February 4, 2026

ಭಸ್ಮ, ರುದ್ರಾಕ್ಷಿ ಧಾರಣೆಯ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವ

ಭಸ್ಮಧಾರಣೆ -
    ಭಸ್ಮವನ್ನು ವಿಭೂತಿ ಎಂದು ಕರೆಯುತ್ತೇವೆ. "ವಿಭೂತಿರ್ಭೂತಿ ಹೇತುತ್ವಾತ್" ಅಂದರೆ "ಭೂತಿಗೆ ಕಾರಣವಾದದ್ದು " ವಿಭೂತಿ". 'ಭೂತಿ' ಎಂದರೆ ಸಂಪತ್ತು. ಸಂಪತ್ತಿಗೆ ಕಾರಣವಾದದ್ದು ವಿಭೂತಿ. ಸಂಪತ್ತೆಂದರೆ ಭೌತಿಕ ಸಂಪತ್ತು ಮತ್ತು ಜ್ಞಾನ ಸಂಪತ್ತು ಎರಡು ವಿಧ. ಜೀವನಕ್ಕೆ ಎರಡೂ ಸಂಪತ್ತುಗಳು ಅವಶ್ಯಕ. ಶಾಸ್ತ್ರೋಕ್ತ ವಿಧಿಯಂತೆ ಶ್ರದ್ಧೆಯಿಂದ ವಿಭೂತಿಯನ್ನು ಧರಿಸಿದರೆ ಉಭಯ ಸಂಪತ್ತುಗಳು ಸಹಜವಾಗಿ ಪ್ರಾಪ್ತವಾಗುತ್ತವೆ‌.
     ವಿಭೂತಿಯನ್ನು ಗೋವಿನ ಸಗಣಿಯನ್ನು ಬೆರಣಿ ಮಾಡಿ ಒಣಗಿಸಿ ನಂತರ ಸುಟ್ಟು ಅದರಿಂದ ಬಂದ ಬೂದಿಯನ್ನು ಸೋಸಿ, ಅದಕ್ಕೆ ನೀರು ಬೆರೆಸಿ ಸೋಸಿ ಉಂಡೆ ಮಾಡಿ ಒಣಗಿಸಿ ಸುಡುತ್ತಾರೆ. ಈ ಪ್ರಕ್ರಿಯೆ ಎರಡರಿಂದ ಮೂರು ಸಲ ನಡೆಯುತ್ತದೆ. ಈ ರೀತಿ ತಯಾರಾದ ಬೂದಿಯನ್ನು ಗಟ್ಟಿ ಆಕಾರ ಮಾಡುತ್ತಾರೆ ಇದೇ ವಿಭೂತಿ. ಗೋಮಾತೆಯಲ್ಲಿ ಸಕಲ ದೇವತೆಗಳು ವಾಸವಾಗಿದ್ದಾರೆ. ಗೋವಿನ ಸಗಣಿಯಲ್ಲಿ ಲಕ್ಷ್ಮಿಯ ನಿವಾಸವಿರುತ್ತದೆ. 
    ಹೀಗೆ ತಯಾರಾದ ಶುಭ್ರ ಲಕ್ಷ್ಮಿ ಸ್ವರೂಪವಾದ ವಿಭೂತಿಯನ್ನು ಪ್ರತಿದಿನ ಶಿವನಾಮ ಸ್ಮರಣೆಯೊಂದಿಗೆ ಮೂರು ಬೆರಳುಗಳಿಂದ ಹಣೆಗೆ ಧರಿಸುವುದರಿಂದ ನಾನಾ ಜನ್ಮ ಜನ್ಮದ ಪ್ರಾರಬ್ಧ ಕರ್ಮಗಳು, ಮಾಡಿದ ಸರ್ವ ಪಾಪಗಳು ನಿವಾರಣೆಯಾಗಿ ಭೌತಿಕ ಸಂಪತ್ತು ಪ್ರಾಪ್ತವಾಗುತ್ತದೆ. ಇದು ಶಿವನಿಗೆ ಅತ್ಯಂತ ಪ್ರಿಯವಾಗಿದೆ. ಇಂತಹ ವಿಭೂತಿಯಲ್ಲಿ ಸೂಕ್ಷ್ಮ ಹಾನಿಕಾರಕ ಬ್ಯಾಕ್ಟೀರಿಯಾ ಜೀವಿಗಳನ್ನು ಕೊಲ್ಲುವ ಮತ್ತು ನಂಜು ನಿವಾರಕ ಗುಣಗಳಿವೆ. ಚರ್ಮ ಕಾಯಿಲೆಗಳಿಗೆ ಗುಣಕಾರಕ. ಈ ಕಾರಣದಿಂದ ನಮ್ಮ ಹಿರಿಯರು ಬೆರಣಿಯ ಬೂದಿಯಿಂದ ಕೈತೊಳೆಯುವುದು. ಪಾತ್ರೆಗಳನ್ನು ತೊಳೆಯುವುದು ಮಾಡುತ್ತಿದ್ದರು. 
ವಿಭೂತಿ ಧಾರಣೆ ಆಧ್ಯಾತ್ಮಿಕ ಮಾತ್ರ ಅಲ್ಲ ವೈಜ್ಞಾನಿಕವಾಗಿಯೂ ಬಹಳ ಉಪಯುಕ್ತವಾಗಿದೆ. 

ರುದ್ರಾಕ್ಷಿ ಧಾರಣೆ
    ರುದ್ರಾಕ್ಷಿಗಳನ್ನು ರುದ್ರನ ಕಣ್ಣುಗಳೆಂದು ಪುರಾಣಗಳಲ್ಲಿ ಕರೆಯುತ್ತಾರೆ. ಅರಿವಿನ ಕಣ್ಣು ಎಂದು ಅರ್ಥ, ರುದ್ರಾಕ್ಷಿಯನ್ನು ಕೊರಳಲ್ಲಿ ಧರಿಸಬೇಕು. ರುದ್ರಾಕ್ಷಿಯಿಂದ ಅನೇಕ ಪ್ರಯೋಜನಗಳಿವೆ. ಸಾಧಕನ ದೈಹಿಕ ಶುದ್ಧತೆಯ ಜೊತೆಗೆ ಅರಿವಿನ ಕಣ್ಣು ತೆರೆಯುತ್ತ ಅಂತರಂಗದೊಳಗೆ ಜ್ಞಾನೋದಯವನ್ನು ಉಂಟು ಮಾಡುತ್ತದೆ. ಇದು ಕೇವಲ ಹೊರಗೆ ಧರಿಸುವ ಮಾಲೆ ಮಾತ್ರ ಅಲ್ಲ ಒಳಗಿನ ಅಜ್ಞಾನ ಕಳೆಯುವ ಬೆಳಕಾಗಿದೆ. 
    ವೈಜ್ಞಾನಿಕವಾಗಿ ಹೇಳುವುದಾದರೆ ಇದು ಆಯಸ್ಕಾಂತದಂತೆ  ಕೆಲಸಮಾಡಿ ರಕ್ತ ಸಂಚಾರವನ್ನು ಕ್ರಮಬದ್ಧವಾಗಿ ನಿಯಂತ್ರಿಸಿ ಹೃದಯದ ಕಾರ್ಯವನ್ನು ಮತ್ತು ರಕ್ತದೊತ್ತಡವನ್ನು(BP) ನಿಯಂತ್ರಿಸುತ್ತದೆ. ಅಲ್ಲದೇ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಭಯ, ಆತಂಕ, ಫೋಬಿಯಾ ಮತ್ತು ಚಿಂತೆಗಳನ್ನು ದೂರ ಮಾಡುತ್ತದೆ. ರುದ್ರಾಕ್ಷಿಯು ಉರಿಯೂತ, ಚರ್ಮದ ಕಾಯಿಲೆಗಳಿಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದೇಹದ ಯಾವ ಯಾವ ಭಾಗದಲ್ಲಿ  ಧರಿಸುವರೋ ಆಯಾ ಭಾಗದಲ್ಲಿ ಅಕ್ಯೀಪ್ರೆಶರ್ ನಂತೆ ಕೆಲಸ ಮಾಡಿ ದೇಹಕ್ಕೆ ಚೈತನ್ಯ, ಧ್ಯಾನಕ್ಕೆ ಪ್ರಚೋದನೆ, ಮನಸ್ಸಿನ ಏಕಾಗ್ರತೆಗೆ ಸಹಾಯಮಾಡುತ್ತದೆ. 
    ರುದ್ರನ ನೇತ್ರ ಜಲದಿಂದ ಉತ್ಪನ್ನವಾಗಿರುವದಿಂದ ರುದ್ರಾಕ್ಷಗಳೆಂದು ಪ್ರಸಿದ್ಧವಾದ ಇವು ಶ್ರೀರುದ್ರನಷ್ಟೇ ಸಾಮರ್ಥ್ಯ ಪಡೆದಿರುತ್ತವೆ. ಇವುಗಳನ್ನು ಧರಿಸಿದವನ ದೇಹವು ದೇವಾಲಯದಂತೆ ಪವಿತ್ರವೂ ಮತ್ತು ಶಿವನಂತೆ ಪೂಜ್ಯನೂ ಆಗುವನು.
ಆದುದರಿಂದ ನಾವೆಲ್ಲ ಆಧ್ಯಾತ್ಮಿಕ, ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ರುದ್ರಾಕ್ಷಿ ಧಾರಣೆಯನ್ನು ಮಾಡೋಣ. 

ಲಿಂಗಧಾರಣೆ (ಇಷ್ಟಲಿಂಗ)
"ಇಷ್ಟಲಿಂಗಮಿದಮ್ ಸಾಕ್ಷಾದನಿಷ್ಟಪರಿಹಾರಕಮ್" 
ಯಾರು ಪ್ರತಿದಿನವೂ ಗುರುಗಳು ಕೊಟ್ಟ ಇಷ್ಡಲಿಂಗವನ್ನು ಪೂಜಿಸುತ್ತಾರೋ ಅವರ ಸಕಲ ಅನಿಷ್ಟಗಳೂ ಪರಿಹಾರವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ. 
ಹುಟ್ಟು ಸಾವುಗಳೆಂಬ ಭವಬಂಧನಗಳನ್ನು ನಿವಾರಿಸಿ ಲಿಂಗಾಂಗ ಸಾಮರಸ್ಯ ಮತ್ತು ಇಷ್ಟಪ್ರಾಪ್ತಿಯನ್ನುಂಟು ಮಾಡುವ ಲಿಂಗವೇ ಇಷ್ಟಲಿಂಗ. 
    ಇಷ್ಟಲಿಂಗವನ್ನು ಕಪ್ಪು ಕಂತೆಯಿಂದ ಮಾಡುತ್ತಾರೆ. ನಮ್ಮ ಎಡ ಅಂಗೈಯಲ್ಲಿ ಇಟ್ಟುಕೊಂಟು ಪೂಜೆ ಮಾಡಿ ತದೇಕ ಚಿತ್ತದಿಂದ ಲಿಂಗುವನ್ನೇ ದೃಷ್ಟಿಸಿ ಧ್ಯಾನಮಾಡುವುದರಿಂದ ಮನಸ್ಸಿಗೆ ಏಕಾಗ್ರತೆ ನೆಮ್ಮದಿ ಸಿಗುತ್ತದೆ. ಲಿಂಗವು ಕಪ್ಪು ಇರುವುದರಿಂದ ಆಕರ್ಷಿಸುವ ಶಕ್ತಿ ಇರುತ್ತದೆ. ಸೂರ್ಯನಿಂದ ಉತ್ಪತ್ತಿಯಾಗುವ ಪ್ರಾಣ ಶಕ್ತಿಯನ್ನು ಅದು ಹೀರಿಕೊಂಡು ನಾವು ಪೂಜೆ ಮಾಡುವ ಸಮಯದಲ್ಲಿ ಅಂಗೈಯಲ್ಲಿ ಇಟ್ಟುಕೊಂಡಾಗ ಅಂಗೈ ಮಧ್ಯದಲ್ಲಿ ಯಾವಾಗಲೂ ಬಿಸಿ ಇರುತ್ತದೆ. ಲಿಂಗವೂ ಬಿಸಿಯಾಗಿ ತಾನು ಹೀರಿಕೊಂಡ ಪ್ರಾಣಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ನಾವು ಲಿಂಗವನ್ನೇ ದೃಷ್ಟಿಸುವಾಗ ಕಣ್ಣು ದೃಷ್ಟಿಯ ಮುಖಾಂತರ ನಮ್ಮ ಮೆದುಳನ್ನು ಪ್ರಾಣ ಶಕ್ತಿಯು ಪ್ರವೇಶಿಸಿಸುತ್ತದೆ. ಇದರಿಂದ ನಾವು ಯಾವಾಗಲೂ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ. ಇರದರಿಂದ ದ್ಯಾನಾಸಕ್ತರಾಗಿ ಪರಮಾತ್ಮನ ಸಾಕ್ಷಾತ್ಕಾರವಾಗಿ ಜೀವನ್ಮುಕ್ತಿ ಪ್ರಾಪ್ತಿಯಾಗುತ್ತದೆ. 
    ಈ ಕಂತೆಲಿಂಗುವನ್ನು ಅನೇಕ ಗಿಡಮೂಲಿಕೆಗಳಿಂದ ತಯಾರಿಸುತ್ತಾರೆ. ಈ ಲಿಂಗುವಿನ ಮೇಲೆ ಪೂಜೆಯ ನಂತರ ಉದಕವನ್ನು (ಜಲ/ಶುದ್ಧನೀರು) ಹಾಕಿ ನಾವು ಸೇವಿಸುವುದರಿಂದ ಗಿಡಮೂಲಿಕೆಯಿಂದ ಹೊರಹೊಮ್ಮುವ ರೋಗನಿರೋಧಕ ಶಕ್ತಿ ನಮ್ಮ ದೇಹದೊಳಗೆ  ಪ್ರವೇಶಿಸಿ ಅನೇಕ ಕಾಯಿಲೆಗಳಿಂದ ಗುಣಮುಖರಾಗುತ್ತಾರೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದುದರಿಂದ ನಾವು ಆಧ್ಯಾತ್ಮಿಕ ಸಾಧನೆ ಪಡೆಯುವುದರ ಜೊತೆಗೆ ದೈಹಿಕವಾಗಿಯೂ ಮಾನಸಿಕವಾಗಿಯೂ ಆರೋಗ್ಯದಿಂದ ಇರಲು ಲಿಂಗಧಾರಣೆ ಅತಿಮುಖ್ಯವಾಗಿದೆ.
ಭಸ್ಮ, ರುದ್ರಾಕ್ಷಿ ಧಾರಣೆಗೆ ಯಾವುದೇ ಜಾತಿ, ಮತ ಪಂಥ ಬೇಧವಿಲ್ಲ, ಎಲ್ಲರೂ ಧಾರಣೆ ಮಾಡಬಹುದು. 

ವೇ|| ಶ್ರೀ || ಚನ್ನೇಶ ಶಾಸ್ತ್ರಿಗಳು ಉ ಮಠದ ಹಿರೇಕೆರೂರ (ಹೊಸಹಳ್ಳಿ)

ಮರಣದ ಮಹತ್ವ

    ಊರ ಹೊರಗಿನ ಮರದ ಕೆಳಗೆ  ಸದಾ ಧ್ಯಾನಸ್ಥರಾಗಿ ಕುಳಿತಿರುವ  ಒಬ್ಬ ಋಷಿಯ ಬಳಿಗೆ , ಒಬ್ಬ ರಾಜ ಹೋಗಿ,  ಗುರುಗಳೇ, ಅಮರತ್ವವನ್ನು ನೀಡುವ ಯಾವುದಾದರೂ ಔಷಧಿ, ಅಥವಾ ಗಿಡಮೂಲಿಕೆಗಳಿದ್ದರೆ ದಯವಿಟ್ಟು ನನಗೆ ತಿಳಿಸಿ, ಎಂದು ಕೇಳಿದ.

  ಆಗ ಋಷಿಗಳು, ರಾಜ ಇಲ್ಲಿರುವ  ಎರಡು   ಮಹಾ ಪರ್ವತಗಳನ್ನು ದಾಟಿದ ನಂತರ , ಅಲ್ಲಿ ಒಂದು ಸರೋವರವಿದೆ,ಅದರ ನೀರನ್ನು ಕುಡಿದಾಗ, ನೀನು ಅಮರನಾಗುವೆ, ಎಂದು ಹೇಳಿದರು.

    ಋಷಿಗಳು ಹೇಳಿದಂತೆ ಎರಡು ಪರ್ವತಗಳನ್ನು ದಾಟಿದ ನಂತರ ರಾಜ ,ಒಂದು ಸರೋವರವನ್ನು ಕಂಡ. ಇನ್ನೇನು ಅದರಲ್ಲಿನ ನೀರು ಬಾಚಿ ಕುಡಿಯಬೇಕೆಂದು ಕೊಂಡಾಗ,ಯಾರೋ  ಜೋರಾಗಿ ನರಳುತ್ತಿರುವಂತ  ಶಬ್ದ ಕೇಳಿಸಿತು. ಶಬ್ದ ಬಂದ ಕಡೆಗೆ ಹೋಗಿ ನೋಡಿದರೆ, ಅಲ್ಲೊಬ್ಬ ಅತ್ಯಂತ ದುರ್ಬಲ ವ್ಯಕ್ತಿಯನ್ನು ಕಂಡನು.ಆ ವ್ಯಕ್ತಿ ನರಳುತ್ತಿರುವ ಕಾರಣವನ್ನು  ರಾಜ ಕೇಳಿದಾಗ,  ಆತ ,ನಾನು  ಈ ಸರೋವರದ ನೀರನ್ನು ಕುಡಿದು ಅಮರನಾದೆ, ನನಗೆ ನೂರು ವರ್ಷ ತುಂಬಿದ ನಂತರ ‌ನನ್ನ ಮಗ ನನ್ನನ್ನು ಮನೆಯಿಂದ ಆಚೆ ಓಡಿಸಿದ,ಕಳೆದ ಐವತ್ತು ವರ್ಷಗಳಿಂದ  ನಾನು ಹೀಗೇ  ಇಲ್ಲೇ, ನರಳುತ್ತಾ ಮಲಗಿದ್ದೇನೆ, ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ, ನನ್ನ ಮಗ  ಈಗ ತೀರಿಕೊಂಡಿದ್ದಾನೆ, ನನ್ನ ‌ಮೊಮ್ಮಕ್ಕಳೂ ಈಗ ‌ವೃದ್ದರಾಗಿದ್ದಾರೆ, ಸಾಯಬೇಕೆಂದುಕೊಂಡು ನಾನು, ಅನ್ನ ,ನೀರು  ಸೇವಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ, ಆದರೂ ಕೂಡ ನಾನಿನ್ನು ಬದುಕಿದ್ದೇನೆ, ಎಂದು ದುಃಖಿಸುತ್ತಾ ಹೇಳಿದ.

    ರಾಜನಿಗೆ ಅವನನ್ನು ನೋಡಿ, ಅಯ್ಯೋ, ಅನ್ನಿಸಿತು, ಆದರೆ ಅವನಿಗೊಂದು ‌ಆಲೋಚನೆ ಬಂತು. ಬರೀ ಅಮರತ್ವದಿಂದ ಏನೂ ಪ್ರಯೋಜನವಿಲ್ಲ, ಅದರ ಜೊತೆಗೆ ಯೌವ್ವನವನ್ನು ಪಡೆದುಕೊಂಡರೆ,ಆಗ ಸರಿ ಹೋಗಬಹುದು, ಎಂದುಕೊಂಡು, ಇದಕ್ಕೆ ಪರಿಹಾರವನ್ನು ಋಷಿಗಳ ಬಳಿ ಕಂಡುಕೊಳ್ಳಲು ಅವನು ಪುನಃ ಅವರ ಬಳಿಗೆ  ಹೋಗಿ, ಗುರುಗಳೇ ನನಗೆ ಅಮರತ್ವದೊಂದಿಗೆ ಯೌವ್ವನವನ್ನು ಕೂಡಾ ಹೇಗೆ ಪಡೆಯುವುದೆಂಬುದನ್ನು ದಯವಿಟ್ಟು ತಿಳಿಸಿಕೊಡಿ ಎಂದು ಕೇಳಿದನು.

    ಆಗ ಋಷಿಗಳು, ನಿನಗೆ ಇದೇ ಸರೋವರನ್ನು ದಾಟಿದ ನಂತರ, ಮತ್ತೊಂದು  ಮಹಾ ಪರ್ವತ ಕಾಣುತ್ತದೆ, ಅದನ್ನು ದಾಟಿದರೆ, ಹಳದಿ ಹಣ್ಣುಗಳಿಂದ ತುಂಬಿದ ಮರವೊಂದು ಕಾಣುತ್ತದೆ, ಅವುಗಳಲ್ಲಿ ಒಂದು ಹಣ್ಣನ್ನು ತಿಂದರೆ, ನೀನು ಅಮರತ್ವ ಮತ್ತು ಯವ್ವನ ಎರಡನ್ನೂ ಪಡೆಯುತ್ತೀಯ ಎಂದು ಹೇಳಿದರು.

    ಆಗ ರಾಜನಿಗೆ ಬಹಳ ಸಂತೋಷವಾಯಿತು .ಋಷಿಗಳು  ಹೇಳಿದಂತೆ, ಪರ್ವತವನ್ನು ದಾಟಿ, ಹಳದಿ ಹಣ್ಣಿನಿಂದ ತುಂಬಿದ ಮರದತ್ತ ಹೋದ. ಆತ ಒಂದು ಹಣ್ಣನ್ನು ಕಿತ್ತು ತಿನ್ನಲು ಹೋದಾಗ, ಅವನಿಗೆ ಯಾರೋ, ಜೋರಾಗಿ  ಕಿರುಚಾಡುತ್ತಾ ಜಗಳ ವಾಡುತ್ತಿರುವಹಾಗೆ, ಭಾಸವಾಯಿತು. ಹಣ್ಣು ತಿನ್ನುವುದನ್ನು ಬಿಟ್ಟು, ಶಬ್ದ ಬಂದ ಕಡೆ ಹೋಗಿ ನೋಡಿದಾಗ, ನಾಲ್ವರು ಯುವಕರು ಜೋರಾಗಿ ವಾದ ಮಾಡುತ್ತಾ ಜಗಳವಾಡುತ್ತಿದ್ದರು. ಅವರು ಏಕೆ ಹೀಗೆ ಹೊಡೆದಾಡುತ್ತಿದ್ದಾರೆ ಎಂದು ರಾಜ ಕೇಳಿದ. 
   ಆಗ ಒಬ್ಬ ಹೇಳಿದ, ನನಗೀಗ ಇನ್ನೂರೈವತ್ತು ವರ್ಷವಾಗಿದೆ, ಮತ್ತು ನನ್ನ ಬಲಭಾಗದಲ್ಲಿರುವ ವ್ಯಕ್ತಿ, ಆತ ನನ್ನ ತಂದೆ, ಅವನಿಗೆ ಮುನ್ನೂರು ವರ್ಷವಾಗಿದೆ, ಅವರು ಇನ್ನೂ ನನ್ನ ಪಾಲಿನ ಆಸ್ತಿಯನ್ನು ನನಗೆ ನೀಡುತ್ತಿಲ್ಲ, ಎಂದು ಹೇಳಿದ.
    ರಾಜ ಬಲಭಾಗದಲ್ಲಿರುವ ವ್ಯಕ್ತಿಯನ್ನು ಏಕೆಂದು ಕೇಳಿದಾಗ, ಆತ , ಮುನ್ನೂರೈವತ್ತು ವರ್ಷ ವಯಸ್ಸಿನ ನನ್ನ ತಂದೆ ಇನ್ನೂ ಬದುಕಿದ್ದಾರೆ,  ಆತ ನನ್ನ ಪಾಲನ್ನು ನನಗೇ  ನೀಡಿಲ್ಲ, ಇನ್ನು ನಾನು ನನ್ನ ಮಗನಿಗೆ ಹೇಗೆ ಕೊಡಲಿ,ಎಂದ. ಮುನ್ನೂರೈವತ್ತರ ಯುವಕ,ನಾನೂರು ವರ್ಷ ವಯಸ್ಸಿನ ತನ್ನ ತಂದೆಯನ್ನು ತೋರಿಸಿ, ಅದೇ ದೂರನ್ನು ಹೇಳಿದನು.

   ಹೀಗೆ ಆಸ್ತಿಗಾಗಿ , ನಮ್ಮ ಅಂತ್ಯವಿಲ್ಲದ ಹೋರಾಟವನ್ನು ನೋಡಿ ಗ್ರಾಮಸ್ಥರು, ನಮ್ಮನ್ನು  ಹಳ್ಳಿಯಿಂದ ಹೊರಗೆ ಹಾಕಿದ್ದಾರೆ, ಎಂದು ಅವರೆಲ್ಲರೂ ರಾಜನಿಗೆ ತಿಳಿದರು. 

   ಇದನ್ನು ಕೇಳಿದ ರಾಜ ಅಘಾತಕ್ಕೊಳಗಾಗಿ,  ಸದ್ಯ!  ನಾನಿನ್ನೂ ಹಣ್ಣನ್ನು ತಿನ್ನಲಿಲ್ಲವಲ್ಲಾ!  ಎಂದುಕೊಂಡು,ಋಷಿಯ ಬಳಿಗೆ ಪುನಹ ಓಡಿ  ಹೋದ. ನನಗೆ ಸಾವಿನ ಮಹತ್ವವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು, ಗುರುಗಳೇ ಎಂದು ಅವರ ಪಾದಗಳಿಗೆ  ಎರಗಿದನು.

    ಋಷಿಗಳು ನಗುತ್ತಾ, ಸಾವು ಅಸ್ತಿತ್ವದಲ್ಲಿರುವುದರಿಂದ, ಜಗತ್ತಿನಲ್ಲಿ ಇನ್ನೂ ಪ್ರೀತಿ ವಿಶ್ವಾಸವಿದೆ. ಅಮರತ್ವವನ್ನು ಪಡೆಯಲು ಪ್ರಯತ್ನಿಸುವ ಬದಲು, ಬದುಕಿರುವಷ್ಟು ದಿನವೂ ಪ್ರತಿಕ್ಷಣವನ್ನೂ ಸಂತೋಷದಿಂದ, ಆನಂದದಿಂದ ಜೀವಿಸುವುದನ್ನು  ಕಲಿಯಿರಿ, ಆಗ  ಇಡೀ ಜಗತ್ತೇ ಜಗಮಗಿಸುತ್ತಿರುತ್ತದೆ. ಎಂದು ಹೇಳಿದರು.

ಶ್ರೀಅಷ್ಟಲಕ್ಷ್ಮೀಮಹಾಮಂತ್ರಮ್

ಶ್ರೀಅಷ್ಟಲಕ್ಷ್ಮೀಮಹಾಮಂತ್ರಂ
(ಋಷಿಃ - ಛಂದಃ - ದೇವತಾ - ಧ್ಯಾನ ಸಹಿತಂ)
ಶ್ರೀಲಕ್ಷ್ಮೀನಾರಾಯಣಃ
ಅಸ್ಯ ಶ್ರೀರಮಾನಾಥಮಹಾಮಂತ್ರಸ್ಯ -
ನಾರಾಯಣ ಋಷಿಃ - ವಿರಾಟ್ ಛಂದಃ - ಲಕ್ಷ್ಮೀನಾರಾಯಣೋ ದೇವತಾ -
ಅಂ ಬೀಜಂ - ಉಂ ಶಕ್ತಿಃ - ಮಂ ಕೀಲಕಂ -
ಅಸ್ಯ ಶ್ರೀಲಕ್ಷ್ಮೀನಾರಾಯಣಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ .
ಓಂ ಅಂಗುಷ್ಟಾಭ್ಯಾಂ ನಮಃ ಓಂ ನಂ ತರ್ಜನೀಭ್ಯಾಂ ನಮಃ
ಓಂ ರಂ ಮಧ್ಯಮಾಭ್ಯಾಂ ನಮಃ ಓಂ ಯಂ ಅನಾಮಿಕಾಭ್ಯಾಂ ನಮಃ
ಓಂ ಣಂ ಕನಿಷ್ಠಿಕಾಭ್ಯಾಂ ನಮಃ ಓಂ ಯಂ ಕರತಲಕರಪೃಷ್ಠಾಭ್ಯಾಂ ನಮಃ
ಓಂ ಹೃದಯಾಯ ನಮಃ ಓಂ ನಂ ಶಿರಸೇ ಸ್ವಾಹಾ
ಓಂ ರಂ ಶಿಖಾಯೈ ವಷಟ್ ಓಂ ಯಂ ಕವಚಾಯ ಹುಂ
ಓಂ ಣಂ ನೇತ್ರಾಭ್ಯಾಂ ವೌಷಟ್ ಓಂ ಯಂ ಅಸ್ತ್ರಾಯ ಫಟ್
ಓಂ ಭೂರ್ಭುವಸ್ಯುವರೋಮಿತಿ ದಿಗ್ಬಂಧಃ ..

ಧ್ಯಾನಂ
ಶ್ರೀವತ್ಸವಕ್ಷಸಂ ವಿಷ್ಣುಂ ಚಕ್ರಶಂಖಸಮನ್ವಿತಂ .
ವಾಮೋರುವಿಲಸಲ್ಲಕ್ಷ್ಮ್ಯಾಽಽಲಿಂಗಿತಂ ಪೀತವಾಸಸಂ ..

ಸುಸ್ಥಿರಂ ದಕ್ಷಿಣಂ ಪಾದಂ ವಾಮಪಾದಂ ತು ಕುಂಜಿತಂ .
ದಕ್ಷಿಣಂ ಹಸ್ತಮಭಯಂ ವಾಮಂ ಚಾಲಿಂಗಿತಶ್ರಿಯಂ ..

ಶಿಖಿಪೀತಾಂಬರಧರಂ ಹೇಮಯಜ್ಞೋಪವೀತಿನಂ .
ಏವಂ ಧ್ಯಾಯೇದ್ರಮಾನಾಥಂ ಪಶ್ಚಾತ್ಪೂಜಾಂ ಸಮಾಚರೇತ್ ..

ಮೂಲಮಂತ್ರಂ - ಓಂ ನಮೋ ನಾರಾಯಣಾಯ .

ಶ್ರೀ ಆದಿಲಕ್ಷ್ಮೀಃ
ಅಸ್ಯ ಶ್ರೀ ಆದಿಲಕ್ಷ್ಮೀಮಹಾಮಂತ್ರಸ್ಯ -
ಭಾರ್ಗವ ಋಷಿಃ - ಅನುಷ್ಟುಬಾದಿ ನಾನಾ ಛಂದಾಂಸಿ - ಶ್ರೀ ಆದಿಲಕ್ಷ್ಮೀರ್ದೇವತಾ -
ಶ್ರೀಂ ಬೀಜಂ - ಹ್ರೀಂ ಶಕ್ತಿಃ - ಐಂ ಕೀಲಕಂ -
ಶ್ರೀಮದಾದಿ ಮಹಾಲಕ್ಷ್ಮೀಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ .
ಓಂ ಶ್ರೀಂ ಅಂಗುಷ್ಠಾಭ್ಯಾಂ ನಮ ಓಂ ಹ್ರೀಂ ತರ್ಜನೀಭ್ಯಾಂ ನಮಃ
ಓಂ ಐಂ ಮಧ್ಯಮಾಭ್ಯಾಂ ನಮ ಓಂ ಶ್ರೀಂ ಅನಾಮಿಕಾಭ್ಯಾಂ ನಮಃ
ಓಂ ಹ್ರೀಂ ಕನಿಷ್ಠಿಕಾಭ್ಯಾಂ ನಮಃ ಓಂ ಐಂ ಕರತಲಕರಪೃಷ್ಠಾಭ್ಯಾಂ ನಮಃ
ಓಂ ಶ್ರೀಂ ಹೃದಯಾಯ ನಮಃ ಓಂ ಹ್ರೀಂ ಶಿರಸೇ ಸ್ವಾಹಾ
ಓಂ ಐಂ ಶಿಖಾಯೈ ವಷಟ್ ಓಂ ಶ್ರೀಂ ಕವಚಾಯ ಹುಂ
ಓಂ ಹ್ರೀಂ ನೇತ್ರಾಭ್ಯಾಂ ವೌಷಟ್ ಓಂ ಐಂ ಅಸ್ತ್ರಾಯ ಫಟ್
ಓಂ ಭೂರ್ಭುವಸ್ಯುವರೋಮಿತಿ ದಿಗ್ಬಂಧಃ ..

ಧ್ಯಾನಂ
ದ್ವಿಭುಜಾಂ ಚ ದ್ವಿನೇತ್ರಾಂ ಚ ಸಾಭಯಾಂ ವರದಾನ್ವಿತಾಂ .
ಪುಷ್ಪಮಾಲಾಧರಾಂ ದೇವೀಂ ಅಂಬುಜಾಸನಸಂಸ್ಥಿತಾಂ ..

ಪುಷ್ಪತೋರಣಸಮ್ಯುಕ್ತಾಂ ಪ್ರಭಾಮಂಡಲಮಂಡಿತಾಂ .
ಸರ್ವಲಕ್ಷಣಸಮ್ಯುಕ್ತಾಂ ಸರ್ವಾಭರಣಭೂಷಿತಾಂ ..

ಪೀತಾಂಬರಧರಾಂ ದೇವೀಂ ಮಕುಟೀಚಾರುಬಂಧನಾಂ .
ಸೌಂದರ್ಯನಿಲಯಾಂ ಶಕ್ತಿಂ ಆದಿಲಕ್ಷ್ಮೀಮಹಂ ಭಜೇ ..

ಮೂಲಮಂತ್ರಂ - ಓಂ ಶ್ರೀಂ ಆದಿಲಕ್ಷ್ಮ್ಯೈ ನಮಃ .

ಶ್ರೀಸಂತಾನಲಕ್ಷ್ಮೀ
ಅಸ್ಯ ಶ್ರೀಸಂತಾನಲಕ್ಷ್ಮೀಮಹಾಮಂತ್ರಸ್ಯ -
ಭೃಗು ಋಷಿಃ - ನಿಚೃತ್ ಛಂದಃ - ಶ್ರೀಸಂತಾನಲಕ್ಷ್ಮೀಃ ದೇವತಾ -
ಶ್ರೀಂ ಬೀಜಂ - ಹ್ರೀಂ ಶಕ್ತಿಃ - ಕ್ಲೀಂ ಕೀಲಕಂ -
ಅಸ್ಯ ಶ್ರೀಸಂತಾನಲಕ್ಷ್ಮೀಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ .
ಓಂ ಸ್ರಾಂ ಅಂಗುಷ್ಟಾಭ್ಯಾಂ ನಮಃ ಓಂ ಸ್ರೀಂ ತರ್ಜನೀಭ್ಯಾಂ ನಮಃ
ಓಂ ಸ್ರೂಂ ಮಧ್ಯಮಾಭ್ಯಾಂ ನಮಃ ಓಂ ಸ್ರೈಂ ಅನಾಮಿಕಾಭ್ಯಾಂ ನಮಃ
ಓಂ ಸ್ರೌಂ ಕನಿಷ್ಠಿಕಾಭ್ಯಾಂ ನಮಃ ಓಂ ಸ್ರಃ ಕರತಲಕರಪೃಷ್ಠಾಭ್ಯಾಂ ನಮಃ
ಓಂ ಸ್ರಾಂ ಹೃದಯಾಯ ನಮಃ ಓಂ ಸ್ರೀಂ ಶಿರಸೇ ಸ್ವಾಹಾ
ಓಂ ಸ್ರೂಂ ಶಿಖಾಯೈ ವಷಟ್ ಓಂ ಸ್ರೈಂ ಕವಚಾಯ ಹುಂ
ಓಂ ಸ್ರೌಂ ನೇತ್ರಾಭ್ಯಾಂ ವೌಷಟ್ ಓಂ ಸ್ರಃ ಅಸ್ತ್ರಾಯ ಪಟ್
ಓಂ ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ..

ಧ್ಯಾನಂ
ಜಟಾಮಕುಟಸಮ್ಯುಕ್ತಾಂ ಸ್ಥಿರಾಸನ್ಸಮನ್ವಿತಾಂ .
ಅಭಯಂ ಕಟಕಂಚೈವ ಪೂರ್ಣಕುಂಭಂ ಕರದ್ವಯೇ ..

ಕಂಚುಕಂ ಸನ್ನವೀತಂಚ ಮೌಕ್ತಿಕಂಚಾಪಿ ಧಾರಿಣೀಂ .
ದೀಪಚಾಮರಹಸ್ತಾಭಿಃ ಸೇವಿತಾಂ ಪಾರ್ಶ್ವಯೋರ್ದ್ವಯೋಃ ..

ಬಾಲಸೇನಾನಿಸಂಕಾಶಾಂ ಕರುಣಾಪೂರಿತಾನನಾಂ .
ಮಹಾರಾಜ್ಞೀಂ ಚ ಸಂತಾನಲಕ್ಷ್ಮೀಮಿಷ್ಟಾರ್ಥಸಿದ್ಧಯೇ ..

ಮೂಲಮಂತ್ರಂ - ಓಂ ಶ್ರೀಂ ಸಂತಾನಲಕ್ಷ್ಮ್ಯೈ ನಮಃ .

ಶ್ರೀಗಜಲಕ್ಷ್ಮೀಃ
ಅಸ್ಯ ಶ್ರೀಗಜಲಕ್ಷ್ಮೀಮಹಾಮಂತ್ರಸ್ಯ -
ಶುಕ್ರ ಋಷಿಃ - ಅನುಷ್ಟುಪ್ ಛಂದಃ - ಗಜಲಕ್ಷ್ಮೀಃ ದೇವತಾ -
ಕಂ ಬೀಜಂ - ಮಂ ಶಕ್ತಿಃ - ಲಂ ಕೀಲಕಂ -
ಶ್ರೀಗಜಲಕ್ಷ್ಮೀಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ .
ಓಂ ಕ್ರಾಂ ಅಂಗುಷ್ಠಾಭ್ಯಾಂ ನಮಃ .
ಓಂ ಕ್ರೀಂ ತರ್ಜನೀಭ್ಯಾಂ ನಮಃ .
ಓಂ ಕ್ರೂಂ ಮಧ್ಯಮಾಭ್ಯಾಂ ನಮಃ .
ಓಂ ಕ್ರೈಂ ಅನಾಮಿಕಾಭ್ಯಾಂ ನಮಃ .
ಓಂ ಕ್ರೌಂ ಕನಿಷ್ಠಿಕಾಭ್ಯಾಂ ನಮಃ .
ಓಂ ಕ್ರಃ ಕರತಲಕರಪೃಷ್ಠಾಭ್ಯಾಂ ನಮಃ ..

ಓಂ ಕ್ರಾಂ ಹೃದಯಾಯ ನಮಃ .
ಓಂ ಕ್ರೀಂ ಶಿರಸೇ ಸ್ವಾಹಾ .
ಓಂ ಕ್ರೂಂ ಶಿಖಾಯೈ ವಷಟ್ .
ಓಂ ಕ್ರೈಂ ಕವಚಾಯ ಹುಂ .
ಓಂ ಕ್ರೌಂ ನೇತ್ರಾಭ್ಯಾಂ ವೌಷಟ್ .
ಓಂ ಕ್ರಃ ಅಸ್ತ್ರಾಯ ಪಟ್ .
ಓಂ ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ..

ಧ್ಯಾನಂ .
ಚತುರ್ಭುಜಾಂ ಮಹಾಲಕ್ಷ್ಮೀಂ ಗಜಯುಗ್ಮಸುಪೂಜಿತಾಂ .
ಪದ್ಮಪತ್ರಾಭನಯನಾಂ ವರಾಭಯಕರೋಜ್ಜ್ವಲಾಂ ..

ಊರ್ಧ್ವಂ ಕರದ್ವಯೇ ಚಾಬ್ಜಂ ದಧತೀಂ ಶುಕ್ಲವಸ್ತ್ರಕಂ .
ಪದ್ಮಾಸನೇ ಸುಖಾಸೀನಾಂ ಗಜಲಕ್ಷ್ಮೀಮಹಂ ಭಜೇ ..

ಮೂಲಮಂತ್ರಂ - ಓಂ ಶ್ರೀಂ ಗಜಲಕ್ಷ್ಮ್ಯೈ ನಮಃ .

ಶ್ರೀಧನಲಕ್ಷ್ಮೀಃ
ಅಸ್ಯ ಶ್ರೀಧನಲಕ್ಷ್ಮೀಮಹಾಮಂತ್ರಸ್ಯ -
ಪರಬ್ರಹ್ಮ ಋಷಿಃ - ಅನುಷ್ಟುಪ್ಛಂದಃ - ಶ್ರೀಧನಲಕ್ಷ್ಮೀಃ ದೇವತಾ -
ಲಂ ಬೀಜಂ - ಧಂ ಶಕ್ತಿಃ - ಮಂ ಕೀಲಕಂ -
ಶ್ರೀಧನಲಕ್ಷ್ಮೀಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ .
ಓಂ ತ್ರಾಂ ಅಂಗುಷ್ಠಾಭ್ಯಾಂ ನಮಃ ಓಂ ತ್ರೀಂ ತರ್ಜನೀಭ್ಯಾಂ ನಮಃ
ಓಂ ತ್ರೂಂ ಮಧ್ಯಮಾಭ್ಯಾಂ ನಮಃ ಓಂ ತ್ರೈಂ ಅನಾಮಿಕಾಭ್ಯಾಂ ನಮಃ
ಓಂ ತ್ರೌಂ ಕನಿಷ್ಠಿಕಾಭ್ಯಾಂ ನಮಃ ಓಂ ತ್ರಃ ಕರತಲಕರಪೃಷ್ಠಾಭ್ಯಾಂ ನಮಃ
ಓಂ ತ್ರಾಂ ಹೃದಯಾಯ ನಮಃ ಓಂ ತ್ರೀಂ ಶಿರಸೇ ಸ್ವಾಹಾ
ಓಂ ತ್ರೂಂ ಶಿಖಾಯೈ ವಷಟ್ ಓಂ ತ್ರೈಂ ಕವಚಾಯ ಹುಂ
ಓಂ ತ್ರೌಂ ನೇತ್ರಾಭ್ಯಾಂ ವೌಷಟ್ ಓಂ ತ್ರಃ ಅಸ್ತ್ರಾಯ ಫಟ್
ಓಂ ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ..

ಧ್ಯಾನಂ
ಕಿರೀಟಮುಕುಟೋಪೇತಾಂ ಸ್ವರ್ಣವರ್ಣಸಮನ್ವಿತಾಂ .
ಸರ್ವಾಭರಣಸಮ್ಯುಕ್ತಾಂ ಸುಖಾಸನಸಮನ್ವಿತಾಂ ..

ಪರಿಪೂರ್ಣಂಚ ಕುಂಭಂಚ ದಕ್ಷಿಣೇನ ಕರೇಣ ತು .
ಚಕ್ರಂ ಬಾಣಂಚ ತಾಂಬೂಲಂ ತದಾ ವಾಮಕರೇಣ ತು ..

ಶಂಖಂ ಪದ್ಮಂಚ ಚಾಪಂಚ ಕುಂಡಿಕಾಮಪಿ ಧಾರಿಣೀಂ .
ಸಕಂಚುಕಸ್ತನೀಂ ಧ್ಯಾಯೇತ್ ಧನಲಕ್ಷ್ಮೀಂ ಮನೋಹರಾಂ ..

ಮೂಲಮಂತ್ರಂ - ಓಂ ಶ್ರೀಂ ಧನಲಕ್ಷ್ಮ್ಯೈ ನಮಃ .

ಶ್ರೀಧಾನ್ಯಲಕ್ಷ್ಮೀಃ
ಅಸ್ಯ ಶ್ರೀಧಾನ್ಯಲಕ್ಷ್ಮೀಮಹಾಮಂತ್ರಸ್ಯ -
ಪರಬ್ರಹ್ಮ ಋಷಿಃ - ಅನುಷ್ಟುಪ್ಛಂದಃ - ಶ್ರೀ ಧಾನ್ಯಲಕ್ಷ್ಮೀಃ ದೇವತಾ -
ಧಂ ಬೀಜಂ - ಲಂ ಶಕ್ತಿಃ - ಮಂ ಕೀಲಕಂ -
ಶ್ರೀಧಾನ್ಯಲಕ್ಷ್ಮೀಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ .
ಓಂ ದ್ರಾಂ ಅಂಗುಷ್ಟಾಭ್ಯಾಂ ನಮಃ .
ಓಂ ದ್ರೀಂ ತರ್ಜನೀಭ್ಯಾಂ ನಮಃ .
ಓಂ ದ್ರೂಂ ಮಧ್ಯಮಾಭ್ಯಾಂ ನಮಃ .
ಓಂ ದ್ರೈಂ ಅನಾಮಿಕಾಭ್ಯಾಂ ನಮಃ .
ಓಂ ದ್ರೌಂ ಕನಿಷ್ಠಿಕಾಭ್ಯಾಂ ನಮಃ .
ಓಂ ದ್ರಃ ಕರತಲಕರಪೃಷ್ಠಾಭ್ಯಾಂ ನಮಃ ..

ಓಂ ದ್ರಾಂ ಹೃದಯಾಯ ನಮಃ .
ಓಂ ದ್ರೀಂ ಶಿರಸೇ ಸ್ವಾಹಾ .
ಓಂ ದ್ರೂಂ ಶಿಖಾಯೈ ವಷಟ್ .
ಓಂ ದ್ರೈಂ ಕವಚಾಯ ಹುಂ .
ಓಂ ದ್ರೌಂ ನೇತ್ರಾಭ್ಯಾಂ ವೌಷಟ್ .
ಓಂ ದ್ರಃ ಅಸ್ತ್ರಾಯ ಫಟ್ .
ಓಂ ಭೂರ್ಭುವಸ್ಸುವರೋಮಿತಿ ದಿಗ್ಬಂಧಃ ..

ಧ್ಯಾನಂ .
ವರದಾಭಯಸಮ್ಯುಕ್ತಾಂ ಕಿರೀಟಮಕುಟೋಜ್ಜ್ವಲಾಂ .
ಅಂಬುಜಂಚೇಕ್ಷುಶಾಲಿಂಚ ಕದಂಬಫಲದ್ರೋಣಿಕಾಂ ..

ಪಂಕಜಂಚಾಷ್ಟಹಸ್ತೇಷು ದಧಾನಾಂ ಶುಕ್ಲರೂಪಿಣೀಂ .
ಕೃಪಾಮೂರ್ತಿಂ ಜಟಾಜೂಟಾಂ ಸುಖಾಸನಸಮನ್ವಿತಾಂ ..

ಸರ್ವಾಲಂಕಾರಸಮ್ಯುಕ್ತಾಂ ಸರ್ವಾಭರಣಭೂಷಿತಾಂ .
ಮದಮತ್ತಾಂ ಮನೋಹಾರಿರೂಪಾಂ ಧಾನ್ಯಶ್ರಿಯಂ ಭಜೇ ..

ಮೂಲಮಂತ್ರಂ - ಓಂ ಶ್ರೀಂ ಧಾನ್ಯಲಕ್ಷ್ಮ್ಯೈ ನಮಃ .

ಶ್ರೀವಿಜಯಲಕ್ಷ್ಮೀಃ .
ಅಸ್ಯ ಶ್ರೀವಿಜಯಲಕ್ಷ್ಮೀಮಹಾಮಂತ್ರಸ್ಯ -
ನಾರದ ಋಷಿಃ - ನಾನಾ ಛಂದಾಂಸಿ - ಶ್ರೀವಿಜಯಲಕ್ಷ್ಮೀಃ ದೇವತಾ -
ಲಂ ಬೀಜಂ - ಕ್ಷಂ ಶಕ್ತಿಃ - ಯಂ ಕೀಲಕಂ -
ಸರ್ವಕಾರ್ಯಸಿದ್ಧಿದ್ವಾರಾ ಶ್ರೀವಿಜಯಲಕ್ಷ್ಮೀಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ .
ಓಂ ವ್ರಾಂ ಅಂಗುಷ್ಠಾಭ್ಯಾಂ ನಮಃ .
ಓಂ ವ್ರೀಂ ತರ್ಜನೀಭ್ಯಾಂ ನಮಃ .
ಓಂ ವ್ರೂಂ ಮಧ್ಯಮಾಭ್ಯಾಂ ನಮಃ .
ಓಂ ವ್ರೈಂ ಅನಾಮಿಕಾಭ್ಯಾಂ ನಮಃ .
ಓಂ ವ್ರೌಂ ಕನಿಷ್ಠಿಕಾಭ್ಯಾಂ ನಮಃ .
ಓಂ ವ್ರಃ ಕರತಲಕರಪೃಷ್ಠಾಭ್ಯಾಂ ನಮಃ ..

ಓಂ ವ್ರಾಂ ಹೃದಯಾಯ ನಮಃ .
ಓಂ ವ್ರೀಂ ಶಿರಸೇ ಸ್ವಾಹಾ .
ಓಂ ವ್ರೂಂ ಶಿಖಾಯೈ ವಷಟ್ .
ಓಂ ವ್ರೈಂ ಕವಚಾಯ ಹುಂ .
ಓಂ ವ್ರೌಂ ನೇತ್ರಾಭ್ಯಾಂ ವೌಷಟ್ .
ಓಂ ವ್ರಃ ಅಸ್ತ್ರಾಯ ಫಟ್ .
ಓಂ ಭೂರ್ಭುವಸ್ಯುವರೋಮಿತಿ ದಿಗ್ಬಂಧಃ ..

ಧ್ಯಾನಂ .
ಅಷ್ಟಬಾಹುಯುತಾಂ ದೇವೀಂ ಸಿಮ್ಹಾಸನವರಸ್ಥಿತಾಂ .
ಸಖಾಸನಾಂ ಸುಕೇಶೀಂಚ ಕಿರೀಟಮುಕುಟೋಜ್ಜ್ವಲಾಂ ..

ಶ್ಯಾಮಾಂಗೀಂ ಕೋಮಲಾಕಾರಾಂ ಸರ್ವಾಭರಣಭೂಷಿತಾಂ .
ಖಡ್ಗಂ ಪಾಶಂ ತದಾ ಚಕ್ರಮಭಯಂ ಸವ್ಯಹಸ್ತಕೇ ..

ಖೇಟಕಂಚಾಂಕುಶಂ ಶಂಖಂ ವರದಂ ವಾಮಹಸ್ತಕೇ .
ರಾಜರೂಪಧರಾಂ ಶಕ್ತಿಂ ಪ್ರಭಾಸೌಂದರ್ಯಶೋಭಿತಾಂ ..

ಹಂಸಾರೂಢಾಂ ಸ್ಮರೇದ್ದೇವೀಂ ವಿಜಯಾಂ ವಿಜಯಪ್ರದೇ ..

ಮೂಲ್ಮಂತ್ರಂ - ಓಂ ಶ್ರೀಂ ವಿಜಯಲಕ್ಷ್ಮ್ಯೈ ನಮಃ .

ಶ್ರೀಧೈರ್ಯ(ವೀರ)ಲಕ್ಷ್ಮೀಃ
ಅಸ್ಯ ಶ್ರೀವೀರಲಕ್ಷ್ಮೀಮಹಾಮಂತ್ರಸ್ಯ -
ನಾರದ ಋಷಿಃ - ತೃಷ್ಟುಪ್ಛಂದಃ - ಶ್ರೀವೀರಲಕ್ಷ್ಮೀಃ ದೇವತಾ -
ಲಂ ಬೀಜಂ - ರಂ ಶಕ್ತಿಃ - ಲಂ ಕೀಲಕಂ -
ಆರೋಗ್ಯಭಾಗ್ಯಸಿದ್ಧಿದ್ವಾರಾ ಶ್ರೀವೀರಲಕ್ಷ್ಮೀಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ .
ಓಂ ವ್ರಾಂ ಅಂಗುಷ್ಠಾಭ್ಯಾಂ ನಮಃ .
ಓಂ ವ್ರೀಂ ತರ್ಜನೀಭ್ಯಾಂ ನಮಃ .
ಓಂ ವ್ರೂಂ ಮಧ್ಯಮಾಭ್ಯಾಂ ನಮಃ .
ಓಂ ವ್ರೈಂ ಅನಾಮಿಕಾಭ್ಯಾಂ ನಮಃ .
ಓಂ ವ್ರೌಂ ಕನಿಷ್ಠಿಕಾಭ್ಯಾಂ ನಮಃ .
ಓಂ ವ್ರಃ ಕರತಲಕರಪೃಷ್ಠಾಭ್ಯಾಂ ನಮಃ ..

ಓಂ ವ್ರಾಂ ಹೃದಯಾಯ ನಮಃ .
ಓಂ ವ್ರೀಂ ಶಿರಸೇ ಸ್ವಾಹಾ .
ಓಂ ವ್ರೂಂ ಶಿಖಾಯೈ ವಷಟ್ .
ಓಂ ವ್ರೈಂ ಕವಚಾಯ ಹುಂ .
ಓಂ ವ್ರೌಂ ನೇತ್ರಾಭ್ಯಾಂ ವೌಷಟ್ .
ಓಂ ವ್ರಃ ಅಸ್ತ್ರಾಯ ಫಟ್ .
ಓಂ ಭೂರ್ಭುವಸ್ಯುವರೋಮಿತಿ ದಿಗ್ಬಂಧಃ ..

ಧ್ಯಾನಂ .
ಅಷ್ಟಬಾಹುಯುತಾಂ ಲಕ್ಷ್ಮೀಂ ಸಿಮ್ಹಾಸನವರಸ್ಥಿತಾಂ .
ತಪ್ತಕಾಂಚನಸಂಕಾಶಾಂ ಕಿರೀಟಮಕುಟೋಜ್ಜ್ವಲಾಂ ..

ಸ್ವರ್ಣಕಂಚುಕಸಂಯುಕ್ತಾಂ ಸನ್ನವೀತತರಾಂ ಶುಭಾಂ .
ಅಭಯಂ ವರದಂ ಚೈವ ಭುಜಯೋಃ ಸವ್ಯವಾಮಯೋಃ ..

ಚಕ್ರಂ ಶೂಲಂಚ ಬಾಣಂಚ ಶಂಖಂ ಚಾಪಂ ಕಪಾಲಕಂ .
ದಧತೀಂ ಧೈರ್ಯಲಕ್ಷ್ಮೀಂ ಚ ನವತಾಲಾತ್ಮಿಕಾಂ ಭಜೇ ..

ಮೂಲಮಂತ್ರಂ - ಓಂ ಶ್ರೀಂ ವೀರಲಕ್ಷ್ಮ್ಯೈ ನಮಃ .

ಶ್ರೀ ಐಶ್ವರ್ಯ(ಮಹಾ)ಲಕ್ಷ್ಮೀಃ
ಅಸ್ಯ ಶ್ರೀಮಹಾಲಕ್ಷ್ಮೀಮಹಾಮಂತ್ರಸ್ಯ -
ಬ್ರಹ್ಮಾ ಋಷಿಃ - ಜಗತೀ ಛಂದಃ - ಶ್ರೀಮಹಾಲಕ್ಷ್ಮೀಃ ದೇವತಾ -
ಹ್ರಾಂ ಬೀಜಂ - ಹ್ರೀಂ ಶಕ್ತಿಃ - ಹ್ರೂಂ ಕೀಲಕಂ -
ಶ್ರೀಮಹಾಲಕ್ಷ್ಮೀಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ .
ಓಂ ಕ್ಷ್ರಾಂ ಅಂಗುಷ್ಟಾಭ್ಯಾಂ ನಮಃ .
ಓಂ ಕ್ಷ್ರೀಂ ತರ್ಜನೀಭ್ಯಾಂ ನಮಃ .
ಓಂ ಕ್ಷ್ರೂಂ ಮಧ್ಯಮಾಭ್ಯಾಂ ನಮಃ .
ಓಂ ಕ್ಷ್ರೈಂ ಅನಾಮಿಕಾಭ್ಯಾಂ ನಮಃ .
ಓಂ ಕ್ಷ್ರೌಂ ಕನಿಷ್ಠಿಕಾಭ್ಯಾಂ ನಮಃ .
ಓಂ ಕ್ಷ್ರಃ ಕರತಲಕರಪೃಷ್ಠಾಭ್ಯಾಂನಮಃ ..

ಓಂ ಕ್ಷ್ರಾಂ ಹೃದಯಾಯ ನಮಃ .
ಓಂ ಕ್ಷ್ರೀಂ ಶಿರಸೇ ಸ್ವಾಹಾ .
ಓಂ ಕ್ಷ್ರೂಂ ಶಿಖಾಯೈ ವಷಟ್ .
ಓಂ ಕ್ಷ್ರೈಂ ಕವಚಾಯ ಹುಂ .
ಓಂ ಕ್ಷ್ರೌಂ ನೇತ್ರಾಭ್ಯಾಂ ವೌಷಟ್ .
ಓಂ ಕ್ಷ್ರಃ ಅಸ್ತ್ರಾಯ ಫಟ್ .
ಓಂ ಭೂರ್ಭುವಸ್ಯುವರೋಮಿತಿ ದಿಗ್ಬಂಧಃ ..

ಧ್ಯಾನಂ .
ಚತುರ್ಭುಜಾಂ ದ್ವಿನೇತ್ರಾಂಚ ವರಾಭಯಕರಾನ್ವಿತಾಂ .
ಅಬ್ಜದ್ವಯಕರಾಂಭೋಜಾಂ ಅಂಬುಜಾಸನಸಂಸ್ಥಿತಾಂ ..

ಸಸುವರ್ಣಘಟೋರಾಭ್ಯಾಂ ಪ್ಲಾವ್ಯಮಾನಾಂ ಮಹಾಶ್ರಿಯಂ .
ಸರ್ವಾಭರಣಶೋಭಾಢ್ಯಾಂ ಶುಭ್ರವಸ್ತ್ರೋತ್ತರೀಯಕಾಂ ..

ಚಾಮರಗ್ರಹನಾರೀಭಿಃ ಸೇವಿತಾಂ ಪಾರ್ಶ್ವಯೋರ್ದ್ವಯೋಃ .
ಆಪಾದಲಂಬಿವಸನಾಂ ಕರಂಡಮಕುಟಾಂ ಭಜೇ ..

ಮೂಲಮಂತ್ರಂ - ಅಂ ಶ್ರೀಂ ಶ್ರೀಮಹಾಲಕ್ಷ್ಮ್ಯೈ ನಮಃ ..

ಇತಿ ಶ್ರೀಅಷ್ಟಲಕ್ಷ್ಮೀಮಹಾಮಂತ್ರಂ ಸಂಪೂರ್ಣಂ . 
ಸಂಗ್ರಹ: ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ. ಹಿರೇಕೆರೂರ.