May 3, 2020

ಶಿವ ಸಂಕಲ್ಪ ಸೂಕ್ತ ಶ್ಲೋಕ ೨.

Mrutyunjaya
ಶಿವ ಸಂಕಲ್ಪ ಸೂಕ್ತ ಶ್ಲೋಕ  ೨.
( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮುಂದುವರೆದು.......

ಶ್ಲೋಕ  - 2 - ಸಂಸ್ಕೃತದಲ್ಲಿ

ಯೇನ ಕರ್ಮಾನ್ಯಪಸೋ ಮನೀಷಿಣೋ
ಯಜ್ಞೇ ಕೃಣ್ವಂತಿ ವಿದತೇಷು ಧೀರಾಃ
ಯದಪೂರ್ವಂ ಯಕ್ಷ್ಮಂತಃ ಪ್ರಜಾನಾಂ
ತನ್ಮೇ ಮನಃ ಶಿವಸಂಕಲ್ಪಮಸ್ತು

ಕನ್ನಡದಲ್ಲಿ :

ಯಜ್ಞಯಾಗಾದಿಗಳ ಹವಿ
ಪಂಡಿತರಿಂದಾರ್ಗೆ ಸಲುವುದೊ
ಸರ್ವಜೀವರಲಂತರ್ಯಾಮಿಯಹುದೇನೋ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಇಂದ್ರಿಯಗಳು ಸ್ಥಿರವಾಗಿ ಮತ್ತು ವಿವೇಕವುಳ್ಳ ಹಾಗೂ ಯಜ್ಞ ಕಾರ್ಯಗಳಲ್ಲಿ  ಮತ್ತು ಶಾಸ್ತ್ರಗಳಲ್ಲಿ ವಿವರಿಸಲ್ಪಟ್ಟ ಇತರ ಕರ್ಮಗಳಲ್ಲಿ ನಿಪುಣ ಮತ್ತು ಶ್ರದ್ಧೆಯುಳ್ಳ  ಮತ್ತು ಪೂಜಿಸಲ್ಪಟ್ಟ ಹಾಗೂ ಬಹು ಮುಖ್ಯವಾದ  ಜ್ಞಾನ ಮಾರ್ಗದಲ್ಲಿ ಒಳ್ಳೆಯ ಕರ್ಮವನ್ನು ಮಾಡಲು (ಕರ್ಮನಿಷ್ಠ - ಕರ್ಮದಲ್ಲೆ ಸದಾ ಮುಳುಗಿರುವ ) ನನ್ನ ಮನಸ್ಸಿನಲ್ಲಿ ಸದಾ ಸದ್ಭಾವನೆಗಳೇ ತುಂಬಿರಲಿ.

ವ್ಯಾಖ್ಯಾನ :

ಮನಸ್ಸು ಆರೋಗ್ಯವಾಗಿ ಮತ್ತು ಸ್ವಯಂ-ಸ್ಥಿರತೆಯಿಂದಿಲ್ಲವಾದಲ್ಲಿ ( ಸ್ವ-ಸ್ಥ, - ಆರೋಗ್ಯಕ್ಕೆ ಸಾಮಾನ್ಯವಾಗಿ ಉಪಯೋಗಿಸುವ ಪದವು ಸ್ವ-ಸ್ಥಿರವಾದ, ಕ್ರಿಯಾವಂತನಲ್ಲಿ ನೆಲೆಸಿರುವ ನೈಜ ಸ್ವಭಾವ ) ಯಾವ ಕ್ರಿಯೆಗಳೂ ಸಮಗ್ರವಾಗಿರುವುದಿಲ್ಲ ಇಲ್ಲವೇ ಸರಿಯಾದ ಕ್ರಿಯೆಗಳಾಗಿರುವುದಿಲ್ಲ. ದಿವ್ಯ ಮತ್ತು ಪವಿತ್ರ ಕ್ರಿಯೆಗಳನ್ನು ಮನಸ್ಸಿಲ್ಲದೇ ಮಾಡಲಾಗುವುದಿಲ್ಲ, ಮತ್ತು ಈ ಕ್ರಿಯೆಗಳನ್ನು ಜ್ಞಾನವು ಮೊದಲೇ ಉದಯಿಸದೇ ಮಾಡಲಾಗುವುದಿಲ್ಲ.
ಈ ಮನಸ್ಸು ವಿಶಿಷ್ಟವಾದದ್ದು. ಇದು ಇಂದ್ರಿಯಗಳಿಗಿಂತ ಮುಂಚಿತವಾಗಿ ಹಿಂದೆಂದೂ ಕಂಡಿಲ್ಲದ್ದು. ಮನಸ್ಸನ್ನು ಆತ್ಮದರಿವಿನೊಡನೆ ಗುರುತಿಸಬಹುದಾದ್ದರಿಂದ ಇದು ಬಾಹ್ಯವಲ್ಲದ್ದು.
ಕೇವಲ ಈ ಮನಸ್ಸು ಮಾತ್ರ ಸಂಸ್ಕಾರ ಹಾಗೂ ಪವಿತ್ರವಾದದ್ದು. ಇದು ಎಲ್ಲ ಜೀವಿಗಳ ಶರೀರದೊಳಗೂ ನೆಲೆಸಿರುತ್ತದೆ. ಇಂದ್ರಿಯಗಳು ಮಾತ್ರ ಬಾಹ್ಯದಲ್ಲಿ ನೆಲೆಸಿರುವುದು; ಮನಸ್ಸು ಮಾತ್ರವೇ ಅಂತರಂಗದ ಇಂದ್ರಿಯವು.
ಆ ನನ್ನ ಸುಂದರ ಮತ್ತು ದೈವೀ ಮನಸ್ಸು ಸದಾ ಶಿವ-ಸಂಕಲ್ಪದ ಯೋಚನೆಗಳಲ್ಲೇ ತುಂಬಿರಲಿ.

ವ್ಯಾಖ್ಯಾನ - 2

ಸದಾ ಭಗವಂತನ ಮತ್ತು ಸತ್ಪುರುಷರ ಸನ್ನಿದಿಯಲ್ಲೇ ಇರುವುದರಿಂದಾಗಿ, ಯಾರು ಸದಾ ಕರ್ಮನಿರತರಾಗಿರುವ ಇಂಗಿತವುಳ್ಳವರೋ ಅವರ ಮನಸ್ಸು ಹತೋಟಿಯಲ್ಲಿರುವುದು.
ಅವರು ಪ್ರಜ್ಞಾವಂತ ಸಂಪನ್ನ ಧ್ಯಾನಿಗಳು, ಆಜ್ಞಾಪಿಸಿದ ಕ್ರಿಯೆಗಳಾದ ಅಗ್ನಿ ಸಂಸ್ಕಾರ, ಇತರೆ ಧಾರ್ಮಿಕ ಕ್ರಿಯೆಗಳನ್ನು ಮಾಡುತ್ತಾ ಅನುಭವ ಜನ್ಯ ಜ್ಞಾನವನ್ನು ಅನ್ವೇಷಿಸುತ್ತಾ ಅಥವಾ ಯುದ್ಧ ಭೂಮಿಯಲ್ಲಿರುವರು.
ಇಂಥಹ ಕ್ರಿಯೆಗಳಲ್ಲಿ ತೊಡಗಿರುವಾಗ ಮನಸ್ಸು ವಿಶಿಷ್ಟವಾಗಿರುವುದು, ಹಾಗೂ ಅತ್ಯುನ್ನತ ಲಕ್ಷಣಗಳು ಮತ್ತು ಕ್ರಿಯೆಗಳಿಂದ ಆವೃತವಾಗಿರುವುದು. ಇದು ಗೌರವಾತ್ಮಕವಾದದ್ದು, ಎಲ್ಲ ಜೀವಿಗಳ ಹೃದಯದಲ್ಲೂ ಒಗ್ಗೂಡಿರುವುದು. ಚಿಂತನೆಗಳಿಂದ ಕೂಡಿದ ಪ್ರಕ್ರಿಯೆಯೆಂಬುದಾಗಿ ಗುರುತಿಸಲ್ಪಟ್ಟ ನನ್ನ ಮನಸ್ಸು ಸದಾ ಶಿವ-ಸಂಕಲ್ಪದಲ್ಲಿ, ಹಾಗೂ ಸದಾ ಧರ್ಮ ಮಾರ್ಗದೆಡೆಗೆ ಒಲವುಳ್ಳದ್ದಾಗಿರಲಿ.
ಮನುಷ್ಯನಿಗೆ ಈ ವರ್ತನೆಗಳು ವಾಸ್ತವಿಕ ಪೂಜೆಗಳ ( ಉಪಾಸನವು ಅತ್ಯುನ್ನತವಾದದ್ದು ಹಾಗೂ  - (i) ಸ್ತುತಿ, ಸ್ತೋತ್ರಗೀತೆ ಅಥವಾ ಪ್ರಶಂಸೆ, (ii) ಪ್ರಾರ್ಥನೆ ಮತ್ತು (iii) ಉಪಾಸನ - ಇಲ್ಲಿ ಇದನ್ನು ವಾಸ್ತವಿಕ ಪೂಜೆಯೆಂದು ಪರಿಗಣಿಸಲಾದ ಮೂರು ಹಂತದ ಪೂಜೆಗಳ ಪೈಕಿ ಆಳವಾದದ್ದು. ಇದರ ಅಕ್ಷರಷಃ ಅರ್ಥವೆಂದರೆ ಭಕ್ತನು ಪ್ರಜ್ಞಾವಂತ ಸ್ಥಿತಿಯಲ್ಲಿ ದೈವದ ಸಮೀಪದಲ್ಲೇ ಕುಳಿತು ಆ ದೈವದ ಇರವಿನ ನೇರ ಅನುಭವವನ್ನು ಹೊಂದುತ್ತಾ, ಆ ದೈವವೇ ತಾನಾಗಿರುವ ಸಾಕ್ಷಾತ್ಕಾರವನ್ನು ಅನುಭವಿಸುವನು ) ಮೂಲಕ, ಸುಂದರವಾದ ಯೋಚನೆಗಳು ಮತ್ತು ಸತ್ಪುರುಷರ ಸಹವಾಸದಿಂದ ತಮ್ಮ ಮನಸ್ಸನ್ನು ಧಾರ್ಮಿಕವಲ್ಲದ ನಡೆಗಳಿಂದ ಧಾರ್ಮಿಕ ನಡಾವಳಿಕೆಗಳೆಡೆಗೆ ಬದಲಾಯಿಸಲು ಸಹಕಾರಿಯಾಗುವುದು.
ಮುಂದುವರೆಯುವದು........

ಲೇಖನದ ಮೂಲಗಳು :
ಸಂಸ್ಕೃತ ಹಾಗೂ ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ - ಸವಿಗನ್ನಡ ಸ್ತೋತ್ರಚಂದ್ರಿಕೆ.

No comments:

Post a Comment

If you have any doubts. please let me know...