February 13, 2026

ಜೀವನದ ಕಠೋರ ಸತ್ಯಗಳು

ನನ್ನ ತಲೆ ನೋಯುತ್ತಿದೆ ಎಂದು..
medical shop ಗೆ ಹೋದೆ.
ಔಷಧಿ ಅಂಗಡಿ ಮಾಲಕ..
ಅಂಗಡಿಯಲ್ಲಿ ಇರಲಿಲ್ಲ..
ಕೇಳಿದೆ... ಅಂಗಡಿ ಮಾಲಕ ಎಲ್ಲಿ..?*

ಅಂಗಡಿಯ ನೌಕರ ಹೇಳಿದ..
ಮಾಲೀಕರ ತಲೆ ನೋಯುತ್ತಿದೆ..
ಶುಂಠಿಯ ಕಷಾಯ ಕುಡಿಯಲು 
ಮನೆಗೇ ಹೋಗಿದ್ದಾರೆ..
ನಾನು ನನ್ನ ಕೈಯಲ್ಲಿಯೇ ತಲೆ ನೋವಿನ ಮಾತ್ರೆ ನೋಡುತ್ತಲೇ ನಿಂತೆ.....

ನನ್ನ ತಾಯಿಯ BP , sugar ಹೆಚ್ಚಾಗಿದೆ ಎಂದು ,ವೈದ್ಯರ ಬಳಿ ಹೋದೆ..
ಸುಮಾರು ಒಂದು ಅರ್ಧ ಘಂಟೆವರೆಗೆ ಕಾಯ್ದೆ..
ವೈದ್ಯರು ಬಂದರು..
ನನ್ನಮ್ಮನ ಪ್ರಕೃರ್ತಿ ತಪಾಸಣೆ ಮಾಡಿ.. ಉದ್ದವಾದ prescription ಕೊಟ್ಟರು.

ನಾನು , ಕೇಳಿದೆ..
ಡಾಕ್ಟ್ರೆ..ನಿಮಗೆ BP.. ಸುಗರ ಇದೆಯಾ..?
ಛೆ.. ಇಲ್ಲವೇ ಇಲ್ಲ..
ನಾನು ಪ್ರತಿನಿತ್ಯ ಯೋಗ, ಪ್ರಾಣಾಯಾಮ ಮಾಡುತ್ತೇನೆ..
ಎಲ್ಲಿಂದ ಬರಬೇಕು..BP, sugar.. ನನಗೆ..
ನಾ..ಅವರು ಕೊಟ್ಟ prescription ನೋಡುತ್ತಾ ನಿಂತೆ...

ಒಮ್ಮೆ ನನ್ನದೇ ಬಿಳಿ ಕೂದಲು..
ಕಪ್ಪು ಮಾಡಲು ಹೋದೆ 
ಒಂದು men's parlour ಗೆ..

ಕೂದಲು trim and conditioning...
(, ಕೂದಲಿಗೆ ಕಪ್ಪು ಬಣ್ಣದ ಲೇಪನ)
ಕೂದಲು ಕಪ್ಪು ಮಾಡುವಾಗ..
ಆ barber ನ ಕೂದಲು ಕಡೆ 
ದೃಷ್ಟಿ ಹಾಯಿಸಿದೆ..
ಹೊಳೆಯುವ ಕಪ್ಪು ಕೂದಲು..
ನೀನ್ಯಾವ dye ಉಪಯೋಗ ಮಾಡುತ್ತಿ..?
ಎಂದು ಕೇಳಲು...
ಛೆ.. ನನಗೇಕೆ ಬೇಕು ಡೈ..?
ಕೊಬ್ಬರಿ ಎಣ್ಣೆಗೆ ಕರ್ಪೂರ ಸೇರಿಸಿ 
ಕೂದಲಿಗೆ ಹಚ್ಚಲು..
ನಾನು ಅವನು ನನ್ನ ಕೈಗೆ ಕೊಟ್ಟ parlour Bill ನೋಡುತ್ತಾ ನಿಂತೆ..

ನನಗೊಮ್ಮೆ ಗಟ್ಟಿಯಾದ ಹಾಲು ಬೇಕಿತ್ತು..
ಹೋದೆ ಒಬ್ಬ ಗೌಳಿಯ ಮನೆಗೆ..
ಅನೇಕ ಜೆರ್ಸಿ ಆಕಳು ಇದ್ದವು..
ಹಾಲು ಕೊಡುತ್ತಾ..
ಗಟ್ಟಿಯಾದ creamy milk..
ಒಂದು ಮೂಲೆಯಲ್ಲಿ ... ದೇಶೀಯ ತಳಿಯ  ಗೋವುಗಳೂ
ನೋಡಿದೆ..
ಗೌಳಿಗನಿಗೆ ಕೇಳಿದೆ..
ಅದೇಕೆ ಸಾಕಿರುವಿ ಆ ದೇಶೀಯ ಆಕಳನ್ನು..?
ಸರ... ಅವುಗಳ ಹಾಲನ್ನೇ ನಾನು ಉಪಯೋಗ ಮಾಡ್ತ ಇರೋದು 
ನನ್ನ ಮನೆಗೆ..
ನಾನು ಆ ಗೌಳಿ ಯ ಜೆರ್ಸಿ ಆಕಳಿಂದ ಪಡೆದ ಗಟ್ಟಿ ಹಾಲಿನ ಪಾತ್ರೆಯನ್ನು ನೋಡುತ್ತಾ ನಿಂತೆ....

ಒಮ್ಮೆ ಶಹರದ ಪ್ರಸಿದ್ಧ ಹೋಟೆಲ್ಗೆ ಹೋದೆ.. ಊಟಕ್ಕೆಂದು..
ಊಟ ಆಯಿತು..bill ಕೊಡಲು
Hotel ಮಾಲಿಕನ ಟೇಬಲ್ ಗೆ ಹೋದೆ..
ಒಬ್ಬ ಆಳು...
ಸರ.. ನಿಮ್ಮ ಊಟ ...ಎಂದು ಒಂದು tiffin ಕ್ಯಾರಿಯರ್ ತಂದಿಟ್ಟ ಮಾಲಿಕನ ಹತ್ತಿರ..
ನಾ ಕೇಳಿದೆ... ಹೊಟೆಲ್ ಮಾಲೀಕರಿಗೆ..
ಈ ಟಿಫಿನ್ ಕ್ಯಾರಿಯರ್ ಊಟ ಯಾರಿಗೆ...?
ಸರ್..ಅದು ನನ್ನೂಟ..
ಮನೆಯಿಂದ ತರಿಸಿದ್ದು..
ನಾ.. ನನ್ನ ಕೈಯಲ್ಲಿದ್ದ ಹೋಟೆಲ್ bill ನೋಡುತ್ತಾ ನಿಂತೆ....
ಒಂದು ದಿನ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಇತ್ತು ನಮ್ಮ ಮನೆಯಲ್ಲಿ. ಹೊರಗಡೆ ಒಬ್ಬ ಭಿಕ್ಷುಕ ಅಮ್ಮಾ ತಾಯಿ ಎನಾದರೂ ಭಿಕ್ಷೆ ಹಾಕಿ ಎಂದು ಕೂಗಿದ. ನಾನು ತುಂಬಾ ಬಿಸ್ಹೀ ಇದ್ದೆ. ಮುಂದೆ ಹೋಗು ಎಂದು ಗದರಿಸಿದೆ.
ನಂತರ ಪೂಜೆ ಮಾಡುತ್ತಿರುವಾಗ ಶ್ರೀ ಸತ್ಯನಾರಾಯಣ ಸ್ವಾಮಿ ಫೋಟೋ ದಲ್ಲಿ ಇದ್ದ ಶ್ರೀ ಸತ್ಯನಾರಾಯಣ ಸ್ವಾಮಿ ದೇವರು ನಕ್ಕಂತೆ ಭಾಸವಾಯಿತು.
ಭಗವಂತನು ಎಲ್ಲಾ ಸೌಲಭ್ಯಗಳನ್ನು ಸೌಭಾಗ್ಯವನ್ನು ಈ ನಮ್ಮ ಜೀವನ,ಭೂಲೋಕ, ಪ್ರಕೃತಿ ಯಲ್ಲಿ ಖಂಡಿತ ನಮಗೆ ಕೊಟ್ಟಿದ್ದಾನೆ. ಆದರೆ ಅದನ್ನು ಉಪಯೋಗಿಸಿಕೊಂಡು ಲಾಭ ಪಡೆಯುವುದರಲ್ಲಿ ನಮಗೆ ಕಷ್ಟ ಮತ್ತು ಅಸಡ್ಡೆ.

ಹೀಗೆಯೇ...
ಕೆಲವು ಉದಾಹರಣೆಗಳು..
ಈ ಜೀವನದ...
ಕಠೋರ ಸತ್ಯಗಳು..

No comments:

Post a Comment

If you have any doubts. please let me know...