May 12, 2020

ಅಯೋಗ್ಯಃ ಪುರುಷೋ ನಾಸ್ತಿ.... ಯಾವ ಕೆಲಸಕ್ಕೂ ಯೋಗ್ಯನಲ್ಲದ ಮನುಷ್ಯನು ಇಲ್ಲವೇ ಇಲ್ಲ..


ಅಮಂತ್ರಂ ಅಕ್ಷರಮ್ ನಾಸ್ತಿ  ನಾಸ್ತಿ ಮೂಲ ಮನೌಷಧಮ್|

ಅಯೋಗ್ಯ: ಪುರುಷೋ ನಾಸ್ತಿ  ಯೋಜಕಸ್ತತ್ರ ದುರ್ಲಭ: ||

ಎಷ್ಟು ಸರಳವಾಗಿದೆ ಅರ್ಥ! ಮಂತ್ರವಾಗದ ಅಕ್ಷರವಿಲ್ಲ. ಔಷಧಿಯಾಗದ ಗಿಡಮೂಲಿಕೆಗಳಿಲ್ಲಯಾವ ವ್ಯಕ್ತಿಯೂ ಅಯೋಗ್ಯನಲ್ಲ. ಆದರೆ ಯೋಜನೆ ಮಾಡುವವರು ವಿರಳ. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು ಮನುಷ್ಯನ ಜನ್ಮವಾಗುವಾಗ ಭಗವಂತನು ಎಲ್ಲರಲ್ಲಿ ಚೈತನ್ಯದ ಮೂಟಯನ್ನೇ ಇಟ್ಟು ಕಳಿಸಿದ್ದಾನೆ, ಕೆಲವರು ಮೂಟೆಯ ಬಾಯ್ಬಿಚ್ಚಿ ತೆರೆದು ಚೈತನ್ಯವನ್ನು ಜಾಗೃತಗೊಳಿಸಿಕೊಂಡು ಪ್ರಭಾವಶಾಲಿಗಳಾಗುತ್ತಾರೆ. ಕೆಲವರು ಮೂಟೆಯ ಬಾಯನ್ನೇ ತೆರೆಯುವುದಿಲ್ಲ. ಒಳಗಿರುವ ಚೈತನ್ಯದ ಜಾಗೃತಿ ಮಾಡಬೇಕಾದವರು ಯಾರು? ಮನೆಯಲ್ಲಿ ಅಪ್ಪ-ಅಮ್ಮ, ಶಾಲೆಯಲ್ಲಿ ಟೀಚರ್. ಆದರೆ ಮಗುವಿನ ಅಂತ:ಶಕ್ತಿಯನ್ನು ಜಾಗೃತ ಗೊಳಿಸುವ ಕೆಲಸ ಆಗುತ್ತಿದೆಯೇ? ನಮ್ಮ ಕಣ್ಮುಂದಿರುವ ದಾರಿ ಯಾವುದು?

ನಮ್ಮ ಮಕ್ಕಳು ಸಾಫ್ಟ್ ವೇರ್ ಇಂಜಿನಿಯರಾಗಬಾರದೆಂದಲ್ಲ, ವೈದ್ಯರುಗಳಾಗಬಾರದೆಂದಲ್ಲ. ಆದರೆ ಮೊದಲು ಮಾನವೀಯತೆಯ ಶಿಕ್ಷಣ , ನೈತಿಕ ಮೌಲ್ಯಗಳ ಶಿಕ್ಷಣ, ಪ್ರೀತಿ,ಪ್ರೇಮ, ವಾತ್ಸಲ್ಯಗಳಂತಹ ಗುಣಗಳನ್ನು ಅರಳಿಸುವ ಸಂಸ್ಕಾರ ಕೊಡಬೇಡವೇ? ವೇದ ಮಂತ್ರವು ಹೇಳುವಂತೆ   ನೀನು ಪುಣ್ಯವಂತ, ನೀನು ಭಾಗ್ಯಶಾಲಿ, ನೀನು ಶಕ್ತಿವಂತ, ನೀನು ಸಮರ್ಥ. . . . .ಎಂಬ ಮಾತುಗಳನ್ನು ಮಕ್ಕಳ ಮುಂದೆ ಹೇಳುತ್ತಿರಿ, ಅವರು ಸಮರ್ಥರೇ ಆಗುತ್ತಾರೆ. ಆದರೆ ಹೊರಗಿನ ವೇಷಭೂಷಣ, ಹೇರಿಕೆಯ ಶಿಸ್ತು,   ನೆಲಕ್ಕೆ ಒಗ್ಗದ ನಮ್ಮದಲ್ಲದ ಸಂಸ್ಕೃತಿಯ ಅಂಧಾನುಕರಣೆ, ಇವೆಲ್ಲವೂ ಮಕ್ಕಳ ಆತ್ಮವಿಕಾಸ ಮಾಡಲಾರದು.

ಮಕ್ಕಳು ಕೇವಲ ಬುದ್ಧಿವಂತರಾದರೆ ಸಾಕೇ? ಹೌದೆನ್ನುತ್ತಾರೆ ಇಂದಿನ ಹಲವಾರು ಪೋಷಕರು. ಆದರೆ ಮಕ್ಕಳ ಬುದ್ಧಿವಂತಿಕೆಯ ಜೊತೆಗೇ ಮನಸ್ಸನ್ನುಅರಳಿಸುವ, ಸದ್ಗುಣಗಳನ್ನು  ಬೆಳೆಸುವ ಶಿಕ್ಷಣವು ಇಂದು ಎಲ್ಲಾ ದಿನಗಳಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ಕಾರಣ ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯದ ಕೊರತೆ ಎದ್ದು ಕಾಣುತ್ತಿದೆ. ಆತ್ಮ ವಿಶ್ವಾಸದ ಕೊರತೆಯಿಂದ ಹಲವು ಮಕ್ಕಳು ಆತ್ಮಹತ್ಯೆಗೆ ಒಳಗಾಗಿರುವ ಉಧಾಹರಣೆಗಳನ್ನು   ಕಾಣುತ್ತೇವೆ. ನಿಮ್ಮ ಮಕ್ಕಳಿಗೆ ವೇದಮಂತ್ರದಲ್ಲಿ ತಿಳಿಸಿರುವಂತೆ ನೀನು ಸಮರ್ಥನಾಗಿದ್ದೀಯೇ, ನೀನು ಒಳ್ಳೆಯವ, ನೀನು ಶಕ್ತಿಶಾಲಿ,ನೀನು ಮೇಧಾವಂತ, ನೀನು ಗುಣವಂತ  ಎಂದು ಇಂದಿನಿಂದಲೇ ಹೇಳುತ್ತಾ ಬನ್ನಿ, ಅವರು ಹಾಗೆಯೇ ಆಗುತ್ತಾರೆ. ಒಳ್ಳೆಯ ಮಾತಿಗೇಕೇ ದಾರಿದ್ರ್ಯ?

 "ಅಮಂತ್ರಂ ಅಕ್ಷರಂ ನಾಸ್ತಿ " - ಅಂದರೆ ಮಂತ್ರವಾಗಲು ಯೋಗ್ಯವಲ್ಲದ ಯಾವುದೇ ಅಕ್ಷರವಿಲ್ಲ... ಅರ್ಥಾತ್ ಪ್ರತಿಯೊಂದು ಅಕ್ಷರಕ್ಕೂ (Alphabet ಗೂ) ಅದರದ್ದೇ ಆದ ಒಂದು ವೈಶಿಷ್ಟ್ಯ (Vibration) ಇದೆ... ಅದನ್ನೇ ಹಿಂದಿನವರು "ಬೀಜಾಕ್ಷರ" ಅಂತ ಕರೆದದ್ದು... ಉದಾ: "ರಂ" ಅಗ್ನಿಬೀಜಾಕ್ಷರ... 'ಭರ್ರ್...' ಅಂತ ಬೆಂಕಿ ಹತ್ತಿತು ಅನ್ತೇವೆ... ಅಂದರೆ "" ಅಕ್ಷರದಿಂದ ಅಗ್ನಿ ಹುಟ್ಟಿತು... "ಯಂ" ಅನ್ನುವುದು ವಾಯುಬೀಜಾಕ್ಷರ, 'ಸೊಯ್ಯ್.'.. ಅಂತ ಗಾಳಿ ಬೀಸಿತು ಅನ್ತೇವೆ... ಅಂದರೆ, "" ಅಕ್ಷರದಿಂದ ಗಾಳಿಹುಟ್ಟಿತು ಹೀಗೆ...

ಅಷ್ಟೇ ಅಲ್ಲ "" ಕಾರದಿಂದ "ಕ್ಷ" ಕಾರದ ತನಕ ಇರುವ ೫೧ ವರ್ಣಗಳಿಗೂ ಭಗವಂತನ ೫೧ ರೂಪಗಳ ಅನುಸಂಧಾನ ಇದೆ... '' ದಿಂದ 'ಕ್ಷ' ತನಕದ ಎಲ್ಲ ೫೧ ವರ್ಣಗಳಲ್ಲೂ ಭಗವಂತ ೫೧ ರೂಪಗಳಿಂದ ಇದ್ದು ಅದರಲ್ಲಿ ಅವನು ರಮಿಸುವವನಾದ್ದರಿಂದಲೇ ಅದನ್ನು "ಅಕ್ಷರ" ಅಂತ ಕರೆದದ್ದು... (Alphabets from to ಕ್ಷ is called as "ಅಕ್ಷರ)...
ಬಹಳ ಹಿಂದಿನ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ನಾವು ಉಚ್ಛರಿಸುವ ಯಾವ ಅಕ್ಷರದಲ್ಲಿ ದೋಷ ಇದೆ ಎನ್ನುವುದರಿಂದಲೇ ಆಯುರ್ವೇದ ಪಂಡಿತರು ನಮ್ಮ ದೇಹದಲ್ಲಿರುವ ರೋಗದ ಲಕ್ಷಣಗಳನ್ನು ಕಂಡುಹಿಡಿಯುತ್ತಿದ್ದರು...

"ನಾಸ್ತಿ ಮೂಲಂ ಅನೌಷದಂ" - ಔಷಧೀಯ ಗುಣವಿಲ್ಲದ ಯಾವುದೇ ಗಿಡಮೂಲಿಕೆಯಿಲ್ಲ... ಅರ್ಥಾತ್ ನಾವು ಯಾವುದಕ್ಕೂ ಉಪಯೋಗಕ್ಕೆ ಬಾರದ "ಕಳೆ" ಅಂತ ಕಿತ್ತು ಎಸೆಯುವ ಸಣ್ಣ ಗಿಡದಲ್ಲೂ ಒಂದು ವಿಶಿಷ್ಟ ಗುಣ ಇರುತ್ತದೆ... ಉದಾ: ನಾಚಿಗೆ ಮುಳ್ಳು ಅಥವಾ ಮುಟ್ಟಿದರೆ ಮುನಿ ಗಿಡ... ಇದು ಯಾತಕ್ಕೂ ಉಪಯೋಗವಿಲ್ಲದ ಕಳೆ ಅಂತ ಕಿತ್ತು ಎಸೆಯುವ ಗಿಡ. ಆದರೆ ಅದರ ಎಲೆಯ ರಸದಲ್ಲಿ ನಮಗೆ ಬರುವ "ಪೈಲ್ಸ್ ಕಾಯಿಲೆಗೆ" (ಮೂಲವ್ಯಾಧಿಗೆ) ಭಗವಂತ ಮದ್ದನ್ನು ಇಟ್ಟಿದ್ದಾನೆ...

"ಅಯೋಗ್ಯಃ ಪುರುಷೋ ನಾಸ್ತಿ
ಯಾವ ಕೆಲಸಕ್ಕೂ ಯೋಗ್ಯನಲ್ಲದ ಮನುಷ್ಯನು ಇಲ್ಲವೇ ಇಲ್ಲ... ಯಾರನ್ನು ನಾವು ಶತದಡ್ಡ ಯಾತಕ್ಕೂ ಬಾರದ ಮನುಷ್ಯಪ್ರಾಣಿ ಅಂತ ತಿಳಿದಿರುತ್ತೇವೋ ಅಂಥವನಲ್ಲೂ ಕೂಡ ಯಾರಲ್ಲೂ ಇಲ್ಲದ ಒಂದು ವಿಶಿಷ್ಟಗುಣವಿರಬಹುದು..
ಉದಾ: ಭಾಗವತದಲ್ಲಿ ಬರುವ ಮೂರು ಜನ್ಮಗಳ ವರ್ಣನೆಯಂತೆ ಒಂದು ಜನ್ಮದಲ್ಲಿ ಚಕ್ರವರ್ತಿಯಾಗಿ ದೇಶವನ್ನಾಳಿದ ಭರತಚಕ್ರವರ್ತಿ, ಮುಂದೆ ಜಿಂಕೆಯಾದ, ಮೂರನೇ ಜನ್ಮದಲ್ಲಿ ಜಡಭರತನಾದ ಅತ್ಯಂತ ಪೆದ್ದನಂತೆ ನಡೆದುಕೊಂಡ... ಆಗ ಕಾಲದ ಜನ ಪ್ರಾಣಿಗೂ ಕಡೆಯಾಗಿ ಅವನನ್ನು ನಡೆಸಿಕೊಂಡರು... ಮುಂದೆ ಜಡಭರತ ದೇಶದ ರಾಜನ ಪಾಲಕಿ ಹೊತ್ತು ರಾಜನಿಗೇ ಗುರುವಾಗಿ ಉಪದೇಶಮಾಡಿದ.. ಹೀಗೆ ಜ್ಞಾನದ ಮೊಟ್ಟೆ ಎಲ್ಲಿ ಚಿಗುರೊಡೆದಿರುತ್ತೋ ಬಲ್ಲವರಾರು .‌.. ಅದರಿಂದ ನಮಸ್ಕಾರದ ಒಂದು ವೇದ ಮಂತ್ರ "ನಮೋ ಅರ್ಭಕೇಭ್ಯಃ "ಅನ್ನುತ್ತೆ - ಅಂದರೆ ತಾಯಿಯ ಗರ್ಭದಲ್ಲಿರು ಶಿಶುವಿಗೂ ನಮಸ್ಕಾರ ಅಂತ...

"ಯೋಜಕಸ್ತತ್ರ ದುರ್ಲಭಃ" -
ಹೀಗೆ ಭಗವಂತನ ಸೃಷ್ಟಿಯಲ್ಲಿ ನಿಷ್ಪ್ರಯೋಜಕವಾದ ವಸ್ತು ಅಥವಾ
ಜೀವಿ ಎಂಬುದೇ ಇಲ್ಲ.... ಆದರೆ ಅವುಗಳ ಉಪಯೋಗವನ್ನು , ಯೋಗ್ಯತೆಯನ್ನು ಗುರುತಿಸಿ, ಅರಿತು ಉಪಯೋಗ ಪಡೆದುಕೊಳ್ಳಬಲ್ಲ ಮನುಜರು ಮಾತ್ರ ಬಹಳ ವಿರಳ...

       ಸುಭಾಷಿತಕಾರ ಹೀಗೆ ಹೇಳುತ್ತಾನೆ.ಮಂತ್ರವಲ್ಲದ ಅಕ್ಷರವಿಲ್ಲ, ಔಷಧೀಯ ಗುಣವಿಲ್ಲದ ಗಿಡಮೂಲಿಕೆಗಳಿಲ್ಲ, ಅಯೋಗ್ಯನಾದ ಮನುಷ್ಯನಿಲ್ಲ. ಇರುವುದೊಂದೇ, ಅದು ಯೋಜಕರ ಕೊರತೆ. ಭಾರತೀಯ ಸಮಾಜ ಅನುಭವಿಸುತ್ತಿರುವ ಕೊರತೆ ಇದು. ಯೋಜಕರಾದ ನಾಯಕರುಗಳು ತೀರ ವಿರಳ. ಆಚಾರ್ಯರನ್ನು ತ್ರಿವಿಕ್ರಮಪಂಡಿತಾಚರ್ಯರು ಆಧ್ಯಾತ್ಮಜ್ಞಾನನೇತಾ ಎಂದು ಕರೆದಿದ್ದಾರೆ.ಆಧ್ಯಾತ್ಮಜ್ಞಾನದತ್ತ ನಮ್ಮನ್ನು ಕೊಂಡೊಯ್ಯುವನಾಯಕಆಚಾರ್ಯರು. ಸಾಮಾಜಿಕವಾಗಿ ನಾಯಕತ್ವಗುಣವನ್ನು ಲೋಕಕ್ಕೆ ತೋರಿಸುತ್ತಾ ಅನೇಕರನ್ನು ಪ್ರಭಾವಿಸಿದವರುಅವರು ವ್ಯಕ್ತಿಯು ನಾಯಕನಾಗಬೇಕಾದರೇ ಅಳವಡಿಸಿಕೊಳ್ಳಬೇಕಾದ ಗುಣಗಳ (Leadership qualities)ಬಗ್ಗೆ ಚೆಲ್ಲಿದ ಬೆಳಕನ್ನು ಕಾಣಲು ಪ್ರಯತ್ನಿಸೋಣ.     

ಮುಂದಾಳುತ್ವ ಗುಣ (leading from front)       
ನಾಯಕನಾದವನು ತಾನು ಮುಂದೆ ನಿಂತು ,ಸೋಲು ಗೆಲುವುಗಳ ಜವಾಬ್ದಾರಿಯನ್ನು ಹೊತ್ತು,ತನ್ನ ಜೊತೆಯಿರುವವರನ್ನು ಮುನ್ನಡೆಸಬೇಕು. ಯಶಸ್ಸನ್ನು ಪಡೆದಾಗ ಅದರ ಶ್ರೇಯಸ್ಸನ್ನು ಪಡೆದು,ಯಶ ಕಾಣದಾಗ ಜವಾಬ್ದಾರಿಯಿಂದ ನುಣಿಚಿಕೊಂಡು,ಅಪಕೀರ್ತಿಯ ಜವಾಬ್ದಾರಿಯನ್ನು ತನ್ನವರ ಮೇಲೆ ಹಾಕುವುದು ನಿಜವಾದ ನಾಯಕನ ಲಕ್ಷಣವಲ್ಲ. ಆಚಾರ್ಯರು ತಾವು ಮುಂದೆ ನಿಂತು ನಾಯಕತ್ವವನ್ನು ವಹಿಸಿ ತೋರಿಸಿದ್ದಾರೆ. ಶ್ರೀ ಮಧ್ವವಿಜಯದ ೧೦ನೇ ಸರ್ಗದಲ್ಲಿ ಆಚಾರ್ಯರ ಉತ್ತರಭಾರತದ ಸಂಚಾರವನ್ನು ವರ್ಣಿಸುತ್ತಾರೆ. ಆಚಾರ್ಯರು ಸಂಚರಿಸುತ್ತಾ ಶಿಷ್ಯರೊಂದಿಗೆ ಕೂಡಿ ಗಂಗಾನದಿಯ ದಡಕ್ಕೆ ಬಂದು ಸೇರುತ್ತಾರೆ. ಅಲ್ಲಿ ಶತ್ರುಗಳ ಆಕ್ರಮಣದ ಭಯದಿಂದ ತುರುಷ್ಕರಾಜನು ನೌಕೆಗಳ ಸಂಚಾರವನ್ನು ನಿಲ್ಲಿಸಿದ್ದನು. ಅಲ್ಲಿರುವ ಜನರೆಲ್ಲರೂ ಭಯಂಕರ ಪ್ರವಾಹ,ಶತ್ರುರಾಜನ ಸೈನ್ಯದ ಭಯವಿರುವುದರಿಂದ ನದಿಯು ದಾಟಲು ಯೋಗ್ಯವಲ್ಲ, ಎಂದು ತಡೆದರು.ಬೇರೆಯವರಿಗೆ ಇದೋಂದು Risk Factor ಆಗಿತ್ತು. ಆದರೆ ಆಚಾರ್ಯರುನಾಯಕನಾದವನು ಗಮ್ಯ ತಲುಪಲು ಅತ್ಮವಿಶ್ವಾಸದಿಂದ ರಿಸ್ಕ್ ತೆಗೆದುಕೊಳ್ಳಬೇಕೆಂದುತಾವು ಆಚರಿಸಿ ತೋರಿಸುತ್ತಾರೆ. ಹಾಗಂತ ಆಚಾರ್ಯರು ಮೊದಲು ತಮ್ಮ ಶಿಷ್ಯರನ್ನು ನೀರಿಗೆ ಬಿಡಲಿಲ್ಲ. ತಾವು ಮುಂದೆ ನಿಂತರು,ಶಿಷ್ಯರಿಗೆ ಧೈರ್ಯ ತುಂಬಿ ತಮ್ಮನ್ನು ಅನುಸರಿಸಲು ಹೇಳಿದರು. ತಾವು ಮುಂದೆ ಈಜುತ್ತಾ, ಎಲ್ಲರನ್ನೂ ದಡ ಸೇರಿಸಿದರು. ನಾಯಕನು ಹೀಗಿರಬೇಕೆಂದು ಜಗತ್ತಿಗೆ ತೋರಿಸಿದರು.
                              
 ಭಯಮಿಶ್ರಿತಪ್ರೀತಿ 
          ಭೀಷಾಸ್ಮಾತ್ ವಾತಃ ಪವತೆ ಭೀಷೋದೇತಿ ಸೂರ್ಯ:” ಎಂಬುವ ತೈತ್ತಿರೀಯ ಮಂತ್ರಕ್ಕೆ ವ್ಯಾಖ್ಯಾನ ಮಾಡುತ್ತಾ ಆಚಾರ್ಯರು ಹೀಗೆ ಹೇಳುತ್ತಾರೆ.ತಸ್ಮಾತ್ ವಾಯ್ವಾದಯೋ ದೇವಾಃ ವಿದ್ವಾಂಸೋಪಿ ವಿಶೇಷತಃ| ಭೀತಾಃ ಸ್ವಕರ್ಮ ಕುರ್ವಂತಿ ವಿಷ್ಣೋಃ ಪ್ರೀತ್ಯರ್ಥಮಂಜಸಾ||”ವಾಯು ,ಸೂರ್ಯ ಮೊದಲಾದ ದೇವತೆಗಳು ಪರಮಾತ್ಮನ ಭಯದಿಂದ, ಅವನ ಪ್ರೀತಿಗಾಗಿ ಚೆನ್ನಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ವಾಯು ಮೊದಲಾದ ದೇವತೆಗಳಿಗೆ ಪರಮಾತ್ಮನ ವಿಷಯದಲ್ಲಿ ಪ್ರೀತಿಯೂ ಇದೆ,ಭಯವೂ ಇದೆ. ನಾಯಕನಲ್ಲಿ ಅವನ ಅನುಯಾಯಿಗಳಿಗೆ ಇವೆರಡೂ ಇರಬೇಕೆಂದು ಸೂಚಿಸುತ್ತಾರೆ. ಕೇವಲ ಭಯವಿದ್ದರೆ ಅವನ ಎದುರು ಮಾತ್ರ ಕೆಲಸ ಮಾಡುತ್ತಾರೆ.ಕೇವಲ ಪ್ರೀತಿಯಿದ್ದರೆ ಉದಾಸೀನ ಮಾಡಿ,ಚೆನ್ನಾಗಿ ಕೆಲಸ ಮಾಡುವುದಿಲ್ಲ. ಎರಡೂ ಇದ್ದರೆ ನಿರಂತರವಾಗಿ ,ಚೆನ್ನಾಗಿ ಕೆಲಸ ಮಾಡುತ್ತಾರೆ. ಹಾಗಾದರೆ ನಾಯಕನಾದವನು ಅನುಯಾಯಿಗಳಿಂದ ಭಯಮಿಶ್ರಿತಪ್ರೀತಿಯನ್ನು ಹೇಗೆ ಸಂಪಾದಿಸಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ಆಚಾರ್ಯರು ಕೊಡುವ ಉತ್ತರ ಧಾರ್ಯತೇ ಯೇನ ವಿಶ್ವಂ ಸದಾ ಅಜಾದಿಕಂ.ಎಂದು ಪರಮಾತ್ಮ ನಿರಂತರವಾಗಿ ವಿಶ್ವದ ಸೃಷ್ಟಿ, ಸ್ಥಿತಿ, ಲಯ ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾನೆ.ಅವನು ವಾಯು ಮೊದಲಾದ ದೇವತೆಗಳಿಗಿಂತ ಅತಿ ಹೆಚ್ಚು ಕೆಲಸ ಮಾಡುತ್ತಾನೆ. ಅಷ್ಟೇ ಅಲ್ಲ ವಾರ್ಯತೇ ಅಶೇಷ ದುಃಖಂ ನಿಜಧ್ಯಾಯಿನಾಂ,ತನ್ನನ್ನು ನಂಬಿ ಕೆಲಸ ಮಾಡುವವರ ದುಃಖಕ್ಕೆ ಸ್ಪಂದಿಸಿ,ಅವರ ದುಃಖವನ್ನು ಪರಿಹರಿಸುತ್ತಾನೆ.ಅಪ್ಪ ತಾನು ಸಂಧ್ಯಾವಂದನೆ ಮಾಡದೇ ಮಗನಿಗೆ ಸಂಧ್ಯಾವಂದನೆ ಮಾಡೆಂದು ಹೇಳುವುದು ಪರಿಣಾಮಕಾರಿಯಾಗುವುದಿಲ್ಲ. ಹಾಗಾಗಿ ನಾಯಕನು ತಾನು ಪರಿಶ್ರಮಿಯಾಗಿರಬೇಕು(Hard working). ಅಷ್ಟೇ ಅಲ್ಲದೆ ತನ್ನವರ ವಿಷಯದಲ್ಲಿ ಕಾಳಜಿವುಳ್ಳವನಾಗಿರಬೇಕು(concerned). ಆಗ ಅನುಯಾಯಿಗಳು ನಾಯಕನಲ್ಲಿ ಭಯಮಿಶ್ರಿತ ಪ್ರೀತಿಯುಳ್ಳವರಾಗುತ್ತಾರೆಆಚಾರ್ಯರು ತಮ್ಮ ಶಿಷ್ಯರಲ್ಲಿ ಕಾಳಜಿಯುಳ್ಳವರಾಗಿದ್ದರು. ವಿಷಯದಲ್ಲಿ ನಾರಾಯಣಪಂಡಿತಾಚಾರ್ಯರು ಆಚಾರ್ಯರ ಜೀವನದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸಿದ್ದಾರೆ.ಆಚಾರ್ಯರು ಅರುಣೋದಯ ಕಾಲದಲ್ಲಿ ಎದ್ದು ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಿದ್ದರು. ಶಿಷ್ಯರು ತಡವಾಗಿ ಮಲಗಿದರೂ, ಬೇಗ ಎದ್ದು  ಕಷ್ಟಕರವಾದ ಗುರು ಶುಷ್ರೂಶೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಆದರೆ ಒಮ್ಮೆ ಶ್ರವಣ ಮನನ ಮಾಡುತ್ತಾ ಬಹಳ ತಡವಾಗಿ ಮಲಗಿದ್ದ ಶಿಷ್ಯರು ಬೆಳಿಗ್ಗೆ ಬೇಗ ಏಳಲಿಲ್ಲ. ಆಚಾರ್ಯರು ತಾವೇ ತಮ್ಮ ಸ್ನಾನವಸ್ತ್ರಾದಿಗಳನ್ನು ಹಿಡಿದು ನದಿಗೆ ಹೊರಟರು. ಶಿಷ್ಯರನ್ನು ಎಬ್ಬಿಸಲಿಲ್ಲ. ಆಮೇಲೆ ತಕ್ಷಣ ಎಚ್ಚರಗೊಂಡ ಶಿಷ್ಯರು ಆಚಾರ್ಯರು ಕೆಲಸ ಮಾಡದ್ದಕ್ಕೆ ಬಯ್ಯುವರು ಎಂದು ಗಾಬರಿಯಿಂದ ಸುಮ್ಮನೆ ನಿಂತರು ಆದರೇ ಆಚಾರ್ಯರು ಬಯ್ಯಲಿಲ್ಲ. ಹಾಗಾಗಿ ನಾಯಕನು ನಿಯಮಕ್ಕನುಗುಣವಾಗಿ ಕೆಲಸ ಮಾಡಿಸಬೇಕಾದರೂ, (Principled) ಕೆಲವೊಮ್ಮೆ ಸಂದರ್ಭಾನುಸಾರವಾಗಿ, ವ್ಯಕ್ತಿಗಳಿಗನುಸಾರವಾಗಿ ಮುಕ್ತತೆಯನ್ನೂ(Liberty) ಪ್ರದರ್ಶಿಸಬೇಕು. ಹೀಗೆ ಆಚಾರ್ಯರೂ ನಾಯಕತ್ವ ಗುಣಗಳ ಬಗ್ಗೆ ಅನೇಕ ಕಡೆ ಬೆಳಕು ಚೆಲ್ಲಿದ್ದಾರೆ, ದೃಷ್ಟಿಯಿಂದ ಗಮನಿಸಿ, ಜನರಿಗೆ ತಿಳಿಸಿ, ಅಳವಡಿಸಿಕೊಳ್ಳಬೇಕಾಗಿದೆ.  


No comments:

Post a Comment

If you have any doubts. please let me know...