished in India). There are several instances of Brahminism being at odds with Buddhism and at the same time there are instances of both being in harmony and in fact evolving out of each other.

In terms of Architecture, the simple shape of the early stupa may have evolved into the complex superstructure of later Hindu temples.

Ellora caves built between 5th and 10th century, are one such instance of harmony between the two. The 34 "caves" include 12 Buddhist (caves 1–12), 17 Hindu (caves 13–29) and 5 Jain (caves 30–34) caves, built in proximity.

The Ajanta Caves which date from the 2nd century BC to about 650 AD, on the other hand are exclusively Buddhist.

Greek Influence -
Greco-Buddhist art is the cultural mixture of Classical Greek culture and Buddhism, which developed over a period of close to 1000 years in Central Asia, between the conquests of Alexander the Great in the 4th century BC, and the Islamic conquests of the 7th century AD.



The Kushan dynasty (Kanishka) ruling out of Peshawar and with close links with Mathura promoted Greco-Buddhist art.

This is the period when we see the first representations of the Buddha in human form. It's possible that the idols of Hindu deities seen later are a manifestation of this form of sculpture. The Hindu art of Gupta empire was certainly inspired by Greco-Buddhist art.

--------------------------------------------------------------------

First of all, it depends on what you classify and call as "Hinduism". If you consider only Vedic tradition as synonymous with Hinduism, then the dates would be around 5th century. But long before this time, there was a strong widely spread non-Vedic and non-agamic sect of religion in Tamil Nadu. There were other parts of India with such religions too.

These deities are known as 'Kaval dheivam' (guardian deity) or 'Kula dheivam' (family gods) in Tamil Nadu/Andhra Pradesh. The deities may be a representation of local folklore depicting a local hero or a village protector. A lot of these deities have been sanskritised and amalgamated into the later Vedic religion. One of the biggest such example is 'Seyyon' or Kumara kadavul (aka Karthikeyan), who was mentioned in early texts as the God of the Tamil diaspora. Also Kotravai (aka Durga) and Maayon (Vishnu) have been amalgamated in to Vedic gods. The rural areas of TN and Andhra Pradesh still have these temples and unique rituals. Some of their deities are still independent of the Vedic deities. Ayyanar, Kali, Madurai Veeran, Karupannan Swamy, Sudalaimaadan, Muniyandi are few of the famous deities that play an important part in rural spiritualism in South India.
Statue of Karuppana Swamy

These deities have always had temples dedicated to them, usually built in the border of the villages. Note that temple worship is not an essential part of Vedic religion, whereas the temple tradition have always been a part of these Dravidian religions.
Here is a excavated brick temple of Karthikeya in Tamilnadu, which dates back to 3rd Century BC. Note that the temple has features of temple built with agamic tradition, with a bali-peetam, dwajasthambam, sanctum sanctorum, etc.

So going by this history, and with the assumption that this branch of tradition is called Hinduism too, the temple tradition must have started for these village deities - long before Buddhist and Jain temples existed in India.

_____________________________________________

With constrution of stupas construction of temples also started as free standing structures .temple architecture is not much old as it seems .the primary temples were based on mythical stories of Puranas, Basic structure of temple included -
1-Garbhagriha- cave like sanctum in which main deity is place after ritual of pran prathistha
2-Mandapa- is entrance of temple
3-shikhar- it is like tower ans from 5 AD construction of this tower started known as shikher in north india and vimana in south india
4-Vahan-it was deity's vehicle or mount which was placed along with dhwaja axially sanctum
among them Dashavatar temple of Uttar Pradesh,Nachnakuthara and udaygiri in vidisha (MP). all of f these temple are earliest structures consisting of verandah, a hall and a shrine in rear
the rock cut temple reached its zenith in gupta era and marked the begining of free style temple architecture.most of temples in gupta era was built with avtaras if vishnu , lingum and goddes.
some of oldest temples in india are -
1)Dashavtar temple in LALITPUR district of uttar pradesh which was discovered by captain charles strehan and named by Alexander canninghum ,the main shrine is bult in rectangular plinth with four smaller subsidiary shrines at four corners hence its name is panchaytana,
interesting part of this temple is that it is west facing which is less common as most of temple in modern times is east or north facing .this is also known as sarvatobhadra temple .
2)BHITARGAON TEMPLE- in kanpur district of uttar pradesh is oldest remaining Hindu temple was built in Gupta era in 6th century
where as if we talk about south Indian temples then they mainly started in 7th and 8th century with chalukyas of badami .they built nearly 100 structures both rock cut and free style in his karnata dravida architecture. this was mainly mix of northern NAGRA style
and southern DRAVIDA style
PS- I have tried to give correct info ..but if i have written any thing wrong then please correct me and also tell me additional info about temples in india