ತಂದೆ ಮಗ ಇಬ್ಬರು ಗಾಳಿಪಟ ಹಾರಿಸುತ್ತಿದ್ದರು.
ತಂದೆ ಪಟದ ಸೂತ್ರವನ್ನು ಹಿಡಿದು ನಿಂತಿದ್ದನ್ನು ನೋಡಿದ ಮಗ, " ಈ ದಾರ ಇರುವುದರಿಂದಲೇ, ಪಟ ಇನ್ನೂ ಮೇಲಕ್ಕೆ ಹೋಗುತ್ತಿಲ್ಲ" ಎಂದನು.
ಮಗನ ಮಾತು ಕೇಳಿ ತಂದೆ, ಒಡನೆ ಸೂತ್ರವನ್ನು ಕತ್ತರಿಸಿದನು. ನೋಡನೋಡುತ್ತಿದ್ದಂತೆ ಪಟ ನೆಲಕ್ಕುರುಳಿತು.
ಇದನ್ನು ಕಂಡು ಮಗನಿಗೆ ತುಂಬಾ ದು:ಖವಾಯಿತು. ಅದನ್ನು ಕಂಡ ಅವನ ತಂದೆ, ಮಗನನ್ನು ಕರೆದು-
" ನಮ್ಮ ಜೀವನದಲ್ಲಿ ನಾವು ಬೆಳೆಯುತ್ತಾ ಹೋದಂತೆ, ಒಮ್ಮೊಮ್ಮೆ ನಮಗೆ, ನಮ್ಮ ಬೆಳವಣಿಗೆಯನ್ನು ಯಾವುದೋ ಒಂದು ಶಕ್ತಿ ತಡೆಯುತ್ತಿದೆ ಎಂದು ಅನಿಸುತ್ತದೆ. ನಾವು ಜೀವನದಲ್ಲಿ ಮೇಲೇರಲು ಯಾರೋ ಬಿಡುತ್ತಿಲ್ಲ ಅನಿಸುತ್ತದೆ. ಯೋಚಿಸಿದಾಗ, ನಮ್ಮ ಕುಟುಂಬ, ನಮ್ಮ ಸಮಾಜ, ನಮ್ಮ ಸಂಸ್ಕೃತಿ ನಮ್ಮನ್ನು ಕಟ್ಟಿಹಾಕಿದೆ ಅನಿಸುತ್ತದೆ. ನಾವು ಈ ಬಂಧನಗಳಿಂದ ಬಿಡಿಸಿಕೊಂಡರೆ ಜೀವನದಲ್ಲಿ ಇನ್ನೂ ಮೇಲೆರಬಹುದು ಎಂದು ಅನಿಸುತ್ತದೆ.
ಆದರೆ ನಾವು ಯಾವತ್ತೂ ಈ ಬಂಧನಗಳನ್ನು ಕತ್ತರಿಸಿಕೊಂಡು ಮೇಲೇರಲು ಪ್ರಯತ್ನಿಸುತ್ತೀವೋ, ಆಗ ನಾವು ನೆಲಕ್ಕೆ ಉರುಳುತ್ತೇವೆ.
ನಾವು ಎತ್ತರಕ್ಕೆ ಹೋಗುವುದು ಸುಲಭ, ಆದರೆ ಆ ಎತ್ತರದಲ್ಲೇ ಉಳಿಯುವುದು ಬಹಳ ಕಷ್ಟ. ನಮ್ಮ ಸಂಬಂಧ, ಸಮಾಜ, ಸಂಸ್ಕೃತಿ, ಮೌಲ್ಯಗಳೇ ನಮ್ಮನ್ನು ನಾವು ತಲುಪಿದ ಎತ್ತರದಲ್ಲಿ ಉಳಿಯುವಂತೆ ಮಾಡುತ್ತದೆ.
ಈ ಗಾಳಿಪಟ ನಮಗೆ ಹೇಳಿಕೊಡುವ ಪಾಠವೇ ಇದು " ಎಂದನು....
No comments:
Post a Comment
If you have any doubts. please let me know...