೧೩೪೪
ಪಾದಪೂಜೆಯ ಮಾಡಿ, ಅಂಗುಷ್ಟವೆರಡು ಅಂಗುಲವೆಂಟು ಉಭಯಹಸ್ತದಲ್ಲಿ ಮಾಡಿಕೊಂಬುದೆ ಶಿಕ್ಷಾಪಾದೋದಕ, ಲಿಂಗಧಾರೀ ಮಹಾಯೋಗಿ ಚರಪಾದೋದಕಂ ವಿನಾ ದಿನೇನ ದಶಜನ್ಮಾನಿ ಮಾಸೇನ ಶತಜನ್ಮಸು |
ವರ್ಷೇ ಸಹಸ್ರಜನ್ಮಾನಿ ವರ್ಷಾರ್ಧೇ ಘೂಕವಾಯಸೌ ।
ದ್ವಿವರ್ಷೇ ನೌಕರೇ ಗರ್ಭೇ ಜಾಯತೇ ನಾತ್ರ ಸಂಶಯಃ || ಎಂದುದಾಗಿ
ಆ ಶಿಕ್ಷಾಪಾದೋದಕವನೆ ಆ ವಿಭೂತಿಯಲ್ಲಿ ಸಮ್ಮಿಶ್ರವ ಮಾಡಿ ಲಲಾಟ ಮೊದಲಾದ ನಾಲ್ವತ್ತೆಂಟು ಸ್ಥಾನಗಳಲ್ಲಿ ಧಾರಣವ ಮಾಡುವುದು
ಇದು ವೀರಶೈವರಿಗೆ ಸಲ್ಲುವ ನಡತೆ,
ಶುದ್ಧಶೈವರಿಗೆ ಗಿಂಡಿಯಲ್ಲಿ ತುಂಬುವ ನಡತೆ, ವಿಶೇಷವೀರಶೈವರು ಗಿಂಡಿಯ ಮಾಡಲಾಗದು.
ಅದೇನು ಕಾರಣವೆಂದಡೆ: ಅವರಿಗೆ ತ್ರಿವಿಧ ಪಾದೋದಕವು
ನಿತ್ಯದ ಸಹಬಂಧವಾಗುವುದೆಂದು
ಇದನರಿದು ಆಚರಿಸುವಾತನೆ ನಿತ್ಯಮುಕ್ತನಯ್ಯ ಕೂಡಲಚೆನ್ನಸಂಗಮದೇವಾ.
ಅಲ್ಲಮಪ್ರಭು
No comments:
Post a Comment
If you have any doubts. please let me know...