🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ನಿತ್ಯ ಪಂಚಾಂಗ ನೋಡುವುದರಿಂದ ನಮಗೇನು ಲಾಭ ? ಎಂದು ಮನಸ್ಸಿನಲ್ಲಿ ಇರಬಹುದು*
ಅಂತಹ ಪ್ರಶ್ನೆಯನ್ನು ನಿರ್ಮೂಲನೆ ಮಾಡಲು ಈ ಉತ್ತರ...
ಮೊದಲು ಪಂಚಾಂಗ ವೆಂದರೆ,
ದಿನನಿತ್ಯವೂ ಬದಲಾಗುವ ಪಂಚ ಅಂಗಗಳಿಂದ ಕೂಡಿದ ಗಣಿತದ ಗಣಿ. ಅದು ಪಂಚಾಂಗವೆಂದು ಕರೆಯಲ್ಪಡುತ್ತದೆ.
ಆ ಪಂಚ ಅಂಗಗಳು -----
☀️ ತಿಥಿ
☀️ವಾರ
☀️ ನಕ್ಷತ್ರ
☀️ಯೋಗ
☀️ಕರಣ
ಇವು ದಿನನಿತ್ಯವೂ ಬದಲಾವಣೆ ಆಗುತ್ತದೆ.
ಇದರೊಟ್ಟಿಗೆ ವಿಷ ಮತ್ತು ಅಮೃತ ಘಳಿಗೆಗಳು
ಸೇರಿರುತ್ತವೆ.
ಅದನ್ನು ಸ್ಮರಣೆ ಮಾಡುವುದರಿಂದ, ಅಥವಾ ಮತ್ತೊಬ್ಬರ ಬಾಯಿಯಿಂದ ಕೇಳುವುದರಿಂದ ತುಂಬಾ ಉಪಯೋಗವಿದೆ.
ಅದು ಏನೆಂದರೆ-
"ತಿಥ್ಯೈಶ್ವರ್ಯ ಮವಾಪ್ನೊತಿ ವಾರದಾಯುಷ್ಯ ವರ್ಧನಂ|
ನಕ್ಷತ್ರಾತ್ ಹರತೇ ಪಾಪಂ ಯೋಗಾದ್ರೋಗ ನಿವಾರಣಮ್||
ಕರಣಾತ್ ಕಾರ್ಯಸಿದ್ದಿಂ ಚ ಗರಲಾತ್ ಶತ್ರುನಾಶನಂ|
ಅಮೃತಾತ್ ಸರ್ವಸೌಖ್ಯಂ ಚ ಪಂಚಾಂಗ ಫಲಮುತ್ತಮಮ್||
☀️ತಿಥಿಯನ್ನು ಉಚ್ಚರಿಸುವುದರಿಂದ ಅಥವಾ ಕೇಳುವುದರಿಂದ ಸಂಪತ್ತು ಸ್ಥಿರವಾಗಿರುತ್ತದೆ.
☀️ವಾರದಿಂದ ಆಯುಷ್ಯ ಅಭಿವೃದ್ಧಿಯಾಗುತ್ತದೆ.
☀️ ನಕ್ಷತ್ರದಿಂದ ನಾವು ಮಾಡಿದ ಪಾಪಗಳು ನಾಶವಾಗುತ್ತದೆ.
(ಹಾಗೆಂದು ಹೆಚ್ಚಿನ ಪಾಪ ಮಾಡುವುದು ಬೇಡ)
☀️ಯೋಗದಿಂದ ನಮ್ಮಲ್ಲಿ ಅಡಗಿರುವ ರೋಗವನ್ನು ನಿಯಂತ್ರಿಸುತ್ತದೆ.
☀️ ಕರಣದಿಂದ ಆ ದಿನ ನಾವು ಸಂಕಲ್ಪಿಸಿದ ಕಾರ್ಯದಲ್ಲಿ ಜಯವನ್ನು ಸಾಧಿಸಬಹುದು.
ನಮಗಿಂತಲೂ ಮೊದಲು ಆ ಸ್ಥಳದಲ್ಲಿ ನಮಗೆ ವಿಜಯವನ್ನು ಸಾಧಿಸಿ ಕೊಡಲು ನಮಗಾಗಿ ಕಾಯುತ್ತಾ ಇರುತ್ತದೆ. ಅದಕ್ಕೆ ಕರಣವೆಂಬ ಹೆಸರು.
☀️ವಿಷ ಘಳಿಗೆಯಿಂದ ಶತ್ರು ನಿವಾರಣೆ ಮತ್ತು ಮನಸ್ಸಿನ ಕಹಿ ನಿವಾರಣೆ.
☀️ ಅಮೃತ ಘಳಿಗೆಯಿಂದ ಸರ್ವರಿಗೂ ಸುಖ ದೊರಕುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಈ ರೀತಿಯಾಗಿ ಪಂಚಾಂಗದ ಫಲವು ಉತ್ತಮವಾಗಿದೆ.
ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ
ನ್ಯಾಯ್ಯೇನ ಮಾರ್ಗೆನ ಮಹಿಂ ಮಹಿಷಾಃ|
ಗೋ ಬ್ರಾಹ್ಮಣೆಭ್ಯಃ ಶುಭಮಸ್ತು ನಿತ್ಯಂ
ಲೋಕಾನ್ ಸಮಸ್ತಾನ್ ಸುಖಿನೋ ಭವಂತು||
No comments:
Post a Comment
If you have any doubts. please let me know...