July 31, 2021

ಉತ್ತಾನಪಾದ ಕಾಲಸೂಚಕ



ಪುರಾಣದಲ್ಲಿ ಬರುವ ಉತ್ತಾನಪಾದನ ಕಥೆ  ಬಹಳ ಅರ್ಥಗರ್ಭಿತವಾದದ್ದು. ಉತ್ತಾನಪಾದ ಎನ್ನುವುದೇ ಚಲನೆಯ ಸಂಕೇತ. ಆ ಉತ್ತಾನಪಾದನ ನಡೆ ಸುರುಚಿಯ ಕಡೆಗಿದ್ದರೆ ಮನುಷ್ಯ ಉತ್ತಮನಾಗುತ್ತಾನೆ. ಅದೇ ನಡೆ ಸುನೀತಿಯ ಕಡೆಗಾದರೆ ಶಾಶ್ವತವಾದ ಕೀರ್ತಿಪಡೆದು ಸ್ಥಿರವಾಗಿ ನಿಲ್ಲುತ್ತ್ತಾನೆ. ಶಿಶುಮಾರನ ಮಗಳು ಭ್ರಮಿ ಎನ್ನುವವಳು ಧ್ರುವನ ಪತ್ನಿ. ಭ್ರಮಿ ಎನ್ನುವುದೂ ಚಲನೆ, ಶಿಂಶುಮಾರ ಸಹ ಕಾಲಕ್ಕೆ ಸಂಬಂಧಿಸಿದ ಪದ. ಮಕ್ಕಳ ಹೆಸರು ವತ್ಸರ ಮತ್ತು ಕಲ್ಪ ಎಂದು. ಅಂದರೆ ಈ ಇಡೀ ಸಂಸಾರವೇ ಕಾಲಯಾನದ ಸೂಚಕ ಎನ್ನಬಹುದು. 

ಉತ್ತಾನಪಾದನಿಗೆ ಸುನೀತಿ ಮತ್ತು ಸುರುಚಿ ಎಂಬ ಇಬ್ಬರು ಪತ್ನಿಯರು. ಅವರಿಬ್ಬರಲ್ಲಿ ಸುರುಚಿಯೇ ಮಹಾರಾಜನಿಗೆ ಹೆಚ್ಚು ಪ್ರೀತಿಪಾತ್ರಳಾಗಿದ್ದಳು. ಸುರುಚಿಗೆ ಉತ್ತಮ ಎನ್ನುವ ಮಗನೂ, ಸುನೀತಿಗೆ ಧ್ರುವ ಎನ್ನುವ ಮಗನೂ ಜನಿಸುತ್ತಾರೆ. ಒಂದು ದಿನ ಉತ್ತಾನಪಾದನು ಉತ್ತಮನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಿಸುತ್ತಿದ್ದ. ಅದೇ ಸಮಯದಲ್ಲಿ ಧ್ರುವನೂ ಸಹ ತಂದೆಯ ತೊಡೆಯನ್ನು ಏರಲು ಬರುತ್ತಾನೆ. ಆದರೆ ಉತ್ತಾನಪಾದನು ಧ್ರುವನನ್ನು ಆದರಿಸುವುದಿಲ್ಲ್ಲ. ಸ್ವಭಾವತಃ ಅಹಂಕಾರಿಯಾಗಿದ್ದ ಸುರುಚಿಯು ತನ್ನ ಸವತಿಯಾದ ಸುನೀತಿಯ ಮಗ ಧ್ರುವನು ಮಹಾರಾಜನ ತೊಡೆಯನ್ನೇರಲು ಪ್ರಯತ್ನಿಸುತ್ತಿರುವುದನ್ನು ಕಂಡು ಹೊಟ್ಟೆಯುರಿಯಿಂದ “ನಿನಗೆ ರಾಜಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕು ಇಲ್ಲ. ನೀನು ರಾಜನ ಮಗ ನಿಜ. ಆದರೆ, ನಾನು ನಿನಗೆ ಜನ್ಮ ಕೊಡಲಿಲ್ಲ ಎನ್ನುತ್ತಾಳೆ. ನಿನಗೆ ರಾಜಸಿಂಹಾಸನವನ್ನು ಪಡೆಯಬೇಕೆಂಬ ಆಶೆಯಿದ್ದರೆ ತಪಸ್ಸುಮಾಡಿ, ದೇವರನ್ನು ಒಲಿಸಿಕೊಂಡು ಪುನಃ ನನ್ನ ಗರ್ಭದಲ್ಲಿ ಜನಿಸಿ ಆಮೇಲೆ ತಂದೆಯ ತೊಡೆಯನ್ನೇರು ಎಂದು ಛೇಡಿಸುತ್ತಾಳೆ. ಆದರೆ ಉತ್ತಾನಪಾದನು ಇವೆಲ್ಲವನ್ನೂ ಸುಮ್ಮನೆ ನೋಡುತ್ತಿದ್ದ. ವಿರೋಧಿಸಲೇ ಇಲ್ಲ. ಧ್ರುವ ಅಪ್ಪನನ್ನು ಬಿಟ್ಟು ಅಳುತ್ತಾ ತಾಯಿಯ ಬಳಿಗೆ ಹೋಗುತ್ತಾನೆ. ಸುನೀತಿಗೆ ಅರಮನೆಯ ಇತರ ಹೆಂಗಸರು ಸುರುಚಿ ಆಡಿದ್ದ ಮಾತುಗಳನ್ನು ತಿಳಿಸುತ್ತಾರೆ. ಆಕೆಗೂ ತುಂಬಾ ದುಃಖವಾಗುತ್ತದೆ.
ಸುರುಚಿಯು ಸತ್ಯವಾದ ಮಾತನ್ನೇ ಹೇಳಿದ್ದಾಳೆ. ಆದುದರಿಂದ, ಉತ್ತಮನಿಗೆ ಸಮನಾಗಿ ರಾಜಸಿಂಹಾಸನದಲ್ಲಿ ಕುಳಿತುಕೊಳ್ಳುವ ಇಚ್ಛೆಯೇ ನಿನಗೆ ಇದ್ದರೆ ದ್ವೇಷಭಾವವನ್ನು ಬಿಟ್ಟು ಸುರುಚಿ ಹೇಳಿದಂತೆಯೇ ಮಾಡು. ಆ ಶ್ರೀಹರಿಯ ಆರಾಧಿಸು, ತಪಸ್ಸು ಮಾಡಿ ಗೆದ್ದು ಬಾ ಎಂದು ಹರಸುತ್ತಾಳೆ. ಧ್ರುವನು ಕಾಡಿಗೆ ಹೊರಡುತ್ತಾನೆ. ನಾರದರು ಅಲ್ಲಿಗೆ ಬರುತ್ತಾರೆ. ಅವರು ಎಷ್ಟೇ ಸಮಾಧಾನ ಮಾಡಿದರೂ ಕೇಳದೇ ನಾರದರಿಂದ ತಪಸ್ಸಿನ ರಹಸ್ಯ ತಿಳಿದು ತಪಸ್ಸು ಮಾಡಿ ಹರಿಯನ್ನು ಒಲಿಸಿಕೊಳ್ಳುತ್ತಾನೆ. ತನ್ನದೇ ಆದ ಸ್ಥಾನವನ್ನು ಪಡೆಯುವ ಆಶೆಯಿಂದ ಧ್ರುವನಾಗಿ ನಿಲ್ಲುವ ಆಶೆಯಿಂದ ಇದ್ದ ಧ್ರುವನಿಗೆ ತನ್ನ ಮನದ ಇಚ್ಚೆಯಂತೆ ಅವಿನಾಶಿಯಾದ ಭದ್ರವಾದ ಸ್ಥಾನವನ್ನು ಅಂದರೆ ಗ್ರಹ, ನಕ್ಷತ್ರಗಳಿಗೆ ಆಧಾರಸ್ತಂಭದಂತೆ ಮೇರುವಾಗಿರುವ ಸ್ಥಾನವನ್ನು ಪಡೆಯುತ್ತಾನೆ. ಪ್ರಳಯದವರೆಗೆ ಮಾತ್ರ ಇರುವ ಇತರ ಲೋಕಗಳು ನಾಶಹೊಂದಿದರೂ ಯಾವುದು ಸ್ಥಿರವಾಗಿರುತ್ತದೆಯೋ ಮತ್ತು ಯಾವುದನ್ನು ತಾರಾಗಣಗಳೊಡನೆ ಕೂಡಿದ ಧರ್ಮ, ಅಗ್ನಿ, ಕಶ್ಯಪ, ಶುಕ್ರರೇ ಮುಂತಾದ ಗ್ರಹ ನಕ್ಷತ್ರಗಳು ಪ್ರದಕ್ಷಿಣೆಮಾಡುತ್ತಿವೆಯೋ ಅಂತಹ ದಿವ್ಯವಾದ ಧ್ರುವನಕ್ಷತ್ರ ಪದವನ್ನು ಪಡೆಯುತ್ತಾನೆ. ಇದು ಭಾಗವತ ಪುರಾಣದಲ್ಲಿ ಬರುವ ದೀರ್ಘವಾದ ಕಥೆಯ ಸಂಕ್ಷಿಪ್ತ ರೂಪ. ನಕ್ಷತ್ರಗಳಿಗೆ ಚಲನೆಯಿಲ್ಲ ಚಲನೆ ಇರುವುದು ಭೂಮಿಗೆ. ಭೂಮಿಯ ಚಲನೆಯಿಂದ ನಕ್ಷತ್ರಗಳು ಚಲಿಸಿದಂತೆ ಭಾಸವಾಗುತ್ತದೆ ಅಷ್ಟೇ.
ಧ್ರುವ ಎನ್ನುವ ಪದ ಋಗ್ವೇದದಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ. ಅಯಂ ಸ ಜಜ್ಞೇ ಧ್ರುವ . . . . ವರ್ಧಮಾನಃ ಎನ್ನುವ ಆರನೇ ಮಂಡಲದ ಒಂದು ಸೂಕ್ತದ ಈ ಮಂತ್ರ ವೈಶ್ವಾನರಾಗ್ನಿಯನ್ನು ಕುರಿತಾಗಿ ಹೇಳುತ್ತದೆ. ಅಂದರೆ ಸ್ಥಿರವಾಗಿ ಮರಣ ರಹಿತವಾಗಿರುವ ಈ ಅಗ್ನಿಯು ಮರಣವನ್ನು ಹೊಂದುವ ಈ ಶರೀರದಲ್ಲಿ ಶಾಶ್ವತವಾಗಿರುತ್ತದೆ ಎನ್ನುವುದನ್ನು ಹೇಳುವಲ್ಲಿ ಸ್ಥಿರತೆಯನ್ನು ಹೇಳುತ್ತದೆ. ಜೊತೆಗೆ ನಾಶ ಹೊಂದಿದರೂ, ಆ ವೈಶ್ವಾನರ ಸ್ವರೂಪದ ಶಕ್ತಿಯು ಶಾಶ್ವತವಾಗಿರುತ್ತದೆ. ಅಂದರೆ ಅದೊಂದು ಶಕ್ತಿ ಜೀವಂತವಿರುತ್ತದೆ. ಅದರಲ್ಲಿಯೇ ಮುಂದೆ ಧ್ರುವಂ ಜ್ಯೋತಿರ್ನಿಹಿತಂ ದೃಶಯೇ ಎನ್ನುವಲ್ಲಿ ನಿಶ್ಚಲವಾದ ಜ್ಯೋತಿಯನ್ನು ಕುರಿತು ಹೇಳುತ್ತಾ, ನಿಶ್ಚಲವಾದುದು ಮತ್ತು ಮನಸ್ಸಿಗಿಂತಲೂ ವೇಗವಾದುದು ಎಂದು ಬೃಹಸ್ಪತಿಯ ಮಗ ಭರದ್ವಾಜ ಮಹರ್ಷಿ ಹೇಳುತ್ತಾರೆ. ಇನ್ನು ಭಗವದ್ಗೀತೆಯಲ್ಲಿ ಬರುವ ಜಾತಸ್ಯ ಹಿ ಧ್ರುವೋ ಮತ್ಯುಃ ಧ್ರುವಂ ಜನ್ಮ ಮೃತಸ್ಯ ಚ ಎನ್ನುವುದು ಸಹ ಹುಟ್ಟು ಹೇಗೆ ನಿಶ್ಚಿತವೋ ಅನಿಶ್ಚಿತವಾದ ಸಾವು ಸಹ ನಿಶ್ಚಿತವೇ ಎನ್ನುತ್ತದೆ. ಅಂದರೆ ಹುಟ್ಟಿನ ಜೊತೆಗೇ ಸಾವು ಸಹ ಸ್ಥಿರವಾಗಿರುವುದು. ಮಹಾಭಾರತದಲ್ಲಿ ಪಂಚಾಂಗ ಯೋಗವನ್ನು ಕುರಿತಾಗಿ ಹೇಳುವಾಗ ’ಸೇನಾಮಾಜ್ಞಾಪಯಾಮಾಸುರ್ನಕ್ಷತ್ರೇಹನಿ ಚ ಧ್ರುವೇ’ ಎಂದು ಹೇಳಲಾಗಿದೆ. ಅದೇನೇ ಇರಲಿ ನಮ್ಮ ಪ್ರಾಚೀನರು ಧ್ರುವ ಎನ್ನುವುದು ಸ್ಥಿರವಾಗಿರುವ ನಕ್ಷತ್ರವನ್ನಾಗಿ ಗಮನಿಸಿದ್ದರು. ಆಶ್ವಲಾಯನ ಗೃಹ್ಯ ಸೂತ್ರದಲ್ಲಿ ’ಧ್ರುವಮರುಂಧತೀಂ ಸಪ್ತಋಷೀನಿತಿ ದೃಷ್ಟ್ವಾ ವಾಚಂ ವಿಸೃಜೇತ’(೧:೭:೨೨) ಎಂದು ಬಂದಿರುವಲ್ಲಿ ಧ್ರುವ ನಕ್ಷತ್ರವಾಗಿಯೇ ಕಾಣಿಸಿಕೊಳ್ಳುತ್ತದೆ. ಶಾಂಖಾಯನ ಗೃಹ್ಯಸೂತ್ರದಲ್ಲಿ ’ದಧಿಕ್ರಾವ್ಣೋ ಅಕಾರಿಷಂ’ ಎನ್ನುತ್ತಾ ಮೊಸರನ್ನು ಕುಡಿಯುತ್ತಾ ಮುಂದೆ ’ಧ್ರುವ ದರ್ಶನಾದ್’ ಎಂದು ಹೇಳಲ್ಪಟ್ಟಿದೆ. ಅಲ್ಲಿ ಧ್ರುವ ನಕ್ಷತ್ರವನ್ನು ಸೂರ್ಯಾಸ್ತದ ನಂತರ ನೋಡಬಹುದೆನ್ನುವ ಅರ್ಥವೂ ಹೇಳಲ್ಪಟ್ಟಿದೆ. ಲಾಟ್ಯಾಯನ ಶ್ರೌತ ಸೂತ್ರದಲ್ಲಿ ಸಹ ಹೇಳಲ್ಪಟ್ಟಿದ್ದು ಸಹ ಅದೇ ಅರ್ಥದಲ್ಲಿ. ಇನ್ನು ಸಾಮಾನ್ಯವಾಗಿ ಇವೆಲ್ಲವೂ ಸಹ ಮಾಂಗಲ್ಯಮಂತ್ರಗಳು. ಅಂದರೆ ವಿವಾಹ ವಿಧಿಗೆ ಸಂಬಂಧಿಸಿದ್ದಾಗಿದೆ. ಅಂದರೆ ವಿವಾಹವೂ ಸಹ ಕೆಲವೇ ಗಂಟೆಗಳಲ್ಲಿ ಮುಗಿಯದೇ ಮೂರ್ನಾಲ್ಕು ದಿನಗಳಿಗೂ ಹೆಚ್ಚು ನಡೆಯುತ್ತಿತ್ತು ಮತ್ತು ನಕ್ಷತ್ರಗಳನ್ನು ತೋರಿಸಿ ಅರುಂಧತಿ ವಸಿಷ್ಠರ ಜೊತೆ ಧ್ರುವ ನಕ್ಷತ್ರದ ವೀಕ್ಷಣೆಯೂ ಇತ್ತು ಎನ್ನುವುದು ಅನೇಕ ಮಂತ್ರಗಳಲ್ಲಿ ಹೇಳಲ್ಪಟ್ಟಿದೆ.
ಧ್ರುವ ನಕ್ಷತ್ರ ಎನ್ನುವುದು ಉತ್ತರಾರ್ಧಗೋಳದಲ್ಲಿ ಇರುವಂತಹ ಒಂದು ನಕ್ಷತ್ರ.ಇದನ್ನುpolestar  ಎಂದು ಕರೆಯುತ್ತಾರೆ. ಪೂರ್ವಜರು ನಮ್ಮ ವಿವಾಹದ ನಂತರ ಜೀವನವೂ ಸಹ ಧ್ರುವನಂತೆ ಶಾಶ್ವತವಾಗಿರಲಿ ಎಂದು ಬಯಸುತ್ತಿದ್ದರು. ಇಲ್ಲಿ ಒಂದು ಪ್ರಮುಖವಾಗಿ ಗಮನಿಸಬೇಕಾದದ್ದು ಈ ನಕ್ಷತ್ರವನ್ನು ವಧುವಿಗೆ ಮಾತ್ರ ಸ್ಥಿರತೆಯ ಲಾಂಚನವಾಗಿ ತೋರಿಸಬೇಕು ಎನ್ನುವುದು ಗೃಹ್ಯ ಸೂತ್ರಗಳು. ಮೈತ್ರಾಯಣೀ ಉಪನಿಷತ್ತಿನಲ್ಲಿ ಒಂದು ಆಶ್ಚರ್ಯವಿದೆ. ಅಂದರೆ ’ಧ್ರುವಸ್ಯ ಪ್ರಚಲನಮ್’ ಎಂದಿರುವುದು ಈ ನಕ್ಷತ್ರಕ್ಕೆ ಚಲನೆ ಇದೆಯೇ ಎನ್ನುವುದು ಆಶ್ಚರ್ಯವಾಗುತ್ತದೆ. Indian Antiquary Volume 23  ರಲ್ಲಿಯೂ ಸಹ ಧ್ರುವ ನಕ್ಷತ್ರವು ಸ್ಥಿರವಾಗಿರುವ ನಕ್ಷತ್ರ ಎಂದಿರುವುದು ಸಿಗುತ್ತದೆ. ಅಂದರೆ ಅದೆಷ್ಟೋ ಅನೂಹ್ಯ ವರ್ಷಗಳ ಹಿಂದೆ ಆಕಾಶ ಕಾಯಗಳ ಕುರಿತಾಗಿ ಮತ್ತು ನಕ್ಷತ್ರಗಳ ಚಲನೆ ಮತ್ತು ಸ್ಥಿರತೆಯನ್ನು ಹೇಳಿರುವುದು ನೋಡಿದರೆ ಆಶ್ಚರ್ಯ ವಿಸ್ಮಯ ಎಲ್ಲವೂ. ಇನ್ನು ವರಾಹಮಿಹಿರರ ಬೃಹತ್ಸಂಹಿತೆಯ ಸಪ್ತರ್ಷಿಚಾರಾಧ್ಯಾದಲ್ಲಿಯೂ ಸಹ ಧ್ರುವ ನಕ್ಷತ್ರದ ವೈಶಿಷ್ಟ್ಯವು ಉಲ್ಲೇಖಿಸಲ್ಪಟ್ಟಿವೆ. ವಸಿಷ್ಠಸ್ಯಾಪ್ಯರುಂಧತೀ ಎಂದು ಅವರಿಬ್ಬರ ಅನ್ಯೋನ್ಯತೆ ನಮಗೆ ಆದರ್ಶವಾಗಿರಲಿ ಎನ್ನುವ ಆಶೀರ್ವಾದಸೂಚಕ ಮಂತ್ರವಿದೆ. ಇನ್ನು ‘precession of the equinox’  ನಲ್ಲಿ  ಗಮನಿಸಿದರೆ ಧ್ರುವ ನಕ್ಷತ್ರ ಎನ್ನಬಹುದಾದ ನಕ್ಷತ್ರ ಬದಲಾಗುತ್ತಿರುತ್ತದೆ - ೨೬೦೦೦ ವರ್ಷಗಳಿಗೆ ಒಂದು ಆವರ್ತನೆಯಾಗುತ್ತದೆ. ಕೆಲವೊಮ್ಮೆ ಭೂಮಿಯ ಅಕ್ಷಕ್ಕೆ ನೇರವಾಗಿ ಯಾವುದೇ ನಕ್ಷತ್ರ ಇರುವುದಿಲ್ಲ. ಈಗ ಸಹ ಹಾಗೇ ಇದೆ,  ನಾವು ಧ್ರುವ ನಕ್ಷತ್ರ ಎಂದು ಗುರುತಿಸುತ್ತಿರುವ ನಕ್ಷತ್ರ ಉತ್ತರ ಧ್ರುವದ ನೇರಕ್ಕೆ ಇಲ್ಲ.
ಭಾರತೀಯರಾದ ನಾವು ಹೆಮ್ಮೆ ಪಡಬೇಕಾದ ಮಾಹಿತಿ ಇದು. ನಮ್ಮ ಭಾರತೀಯ ಖಗೋಳ ಶಾಸ್ತ್ರಕ್ಕೆ ಈ ಪ್ರಕ್ರಿಯೆ ಅದೆಷ್ಟೋ ಸಾವಿರ ವರ್ಷಗಳಿಗೂ ಮೊದಲೇ ಅದರ ಜ್ಞಾನವಿದೆ. ಈ ಅಂಶವನ್ನೆ ಗಣಿತಾಂಶಗಳಿಂದ "ಅಯನಾಂಶ" ಎಂದು ಕರೆಯುತ್ತೇವೆ.
ಈ ಎಲ್ಲ ಕಾರಣಗಳಿಂದಲೇ ನಾವು ರಾಜ್ಯಾಭಿಷೇಕದ ಮಂತ್ರದಲ್ಲಿ ರಾಷ್ಟ್ರಂ ಧಾರಯತಾಂ ಧ್ರುವಂ ಎಂದಿರುವುದು.

ಸದ್ಯೋಜಾತರು..

ಅಪರಾಧಕ್ಕೆ ಪ್ರೇರಣೆಯೂ ಅಪರಾಧವೇ


ಭಾರತೀಯ ಕಾನೂನಿನ ಪ್ರಕಾರ ಅಪರಾಧ ಮಾಡಿದವನ ಜೊತೆಗೆ ಅಪರಾಧಕ್ಕೆ ಪ್ರೇರಣೆ ಕೊಟ್ಟವನೂ ಅಪರಾಧಿಯಾಗಿರುತ್ತಾನೆ. ಅಪರಾಧದ ತೀವ್ರತೆಯ ಆಧಾರದಲ್ಲಿ ಶಿಕ್ಷೆಯೂ ಕೊಡಲ್ಪಡುತ್ತದೆ. ಅದೇನೇ ಇರಲಿ ಈ ರೀತಿಯ ವ್ಯವಸ್ಥೆಗೆ ಪೂರಕವಾದ ಒಂದು ಕಥೆ ಮಹಾಭಾರತದಲ್ಲಿ ಸಿಗುತ್ತದೆ. ಅಪರಾಧಕ್ಕೆ ಪ್ರೇರಕನಿಗೆ ಮೊದಲು ಶಿಕ್ಷೆಯಾಗುತ್ತದೆ. ನಂತರ ಅಪರಾಧ ಎಸಗಿದವನು ಸ್ವಯಂ ಶಿಕ್ಷೆ ಪಡೆದುಕೊಳ್ಳುತ್ತಾನೆ. ಇದು ದೀರ್ಘವಾದ ಕಥೆ. 

ಮಹಾಭಾರತದಲ್ಲಿ ವನಪರ್ವದಲ್ಲಿ ತೀರ್ಥಯಾತ್ರಾ ಪರ್ವ ಅಂತ ಒಂದು ಇದೆ. ಅದರ ೧೨೭ನೇ ಅಧ್ಯಾಯದಲ್ಲಿ ಯುಧಿಷ್ಠಿರನು ಸೋಮಕನ ಕುರಿತಾಗಿ ಲೋಮಶರನ್ನು ಕೇಳುವ ಪ್ರಸಂಗ ಬರುತ್ತದೆ.  ಹಿಂದೆ ಧರ್ಮಿಷ್ಠನಾದ ಸೋಮಕನೆನ್ನುವ ರಾಜನಿದ್ದ. ಅವನಿಗೆ ನೂರು ಮಂದಿ ಮಡದಿಯರಿದ್ದರು. ಆದರೆ ನೂರು ಮಡದಿಯರಲ್ಲಿ ಒಬ್ಬಳಲ್ಲಿಯೂ ಅವನಿಗೆ ಮಗುವನ್ನು ಪಡೆಯಲು ಸಾಧ್ಯವಾಗಲಿಲ್ಲ. ಅನೇಕವರ್ಷಗಳವರೆಗೆ ಮಕ್ಕಳಿಲ್ಲದೇ ಇದ್ದ. ಸೋಮಕ ಮುದುಕನಾಗುತ್ತಾನೆ. ಸಂತಾನಕ್ಕಾಗಿ ಸೋಮಕನು ವ್ರತಗಳನ್ನು, ಉಪವಾಸಗಳನ್ನು, ದಾನ, ಪುಣ್ಯಕ್ಷೇತ್ರಯಾತ್ರೆ ಎಲ್ಲಾ ಧರ್ಮಕಾರ್ಯಗಳನ್ನು ಮಾಡುತ್ತಲೇ ಇದ್ದ. ಇದರ ಫಲವಾಗಿ ನೂರು ಮಂದಿ ಮಡದಿಯರಲ್ಲಿ ಒಬ್ಬಳಿಗೆ ಮಾತ್ರ ಒಂದು ಗಂಡು ಮಗು ಹುಟ್ಟಿತು. ಈ ಮಗುವಿಗೆ ‘ಜಂತು’ ಎಂದು ನಾಮಕರಣ ಮಾಡುತ್ತಾರೆ. ಈ ಮಗುವನ್ನೇ ಸೋಮಕನ ಎಲ್ಲಾ ಮಡದಿಯರು ತಮ್ಮದೆಂದೇ ಭಾವಿಸಿ ಅದನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಗು ಯಾವಾಗಲೂ ನಗುತ್ತಲೇ ಇರುವಂತೆ ಎಲ್ಲರೂ ನೋಡಿ ಕೊಳ್ಳುತ್ತಿದ್ದರು. ಹೀಗೆಯೇ ಇರುವಾಗ ಒಂದು ದಿನ ಇರುವೆಯೊಂದು ಕಚ್ಚುತ್ತದೆ. ಆಗ ಮಗುವು ಗಟ್ಟಿಯಾಗಿ ಕಿರುಚುತ್ತದೆ. ಇರುವೆಯ ಕಡಿತದಿಂದ ಮಗುವು ಚೀರಿದ್ದನ್ನು ಕಂಡು ರಾಜನ ನೂರು ಮಂದಿ ಮಡದಿಯರೂ ಮಗುವಿನ ಸುತ್ತಲೂ ಕುಳಿತು ಗೋಳಿಡುತ್ತಾರೆ. ಮಗುವನ್ನು ಸಮಾಧಾನಪಡಿಸಲೂ ಹೋಗಲಿಲ್ಲ. ನೂರು ಮಂದಿಯೂ ಮಗುವಿನೊಡನೆ ಸೇರಿ ಅಳುತ್ತಿದ್ದಾಗ, ಆ ಕಿರುಚುವ ಧ್ವನಿ ಮಂತ್ರಿಮಂಡಲದಲ್ಲಿ ಮಂತ್ರಾಲೋಚನೆ ಮಾಡುತ್ತಾ ಸಿಂಹಾಸನದಲ್ಲಿ ಕುಳಿತಿದ್ದ ಸೋಮಕನಿಗೂ ಕೇಳಿಸುತ್ತದೆ. ಕೂಡಲೇ ರಾಜನು ಅಂತಃಪುರದ ಕಡೆಯಿಂದ ಬರುತ್ತಿದ್ದ ಕಿರುಚಾಟಕ್ಕೆ ಕಾರಣವನ್ನು ತಿಳಿದುಬರುವಂತೆ ಸೇವಕರನ್ನು ಕಳುಹಿಸುತ್ತಾನೆ. ರಾಜಸೇವಕರು ನೋಡಿ ಬಂದು ರಾಜನಿಗೆ ಕಾರಣವನ್ನು ಹೇಳುತ್ತಾರೆ. ಸೋಮಕನು ಅಂತಃಪುರಕ್ಕೆ ಹೋಗಿ ಅಳುತ್ತಿದ್ದ ತನ್ನ ಮಗನನ್ನು ಸಮಾಧಾನಗೊಳಿಸುತ್ತಾನೆ. ತನ್ನ ಪತ್ನಿಯರಿಗೂ ಸಮಾಧಾನ ಹೇಳಿ,  ಮಂತ್ರಿಮಂಡಲ ಸೇರುತ್ತಾನೆ. ಸೋಮಕ ಈಗ ಬಹಳ ಚಿಂತೆಗೊಳಗಾಗುತ್ತಾನೆ. ತನ್ನ ಮಂತ್ರಿಗಳು ಮತ್ತು ಪುರೋಹಿತರಿಗೆ ’ಧಿಗಸ್ತ್ವಿಹೈಕಪುತ್ರತ್ವಮಪುತ್ರತ್ವಂ ವರಂ ಭವೇತ್ | ನಿತ್ಯಾತುರತ್ವಾದ್ಭೂತಾನಾಂ ಶೋಕ ಏವೈಕಪುತ್ರತಾ ||  ಎನ್ನುತ್ತಾನೆ. “ನಾನು ಒಬ್ಬನೇ ಮಗನನ್ನು ಹೊಂದಿರುವುದಕ್ಕೆ  ಧಿಕ್ಕಾರವಿರಲಿ! ನನ್ನ ಈಗಿನ ಅನುಭವದಲ್ಲಿ ಒಬ್ಬ ಮಗನಿರುವುದಕ್ಕಿಂತಲೂ ಮಕ್ಕಳಿಲ್ಲದಿರುವುದೇ ಒಳ್ಳೆಯದೆನಿಸಿಬಿಟ್ಟಿದೆ. ಪ್ರಪಂಚದಲ್ಲಿ ಹುಟ್ಟಿದ ಪ್ರಾಣಿಗಳಿಗೆ ರೋಗ ರುಜಿನಗಳು ಯಾವಾಗಲೂ ಬರುವುದರಿಂದ ಒಬ್ಬ ಮಗನನ್ನು ಪಡೆಯುವುದು ಶೋಕಕ್ಕೆ ಕಾರಣವಾಗುತ್ತದೆಯೇ ಹೊರತು ಸುಖಕ್ಕೆ ಕಾರಣ ವಾಗುವುದಿಲ್ಲ. ಹೆಚ್ಚು ಮಕ್ಕಳನ್ನು ಪಡೆಯಬೇಕೆಂಬ ಆಸೆಯಿಂದ ನಾನು ನೂರು ಮಂದಿ ಕನ್ಯೆಯರನ್ನು ಮದುವೆಯಾದೆ. ಅವರ ಆರೋಗ್ಯ ಮತ್ತು ಅವರ ವಂಶಗಳನ್ನು ಸಂಪೂರ್ಣವಾಗಿ ಪರೀಕ್ಷಿಸಿದ ನಂತರವೇ ಅವರು ನನಗೆ ತಕ್ಕುದಾದ ಕನ್ಯೆಯರೆಂದು ನಿಶ್ಚಯಿಸಿ ಮದುವೆಯಾದೆ. ಆದರೆ ನನ್ನ ಪರೀಕ್ಷೆ ಮತ್ತು ಪ್ರಯತ್ನಗಳೆಲ್ಲವೂ ಹಾಳಾಗಿ ಹೋಯ್ತು. ಆ ನೂರು ಮಂದಿಯಲ್ಲಿ ಯಾರಿಗೂ ಬೇಗ ಮಕ್ಕಳೇ ಆಗಲಿಲ್ಲ. ನಾನು ಮುದುಕನಾದನಂತರ ಎಲ್ಲರೂ ಸೇರಿ ವ್ರತೋಪವಾಸಗಳನ್ನು ಮಾಡಿದ ಫಲವಾಗಿ ಈ ಒಬ್ಬ ಮಗ ಜಂತುವನ್ನು ಪಡೆದಿರುತ್ತೇವೆ. ನಮ್ಮೆಲ್ಲರ ಪ್ರಾಣವೂ ಈ ಒಂದು ಮಗುವನ್ನೇ ಅವಲಂಬಿಸಿದೆ. ಈ ಮಗುವಿಗೆ ಸ್ವಲ್ಪ ತೊಂದರೆಯಾದರೂ ಅರಮನೆಯೇ ಅಲ್ಲೋಲ ಕಲ್ಲೋಲವಾಗುತ್ತದೆ. ನಾನು ಮುದುಕನಾಗಿದ್ದೇನೆ. ನನ್ನ ಮಡದಿಯರೂ ಮುದುಕಿಯರಾಗುತ್ತಿದ್ದಾರೆ. ಈ ವೃದ್ಧಾಪ್ಯದಲ್ಲಿ ಹುಟ್ಟಿರುವ ಈ ಮಗುವು ನಮ್ಮ ಉಸಿರಿನಂತಿದೆ. ಹೀಗೆ ಹೇಳಿ ಬ್ರಾಹ್ಮಣರಲ್ಲಿ ನಿಮಗೆ ತಿಳಿದಿರುವಂತೆ ಈಗಲೂ ನೂರು ಮಕ್ಕಳನ್ನು ಪಡೆಯಲು ಸಾಧ್ಯವಾಗುವ ಯಾವುದಾದರೂ ಕರ್ಮವಿದೆಯಾ ಎನ್ನುತ್ತಾನೆ. ಹಾಗೇನಾದರೂ ಇದ್ದರೆ  ಆ ಕರ್ಮವು ಚಿಕ್ಕದು, ದೊಡ್ಡದು, ನನ್ನಿಂದ ಮಾಡಲು ಸಾಧ್ಯ ಅಥವಾ ಅಸಾಧ್ಯ ಎನ್ನುವುದನ್ನು ಯೋಚಿಸಬೇಡಿ. ನಡೆಸಿಕೊಡಿ ಎನ್ನುತ್ತಾನೆ.

ಅಸ್ತಿ ಚೈತಾದೃಶಂ ಕರ್ಮ ಯೇನ ಪುತ್ರಶತಂ ಭವೇತ್ | ಯದಿ ಶಕ್ನೋಷಿ ತತ್ಕರ್ತುಮಥ ವಕ್ಷ್ಯಾಮಿ ಸೋಮಕ || “ಸೋಮಕರಾಜನೇ! ಒಂದು ಕರ್ಮವೇನೋ ಇದೆ. ಆ ಕರ್ಮವನ್ನು ಮಾಡುವುದರಿಂದ ನೂರು ಮಂದಿ ಮಕ್ಕಳನ್ನು ಪಡೆಯುವ ಸಾಧ್ಯತೆ ಇದೆ. ಆದರೆ ನಿನಗೆ ಆ ಕರ್ಮವನ್ನು ಮಾಡಲು ಸಾಧ್ಯವಾಗಲಿಕ್ಕಿಲ್ಲ. ಎಂತಹ ದಾರುಣ ಕರ್ಮವಾದರೂ ಮಾಡಿಯೇ ತೀರುವೆನೆಂದು ನೀನು ಹೇಳುವೆಯಾದರೆ ಕರ್ಮಾಂಗಗಳನ್ನು ವಿವರಿಸಿ ಹೇಳುವೆನು.” ಎನ್ನುತ್ತಾರೆ ಆಗ ಸೋಮಕನು, ನೀವು ಹೇಳಿರುವ ಹೇಗೇ ಇರಲಿ, ಆ ಕರ್ಮದಿಂದ ನೂರು ಮಕ್ಕಳು ಹುಟ್ಟುವುದು ನಿಶ್ಚಯವಾಗಿದ್ದರೆ ಖಂಡಿತವಾಗಿಯೂ ಮಾಡುತ್ತೇನೆ ಎನ್ನುತ್ತಾನೆ. ಅದು ಮಾಡುವ ಕಾಠಿಣ್ಯವೇನು ಹೇಳಿ ಎನ್ನುತ್ತಾನೆ. ಆಗ “ಮಹಾರಾಜ! ನಾನೇ ಪುರೋಹಿತನಾಗಿ ಮಾಡಿಸುವ ಯಜ್ಞದಲ್ಲಿ ನೀನು ಯಜಮಾನ. ಈಗ ನಿನಗೆ ಹುಟ್ಟಿರುವ ಜಂತುವನ್ನೇ ಬಲಿಯನ್ನಾಗಿ ಮಾಡಿಕೊಂಡು ಯಾಗಮಾಡು. ಆ ಯಾಗವು ಮುಗಿದ ಸ್ವಲ್ಪ ಕಾಲದಲ್ಲಿಯೇ ನಿನಗೆ ನೂರು ಮಂದಿ ಮಕ್ಕಳು ಹುಟ್ಟುವರು. ಜಂತುವಿನ ವಪೆಯನ್ನು ತೆಗೆದು ಹೋಮಮಾಡುವಾಗ ಹುಟ್ಟುವ ಹೊಗೆಯನ್ನು ಆಘ್ರಾಣಿಸುವುದರಿಂದ ನಿನ್ನ ನೂರು ಪತ್ನಿಯರೂ ನೂರು ಮಕ್ಕಳನ್ನು ಪಡೆಯುತ್ತಾರೆ. ಜಂತುವೂ ಈಗಿನ ತನ್ನ ತಾಯಿಯನ್ನೇ ಪುನಃ ತಾಯಿಯನ್ನಾಗಿ ಪಡೆದು ನಿನ್ನ ಮಗನಾಗಿಯೇ ಹುಟ್ಟುತ್ತಾನೆ. ಪುನರ್ಜನ್ಮದಲ್ಲಿ ಇವನ ಎಡಪಕ್ಕೆಯಲ್ಲಿ ಒಂದು ಸುವರ್ಣದ ರೇಖೆಯಿರುವುದು.” ಎನ್ನುತ್ತಾರೆ. ಪುರೋಹಿತರಿಗೆ ಸೋಮಕನು “ಯಾವ ಕರ್ಮವನ್ನು ಯಾವ ರೀತಿಯಲ್ಲಿ ಲೋಪ-ದೋಷಗಳಿಲ್ಲದೇ ನೆರವೇರಿಸಬೇಕೋ ಆ ರೀತಿಯಲ್ಲಿಯೇ ಮಾಡಿ. ನಾನು ಪುತ್ರರನ್ನು ಪಡೆಯಬೇಕಾಗಿರುವುದರಿಂದ ನೀವು ಹೇಳಿದಂತೆಯೇ ಎಲ್ಲವನ್ನೂ ಮಾಡುವೆನು.”
ಸೋಮಕನು ತನ್ನ ಮಗನಾದ ಜಂತುವನ್ನು ಪಶುವಿನ ಸ್ಥಾನದಲ್ಲಿಟ್ಟು ಕೊಂಡು ಯಾಗವನ್ನು ಪ್ರಾರಂಭಿಸಿದನು. ಆದರೆ ತಾಯಂದಿರಿಗೆ ಮಾತ್ರ ಆ ದೃಶ್ಯವನ್ನು ನೋಡಲಾಗಲಿಲ್ಲ. ಪಶು ಸ್ಥಾನದಲ್ಲಿದ್ದ ಮಗುವನ್ನು ಎತ್ತಿಕೊಂಡು ಗಟ್ಟಿಯಾಗಿ ಅವರು ಅಳತೊಡಗುತ್ತಾರೆ. ಪಶುಸ್ಥಾನದಿಂದ ಮಗುವನ್ನು ರಾಜಮಹಿಷಿಯರು ಸೆಳೆದುಕೊಂಡು ಹೋಗುತ್ತಾರೆ. ಆದರೆ ಪುರೋಹಿತರು ಆರಂಭಿಸಿದ ಕರ್ಮವನ್ನು ನಿಲ್ಲಿಸುವಂತಿರಲಿಲ್ಲ. ಮೇಲಾಗಿ ಪುರೋಹಿತರಿಗೇ ತಾವು ಮಾಡುತ್ತಿರುವ ಕರ್ಮದ ಫಲವೇನೆಂಬುದು ಚೆನ್ನಾಗಿ ತಿಳಿದಿತ್ತು. ಪುರೋಹಿತರು ಮಗು ವಿದ್ದಲ್ಲಿಗೆ ಹೋಗಿ ತಮ್ಮ ಬಲಗೈಯಿಂದ ಮಗುವನ್ನು ಹಿಡಿದು ಬಲಾತ್ಕಾರವಾಗಿ ಯಜ್ಞಮಂಟಪಕ್ಕೆ ತರುತ್ತಾರೆ. ರಾಜಪತ್ನಿಯರು ಅಳುತ್ತಿದ್ದರು. ಜಂತುವನ್ನು ಪಶುಸ್ಥಾನದಲ್ಲಿಟ್ಟು ಮಹಾಮಂತ್ರಗಳಿಂದ ಅಭಿಮಂತ್ರಿಸಿ ವಧೆಮಾಡಿ ವಪೆಯನ್ನು ತೆಗೆದು ಯಜ್ಞದಲ್ಲಿ ಹೋಮಮಾಡಿದಾಗ ಅಲ್ಲಿಯೇ ಇದ್ದು ಸಂಕಟಪಡುತ್ತಿದ್ದ ರಾಜಮಹಿಷಿಯರು ವಪೆಯ ಧೂಮವನ್ನು ಆಘ್ರಾಣಿಸಿ ಪ್ರಜ್ಞಾ ಹೀನರಾಗಿ ಬೀಳುತ್ತಾರೆ. ಶೈತ್ಯೋಪಚಾರವಾದನಂತರ ಅವರೆಲ್ಲರಿಗೂ ಪ್ರಜ್ಞೆಯುಂಟಾಯಿತು. ಪುರೋಹಿತರು ಹೇಳಿದ ರೀತಿಯಲ್ಲಿಯೇ ಜಂತುವಿನ ವಪಾ ಹೋಮದ ಧೂಮದ ಆಘ್ರಾಣದಿಂದಲೇ ಅವರೆಲ್ಲರೂ ಗರ್ಭವತಿಯರಾಗುತ್ತಾರೆ. ಹತ್ತನೆಯ ತಿಂಗಳಿನಲ್ಲಿ ನೂರು ಮಂದಿಯರೂ ನೂರು ಮಕ್ಕಳನ್ನು ಪ್ರಸವಿಸುತ್ತಾರೆ. ಪುರೋಹಿತರು ಹೇಳಿದ್ದಂತೆಯೇ ಜಂತುವು ಜ್ಯೇಷ್ಠಪುತ್ರನಾಗಿ ತನ್ನ ಹಿಂದಿನ ತಾಯಿಯ ಗರ್ಭದಲ್ಲಿಯೇ ಹುಟ್ಟುತ್ತಾನೆ. ಪುರೋಹಿತರು ಹೇಳಿದ್ದ ರೀತಿಯಲ್ಲಿಯೇ ಅವನ ಎಡಭಾಗದಲ್ಲಿ ಸುವರ್ಣದ ರೇಖೆಯೂ ಇತ್ತು. ರಾಜಕುಮಾರರು ಹುಟ್ಟಿದ ಸ್ವಲ್ಪ ಸಮಯದಲ್ಲಿಯೇ ಪುರೋಹಿತನು ಸಾಯುತ್ತಾನೆ. ಅವನು ಸತ್ತ ಸ್ವಲ್ಪಕಾಲದಲ್ಲಿಯೇ ಸೋಮಕನೂ ಸಾಯುತ್ತಾನೆ. ಸೋಮಕನು ಪರಲೋಕದಲ್ಲಿ ತನಗೆ ನೂರು ಮಕ್ಕಳಾಗುವಂತೆ ಕರ್ಮಮಾಡಿಸಿದ ತನ್ನ ಪುರೋಹಿತನು ಅತಿಘೋರವಾದ ನರಕದಲ್ಲಿ ಬಿದ್ದು ದಾರುಣವಾದ ಸಂಕಟವನ್ನು ಅನುಭವಿಸುತ್ತಿದ್ದುದನ್ನು ಕಾಣುತ್ತಾನೆ. ಸೋಮಕನಿಗೆ ಬೇಸರವಾಗುತ್ತದೆ. ಬ್ರಾಹ್ಮಣನನ್ನು ಕೇಳುತ್ತಾನೆ. ಬ್ರಾಹ್ಮಣರೇ ನೀವು ಯಾವ ಕಾರಣದಿಂದ ಇಂತಹ ಘೋರವಾದ ನರಕದಲ್ಲಿ ಬಿದ್ದು ಅತಿದಾರುಣವಾದ ಈ ಯಾತನೆಯನ್ನು ಅನುಭವಿಸುತ್ತಿರುವಿರಿ?” ಆ ಬ್ರಾಹ್ಮಣನಿಗೆ ಉತ್ತರಕೊಡುವ ಚೈತನ್ಯವೂ ಇರಲಿಲ್ಲ. ಅವನ ಶರೀರವು ಅಗ್ನಿಯಲ್ಲಿ ಸುಡುತ್ತಿತ್ತು. ದಾರುಣವಾದ ಯಾತನೆಯನ್ನನುಭವಿಸುತ್ತಾ ಬಹುಸಂಕಟದಿಂದ ರಾಜನಿಗೆ ಹೇಳಿದನು . . . . 
ತ್ವಂ ಮಯಾ ಯಾಜಿತೋ ರಾಜಂಸ್ತಸ್ಯೇದಂ ಕರ್ಮಣಃ ಫಲಮ್ || “ಸೋಮಕ! ಮಕ್ಕಳ ಪ್ರಾಪ್ತಿಗಾಗಿ ನಿನಗೆ ಯಜ್ಞಮಾಡಿಸಿದುದರ ಫಲವಿದು. ಈ ರೀತಿಯಲ್ಲಿ ಅನುಭವಿಸುತ್ತಿದ್ದೇನೆ.” ಬ್ರಾಹ್ಮಣನ ಮಾತು ಕೇಳಿ ರಾಜನಿಗೂ ಬಹಳ ದುಃಖವಾಯಿತು. ಸೋಮಕನು ಯಮಧರ್ಮನ ಬಳಿಗೆ ಹೋಗಿ, “ಯಮಧರ್ಮನೇ! ನನ್ನ ಕಾಮನೆಯನ್ನು ಪೂರೈಸಲು ಕರ್ಮ ಮಾಡಿಸಿದ ಪುರೋಹಿತರನ್ನು ಈ ಕೂಡಲೇ ಬಿಡುಗಡೆ ಮಾಡು. ಅವರ ಸ್ಥಾನದಲ್ಲಿ ನಾನು ನಿಲ್ಲುತ್ತೇನೆ. ನನ್ನ ಕಾಮನೆಯನ್ನು ಪೂರ್ಣಗೊಳಿಸುವ ಸಲುವಾಗಿ ಯಜ್ಞಮಾಡಿಸಿದದವರು ನರಕದ ಅಗ್ನಿಯಲ್ಲಿ ಬೆಂದುಹೋಗುತ್ತಿದ್ದಾರೆ. ಎನ್ನುತ್ತಾನೆ. ಆಗ ಯಮನು “ಒಬ್ಬನು ಮಾಡಿದ ಕರ್ಮದ ಫಲವನ್ನು ಮತ್ತೊಬ್ಬನೆಂದಿಗೂ ಅನುಭವಿಸಲಾರನು. ನೀನು ಮಾಡಿದ ಕರ್ಮಕ್ಕೆ ಫಲವಾಗಿ ನಿನಗೆ ಅಲ್ಲಿ ಕಾಣುತ್ತಿರುವ ಉತ್ತಮಲೋಕಗಳೂ ಲಭ್ಯವಾಗಿವೆ. ನೀನಲ್ಲಿಗೆ ತೆರಳಬಹುದು.” ಎನ್ನುತ್ತಾನೆ. ಪುರೋಹಿತನು ನರಕಕ್ಕೆ ಬೀಳಲು ಕಾರಣವನ್ನು ಹೀಗೆ ಹೇಳಲಾಗಿದೆ. ಪುರೋಹಿತನು ಯಾಜಕನಾಗಿ ಸೋಮಕನಿಗೆ ಪುತ್ರಯಜ್ಞ ವನ್ನು ಮಾಡಿಸಿದನು. ಅದರಿಂದ ಸೋಮಕನಿಗೆ ಮಕ್ಕಳ ಪ್ರಾಪ್ತಿಯಾಯಿತು. ಯಾಜಕನಿಗೆ ಸೋಮಕನು ಯಥೇಚ್ಛವಾಗಿ ದಕ್ಷಿಣೆಯನ್ನು ಕೊಟ್ಟನು. ಯಾಜಕನು ಯಜ್ಞಕ್ಕೆ ಪ್ರೇರಕನು. ಮೇಲಾಗಿ ಅದು ಕಾಮ್ಯಯಜ್ಞ. ಯಾಜಕನು ಸೋಮಕನಿಂದ ದಕ್ಷಿಣೆಯನ್ನು ಪಡೆದು ಸಂತುಷ್ಟನಾದನು. ದಕ್ಷಿಣೆಯ ಮೂಲಕವಾಗಿ ಸೋಮಕನು ತನ್ನ ಪಾಪಗಳೆಲ್ಲವನ್ನೂ ಪುರೋಹಿತನಿಗೆ ಧಾರೆಯೆರೆದುಕೊಟ್ಟನು. ಅದಕ್ಕೆ ಪ್ರತಿಯಾಗಿ ಪುರೋಹಿತನು ಯಾವ ವಿಧವಾದ ಪ್ರಾಯಶ್ಚಿತ್ತವನ್ನೂ ಮಾಡಿಕೊಳ್ಳದೇ ಇದ್ದುದರಿಂದ ಶಿಶುಹತ್ಯೆಯ ಕಾರ್ಯಕ್ಕೆ ಪ್ರಚೋದಕನಾದ ಕಾರಣದಿಂದ ನರಕವಾಸವನ್ನು ಅನುಭವಿಸಬೇಕಾಯಿತು.

ಯಮಧರ್ಮನ ಆ ಮಾತಿಗೆ ಉತ್ತರವಾಗಿ ಸೋಮಕನು ಹೇಳಿದನು: “ಯಮಧರ್ಮ! ಈ ಬ್ರಹ್ಮವಾದಿಗಳನ್ನು ನರಕದಲ್ಲಿಯೇ ಬಿಟ್ಟು ನಾನು ಮಾತ್ರ ಉತ್ತಮಲೋಕಕ್ಕೆ ಖಂಡಿತವಾಗಿಯೂ ಹೋಗಲಾರೆನು. ಸ್ವರ್ಗದಲ್ಲಾಗಲೀ, ನರಕದಲ್ಲಾಗಲೀ ಈ ಬ್ರಾಹ್ಮಣನೊಡನೆ ವಾಸಮಾಡಬೇಕೆಂಬುದೇ ನನ್ನ ಆಶೆ. ಕಾರಣವೇನೆಂದರೆ ಕರ್ಮ ಮಾಡಿಸಿದವರು ಇವರಾಗಿದ್ದರೆ ಕರ್ಮಮಾಡಿದವನು ಅಥವಾ ಕರ್ಮಮಾಡಿಸಲು ಪ್ರೇರಿಸಿದವನು ನಾನೇ ಆಗಿರುತ್ತೇನೆ. ಇವರಿಗೆ ದಕ್ಷಿಣಾರೂಪವಾದ ಫಲವು ಸಿಕ್ಕಿದೆ. ನನಗೆ ಮಕ್ಕಳ ರೂಪವಾದ ಫಲವು ಸಿಕ್ಕಿದೆ. ಆದುದರಿಂದ ನರಹತ್ಯೆಯಿಂದ ಪ್ರಾಪ್ತವಾಗಬಹುದಾದ ದುಷ್ಫಲವನ್ನು ನಾನೂ ಮತ್ತು ಈ ಬ್ರಾಹ್ಮಣರೂ ಸಮವಾಗಿ ಅನುಭವಿಸುವೆ ಎನ್ನುತ್ತಾನೆ. ಆಗ ಯಮ ಈ ಪುರೋಹಿತನೊಡನೆ ಇರಲು ಅನುವು ಮಾಡಿಕೊಡುತ್ತಾನೆ ಎನ್ನುವ ಕಥೆ.  

#ಸೋಮಕ_ಜಂತು 
ಸದ್ಯೋಜಾತರು

July 30, 2021

ಗೋಗ್ರಾಸ

#ಗೋಗ್ರಾಸ
ಸ್ನೇಹಿತರೇ ಇವತ್ತು  ಗೋಗ್ರಾಸ   ಬಗ್ಗೆ ತಿಳಿಸಿಕೊಡತೇನೆ 
ಇದರ ಮಹತ್ವ ಅಂದರೆ ಒಂದು ಸಲ ಗೋಗ್ರಾಸ ಕೊಟ್ಟರೆ ಹತ್ತು ಜನ ಬ್ರಾಹ್ಮಣರಿಗೆ ಊಟ ಹಾಕಿದಷ್ಟು ಪುಣ್ಯ ಬರುತ್ತದೆ..  ಗೋವಿನ ಪೂಜೆ ಗೋವಿಗೆ  ಆಹಾರ ಕೊಟ್ಟರೆ  ನಿಮ್ಮ ವಂಶ ಅಭಿವೃದ್ಧಿ ಆಗುತ್ತದೆ ... ಅಷ್ಟೇ  ಅಲ್ಲ ಎಲ್ಲ ದೇವತೆಗಳು ತೃಪ್ತರಾಗುತ್ತಾರೆ.. ಏನು ಈ ಗೋಗ್ರಾಸ... 

ಗೋಗ್ರಾಸ ಅಂದರೆ ನಮ್ಮ ಪೂರ್ವಜರು ಮನೆಯಲ್ಲಿ ಆಕಳನ್ನು ಸಾಕುತ್ತಿದ್ದರು ..ಆಗ  ದಿನವೂ ಮನೆಯಲ್ಲಿ  ಮಡಿಯಲ್ಲಿ ಅಡುಗೆ ಪೂಜೆ ನೈವೇದ್ಯ ಆಗುತ್ತಿತ್ತು . ದೇವರಿಗೆ ನೈವೇದ್ಯದ ಜೊತೆಗೆ  ಆಕಳಿಗೂ ಒಂದು ತಟ್ಟೆಯಲ್ಲಿ ನೈವೇದ್ಯ ಬಡಿಸಿ ಆಕಳು ಪೂಜೆ ಮಾಡಿ ಪ್ರದಕ್ಷಣೆ ನಮಸ್ಕಾರ ಮಾಡಿ ನೈವೇದ್ಯ ಆಕಳಿಗೆ ಕೊಡುತ್ತಿದ್ದರು ಅದನ್ನು ಗೋಗ್ರಾಸ ಅಂತ ಅನ್ನುತ್ತಾರೆ.‌‌‌...
ಆದರೆ ಈಗ ಕಾಲ ಬದಲಾಗಿದೆ ಗೋವು  ಸಾಕಲಾಗುವದಿಲ್ಲ ಅಡುಗೆ ಪೂಜೆ ನೈವೇದ್ಯ  ಸಾದ್ಯವಾಗುತ್ತಿಲ್ಲ ಅಲ್ಲವೆ... ಆದರೂ ಸಹ ನೀವು  ಈಗಲೂ ಸಹ ನೀವು ಗೋವಿನ ಪೂಜೆ  ಗೋ ಗ್ರಾಸನ್ನ ದಿನವೂ ಕೊಡಬಹುದು  ನಾನು ಯಾವ ರೀತಿ ಮಾಡುತ್ತೇವೆ ಅದನ್ನ ನಿಮಗೆ ಹೇಳಿಕೊಡುತ್ತೇನೆ.
 ಒಂದು   ಮಣೆಯ ಮೇಲೆ ಈ ರೀತಿ ಆಕಳುಕರು ರಂಗವಲ್ಲಿ ಬಿಡಿಸಿ  ಅರಿಷಿಣ ಕುಂಕುಮ ಅಕ್ಷತೆ ಹೂವು ಎರಿಸಿ ಪೂಜೆ ಮಾಡಿ ತುಪ್ಪದ ಬತ್ತಿ ಹಚ್ಚಿ   ಒಂದು ಬಟ್ಟಲಿನಲ್ಲಿ ಪ್ರತಿದಿನ ಒಂದು ಬಟ್ಟಲಿನಲ್ಲಿ ಅಕ್ಕಿ , ಬೆಲ್ಲದ ತುಂಡು , ಗೋದಿ , ಇಲ್ಲ ಕಡಲೆ ಬೇಳಿ ಯಾವುದಾದರೂ ಧಾನ್ಯದ ಜೊತೆಗೆ ಒಂದು ಸ್ವಲ್ಪ ಬೆಲ್ಲವನಿಟ್ಟು  ನೈವೇದ್ಯ ಮಾಡಿ ಪ್ರದಕ್ಷಣೆ  ಹಾಕಿ ನಂತರ ಆ ನೈವೇದ್ಯವನ್ನು ಮನೆಯ ಮುಂದೆ ಬರುವ ಆಕಳಿಗೆ ಕೊಡಿ , ಇಲ್ಲ ಆಕಳು ಬರಲ್ಲ ಅಂದರೆ ಒಂದು ಚೀಲ ಮಾಡಿ ಪ್ರತಿದಿನದ ನೈವೇದ್ಯ ವನ್ನು  ಅದರಲ್ಲಿ ಹಾಕಿಡಿ  ಸಾದ್ಯವಾದಾಗ ಎಲ್ಲಿ ಗೋವುಗಳನ್ನು ಸಾಕಿರುತ್ತಾರೊ ಅಲ್ಲಿ ಹೋಗಿ ಕೊಟ್ಟುಬನ್ನಿ .... ಮುವತ್ಮೂರು ಕೋಟಿ ದೇವತೆಗಳು ಗೋವಿನಲ್ಲಿ ಸನ್ನಿಹಿತರಾಗಿರುತ್ತಾರೆ. ಗೋವಿನ ಪೂಜೆ  ಒಂದು ಮಹತ್ತ ಫಲದಾಯಕವಾದದ್ದು...‌ ಗೋಗ್ರಾಸವನ್ನು ತೆಗೆದಿಟ್ಟು ನೋಡಿ ನಿಮಗೆ  ಧಾನ್ಯಗಳ ಕೊರತೆ ಮನೆಯಲ್ಲಿ ಯಾವಾಗಲೂ ಆಗುವದಿಲ್ಲ .... ಮಕ್ಕಳು ಅಭಿವೃದ್ಧಿ ಹೊಂದುತ್ತಾರೆ.
ನಿಮಗೆ  ಗೋವಿನ ಚಿತ್ರ  ಹೇಗೆ ಸರಳವಾಗಿ ರಂಗವಲ್ಲಿ ಬಿಡಿಸುವುದು ತಿಳಿಸಿ ಕೊಡತಾರೆ ರಶ್ಮಿ ಶ್ರೀವಾಸ್ತವ್.👇👇..
ವೀಣಾ ಜೋಶಿ

"ಗೋಗ್ರಾಸ" ಏಕೆ?



ನಾವು ಆಚರಿಸುವ ಯಾವುದೇ ಯಜ್ಞ ;ಯಾಗ ಪೂಜೆ, ಪಿತೃಕರ್ಮಗಳು ಗೋಗ್ರಾಸವನ್ನಿಡದೇ ಪೂರ್ಣವಾಗಲಾರವು.
ಯಜ್ಞ, ಶ್ರಾದ್ಧಾದಿಗಳಲ್ಲಿ ವಿಪ್ರಭೋಜನದಂತೆಯೇ ಗೋಗ್ರಾಸ ದಾನವೂ ಅನಿವಾರ್ಯ ಕರ್ತವ್ಯವಾಗಿದೆ.
ಗೋಗ್ರಾಸ ದಾನದ ಶಾಸ್ತ್ರವಿಧಿ ಬಹಳ ಸಣ್ಣದು. ಬಾಳೆ ಎಲೆ ಯಲ್ಲಿ ಗೋವು ತಿನ್ನಬಹುದಾದ ಅನ್ನ ಪಾಯಸ ಭಕ್ಷ್ಯಗಳನ್ನು ಬಡಿಸಿ ಎಲೆಯನ್ನು ಪೂರ್ವಾಗ್ರವಾಗಿ ಇಡಬೇಕು. ಆ ಅನ್ನಕ್ಕೆ ತೀರ್ಥ ನಿರ್ಮಾಲ್ಯ ಹಾಕಿ ಸೊಬಗಿನ ಅರ್ಥವುಳ್ಳ ಈ ಶ್ಲೋಕಗಳನ್ನು ಹೇಳಬೇಕು.

ಸುರಭಿರ್ವೈಷ್ಣವೀ ಮಾತಾ ನಿತ್ಯಂ ವಿಷ್ಣಪದೇ ಸ್ಥಿತಾ |
ಗೋಗ್ರಾಸಸ್ತು ಮಯಾ ದತ್ತಃ ಸುರಭೇ(ಸುರಭಿ) ಪ್ರತಿಗೃಹ್ಯತಾಮ್ ||1||

ಸೌರಭೇಯಃ ಸರ್ವಹಿತಾಃ ಪವಿತ್ರಾಃ ಪುಣ್ಯರಾಶಾಯಃ |
ಪ್ರತಿಗ್ರಹ್ಣತ್ವಿಮಂ ಗ್ರಾಸಂ ಗಾವಃ ತ್ರೈಲೋಕ್ಯ ಮಾತರಃ

ಗಾವೋ ಮೇ ಮಾತರಃ ಸರ್ವಾಃ ಪಿತರಶ್ಚಾಪಿ ಗೋವೃಷಾಃ |
ಗ್ರಾಸಮುಷ್ಟಿ ಪ್ರದಾನೇನ ಸ ಮೇ ವಿಷ್ಣುಃ ಪ್ರಸೀದತು || || 
ಗವಾಂತರಗತ ಗೋಪಾಲಕೃಷ್ಣ ಪ್ರಿಯತಾಂಮ ಪ್ರೀತೋಭವತು ತತ್ಸತ್ ಶ್ರೀಹರಿ ಕೃಷ್ಣಾರ್ಪಣಮಸ್ತು

“ದೇವಲೋಕದ ಕಾಮಧೇನು ಸುರಭಿ. ಕಾಮಧೇನುವಿನ ಜಾತಿಯೆನಿಸಿದ ಗೋಜಾತಿಯಲ್ಲಿ ಬಂದ ಎಲ್ಲಾ ಗೋವುಗಳನ್ನೂ ಕಾಮಧೇನುವಿನ ಸನ್ನಿಧಾನದ ಅನುಸಂಧಾನದೊಡನೆ ‘ಸುರಭಿ’ ಎಂದೇ ಕರೆಯಲಾಗುತ್ತದೆ. ಸುರಭಿಯು ವಿಷ್ಣುದೇವನ ಪ್ರತೀಕ. ಆಕೆ ಎಲ್ಲರಿಗೂ ಹಾಲು ನೀಡುವ ತಾಯಿ. ಎಂದೆಂದಿಗೂ ವಿಷ್ಣುಪದದಲ್ಲಿ ನೆಲೆಗೊಂಡ ಈ ಸುರಭಿ ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ”

ಮೂರು ಲೋಕಕ್ಕೂ ಮಾತೆಯಾಗಿ ಸರ್ವ ಪುಣ್ಯ ರಾಶಿಯನ್ನು ಹೊಂದಿದ ಪವಿತ್ರವಾದ ಸುರಭಿಯ ಮಕ್ಕಳಾದ ಗೋವುಗಳು ನಾನಿತ್ತ ಗೋಗ್ರಾಸವನ್ನು ಸ್ವೀಕರಿಸಲಿ”

“ಹಸುಗಳೆಲ್ಲಾ ನಮ್ಮ ತಾಯಿ. ಎತ್ತುಗಳೆಲ್ಲಾ ನಮ್ಮ ತಂದೆಗೆ ಸಮ. ಅಂತಹ ಗೋವುಗಳಿಗಿತ್ತ ಈ ಮುಷ್ಟಿ ತುತ್ತಿನಿಂದ ಗೋವಿನ ಒಳಗಿರುವ ಶ್ರೀಕೃಷ್ಣ ಪ್ರೀತನಾಗಲಿ”
ಈ ಎರಡು ಶ್ಲೋಕಗಳಿಂದ ಪ್ರಾರ್ಥಿಸಿ ‘ಗವಾಂತರ್ಗತ ಗೋಪಾಲ ಕೃಷ್ಣಃ ಪ್ರೀಯತಾಮ್’ ಎಂದು ಗೋಗ್ರಾಸವನ್ನು ಗೋವಿಗೆ ನೀಡಬೇಕು.

ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞಗಳೆಂಬ ಮೂರು ಯಜ್ಞಗಳನ್ನು ಗಮನಿಸಿದ್ದೇವೆ. ಇವಲ್ಲದೇ ಮನುಷ್ಯಯಜ್ಞ ಹಾಗೂ ಭೂತ ಯಜ್ಞಗಳೆಂಬ ಎರಡು ಯಜ್ಞಗಳೂ ಇವೆ. ಗೃಹಸ್ಥನಿಗೆ ಈ ಐದು ಯಜ್ಞಗಳು ಕರ್ತವ್ಯ.

ಮನೆಗೆ ಹಸಿದು ಬಂದ ವ್ಯಕ್ತಿಗೆ ಆತಿಥ್ಯವಿತ್ತು ಉಣಬಡಿಸುವಿಕೆಯೇ ಮನುಷ್ಯಯಜ್ಞ, ಈ ಯಜ್ಞದಲ್ಲಿ ಹಸಿದ ವ್ಯಕ್ತಿಯೇ ಅಗ್ನಿ. ಅನ್ನ ಭೋಜ್ಯಗಳೇ ಆಹುತಿ. ‘ಅನ್ನಸ್ಯ ಕ್ಷುಧಿತಂ ಪಾತ್ರಂ’ ಎಂಬಂತೆ ಅನ್ನದಾನಕ್ಕೆ ಬಂದ ಅತಿಥಿ ಗಳೆಲ್ಲಾ ಪಾತ್ರರು.
ಬರಿಯ ಅನ್ನದಾನವಲ್ಲದೇ ನಾಲ್ಕು ಜನರಿಗೆ ಉಪಕರಿಸುವ ಎಲ್ಲಾ ಸಮಾಜೋಪಯೋಗಿ ಸೇವೆಗಳೂ ಮನುಷ್ಯಯಜ್ಞದ ಪರಿಧಿಯಲ್ಲೇ ಸೇರಿವೆ. ನಾಲ್ಕನೆಯದಾದ ಈ ಮನುಷ್ಯಯಜ್ಞದಿಂದ ಸಮಾಜದ ಋಣ ಪರಿಹಾರವಾಗುತ್ತದೆ.ಕೊನೆಯದು ಭೂತಯಜ್ಞ. ಅಂದರೆ ಪಶುಪ್ರಾಣಿಗಳಿಗೆ ಆಹಾರ ನೀಡುವಿಕೆ.

ಮನುಷ್ಯ ತನ್ನ ಬದುಕಿನಲ್ಲಿ ಗೋವೃಷಭಾದಿ ಪಶುಗಳ ಉಪಕಾರ ಮರೆಯುವಂತಿಲ್ಲ. ಮನುಷ್ಯ ಗವ್ಯಗಳಾದ ಹಾಲು, ಮೊಸರು, ತುಪ್ಪಗಳಿಲ್ಲದೇ ಬದುಕಲಾರ. ದೇವಕರ್ಮಗಳನ್ನು ನಿರ್ವಹಿಸಲಾರ. ಹುಟ್ಟಿದ ಮೊದಲಲ್ಲಿ ತಾಯಿ ಆತನಿಗೆ ಹಾಲು ಕೊಟ್ಟು ಬೆಳೆಸಿದರೆ ಮುಂದಿನ ಆತನ ಜೀವನ ಪೂರ್ತಿ ಈ ಗೋಮಾತೆ ಹಾಲು ಕೊಡುತ್ತಾಳೆ. ಆದ್ದರಿಂದಲೇ ಗೋವಿಗೆ ಮಾತೃಸ್ಥಾನ, ವೃಷಭಕ್ಕೆ ಪಿತೃಸ್ಥಾನವಿದೆ. ತಂದೆಯು ಅನ್ನವಿತ್ತು ಪರಿಪೋಷಿಸುತ್ತಾನೆ. ಎತ್ತು ತಾನು ಉತ್ತು ಧಾನ್ಯ ಬೆಳೆಸುತ್ತದೆ. ತನ್ನ ಗೊಬ್ಬರದಿಂದ ಧಾನ್ಯ ಬೆಳೆಗೆ
ನೆರವಾಗುತ್ತದೆ. ಗಾಡಿ ಹೊತ್ತು ಧಾನ್ಯವನ್ನು ಮನೆಗೆ ಹೊರುತ್ತದೆ. ಆದ್ದರಿಂದಲೇ “ಗಾವೋ ಮೇ ಮಾತರಃ ಸರ್ವಾಃ ಪಿತರಶ್ಚಾಪಿ ಗೋವೃಷಾಃ”

ಇಂತಹ ಗೋವುಗಳಿಗೆ ಸಾಧ್ಯವಾದಷ್ಟು ಪ್ರತ್ಯುಪಕರಿಸಬೇಕು. ಈ ಮೂಲಕ ಭೂತಋಣದಿಂದ ಮುಕ್ತನಾಗಬೇಕು. ಉಳ್ಳವನು ಗೋಮಾಳವನ್ನು ರಕ್ಷಿಸುತ್ತಾನೆ. ಗೋಶಾಲೆಯನ್ನು ನಿರ್ವಹಿಸಬಲ್ಲ. ಕೊನೇ ಪಕ್ಷ ಪ್ರತಿದಿನ ಉಣ್ಣುವುದಕ್ಕೆ ಮುಂಚೆ ಒಂದು ಮುಷ್ಟಿ ಅನ್ನವನ್ನಾದರೂ ಗೋವಿಗಾಗಿ ತೆಗೆದಿಡಬೇಕು. ಇಂದು ‘ಗೋಗ್ರಾಸ" ಎಂಬ ಹೆಸರಿನಲ್ಲಿ ಭೂತಯಜ್ಞ ಉಳಿದುಕೊಂಡಿದೆ.

ಅಲ್ಲದೇ ಗೋಗ್ರಾಸದಾನವು ನಿತ್ಯಕರ್ಮ. ಅದನ್ನು ಮಾಡದಿರುವುದು ಅಪರಾಧ. ಯಾವುದನ್ನು ಮಾಡದಿದ್ದರೆ ಪಾಪ ಬರುವುದೋ ಅದು ನಿತ್ಯಕರ್ಮ. 

“ಯದಕರಣೇ ಪ್ರತ್ಯವಾಯಸ್ತನ್ನಿತ್ಯಮ್”
ಗವ್ಯ ಪದಾರ್ಥಗಳನ್ನೆಲ್ಲಾ ಯಥೇಷ್ಟವಾಗಿ ಉಪಯೋಗಿಸಿಕೊಳ್ಳುವ ವ್ಯಕ್ತಿ ಅವನ್ನು ಕೊಟ್ಟ ಗೋವಿಗೆ ಪ್ರಕೃತಿದತ್ತವಾದ ಹಿಡಿಹುಲ್ಲಿನ ಜೊತೆ ತಾನು ಉಣ್ಣುವ ಅನ್ನದಲ್ಲಿ ಒಂದು ಮುಷ್ಟಿಯನ್ನಾದರೂ ತೆಗೆದಿಡದಿದ್ದರೆ ಆತ ಕೃತಘ್ನನಾಗಲಾರನೇ?
ಅಲ್ಲದೇ ಗೋವು ಸಕಲದೇವತೆಗಳಿಗೆ ಅಧಿಷ್ಠಾನ. ‘ಗವಾಮಂಗೇಷು ತಿಷ್ಠಂತಿ ಭುವನಾನಿ ಚತುರ್ದಶ.’ ಹದಿನಾಲ್ಕು ಲೋಕಗಳು ಗೋವಿನ ಅಂಗಾಂಗಗಳಲ್ಲಿ ಅಧಿಷ್ಠಿತ ಎಂಬ ಮಾತಿದೆ. ಗೋಗ್ರಾಸದಿಂದಲೇ ಗೋಪಾಲಕೃಷ್ಣ ಪ್ರಸನ್ನನಾಗುತ್ತಾನೆ.

ಪಟ್ಟಣದಲ್ಲಿ ವ್ಯವಹಾರ ಉದ್ಯೋಗದ ಒತ್ತಡದಲ್ಲಿ ಇರುವ ಜನತೆಗೆ ಇಂದು ಗೋಗ್ರಾಸ ನೀಡುವುದು ಕ್ಲೇಶವೆನಿಸಿದೆ. ಆದರೂ ಆತ ಒಂದು ವಿಷಯವನ್ನು ಗಮನಿಸಬೇಕು. ತಾನು ಹಸುವನ್ನು ಸಾಕದಿದ್ದರೂ ಹಾಲು ಕುಡಿಯುವುದನ್ನು ಬಿಡಲಿಲ್ಲ. ಆದ್ದರಿಂದ ಹಸುವನ್ನು ಸಾಕುವ ಜವಾಬ್ದಾರಿ ಅವನಿಗಿದೆ. ಅದಕ್ಕಾಗಿ ಗೋಗ್ರಾಸದ ಹೆಸರಿನಲ್ಲಿ ಸ್ವಲ್ಪವಾದರೂ ಧನವನ್ನು ತೆಗೆದಿಡುವ ಕೆಲಸವನ್ನು ಆತ ಮಾಡಬಹುದು. ಆ ಹಣವನ್ನು ದೊಡ್ಡ ಮೊತ್ತವಾದಾಗ ಅಲ್ಲಲ್ಲಿ ನಡೆಯುತ್ತಿರುವ ಗೋಶಾಲೆಗಳಿಗೆ ನೀಡಿ ಭೂತ ಯಜ್ಞದ ಫಲ ಪಡೆಯಬಹುದು. ಧರ್ಮದ ನಡೆ ಆಧುನಿಕತೆಯಲ್ಲಿ ಕ್ಲಿಷ್ಟವೆನಿಸಿದರೂ ಮನಸ್ಸಿದಲ್ಲಿ ಮಾರ್ಗವಿದ್ದೇ ಇದೆ.
ಹೀಗೆ ಗೃಹಸ್ಥನಿಗೆ ನಿತ್ಯಕರ್ಮಗಳಾಗಿ ಐದು ಯಜ್ಞಗಳು. 

ಇವೇ ಪಂಚಯಜ್ಞ.

ಬ್ರಹ್ಮಯಜ್ಞೋ ದೇವಯಜ್ಞಃ ಪಿತೃಯಜ್ಞಸ್ತಥೈವ ಚ |
ಮನುಷ್ಯಭೂತಯಜ್ಞೌ ಚ ಪಂಚಯಜ್ಞಾಃ ಪ್ರಕೀರ್ತಿತಾಃ ||

ಈ ಐದು ಯಜ್ಞಗಳನ್ನು ನಡೆಸುವಲ್ಲಿ ಪ್ರಯತ್ನಶೀಲನಾದ ಗೃಹಸ್ಥ ವ್ಯಕ್ತಿ ಮೋಕ್ಷಪಡೆಯಲು ಅರ್ಹ ಅಧಿಕಾರಿಯಾಗುತ್ತಾನೆ.

ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

ಭಾರತೀಯ_ಗೋವುಗಳು

July 29, 2021

ನಮಗೆ ನಮ್ಮ ಪೂರ್ವ ಜನ್ಮದ ಕರ್ಮಗಳಿಂದಲೇ...

🕉 *ಕರ್ಮ - ಭೋಗ* 🕉

*ನಮಗೆ ನಮ್ಮ ಪೂರ್ವ ಜನ್ಮದ ಕರ್ಮಗಳಿಂದಲೇ...*

*ಈ ಜನ್ಮದಲ್ಲಿ...*
ತಂದೆ,
ತಾಯಿ,
ಅಣ್ಣ,
ಅಕ್ಕ,
ಹೆಂಡತಿ,
ಗಂಡ,
ಪ್ರೇಯಸಿ, ಪ್ರಿಯಕರ, ಮಿತ್ರರು, ಶತ್ರುಗಳು ಎನ್ನುವ ಅನೇಕ ಸಂಬಂಧಗಳು ನಮಗೆ ಈ ಪ್ರಪಂಚದಲ್ಲಿ ಲಭಿಸುತ್ತದೆ.

ಏಕೆಂದರೆ ನಾವು ಇವರಿಗೆ...

*ಈ ಜನ್ಮದಲ್ಲಿ ಏನೋ ಒಂದು ಕೊಡಬೇಕಾಗಿರುತ್ತದೆ, ಅಥವಾ ಪಡೆಯಬೇಕಾಗಿರುತ್ತದೆ.*

*ನಮಗೆ ಸಂತಾನದ ರೂಪದಲ್ಲಿ ಯಾರು ಯಾರು ಬರುತ್ತಾರೆ...*

*ನಮಗೆ ಹಿಂದಿನ ಜನ್ಮದಲ್ಲಿ ಸಂಬಂಧ ಇರುವವರೇ...*

*ಈ ಜನ್ಮದಲ್ಲಿ ಸಂತಾನದ ರೂಪದಲ್ಲಿ ಜನಿಸುತ್ತಾರೆ,*

ಅದನ್ನೇ... 
ನಮ್ಮ ಶಾಸ್ತ್ರಗಳ ಪ್ರಕಾರ ನಾಲ್ಕು ರೀತಿಯಲ್ಲಿ ಇದೆ ಎಂದು ತಿಳಿಸುತ್ತಾರೆ....

*👦🏻 ಋಣಾನುಬಂಧ:-*

ಹಿಂದಿನ‌ಜನ್ಮದಲ್ಲಿ ನಾವು ಯಾರ ಹತ್ತಿರವಾದರು ಋಣವನ್ನು ಪಡೆದಿರಬಹುದು...

ಅಥವಾ ಯಾರ ಧನವನ್ನಾದರೂ ನಷ್ಟ ಪಡಿಸಿರಬಹುದು.

ಅಂತಹವರು ನಿಮಗೆ ಸಂತಾನ ರೂಪದಲ್ಲಿ ಜನಿಸಿ ಅಥವಾ ಯಾವುದಾದರೂ ವ್ಯಾಧಿಯ ರೂಪದಲ್ಲಿ ಬಂದು...

ನಿಮ್ಮ ಹತ್ತಿರ ಇರುವ ಪೂರ್ತಿ ಧನವು ಖರ್ಚು ಆಗುವವರೆಗೆ ಇದ್ದು...

ಆ ಹಳೆಯ ಖರ್ಚುಗಳು ಸರಿಸಮಾನ ಆಗುವವರೆಗೆ ನಮ್ಮೊಂದಿಗೆ ಇರುತ್ತಾರೆ...

*👦🏻 ಶತ್ರುಗಳೇ - ಪುತ್ರರು:-*

ನಮ್ಮ ಪೂರ್ವ ಜನ್ಮದಲ್ಲಿ ಶತ್ರುಗಳು ನಮ್ಮ ಮೇಲೆ ಅವರ ಪ್ರತೀಕಾರವನ್ನು ತೀರಿಸಿಕೊಳ್ಳಲು ನಮ್ಮ ಮನೆಯಲ್ಲಿ ಸಂತಾನ ರೂಪದಲ್ಲಿ ಮತ್ತು ಹುಟ್ಟುತ್ತಾರೆ.

ಹಾಗೆ ಹುಟ್ಟಿದ ಮೇಲೆ ದೊಡ್ಡವರಾದ ನಂತರ ತಂದೆ ತಾಯಿಯರೊಂದಿಗೆ ಜಗಳಗಳನ್ನು ಮಾಡುತ್ತಾರೆ.

ಜೀವನಪೂರ್ತಿ ಯಾವುದೋ ಒಂದು ವಿಷಯಕ್ಕೆ ಪೀಡಿಸುತ್ತಲೇ ಇರುತ್ತಾರೆ.

ಯಾವಾಗಲೂ ತಂದೆ ತಾಯಿಯರನ್ನು ... ನಾ ನಾ ರೀತಿಯ ಯಾತನೆಗಳನ್ನು ನೀಡುತ್ತಾ...

ಅವರ ಮರ್ಯಾದೆಯನ್ನು ತೆಗೆದು ಅವರನ್ನು ದುಃಖಕ್ಕೆ ಒಳಮಾಡುತ್ತಾ.... ಆನಂದ ಪಡುತ್ತಿರುತ್ತಾರೆ.

*👳🏻 ತಟಸ್ಥ ಪುತ್ರರು:-*

ಇವರು ತಂದೆ ತಾಯಿಗೆ ಸೇವೆಯನ್ನು ಮಾಡುವುದಿಲ್ಲ...

ಹಾಗೂ ಅವರನ್ನು ಸುಖವಾಗಿ ಇಡುವುದಿಲ್ಲ...

ತಂದೆ ತಾಯಿಗಳನ್ನು ಬಿಟ್ಟು ಹೊರಟು ಹೋಗುತ್ತಾರೆ.

ಅವರ ಮದುವೆಯ ನಂತರ ತಂದೆ ತಾಯಿಗಳಿಂದ ದೂರವಾಗಿ ಬಿಡುತ್ತಾರೆ.

*👩🏻 ಸೇವಾ ತತ್ಪರತೆ ಇರುವ ಪುತ್ರರು:-*

ಹಿಂದಿನ ಜನ್ಮದಲ್ಲಿ ನೀವು ಯಾರಿಗಾದರೂ ಚೆನ್ನಾಗಿ ಸೇವೆಯನ್ನು ಮಾಡಿರಬಹುದು,

ಆ ಋಣವನ್ನು ತೀರಿಸಿಕೊಳ್ಳಲು ಅವರು ಈ ಜನ್ಮದಲ್ಲಿ ಮಗ ಅಥವಾ ಮಗಳ ರೂಪದಲ್ಲಿ ಬರಬಹುದು.

ಹಾಗೆ ಬಂದು ಚೆನ್ನಾಗಿ ಸೇವೆ ಮಾಡುತ್ತಾರೆ.

ನೀವು ಹಿಂದಿನ ಜನ್ಮದಲ್ಲಿ ಏನು ಮಾಡಿಕೊಂಡಿರುತ್ತೀರೋ ಅದೇ ಈಗ ನಿಮಗೆ ಸಿಗುತ್ತದೆ.

ನೀವು ಹಿಂದಿನ ಜನ್ಮದಲ್ಲಿ ಯಾರಿಗಾದರೂ ಸೇವೆ ಮಾಡಿದರೆ, ಈ ಜನ್ಮದಲ್ಲಿ ಅವರು ನಮ್ಮ ವೃದ್ಧಾಪ್ಯದಲ್ಲಿ ನಮಗೆ ಸೇವೆ ಮಾಡುತ್ತಾರೆ.

ಇಲ್ಲದಿದ್ದರೆ, ನಮಗೆ ನಮ್ಮ ವೃದ್ಧಾಪ್ಯದಲ್ಲಿ ಗುಟುಕು ನೀರು ಕೊಡುವವರು ನಮ್ಮ ಹತ್ತಿರ ಇರುವುದಿಲ್ಲ.

ಇದು ಪೂರ್ತಿಯಾಗಿ ಮನುಷ್ಯರಿಗೆ ಮಾತ್ರ ವರ್ತಿಸುತ್ತದೆ,

ಎಂದು ಭಾವಿಸಬೇಡಿರಿ.

ಈ ಕೆಳಗಡೆ ತಿಳಿಸಿರುವಂತೆ ಯಾವ ವಿಧದಲ್ಲಿ ಆದರೂ ಹುಟ್ಟಬಹುದು.

ಒಂದು ವೇಳೆ ನೀವೇನಾದರೂ ಒಂದು ಹಸುವಿಗೆ ನಿಸ್ವಾರ್ಥವಾದ ಸೇವೆ ಮಾಡಿದ್ದರೆ,

ಆ ಹಸು ನಿಮಗೆ ಮಗ ಅಥವಾ ಮಗಳಾಗಿ ನಿಮ್ಮ ಮನೆಯಲ್ಲಿ ಹುಟ್ಟಬಹುದು.

ಒಂದು ಕರುಗೆ ಅದರ ತಾಯಿಯ ಹತ್ತಿರ ಸರಿಯಾಗಿ ಹಾಲು ಕುಡಿಯಲು ಬಿಡದಿದ್ದರೆ, ಹಸುವಿನಿಂದ ಕರುವನ್ನು ದೂರವಿಟ್ಟ ಪಾಪಕ್ಕೆ ಅವರೇ ಮಗ ಅಥವಾ ಮಗಳಾಗಿ ನಿಮ್ಮ ಮನೆಯಲ್ಲಿ ಹುಟ್ಟಬಹುದು.

ಅಥವಾ ನೀವೇನಾದರೂ ನಿರಪರಾಧಿಯನ್ನು ಸತಾಯಿಸಿದ್ದರೇ, ಅವರು ನಿಮಗೆ ಶತ್ರುವಿನ ರೂಪದಲ್ಲಿ ಹುಟ್ಟಿ ನಿಮ್ಮೊಂದಿಗೆ ಅವರ ಗತ ಜನ್ಮದ ಶತ್ರುತ್ವವನ್ನು ತೀರಿಸಿಕೊಳ್ಳುತ್ತಾರೆ.

ಆದುದರಿಂದಲೇ, ಜೀವನದಲ್ಲಿ ಯಾರಿಗೂ ಸಹ ಕೆಡಕನ್ನು, ಹಾನಿಯನ್ನು ಮಾಡಬಾರದು.

ಏಕೆಂದರೆ ಪ್ರಕೃತಿ ನಿಯಮದ ಪ್ರಕಾರ ನೀವು ಏನು ಮಾಡಿದರೆ..

ಅದಕ್ಕೆ...

ಈ ಜನ್ಮದಲ್ಲಿ ಅಥವಾ ಬರುವ ಜನ್ಮದಲ್ಲಿ ನೂರಕ್ಕೆ ನೂರು ಪಟ್ಟು ಅಧಿಕ ಮಾಡಿ...ಅನುಭವಕ್ಕೆ ತರುತ್ತದೆ.

ನೀವೇನಾದರೂ ಒಂದು ರೂಪಾಯಿಯನ್ನು ದಾನ ಮಾಡಿದರೆ...

ಅದನ್ನು ನಿಮ್ಮ ಖಾತೆಯಲ್ಲಿ ನೂರು ರೂಪಾಯಿಯ ಹಾಗೆ ಜಮಾ ಮಾಡಲಾಗುತ್ತದೆ.

ಒಂದು ವೇಳೆ ನೀವು ಯಾರ ಹತ್ತಿರವಾದರೂ ಒಂದು ರೂಪಾಯಿಯನ್ನು ಕಿತ್ತುಕೊಂಡರೆ..

ನಿಮ್ಮ ಖಾತೆಯಿಂದ ನೂರು ರೂಪಾಯಿಯನ್ನು ಕಿತ್ತುಕೊಳ್ಳಲಾಗುತ್ತದೆ.

*(ಅಂದರೆ ಪಾಪ ಪುಣ್ಯ ಗಳನ್ನು)*

ಸ್ವಲ್ಪ ಆಲೋಚಿಸಿರಿ.

"ನೀವು ನಿಮ್ಮೊಂದಿಗೆ ಎಷ್ಟು ಧನವನ್ನು ತಂದುಕೊಂಡಿದ್ದಿರಿ,

ಮತ್ತು ನಿಮ್ಮ ಹಿಂದೆ ಎಷ್ಟು ಧನವನ್ನು ತೆಗೆದುಕೊಂಡು ಹೋಗುತ್ತೀರಿ ?

ಇವತ್ತಿವರೆಗೂ ಹೋದವರೆಲ್ಲಾ 
ಎಷ್ಟು ಬಂಗಾರ, ಬೆಳ್ಳಿಯನ್ನು ತೆಗೆದುಕೊಂಡು ಹೋದರು?

ನೀವು ಹೋಗುವ ಮೊದಲು ನಿಮ್ಮ ಬ್ಯಾಂಕ್ ನಲ್ಲಿ ಇರುವ 
ಹಣ, 
ಒಡವೆ ಎಷ್ಟು ಗೊಣಗುತ್ತದೆಯೋ....

ಅದು ಸ್ವಲ್ಪವೂ ಕೆಲಸಕ್ಕೆ ಬರದ ಸಂಪಾದನೆ ಅಲ್ಲವೇ.

ಒಂದು ವೇಳೆ ನಿಮ್ಮ
ಸಂತಾನವು ಸಮರ್ಥರಾದರೆ...

ನೀವು ಬಿಟ್ಟಂತಹ ಹಣ, ಆಸ್ತಿ ಎಲ್ಲಾ ಅವರಿಗೆ ಅನವಶ್ಯಕವಾದ ವಸ್ತುಗಳಲ್ಲವೇ...

ಅದರ ಅವಶ್ಯಕತೆ ಅವರಿಗೆ ಇರುವುದಿಲ್ಲ.

ಒಂದು ವೇಳೆ ಅವರೇನಾದರೂ..
ಆ ಹಣ, ಆಸ್ತಿಗಳನ್ನು ಉಪಯೋಗಿಸಿದರೆ, ಅವರು ಏತಕ್ಕೂ ಕೆಲಸಕ್ಕೆ ಬಾರದವರ ಹಾಗೆ ಆಗುತ್ತಾರೆ ಅಲ್ಲವೇ...

ಅವರು ಆ ಹಣ, ಒಡವೆಗಳನ್ನು ಉಪಯೋಗಿಸಿಕೊಂಡು.. ಕೆಲವು ದಿನಗಳಲ್ಲಿಯೇ ..ಅವರನ್ನು ಅವರೇ ನಾಶ ಮಾಡಿಕೊಳ್ಳುತ್ತಾರೆ ‌

ಆ ನಂತರವೇ ಅವರಿಗೆ ಶಾಂತಿ ಲಭಿಸುತ್ತದೆ.

ನಾನು,
ನನ್ನದು,
ನಿಮ್ಮದು ಎನ್ನುವುದು

ಎಲ್ಲವೂ ಇಲ್ಲೇ ಕೆಲಸಕ್ಕೆ ಬಾರದಂತೆ ಆಗುತ್ತದೆ.

*ಯಾವುದು ಸಹ...*
*ಹಿಂದೆ ಬರುವುದಿಲ್ಲ...*

ಒಂದು ವೇಳೆ ನಿಮ್ಮ ಹಿಂದೆ ಬಂದರೇ..

*ನಿಮ್ಮ ಪುಣ್ಯ ಫಲ ನಿಮ್ಮ ಹಿಂದೆ ಬರುತ್ತದೆ.*

ಆದುದರಿಂದ, ಎಷ್ಟು ಸಾಧ್ಯವಾದರೇ ಅಷ್ಟು *ಒಳ್ಳೆಯ ಕರ್ಮಗಳನ್ನು* ಮಾಡಿರಿ....

July 27, 2021

ಗ್ರಹಗಳ ಕುರಿತಾದ ಮಾಹಿತಿ ಭಾಗವತದಲ್ಲಿ

ಭಾಗವತದ ಒಂದಷ್ಟು ಮಾಹಿತಿ.

ಯಾವುದೇ ರೀತಿಯ ವಿಶೇಷ ಉಪಕರಣಗಳ ಬಳಕೆ ಇಲ್ಲದ ಕಾಲದಲ್ಲಿ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕಿರುವ ದೂರವನ್ನು ಗಣಿಸಿ ಹೇಳಿದ್ದು ಆಶ್ಚರ್ಯವೆನ್ನಬಹುದು. ಯೋಜನಗಳ ಅಳತೆ ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಗ್ರಹಗಳ ಇರುವಿಕೆ ಮತ್ತು ಅವುಗಳ ಚಲನೆಯ ಸಮಯ ಸರಿ ಎನ್ನಿಸುತ್ತದೆ. ಮಹಾಬಾರತದಲ್ಲಿನ ಗ್ರಹಣಗಳ ಕುರಿತಾಗಿ ಇರುವ ಮಾಹಿತಿ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಗ್ರಹಗಳ ಕುರಿತಾದ ಮಾಹಿತಿ ಭಾಗವತದಲ್ಲಿ ಸಿಗುತ್ತದೆ.    

ಶ್ರೀಮದ್ ಭಾಗವತದ ಐದನೇ ಸ್ಕಂಧದ 22ನೇ ಅಧ್ಯಾಯದಲ್ಲಿ ಅತ್ಯಂತ ಸುಂದರವಾಗಿ ಖಗೋಲದ ಕೆಲವು ವಿಷಯಗಳನ್ನು ಹೇಳಲಾಗಿದೆ. ಸೂರ್ಯನು ಒಂದು ಕ್ಷಣದಲ್ಲಿ 2200 ಯೋಜನಗಳಷ್ಟು ದೂರದವರೆಗೆ ಸಂಚರಿಸುತ್ತಾ ಒಂದು ದಿನದಲ್ಲಿ ಅಂದರೆ ಅರವತ್ತು ಘಳಿಗೆಗಳಲ್ಲಿ ಒಂಬತ್ತು ಕೋಟಿ ಐವತ್ತೊಂದು ಲಕ್ಷ ಯೋಜನಗಳ ದೂರವನ್ನು ಸುತ್ತುತ್ತಾನಂತೆ. ಅಂದರೆ ಸೂರ್ಯ ತನ್ನ ಪಥದಲ್ಲಿ ಸುತ್ತುತ್ತಾನೆ. ಭೂಮಿಯು ಸೂರ್ಯನನ್ನು ಸುತ್ತುತ್ತದೆ.

ಯದೇತದ್ಭಗವತ ಆದಿತ್ಯಸ್ಯ ಮೇರುಂ ಧ್ರುವಂ ಚ ಪ್ರದಕ್ಷಿಣೇನ ಪರಿಕ್ರಾಮತೋ ರಾಶೀನಾಮಭಿಮುಖಂ ಪ್ರಚಲಿತಂ ಚಾಪ್ರದಕ್ಷಿಣಂ ಭಗವತೋಪವರ್ಣಿತಮಮುಷ್ಯ ವಯಂ ಕಥಮನುಮಿಮೀಮಹೀತಿ || ಸೂರ್ಯನು ಮೇರುಪರ್ವತವನ್ನು ಮತ್ತು ಧ್ರುವನನ್ನೂ ಪ್ರದಕ್ಷಿಣಾಕಾರವಾಗಿ ಸುತ್ತುತ್ತಿದ್ದರೂ ಸಹ ರಾಶಿಗಳಿಗೆ ಎದುರಾಗಿ ಅಪ್ರದಕ್ಷಿಣವಾಗಿಯೇ ಸುತ್ತುತ್ತಾನೆ. ನಕ್ಷತ್ರಗಳ ಜೊತೆ ಕೂಡಿ ಮೇರುವನ್ನೂ ಮತ್ತು ಧ್ರುವನನ್ನೂ ಪ್ರದಕ್ಷಿಣವಾಗಿ ಬಳಸುತ್ತಿರುವ ಕಾಲಚಕ್ರವನ್ನು ಆಶ್ರಯಿಸಿಕೊಂಡು ಚಕ್ರಗತಿಯ ಜೊತೆಗೆ ಸಂಚರಿಸುತ್ತಿರುವ ಸೂರ್ಯ ಮತ್ತು ನಕ್ಷತ್ರಗಳು ಮೇರುವಿಗೆ ಪ್ರದಕ್ಷಿಣೆ ಮಾಡುತ್ತಿರುವ ಕಾಲಚಕ್ರದ ಸಂಚಾರಕ್ಕೆ ವಿರುದ್ಧವಾಗಿ ಅಪ್ರದಕ್ಷಿಣಾಕಾರವಾದ ಗತಿಯಿಂದ ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕ್ಕೆ ಮತ್ತು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಿವೆ. ದ್ವಾದಶಧಾ ವಿಭಜ್ಯ ಷಟ್ಸು ವಸನ್ತಾದಿಷ್ವೃತುಷು ಯಥೋಪಜೋಷಮೃತು ಗುಣಾನ್ವಿದಧಾತಿ. . . . ಎನ್ನುವಲ್ಲಿ ಜಗತ್ತಿನ ಪ್ರತಿಯೊಂದು ಘಟನೆಗಳಿಗೂ ಕಾರಣನಾದ ಸೂರ್ಯನು ತನ್ನನ್ನು ಹನ್ನೆರಡು ಬಗೆಗಳನ್ನಾಗಿ ಮಾಡಿಕೊಂಡು ಚೈತ್ರ, ವೈಶಾಖ ಮುಂತಾದ ಹನ್ನೆರಡು ಮಾಸಗಳಲ್ಲಿ ಪ್ರತಿಯೊಂದರಲ್ಲೂ ಒಂದೊಂದು ಹೆಸರಿನಿಂದ ಕರೆಸಿಕೊಂಡು ಜಗತ್ತಿನ ಜೀವಿಗಳು ಆಯಾ ಜೀವನ ಕ್ರಮವನ್ನು ಅನುಭವಿಸುವುದಕ್ಕಾಗಿ ವಸಂತದಿಂದ ಆರು ಋತುಗಳಲ್ಲೂ ಬಿಸಿ ಚಳಿ ಮತ್ತು ಗಾಳಿಗಳೇ ಮುಂತಾದ ಋತುಧರ್ಮಗಳನ್ನುಂಟುಮಾಡುತ್ತಾನೆ. ಸೂರ್ಯನು ಭೂಮಿ ಮತ್ತು ಸ್ವರ್ಗಗಳ ಮಧ್ಯದಲ್ಲಿದ್ದು ಸಂವತ್ಸರಗಳ ಭಾಗಗಳಾಗಿ ರಾಶಿಗಳ ಹೆಸರುಗಳಾಗಿ ಮೇಷ, ವೃಷಭ ಮುಂತಾದ ಹನ್ನೆರಡು ತಿಂಗಳುಗಳನ್ನುಂಟುಮಾಡುತ್ತಾನೆ. ಶುಕ್ಲಪಕ್ಷ ಮತ್ತು ಕೃಷ್ಣಪಕ್ಷಗಳೆಂಬ ಎರಡು ಪಕ್ಷಗಳ ಕಾಲಕ್ಕೆ ಚಾಂದ್ರಮಾನಮಾಸವೆಂದೂ, ಪಿತೃದೇವತೆಗಳ ಒಂದು ಹಗಲು ಮತ್ತು ರಾತ್ರಿಗಳ ಕಾಲಕ್ಕೆ ಪಿತೃಮಾನಮಾಸವೆಂದೂ, ಸೂರ್ಯನು ಒಂದು ರಾಶಿಯಲ್ಲಿ ಅಂದರೆ ಎರಡೂಕಾಲು ನಕ್ಷತ್ರಗಳಲ್ಲಿ  ಸಂಚಾರಮಾಡುವಷ್ಟು ಕಾಲಕ್ಕೆ ಸೌರಮಾನಮಾಸವೆಂದೂ ಹೆಸರು. ಸೂರ್ಯನು ಸಂವತ್ಸರದ ಆರನೆಯ ಒಂದು ಭಾಗವನ್ನು ಭೋಗಿಸುವ ಕಾಲಕ್ಕೆ ಅಥವಾ ಎರಡು ರಾಶಿಗಳಲ್ಲಿ ಸಂಚರಿಸುವಷ್ಟು ಕಾಲಕ್ಕೆ ಒಂದು ಋತುವೆಂದು ಕರೆಯಲಾಗುತ್ತದೆ. ಸೂರ್ಯನು ಖಗೋಳದ ಅರ್ಧಭಾಗವಾಗಿರುವ ಆರು ರಾಶಿಗಳನ್ನು ದಾಟುವ ಕಾಲವನ್ನು ‘ಅಯನ’ ಎಂದು ಕರೆಯುತ್ತಾರೆ. ಹಾಗೆಯೇ ಸೂರ್ಯನು ತನ್ನ ಮಂದಗತಿ, ತೀವ್ರಗತಿ ಮತ್ತು ಸಮಾನಗತಿಗಳಿಂದ ಸ್ವರ್ಗ ಮತ್ತು ಭೂಮಂಡಲಗಳಿಂದೊಡಗೂಡಿದ ಇಡೀ ಆಕಾಶವನ್ನು ಸುತ್ತಿ ಬರುವ ಕಾಲವನ್ನು ಸಂಚಾರಕ್ಕೆ ತಕ್ಕಂತೆ ಸಂವತ್ಸರ, ಪರಿವತ್ಸರ, ಇಡಾವತ್ಸರ, ಅನುವತ್ಸರ ಅಥವಾ ವತ್ಸರಗಳೆಂದು ಕರೆಯಲಾಗುತ್ತದೆ. ಹೀಗೆಯೇ ಚಂದ್ರನು ಸೂರ್ಯಕಿರಣ ಮಂಡಲಗಳಿಗಿಂತಲೂ ಒಂದು ಲಕ್ಷಯೋಜನಗಳಷ್ಟು ಎತ್ತರದಲ್ಲಿ ಇರುತ್ತಾನೆ. ಚಂದ್ರನ ಗತಿಯು ವೇಗವಾಗಿದೆ. ಚಂದ್ರನು ಎಲ್ಲ ನಕ್ಷತ್ರಗಳಿಗಿಂತಲೂ ಮುಂದೆ ಇರುತ್ತಾನೆ. ಸೂರ್ಯನ ಒಂದು ವರ್ಷದ ಮಾರ್ಗವನ್ನು ಒಂದು ತಿಂಗಳಿನಲ್ಲೂ, ಸೂರ್ಯನ ಒಂದು ತಿಂಗಳಿನ ಮಾರ್ಗವನ್ನು ಎರಡೂ ಕಾಲು ದಿವಸಗಳಲ್ಲೂ, ಸೂರ್ಯನ ಒಂದು ಪಕ್ಷದ ಮಾರ್ಗವನ್ನು ಒಂದೇ ದಿವಸದಲ್ಲೂ ಚಂದ್ರನು ಸಂಚರಿಸುವನು. ಚಂದ್ರನು ಎಲ್ಲಾ ಜೀವಗಳಿಗೂ ಆಹಾರಗಳನ್ನು ಒದಗಿಸುವವನಾಗಿರುವುದರಿಂದ ಪ್ರಾಣಸ್ವರೂಪ. ಆತನು ಕೃಷ್ಣಪಕ್ಷದಲ್ಲಿ ತನ್ನ ಕ್ಷಯ ಹೊಂದುತ್ತಿರುವ ಕಲೆಗಳಿಂದ ಪಿತೃಗಣಗಳಿಗೂ ಮತ್ತು ಶುಕ್ಲಪಕ್ಷದಲ್ಲಿ ವೃದ್ಧಿಹೊಂದುತ್ತಿರುವ ಕಲೆಗಳಿಂದ ದೇವಗಣಗಳಿಗೂ ಹಗಲು-ರಾತ್ರಿಗಳ ವಿಭಾಗವನ್ನು ಮಾಡಿಕೊಡುತ್ತಾನೆ ಮತ್ತು ಮೂವತ್ತು ಮುಹೂರ್ತಗಳ ಕಾಲದಿಂದ ಒಂದೊಂದು ನಕ್ಷತ್ರವನ್ನು ದಾಟುತ್ತಾನೆ. ಚಂದ್ರನಿಗಿಂತಲೂ ಮೂರು ಲಕ್ಷ ಯೋಜನಗಳಷ್ಟು ಮೇಲೆ ಅಭಿಜಿತ್ ನಕ್ಷತ್ರವೂ ಸೇರಿ ಇಪ್ಪತ್ತೆಂಟು ನಕ್ಷತ್ರಗಳಿವೆ. ಈ ಅಭಿಜಿತ್ತೆಂಬ ನಕ್ಷತ್ರವು ಉತ್ತರಾಷಾಢಾನಕ್ಷತ್ರ ಮತ್ತು ಶ್ರವಣನಕ್ಷತ್ರಗಳ ಸಂಧಿಯಲ್ಲಿ ಇರುವ ನಕ್ಷತ್ರ. ಭಾವಾರ್ಥದೀಪಿಕಾದಲ್ಲಿ ‘ಅಭಿಜಿನ್ನಾಮ ನಕ್ಷತ್ರಂ | ಉಪರಿಷ್ಟಾದಾಷಾಢಾನಾಂ | ಅವಸ್ತೂಚ್ಛ್ರೋಣಾಯೈ | ಎಂದಿದೆ. ಅಂದರೆ  ಉತ್ತರಾಷಾಢಾ-ಶ್ರವಣನಕ್ಷತ್ರಗಳ ಸಂಯೋಗವೇ ಅಭಿಜಿನ್ನಕ್ಷತ್ರ. ಎಂದರೆ ವಿಜಯಧ್ವಜೀಯದಲ್ಲಿ ಅಶ್ವಿನೀ ಮತ್ತು ರೇವತಿಗಳ ಸಂಧಿಯೇ ಅಭಿಜಿತ್ತೆಂದು ಹೇಳಲಾಗಿದೆ. ಇನ್ನು ಸಾರಾರ್ಥದರ್ಶಿನೀಯಲ್ಲಿ ಉತ್ತರಾಷಾಢನಕ್ಷತ್ರದ ಅರ್ಧಭಾಗದಿಂದ ಶ್ರವಣದ ಆದಿಯಲ್ಲಿ ನಾಲ್ಕು ಲಿಪ್ತಿಗಳವರೆಗೂ ಅಭಿಜಿತ್ ಎಂದು ಸಂಜ್ಞೆ ಎನ್ನಲಾಗಿದೆ. ಈ ಅಭಿಜಿತ್ ಕುರಿತಾಗಿ ಒಂದು ಕಥೆಯೇ ಇದೆ. ಅದು ಈಗಾಗಲೇ ಮೊದಲೊಮ್ಮೆ ಬರೆದಾಗಿದೆ. ಈ ನಕ್ಷತ್ರಗಳಿಗಿಂತಲೂ ಎರಡು ಲಕ್ಷ ಯೋಜನಗಳಷ್ಟು ಎತ್ತರದಲ್ಲಿ ಶುಕ್ರಗ್ರಹ ಕಾಣಿಸುತ್ತದೆ. ಅದು ಸೂರ್ಯನಂತೆಯೇ ನಿಧಾನ ಮತ್ತು ವೇಗವಾಗಿ ಹಾಗೂ ಸಮಗತಿಗಳಿಂದ ಕೂಡಿ ಕೆಲವೊಮ್ಮೆ ಸೂರ್ಯನಿಗೆ ಹಿಂದೆಯೂ, ಕೆಲವೊಮ್ಮೆ ಸೂರ್ಯನಿಗಿಂತ ಮುಂದೆಯೂ ಇನ್ನು ಕೆಲವು ವೇಳೆಗಳಲ್ಲಿ ಸೂರ್ಯನ ಜೊತೆಗೂ ಸಂಚರಿಸುವುದು. ಶುಕ್ರ ಸಾಮಾನ್ಯವಾಗಿ ಪ್ರಾಣಿಗಳಿಗೆ ಅನುಕೂಲವನ್ನೇ ಉಂಟುಮಾಡುವ ಗ್ರಹ. ಸೂರ್ಯನ ಸಂಚಾರದಿಂದ ಮಳೆಯುಂಟಾಗುವುದು. ಮಳೆ ಬೀಳುವುದಕ್ಕೆ ಯಾವ ಯಾವ ಗ್ರಹಗಳಿಂದ ತಡೆಯುಂಟಾಗುವುದೋ ಆ ಗ್ರಹಗಳನ್ನು ಇದು ಶಾಂತಿಗೊಳಿಸುವುದು ಎಂದು ಊಹಿಸಬಹುದು. ಶುಕ್ರಗ್ರಹವನ್ನು ವರ್ಣಿಸಿದ್ದರಿಂದ ಬುಧನನ್ನೂ ವರ್ಣಿಸಿದಂತೆಯೇ. ಶುಕ್ರನ ಸಂಚಾರಕ್ಕೆ ಅನುಸಾರವಾಗಿಯೇ ಬುಧಗ್ರಹದ ಸಂಚಾರವನ್ನೂ ತಿಳಿಯಬೇಕು. ಚಂದ್ರನ ಮಗನಾದ ಬುಧನು ಶುಕ್ರಗ್ರಹಕ್ಕಿಂತಲೂ ಎರಡು ಲಕ್ಷಯೋಜನಗಳಷ್ಟು ಎತ್ತರದಲ್ಲಿದ್ದಾನೆ. ಈ ಗ್ರಹವೂ ಸಾಮಾನ್ಯವಾಗಿ ಮಂಗಲಕರವೇ ಆಗಿದೆ. ಆದರೆ ಬುಧನು ಸೂರ್ಯನ ಗತಿಯನ್ನು ಬಿಟ್ಟು ಮುಂದಕ್ಕೆ ಹೋದದ್ದೇ ಆದರೆ ಬಿರುಗಾಳಿ, ಒಣಮೋಡ ಮತ್ತು ಅನಾವೃಷ್ಟಿಗಳು ಉಂಟಾಗುತ್ತವೆ. ಬುಧಗ್ರಹಕ್ಕೆ ಎರಡು ಲಕ್ಷ ಯೋಜನಗಳಷ್ಟು ಎತ್ತರದಲ್ಲಿ ಮಂಗಲಗ್ರಹವಿದೆ. ಅದು ವಕ್ರಗತಿಯಿಂದ ನಡೆಯದೇ ಇದ್ದರೆ ಒಂದೊಂದು ರಾಶಿಯನ್ನೂ ಮೂರು ಮೂರು ಪಕ್ಷಗಳಲ್ಲಿ ಇರುತ್ತಾ ಹನ್ನೆರಡು ರಾಶಿಗಳನ್ನು ದಾಟಿ ಹೋಗುತ್ತದೆ. ಅದಕ್ಕೂ ಮೇಲೆ ಎರಡು ಲಕ್ಷ ಯೋಜನಗಳಷ್ಟು ಎತ್ತರದಲ್ಲಿ ಬೃಹಸ್ಪತಿಯಿದ್ದಾನೆ. ಆತನು ವಕ್ರಗತಿಯಿಂದ ನಡೆಯದಿದ್ದರೆ ಒಂದೊಂದು ರಾಶಿಯನ್ನೂ ಒಂದೊಂದು ವರ್ಷದಲ್ಲಿ ತಿರುಗುತ್ತಾನೆ. ಗುರುವು ಸಾಮಾನ್ಯವಾಗಿ ಎಲ್ಲರಿಗೂ ಶುಭಕರನಾಗಿ ಅನುಕೂಲನಾಗಿರುತ್ತಾನೆ. ಗುರು ಗ್ರಹಕ್ಕೆ ಎರಡು ಲಕ್ಷಯೋಜನಗಳಷ್ಟು ಎತ್ತರದಲ್ಲಿ ಶನಿಯನ್ನು ನೋಡುತ್ತೇವೆ. ಈತನು ಒಂದೊಂದು ರಾಶಿಯಲ್ಲಿ ಮೂವತ್ತು ತಿಂಗಳುಗಳ ಕಾಲ ಇರುತ್ತಾನೆ. ಆದುದರಿಂದ ಈತನಿಗೆ ಎಲ್ಲ ರಾಶಿಗಳನ್ನೂ ದಾಟಿಹೋಗಲು ಮೂವತ್ತು ವರ್ಷಗಳಾಗುತ್ತವೆ. ಈ ಶನಿಗ್ರಹಕ್ಕೆ ಮೇಲೆ ಹನ್ನೊಂದು ಲಕ್ಷ ಯೋಜನಗಳಷ್ಟು ದೂರದಲ್ಲಿ ಸಪ್ತರ್ಷಿಮಂಡಲವಿದೆ. ಸಪ್ತರ್ಷಿಮಂಡಲಕ್ಕಿಂತಲೂ ಹದಿಮೂರು ಲಕ್ಷ ಯೋಜನಗಳಷ್ಟು ಎತ್ತರದಲ್ಲಿ ಧ್ರುವನಕ್ಷತ್ರವಿದೆ. 

ಶಿಶುಮಾರ ಚಕ್ರದಲ್ಲಿ ಅಭಿಜಿತ್ತೆಂಬ ನಕ್ಷತ್ರದಿಂದ ಪ್ರಾರಂಭವಾಗಿ ಪುನರ್ವಸೂ ನಕ್ಷತ್ರದವರೆಗಿನ ಹದಿನಾಲ್ಕು ನಕ್ಷತ್ರಗಳಿವೆ. ಆ ಹದಿನಾಲ್ಕು ನಕ್ಷತ್ರಗಳಿಗೆ ಉತ್ತರಾಯಣವೆಂದು ಹೆಸರು. ಎಡಭಾಗದಲ್ಲಿ ಪುಷ್ಯನಕ್ಷತ್ರದಿಂದ ಪ್ರಾರಂಭವಾಗಿ ಉತ್ತರಾಷಾಢದವರೆಗೆ ಹದಿನಾಲ್ಕು ನಕ್ಷತ್ರಗಳಿವೆ. ಅವುಗಳನ್ನು ದಕ್ಷಿಣಾಯನವೆಂದು ಕರೆಯುತ್ತಾರೆ. ಹೀಗೆ ಆ ಶಿಶುಮಾರ ಚಕ್ರದ ಎರಡು ಪಕ್ಕಗಳಲ್ಲಿಯೂ ಅಶ್ವಿನಿಯೇ ಮುಂತಾದ ಇಪ್ಪತ್ತೆಂಟು ನಕ್ಷತ್ರಗಳೂ ಸಮಸಂಖ್ಯೆಯ ಅವಯವಗಳಾಗಿವೆ. ಕುಂಡಲಾಕಾರದ ರಚನೆಯಲ್ಲಿ ಎರಡೂ ಕಡೆಯ ಅಂಗಗಳು ಸಮನಾಗಿರುವಂತೆ ಇಲ್ಲಿ ನಕ್ಷತ್ರಗಳ ಸಂಖ್ಯೆಯೂ ಸಮವಾಗಿದೆ. ಅದರ ಬೆನ್ನಿನಲ್ಲಿ ಅಜವೀಥಿಯೂ, ಮೂಲಾ, ಪೂರ್ವಾಷಾಢಾ ಮತ್ತು ಉತ್ತರಾಷಾಢಗಳೆಂಬ ಮೂರು ನಕ್ಷತ್ರಗಳ ಸಮೂಹವೂ ಬೆಳಗುತ್ತಿದೆ. ಉದರದಲ್ಲಿ ಆಕಾಶಗಂಗೆಯು ಪ್ರಕಾಶಿಸುತ್ತಿದೆ. ಅದರ ಬಲ ಮತ್ತು ಎಡಭಾಗಗಳ ಕಟಿಗಳಲ್ಲಿ ಕ್ರಮವಾಗಿ ಪುನರ್ವಸೂ ಮತ್ತು ಪುಷ್ಯನಕ್ಷತ್ರಗಳು ಹೊಳೆಯುತ್ತಿವೆ. ಹಿಂದುಗಡೆಯ ಬಲ ಮತ್ತು ಎಡಪಾದಗಳಲ್ಲಿ ಆರ್ದ್ರೆ ಮತ್ತು ಆಶ್ಲೇಷಾನಕ್ಷತ್ರಗಳು ಪ್ರಕಾಶಿಸುತ್ತಿವೆ ಮತ್ತು ಬಲ ಮತ್ತು ಎಡಭಾಗಗಳ ಮೂಗುಹೊಳ್ಳೆಗಳಲ್ಲಿ ಕ್ರಮವಾಗಿ ಅಭಿಜಿತ್ ಮತ್ತು ಉತ್ತರಾಷಾಢಾನಕ್ಷತ್ರಗಳನ್ನು ನೋಡುತ್ತೇವೆ. ಹಾಗೆಯೇ ಬಲಗಣ್ಣು ಎಡಗಣ್ಣುಗಳಲ್ಲಿ ಕ್ರಮವಾಗಿ ಶ್ರವಣ ಮತ್ತು ಪೂರ್ವಾಷಾಢಾನಕ್ಷತ್ರಗಳೂ, ಬಲ ಮತ್ತು ಎಡಕಿವಿಗಳಲ್ಲಿ ಧನಿಷ್ಠಾ ಮತ್ತು ಮೂಲಾನಕ್ಷತ್ರಗಳೂ ವಿರಾಜಿಸುತ್ತಿವೆ. ಮಖೆಯೇ ಮುಂತಾದ ದಕ್ಷಿಣಾಯನದ ಎಂಟು ನಕ್ಷತ್ರಗಳು ಎಡಗಡೆಯ ಪಾದದ ವಂಕ್ರಿಗಳೆಂಬ ಮೂಳೆಗಳಲ್ಲಿ ಬೆಳಗುತ್ತಿವೆ. ಎಡಪಾದದ ವಂಕ್ರಿಗಳೆಂಬ ಮೂಳೆಗಳಲ್ಲಿ ಉತ್ತರಾಯಣವೆಂಬ ನಾಮಧೇಯವುಳ್ಳ ಮೃಗಶಿರೆಯೇ ಮುಂತಾದ ಎಂಟು ನಕ್ಷತ್ರಗಳು ಹಿಂದು ಮುಂದಾಗಿ ನೆಲೆಸಿವೆ. ಶತಭಿಷೆ ಮತ್ತು ಜ್ಯೇಷ್ಠೆ ಎಂಬ ಎರಡು ನಕ್ಷತ್ರಗಳು ಕ್ರಮವಾಗಿ ಬಲ ಮತ್ತು ಎಡ ಹೆಗಲುಗಳಲ್ಲಿ ಪ್ರಕಾಶಿಸುತ್ತಿವೆ. ಅದರ ಮೇಲೆ ದವಡೆಯಲ್ಲಿ ನಕ್ಷತ್ರರೂಪರಾದ ಅಗಸ್ತ್ಯರೂ, ಕೆಳದವಡೆಯಲ್ಲಿ ನಕ್ಷತ್ರ ರೂಪನಾದ ಯಮನೂ, ಮುಖಗಳಲ್ಲಿ ಮಂಗಳನೂ, ಲಿಂಗಪ್ರದೇಶದಲ್ಲಿ ಶನಿಯೂ, ಕತ್ತಿನ ಹೆರಳಿನಲ್ಲಿ ಬೃಹಸ್ಪತಿಯೂ, ಎದೆಯಲ್ಲಿ ಸೂರ್ಯನೂ, ಹೃದಯದಲ್ಲಿ ನಾರಾಯಣನೂ, ಮನಸ್ಸಿನಲ್ಲಿ ಚಂದ್ರನೂ, ಹೊಕ್ಕಳಿನಲ್ಲಿ ಶುಕ್ರನೂ, ಸ್ತನಗಳಲ್ಲಿ ಅಶ್ವಿನೀಕುಮಾರರೂ, ಪ್ರಾಣಾಪಾನಗಳಲ್ಲಿ ಬುಧನೂ, ಕತ್ತಿನಲ್ಲಿ ರಾಹುವೂ, ಸಮಸ್ತ ಅಂಗಗಳಲ್ಲಿ ಕೇತುವೂ, ರೋಮಗಳಲ್ಲಿ ಸಮಸ್ತ ತಾರೆಗಳೂ ನೆಲೆಗೊಂಡಿವೆ. 

#ಪುರಾಣದಲ್ಲಿ_ಗ್ರಹ_ 
ಸದ್ಯೋಜಾತರು

July 26, 2021

ಮಾರ್ಜಾಲ ಕಿಶೋರ ನ್ಯಾಯ

ದೇವರನ್ನು ಆಶ್ರಯಿಸುವ ವಿಧಾನ
🌹~~~~~~🌹~~~~~~🌹
ದೇವರನ್ನು ನಾವು ಆಶ್ರಯಿಸುವುದನ್ನು ಮೂರು ರೀತಿಯಾಗಿ ವಿಭಾಗಿಸ ಬಹುದು.
*1.ಮಾರ್ಜಾಲ ಕಿಶೋರ ನ್ಯಾಯ*.
*2.ಮರ್ಕಟ ಕಿಶೋರ ನ್ಯಾಯ*.
*3.ಮತ್ಸ್ಯ ಕಿಶೋರ ನ್ಯಾಯ*.

*1-ಮಾರ್ಜಾಲ ಕಿಶೋರ ನ್ಯಾಯ* ---- ಬೆಕ್ಕು ತನ್ನ ಮರಿಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸುವಾಗ ಅದರ ಕತ್ತನ್ನು ಕಚ್ಚಿಕೊಂಡು ಉಪಾಯವಾಗಿ ಕೊಂಡೊಯ್ಯುತ್ತದೆ. ಆದರೆ ಮರಿಗೆ ಚೂರಾದರೂ ನೋವಾಗುವುದಿಲ್ಲ. ಹಾಗೆ ಭಗವಂತನನ್ನು ಆಶ್ರಯಿಸಿದವರಿಗೆ ಕರ್ಮಗಳನ್ನು ಕಳೆಯುತ್ತಾನೆ. ಆಗ ಮನುಷ್ಯ ಕಷ್ಟಗಳಲ್ಲಿ ತೊಳಲಾಡುತ್ತಾನೆ. ಅದರಿಂದ ಭಗವಂತ ಭಕ್ತನ ವಿಶ್ವಾಸಕ್ಕೆ ಚೂರೂ ಧಕ್ಕೆ ಬರದ ಹಾಗೆ ಕಾಪಾಡುತ್ತಾನೆ.

*2-ಮರ್ಕಟ ಕಿಶೋರ ನ್ಯಾಯ* --- ಕೋತಿ ತನ್ನ ಮರಿಯನ್ನು ಹಿಡಿದು ಕೊಳ್ಳುವುದೇ ಇಲ್ಲ. ಏಕೆಂದರೆ ಕೋತಿಯ ಮರಿ ಅಮ್ಮನನ್ನು ಎಷ್ಟು ಗಟ್ಟಿಯಾಗಿ ಹಿಡಿದು ಕೊಳ್ಳುತ್ತದೆಂದರೆ ತಾಯಿಗೆ ತಲೆ ಕೆಡಿಸಿ ಕೊಳ್ಳುವ ಅಗತ್ಯವೇ ಇಲ್ಲ. ಅದು ತನ್ನ ಪಾಡಿಗೆ ಸಲೀಸಾಗಿ ಹಾರಾಡುತ್ತದೆ. ಹಾಗೇ ಇಲ್ಲಿ ಭಕ್ತ ಭಗವಂತನನ್ನು ಎಷ್ಟು ಗಟ್ಟಿಯಾಗಿ ಆಶ್ರಯಿಸುತ್ತಾನೆಂದರೆ ಯಾವುದೇ ಕಷ್ಟಗಳು ಯಾವುದೇ ಪರಿಸ್ಥಿತಿಯೂ ಅವನ ನಂಬಿಕೆಯನ್ನು ಕದಲಿಸಲಾರದು. ಇದು ಅತ್ಯಂತ ಕಠಿಣ, ಅಷ್ಟೇ ಶ್ರೇಷ್ಠವಾದುದು.

*3-ಮತ್ಸ್ಯ ಕಿಶೋರ ನ್ಯಾಯ* --- ಮೀನಿನ ಮರಿ ಕೋಟ್ಯಾಂತರ ಮೈಲಿ ದೂರದಲ್ಲಿದ್ದರೂ ಅದು ತಾಯಿಯನ್ನು ನೆನೆದರೆ ಸಾಕು ಮರುಕ್ಷಣ ತಾಯಿ ಕಣ್ಣಮುಂದೆ ಇರುತ್ತದೆ. ಹಾಗೆ ಭಗವಂತನನ್ನು ಸರಿಯಾಗಿ ನೆನೆಸಿ ಕೊಳ್ಳುವ ಕಲೆ ಗೊತ್ತಿದ್ದರೆ ನಮ್ಮ ಮನಸು ಸದಾ ಅವನಲ್ಲಿಲ್ಲದಿದ್ದರೂ ಕರೆದೊಡನೆ ಬರುತ್ತಾನೆ.
ಸರ್ವೇ ಜನಾ ಸುಖಿನೋ ಭವಂತು|
ಸಮಸ್ತ ಸನ್ಮಂಗಳಾನಿ ಭವಂತು ||

July 24, 2021

ತ್ರಿಶೂಲ...! ಶಿವನ ಆಯುಧದ ಹಿಂದಿದೆ ಮಹಾರಹಸ್ಯ

ತ್ರಿಶೂಲ...! ಶಿವನ ಆಯುಧದ ಹಿಂದಿದೆ ಮಹಾರಹಸ್ಯ.

ಸ್ನೇಹಿತರೇ ಶಿವ ಅನ್ನುವುದೇ ಒಂದು ವಿಸ್ಮಯ ಆ ಆದಿ ಯೋಗಿಯ ಬಗ್ಗೆ ಹುಡುಕಿದಷ್ಟು ಅತ್ಯಾದ್ಬುತವಾದ ಮಾಹಿತಿಗಳು ದೊರೆಯುತ್ತಲೆ ಹೋಗುತ್ತವೆ. ಸಾಮಾನ್ಯವಾಗಿ ಶಿವನನ್ನು ನೆನಪಿಸಿಕೊಂಡ ಕೂಡಲೇ ಕೈಲಾಸದಲ್ಲಿ ಕಣ್ಣನ್ನು ಮುಚ್ಚಿ ಧ್ಯಾನದಲ್ಲಿ ಮಗ್ನನಾಗಿರುವ ಆ ಮಹಾಯೋಗಿಯ ಚಿತ್ರಣ ನಮ್ಮ ಕಣ್ಮುಂದೆ ಗೋಚರಿಸುತ್ತದೆ, ತಲೆ ಮೇಲೆ ಚಂದ್ರನನ್ನು ಇಟ್ಟುಕೊಂಡು, ತನ್ನ ಜಟಾಜೂಟದಲ್ಲಿ ಮಾತೆ ಗಂಗೆಯನ್ನು ಕಟ್ಟಿಕೊಂಡು, ಕುತ್ತಿಗೆಗೆ ಹಾವನ್ನು ಆಭರಣವನ್ನಾಗಿ ಮಾಡಿಕೊಂಡು ಧ್ಯಾನಮಗ್ನನಾಗಿರುವ ಶಿವ ಭಕ್ತವತ್ಸಲ. ಅಂತಹ ಮಹಾಶಿವನ ಕೈಯಲ್ಲಿ ಒಂದು ತ್ರಿಶೂಲ ಇರುತ್ತದೆ ಅದು ಅವನ ಆಯುಧ ಹೇಗೆ ವಿಷ್ಣು ಚಕ್ರ ಮತ್ತು ಗದೆಯನ್ನು ಹೊಂದಿದ್ದಾನೋ ಅದೇ ರೀತಿ ಶಿವ ತ್ರಿಶೂಲವನ್ನು ಹೊಂದಿದ್ದಾನೆ, ಆ ತ್ರಿಶೂಲ ತುಂಬಾನೇ ವಿಶಿಷ್ಟವಾದದ್ದು ಹಾಗೆ ನೋಡಿದರೆ ಆ ತ್ರಿಶೂಲದ ಹಿಂದೆ ಹಲವಾರು ನಿಗೂಢಾರ್ಥಗಳಿವೆ ನಮ್ಮ ಬದುಕಿಗೆ ಬೇಕಾದ ಸೂತ್ರಗಳಿವೆ ಹಾಗೂ ಯೋಗದ ರಹಸ್ಯಗಳಿವೆ ಶಿವನ ತ್ರಿಶೂಲದ ರಹಸ್ಯಗಳನ್ನು ನೋಡಿ ಬರೋಣ ಬನ್ನಿ.

ಪರಶಿವನ ಕೈಯಲ್ಲಿರುವ‌ ತ್ರಿಶೂಲದ ಸೃಷ್ಟಿಯ ಹಿಂದೆ ಕೂಡ ಒಂದು ಅತ್ಯಂತ ಆಸಕ್ತಿದಾಯಕ ಕಥೆ ಇದೆ. ಇಡೀ ಜಗತ್ತಿಗೆ ಬೆಳಕು ಕೊಡುವ ಸೂರ್ಯ ☀️ ಅದೆಷ್ಟು ಪ್ರಖರನಾಗಿರುತ್ತಾನೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ ಈ ಮಾರ್ತಾಂಡನ ಬಿಸಿಯನ್ನು ಸಹಿಸಲಾಗದೇ ಆತನ ಪತ್ನಿ ಸಂಜನಾದೇವಿ ಅಥವಾ ಶರಣ್ಯದೇವಿ ತವರು ಮನೆಗೆ ಹೊರಟು ಹೋದಳಂತೆ ಸೂರ್ಯನ ಅತಿಯಾದ ಶಾಖದಿಂದಾಗಿ ಅವನ ಜೊತೆ ಇರೋದಕ್ಕೆ ಸಾಧ್ಯ ಆಗ್ತಾ ಇಲ್ಲ ಅಂತ ಆಕೆ ತನ್ನ ತಂದೆ ದೇವಶಿಲ್ಪಿ ವಿಶ್ವಕರ್ಮನ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾಳೆ ಅವನ ಅಗಾಧ ಬಿಸಿ ಕಡಿಮೆಯಾಗದೇ ತಾನು ಸೂರ್ಯನ ಬಳಿ ಹೋಗೋದಕ್ಕೆ ಸಾಧ್ಯನೇ ಆಗಲ್ಲ ಅಂತ ಹಠ ಹಿಡಿದು ಕುಳಿತುಬಿಡುತ್ತಾಳೆ ಸಂಜನಾದೇವಿ, ಆಗ ಮಗಳ ಸಮಸ್ಯೆಗೊಂದು ಪರಿಹಾರವನ್ನು ಹುಡುಕೋದಕ್ಕೆ ಮುಂದಾದ ಆ ದೇವಶಿಲ್ಪಿ ವಿಶ್ವಕರ್ಮ ಸೂರ್ಯನ ಶಾಖವನ್ನು ಕಡಿಮೆ ಮಾಡೋದಕ್ಕೆ ಮುಂದಾಗುತ್ತಾನೆ. ಅಷ್ಟೇ ಅಲ್ಲ ಆದಿತ್ಯದೇವನಿಂದ ಹೊರಹೊಮ್ಮುತ್ತಿದ್ದ ಹೆಚ್ಚಿನ ಶಾಖವನ್ನು ಬಳಸಿಕೊಂಡು ಆ ಶಾಖದಿಂದ "ವಿಜಯ" ಅನ್ನೋ ತ್ರಿಶೂಲ, "ಸುದರ್ಶನ" ಅನ್ನೋ ದಿವ್ಯಚಕ್ರ ಹಾಗೂ "ಪುಷ್ಪಕ" ಅನ್ನೋ ವಿಮಾನವನ್ನು ಸೃಷ್ಟಿ ಮಾಡುತ್ತಾನೆ, ಬಳಿಕ ತಾನು ತಯಾರಿಸಿದ ವಿಜಯ ತ್ರಿಶೂಲವನ್ನು ಶಿವನಿಗೆ ಹಾಗೂ ಸುದರ್ಶನವನ್ನು  ಮಹಾವಿಷ್ಣುವಿಗೆ ಕೊಟ್ಟ ದೇವಶಿಲ್ಪಿ , ಸಂಪತ್ತಿನ ಅಧಿಪತಿಯಾಗಿದ್ದ ಕುಬೇರನಿಗೆ ಆ ಪುಷ್ಪಕ ವಿಮಾನವನ್ನು ನೀಡುತ್ತಾನೆ.

ಇದು ಶಿವನ ಆಯುಧ ತ್ರಿಶೂಲ ಸೃಷ್ಟಿಯಾದ ಕಥೆ ಈ ತ್ರಿಶೂಲದ ಹಿಂದೆ ಅನೇಕ ಸಾಂಕೇತಿಕ ಅರ್ಥಗಳು ಕೂಡ ಇದೆ. ಬದುಕಿಗೆ ಬೇಕಾದ ಸೂತ್ರಗಳಿವೆ ಎಲ್ಲದಕ್ಕಿಂತ ಹೆಚ್ಚಾಗಿ ಯೋಗದ ರಹಸ್ಯಗಳಿವೆ ಅದರಲ್ಲೂ ಸಂಖ್ಯೆ 3 ಹಾಗೂ ಶಿವನ ನಡುವೆ ತುಂಬಾನೇ ನಂಟಿದೆ.
"ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ 
ಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಂ 
ಏಕ ಬಿಲ್ವಂ ಶಿವಾರ್ಪಣಂ" ।।

ಹಾಗೆ ಶಿವನನ್ನು ಸ್ತುತಿಸುವ ಬಿಲ್ವಾಷ್ಟಕದಲ್ಲೂ ಕೂಡ ಶಿವನ ಹಾಗೂ ಸಂಖ್ಯೆ ಮೂರರ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಲಾಗಿದೆ.
ಶಿವನಿಗೆ ಪ್ರಿಯವಾದ ಬಿಲ್ವ ಕೂಡ ಮೂರು ದಳಗಳಿಂದ 
ಕೂಡಿರುತ್ತದೆ ಸತ್ವ , ರಜಸ್ಸು ಹಾಗೂ ತಮಸ್ಸು ಎಂಬ ಮೂರು ಗುಣಗಳಿಗೂ ಕೂಡ ಈ ಶಿವನೆ ಒಡೆಯ ಇನ್ನೂ ಈತ ಮುಕ್ಕಣ್ಣ , ತ್ರಿಪುಂಡ್ರಧಾರಿ ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವವನು ಇನ್ನೂ ಜಗತ್ತಲ್ಲಿ ಹುಟ್ಟುವ ಪ್ರತಿ ಜೀವಿಯ ಸೃಷ್ಟಿ, ಸ್ಥಿತಿ ಹಾಗೂ ಲಯ ಅನ್ನೋ ಮೂರು ಅವಸ್ಥೆಯನ್ನು ಸಾಗಿ ಹೋಗಲೇಬೇಕು. ವಿಶೇಷ ಅಂದರೆ ಭೂತ , ವರ್ತಮಾನ ಹಾಗೂ ಭವಿಷ್ಯತ್ತು ಅನ್ನೋ ತ್ರಿಕಾಲಗಳ‌ ನಿಯಂತ್ರಕ ಕೂಡ ಶಿವನೇ ಅನ್ನೋದನ್ನು ಸಾಂಕೇತಿಕವಾಗಿ ಸೂಚಿಸುವುದಕ್ಕಾಗಿಯೇ ಆತ ತ್ರಿಶೂಲಧಾರಿಯಾಗಿದ್ದಾನೆ. 
ಹೀಗೇ ನಮ್ಮ ಬದುಕಿನ ಮೂರು ಅವಸ್ಥೆಯನ್ನು ಪ್ರತಿ ಮನುಷ್ಯನಲ್ಲಿ ಇರುವ ತ್ರಿಗುಣಗಳು ,ಜಗತ್ತಿನ ಗತಿಯನ್ನು ಗುರುತಿಸುವ ತ್ರಿಕಾಲ, ಹೀಗೆ ಹಲವು ಸಂಗತಿಗಳ ಸಂಕೇತ ಅನ್ನಿಸಿಕೊಂಡಿದೆ ಶಿವನ ತ್ರಿಶೂಲ. ಅಷ್ಟೇ ಅಲ್ಲ ಈ ತ್ರಿಶೂಲದ ಹಿಂದೆ ಹಲವಾರು ಯೋಗದ ರಹಸ್ಯಗಳಿವೆ, ಯೋಗಶಾಸ್ತ್ರದ ಪ್ರಕಾರ ನಮ್ಮ ಶರೀರದಲ್ಲಿ ಒಟ್ಟು 72,000 ನರನಾಡಿಗಳು ಇವೆ ಶರೀರದಲ್ಲಿ ಪ್ರಾಣಶಕ್ತಿ ಹರಿಸಿ ನಮಗೆ ಚೈತನ್ಯವನ್ನು ತುಂಬುವುದೇ ಶರೀರದಲ್ಲಿರೋ ಈ ನಾಡಿಗಳು ಅನ್ನುತ್ತೆ ಯೋಗಶಾಸ್ತ್ರ. ಇಂತಹ ಎಪ್ಪತ್ತೆರಡು ಸಾವಿರ ನಾಡಿಗಳ ಪೈಕಿ ಇಡಾ, ಪಿಂಗಳಾ, ಹಾಗೂ ಸುಶುಮ್ನ ಅನ್ನೋ 3 ನಾಡಿಗಳು ತುಂಬಾನೇ ಪ್ರಮುಖವಾದವು.

ಮೂಗಿನ ಎಡಭಾಗದ ಹೊಳ್ಳೆ ಇಡಾನಾಡಿಯ ಸಂಪರ್ಕ ಹೊಂದಿದ್ದರೆ ಬಲಹೊಳ್ಳೆ ಪಿಂಗಳಾ ನಾಡಿಯ ಸಂಬಂಧವನ್ನು ಹೊಂದಿದೆ ಇನ್ನೂ ಇಡಾ , ಪಿಂಗಳ ನಾಡಿಗಳ ನಡುವೆ ಸುಶಮ್ನ ಅನ್ನೋ ನಾಡಿ ಹರಿಯುತ್ತೆ ಅನ್ನೋ ಮಾಹಿತಿ ಯೋಗಶಾಸ್ತ್ರದಲ್ಲಿ ಸಿಗುತ್ತದೆ. ಏಕಕಾಲಕ್ಕೆ ಮೂಗಿನ ಎರಡು ಹೊಳ್ಳೆಗಳು ತೆರೆದುಕೊಂಡಿದ್ದಾಗ ಮಾತ್ರ ಸುಶಮ್ನ ನಾಡಿ ಜಾಗೃತಾವಸ್ತೆಯಲ್ಲಿ ಇರುತ್ತೆ, ಇನ್ನೂ ಇಡಾ ಹಾಗೂ ಪಿಂಗಳ ನಾಡಿಗಳು ನಮ್ಮ ಹಣೆಯ ಭಾಗದಲ್ಲಿ ಮುಕ್ತಾಯವಾದರೆ ಸುಶಮ್ನ ನಾಡಿ ನಡುನೆತ್ತಿಯ ಮಧ್ಯಭಾಗದಲ್ಲಿರುವ ಸಹಸ್ರಾರದಲ್ಲಿ ತೆರೆದುಕೊಳ್ಳುತ್ತೆ ಹೀಗೆ ನಮ್ಮ ಶರೀರದ ಚೈತನ್ಯ ಶಕ್ತಿಗೆ ಕಾರಣವಾಗಿರೋ ಮೂರು ನಾಡಿಗಳು ಶಿವನ ತ್ರಿಶೂಲವನ್ನು ಪ್ರತಿನಿಧಿಸುತ್ತವೆ ಅಂತ ಹೇಳಲಾಗುತ್ತದೆ.
ತ್ರಿಶೂಲದ ಎಡಭಾಗದ ಹಲಗು ಇಡಾ ನಾಡಿಯ ಸಂಕೇತವಾದರೆ ,ಬಲಭಾಗದ ಹಲಗು ಪಿಂಗಳ ನಾಡಿಯ ಸಂಕೇತ ಅನ್ನಿಸಿಕೊಂಡಿದೆ, ಇನ್ನೂ ತ್ರಿಶೂಲದ ಮಧ್ಯಭಾಗದಲ್ಲಿ ಸ್ವಲ್ಪ ಹೆಚ್ಚು ಉದ್ದವಿರುವ ಹಲಗು ಸುಶಮ್ನ ನಾಡಿಯ ಸೂಚಕವಾಗಿದೆ.

ಶಿವನ ಕೈಯಲ್ಲಿರುವ ತ್ರಿಶೂಲ ಬರಿ ಅಲಂಕಾರಕ್ಕೆ ಮಾತ್ರ ಅಲ್ಲ ಅದರ ಹಿಂದೆ ಹತ್ತು ಹಲವು ಸಂದೇಶಗಳು ಇವೆ ಅನ್ನೋ ಬಗ್ಗೆ ಸಂಕ್ಷಿಪ್ತ ಮಾಹಿತಿ ,ಇದು ಕೇವಲ ತ್ರಿಶೂಲ ಒಂದೇ ಅಲ್ಲ ನಮ್ಮ ಸನಾತನ ಧರ್ಮದ ದೇವಾದಿ-ದೇವತೆಗಳ ಕೈಯಲ್ಲಿರುವ ಬೇರೆ ಬೇರೆ ವಿಧದ ಆಯುಧಗಳ ಹಿಂದೆ ಕೂಡ ಇಂತದ್ದೇ ಅತ್ಯಾದ್ಭುತ ಕಲ್ಪನೆ ಹಾಗೂ ರಹಸ್ಯಗಳಿವೆ.
#ಜೈಹಿಂದ್ #ಜೈಕರ್ನಾಟಕ

July 19, 2021

ಗಂಡನ ಮನೆಯಲ್ಲಿ ಹೊಂದಾಣಿಕೆ

*ಗಂಡನ ಮನೆಯಲ್ಲಿ ಹೊಂದಾಣಿಕೆ*
ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ isolated family ಗಳೇ ಹೆಚ್ಚಾಗುತ್ತಿವೆ. ಮಗನಿಗೆ ಕನ್ಯಾನ್ವೇಷಣೆ ಮಾಡಿ ಕನ್ಯೆಯ ಜಾತಕ ತಂದು ಇವಳು ನಮ್ಮ ಮನೆಗೆ ಹೊಂದಿಕೊಂಡು ಹೋಗುವಳೋ? ಎಂದು ಪ್ರಶ್ನಿಸುತ್ತಾರೆ. 
ಹುಡುಗಿಯ ಜಾತಕದಲ್ಲಿ 2ನೇ ಸ್ಥಾನ ( ಲಗ್ನದಿಂದ)ನೋಡಬೇಕು. ಶುಭಗ್ರಹವಾದ ಶುಕ್ರ ಗುರು ಅಥವಾ ಬಲಿಷ್ಠ ಚಂದ್ರರಿದ್ದರೆ  ಅವರು ಗಂಡನ ಮನೆಯಲ್ಲಿ ಹೊಂದಿಕೊಂಡು ಹೋಗುತ್ತಾರೆ. ಈ ಗ್ರಹಗಳು ಸ್ವಕ್ಷೇತ್ರ ಉಚ್ಛ ಮಿತ್ರ ಕ್ಷೇತ್ರವಾಗಿದ್ದರೆ ಅನ್ಯೋನ್ಯತೆ ಹೆಚ್ಚು.
ಮೇಷ ಕಟಕ ಸಿಂಹ ಅಥವಾ ವೃಶ್ಚಿಕರಾಶಿಗಳು ದ್ವಿತೀಯವಾಗಿ ಅಲ್ಲಿ ಶನಿಯಿದ್ದರೆ ಗಂಡನ ಮನೆಯವರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಿಲ್ಲ.
ಡಾII ಮಹೇಶ ಕುಲಕರ್ಣಿ
ಸಿಂದಗಿ💐🙏🙏

ಹಿಂದೂಧರ್ಮವನ್ನು ಮತ್ತು ವೀರಶೈವಧರ್ಮವನ್ನು ವಿರೋಧಿಸಿ ಹೊರ ಹೋಗುತ್ತಿರುವ ವಚನಾನುಯಾಯಿಗಳಿಗೆ ನೇರ ಪ್ರಶ್ನೆ

#ಹಿಂದೂಧರ್ಮವನ್ನು ಮತ್ತು#ವೀರಶೈವಧರ್ಮವನ್ನು ವಿರೋಧಿಸಿ ಹೊರ ಹೋಗುತ್ತಿರುವ ವಚನಾನುಯಾಯಿಗಳಿಗೆ ನೇರ ಪ್ರಶ್ನೆ:   

1. ಇದುವರೆಗೆ ನೀವು ಜನನಸೂತಕ, ನಾಮಕರಣ, ಗೃಹಪ್ರವೇಶ, ಮದುವೆ, ಅಂತ್ಯಸಂಸ್ಕಾರ, ತಿಥಿ-- ಈ ಸಂದರ್ಭಗಳಲ್ಲಿ ವೇದೋಕ್ತ, ವೀರಶೈವಧರ್ಮೋಕ್ತ ಪ್ರಕಾರ ವಿಧಿ-ವಿಧಾನಗಳನ್ನು ಅನುಸರಿಸುತ್ತಿರಲಿಲ್ಲವೆ? ಈ ವಿಧಿವಿಧಾನಗಳನ್ನು ಬಸವಣ್ಣ ಹೊಸದಾಗಿ ಎಲ್ಲೂ ಹೇಳಿಲ್ಲ, ಮುಂದೆ ಏನು ಮಾಡುತ್ತೀರಿ?     
2. ಪರಶಿವಬ್ರಹ್ಮನ ಸಂಕೇತವಾಗಿ ವೀರಶೈವರು ಇಷ್ಟಲಿಂಗದ ರೂಪದಲ್ಲಿ ವೇದೋಕ್ತ,ವೀರಶೈವಧರ್ಮೋಕ್ತ ಮಂತ್ರಗಳಿಂದ ಪೂಜಿಸುತ್ತಿದ್ದಾರೆ. ಐತಿಹಾಸಿಕವಾಗಿ ಈ ಪದ್ಧತಿ ಹರಪ್ಪಾ ಮೆಹೆಂಜೋದಾರೊ ಕಾಲಕ್ಕಿಂತ ಹಳೆಯದು. ಬಸವಣ್ಣ ವೀರಶೈವ ಧರ್ಮಕ್ಕೆ ಆಕರ್ಷಣೆಗೊಂಡು ಮತಾಂತರಗೊಂಡ. ಇದುವರೆಗೆ ನೀವು ಇಷ್ಟಲಿಂಗಪೂಜೆಯನ್ನು ಯಾವ ಪ್ರಕಾರ ಮಾಡುತ್ತಿದ್ದಿರಿ? ಬಸವಣ್ಣ ಪೂಜಾ ವಿಧಿವಿಧಾನಗಳನ್ನು ಚೆನ್ನಬಸವಣ್ಣನ ಕಡೆಯಿಂದ ತಿಳಿದುಕೊಂಡಿದ್ದ. ತಾನು ಹೊಸದಾಗಿ ಏನೂ ಹೇಳಿಲ್ಲ. ನೀವು ಇದುವರೆಗೆ ರುದ್ರಾಭಿಷೇಕ ಮಾಡಿಲ್ಲವೆ? ನಿಮ್ಮ ಪ್ರಕಾರ ಲಿಂಗದೇವ ಎಂದರೆ ಸ್ಥಾವರಲಿಂಗವೆ? ಅದರ ಅಂತಿಮ ರೂಪ ಏನು? ನಿಮ್ಮ ಆಚರಣೆ, ವ್ರತ, ತಪ, ಇಷ್ಟಲಿಂಗಪೂಜೆಗೇ ಸೀಮಿತವೆ?   
3. ಯಾವ ಪುರುಷಾರ್ಥಕ್ಕಾಗಿ ಇಷ್ಟಲಿಂಗಪೂಜೆ ಮಾಡುತ್ತೀರಿ? ಎಲ್ಲಾ ಧರ್ಮಗಳು ಮೋಕ್ಷಕ್ಕಾಗಿ. ವೀರಶೈವಧರ್ಮದ್ದು ಸಾಮರಸ್ಯ ಮುಕ್ತಿ. ನಿಮ್ಮದು ಯಾವ ಮೋಕ್ಷ. 
4. ವೀರಶೈವರು ಏಕದೇವೋಪಾಸಕರು. ನೀವು? ಒಂದು ಕಡೆ ಬಸವ ಪೂಜೆ ಎನ್ನುತ್ತೀರಿ, ಇನ್ನೊಂದು ಕಡೆ ಇಷ್ಟಲಿಂಗಪೂಜೆ ಎನ್ನುತ್ತೀರಿ, ಮತ್ತೊಂದು ಕಡೆ ಜಂಗಮಪೂಜೆ ಎನ್ನುತ್ತೀರಿ. "ಶರಣಸತಿ ಲಿಂಗಪತಿ" ಎನ್ನುವಲ್ಲಿ ಇದು ಪತಿವ್ರತೆಯ ಲಕ್ಷಣವೆ? ಶರಣರು ಇವರ ಬಗ್ಗೆ ಏನೆಂದು ಹೇಳಿದ್ದಾರೆ? 
5. ಸೃಷ್ಟಿ, ಸ್ಥಿತಿ, ಲಯವನ್ನು ಪ್ರಪಂಚದ ಎಲ್ಲಾ ಧರ್ಮಗಳು ಒಪ್ಪುತ್ತವೆ. ನೀವು? ನಿಮ್ಮ ಧರ್ಮ ಒಪ್ಪುತ್ತದೆಯೆ? ಸೃಷ್ಟಿ, ಸ್ಥಿತಿ, ಲಯದ ವ್ಯಾಖ್ಯಾನವನ್ನು ಬಸವಣ್ಣ ಎಲ್ಲಿ ಹೇಳಿದ್ದಾರೆ? 
6. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಈ ನಾಲ್ಕು ವಿಧವಾದ ಮುಕ್ತಿಗಳು ಹಿಂದೂಧರ್ಮದಲ್ಲಿ ಹೇಳಲಾಗಿದೆ. ವೀರಶೈವ ಧರ್ಮದಲ್ಲಿ ಅವುಗಳನ್ನು ಮೀರಿದ ಸಾಮರಸ್ಯ ಮುಕ್ತಿ ಉಕ್ತವಾಗಿದೆ. ನಿಮ್ಮದು ಯಾವ ಮುಕ್ತಿ? ಲಿಂಗದೇವನನ್ನು ನೋಡಿಕೊಂಡೇ ಇರುವುದೆ? 
7. ಹಾಗಾದರೆ ನೀವು ಇದುವರೆಗೆ ವೀರಶೈವಧರ್ಮದಲ್ಲಿ ಉಕ್ತವಾದ ಆಚರಣೆಗಳನ್ನು ಮಾಡಿಲ್ಲವೆ? ಇನ್ನು ಮುಂದೆ ಹಿಂದೂ ಹಾಗೂ ವೀರಶೈವ ಧರ್ಮದಲ್ಲಿ ಉಕ್ತವಾದ ವಿಧಿವಿಧಾನಗಳನ್ನು ಅನುಸರಿಸುವುದಿಲ್ಲವೆಂದು ಪ್ರಮಾಣ ಮಾಡುತ್ತೀರಾ?  
8. ವೀರಶೈವ ಧರ್ಮಗ್ರಂಥಗಳಲ್ಲಿ ಎಲ್ಲೂ ಕಾಣಸಿಗದ, ನೀವೇ ಹೊಸದಾಗಿ ಕಂಡುಹಿಡಿದ(ಜೈನ,ಬೌದ್ಧರಂತೆ) ವಿಧಿವಿಧಾನಗಳನ್ನು ಬಹಿರಂಗಗೊಳಿಸಿ. 
9. ಲಿಂಗ ಬಿಟ್ಟು ಪರಶಿವನನ್ನು ಒಪ್ಪುವುದಿಲ್ಲವೆಂದಾದರೆ, ನಿಮ್ಮದು ಜೈನ, ಬೌದ್ಧರಂತೆ ನಾಸ್ತಿಕ ಮತವೆ? ಏಕೆಂದರೆ, ಪರಬ್ರಹ್ಮ, ಈಶ್ವರ, ಪರಶಿವ, ಅಥವಾ ಮಹಾವಿಷ್ಣುವನ್ನು ಯಾರು ನಂಬುವುದಿಲ್ಲವೊ ಅಥವಾ ಆ ದೇವತೆಗಳು ಇಲ್ಲವೇ ಇಲ್ಲ ಎಂದು ಯಾರು ವಾದಿಸುತ್ತಾರೊ ಅಂಥವರಿಗೆ ದಾರ್ಶನಿಕವಾಗಿ ನಾಸ್ತಿಕರು ಎನ್ನುತ್ತಾರೆ. ದೇವರ ಇರುವಿಕೆಯನ್ನು(ಅಣುತೃಣಕಾಷ್ಠಾದಿಗಳಲ್ಲಿ) ಯಾರು ಒಪ್ಪುತ್ತಾರೊ ಅಂಥವರು ಆಸ್ತಿಕರು. ಆಸ್ತಿಕರಾದರೆ ನೀವು ವೀರಶೈವಧರ್ಮದ ಅನುಯಾಯಿಗಳೇ ಆಗಿರುತ್ತೀರಿ. ಈ ಅಪಕ್ವತೆ ಏಕೆ? 
10. ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲ ಸಿದ್ಧಾಂತವನ್ನು ವೀರಶೈವರು ಅನಾದಿ ಕಾಲದಿಂದಲೂ ಆಚರಿಸುತ್ತಾ ಬಂದಿದ್ದಾರೆ. ಆಗಿನ ಕಾಲದಲ್ಲಿ ಕನ್ನಡ ಬೆಳೆದಿಲ್ಲದ ಕಾರಣ ಸಂಸ್ಕೃತಭಾಷೆಯಲ್ಲಿ ಧರ್ಮಗ್ರಂಥಗಳನ್ನು ಬರೆಯಲಾಗಿದೆ. ಅಷ್ಟಕ್ಕೂ ವೀರಶೈವರು ಕರ್ನಾಟಕ ಒಂದಕ್ಕೇ ಸೀಮಿತರಲ್ಲ.  ‌ಸಂಸ್ಕೃತದಲ್ಲಿದ್ದುದನ್ನು ಸರಳವಾಗಿ ಕನ್ನಡದಲ್ಲಿ ಬಸವಾದಿ ಪ್ರಮಥರು ಜನಸಮೂಹಕ್ಕೆ ತಿಳಿ ಹೇಳಿ ವೀರಶೈವ ಧರ್ಮವನ್ನು ಪ್ರಚುರಪಡಿಸಿದರು. ಸಂಸ್ಕೃತ ಶ್ಲೋಕಗಳೇ ತುಂಬಿಕೊಂಡಿರುವ ವೀರಶೈವಧರ್ಮವಿಚಾರಗಳೇ ಹಾಸುಹೊಕ್ಕಾಗಿರುವ ವಚನಗಳನ್ನು ತಮ್ಮ ಸ್ವಂತದ್ದು ಎನ್ನುವ ರೀತಿಯಲ್ಲಿ ಬಸವಣ್ಮನನ್ನೂ, ವೀರಶೈವಧರ್ಮ ವಿಚಾರಗಳನ್ನೂ ಹೈಜಾಕ್ ಮಾಡಿ ಹೊಸ ಧರ್ಮಸ್ಥಾಪನೆಗೆ ಹೊರಟಿರುವುದು ಬಾಲಿಶವಲ್ಲವೆ? ಮೋಸವಲ್ಲವೆ?  
11. ಬಸವಣ್ಣ ಭಕ್ತಿಭಂಡಾರಿ ಅಷ್ಟೇ ಆಗಿದ್ದು ಐಕ್ಯಸಾಧನೆ ಮಾಡಿರಲೇ ಇಲ್ಲ, ಅಷ್ಟರಲ್ಲಿ ಮಹಾಸಂಗ್ರಾಮವಾಗಿ ಮಾಯವಾದದ್ದು ನಿಜ ತಾನೆ? ಐಕ್ಯಸ್ಥತಿಯನ್ನೇ ಮುಟ್ಟಿಲ್ಲದವರು ಧರ್ಮಸ್ಥಾಪಕರು ಹೇಗಾಗುತ್ತಾರೆ?  
12. ಶ್ರೀ ರೇಣುಕಾಚಾರ್ಯರನ್ನು ಕಲ್ಲಿನಲ್ಲಿ ಹುಟ್ಟಲು ಸಾಧ್ಯವೆ? ಎಂದು ಹಾಸ್ಯ ಮಾಡುತ್ತೀರಾ? ಬಸವಣ್ಣನನ್ನು ಕಲ್ಲಿನ ಪ್ರತಿಮೆ ಮಾಡಿ ಪೂಜಿಸುವ ನಿಮಗೆ ನಾಚಿಕೆಯಾಗಬೇಕು. ಜಂಗಮರನ್ನು ನಿಂದಿಸುತ್ತೀರಾ? "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ"  ಎಂದು ಯಾರು ಹೇಳಿದ್ದು ಗೊತ್ತು ತಾನೆ? ಸ್ಥಾವರಲಿಂಗದ ಪ್ರತಿರೂಪವೇ ನಿಮ್ಮ ಲಿಂಗದೇವ ಅಲ್ಲವೆ? 
13. ಪ್ರಪಂಚದ ಎಲ್ಲಾ ಧರ್ಮಸಂಸ್ಥಾಪಕರು ಸಾಮಾನ್ಯವಾಗಿ ಸಂನ್ಯಾಸಿಗಳೇ ಆಗಿರುತ್ತಾರೆ. ಇಬ್ಬರು ಹೆಂಡಿರನ್ನು ಹೊಂದಿರುವವರು ಧರ್ಮಸ್ಥಾಪಕರಾಗಲು ಹೇಗೆ ಸಾಧ್ಯ?  ನಿಮ್ಮ ತೆವಲಿಗೆ ಬಸವಣ್ಣನ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವುದನ್ನು ಲಕ್ಷಾಂತರ ಜನ ಖಂಡಿಸುತ್ತೇವೆ. ಉಘೇ ಉಘೇ ಶ್ರೀ ರೇಣುಕಾಚಾರ್ಯ*****

July 18, 2021

ದೈಹಿಕನ್ಯೂನತೆ ಸರಿಪಡಿಸಬಹುದು ಋಗ್ವೇದದ ಎಂಟನೇ ಮಂಡಲ

ದೈಹಿಕನ್ಯೂನತೆ ಸರಿಪಡಿಸಬಹುದು.

ಋಗ್ವೇದದ ಎಂಟನೇ ಮಂಡಲದ ಒಂದನೇ ಸೂಕ್ತದಲ್ಲಿ ಬರುವ ಒಂದು ಋಕ್ಕು ವೈದ್ಯಕೀಯ ಲೋಕದಲ್ಲಿನ ಸಾಧ್ಯತೆಯನ್ನು ದೃಢೀಕರಿಸುತ್ತದೆ. ಮನುಷ್ಯನ ದೈಹಿಕ ನ್ಯೂನತೆಗಳನ್ನು ಸರಿಪಡಿಸ ಬಹುದು ಎನ್ನುವುದನ್ನು ಸೂಕ್ಷ್ಮವಾಗಿ ಇಲ್ಲಿ ಹೇಳಲಾಗಿದೆ. ಈ ಕುರಿತಾಗಿ ನಾನು ಹಿರಿಯ ವೈದ್ಯ ಮಿತ್ರರಲ್ಲಿ ವಿಚಾರಿಸಿದಾಗ ಅವರೂ ಸಹ ಆಧುನಿಕ ವೈದ್ಯವಿಜ್ಞಾನದಲ್ಲಿ ಸರಿಪಡಿಸಬಹುದು ಎನ್ನುವುದನ್ನು ಹೇಳಿದರು. ಇದೊಂದು ಚಿಕ್ಕ ಕಥೆಯನ್ನಿಲ್ಲಿ ಹೇಳುತ್ತೇನೆ. 

ಹಿಂದೆ ಪ್ಲಯೋಗ ಎನ್ನುವ ಒಬ್ಬ ರಾಜನಿದ್ದ. ಆತನಿಗೆ ಅನುರೂಪಳಾದ ಪತ್ನಿ. ರಾಜ್ಯವೂ ಸಹ ಸುಭಿಕ್ಷವಾಗಿತ್ತು. ಧರ್ಮಾಚರಣೆಗಳನ್ನು ಅವನು ಎಂದಿಗೂ ಮೀರಿ ನಡೆದವನಲ್ಲ. ಈತನಿಗೆ ಆಸಂಗ ಎನ್ನುವ ಒಬ್ಬ ಮಗನಿದ್ದ. ನೋಡಲು ಅತಿ ಸುಂದರ. ವಿದ್ಯೆಯಲ್ಲಿಯೂ ಆತ ಅಷ್ಟೇ ಚುರುಕಾಗಿದ್ದ ಮತ್ತು ಪ್ರತಿಭಾನ್ವಿತನಾಗಿದ್ದ. ಯಾವುದಕ್ಕೂ ಕೊರತೆ ಇಲ್ಲ. ವಿದ್ಯೆ ಮತ್ತು ಸಂಪತ್ತು, ಧಾರ್ಮಿಕತೆ ಎಲ್ಲವೂ ಇತ್ತು. ರಾಜ ಪ್ಲಯೋಗ ತನ್ನ ಮಗನಿಗೆ ತನ್ನ ನಂತರ ಉತ್ತರಾಧಿಕಾರಿಯನ್ನಾಗಿ ರಾಜ್ಯವನ್ನು ಒಪ್ಪಿಸುತ್ತಾನೆ. ಪಟ್ಟಾಭಿಷೇಕಕ್ಕೂ ಮೊದಲು ಆಸಂಗನಿಗೆ ವಿವಾಹ ಮಾಡುತ್ತಾನೆ. ಆಗೆಲ್ಲಾ ರಾಜರನೇಕರು ಋಷಿ ಪುತ್ರಿಯರನ್ನು ಮದುವೆಯಾದ ಉದಾಹರಣೆಗಳು ದೊರಕುತ್ತವೆ. ಹಾಗೆಯೇ ರಾಜ ಪುತ್ರಿಯರು ಋಷಿಗಳನ್ನು ಮದುವೆಯಾಗುವುದೂ ಸಹ ಅಷ್ಟೇ ಪ್ರಸಿದ್ಧವಾಗಿತ್ತು. ಇಲ್ಲಿಯೂ ಅಂಗಿರಾ ಋಷಿಯ ಮಗಳು ಅಥವಾ ಅದೇ ವಂಶಸ್ಥಳು ಶಶ್ವತೀ ಎನ್ನುವವಳನ್ನು ಆಸಂಗನು ವಿವಾಹವಾಗುತ್ತಾನೆ. ವಿವಾಹಕಾರ್ಯಗಳೆಲ್ಲವೂ ಯಥಾವತ್ತಾಗಿ ನಡೆಯುತ್ತವೆ. ವಿವಾಹದ ದಿನ ರಾತ್ರಿ ಶೋಭನದಲ್ಲಿ ರಾಜ ಗಂಡಲ್ಲ, ಅವನು ಹೆಣ್ಣು ಎನ್ನುವುದು ಶಶ್ವತೀಗೆ ತಿಳಿಯುತ್ತದೆ. ಶಶ್ವತೀ ದುಃಖಿತಳಾಗುತ್ತಾಳೆ. ಆದರೆ ಶಾಪಾನುಗ್ರಹ ಸಮರ್ಥಳಾಗಿದ್ದರೂ ಸಹ ರಾಜನನ್ನು ಶಪಿಸುವುದಿಲ್ಲ. ಆಕೆ ಸೈರಿಸಿಕೊಂಡು ರಾಜನಲ್ಲಿ ಯಾಕೆ ಮುಚ್ಚಿಟ್ಟು ಮದುವೆಯಾದೆ ಎಂದು ಕೇಳುತ್ತಾಳೆ. ಆಸಂಗ ತನ್ನ ಕಥೆಯನ್ನು ಹೇಳಿಕೊಳ್ಳುತ್ತಾನೆ. ಆತ ಹಿಂದೆ ತಿಳಿಯದೇ ದೇವತೆಗಳಿಗೆ ಅಪಹಾಸ್ಯಮಾಡಿದ್ದು, ಅವರಿಗೆ ಕೋಪ ಬರುವಂತೆ ಮಾಡಿ ಅವರಿಂದ ಶಾಪ ಹೊಂದಿದ್ದು, ಆ ಕಾರಣದಿಂದ ತನಗೆ ನಪುಂಸಕತ್ವ ಬಂದಿರುವುದು(ಸ್ತ್ರೀತ್ವವನ್ನು ಹೊಂದಿದ್ದು) ಹೇಳುತ್ತಾನೆ. ಆಗ ಶಶ್ವತೀ ಆಸಂಗನ ಮಾತಿನಿಂದ ಚೇತರಿಸಿಕೊಂಡು, ಇದು ಸರಿಯಾಗುವ ದೋಷ ಎಂದು ಧೈರ್ಯ ತುಂಬಿ, ಕಣ್ವಗೋತ್ರದ ಮೇಧಾತಿಥಿ ಮತ್ತು ಮೇಧ್ಯಾತಿಥಿ ಎನ್ನುವವರನ್ನು ಭೇಟಿಯಾಗಿ ಮೇಧಾತಿಥಿ ಎನ್ನುವ ಋಷಿಯಿಂದ ಆಸಂಗನ ಸಲುವಾಗಿ ಯಜ್ಞವನ್ನು ಮಾಡಿಸಿ ಆತನ ತಪಸ್ಸಿನ ಬಲದಿಂದ ಈತನಿಗೆ ಸ್ತ್ರೀತ್ವವು ಹೋಗಿ ಪುನಃ ಪುರುಷತ್ವವು ಪ್ರಾಪ್ತಿಯಾಗುತ್ತದೆ. ಈತ ಮುಂದೆ ಪುರುಷನಾಗುತ್ತಾನೆ. ಆ ಉಪಕಾರಕ್ಕಾಗಿ ಮೇಧಾತಿಥಿಗೆ ದ್ರವ್ಯಾದಿಗಳನ್ನು ನೀಡಿದ ನಿದರ್ಶನ ಋಕ್ಕುಗಳಿಂದ ಸಿಗುತ್ತದೆ. ಈ ಸೂಕ್ತದ ೩೦ ರಿಂದ ೩೩ನೇ ಋಕ್ಕಿನ ತನಕ ಆಸಂಗ ರಾಜನೇ ಸ್ವತಃ ಸ್ತುಹಿ ಸ್ತುಹಿ ಎಂದು ಹೇಳಿರುವುದರಿಂದ ಆ ಋಕ್ಕುಗಳಿಗೆ ಆತನೇ ದೃಷ್ಟಾರನಾಗಿ ರಾಜರ್ಷಿ ಎನ್ನಿಸಿಕೊಂಡಿದ್ದಾನೆ ಮುಂದಿನ ಋಕ್ಕನ್ನು ಶಶ್ವತೀ ಹೇಳಿಕೊಂಡಿರುವುದರಿಂದ ಅದು ಆಕೆಯ ಋಕ್ಕಾಗಿದೆ. 

ಸ್ತುಹಿ ಸ್ತುಹೀದೇತೇ ಘಾ ತೇ ಮಂಹಿಷ್ಠಾಸೋ ಮಘೋನಾಂ |
ನಿಂದಿತಾಶ್ವಃ ಪ್ರಪತೀ ಪರಮಜ್ಯಾ ಮಘಸ್ಯ ಮೇಧ್ಯಾತಿತೇ ||
ಮೇಧಾತಿಥಿಯೇ ನೀನು ಪುರುಷರಿಗೆ ಬೇಕಾಗಿರುವ ಪೌರುಷದ ಸಂಪತ್ತನ್ನು ನೀಡುವವನಾಗಿದ್ದಿಯೇ, ನಿನಗೆ ಯಥೋಚಿತವಾದ ದಾನವನ್ನು ನಾವೇ ಮಾಡುತ್ತೇವೆ. ನನ್ನ ಅವಹೇಳನದ ಸಂದರ್ಭದಲ್ಲಿ ನನ್ನನ್ನು ಪಾರು ಮಾಡಿದವನು ನೀನು ನಿನ್ನಿಂದ ನನ್ನ ಅಭಿವೃದ್ಧಿಯಾಯಿತು ಎಂದು ಹೇಳಿಕೊಂಡಿದ್ದಾನೆ. ಮೇಧಾತಿಥಿಯೂ ಸಹ ಆಸಂಗನನ್ನು ಹೊಗಳಿದ್ದಾನೆ. ಪ್ಲಯೋಗ ಪುತ್ರನಾದ ಆಸಂಗನು ಈ ಕಾರ್ಯಕ್ಕೆ ಹತ್ತು ಸಾವಿರ ಗೋವುಗಳನ್ನು ನೀಡಿದ್ದಾನೆ ಎಂದು ಅಭಿನಂದಿಸಿದ್ದಾನೆ. ಹಾಗೆಯೇ ಮುಂದಿನ ಋಕ್ಕಿನಲ್ಲಿ ಶಶ್ವತೀ ತನ್ನ ಗಂಡ ಆಸಂಗನ ದೈಹಿಕ ನ್ಯೂನತೆಯನ್ನು ಹೇಳಿಕೊಂಡಿದ್ದಾಳೆ. ಅದು ಇಲ್ಲಿ ಬರೆಯಲು ನನಗೂ ಸಾಧ್ಯವಿಲ್ಲದಿರುವುದರಿಂದ ಅಲ್ಲಿ ಆಕೆ ವಿವಾಹದ ದಿನ ಕಂಡದ್ದಕ್ಕಿಂತ ಭಿನ್ನವಾಗಿ ಆಕೆ ತನ್ನ ಪತಿಯನ್ನು ಹೊಗಳಿದ್ದಾಳೆ. ಆತನ ಅಂಗಗಳನ್ನೂ ಹೊಗಳಿ ಮೇಧಾತಿಥಿಯನ್ನು ಅಭಿನಂದಿಸಿದ್ದಾಳೆ.

ಇನ್ನು ಇಲ್ಲಿ ವೈದ್ಯಕೀಯ ವಿಚಾರ ಹೇಗೆ ಎಂದರೆ, ಹುಟ್ಟುತ್ತಾ ಆತ ಪುರುಷನಾಗಿದ್ದ, ಮಧ್ಯದಲ್ಲಿ ಆತನಿಗೆ ಸ್ತ್ರೀತ್ವ ಪ್ರಾಪ್ತಿಯಾಗುತ್ತದೆ. ಮುಂದೆ ಆತ ಅದರಿಂದ ಗುಣಮುಖನಾಗಿ ಪುನಃ ಸಮರ್ಥನಾದ ಪುರುಷನಾಗುತ್ತಾನೆ. ಅಂದರೆ(ಪ್ರಾಯಶಃ ಹಾರ್ಮೋನ್ ವ್ಯತ್ಯಯ ಆಗಿರಬಹುದು) ಅದು ವಾಸಿಯಾಗುವ ಸ್ಥಿತಿ ಎನ್ನುವುದನ್ನು ಅಂದು ಕಂಡುಕೊಂಡಿದ್ದಿರಬಹುದು. ಮೇಧಾತಿಥಿ ಇಲ್ಲಿ ಮನೋವೈಜ್ಞಾನಿಕ ಹಂತದ ಶಕ್ತಿಯಿಂದ ಸಹ ಸರಿಪಡಿಸಿರಲೂ ಬಹುದು ಅಥವಾ ಯಾವುದೋ ಒಂದು ಪದ್ಧತಿಯಿಂದ ಸರಿಪಡಿಸಿರಬಹುದು. ಅದು ನಮಗೆ ಮುಖ್ಯವಾಗುವುದಿಲ್ಲ. ಇಲ್ಲಿ ಬೇಕಾಗಿದ್ದು ದೈಹಿಕ ನ್ಯೂನತೆಯನ್ನು ಸರಿಪಡಿಸಬಹುದೆನ್ನುವುದು ಮಾತ್ರ. 

#ಆಸಂಗನ_ದೈಹಿಕ_ನ್ಯೂನತೆ 
ಸದ್ಯೋಜಾತರು

ಮಹಾಸಂಕಲ್ಪ

ಮಹಾಸಂಕಲ್ಪ

ಜಗತ್ತಿನ ಯಾವ ದೇಶವೂ ತನ್ನ ಪರಂಪರೆಯನ್ನು. ಪ್ರಾಚೀನತೆಯನ್ನು ಮತ್ತು ಕಾಲಮಾನವನ್ನು ನೆಯುತ್ತಿರಲಿಕ್ಕಿಲ್ಲ. ಆದರೆ ನಮ್ಮ ಮಣ್ನಿನ ಗುಣವೇ ಹಾಗೆ ನಾವು ಕಾರ್ಯಾರಂಭಕ್ಕು ಮೊದಲು ಪರಂಪರೆಯನ್ನು ನೆನೆಯುವುದು ಕೃತಜ್ಞತೆಯ ಪ್ರತೀಕವೂ ಹೌದು, ನಮ್ಮ ಸಂಸ್ಕೃತಿಯೂ ಹೌದು. ಅದೇ ದೇಶ ಭಕ್ತಿ!

  ನಮ್ಮ ಪ್ರಾಚೀನರಿಗೆ ಇದ್ದ ಆಸ್ಥೆ ಅಪಾರವಾದದ್ದು. ಮುಂದಿನ ಪೀಳಿಗೆಯವರಿಗೆ ತಮ್ಮ ಪರಂಪರೆಯನ್ನು ಬಿಟ್ಟುಕೊಡುವಲ್ಲಿ ಕೊಟ್ಟ ಕೊಡುಗೆ ಅಪಾರ. ಅಂತವುಗಳಲ್ಲಿ ವಿಶೇಷ ಶುಭ ಸಂದರ್ಭಗಳಲ್ಲಿನ ಮಹಾ ಸಂಕಲ್ಪ ಒಂದು. ಪ್ರಾಚೀನ ಕಾಲದಿಂದ ಇಂದಿನ ತನಕವೂ ಬಂದ ಈ ಮಹಾ ಸಂಕಲ್ಪವು ಶುಭಸಮಾರಂಭಗಳಾದ ವಿವಾಹಗಳೇ ಮೊದಲಾದ ಎಲ್ಲಾ ಶುಭಸಮಾರಂಭಗಳಲ್ಲಿ ಈ ನೆಲದ ಎಲ್ಲಾ ವರ್ಗದವರೂ ಮಹಾಸಂಕಲ್ಪವನ್ನು ಅನುಸರಿಸುತ್ತಾರೆ. ಇಂತಹ ಮಹಾ ಸಂಕಲ್ಪದ ಉದ್ದೇಶವೇ ನಮ್ಮ ಈ ಪುಣ್ಯ ಭೂಮಿಯ ಸ್ಮರಣೆ ಮತ್ತು ನಾವು ಅದಕ್ಕೆ ಕೊಡುವ ಗೌರವ. ಅಂದರೆ ನಮ್ಮ ರಾಷ್ಟ್ರ ಭಕ್ತಿಯ ನಿವೇದನೆ. ಈ ಮಹಾಸಂಕಲ್ಪದಿಂದ ನಾವು ವಾಸಿಸುವ ಭೂಮಿಯನ್ನು ದೈವತ್ವಕ್ಕೇರಿಸಿಕೊಂಡಿದ್ದೇವೆ. ನಮ್ಮ ಋಷಿಗಳು, ಪೂರ್ವಜರು ಈ ನೆಲದ ಭೌಗೋಳಿಕ ಪರಿಸರದ ಮತ್ತು ಕಾಲಮಾನದ ಸ್ಮರಣೆಯನ್ನು ಸ್ಮರಿಸುವುದರ ಜೊತೆಗೆ ನಮ್ಮ ಪ್ರಾಚೀನರ ಸ್ಮರಣೆಯನ್ನು ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಮಾಡುತ್ತಿರಲಿ ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದರು. ಪ್ರಾಚೀನರ ಸಾಧನೆಯನ್ನು ಆಧುನಿಕ ಸಂಶೋದನೆ ಮತ್ತು ಸಾಧನೆಗಳ ಜೊತೆಗೆ ಮುಂದುವರೆಸಲಿ ಎನ್ನುವ ಆಶೆ ಅವರದ್ದಾಗಿತ್ತು. ಅಂದರೆ ನಮ್ಮ ಪಾರಂಪರಿಕ ಸಾಲಿನಲ್ಲಿಯೇ ಉಳಿದು ನಮ್ಮ ವಂಶವನ್ನು ಸ್ಮರಿಸಲಿ ಎನ್ನುವ ಉದ್ದೇಶವಾಗಿತ್ತು. ಆದರೆ ಇಂದು ನಾವು ನಮ್ಮ ಪೂರ್ವಜರಲ್ಲಿದ್ದ ದೇಶಭಕ್ತಿಯ ನೂರರಲ್ಲಿ ಒಂದು ಗುಣದಷ್ಟೂ ಸಹ ಹೊಂದಿಲ್ಲದಿರುವುದು ವಿಷಾದನೀಯ. ನಾವೇನಾದರೂ ಅವರ ಸಾಲಿನಲ್ಲಿಯೇ ಮುಂದುವರಿದಿದ್ದರೆ ನಮ್ಮ ಪ್ರಾಚೀನರು ನಮಗೆ ಕೊಟ್ಟ ಕಾಲಮಾನ ಮತ್ತು ಸಂಸ್ಕೃತಿಯ ಪ್ರಾಚೀನತೆ ಸುಲಭವಾಗಿ ಸಿಗುತ್ತಿತ್ತು. ಆದರೆ ನಾವು ವಿದೇಶೀ ವಿದ್ವಾಂಸರು ನೀಡಿದ ಕಾಲ್ಪನಿಕ ಲೆಕ್ಕಾಚಾರದ ಹೊಂದಾಣಿಕೆಯನ್ನೇ ಸತ್ಯವೆಂದು ಭ್ರಮಿಸಿ ಅದನ್ನೇ ನಮ್ಮ ಹಿಂದಿನ ಕಾಲಮಾನ ಮತ್ತು ಮುಂದಿನ ಕಾಲಮಾನವೆಂದು ತಪ್ಪಾಗಿ ಗಣಿಸುತ್ತಿದ್ದೇವೆ. ವಿದೇಶೀ ಪ್ರಭಾವದಿಂದ ಪ್ರಾಚೀನರ ಬದುಕನ್ನು ಅರಿಯುವ ಗೊಡವೆಗೆ ನಾವು ಹೋಗಲೇ ಇಲ್ಲ. ಪರಮಾತ್ಮನ ಅಸ್ತಿತ್ವದ ಬ್ರಹ್ಮಾಂಡದಲ್ಲಿ ಭಾರತ ಒಂದು ನಿರ್ದಿಷ್ಟ ಪ್ರದೇಶವನ್ನು ಹೊಂದಿದ್ದರೂ ಭರತವರ್ಷ ಎನ್ನುವ ಹೆಸರಿನಿಂದ ಕರೆಸಿಕೊಂಡಿದೆ. ಮಹಾಸಂಕಲ್ಪದಲ್ಲಿ ಪರಮಾತ್ಮನ ಸೃಷ್ಟಿಯ ಹದಿನಾಲ್ಕು ಲೋಕಗಳನ್ನು ನಾವು ಸ್ಮರಿಸಿಕೊಳ್ಳಬೇಕಿತ್ತು ಆದರೆ ಇಂದು ಆ ಅಂಶಗಳೆಲ್ಲ ಬಿಟ್ಟು ಹೋಗಿದ್ದು, ಭರತವರ್ಷ ಮತ್ತು ಭರತಖಂಡ ಮಾತ್ರವೇ ಉಳಿದುಕೊಂಡಿದೆ. 

ಅಷ್ಟದಿಕ್ಪಾಲಕರು, ಅವರ ವಾಸಸ್ಥಾನಗಳು, ಈ ಭೂಮಿಯ ಮೇಲೆ ಇರುವ ಸಪ್ತದ್ವೀಪಗಳು, ಅಖಂಡ ಭೂಗೋಲದ ನವ ಖಂಡಗಳು, ನವವರ್ಷಗಳೊಂದಿಗೆ ಇಲ್ಲಿನ ಪರಿಸರದ ಪರ್ವತಗಳನ್ನು ಮತ್ತು ಈ ಭರತವರ್ಷದಲ್ಲಿನ ಪವಿತ್ರ ನದಿಗಳ ಸ್ಮರಣೆ, ಈ ಪವಿತ್ರ ಭೂಮಿಯನ್ನು ಆಳಿದ ಹಿಂದಿನ ಮತ್ತು ಇಂದಿನ ಚಕ್ರವರ್ತಿಗಳ ಸ್ಮರಣೆಯನ್ನು ಮಹಾಸಂಕಲ್ಪದಲ್ಲಿ ನೆನೆಸಿಕೊಳ್ಳುವುದು ನಮ್ಮ ಸ್ಮೃತಿಪಟಲದಲ್ಲಿ ನಮ್ಮ ದೇಶದ ಬಗೆಗಿನ ಭಕ್ತಿ ಭಾವ ಸದಾ ಜಾಗ್ರತವಾಗಿ ನೆಲೆಗೊಳ್ಳಲಿ ಎಂದು. ನಾವು ಮಹಾಸಂಕಲ್ಪದಲ್ಲಿ ಭರತ ಎಂದು ಸಂಕಲ್ಪಿಸಿಕೊಂಡಾಗ ಅದು ಭರತವರ್ಷ ಎನ್ನುವುದು ಸ್ಪಷ್ಟವಾಗುತ್ತದೆ. ಇದರ ಜೊತೆಗೆ ನಾವು ಕಲ್ಪಗಳನ್ನು, ಮನ್ವಂತರ ಮತ್ತು ಮನುಗಳನ್ನು, ಅವತಾರಗಳನ್ನು ಮತ್ತು ಪ್ರಸ್ತುತ ಶಖೆಯ ಜೊತೆ ದಿನಚರಿ(ಸಂವತ್ಸರ, ಋತು, ಮಾಸ, ಪಕ್ಷ, ತಿಥಿ, ನಕ್ಷತ್ರ, ವಾರ) ಹೇಳಿ ಅಂತಿಮ ಗೊಳಿಸುತ್ತಾ ಮುಂದಿನ ವಿಧಿಗಳನ್ನು ಆರಂಭಿಸುವುದು ಮಹಾಸಂಕಲ್ಪಕ್ಕಿರುವ ಮಹತ್ವ ಗೊತ್ತಾಗುತ್ತದೆ. ಅಥವಾ ಮುಂದಿನ ಪವಿತ್ರ ಕಾರ್ಯವನ್ನು ನಿರ್ಧರಿಸುತ್ತದೆ. ಇಂತಹ ಮಹೋನ್ನತ ಸಂಪ್ರದಾಯವನ್ನು ನಾವು ಕಾಲಾನುಕಾಲಕ್ಕೆ ಪರಂಪರೆಯಿಂದ ಪರಂಪರೆಗೆ ಕೈ ಬಿಡುತ್ತಾ ಬಂದಿದ್ದೇವೆ. ಜಗತ್ತಿನ ಯಾವ ದೇಶವೂ ಸಹ ಇಂತಹ ಸಂಪ್ರದಾಯ ಹೊಂದಿರುವುದು ಸಿಗಲಾರದು. ಬ್ರಹ್ಮನಿಂದ ಅಥವಾ ಜಗತ್ತಿನ ಸೃಷ್ಟಿಯಿಂದ ಇಂದಿನ ತನಕದ ಮರು ನೆನಪನ್ನು ವಿಶೇಷ ಸಂದರ್ಭ ಮತ್ತು ನಿತ್ಯ ಸಂಕಲ್ಪಗಳಲ್ಲಿ ಮಾಡುವುದರಿಂದ ನಮ್ಮ ಸಂಸ್ಕೃತಿಯನ್ನು ಸಂಸ್ಕಾರವನ್ನು ಜೀವಂತ ಇಟ್ಟಂತಾಗುತ್ತದೆ. ಇಂತಹ ಪವಿತ್ರ ಸಂಸ್ಕಾರವನ್ನು, ಪರಂಪರೆಯನ್ನು ಕೊಟ್ಟ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು. ನಮ್ಮ ಪ್ರಾಚೀನರ ಇತಿಹಾಸವನ್ನು ನಾವು ನೆನೆಯಲು ಮಾಡಿಕೊಂಡ ವ್ಯವಸ್ಥೆ ನಮ್ಮ ಪ್ರಾಚೀನತೆಯನ್ನು ಜೀವಂತವಿಡುತ್ತದೆ ಎನ್ನಬಹುದು. ಇವುಗಳು ಇಂದು ಗೇಲಿಗೆ ಒಳಗಾಗಿವೆ. ಪ್ರಾಚೀನತೆಯಿಂದ ಕ್ರಮೇಣ ಇವುಗಳ ಸ್ವರೂಪ ಬದಲಾಗಿದೆ ನಾವು ನಿತ್ಯ ಸಂಕಲ್ಪವನ್ನೇ ವಿಶೇಷ ಸಂಕಲ್ಪಗಳಲ್ಲಿ ಬಳಸಿ ಮಹಾಸಂಕಲ್ಪದ ಸ್ವರೂಪ ನಿತ್ಯಸಂಕಲ್ಪದ ರೂಪಕ್ಕೆ ಜಾರಿದೆ. ಪರಂಪರೆಯಿಂದ ಬಂದಿರುವುದನ್ನು ಉಳಿಸಿಕೊಂಡು ಬರಬೇಕಾದದ್ದು ನಮ್ಮೆಲ್ಲರ ಹೊಣೆ ಆದರೆ ಆಧುನಿಕತೆಯ ಭರಾಟೆ, ದಿನದಿಂದ ದಿನಕ್ಕೆ ಮನುಷ್ಯರ ಜೀವನ ಶೈಲಿಯ ಬದಲಾವಣೆ, ಕೆಲಸದ ಒತ್ತಡ. ಸಾಮಾಜಿಕ ಜಾಲತಾಣಗಳ ಅತೀ ವ್ಯಾಮೋಹ ಮುಂದೊಂದು ದಿನ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನೆ ಸೀಮಿತಗೊಳಿಸಬಹುದೇನೋ ಅನ್ನಿಸುತ್ತದೆ. 

#ಪ್ರಾಚೀನತೆಯಿಂದ_ವರ್ತಮಾನಕಾಲ 
ಸದ್ಯೋಜಾತರು

ಪಾದಪೂಜೆಯ ಮಾಡಿ, ಅಂಗುಷ್ಟವೆರಡು ಅಂಗುಲವೆಂಟು

೧೩೪೪

ಪಾದಪೂಜೆಯ ಮಾಡಿ, ಅಂಗುಷ್ಟವೆರಡು ಅಂಗುಲವೆಂಟು ಉಭಯಹಸ್ತದಲ್ಲಿ ಮಾಡಿಕೊಂಬುದೆ ಶಿಕ್ಷಾಪಾದೋದಕ, ಲಿಂಗಧಾರೀ ಮಹಾಯೋಗಿ ಚರಪಾದೋದಕಂ ವಿನಾ ದಿನೇನ ದಶಜನ್ಮಾನಿ ಮಾಸೇನ ಶತಜನ್ಮಸು |
ವರ್ಷೇ ಸಹಸ್ರಜನ್ಮಾನಿ ವರ್ಷಾರ್ಧೇ ಘೂಕವಾಯಸೌ ।
 ದ್ವಿವರ್ಷೇ ನೌಕರೇ ಗರ್ಭೇ ಜಾಯತೇ ನಾತ್ರ ಸಂಶಯಃ || ಎಂದುದಾಗಿ
ಆ ಶಿಕ್ಷಾಪಾದೋದಕವನೆ ಆ ವಿಭೂತಿಯಲ್ಲಿ ಸಮ್ಮಿಶ್ರವ ಮಾಡಿ ಲಲಾಟ ಮೊದಲಾದ ನಾಲ್ವತ್ತೆಂಟು ಸ್ಥಾನಗಳಲ್ಲಿ ಧಾರಣವ ಮಾಡುವುದು

ಇದು ವೀರಶೈವರಿಗೆ ಸಲ್ಲುವ ನಡತೆ,

ಶುದ್ಧಶೈವರಿಗೆ ಗಿಂಡಿಯಲ್ಲಿ ತುಂಬುವ ನಡತೆ, ವಿಶೇಷವೀರಶೈವರು ಗಿಂಡಿಯ ಮಾಡಲಾಗದು.

ಅದೇನು ಕಾರಣವೆಂದಡೆ: ಅವರಿಗೆ ತ್ರಿವಿಧ ಪಾದೋದಕವು

ನಿತ್ಯದ ಸಹಬಂಧವಾಗುವುದೆಂದು

ಇದನರಿದು ಆಚರಿಸುವಾತನೆ ನಿತ್ಯಮುಕ್ತನಯ್ಯ ಕೂಡಲಚೆನ್ನಸಂಗಮದೇವಾ.

ಅಲ್ಲಮಪ್ರಭು

July 17, 2021

‌ದಕ್ಷಿಣಾಯಣ ಪುಣ್ಯಕಾಲ – ಕರ್ಕಾಟಕ ಸಂಕ್ರಮಣ

🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌     ‌         ‌            ‌                 ‌                   ‌    ‌                                                       *‌ದಕ್ಷಿಣಾಯಣ ಪುಣ್ಯಕಾಲ – ಕರ್ಕಾಟಕ ಸಂಕ್ರಮಣ*
                                                              ‌                                                                  "ದಕ್ಷಿಣಾಯಣ ಪರ್ವಕಾಲವೆಂದರೇನು?"
                                                                                                                ಮಾನವನ ಒಂದು ವರ್ಷ ದೇವತೆಗಳ ಒಂದು ದಿನಕ್ಕೆ ಸಮ.  ದೇವತೆಗಳಿಗೆ ಉತ್ತರಾಯಣ ಹಗಲಾದರೆ ದಕ್ಷಿಣಾಯಣ ರಾತ್ರಿ ಕಾಲ.


ಉತ್ತರಾಯಣ ಸಾಮಾನ್ಯವಾಗಿ ಜನವರಿ 14, 15ರಂದು ಬರುತ್ತದೆ.  ದಕ್ಷಿಣಾಯಣ ಸಾಮಾನ್ಯವಾಗಿ ಜುಲೈ 15, 16,  ಅಥವಾ 17 ಬರುತ್ತದೆ.
 ‌                                                                                                   *ದಕ್ಷಿಣಾಯಣ ಅಥವಾ ಉತ್ತರಾಯಣ ಯಾವುದೇ ತಿಥಿಗೆ ಸಂಬಂಧಿಸಿದ್ದಲ್ಲ*
                                                                                                       ಸೂರ್ಯ ಕರ್ಕರಾಶಿಯನ್ನು ಪ್ರವೇಶಿಸುತ್ತಾನೆ.   “ತ್ರಿಂಶತಿ ಕರ್ಕಾಟಕೇ ಪೂರ್ವೇ”, ಸೂರ್ಯ ಕರ್ಕರಾಶಿಯನ್ನು ಪ್ರವೇಶಿಸುವ  30 ಘಳಿಗೆ ಮುನ್ನ ಅಂದರೆ ಉತ್ತರಾಯಣದಲ್ಲೇ ಪರ್ವಕಾಲವುಂಟಾಗುತ್ತದೆ.  ಆದ್ದರಿಂದ ಈ ಪರ್ವ ಕಾಲದಲ್ಲೇ ಸ್ನಾನ, ತರ್ಪಣ, ದಾನ ಕೊಡತಕ್ಕದ್ದು.  (ಒಂದು ಘಳಿಗೆ ಅಂದರೆ 24 ನಿಮಿಷ. ಅರ್ಥಾತ್  30 x 24 = 720 ನಿಮಿಷ.  720/60 = 12  ಘಂಟೆ)
 
ದಕ್ಷಿಣಾಯಣ ಪುಣ್ಯಕಾಲ ತರ್ಪಣ ಸಂಕಲ್ಪ :-
೧.  ಆಚಮನ
೨.  ಪವಿತ್ರ ಧಾರಣ (ಪವಿತ್ರ ಮಾಡಲು ಬರದಿದ್ದರೆ ಪವಿತ್ರದ ಉಂಗುರವಿದ್ದರೂ ಪರವಾಗಿಲ್ಲ)
೩.  ಪುನರಾಚಮನ
೪.  ಪ್ರಾಣಾಯಾಮ
ನಂತರ ಸಂಕಲ್ಪ —
ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಅದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೂದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ______ನಾಮ ಸಂವತ್ಸರೇ, ದಕ್ಷಿಣಾಯನೇ, _____ಋತು, ______ಮಾಸೇ, ____ಪಕ್ಷೇ, _____ತಿಥೌ, _____ನಕ್ಷತ್ರೇ, ____ ಯೋಗೇ, ____ಕರಣೇ, _____ವಾಸರಯುಕ್ತಾಯಂ, ಪಿತ್ರಾದಿ ಸಮಸ್ತ ಪಿತ್ರೂಣಾಂ ಅಂತರ್ಗತ, ಮನುನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ., (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ –
೧. ಪಿತೃ, ಪಿತಾಮಹ, ಪ್ರಪಿತಾಮಹ
೨. ಮಾತೃ, ಪಿತಾಮಹಿ, ಪ್ರಪಿತಾಮಹಿ
೩. ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ
೪. ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ
ಈ ಮೇಲ್ಕಂಡ ೧೨ ಜನಕ್ಕೂ ತರ್ಪಣ ಕೊಡಬೇಕು.  (ಅಕಸ್ಮಾತ್ ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಟ್ಟು)
ಅವತ್ತು ಏಕಭುಕ್ತನಾಗಿರಬೇಕು. ಬೆಳಿಗ್ಗೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು,
ದಕ್ಷಿಣಾಯನ ಪರ್ವಕಾಲ ಸಮಯದವರೆಗೂ ಉಪವಾಸವಿದ್ದು, ಪರ್ವಕಾಲ ಬಂದ ಮೇಲೆ ಸ್ನಾನಾದಿಗಳನ್ನು ಮಾಡಿ) ನಂತರ ತರ್ಪಣ ಕೊಡಬೇಕು. ‌  ‌     ‌    ‌    ‌            ‌                  ‌      ‌            ‌      ‌                                                       ‌ *ದಕ್ಷಿಣಾಯಣ ಪುಣ್ಯಕಾಲದ ಮಹತ್ವ*

ಜುಲೈ 16ರಿಂದ ದಕ್ಷಿಣಾಯಣ ಪುಣ್ಯಕಾಲ ಆರಂಭವಾಗುತ್ತದೆ. ಶಾಸ್ತ್ರದ ರೀತ್ಯ ದಕ್ಷಿಣಾಯಣ ಪುಣ್ಯಕಾಲದ ಮಹತ್ವ ಏನಿರಬಹುದು ನೋಡೋಣ.
    
ನಮ್ಮ ಪಂಚಾಂಗಗಳ ಪ್ರಕಾರ ಸಂವತ್ಸರವನ್ನು ಎರಡು ಭಾಗವಾಗಿ ಗುರುತಿಸಲಾಗಿದೆ. ಅದೆಂದರೆ, ಉತ್ತರಾಯಣ ಮತ್ತು ದಕ್ಷಿಣಾಯಣ. ರವಿ ಗ್ರಹ ಮಕರ ರಾಶಿಗೆ ಪ್ರವೇಶಿಸಿದ ಆರು ತಿಂಗಳ ಕಾಲ ಅಂದರೆ ಕುಂಭ, ಮೀನ, ಮೇಷ, ವೃಷಭ, ಮಿಥುನ ರಾಶಿಯಲ್ಲಿದ್ದು ಸಾಮಾನ್ಯವಾಗಿ 15 ಅಥವಾ 16ರ ಜುಲೈ ತಿಂಗಳಲ್ಲಿ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾಲವನ್ನು ದಕ್ಷಿಣಾಯಣ ಪುಣ್ಯಕಾಲ ಎನ್ನುತ್ತಾರೆ. ಬಹುತೇಕರಲ್ಲಿ ಒಂದು ತಪ್ಪು ಅಭಿಪ್ರಾಯವಿದೆ. ಉತ್ತರಾಯಣ ಸ್ವರ್ಗದ ಬಾಗಿಲು ತೆರೆಯುವ ಕಾಲವಾದರೆ ದಕ್ಷಿಣಾಯನ ಆ ಬಾಗಿಲನ್ನು ಮುಚ್ಚುವ ಕಾಲ ಎನ್ನುತ್ತಾರೆ. ಅದು ಸರಿಯಲ್ಲ. ನಮ್ಮ ಶಾಸ್ತ್ರಗಳು ದಕ್ಷಿಣಾಯನ ಕಾಲವನ್ನು ನಮ್ಮ ಶಾಸ್ತ್ರಗಳು ಪರಮಪುಣ್ಯ ಸಂಚಯನ ಕಾಲ ಎಂದು ಅಭಿಪ್ರಾಯಿಸುತ್ತವೆ. ಕಾರಣ ಈ ಸಮಯದಲ್ಲಿ ಸಾಕಷ್ಟು ಮಹತ್ತರ ಘಟನೆಗಳು ಸಂಭವಿಸಿವೆ. ಅವೆಂದರೆ, ದಾಕ್ಷಾಯಿಣಿ ಪುನರ್‌ಜನ್ಮ ಪಡೆದು ಪರ್ವತರಾಜನ ಮಗಳಾಗಿ ಜನಿಸಿ ಪಾರ್ವತಿಯಾದದ್ದು. ಶಿವನನ್ನು ತಪಸ್ಸಿನಿಂದ ಮೆಚ್ಚಿಸಿ ಅವನನ್ನು ವಿವಾಹವಾದ ಸಮಯವಿದು. ಗಣಪತಿಯ ಜನನವಾದದ್ದು ದಕ್ಷಿಣಾಯಣದ ಭಾದ್ರಪದ ಮಾಸದಲ್ಲಿ. ದ್ವಾಪರಯುಗದಲ್ಲಿ ಶ್ರೀಕೃಷ್ಣ ಜನಿಸಿದ್ದು ಶ್ರಾವಣ ಮಾಸದಲ್ಲಿ. ಭೂದೇವಿಯ ಮಗನಾದ ನರಕಾಸುರನನ್ನು ಶ್ರೀಕೃಷ್ಣ ಸಂಹರಿಸಿದ್ದು ಕಾರ್ತಿಕ ಮಾಸದಲ್ಲಿ. ಮಹಾವಿಷ್ಣು ವರಾಹ ಅವತಾರವನ್ನು ತಾಳಿದ್ದು ದಕ್ಷಿಣಾಯನದಲ್ಲಿ. ಬಲಿ ಪಾಡ್ಯಮಿ ಸಹ ಈ ಸಮಯದಲ್ಲೇ ಬರುತ್ತದೆ. ‌      ‌                    ‌                 ‌              ‌      ‌                                                                                   *ಕಟಕ ಸಂಕ್ರಮಣ* :  ಜುಲೈ ‌16, 2021 ಶುಕ್ರವಾರ ಸಂಜೆ‌ 04:52 pm.

ಸನಾತನ ವೀರಶೈವ ಧರ್ಮಕ್ಕೆ " ಮಹಾಚಾರ್ಯರ / ಶಿವಾಚಾರ್ಯರ ಕೊಡುಗೆ

" ಸನಾತನ ವೀರಶೈವ ಧರ್ಮಕ್ಕೆ "                       ಮಹಾಚಾರ್ಯರ / ಶಿವಾಚಾರ್ಯರ ಕೊಡುಗೆ

ಸನಾತನ ವೀರಶೈವ ಧರ್ಮದ  ಸಂಸ್ಥಾಪನೆಯಲ್ಲಿ  ಪಂಚ ಪೀಠಗಳ  ಪರಮಾಚಾರ್ಯರ ಹಾಗೂ ಅದರ  ಸಂವರ್ಧನೆಯಲ್ಲಿ ಅವುಗಳ  ಶಾಖಾ ಮಠಗಳ  ಶಿವಾಚಾರ್ಯರ  ಕೊಡುಗೆ ಅಪಾರ. ಇದನ್ನು ಪ್ರತಿಯೊಬ್ಬರೂ ತಿಳಿದುಕೊಂಡು  ಪೀಠಾಚಾರ್ಯರು,  ಶಿವಾಚಾರ್ಯರು ಹಾಗೂ  ಸದ್ಭಕ್ತರು ಆ   ಮಹಾಚಾರ್ಯರ ಮತ್ತು  ಶಿವಾಚಾರ್ಯರ  ಸಂಸ್ಮರಣೋತ್ಸವವನ್ನು ಆಚರಿಸುವ ಪರಂಪರೆಯನ್ನು ಬೆಳೆಸಿಕೊಂಡು ಹೋಗಬೇಕಾಗಿದೆ ಆ ನಿಟ್ಟಿನಲ್ಲಿ ಚಿಂತಿಸುವದಕ್ಕಾಗಿ  ಈ ಲೇಖನ. 
     ಪಂಚ ಪೀಠಗಳ ಪರಮಾಚಾರ್ಯರಾದ  ಏಕಾಕ್ಷರ    , ದ್ವ್ಯಕ್ಷರ, ತ್ರ್ಯಕ್ಷರ, ಚತುರಕ್ಷರ, ಪಂಚಾಕ್ಷರ ಶಿವಾಚಾರ್ಯ  ಭಗವತ್ಪಾದರು  ಕೃತಯುಗದಲ್ಲಿ  ಮತ್ತು  ಏಕವಕ್ತ್ರ ,ದ್ವಿವಕ್ತ್ರ ತ್ರಿವಕ್ತ್ರ ಚತುರ್ವಕ್ತ್ರ ಪಂಚವಕ್ತ್ರ ಭಗವತ್ಪಾದರು  ತ್ರೇತಾಯುಗದಲ್ಲಿ ಸುರರಿಗೆ ಹಾಗೂ  ಅಸುರರಿಗೆ  ರತ್ನಮಯ  ಲಿಂಗ ಧಾರಣೆಯನ್ನು ಮಾಡಿ  ವೇದಾಗಮಗಳ ಆಧಾರದಿಂದ ಅವರಿಗೆ   ಲಿಂಗಾಂಗ  ಸಾಮರಸ್ಯವನ್ನು  ಬೊಧಿಸುವ ಮೂಲಕ  ವೀರಶೈವ  ಧರ್ಮವನ್ನು  ಪ್ರತಿಷ್ಠಾಪಿಸಿದ್ದರು. ಮುಂದೆ  ದ್ವಾಪರ ಯುಗದಲ್ಲಿ  ಅವರೇ 
       ರೇಣುಕ ,ದಾರುಕ ,ಘಂಟಾಕರ್ಣ, ಧೇನುಕರ್ಣ ಮತ್ತು  ವಿಶ್ವಕರ್ಣ ಆಚಾರ್ಯರೆಂಬ ನಾಮದಿಂದ ಭೂಲೋಕದಲ್ಲಿ ಲಿಂಗೋದ್ಭವರಾಗಿ ಅವತರಿಸಿ  ಕ್ರಮವಾಗಿ ಅಗಸ್ತ್ಯ,  ದಧೀಚಿ, ವ್ಯಾಸ , ಸಾನಂದ ಹಾಗೂ  ದೂರ್ವಾಸ  ಮಹರ್ಷಿಗಳಿಗೆ  ಪಡ್ವಿಡಿ,  ವೃಷ್ಟಿ, ಲಂಬನ, ಮುಕ್ತಾಗುಚ್ಛ ಮತ್ತು  ಪಂಚವರ್ಣ ಸೂತ್ರಗಳನ್ನು  ಉಪದೇಶಿಸಿ ಭೂಲೋಕದಲ್ಲಿ   ವೀರಶೈವ ಧರ್ಮವನ್ನು  ಪ್ರತಿಷ್ಠಾಪಿಸಿದರು.  ಈ ಪಂಚ ಸೂತ್ರಗಳಲ್ಲಿ   ಜೀವ, ಈಶ್ವರ, ಜಗತ್ತು, ಬಂಧ ಮತ್ತು  ಮೋಕ್ಷ ಗಳೆಂಬ ದಾರ್ಶನಿಕ ವಿಚಾರಗಳು ಅತ್ಯಂತ ಸೂಕ್ಷ್ಮವಾಗಿ ವಿವರಿಸಲ್ಪಟ್ಟಿವೆ.  ಅಂತೆಯೇ ಶ್ರೀ  ಜಗದ್ಗುರು  ರೇಣುಕಾದಿ ಪಂಚಾಚಾರ್ಯರು ಜಗತ್ತಿನ ಆದ್ಯ ದಾರ್ಶನಿಕ  ಸೂತ್ರಕಾರರು.                             ಮುಂದೆ ಕಲಿಯುಗವು ಪ್ರಾರಂಭವಾಗಲು ಅದೇ ಆಚಾರ್ಯರು  ರೇವಣಾರಾಧ್ಯ, ಮರುಳಾಧ್ಯ, ಏಕೋರಾಮಾರಾಧ್ಯ, ಪಂಡಿತಾರಾಧ್ಯ ಮತ್ತು  ವಿಶ್ವಾರಾಧ್ಯರೆಂಬ ನಾಮದಿಂದ ಮತ್ತೆ   ಅವತರಿಸಿ  ಪರಂಪರೆಯಿಂದ  ಬಂದ ಪಂಚ ಸೂತ್ರಗಳನ್ನು ಲೋಕದ ಜನರಿಗೆ  ಉಪದೇಶಿಸಿ  ವೀರಶೈವ  ಧರ್ಮದ ಆಚಾರ ವಿಚಾರ  ಸಿದ್ಧಾಂತಗಳನ್ನು ರಕ್ಷಿಸಿಕೊಂಡು ಬಂದರು.
ಕ್ರಿ .ಶ.6 ನೇ ಶತಮಾನದಲ್ಲಿ. ಕಾಶೀ ನರೇಶ ಜಯನಂದ ದೇವನಿಗೆ ಮತ್ತು ನೇಪಾಳದ ಅರಸು  ವಿಶ್ವಮಲ್ಲನಿಗೆ ಧಾರ್ಮಿಕ  ಸಂಸ್ಕಾರವನ್ನು ಕೊಟ್ಟು  ಅವರಿಂದ  ಭೂದಾನ  ಪಡೆದು ಶ್ರೀ ಕಾಶೀ ಪೀಠಕ್ಕೆ  ಐತಿಹಾಸಿಕ ದಾಖಲೆಗಳನ್ನು ಕೊಟ್ಟ ಶ್ರೀ  ಜಗದ್ಗುರು  ಮಲ್ಲಿಕಾರ್ಜುನ ಜಂಗಮ ಜಗದ್ಗುರುಗಳು ಸದಾ ಸ್ಮರಣೀಯರು. ಜೊತೆಗೆ ಅದೇ ಹೆಸರಿನಲ್ಲಿ  ಬಂದ 77 ಜಗದ್ಗುರುಗಳ  ಹಾಗೂ  ನಂತರದ ಶ್ರೀ ಜಗದ್ಗುರು  ವಿಶ್ವೇಶ್ವರ ಶಿವಾಚಾರ್ಯರವರೆಗಿನ  ಒಟ್ಟು  85 ಜಗದ್ಗುರುಗಳ ಧಾರ್ಮಿಕ   ಸಾಮಾಜಿಕ  ಮತ್ತು  ಶೈಕ್ಷಣಿಕ  ಕಾರ್ಯಗಳು ಅವಿಸ್ಮರಣೀಯಗಳು .ಇದೇ ರೀತಿಯಾಗಿ  ರಂಭಾಪುರಿ ಪೀಠದ ಮೂಲ ಆಚಾರ್ಯರಿಂದ  ಶ್ರೀ ಜಗದ್ಗುರು ವೀರ ರುದ್ರಮುನಿ  ಶಿವಾಚಾರ್ಯರ ವರೆಗಿನ ,ಉಜ್ಜಯಿನಿ ಪೀಠದ  ಮೂಲ ಆಚಾರ್ಯರಿಂದ  ಜಗದ್ಗುರು   ಮರುಳಸಿಧ್ಧ  ಶಿವಾಚಾರ್ಯರ ವರೆಗಿನ , ಕೇದಾರ  ಪೀಠದ ಮೂಲ ಆಚಾರ್ಯರಿಂದ  ರಾವಲ್ ಜಗದ್ಗುರು  ಸಿಧ್ಧೇಶ್ವರ ಲಿಂಗ  ಶಿವಾಚಾರ್ಯರ  ವರೆಗಿನ ,ಶ್ರೀ ಶೈಲ ಪೀಠದ ಮೂಲ ಆಚಾರ್ಯರಿಂದ  ಜಗದ್ಗುರು  ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯರ ವರೆಗಿನ,  ಎಲ್ಲ  ಜಗದ್ಗುರುಗಳ   ಧಾರ್ಮಿಕ  ಸಾಮಾಜಿಕ  ಮತ್ತು  ಶೈಕ್ಷಣಿಕ  ಕಾರ್ಯಗಳು ಸದಾ ಸ್ಮರಣೀಯಗಳೇ ಆಗಿವೆ.

ಶಿವಾಚಾರ್ಯರ ಸಾಹಿತ್ಯಸೇವೆ:
     ವೀರಶೈವರ    ಸಾಹಿತ್ಯವು ಬಹುಪಾಲು ಶಿವಾಚಾರ್ಯರಿಂದಲೇ ವಿರಚಿತವಾಗಿದೆ. ಇವರಲ್ಲಿ  ಶಿವಯೋಗಿ  ಶಿವಾಚಾರ್ಯರೇ ಮೊದಲಿಗರೆಂದು  ಹೇಳಬಹುದು. ಇವರು  ಯೋಗಿ ಕುಲ ಚಕ್ರವರ್ತಿಗಳೂ  ನಿಗಮಾಗಮ  ವಿದ್ವಾಂಸರೂ  ಆಗಿದ್ದರು. ಶ್ರೀ  ಜಗದ್ಗುರು  ರೇಣುಕ  ಭಗವತ್ಪಾದರು  ಅಗಸ್ತ್ಯನಿಗೆ  ಬೋಧಿಸಿದ  ಪಡ್ವಿಡಿ ಸೂತ್ರವನ್ನು  ಆಧಾರವಾಗಿಟ್ಟುಕೊಂಡು  ಉಳಿದ  ನಾಲ್ಕು ಸೂತ್ರಗಳ ರಹಸ್ಯಾರ್ಥವನ್ನು ಒಂದೆಡೆ ಸಂಗ್ರಹಿಸುವ ಉದ್ದೇಶದಿಂದ   ರೇಣುಕಾಗಸ್ತ್ಯ ಸಂವಾದ ರೂಪದಲ್ಲಿ  ಒಂದು  ಆಪೂರ್ವವಾದ ಜಾಗತಿಕ  ದಾರ್ಶನಿಕ ಗ್ರಂಥವನ್ನು  ರಚಿಸಿದರು  ಅದುವೇ.           ಶ್ರೀ  ಸಿದ್ಧಾಂತ  ಶಿಖಾಮಣಿ.  
      ವೇದಾಗಮ ಮತ್ತು  ಶೈವ  ಪುರಾಣಗಳಲ್ಲಿ  ಚದಿರಿ ಹೋಗಿದ್ದ ಶಿವಾದ್ವೈತ ಸಿದ್ಧಾಂತದ  ತತ್ವಗಳನ್ನು  ಒಂದೆಡೆ ತಂದು ಒಂದು  ಅಪೂರ್ವವಾದ  ಗ್ರಂಥವನ್ನು  ರಚಿಸಿದ  ಕೀರ್ತಿ  ಶ್ರೀ  ಶಿವಯೋಗಿ  ಶಿವಾಚಾರ್ಯರಿಗೇನೇ  ಸಲ್ಲುತ್ತದೆ.ಒಂದು ವೇಳೆ   ಈ ಗ್ರಂಥ  ಇರದೇ ಹೋಗಿದ್ದರೆ ಷಟ್ ಸ್ಥಲ ಸಿದ್ಧಾಂತದ  ಏಕೊತ್ತರಶತ ಸ್ಥಲಗಳ ವಿಸ್ತಾರವನ್ನು  ತಿಳಿದು ಕೊಳ್ಳಲು  ಸಾಧ್ಯವಾಗುತ್ತಿರಲಿಲ್ಲ. ಅಂತೆಯೇ  ಶ್ರೀ  ಶಿವಯೋಗಿ  ಶಿವಾಚಾರ್ಯರು ಸದಾ  ಸ್ಮರಣೀಯರು. 
     ಅದರಂತೆ ಬ್ರಹ್ಮಸೂತ್ರಗಳಿಗೆ ಮೊಟ್ಟಮೊದಲ  ವೀರಶೈವ ಭಾಷ್ಯವನ್ನು  ಬರೆದ , ಆದಿ ಶಂಕರರ ಸಮಕಾಲೀನರಾದ  ನೀಲಕಂಠ ಶಿವಾಚಾರ್ಯರು . ಆ ಭಾಷ್ಯಕ್ಕೆ  ಕಾರಿಕಾ ರೂಪವಾದ ವ್ಯಾಖ್ಯಾನ  ಉಳ್ಳ ಕ್ರಿಯಾಸಾರ  ಗ್ರಂಥವನ್ನು  ರಚಿಸಿದವರು   ದ್ವಿತೀಯ  ನೀಲಕಂಠ  ಶಿವಾಚಾರ್ಯರು.   ಅದರಂತೆ ಬ್ರಹ್ಮಸೂತ್ರಗಳಿಗೆ      ಶ್ರೀಕರ ಭಾಷ್ಯವನ್ನು  ಬರೆದ  11 ನೇ ಶತಮಾನದ  ಶ್ರೀಪತಿಪಂಡಿತಾರಾಧ್ಯ  ಶಿವಾಚಾರ್ಯರು.  ಈ ಎಲ್ಲ  ಶಿವಾಚಾರ್ಯರು ವೀರಶೈವ ಸಾಹಿತ್ಯವೃಕ್ಷದ  ತಾಯಿಬೇರುಗಳಿದ್ಧಂತೆ. ಅದರಂತೆ ಲಿಂಗಧಾರಣಚಂದ್ರಿಕಯನ್ನು ಬರೆದ ನಂದಿಕೇಶ್ವರ ಶಿವಾಚಾರ್ಯರು,  ಶಿವಾದ್ವೈತ  ಮಂಜರಿಯನ್ನು ರಚಿಸಿದ ಸ್ವಪ್ರಭಾನಂದ  ಶಿವಾಚಾರ್ಯರು,  ಶಿವಾದ್ವೈಪರಿಭಾಷಾ 
ಗ್ರಂಥ ಕಾರರಾದ ಹೂಲಿ ತರ್ಕತೀರ್ಥ ನೀಲಕಂಠ  ಶಿವಾಚಾರ್ಯರು, ಪರಳಿ ವ್ಯಾಜ್ಯವನ್ನು ಗೆದ್ದ   ಚೌಡಯ್ಯದಾನಪುರ  ಪಂ. ವಿರುಪಾಕ್ಷ ಶಿವಾಚಾರ್ಯರು.  ವೀರಶೈವೇಂದುಶೇಖರ ರಚನಾಕಾರರಾದ  ರಂಭಾಪುರಿ ಪೀಠದ  ಜಗದ್ಗುರು  ಶಿವಾನಂದ  ರಾಜೇಂದ್ರ ಶಿವಾಚಾರ್ಯ  ಮಹಾಸ್ವಾಮಿಗಳು  ಅವಿಸ್ಮರಣೀಯರು.    1918 ನೇ ಇಸ್ವಿಯಲ್ಲಿ ಕಾಶೀ ಕ್ಷೇತ್ರದ   ಶ್ರೀ ಜಗದ್ಗುರು  ವಿಶ್ವಾರಾಧ್ಯ ಜ್ಞಾನ ಸಿಂಹಾಸನ ಮಹಾ ಪೀಠದಲ್ಲಿ ನಡೆದ  ಶ್ರೀ  ಜಗದ್ಗುರು  ಪಂಚಾಚಾರ್ಯ  ಮಹಾ ಸಮಾಮೇಲನದಲ್ಲಿ ಸಾನಿಧ್ಯ ವಹಿಸಿ  ಪೀಠ ಮತ್ತು  ಮಠಗಳ ಚರ -ಸ್ಥಿರ ಗಳನ್ನು  ಒಂದು  ಮಾಡುವ ಐತಿಹಾಸಿಕ  ನಿರ್ಣಯವನ್ನು  ತೆಗೆದುಕೊಂಡ  ಅಂದಿನ ರಂಭಾಪುರಿ ಪೀಠದ ಜಗದ್ಗುರು  ಪಂಚಾಕ್ಷರ ಶಿವಾಚಾರ್ಯರು  ಉಜ್ಜಯಿನಿ ಪೀಠದ  ಪರಮ ತಪಸ್ವಿ  ಜಗದ್ಗುರು  ಸಿದ್ಧಲಿಂಗ  ಶಿವಾಚಾರ್ಯ  ಭಗವತ್ಪಾದರು   ಶ್ರೀಶೈಲಪೀಠ  ಜಗದ್ಗುರು  ವೀರಭಿಕ್ಷಾವರ್ತಿ ಶಿವಾಚಾರ್ಯರು  ಕಾಶೀ ಪೀಠದ ಜಗದ್ಗುರು  ಶಿವಲಿಂಗ  ಶಿವಾಚಾರ್ಯರು   ಹಾಗೂ ಅಸ್ವಾಸ್ಥ್ಯದಿಂದ ಅನುಪಸ್ಥಿತರಿದ್ದರೂ ನಿರ್ಣಯಕ್ಕೆ  ಲಿಖಿತ ಸಮ್ಮತಿಯನ್ನು ಕೊಟ್ಟ  ಕೇದಾರ  ಪೀಠದ ರಾವಲ್ ಜಗದ್ಗುರು ವಿಶ್ವಲಿಂಗ ಶಿವಾಚಾರ್ಯರು  ಸದಾ ಸ್ಮರಣೀಯರು.  ಕಾಶೀ ಹಿಂದೂ ವಿಶ್ವವಿದ್ಯಾಲಯಕ್ಕೆ 75 ಎಕರೆ ಭೂದಾನ ಮಾಡಿದ ಕಾಶೀ ಪೀಠದ ಶ್ರೀ  ಜಗದ್ಗುರು  ಶಿವಲಿಂಗ  ಶಿವಾಚಾರ್ಯರ ಶೈಕ್ಷಣಿಕ  ಕೊಡಿಗೆ ಅಪಾರ. 

ಶರಣ ಸಂತತಿಗೆ ಶಿವಾಚಾರ್ಯರ  ಕೊಡುಗೆ. 
------------------------------------------------
      ಕರ್ನಾಟಕದ  ಬಸವಾದಿ ಶರಣರಿಗೆ  ಶಿವಾಚಾರ್ಯರೇ ದೀಕ್ಷಾ ಗುರುಗಳೆಂಬುದು ಕಟು ಸತ್ಯ .
ಕೂಡಲ ಸಂಗಮದ ಸಾರಂಗಮಠದ ಜಾತವೇದಮುನಿ ಶಿವಾಚಾರ್ಯರು  ಬಸವಣ್ಣನವರ   ದೀಕ್ಷಾ ಶಿಕ್ಷಾ ಮತ್ತು ಜ್ಞಾನ ಗುರುಗಳು. ಅದರಂತೆ  ಮಾದರ ಚನ್ನಯ್ಯನಿಗೆ  ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯರು, ಹಾವಿನಹಾಳ ಕಲ್ಲಯ್ಯನಿಗೆ  ರುದ್ರಮುನಿ ಶಿವಾಚಾರ್ಯರು,  ದೇವರ  ದಾಸಿಮಯ್ಯನಿಗೆ  ಚಂದ್ರಗುಂಡ ಶಿವಾಚಾರ್ಯರು,  ನನ್ನಚೋಡನಿಗೆ ಜಂಗಮ ಮಲ್ಲಿಕಾರ್ಜುನ ಶಿವಾಚಾರ್ಯರು ,ಅಕ್ಕಮಹಾದೇವಿಗೆ   ಉಡುತಡಿಯ ಗುರುಲಿಂಗಶಿವಾಚಾರ್ಯರು,  ಉರುಲಿಂಗಪೆದ್ದಿಗೆ  ಉರುಲಿಂಗದೇವ ಶಿವಾಚಾರ್ಯರು.  ಕಲಬುರ್ಗಿಯ ಶರಣ ಬಸವೇಶ್ವರರಿಗೆ ಕಲಕೇರಿಯ  ಮರುಳಾಧ್ಯ ಶಿವಾಚಾರ್ಯರು  ಹುಬ್ಬಳ್ಳಿಯ  ಶ್ರೀ  ಸಿಧ್ಧಾರೂಢರಿಗೆ ಭೂಪುರದ  ಗಜದಂಡ ಶಿವಾಚಾರ್ಯರು  ದೀಕ್ಷಾಗುರುಗಳಾದರೆ ಸೊನ್ನಲೆಗಯ  ಸಿಧ್ಧರಾಮನ ಜನ್ಮಕ್ಕೇನೆ ಜಗದ್ಗುರು  ರೇವಣ ಸಿಧ್ಧೇಶ್ವರರ ಮಂಗಲಾಶೀರ್ವಾದವೇ  ಕಾರಣ ವೆಂಬುದನ್ನು  ಯಾರೂ  ಮರೆಯುವಂತಿಲ್ಲ. 
      ಇದೂ ಅಲ್ಲದೇ ಎಲ್ಲ  ಪ್ರಾಂತಗಳಲ್ಲಿರುವ  ಪಂಚ ಪೀಠಗಳ  ಶಾಖಾ ಮಠಗಳ  ಶಿವಾಚಾರ್ಯರ ಕೊಡಿಗೆಯೂ ಅಪಾರವಾದುದು . ಅವರೆಲ್ಲರ ಚರಿತ್ರೆ  ಮತ್ತು  ಕಾರ್ಯಗಳನ್ನು ಜನರಿಗೆ  ಪರಿಚಯಿಸುವ  ಕಾರ್ಯ ಸರ್ವತ್ರ ಇಂದು ನಡೆಯ ಬೇಕಾಗಿದೆ. 
      
ಆದ್ದರಿಂದ   ಸಂಶೋಧಕ ಶಿವಾಚಾರ್ಯರು  ತಾವು ಸ್ವತಃ ಇಲ್ಲವೇ ಸಂಶೋಧಕ ವಿದ್ವಾಂಸರನ್ನು ಈ ಕಾರ್ಯದಲ್ಲಿ  ತೋಡಗಿಸಿ ಪರಮಾಚಾರ್ಯರ  ಮತ್ತು  ವಿವಿಧ  ಸಾಹಿತ್ಯ  ರಚನೆ ಮತ್ತು ಮಾನವೀಯ  ಸಮಾಜದ ಸುಧಾರಣೆಗಾಗಿ ಕ್ರಾಂತಿಕಾರಕ ಕಾರ್ಯಗಳನ್ನೆಸಗಿ  ಲಿಂಗಾಂಗ ಸಾಮರಸ್ಯವನ್ನು ಹೊಂದಿದ ಶಿವಾಚಾರ್ಯರ  ಬಗ್ಗೆ ಗೊಷ್ಠಿಗಳನ್ನು  ಏರ್ಪಡಿಸುವ ನಿಟ್ಟಿನಲ್ಲಿ  ಚಿಂತಿಸ ಬೇಕಾಗಿದೆ  ಈ ಲೇಖದ ಬಗ್ಗೆ  ಶಿವಾಚಾರ್ಯರ ಮತ್ತು  ಮಹಾಚಾರ್ಯರ  ಪ್ರತಿಕ್ರಿಯೆಗಳನ್ನು  ಗಮನಿಸಿ ಮುಂದಿನ   ಕಾರ್ಯವನ್ನು  ಕೈಕೊಳ್ಳಲಾಗುವದು.  
     ಶುಭಸ್ಯ ಶೀಘ್ರಂ ಎನ್ನುವಂತೆ ಇದೇ ಶ್ರಾವಣ ಮಾಸದಿಂದ ತಮ್ಮ  ತಮ್ಮ  ಮಠಗಳಲ್ಲಿ  ನಡೆಯುವ ಧಾರ್ಮಿಕ  ಕಾರ್ಯಕ್ರಮಗಳಲ್ಲಿ  ಶಿವಾಚಾರ್ಯರ ಸ್ಮರಣೋತ್ಸವವನ್ನು  ಪ್ರಾಂಸಚಿವಭಿಸುವದು ಸೂಕ್ತವಾದುದು. ಕಾಶೀ ಜಗದ್ಗುರುಗಳು  ಮಹಾರಾಷ್ಟ್ರದ ಉದ್ಗೀರದಲ್ಲಿ ನಡೆಯುವ ಶ್ರಾವಣ ತಪೋನುಷ್ಠಾನದಲ್ಲಿ ಈ ಸ್ಮರಣೋತ್ಸವವನ್ನು  ಪ್ರಾರಂಭಿಸಲು ನಿಶ್ಚಯಿಸಿದ್ದಾರೆ.
 ಈ ಲೇಖನವು  ಪರಿಪೂರ್ಣವಾದುದಲ್ಲ  ಇದು ಸಾಂಕೇತಿಕವಾದುದು   ಈ ನಿಟ್ಟಿನಲ್ಲಿ  ಸರ್ವರೂ  ಚಿಂತಿಸುವದು ಅವಶ್ಯವಾಗಿದೆ.

July 15, 2021

ನಾನು ಮಾನವನೆನ್ನುವ ಮನುವಿನ ಮಗ

ನಾನು ಮಾನವನೆನ್ನುವ ಮನುವಿನ ಮಗ 

ಹಿಂದೊಮ್ಮೆ ನಾನು ನಾಭಾನೇದಿಷ್ಠ ಎನ್ನುವ ಮನುವಿನ ಮಕ್ಕಳಲ್ಲಿ ಒಬ್ಬನ ಕುರಿತಾಗಿ ಬರೆದಿದ್ದೆ. ಆಸ್ತಿಯಲ್ಲಿನ ಹಕ್ಕುಗಳ ಕುರಿತಾಗಿ ಇದ್ದ ವಿಷಯ ಅದು ಐತರೇಯ ಬ್ರಾಹ್ಮಣವನ್ನಾಧರಿಸಿದ ಕಥೆ. ಅದರಲ್ಲಿ ಮನು ಮತ್ತು ಮನುವಿನ ಕರ್ತವ್ಯ ಎಲ್ಲವನ್ನೂ ವಿವರಿಸಿದ್ದೆ. ”ತಸ್ಮಾದೇವಂ ವಿದುಷಾ ಸತ್ಯಮೇವ ವದಿತವ್ಯಂ ಸ ಏಷ ಸಹಸ್ರನಿರ್ಮಂತ್ರೋ’ ಎನ್ನುವ ಮಂತ್ರದಲ್ಲಿ ವಿದ್ವಾಂಸನಾದವನು ಯಾವಾಗಲೂ ಸತ್ಯವನ್ನೇ ಹೇಳಬೇಕು. ಸತ್ಯದಿಂದಲೇ ಸಂಪತ್ಸಮೃದ್ಧಿಯಾಗಬೇಕು ಮತ್ತು ಆಗಿಯೇ ಆಗುತ್ತದೆ. ಯಶಸ್ಸು ಮತ್ತು ಕೀರ್ತಿಗಳು ಬರುವುದು ಸತ್ಯದಿಂದ ಎನ್ನುವುದಲ್ಲದೇ ಈ ಮಂತ್ರ ನಾಭಾನೇದಿಷ್ಠನಿಂದ ಪಠಿತವಾಗಿ ದೊರಕಿದ ಕಾರಣ ’ಸಹಸ್ರಸನಿಃ’ ಎಂದೇ ಪ್ರಸಿದ್ಧವಾಗಿದೆ. ಇವೆಲ್ಲವೂ ಸಹ ಹತ್ತನೇ ಮಂಡಲದ ೬೧ನೇ ಸೂಕ್ತದೃಷ್ಟಾರನಾದ ನಾಭಾನೇದಿಷ್ಠನದ್ದು. ಈ ಋಷಿ ತನ್ನ ತಂದೆಯನ್ನು ಮಾನವ ಎಂದು ಹೇಳಿಕೊಳ್ಳುತ್ತಾನೆ. ಅಂದರೆ ಮನುವಿನ ಮಕ್ಕಳಲ್ಲಿ ಒಬ್ಬನಾದ ಈತ ತಂದೆಯನ್ನು ಮಾನವ ಎನ್ನುತ್ತಾನೆ. ಅಲ್ಲಿಗೆ ಮನು ಎನ್ನುವುದು ಮಾನವರಿಗೆ. ಅಥವಾ ಮಾನವರ ಮೂಲದವರಿಗೆ ಎಂದು. 

ಇನ್ನು ಋಗ್ವೇದ ೧೦ನೇ ಮಂಡಲದ ೬೨ನೇ ಸೂಕ್ತದಲ್ಲಿ ನಾಭಾನೇದಿಷ್ಠನು ವಿಶ್ವೇದೇವತೆಗಳನ್ನು ಸ್ತುತಿಸುತ್ತಾ ಹೇಳುವ ಮಂತ್ರಗಳನ್ನು ಸ್ವಲ್ಪ ಗಮನಿಸುವೆ. ’ಯೇ ಯಜ್ಞೇನ ದಕ್ಷಿಣಯಾ ಸಮಕ್ತಾ’ ಎನ್ನುವ ಋಕ್ಕಿನ ಕೊನೆಯಲ್ಲಿ ’ಮಾನವಂ ಸುಮೇಧಸ’ ಎನ್ನುವುದಾಗಿ ಹೇಳಲ್ಪಟ್ಟಿದೆ. ಅಂದರೆ ಇಲ್ಲಿ ’ಮಾನವಂ’ ಎಂದಿರುವುದನ್ನು ಗಮನಿಸಿದರೆ ನಾಭಾನೇದಿಷ್ಠನು ಆಂಗೀರಸ ಮಹರ್ಷಿಗಳ ಯಾಗದ ಸಂದರ್ಭದಲ್ಲಿ ಬರುವ ಸನ್ನಿವೇಶದಲ್ಲಿ ತನ್ನ ತಂದೆಗೆ ಮಾನವ ಎನ್ನುತ್ತಾನೆ. ಅಂದರೆ ಮನುವಿನ ಮಕ್ಕಳೆಲ್ಲ ಇಲ್ಲಿ ಮಾನವರೇ ಆಗುತ್ತಾರೆ ಎನ್ನುವ ಭಾವವನ್ನು ಕೊಡುತ್ತಾನೆ. ಭಾಷ್ಯಕಾರರು ’ನಾಭಾನೇದಿಷ್ಠಂ ವೈ ಮಾನವಮಿತಿ’ ಎನ್ನುತ್ತಾರೆ. ’ಮಾನವಂ ಪೃತಿಗೃಭ್ಣೀತ’ ಎನ್ನುವಲ್ಲಿ ಮನುವಿನ ಮಗನಾದ ಮಾನವನಾದ ನನ್ನನ್ನು ಸ್ವೀಕರಿಸಿ ಎನ್ನುವುದು ಸಿಗುತ್ತ್ತದೆ. 
 
ಮುಂದಿನ ಋಕ್ಕಿನಲ್ಲಿ ಸಹ ’ಮಾನವಂ ಪೃತಿಗೃಭ್ಣೀತ’ ಎಂದು ಬರುತ್ತದೆ. ನೀವು ಒಂದು ಸಂವತ್ಸರದ ತನಕ ಯಾಗವನ್ನು ಮಾಡಿರುವಿರಿ. ನಿಮಗೆ ದೀರ್ಘಾಯುಷ್ಯವುಂಟಾಗಲಿ. ಮನುವಿನ ಮಗ ಮಾನವನಾದ ನನ್ನನ್ನು ಸ್ವೀಕರಿಸಿರಿ ಎನ್ನುತ್ತಾನೆ.

’ಯಂ ಋತೇನ ಸೂರ್ಯಮಾರೋಹಯನ್’ ಎನ್ನುವ ಮುಂದಿನ ಮಂತ್ರದಲ್ಲಿ ಸಹ ಮಾನವ ಎನ್ನುವ ಪದ ಬಳಕೆ ಕಂಡು ಬರುತ್ತದೆ. ಈ ಭೂಮಿಯ ಪಾವಿತ್ರ್ಯ ನಿಮ್ಮ ಯಜ್ಞದಿಂದ ಹೆಚ್ಚಾಗಿದೆ. ಭೂಮಿಯ ಮೇಲೆ ನಮಗಿರುವ ಶ್ರದ್ಧೆಯನ್ನು ದ್ವಿಗುಣಗೊಳಿಸಿದ್ದೀರಿ. ನಿಮಗೆ ಈ ಭೂಮಿಯಲ್ಲಿಯೇ ಉತ್ತಮವಾದ ಪ್ರಜಾ ಸಂತತಿ ಉಂಟಾಗಲಿ ಎನ್ನುವುದರ ಜೊತೆಗೆ ತಾನು ಮನುವಿನ ಮಗನಾದ ಮಾನವ ಎನ್ನುತ್ತಾನೆ. ಹೀಗೇ ಮನುವಿನ ಮಗನಾದ ನಾನು ಮಾನವ ಎನ್ನುವುದರ ಜೊತೆಗೆ ಮನು ಯಾರು ಎನ್ನುವುದಕ್ಕೂ ಉತ್ತರ ದೊರಕಿಸಿದ್ದಾನೆ. 
’ಸಲೋಕಪಾಲಾ ಮುನಯೋ ಮನೂನಾಮಾದ್ಯಂ ಮನುಂ ಪ್ರಾಞ್ಜಲಯಃ ಪ್ರಣೇಮುಃ’ ಎಂದು ಭಾಗವತ ಪುರಾಣದ ನಾಲ್ಕನೇ ಸ್ಕಂದದ ೬ನೇ ಅಧ್ಯಾಯದ ೩೯ನೇ ಶ್ಲೋಕದಲ್ಲಿ ಮನುವನ್ನು ಪ್ರಾಂಜಲನಾಗಿ ಬೇಡಿಕೊಳ್ಳುವುದು ಅಥವಾ ಪ್ರಾರ್ಥಿಸುವುದು ಸಿಗುತ್ತದೆ. 

’ವಿವಸ್ವಾನ್ ಮನವೇ ಪ್ರಾಹ ಮನುರಿಕ್ಷ್ವಾಕವೇಬ್ರವೀತ್’ ಎಂದು ಭಗವದ್ಗೀತೆಯಲ್ಲೂ ಬರುತ್ತದೆ. ಇಲ್ಲಿ ಮನು ಮತ್ತು ಸೂರ್ಯನಿಗೂ ಸಂಬಂದ ಕಾಣಿಸುತ್ತದೆ. ಮನು ಮತ್ತು ಯಮ ಸಹೋದದರು ಎನ್ನುವ ಉಲ್ಲೇಖ ಅನೇಕ ಕಡೆಗಳಲ್ಲಿದೆ. ಯಮನು ಮೃತ್ಯುವಿಗೆ ಅಧಿದೇವತೆಯಾದರೆ ಮನು ಮಾನವರಿಗೆ ಅಧಿದೇವತೆ. ಆತನಿಂದಲೇ ನಾವೆಲ್ಲ ಮಾನವರಾಗಿದ್ದು.

ಋಗ್ವೇದ ಮೂರನೇ ಮಂಡಲದ ೬೦ನೇ ಸೂಕ್ತದಲ್ಲಿ ವಿಶ್ವಾಮಿತ್ರ ಮಹರ್ಷಿ ಋಭುಗಳನ್ನು ಸ್ತುತಿಸುತ್ತಾ ’ಇಂದ್ರಸ್ಯ ಸಖ್ಯಂ ಋಭವಃ ಸಮಾನಶುರ್ಮನೋನಪಾತೋ’ ಎಂದಿರುವುದು ಋಭುಗಳು ಸಹ ಮನುವಿನ ಮಕ್ಕಳಾಗಿ ಮಾನವರಾಗಿದ್ದರು ಎನ್ನುವುದು ತಿಳಿದು ಬರುತ್ತದೆ ’ಮನುಷ್ಯಸ್ಯಾಂಗಿರಸ ಪುತ್ರಾಃ’ ಎನ್ನುವುದು ಭಾಷ್ಯಕಾರರು. ಮನುಷ್ಯರು ಅಂಗೀರಸನ ಮಕ್ಕಳು. ಅಂದರೆ ಮನುವಿನ ಮಕ್ಕಳು ಮಾನವರು. ಇಲ್ಲಿ ಮನು ಎಂದಾಕ್ಷಣ ಕಣ್ಣು ಕೆಂಪಗೆ ಮಾಡುವವರು ಅರ್ಥಮಾಡಿಕೊಳ್ಳಬೇಕಾದ್ದು ಇದನ್ನೇ ಮನುವನ್ನು ಹೇಳಿಕೊಂಡರೆ ತಮ್ಮನ್ನು ತಾವೇ ಹಳಿದುಕೊಂಡಂತೆ ಅಷ್ಟೇ.
ಮನುಕುಲಾದಿತ್ಯ, ಮನುಜ, ಮನುಜಾ, ಮನುಜಪತಿ, ಮನುಜಲೋಕ, ಮನುಜವ್ಯಾಘ್ರ, ಮನುಜಾತ, ಮನುಜಾತ್ಮಜ ಹೀಗೇ ಮನುವಿನ ಹೆಸರಿನ ಉಲ್ಲೇಖಗಳು ಬಹಳಷ್ಟು ಕಡೆ ಸಿಗುತ್ತವೆ. 

#ಮನು_ಮಾನವ 
Sadyojath

July 13, 2021

ಯಜ್ಞೋಪವೀತ(ಜನಿವಾರ) ಏಕೆ ಧರಿಸಬೇಕು?

ಯಜ್ಞೋಪವೀತ(ಜನಿವಾರ) ಏಕೆ ಧರಿಸಬೇಕು? ಯಾರು ಧರಿಸಬೇಕು? ಯಜುರ್ವೇದ-1-5= “ವಿಶ್ವಸಂಚಾಲನ ನಿಯಮ(ಋತ) ಎಂಬ ವ್ರತವನ್ನು ನಡೆಸುತ್ತಿರುವ ವ್ರತ ರಕ್ಷಕನೇ(ಪರಮಾತ್ಮನೇ)! ನಾನು ಸಹ ವಿಶ್ವಸಂಚಾಲನ ನಿಯಮಕ್ಕೆ ವಿರುದ್ಧವಲ್ಲದ, ಯಥಾರ್ಥ ಜ್ಞಾನದ, ಸತ್ಯಾಚರಣೆಯ ವ್ರತವನ್ನಾಚರಿಸುವೆನು, ಅದು ಸಿದ್ಧಿಸಲಿ”. ಅಂದರೇ ಪ್ರಕೃತಿ ನಿಯಮಾನುಸಾರದ ಆಚರಣೆಗಾಗಿ ಯಜ್ಞೋಪವೀತ ಧರಿಸಬೇಕು. ಪಾರಸ್ಕರ ಗೃಹ್ಯಸೂತ್ರ- 2-2-11= “ ಈ ಯಜ್ಞೋಪವೀತವು ಪಾಪದಿಂದ ದೂರವಿರುವುದಕ್ಕಾಗಿ, ಜಾಗೃತರಾಗಿ ಪ್ರಹಾರದಿಂದ- ಅಪಾಯದಿಂದ,  ರಕ್ಷಿಸಿ ಕೊಳ್ಳವುದಕ್ಕಾಗಿ, ಆಯು- ಆರೋಗ್ಯ- ಬಲ- ತೇಜಸ್ಸಿನ ಪ್ರಾಪ್ತಿಗಾಗಿ, ಶ್ರೇಷ್ಠತಮ ಕಾರ್ಯ ಮಾಡಲು ಪ್ರೇರಣೆಯನ್ನು ಪಡೆಯುವುದಕ್ಕಾಗಿ, ಆ ಮೂಲಕ ಪರಮಾತ್ಮ ನೊಂದಿಗೆ ಬೆಸೆಯುವುದಕ್ಕಾಗಿ, ಯಜ್ಞೋಪವೀತ ಧರಿಸಬೇಕು”. ಋಗ್ವೇದ-1-118-2= ತ್ರಿವಿಧ ಬಂಧನಗಳಿಂದ ಬಿಡುಗಡೆಗಾಗಿ, ತ್ರಿವಿಧ ಶುದ್ಧಿಗಾಗಿ, ತ್ರಿವಿಧ ಚಕ್ರದ ಪ್ರಾಪ್ತಿಗಾಗಿ ಯಜ್ಞೋಪವೀತ ಧರಿಸಬೇಕು. ಇಲ್ಲಿ ಮೂರು ಎಳೆಯ ವಿಚಾರವಿದೆಯೇ ಹೊರತೂ, ಆರು ಎಳೆಯದಿಲ್ಲ. 1ನೇ ಎಳೆ] ತ್ರಿವಿಧ ಬಂಧನ(ಋಣ) ಅ]ದೇವಋಣ= ಜನ್ಮಾರಂಭದಿಂದ  ಪಂಚತತ್ವಗಳಿಂದ ನಮ್ಮ ಶರೀರ ಬೆಳೆದಿರುವುದರಿಂದ, ಆ ಪಂಚ ಭೂತಗಳ ಶುದ್ಧಿಯನ್ನು ಉಳಿಸಿಕೊಳ್ಳುವ ವ್ಯವಹಾರ ಮಾಡುವ ಮೂಲಕ, ಅವುಗಳ ಋಣದ(ಸಾಲದ) ಮರುಪಾವತಿ ಮಾಡುವುದಕ್ಕಾಗಿ ಯಜ್ಞೋಪವೀತ ಧಾರಣೆ. ಆ]ಪಿತೃಋಣ= ನಮ್ಮ ಬಾಲ್ಯದಲ್ಲಿ ನಮ್ಮ ಪೋಷಣೆ ಮಾಡಿದ ಪಿತೃಗಳು(ತಂದೆ-ತಾಯಿ-ಪಾಲಕರ) ಜೀವಂತವಿರುವಾಗಲೇ ಅವರ ಸೇವೆಯನ್ನು ಶ್ರದ್ಧೆಯಿಂದ(ಶ್ರಾದ್ಧ) ಮಾಡಿ, ತೃಪ್ತಿ(ತರ್ಪಣ) ಪಡಿಸುವುದರ ಮೂಲಕ ಅವರ ಋಣದ(ಸಾಲದ) ಮರುಪಾವತಿ ಮಾಡುವುದಕ್ಕಾಗಿ ಯಜ್ಞೋಪವೀತ ಧಾರಣೆ. ಇ] ಋಷಿಋಣ= ನಮಗೆ ಜ್ಞಾನ- ತಿಳುವಳಿಕೆಗಳು ವಿವಿಧ ಮೂಲಗಳಿಂದ ಬಂದಿರುತ್ತವೆ. ಆ ಜ್ಞಾನ- ತಿಳುವಳಿಕೆಯನ್ನು ನಿಷುಲ್ಕವಾಗಿ, ಅಪೇಕ್ಷಿತರಿಗೆ ನೀಡುವುದರ ಮೂಲಕ ಋಷಿಋಣ(ಸಾಲದ) ಮರುಪಾವತಿ ಮಾಡುವುದಕ್ಕಾಗಿ ಯಜ್ಞೋಪವೀತ ಧಾರಣೆ. 2ನೇ ಎಳೆ] ತ್ರಿವಿಧ ಶುದ್ಧಿ= ಅ] ಮನಃಶುದ್ಧಿ=  ಪಾಪಕಾರ್ಯದ ಮೂಲವು ದುಷ್ಠಚಿಂತನೆಯಾಗಿದೆ. ಅದನ್ನು ಗಾಯತ್ರೀ ಮಂತ್ರದ ಜಪ(ಅರ್ಥ ಭಾವನೆ)- ಅನುಷ್ಠಾನ(ಆಚರಣೆ)ಯಿಂದ, ಪಾಪವನ್ನು ಚಿಂತನೆಯ ಹಂತದಲ್ಲೇ ಭಸ್ಮ ಮಾಡಲು ಯಜ್ಞೋಪವೀತ ಧಾರಣೆ. ಆ] ಮಾತು(ವಾಣಿ)= ಋಗ್ವೇದ-10-21-2= “ ಹಿಟ್ಟನ್ನು ಜರಡಿ ಹಿಡಿದು ಕಸ ಆದಿಯನ್ನು ತೊಲಗಿಸುವಂತೆ, ಬುದ್ಧಿಯುಪಯೋಗಿಸಿ ವ್ಯರ್ಥ- ಅಸತ್ಯ- ಅಪ್ರಿಯ ವಾಕ್ಯಗಳನ್ನು ತೊಲಗಿಸಿ, ಮಧುರ ವಾಣಿಯನ್ನಾಡುವ ಸಲುವಾಗಿ” ಯಜ್ಞೋಪವೀತ ಧಾರಣೆ. ಇ] ಮೈ(ಶರೀರ)= ಜ್ಞಾನೇಂದ್ರಿಯಗಳಿಂದ- ಕರ್ಮೇಂದ್ರಿಯಗಳಿಂದ ತನ್ನ ಮತ್ತು ಅನ್ಯ ಜೀವಿಗಳಿಗೆ ಹಿತವುಂಟು ಮಾಡುವ ಕಾರ್ಯವನ್ನು ಮಾಡುವುದಕ್ಕಾಗಿ ಯಜ್ಞೋಪವೀತ ಧಾರಣೆ. 3ನೇ ಎಳೆ] ತ್ರಿವಿಧ ಚಕ್ರಗಳಿಗಾಗಿ= ಅ] ಜ್ಞಾನಚಕ್ರ= ಸರ್ವಹಿತಕಾರಿ, ಸತ್ಯಜ್ಞಾನವನ್ನು ಪ್ರತಿನಿತ್ಯ ಹೆಚ್ಛಿಸಿಕೊಳ್ಳಬೇಕು. ಆ ಕಾರಣ ತಿಳಿಯದನ್ನು ತಿಳಿಯುವುದಕ್ಕಾಗಿ, ತಿಳಿದಿದ್ದನ್ನು ಹೆಚ್ಛು ಹೃದಯಸ್ಥ ಮಾಡಿಕೊಳ್ಳುವುದಕ್ಕಾಗಿ, ಆತ್ಮ- ಅನಾತ್ಮ ತತ್ವಗಳ ತಿಳುವಳಿಕೆಗಾಗಿ ಯಜ್ಞೋಪವೀತ ಧಾರಣೆ. ಆ] ಕರ್ಮಚಕ್ರ= ಅಹಿಂಸೆ- ಸತ್ಯಾಚರಣೆ- ಆಸ್ತೇಯ- ಬ್ರಹ್ಮಚರ್ಯ- ಅಪರೀಗ್ರಹ- ಶೌಚ- ಸಂತೋಷ- ತಪಃ- ಸ್ವಾಧ್ಯಾಯ- ಈಶ್ವರ ಪ್ರಣಿದಾನಾದಿ ಕಾರ್ಯ ಮಾಡುವುದಕ್ಕಾಗಿ ಯಜ್ಞೋಪವೀತ ಧಾರಣೆ. ಇ] ಉಪಾಸನಾ ಚಕ್ರ= ಸಹಮಾನವರ –ಸಹಜೀವಿಗಳ ಜೊತೆ ಮೈತ್ರೀಪೂರ್ಣ ವ್ಯವಹಾರ ಮಾಡುತ್ತಾ, ಸಕಲ ಜೀವಿಗಳಿಗೂ ಪರಮಾತ್ಮನೇ ಪಿತನೆಂದು (ಪಾಲಕನೆಂದು) ತಿಳಿದು, ಅವನ ಸಾನಿಧ್ಯಪಡೆದು ಶಾಂತಿ ಪಡೆಯುವುದಕ್ಕಾಗಿ ಯಜ್ಞೋಪವೀತ ಧಾರಣೆ. ಮೇಲೆ ತಿಳಿಸಿದಂತೆ, ವೇದಮಾರ್ಗದಲ್ಲಿ ನಡೆಯಲು ಸಾಧಕರೆಲ್ಲರೂ ಮೂರೆಳೆಯ ಯಜ್ಞೋಪವೀತವನ್ನು(ಜನಿವಾರ), ಸಾಂಕೇತಿಕವಾಗಿ- ಸಮವಸ್ತ್ರದಂತೆ ಧರಿಸಿ ಅನುಶಾಸನದಲ್ಲಿರಬೇಕೆಂಬುದು ಆರ್ಷ(ಋಷಿ) ಪರಂಪರೆ. ಆದರೂ ವೇದಾಧ್ಯಯನ- ವೇದಾಧಿಕಾರ ನಿರ್ಧಿಷ್ಠವಾಗಿ ಯಾರಿಗೆಂಬುದನ್ನು ನೋಡೋಣ, ಯಜುರ್ವೇದ- 26-2= ಈ ಮಂತ್ರದಲ್ಲಿ ಪರಮಾತ್ಮನು ಮಾನವರಿಗೆ ಹೇಳುತ್ತಿದ್ದಾನೆ! “ ಈ ಕಲ್ಯಾಣಕಾರಿ ವೇದವಾಣಿಯನ್ನು ಮಾನವ ಮಾತ್ರರಿಗಾಗಿ- ಸಮಸ್ತ ಜನರಿಗಾಗಿ, ಬ್ರಾಹ್ಮಣ, ಕ್ಷತ್ರೀಯ ಸ್ವಭಾವದವರಿಗಾಗಿ, ಶೂದ್ರ ಸ್ವಭಾವದವರಿಗಾಗಿ, ಧನ, ಧಾನ್ಯ ಸಂಪತ್ತಿನ ಸ್ವಾಮಿಯಾದ ವೈಶ್ಯ ಸ್ವಭಾವದವರಿಗಾಗಿ, ತನ್ನವರೆಂಬುವವರಿಗಾಗಿಯೂ, ಪರರೆಂಬುವವರಿ ಗಾಗಿಯೂ ಉಪದೇಶಿಸುತ್ತಿದ್ದೇನೆ. ಈ ನನ್ನ ಕಾಮನೆ ಸಮೃದ್ಧವಾಗಲಿ, ಜಗತ್ತು ನಮ್ರತೆಯಿಂದ ವೇದದತ್ತ ಬರಲಿ”. ಸಮಸ್ತ ಮಾನವರಿಗಾಗಿ, ವೇದ- ಯಜ್ಞೋಪವೀತ ಎಂದಾಯಿತು, ಆದರೂ ಸ್ತ್ರೀಯರಿಗಾಗಿಯೂ ಎಂಬುದು ಸರಿಯೇ? ನೋಡೋಣ- ವೇದಗಳಲ್ಲಿ “ಸ್ತ್ರೀಯರ ಸ್ಥಾನ”:- {ಅಥರ್ವವೇದ-11-1-17} “ಈ ನಾರಿಯರು ಶುದ್ಧರೂ-ಪುನೀತರೂ ಪೂಜನೀಯರೂ (ಸತ್ಕಾರಕ್ಕೆ ಯೋಗ್ಯರೂ) ಯಜ್ಞದ ಅಧಿಕಾರಿಣಿಯರು. ಇವರು ಶುಭ್ರರಾಗಿ ಹವನ-ದ್ರವ್ಯ ಸಮೇತ ಯಜ್ಞಕ್ಕೆ ಬರಲಿ.” 2,{ಋಗ್ವೇದ -8-33-19} “ವನಿತಾ ವರೇಣ್ಯಳು ಚತುರ್ವೇದಜ್ಞಳಾಗಿ ವಿರಾಜಿಸಬಲ್ಲಳು. 3,{ಅಥರ್ವವೇದ-11-5-18} “ಕನ್ಯೆಯು ಬ್ರಹ್ಮಚರ್ಯ ವ್ರತವನ್ನಾಚರಿಸಿದ ನಂತರ, ಯುವಕನಾದ ಪತಿಯನ್ನು ಸ್ವೀಕರಿಸುತ್ತಾಳೆ” (ತಾನೇ ಆರಿಸಿ ಕೊಳ್ಳುತ್ತಾಳೆ ಮತ್ತು ಸ್ತ್ರೀಗೆ ಬ್ರಹ್ಮಚರ್ಯಾಶ್ರಮ- ಯಜ್ಞೋಪವೀತ ಖಡ್ಡಾಯ) 4,{ಅಥರ್ವವೇದ-14-1-64} “ಓ ನವವಧು! ನಿನ್ನ ಮುಂದೆ- ಮಧ್ಯೇ-ಕಡೆಯಲ್ಲಿ ಯಾವಾಗಲೂ ವೇದಜ್ಞಾನ ಜೊತೆಗಿರಲಿ, ವ್ಯಾಧಿರಹಿತಳೂ- ದಿವ್ಯಶಕ್ತಿ ಸಂಪನ್ನ ಸಾಧನಗಳಿಂದ ಪೂರ್ಣವಾದ ಶರೀರವನ್ನು ಪಡೆದುಕೊಂಡು ಮಂಗಳಕಾರಿಣಿಯೂ- ಸುಖದಾಯಿನಿಯೂ ಆಗಿ ಪತಿಗೃಹದಲ್ಲಿ ವಿರಾಜಿಸು.”  5,{ಋಗ್ವೇದ-10-109-4} “ಸ್ತ್ರೀ ಯು ಉಪನೀತಳಾಗಿ (ಯಜ್ಞೋಪವೀತ/ ಜನಿವಾರ ಧರಿಸಿ) ಪರಮಾತ್ಮನ ವಿಚಾರದಲ್ಲಿ ಸ್ಥಿತಳಾಗಿ ಧರಿಸಲು ಕಷ್ಟಕರವಾದ ಯೋಗ್ಯತೆಯನ್ನು ಧರಿಸುತ್ತಾಳೆ.”

July 6, 2021

Rugveda 1.80

8⃣0⃣
 *ನಿತ್ಯ ಋಗ್ವೇದ ಸಂಹಿತೆ
ಮಂಡಲ- ೧. ಸೂಕ್ತ- ೮೦.
ಸಂ... ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ
ಹಿರೇಕೆರೂರ. 9986175616
ದಿನಾಂಕ- 05-07-2021* 

(1-16) ಷೋಡಶರ್ಚಸ್ಯಾಸ್ಯ ಸೂಕ್ತಸ್ಯ ರಾಹೂಗಣೋ ಗೋತಮ ಋಷಿಃ (1-15) ಪ್ರಥಮಾದಿಪಂಚದಶಚಾಮಿಂದ್ರಃ (16) ಷೋಡಶ್ಯಾಶ್ಚೇಂದ್ರೋಽಥರ್ವಾ ಮನುರ್ದದ್ಯಙ್ ಚ ದೇವತಾಃ ಪಂಕ್ತಿಶ್ಛಂದಃ

ಓಂ..
 *ಇ॒ತ್ಥಾ ಹಿ ಸೋಮ॒ ಇನ್ಮದೇ᳚ ಬ್ರ॒ಹ್ಮಾ ಚ॒ಕಾರ॒ ವರ್ಧ॑ನ‌ಮ್ | ಶವಿ॑ಷ್ಠ ವಜ್ರಿ॒ನ್ನೋಜ॑ಸಾ ಪೃಥಿ॒ವ್ಯಾ ನಿಃ ಶ॑ಶಾ॒ ಅಹಿ॒ಮರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.1 ಸ ತ್ವಾ᳚ಮದ॒ದ್ವೃಷಾ॒ ಮದಃ॒ ಸೋಮಃ॑ ಶ್ಯೇ॒ನಾಭೃ॑ತಃ ಸು॒ತಃ | ಯೇನಾ᳚ ವೃ॒ತ್ರಂ ನಿರ॒ದ್ಭ್ಯೋ ಜ॒ಘ‌ನ್ಥ॑ ವಜ್ರಿ॒ನ್ನೋಜ॒ಸಾರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.2 ಪ್ರೇಹ್ಯ॒ಭೀ᳚ಹಿ ಧೃಷ್ಣು॒ಹಿ ನ ತೇ॒ ವಜ್ರೋ॒ ನಿ ಯಂ᳚ಸತೇ | ಇಂದ್ರ॑ ನೃ॒ಮ್ಣಂ ಹಿ ತೇ॒ ಶವೋ॒ ಹನೋ᳚ ವೃ॒ತ್ರಂ ಜಯಾ᳚ ಅ॒ಪೋಽರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.3 ನಿರಿಂ᳚ದ್ರ॒ ಭೂಮ್ಯಾ॒ ಅಧಿ॑ ವೃ॒ತ್ರಂ ಜ॑ಘ‌ನ್ಥ॒ ನಿರ್ದಿ॒ವಃ | ಸೃ॒ಜಾ ಮ॒ರುತ್ವ॑ತೀ॒ರವ॑ ಜೀ॒ವಧ᳚ನ್ಯಾ ಇ॒ಮಾ ಅ॒ಪೋಽರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.4 ಇಂದ್ರೋ᳚ ವೃ॒ತ್ರಸ್ಯ॒ ದೋಧ॑ತಃ॒ ಸಾನುಂ॒ ವಜ್ರೇ᳚ಣ ಹೀಳಿ॒ತಃ | ಅ॒ಭಿ॒ಕ್ರಮ್ಯಾವ॑ ಜಿಘ್ನತೇ॒ಽಪಃ ಸರ್ಮಾ᳚ಯ ಚೋ॒ದಯ॒ನ್ನರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.5 ಅಧಿ॒ ಸಾನೌ॒ ನಿ ಜಿ॑ಘ್ನತೇ॒ ವಜ್ರೇ᳚ಣ ಶ॒ತಪ᳚ರ್ವಣಾ | ಮಂ॒ದಾ॒ನ ಇಂದ್ರೋ॒ ಅಂಧ॑ಸಃ॒ ಸಖಿ॑ಭ್ಯೋ ಗಾ॒ತುಮಿ॑ಚ್ಛ॒ತ್ಯರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.6 ಇಂದ್ರ॒ ತುಭ್ಯ॒ಮಿದ॑ದ್ರಿ॒ವೋಽನು॑ತ್ತಂ ವಜ್ರಿನ್ವೀ॒ರ್ಯ‌ಮ್᳚ | ಯದ್ಧ॒ ತ್ಯಂ ಮಾ॒ಯಿನಂ᳚ ಮೃ॒ಗಂ ತಮು॒ ತ್ವಂ ಮಾ॒ಯಯಾ᳚ವಧೀ॒ರರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.7 ವಿ ತೇ॒ ವಜ್ರಾ᳚ಸೋ ಅಸ್ಥಿರನ್ನವ॒ತಿಂ ನಾ॒ವ್ಯಾ॒3॒॑ ಅನು॑ | ಮ॒ಹತ್ತ॑ ಇಂದ್ರ ವೀ॒ರ್ಯಂ᳚ ಬಾ॒ಹ್ವೋಸ್ತೇ॒ ಬಲಂ᳚ ಹಿ॒ತಮರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.8 ಸ॒ಹಸ್ರಂ᳚ ಸಾ॒ಕಮ॑ರ್ಚತ॒ ಪರಿ॑ ಷ್ಟೋಭತ ವಿಂಶ॒ತಿಃ | ಶ॒ತೈನ॒ಮನ್ವ॑ನೋನವು॒ರಿಂದ್ರಾ᳚ಯ॒ ಬ್ರಹ್ಮೋದ್ಯ॑ತ॒ಮರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.9 ಇಂದ್ರೋ᳚ ವೃ॒ತ್ರಸ್ಯ॒ ತವಿ॑ಷೀಂ॒ ನಿರ॑ಹ॒‌‌ನ್ತ್ಸಹ॑ಸಾ॒ ಸಹಃ॑ | ಮ॒ಹತ್ತದ॑ಸ್ಯ॒ ಪೌಂಸ್ಯಂ᳚ ವೃ॒ತ್ರಂ ಜ॑ಘ॒ನ್ವಾಁ ಅ॑ಸೃಜ॒ದರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.10 ಇ॒ಮೇ ಚಿ॒ತ್ತವ॑ ಮ॒ನ್ಯವೇ॒ ವೇಪೇ᳚ತೇ ಭಿ॒ಯಸಾ᳚ ಮ॒ಹೀ | ಯದಿಂ᳚ದ್ರ ವಜ್ರಿ॒ನ್ನೋಜ॑ಸಾ ವೃ॒ತ್ರಂ ಮ॒ರುತ್ವಾಁ॒ ಅವ॑ಧೀ॒ರರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.11 ನ ವೇಪ॑ಸಾ॒ ನ ತ᳚ನ್ಯ॒ತೇಂದ್ರಂ᳚ ವೃ॒ತ್ರೋ ವಿ ಬೀ᳚ಭಯತ್ | ಅ॒ಭ್ಯೇ᳚ನಂ॒ ವಜ್ರ॑ ಆಯ॒ಸಃ ಸ॒ಹಸ್ರ॑ಭೃಷ್ಟಿರಾಯ॒ತಾರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.12 ಯದ್ವೃ॒ತ್ರಂ ತವ॑ ಚಾ॒ಶನಿಂ॒ ವಜ್ರೇ᳚ಣ ಸ॒ಮಯೋ᳚ಧಯಃ | ಅಹಿ॑ಮಿಂದ್ರ॒ ಜಿಘಾಂ᳚ಸತೋ ದಿ॒ವಿ ತೇ᳚ ಬದ್ಬಧೇ॒ ಶವೋಽರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.13 ಅ॒ಭಿ॒ಷ್ಟ॒ನೇ ತೇ᳚ ಅದ್ರಿವೋ॒ ಯತ್ಸ್ಥಾ ಜಗ॑ಚ್ಚ ರೇಜತೇ | ತ್ವಷ್ಟಾ᳚ ಚಿ॒ತ್ತವ॑ ಮ॒ನ್ಯವ॒ ಇಂದ್ರ॑ ವೇವಿ॒ಜ್ಯತೇ᳚ ಭಿ॒ಯಾರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.14 ನ॒ಹಿ ನು ಯಾದ॑ಧೀ॒ಮಸೀಂದ್ರಂ॒ ಕೋ ವೀ॒ರ್ಯಾ᳚ ಪ॒ರಃ | ತಸ್ಮಿ᳚ನ್ನೃ॒ಮ್ಣಮು॒ತ ಕ್ರತುಂ᳚ ದೇ॒ವಾ ಓಜಾಂ᳚ಸಿ॒ ಸಂ ದ॑ಧು॒ರರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.15 ಯಾಮಥ᳚ರ್ವಾ॒ ಮನು॑ಷ್ಪಿ॒ತಾ ದ॒ಧ್ಯಙ್ ಧಿಯ॒ಮತ್ನ॑ತ | ತಸ್ಮಿ॒ನ್ಬ್ರಹ್ಮಾ᳚ಣಿ ಪೂ॒ರ್ವಥೇಂದ್ರ॑ ಉ॒ಕ್ಥಾ ಸಮ॑ಗ್ಮ॒ತಾರ್ಚ॒ನ್ನನು॑ ಸ್ವ॒ರಾಜ್ಯ‌ಮ್᳚ || 1.80.16* 
🟩🟥🟦⬜️🟨

July 5, 2021

ಚತ್ವಾರಿ ಶೃಂಗಾ . . . . . . .

ಋಗ್ವೇದದ ನಾಲ್ಕನೇ ಮಂಡಲದ ದೃಷ್ಟಾರ ಋಷಿ ವಾಮದೇವ ಎನ್ನುವವರು. ಗೋತಮ ಮಹರ್ಷಿಗಳ ಮಗನಾದ ಇವರು ಬ್ರಹ್ಮನ ಅಂಶವನ್ನು ಪಡೆದು ಕೊಂಡವರೆನ್ನುವುದು ಬ್ರಹದಾರಣ್ಯಕ ಉಪನಿಷತ್ತು ಹಾಗೂ ಶ್ರುತಿಗಳು. ಸುಮಾರು ೫೦೦ಕ್ಕೂ ಹೆಚ್ಚು ಋಕ್ಕುಗಳ ದೃಷ್ಟಾರರಾಗಿರುವ ವಾಮದೇವ ಮಹರ್ಷಿ ಬ್ರಹ್ಮಜ್ಞಾನ ಸಂಪಾದಿಸಿಕೊಂಡವರು. ಐತರೇಯ ಆರಣ್ಯಕದಲ್ಲಿ ಪ್ರಕಾಶಮಾನನಾದ ಸೂರ್ಯನೇ ಪರುಷರೂಪದಲ್ಲಿ ಕಂಗೊಳಿಸಿದಾಗ ’ಸರ್ವೇಷಾಂ ವಾಮ ಇತಿ ತಸ್ಮಾದ್ವಾಮದೇವ ತಸ್ಮಾದ್ವಾಮದೇವ ಇತಿ’ ದೇವತೆಗಳೆಲ್ಲರೂ ಈತ ತಮಗೆ ಪ್ರಿಯನಾಗಿರಬೇಕೆಂದು ಆಶಿಸಿದ್ದರಿಂದ ವಾಮದೇವ ಎನ್ನುವ ಹೆಸರು ಪಡೆದುಕೊಂಡ ಎನ್ನುವುದಾಗಿ ಬರುತ್ತದೆ.

ಗರ್ಭಸ್ಥನಾಗಿರುವಾಗಲೇ ಪ್ರಾಪಂಚಿಕ ಜ್ಞಾನವನ್ನು ಮತ್ತು ಆಗುಹೋಗುಗಳನ್ನು ಪಡೆದು ಕೊಂಡೆನು ಎನ್ನುವುದಾಗಿ ಈ ಮಹರ್ಷಿಯೇ ನಾಲ್ಕನೇ ಮಂಡಲದಲ್ಲಿ ಹೇಳಿಕೊಂಡಿರುವುದರಿಂದ ಈತ ಅಸಾಧಾರಣ ಎನ್ನುವುದು ತಿಳಿದು ಬರುತ್ತದೆ.
ಈ ಋಷಿಯ ಒಂದು ಸೂಕ್ತವನ್ನು ಇಲ್ಲಿ ಗಮನಿಸುತ್ತಿದ್ದೇನೆ. ಅಗ್ನಿ, ನೀರು, ತುಪ್ಪ, ಮತ್ತು ಗೋವುಗಳನ್ನು ಕುರಿತಾಗಿ ಸ್ತುತಿಸುವ ಈ ನಾಲ್ಕನೇ ಮಂಡಲದ ಸೂಕ್ತದಲ್ಲಿ . . . . . 

ವಯಂ ನಾಮ ಪ್ರ ಬ್ರವಾಮಾ ಘೃತಸ್ಯಾಸ್ಮಿನ್ನಜ್ಞೇ ಧಾರಯಾಮಾ ನಮೋಭಿಃ |
ಉಪ ಬ್ರಹ್ಮಾ ಶೃಣವಚ್ಛಸ್ಯಮಾನಂ ಚತುಃಶೃಂಗೋ ವಮೀದ್ಗೌರ ಏತತ್ || 
ಯಜ್ಞವನ್ನು ಮಾಡುವ ನಾವು ತುಪ್ಪಕ್ಕಿರುವ ಪವಿತ್ರವಾದ ಹೆಸರನ್ನು ಸ್ತುತಿಸುತ್ತೇವೆ. ಮತ್ತು ಆ ತುಪ್ಪವನ್ನು ಬಳಸಿಕೊಂಡೇ ಯಜ್ಞವನ್ನು ಮಾಡುತ್ತೇವೆ. ನಾಲ್ಕು ಕೋಡುಗಳುಳ್ಳ (ಇಲ್ಲಿ ಶೃಂಗ ಎನ್ನುವ ಪದಕ್ಕೆ ಕನ್ನಡದಲ್ಲಿ ಕೋಡುಗಳು ಎಂದಾಗುತ್ತದೆ ಆಕೋಡುಗಳು ಎನ್ನುವುದನ್ನು ನಾಲ್ಕು ವೇದಗಳ ಕುರಿತಾಗಿ ತೆಗೆದುಕೊಳ್ಳಲಾಗಿದೆ. ಅಂದರೆ ನಾಲ್ಕು ವೇದಗಳನ್ನು ತಿಳಿದಿರುವ) ಬ್ರಹ್ಮದೇವನು ನಾವು ಪಠಿಸುತ್ತಿರುವ ಸ್ತುತಿಯನ್ನು ಆಲಿಸಿ ಕೇಳಲಿ. ಅರುಣವರ್ಣಾತ್ಮಕನಾದ ಸೂರ್ಯ ದೇವನು ಈ ಯಜ್ಞವನ್ನು ನಿರ್ವಹಿಸುತ್ತಾನೆ.
ಇಲ್ಲಿ ಬ್ರಹ್ಮಾ ಎನ್ನುವುದು ಋತ್ವಿಜರನ್ನು. ಚತುಃಶೃಂಗೋ ಅನ್ನುವುದು ನಾಲ್ಕು ವೇದಗಳನ್ನು ಅಧ್ಯಯನಮಾಡಿರುವವರು ಎಂದು ಅರ್ಥೈಸಿಕೊಳ್ಳಬೇಕು. ಯಜ್ಞವೊಂದು ಸಾಂಗವಾಗಿ ನಡೆಯಲು ಯಜ್ಞಕರ್ಮಗಳು ಲೋಪವಿಲ್ಲದಂತೆ ನಡೆಯುವುದರ ಜವಾಬ್ದಾರಿ ಈ ಬ್ರಹ್ಮ ಸ್ಥಾನದ ಋತ್ವಿಜನಿಗೆ ಇರುತ್ತದೆ. ಇನ್ನು ಮುಂದಿನ ಋಕ್ಕಿನಲ್ಲಿ . . . . 

ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಾಸೋ ಅಸ್ಯ |
ತ್ರಿಧಾ ಬದ್ಧೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾನ್ ಆ ವಿವೇಶ ||
ಯಜ್ಞದ ಮೂಲ ಸ್ವರೂಪನಾದ ಅಗ್ನಿಗೆ ವೇದ ರೂಪವಾದ ನಾಲ್ಕು ಕೋಡುಗಳು(ಕೊಂಬು), ಪೂರ್ವಾಹ್ನ, ಮಧ್ಯಾಹ್ನ ಮತ್ತು ಸಾಯಂಕಾಲ ಎನ್ನುವ ಸವನ ತ್ರಯ ರೂಪವಾದ ಮೂರು ಪಾದಗಳು. ಬ್ರಹ್ಮೌದನ ಮತ್ತು ಪ್ರವರ್ಗ್ಯರೂಪಗಳಾದ ಎರಡು ತಲೆಗಳೂ, ಮತ್ತು ಛಂದಸ್ಸಿನ ರೂಪವಾದ ಏಳು ಹಸ್ತಗಳು. ಮಂತ್ರ, ಬ್ರಾಹ್ಮಣ, ಮತ್ತು ಕಲ್ಪ ಎಂಬ ಮೂರು ಪ್ರಕಾರಗಳಿಂದ ಬದ್ಧನಾದವನೂ ಸ್ತುತಿಕರ್ತರಿಗೆ ಇಷ್ಟಾರ್ಥಗಳನ್ನು ಕೊಡುವ ಈ ದೇವನು ಪ್ರಪಂಚದ ಎಲ್ಲಾ ಶಬ್ದಗಳಿಗೂ ಮೂಲರೂಪನು. ಮತ್ತು ಈ ದೇವನೇ ಪ್ರತಿಯೊಬ್ಬ ಮಾನವರಲ್ಲಿಯೂ ಜೀವಿಸಿದ್ದಾನೆ ಎನ್ನುವ ಅರ್ಥವನ್ನು ಕೊಡುತ್ತದೆ.

ನಿರುಕ್ತಕಾರರಾದ ಯಾಸ್ಕ ಮಹರ್ಷಿಗಳು ’ಚತ್ವಾರಿ ಶೃಂಗಾಃ’ ಎನ್ನುವುದನ್ನು ಯಜ್ಞಾತ್ಮಕನಾದ ಅಗ್ನಿಗೆ ನಾಲ್ಕು ಕೊಂಬುಗಳು. ಇಲ್ಲಿ ಕೊಂಬುಗಳೆಂದರೆ ವೇದಗಳು.
’ತ್ರಯೋ ಅಸ್ಯ ಪಾದಾಃ’ ಎನ್ನುವುದು ಪ್ರಾತಸ್ಸವನ, ಮಾಧ್ಯಂದಿನ ಸವನ, ಮತ್ತು ತೃತೀಯ ಸವನ ಎಂದು ಅರ್ಥೈಸಲಾಗಿದೆ.
’ದ್ವೇ ಶೀರ್ಷೇ’ ಎನ್ನುವುದು ಬ್ರಹ್ಮೌದನ ಮತ್ತು ಪ್ರವರ್ಗ್ಯ ಎನ್ನುವ ಯಜ್ಞಕರ್ಮಗಳು ಇದನ್ನೇ ಯಾಸ್ಕರು ಪ್ರಾಯಣೀಯ ಮತ್ತು ಉದಯನೀಯವೆನ್ನುವ ಎಂಬ ಎರಡು ಯಜ್ಞಕರ್ಮಗಳನ್ನು ವಿವರಿಸಿದ್ದಾರೆ.
’ಸಪ್ತ ಹಸ್ತಾಸೋ ಅಸ್ಯ’ ಎನ್ನುವುದನ್ನು ಏಳು ಛಂದಸ್ಸುಗಳಿಗೆ ಹೇಳಲಾಗಿದೆ. ಇದನ್ನೇ ಅಗ್ನಿಯ ಏಳು ಹಸ್ತಗಳೆಂದು ತಿಳಿಯಬೇಕು.
’ತ್ರಿಧಾ ಬದ್ಧಃ’ ಎಂದರೆ ಯಜ್ಞ ಕರ್ಮಗಳು ಬ್ರಾಹ್ಮಣ, ಕಲ್ಪ, ಮತ್ತು ಮಂತ್ರ ಎನ್ನುವ ಮೂರು ವಿಧವಾದ ನಿಯಮಗಳು.
ತೈತ್ತಿರೀಯ ಬ್ರಾಹ್ಮಣದಲ್ಲಿ ಋಚಾಂ ಪ್ರಾಚೀ ಮಹತೀ ದಿಗುಚ್ಯತೇ ಎಂದು ಉಲ್ಲೇಖಿಸಲಾಗಿದೆ. ಋಗ್ವೇದಕ್ಕೆ ಪೂರ್ವವೂ, ಯಜುರ್ವೇದಕ್ಕೆ ದಕ್ಷಿಣವೂ, ಸಾಮವೇದಕ್ಕೆ ಉತ್ತರವೂ ಅಥರ್ವವೇದಕ್ಕೆ ಪಶ್ಚಿಮವೆಂದೂ ನಾಲ್ಕು ಶೃಂಗಗಳನ್ನುದ್ದೇಶಿಸಿ ಹೇಳಲಾಗಿದೆ.
"ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾನ್ ಆ ವಿವೇಶ " ಎನ್ನುವುದನ್ನು ನಾನು ಇಲ್ಲಿ ಪುನಃ ಪ್ರಸ್ತಾಪಿಸುತ್ತೇನೆ. ಅಭೀಷ್ಟದಾಯಕನಾದ ಈ ದೇವನು ಓಂಕಾರನು. ಈ ಓಕಾರನು ಪ್ರಪಂಚದ ಎಲ್ಲಾ ಶಬ್ದಗಳಿಗೂ ಮೂಲರೂಪನು. ಮತ್ತು ಈ ದೇವನೇ ಪ್ರತಿಯೊಬ್ಬ ಮಾನವರಲ್ಲಿಯೂ ಜೀವಿಸಿದ್ದಾನೆ ಎನ್ನುವುದು ಈ ಋಕ್ಕಿನ ಅಭಿಪ್ರಾಯ.
ಹೌದು, ಪ್ರಣವಸ್ವರೂಪಿಯಾದ ಓಂಕಾರವು ಜಗತ್ತಿನ ಆದಿಯೂ ಹೌದು, ಇದು ಭಾಷೆಗಳಿಗೂ ಆದಿ. ಅನೇಕರು ಸಂಸ್ಕೃತವನ್ನು ಪ್ರಾಚೀನತೆಯಿಂದ ಅರ್ವಾಚೀನವಾಗಿಸುವ ಹವಣಿಕೆ ಮಾಡುತ್ತಾರೆ, ಆದರೆ ಇದನ್ನು ಗಮನಿಸಿದಾಗ. ಸಿಂಧೂ ಸರಸ್ವತೀ ನಾಗರೀಕತೆಯ ಕಾಲಕ್ಕೂ ಓಂಕಾರವನ್ನು ಅರ್ಥವತ್ತಾಗಿ ಚಿತ್ರಿಸಲಾಗಿದೆ. ಓಂಕಾರದಿಂದ ಲಿಪಿಯು ಹೇಗೆ ವಿಕಾಸ ಹೊಂದಿದೆ ಎಂದು ಗಮನಿಸಬಹುದಾಗಿದೆ.

ವೇದಗಳು ಮೌಖಿಕ ಪರಂಪರೆಯಲ್ಲಿ ಸಾಗಿ ಬಂದು ಶ್ರುತಿಗಳು ಎನ್ನಿಸಿಕೊಂಡವು, ಇವು ಬಾಯಿಯಿಂದ ಬಾಯಿಗೆ ಬಂದಂಥವುಗಳು. ಇವುಗಳು ಅಂದಿನಿಂದ ಇಂದಿನತನಕವೂ ಅದೇ ಮಾದರಿಯಲ್ಲಿ ಸಾಗಿ ಬಂದಿವೆ. ಹಾಗಾದರೆ ಲಿಪಿ ಹೇಗೆ ಉಗಮವಾಯಿತು.?
ಗಾಯತ್ರೇಣ ಪ್ರತಿಮಿಮೀತೇ ಅರ್ಕಮರ್ಕೇಣ ಸಾಮತ್ರೈಷ್ಟುಭೇನ ವಾಕಂ |
ವಾಕೇನ ವಾಕಂ ದ್ವಿಪದಾ ಚತುಷ್ಪದಾ ಅಕ್ಷರೇಣ ಮಿಮತೇ ಸಪ್ತವಾಣೀಃ | ೧: ೧೬೪ : ೨೪
ಇದು ಋಗ್ವೇದದಲ್ಲಿ ಬರುವ ಒಂದು ಋಕ್ಕು. ಏಳು ಛಂದಸ್ಸುಗಳು ಸಹ ಅಕ್ಷರರೂಪವನ್ನು ಹೊಂದುತ್ತವೆ. ಛಂದಸ್ಸುಗಳಲ್ಲಿ ಅಗ್ರಗಣ್ಯ ಗಾಯತ್ರೀ ಛಂದಸ್ಸಿಗೆ ಎಂಟು ಅಕ್ಷರಗಳು, (ತ್ರೈಷ್ಟುಭೇನ) ತ್ರಿಷ್ಟುಪ್ ಛಂದಸ್ಸಿಗೆ ಹನ್ನೊಂದು ಅಕ್ಷರಗಳು. ಜಗತೀ ಎನ್ನುವ ಛಂದಸ್ಸಿಗೆ ಹನ್ನೆರಡು ಅಕ್ಷರಗಳು. ಹಾಗೆಯೇ ಇಷ್ಟಿಷ್ಟು ಅಕ್ಷರಗಳಿಗೆ ಪಾದವೆಂದು. ಇಷ್ಟು ಪಾದಗಳಾದಲ್ಲಿ ಈ ಛಂದಸ್ಸಿನ ನಿರ್ಣಯ ಮಾಡಲಾಗುತ್ತದೆ. ಹೀಗೆ ಪಾದಗಳಿಗೆ ಛಂದಸ್ಸುಗಳಿಗೆ ಅಕ್ಷರಗಳೇ ಪ್ರಮಾಣ ಎಂದಾಯಿತು. ಹಾಗಾದರೆ ಅಕ್ಷರಗಳ, ಲಿಪಿಯ ಇತಿಹಾಸದ ಆರಂಭ ಯಾವಾಗಿನಿಂದ ಆರಂಭ ? ಇದನ್ನೆಲ್ಲಾ ಗಮನಿಸಿದರೆ ಈ ನೆಲದಲ್ಲಿ ಯಾವಾಗಲೋ ಲಿಪಿಯ ವಿಕಾಸ ಆಗಿರಲೇ ಬೇಕು. ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಇಂದ್ರನು ಭಾಷೆಯೊಂದಕ್ಕೆ ವ್ಯಾಕರಣ ಬರೆದ ಎನ್ನುವ ವಿಚಾರ ಬರುತ್ತದೆ, ದೇವತೆಗಳೆಲ್ಲಾ ಸೇರಿ ಇಂದ್ರನನ್ನು ಭಾಷೆಯೊಂದಕ್ಕೆ ವ್ಯಾಕರಣವನ್ನು ಬರೆಯಲು ಕೇಳಿಕೊಂಡರಂತೆ. ಇಂದ್ರನು ಪದ, ಪ್ರತ್ಯಯ, ವಾಕ್ಯಗಳನ್ನು ಬಿಡಿಸಿ ತಿಳಿಸುತ್ತಾನಂತೆ. ಅದಕ್ಕಾಗಿಯೇ ಇಂದಿಗೂ ಸಹ ವೈಯ್ಯಾಕರಣಿಗಳು ಇಂದಿಗೂ ಇಂದ್ರನನ್ನು ಮೊದಲಿಗೆ ನೆನಪಿಸಿಕೊಳ್ಳುತ್ತಾರೆ. ಶತಪಥ ಬ್ರಾಹ್ಮಣ ಮತ್ತು ಪಂಚವಿಂಶ ಬ್ರಾಹ್ಮಣದಲ್ಲಿಯೂ ಸಹ ಬಂಗಾರದ ತೂಕದ ಬಗ್ಗೆ ತಿಳಿಸುತ್ತದೆ. ಬ್ರಾಹ್ಮಣಗಳ ತರುವಾಯ ಬಂದ ಗೋಪಥದಲ್ಲಿಯೂ ಸಹ ಓಂಕಾರದ ಉಲ್ಲೇಖ ಸಿಗುತ್ತದೆ. ಅಲ್ಲಿ ಓಂಕಾರದ ಧಾತು,

"ಓಂಕಾರಂ ಪೃಚ್ಚಾಮಃ ಕೋ ಧಾತುಃ | ಕಿಂ ಪ್ರಾತಿಪದಿಕಂ ಕಿಂ ನಾಮಾ ಖ್ಯಾತಂ | ಕಿಂ ಲಿಂಗಂ ಕಿಂ ವಚನಂ | ಕಾ ವಿಭಕ್ತಿಃ ಕಃ ಪ್ರತ್ಯಯಃ | ಕಃ ಸ್ವರಃ ಉಪಸರ್ಗೋ ನಿಪಾತಃ ಕಿಂ | ವೈ ವ್ಯಾಕರಣಂ ವಿಕಾರಃ | ಕೋ ವಿಕಾರಿ ಕತಿ ಮಾತ್ರಃ | ಕತಿವರ್ಣಃ ಕತ್ಯಕ್ಷರಃ ಕತಿಪದಃ ಕಸ್ಸಂಯೋಗಃ | ಕಿಂ ಸ್ಥಾನಾನು ಪ್ರಧಾನುಕರಣಂ ಕಿಮುಚ್ಚಾರಯಂತಿ | ಕಿಂ ಛಂದಃ ಕೋವರ್ಣಃ ಇತಿ ಪೂರ್ತೀ ಪ್ರಶ್ನಾಃ || ೧ : ೨೪ ||" ಇದು ವರ್ಣಮಾಲೆಯ ಸಂಪೂರ್ಣ ವಿವರಣೆ.
ಯಜುರ್ವೇದದಲ್ಲಿ ಕೃಷ್ಣ ಮತ್ತು ಶುಕ್ಲ ಪ್ರಬೇಧಗಳಿವೆ ಶುಕ್ಲ ಯಜುರ್ವೇದದಲ್ಲಿನ ವಾಜಸನೇಯ ಸಂಹಿತೆಯಲ್ಲಿ ಅಕ್ಷರ, ಲೇಖನ ಸಾಮಗ್ರಿಗಳ ಉಲ್ಲೇಖ ಸಿಗುತ್ತದೆ, ಐತರೇಯದಲ್ಲಿಯೂ ಸಹ ಅಕ್ಷರಗಳ ಬಗ್ಗೆ ಉಲ್ಲೇಖ ಸಿಗುತ್ತದೆ ವರ್ಣಗಳ ಕುರಿತಾದ ವಿವರಣೆ ಸಿಗುತ್ತದೆ. ಪಾಣಿನಿ ತನ್ನ ಅಷ್ಟಾಧ್ಯಾಯಿಯಲ್ಲಿಯೂ ಲಿಪಿಯ ಕುರಿತಾಗಿ ಹೇಳಿದ್ದಾನೆ. ಇನ್ನು ಪುರಾಣದ ಕಾಲದಲ್ಲಿ ಮಹಾಭಾರತವನ್ನು ಗಣಪತಿಯು ಬರೆದ ಎನ್ನುವ ಮಾತಿದೆ, ಅಲ್ಲಿಗೆ ಲಿಪಿಯಂತೂ ಸಾರ್ವಕಾಲಿಕ ಅನ್ನಿಸುತ್ತದೆ. ಅದೇನೇ ಇರಲಿ ಅಕಾರ ಉ ಕಾರ ಮಕಾರದಿಂದ ಓಂಕಾರದ ಪ್ರಣವ ಹುಟ್ಟಿತಂತೆ . ಅಲ್ಲಿಗೆ ಲಿಪಿಯ ಇತಿಹಾಸದ ಆಳ ಬಹು ವಿಸ್ತಾರವಾಗಿದೆ.

#ಓಂಕಾರದ_ಪ್ರಣವ
- ಮೂಲ ಶ್ರೀ ಸದ್ಯೋಜಾತರು.

July 3, 2021

ಆಷಾಢ ಮಾಸದ ಮಹತ್ವ

॥ *ಆಷಾಢ ಮಾಸದ ಮಹತ್ವ* ॥

‌ * ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು ಈ ಮಾಸದಲ್ಲೇ. 
‌                                                                ‌                               * ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ. 
‌                                                    ‌                                             * ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು. 
‌                                                     ‌                                     * ಅಮರನಾಥದ ಹಿಮಲಿಂಗ ದರ್ಶನ ಪ್ರತಿ ವರ್ಷ ಆರಂಭವಾಗುವುದು ಈ ಸಮಯದಲ್ಲೇ. 
‌                                                          ‌                                        * ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ. 
‌                                                      ‌                      ‌               ‌* ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಈ ಆಚರಣೆ ಮೈಸೂರು ಪ್ರಾಂತ್ಯಗಳಲ್ಲಿ ಹೆಚ್ಚು. 

     *ಈ ಮಾಸದಲ್ಲೇ ಇದೆಲ್ಲಾ ಆರಂಭವಾಗಿದ್ದು...*

* ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ. 
‌                                                            ‌                 ‌‌        ‌    * ಇಂದ್ರನು ಗೌತಮರಿಂದ ಸಹಸ್ರಾಕ್ಷನಾಗು ಎಂಬ ಶಾಪ ಪಡೆದ, ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ *ಸೋಮೇಶ್ವರ ಜಯಂತಿ* ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ. 
‌                                                   ‌     ‌                            ‌‌  * ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ *ಜ್ಯೋತಿರ್ಭೀಮೇಶ್ವರ ವ್ರತ*ವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. 
‌                                                                                            *ಆಷಾಢ ಹುಣ್ಣಿಮೆ ದಿನ *ಗುರು ಪೂರ್ಣಿಮೆ*ಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ. 

   * ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು *ಅಮೃತ ಲಕ್ಷ್ಮೀ ವ್ರತ*ವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ.                                               ‌‌                                                                       ‌                                                                                      ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ *ಚಾಮುಂಡೇಶ್ವರಿ ದೇವಿಯ ಜನ್ಮ ದಿನ* ಬರುವುದು ಈ ಮಾಸದಲ್ಲೇ.

July 2, 2021

ಬಿಲ್ವದಲ್ಲಿ ಶ್ರೀ ಲಕ್ಷ್ಮಿ

ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ 

ಆದಿತ್ಯವರ್ಣೇ ತಪಸೋಽಧಿಜಾತೋ ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ |
ತಸ್ಯ ಫಲಾನಿ ತಪಸಾ ನುದನ್ತು ಮಾಯಾನ್ತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ | ೬ |ಇದು ಋಗ್ವೇದದ ಖಿಲಸೂಕ್ತ, ಐದನೇ ಮಂಡಲದ ೫೭ನೇ ಸೂಕ್ತ ಎಂದು ಕರೆಸಿಕೊಂಡಿದೆ.
ಈ ಮಂತ್ರ ಶ್ರೀಸೂಕ್ತದ ಮಂತ್ರ. ಈ ಸೂಕ್ತದ ಈ ಮಂತ್ರದ ದೃಷ್ಟಾರ ಆನಂದ ಋಷಿ ಎನ್ನುವವನು. ಈ ಋಷಿ ಮಹಾಲಕ್ಷ್ಮಿಯನ್ನು ಕುರಿತಾಗಿ ಈ ಮಂತ್ರವನ್ನು ಜಪಿಸುತ್ತಾನೆ. ಹೇಗಿದ್ದಾಳೆ ಲಕ್ಷ್ಮೀ ಎಂದರೆ ಆದಿತ್ಯವರ್ಣೇ ಎನ್ನುತ್ತಾನೆ. ಸೂರ್ಯನ ಪ್ರಭೆಯಂತಿದ್ದಾಳೆ ಎನ್ನುವುದಾಗಿ ಪ್ರಖರತೆಯನ್ನೂ ಮತ್ತು ಮಂದವನ್ನೂ ಸೂಚಿಸುತ್ತಾನೆ.
ಸರ್ಯನ ಪ್ರಭೆ ಅಥವಾ ಕಾಂತಿಯಂತೆ ಮಹಾ ಪ್ರಕಾಶಮಾನವಾಗಿ ಬೆಳಗುವ ಶರೀರವನ್ನು ಹೊಂದಿರುವ ಹೇ ಶ್ರೀದೇವತೆಯೇ ನಿನ್ನ ಅನುಗ್ರಹ ಪೂರಿತ ಆಜ್ಞೆಯಂತೆ ಅತ್ಯಪೂರ್ವವಾದ ಬಿಲ್ವ ಎನ್ನುವ ವೃಕ್ಷವು (ಸಸ್ಯಪ್ರಬೇಧ) ಹುಟ್ಟಿಕೊಂಡಿತು. ಈ ಬಿಲ್ವವು ಮನುಷ್ಯರಿಗೆ ಸುಖ ಸಂಪತ್ತು ಕೊಡಲಿ. ಮತ್ತು ಮನುಷ್ಯರಲ್ಲಿರುವ ಅಜ್ಞಾನವನ್ನು ದೂರಮಾಡಲಿ ಎನ್ನುವ ಅರ್ಥವನ್ನು ಕೊಡುತ್ತದೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಮಹತ್ವದ ಅಂಶ ಎಂದರೆ ’ವನಸ್ಪತಿಸ್ತವ ವೃಕ್ಷೋಽಥ ಬಿಲ್ವಃ | ತಸ್ಯ ಫಲಾನಿ ತಪಸಾ ನುದನ್ತು’ ಎನ್ನುವಲ್ಲಿನ ಅಂಶವನ್ನು ನೋಡಿದರೆ ಬಿಲ್ವ ಪತ್ರೆಯ ಮಹತ್ವ ಆಶ್ಚರ್ಯ ಹುಟ್ಟಿಸುತ್ತದೆ. ಮೂರು ದಳಗಳುಳ್ಳ ಬಿಲ್ವ ಪತ್ರದ ಕುರಿತು ಶ್ರೀವಿದ್ಯಾರಣ್ಯರು ಅಪುಷ್ಪಾಃ ಫಲವಂತೋ ಯೇ ತೇ ವನಸ್ಪತಯಃ ಸ್ಮೃತಾಃ ಅಂದರೆ ಈ ಬಿಲ್ವಪತ್ರೆ ಎನ್ನುವುದು ಹೂವನ್ನು ಬಿಡದೇ ಕಾಯಿಯನ್ನು ಕೊಡುತ್ತದೆ ಎಂದಿರುವರು(ಆದರೆ ಹೂವು ಬಿಟ್ಟರೂ ಅದು ಅದು ಗೋಚರವಾಗುವುದು ವಿರಳ ಇರಬಹುದು). ಔಷಧೀಯಗುಣ ಮತ್ತು ಶ್ರೇಷ್ಠತೆಯನ್ನು ಹೊಂದಿರುವುದರಿಂದ ವನಸ್ಪತಿ ಎಂದು ಕರೆಯಲಾಗುತ್ತದೆ ಎಂದು ವಾಮನಪುರಾಣದಲ್ಲಿ ಕಾತ್ಯಾಯನನ ಮಾತು. ಬಿಲ್ವವೃಕ್ಷವೇ ಲಕ್ಷ್ಮಿಯ ನಿವಾಸಸ್ಥಾನ ಎಂದು ಭಾರ್ಗವಪುರಾಣದಲ್ಲಿ ಹೇಳಲಾಗಿದೆ ಎಂದು ಪೃಥ್ವೀದರಾಚಾರ್ಯರ ಅಭಿಪ್ರಾಯ. ಸಾಧಾರಣವಾಗಿ ಮರಗಳು ಮೊದಲು ಹೂವುಗಳನ್ನು ಬಿಟ್ಟು ನಂತರದಲ್ಲಿ ಫಲಬಿಡುತ್ತವೆ. ಆದರೆ ಹೂವನ್ನು ಬಿಡದೇ ಫಲಕೊಡುವ ಮರಗಳನ್ನೆಲ್ಲಾ ವನಸ್ಪತಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಪ್ರಮುಖವಾಗಿರುವುದು ಬಿಲ್ವಪತ್ರೆ. ಆದರೆ ಶ್ರಾವಣ ಭಾದ್ರಪದದಲ್ಲಿ ಬಿಲ್ವ ಪತ್ರೆ ಮರದಲ್ಲಿ ಹೂವು ಬಿಡುತ್ತದೆ ಮತ್ತು ಅದು ಹಸಿರಾಗಿಯೇ ಇರುವುದರಿಂದ ಗೊತ್ತಾಗುವುದಿಲ್ಲ ಎನ್ನುವ ಅಭಿಪ್ರಾಯ ಕೆಲವರದ್ದಿದೆ. ಅದೇನೇ ಇರಲಿ, ಬಿಲ್ವ ಎನ್ನುವುದು ಲಕ್ಷ್ಮಿಯ ತಪಸ್ಸಿನಿಂದ ಶಿವನಿಗೆ ಪ್ರಿಯವೆನ್ನಿಸಿತು ಎನ್ನುವುದು ಬ್ರಹ್ಮಾಂಡಪುರಾಣದಲ್ಲಿ. ಹೀಗೇ ಬಿಲ್ವಪತ್ರೆಯ ಕುರಿತಾಗಿ ಸ್ಕಾಂದಪುರಾಣದಲ್ಲಿ ಕಥೆಯನ್ನೇ ಕೊಡಲಾಗಿದೆ. ಅದೇನೇ ಇರಲಿ ಬಿಲ್ವಪತ್ರೆ ಅತ್ಯಂತ ಸುವಾಸನಾಯುಕ್ತವಾದದ್ದು. ಆದರೆ ಬಿಲ್ವಪತ್ರೆಯ ಕಾಯಿ ಕಾಣಸಿಗುತ್ತದೆ, ಅದು ಸಹ ಸುವಾಸನಾಯುಕ್ತವೇ. ಅನೇಕ ರೋಗಗಳೂ ನಿವಾರಣೆಯಾಗುತ್ತವೆ. ಇಂತಹ ಒಂದು ಬಿಲ್ವ ಶಿವನಿಗರ್ಪಿತವಾದರೂ ಸ್ವರ್ಗಪ್ರಾಪ್ತಿ ಎನ್ನಲಾಗುತ್ತದೆ. ಉದಯಿಸುತ್ತಿರುವ ಸೂರ್ಯನಂತೆ ಶರೀರಹೊಂದಿ ಕಂಗೊಳಿಸುತ್ತಿರುವ ಶ್ರೀಲಕ್ಷ್ಮಿಯು ಬಿಲ್ವಾರಣ್ಯದಲ್ಲಿ ನೆಲೆಸುತ್ತಾಳೆ ಎಂದು ಸಹ ವರ್ಣನೆ ಸಿಗುತ್ತದೆ. ಇಂತಹ ಬಿಲ್ವ ಪತ್ರೆಯ ಮರ ಎಲ್ಲೆಂದರಲ್ಲಿ ಬೆಳೆಯುವುದಿಲ್ಲ. ಅದು ಬೆಳೆಯುವುದು ಅಂತಹ ವಾತಾವರಣದಲ್ಲಿ. 

#ಬಿಲ್ವದಲ್ಲಿ_ ಶ್ರೀಲಕ್ಷ್ಮಿ
ಸದ್ಯೋಜಾತರು