June 15, 2021

ಅಗ್ನಿಮುಖ ಪ್ರಯೋಗ

“ಅಗ್ನ ಆಯೂಂಷಿ ಪವಸ ಆಶುವೋರ್ಜಮಿಷಂ ಚ ನಃ | ಆರೇ ಬಾಧಸ್ವ ದುಚ್ಛುನಾಮ್” || 

ಅಗ್ನಿ ಒಂದು ತತ್ವ. ಸ್ವಯಂ ಪ್ರಕಟವಿಲ್ಲ. ಅವಲಂಬನೆ ಬೇಕು. ಅವಲಂಬನೆಯಿಂದ ಪ್ರಕಟಗೊಳ್ಳಬೇಕಾದ ತತ್ವವಾದ ಜೀವಶಕ್ತಿಗೆ ದೇಹವೇ ಅವಲಂಬನೆಯಾಗಿರುತ್ತದೆ. ಪ್ರಕೃತಿಯ ಯಾವುದಾದರೊಂದು ಚರ ಸ್ಥಿರ, ಜಡವಸ್ತುಗಳ ಅವಲಂಬನೆ ಸಿಕ್ಕಿದಲ್ಲಿ ಕರ್ಷಣಭೂತನಾಗಿ ಪ್ರಕಟಗೊಂಡು ಪ್ರಕೃತಿಯಲ್ಲಿ ರೂಪು ಪಡೆಯುತ್ತದೆ. ಹಾಗಾಗಿ “ಅಗ್ನ ಆಯೂಂಷಿ”. ಪ್ರಕಟಗೊಂಡಾ ದಹ್ಯ ಇತರೆ ಆಶ್ರಿತ ವಸ್ತು, ಜೀವಿ, ಜಡಗಳನ್ನು ಪರಿವರ್ತನೆ ಮಾಡುತ್ತದೆ. “ಪವಸ” ವೆಂದರೆ ಇದೇ ರೂಪಾಂತರ ಮಾಡುತ್ತದೆಯೇ ವಿನಃ ನಾಶಕಾರಕವಲ್ಲ. ಇದರಿಂದಾಗಿ ಅದರ ವಿಶಿಷ್ಟಗುಣವನ್ನು ಸಪ್ರಯೋಜಕವಾಗಿ ಬಳಸುವಂತೆ ಮಾಡುವ ಕೆಲ ಉಪಾಯಗಳ ಕ್ರೋಢೀಕರಣವೇ ಆಶು, ಊರ್ಜಾ, ಆಮಿಷ, ಮೂರು ತಂತ್ರಗಳು. ಅದನ್ನೇ ಆಘಾರ, ಆಕೂತಿ, ವಷಟ್ಕಾರಗಳೆಂಬ ಪ್ರಭೇದಗಳು. ಅದರ ಪ್ರವರ್ತನೆಯಿಂದ ಅಂದರೆ ಅದರ ದಹ್ಯ ಶಕ್ತಿಯಿಂದ ಬಾಧಕವನ್ನು ಬೇರ್ಪಡಿಸಿ ಸಮ್ಮುಖಗೊಳಿಸುವ ಸೂತ್ರವೇ “ಅಗ್ನಿಮುಖ ಪ್ರಯೋಗ”.
ಋ.ಮಂ.1, ಸೂಕ್ತ 66, ಮಂತ್ರ 1-2
ರಯಿರ್ನ ಚಿತ್ರಾ ಸೂರೋ ನ ಸಂದೃಗಾಯುರ್ನ ಪ್ರಾಣೋ ನಿತ್ಯೋ ನ ಸೂನುಃ | 
ತಕ್ವಾ ನ ಭೂರ್ಣಿರ್ವನಾ ಸಿಷಕ್ತಿ ಪಯೋ ನ ಧೇನುಃ ಶುಚಿರ್ವಿಭಾವಾ || 1 ||
ದಾಧಾರಕ್ಷೇಮಮೋಕೋ ನ ರಣ್ವೋ ಯವೋ ನ ಪಕ್ವೋ ಜೇತಾ ಜನಾನಾಮ್ | 
ಋಷಿರ್ನ ಸ್ತುಭ್ವಾ ವಿಕ್ಷು ಪ್ರಶಸ್ತೋ ವಾಜೀ ನ ಪ್ರೀತೋ ವಯೋ ದಧಾತಿ || 2 ||

ದೇಹದಲ್ಲಿ ಪರಿಪೂರ್ಣ ವ್ಯಾಪಿಸಿರುವ ಅಗ್ನಿಯು ಜೀವಿಯ ಆಯುಃ ರಕ್ಷಕವಾಗಿದ್ದು ತನ್ನ ಪ್ರಯತ್ನದಲ್ಲಿ ಅಗ್ನಿ ನಿತ್ಯ ನೂತನ, ನಿರಂತರ. ಹಾಗಾಗಿ ಜೀವಿಗೆ ಭಾಸದಿಂದ ಹೊಸತು ನಿರಂತರ. ಕ್ಷಣಕ್ಷಣಕ್ಕೂ ಬದಲಾವಣೆ ಶತಸ್ಸಿದ್ಧ. ಅದನ್ನಾಧರಿಸಿದ ಅಗ್ನಿ ಸ್ವರೂಪದಂತೆ ಜೈವಿಕಾಧಾರಿತ ಜೀವನ ವ್ಯವಸ್ಥೆಯನ್ನು ಸಮ್ಮುಖಗೊಳಿಸುವುದೇ ಅಗ್ನಿಮುಖ. ತನ್ಮೂಲಕ ಅಂತಃಶುದ್ಧಿ, ದೇಹಶುದ್ಧಿ, ವಿಚಾರಶುದ್ಧಿಯೊಂದಿಗೆ ಅಗ್ನಿಯ ಮುಖೇನ ಆರೋಗ್ಯ, ಜ್ಞಾನ, ಆನಂದ ಸಂಪಾದನೆಯೊಂದಿಗೆ ಸಾಧಿಸುವ ಸಾಧನೆಯಾಗಿರುತ್ತದೆ. ಅದನ್ನು ಸಾಧಿಸಲು ಅಗ್ನಿಮುಖ ಪ್ರಯೋಗದರಿವು ಅಗತ್ಯ. 

No comments:

Post a Comment

If you have any doubts. please let me know...