*ಆಹುತಿ ಪ್ರಕ್ಷೇಪಣ ಕ್ರಮಃ*
~~~~~~~~~~~~~~~
*ಸಕಾರೋ ಸೂತಕಂ ವಿದ್ಯಾತ್ ವಕಾರೇ ರಿಪುವರ್ಧನಂ*| *ಹಕಾರೇ ವ್ಯಾಧಿ ಪೀಡಾ ಚ ಆಹುತಿಃ ಕುತ್ರ ದೀಯತೇ*||?
'ಸ್ವಾಹಾ' ಎಂಬ ಶಬ್ದದಲ್ಲಿ 'ಸ'ಕಾರ ಉಚ್ಛಾರಣೆ ಮಾಡುವಾಗಲೇ ಹೋಮಿಸಿದರೆ ಸೂತಕ ದೋಷವು ಸಂಭವಿಸು ವುದು.' ವ'ಕಾರ ಹೇಳುವಾಗಲೇ ಹೋಮಿಸಿದರೆ ಶತ್ರು ವೃದ್ಧಿಯಾಗುತ್ತದೆ.'ಹ'ಕಾರ ಹೇಳುವಾಗಲೇ ಹೋಮಿಸಿದರೆ ವ್ಯಾಧಿಯುಂಟಾಗುವುದು. ಹಾಗಾದರೆ ಯಾವಾಗ ಹೋಮಿಸಬೇಕು.?
*ತ್ರೀನ್ ವರ್ಣಾನ್ ಸಮ್ಯಗುಚ್ಛಾರ್ಯ ಆಕಾರೇ ಚಾಹುತಿಂ ಹುನೇತ್*|
*ತಸ್ಯಾಯುಷ್ಯಂ ಶ್ರಿಯಂ ವಿದ್ಯಾತ್ ಬ್ರಹ್ಮ ಲೋಕೇ ಮಹೀಯತೇ*||
ಮೂರೂ ವರ್ಣಗಳನ್ನು ಚೆನ್ನಾಗಿ ಉಚ್ಛರಿಸಿ 'ಸ್ವಾಹಾ'ಶಬ್ಧದ ಕೊನೆಯ 'ಆ'ಕಾರ ಉಚ್ಚರಿಸುವ ಸಮಯದಲ್ಲಿ ಆಹುತಿಯನ್ನು ಅಗ್ನಿಯಲ್ಲಿ ಸಮರ್ಪಿಸಬೇಕು. ಈ ರೀತಿ ಆಹುತಿ ಕೊಡುವವರಿಗೆ ಆಯುಷ್ಯ, ಐಶ್ವರ್ಯ ಅಭಿವೃದ್ಧಿ ಯಾಗುವೂದಲ್ಲದೇ ಮೋಕ್ಷ ವೂ ಸಿದ್ಧಿಸುತ್ತದೆ.
🦚
No comments:
Post a Comment
If you have any doubts. please let me know...