ನಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾಃ|
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ
ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ ||1||
ತಾಯೇ, ನನಗೆ ನಿನ್ನ ಮಂತ್ರವಾಗಲೀ, ಯಂತ್ರವಾಗಲೀ, ಸ್ತುತಿಯಾಗಲೀ ಗೊತ್ತಿಲ್ಲ;ನಿನ್ನ ಆಹ್ವಾನವನ್ನಾಗಲೀ, ಧ್ಯಾನವನ್ನಾಗಲೀ, ಸ್ತುತಿಕಥೆಯನ್ನಾಗಲೀ ನಾನರಿಯೆ; ನಿನ್ನ ಮುದ್ರೆಯೂ ನನಗೆ ತಿಳಿದಿಲ್ಲ; ನಿನ್ನ ಮು೦ದೆ ಮೊರೆಯಿಡುವುದನ್ನೂ ನಾನರಿಯೆ; ಆದರೆ, ಅಮ್ಮಾ ನನಗೆ ಇಷ್ಟು ಮಾತ್ರ ಗೊತ್ತು-ನಿನ್ನನ್ನು ಅನುಸರಿಸಿದರೆ ಸ೦ಕಟವೆಲ್ಲವೂ ನಾಶವಾಗುತ್ತದೆ.
ವಿಧೇರಜ್ಞಾನೇನ ದ್ರವಿಣ ವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ |
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ||2||
ಹೇ ಜನನಿ, ವಿಧಿ ವಿಲಾಸದಿಂದಲೂ, ನನ್ನ ದಾರಿದ್ರ್ಯದಿ೦ದಲೂ, ಆಲಸ್ಯದಿ೦ದಲೂ ಮತ್ತು ನಿನಗೆ ವಿಧೇಯನಾಗಿರಲು ಅಶಕ್ಯನಾದುದರಿಂದಲೂ ನಿನ್ನ ಅಡಿದಾವರೆಗಳಿಂದ ಚ್ಯುತನಾದೆನು. ಹೇ ಸಕಲೋದ್ಧಾರಿಣಿ ಶಿವೇ, ನೀನು ನನ್ನ ಸಕಲ ಲೋಪದೋಷಗಳನ್ನೂ ಕ್ಷಮಿಸು. ಲೋಕದಲ್ಲಿ ಕುಪುತ್ರ ಹುಟ್ಟಿದರೂ ಹುಟ್ಟಬಹುದು, ಆದರೆ ಕುಮಾತೆ ಎಲ್ಲಿಯೂ ಕಾಣಬರುವುದಿಲ್ಲ.
ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವಃ ಸಂತಿ ಸರಲಾಃ
ಪರಂ ತೇಷಾಂ ಮಧ್ಯೇ ವಿರಲತರಲೋಹಂ ತವ ಸುತಃ |
ಮದೀಯೋಯಂ ತ್ಯಾಗಃ ಸಮುಪಚಿತಮಿದಂ ನೋ ತವ ಶಿವೇ
ಕುಪುತ್ರೋಜಾಯೇತ ಕ್ವಚಿದಪಿ ಕುಮಾತಾ ನ ಭವತಿ ||3||
ಅಮ್ಮಾ, ಈ ಜಗತ್ತಿನಲ್ಲಿ ನಿನಗೆ ಪುಣ್ಯಪುರುಷರಾದ ಎಷ್ಟೋಮಕ್ಕಳಿದ್ದಾರೆ. ಅವರ ಮಧ್ಯದಲ್ಲಿ ಈ ನಿನ್ನ ಮಗನಾದ ನಾನು ಕೇವಲ ಅತ್ಯಲ್ಪನಾದವನು; ಹೇ ಮಂಗಳದಾಯಕಿ, ನಾನು ನಿನ್ನನ್ನು ಬಿಟ್ಟಿರುವುದು ಉಚಿತವಾಗಿರಬಹುದು; ಆದರೆ ನೀನು ನನ್ನನ್ನು ಬಿಟ್ಟಿರುವುದು ಉಚಿತವಲ್ಲ; ಏಕೆಂದರೆ, ಕುಪುತ್ರ ಹುಟ್ಟಿದರೂ ಹುಟ್ಟಬಹುದು, ಕುಮಾತೆ ಎಲ್ಲಿಯೂ ಕಾಣಬರುವುದಿಲ್ಲ.
ಜಗನ್ಮಾತರ್ಮಾತಸ್ತವ ಚರಣ ಸೇವಾ ನ ರಚಿತಾ
ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾಪಿ ತ್ವಂ ಸ್ನೇಹಂಮಯಿ ನಿರುಪಮಂ ಯತ್ಪ್ರಕುರುಷೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ||4||
ಹೇ ಜಗನ್ಮಾತೆ, ಅಮ್ಮಾ, ಎಂದೂ ನಾನು ನಿನ್ನ ಚರಣ ಸೇವೆಯನ್ನು ಮಾಡಿದವನಲ್ಲ; ಅಥವಾ ನಿನ್ನ ಹೆಸರಿನಲ್ಲಿ ಬೇಕಾದಷ್ಟು ಐಶ್ವರ್ಯವನ್ನು ದಾನಮಾಡಿದವನಲ್ಲ; ಆದರೂ ನಿನಗೆ ನನ್ನಲ್ಲಿರುವ ಪ್ರೇಮ ಅನುಪಮವಾದುದು; ಏಕೆಂದರೆ ಕುಪುತ್ರ ಹುಟ್ಟಿದರೂ ಹುಟ್ಟಬಹುದು,ಕುಮಾತೆ ಎಲ್ಲಿಯೂ ಕಾಣಬರುವುದಿಲ್ಲ.
ಪರಿತ್ಯಕ್ತ್ವಾ ದೇವಾನ್ ವಿವಿಧವಿಧಸೇವಾಕುಲತಯಾ
ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ |
ಇದಾನೀಂ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರಜನನಿ ಕಂ ಯಾಮಿ ಶರಣಮ್ ||5||
ಹೇ ಗಣೇಶಮಾತೆ, ಪೂಜೆಯ ವಿಧಿವಿಧಾನಗಳನ್ನು ನಾನು ಅರಿಯೆನಾದ್ದರಿ೦ದ ಇತರ ದೇವತೆಗಳ ಪೂಜೆಯನ್ನು ನಾನು ಪರಿತ್ಯಜಿಸಿದ್ದೇನೆ; ನನಗಾಗಲೇ ಎಂಭತ್ತೈದಕ್ಕಿಂತಲೂ ಹೆಚ್ಚು ವಯಸ್ಸಾಗಿದೆ; ಅಮ್ಮಾ,ಈಗಲಾದರೂ ನನ್ನಲಿ ಕೃಪೆತೋರದಿದ್ದರೆ ನಿರಾಶ್ರಿತನಾದ ನಾನು ಯಾರನ್ನು ಶರಣುಹೋಗಲಿ?
ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈಃ |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ
ಜನಃಕೋ ಜಾನೀತೇ ಜನನಿ ಜಪನೀಯಂ ಜಪವಿಧೌ ||6||
ಚಂಡಾಲನು ಮಧುಪಾಕಸದೃಶವಾದ ಮಾತುಗಳನ್ನಾಡುವನು; ದಟ್ಟದರಿದ್ರನಾದವನು ಕೋಟಿಸುವರ್ಣಾಧಿಕಾರಿಯಾಗಿ ಯಾವ ಆತ೦ಕವೂ ಇಲ್ಲದೆ ಬಹುಕಾಲ ವಿಹರಿಸುವನು; ಹೇ ಅಪರ್ಣೇ,ಇದು ನಿನ್ನ ಮ೦ತ್ರವರ್ಣ ಕಿವಿಯಲ್ಲಿ ಬಿದ್ದ ಫಲ. ಹೀಗಿರುವಾಗ ಹೇ ತಾಯಿ, ವಿಧಿಪ್ರಕಾರ ಜಪಿಸುವವನಿಗೆ ಎಂಥಾ ಫಲ ದೊರೆಯಬಹುದೆ೦ದು ಯಾರು ಹೇಳಬಲ್ಲರು?
ಚಿತಾಭಸ್ಮಾಲೇಪೋ ಗರಲಮಶನಂ ದಿಕ್ಪಟಧರೋ
ಜಟಾಧಾರಿ ಕಂಠೇ ಭುಜಗಪತಿಹಾರೀ ಪಶುಪತಿಃ |
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನೀ ತ್ವತ್ಪಾಣಿಗ್ರಹಣಪರಿಪಾಟೀಫಲಮಿದಂ ||7||
ವಿಷವನ್ನು ಕುಡಿದು, ಚಿತೆಯಭಸ್ಮವನ್ನು ಮೈಗೆಲ್ಲ ಬಳಿದುಕೊ೦ಡು ದಿಕ್ಕುಗಳನ್ನೇ ಬಟ್ಟೆಯಾಗಿ ಉಟ್ಟು, ಜಟೆಯನ್ನು ಧರಿಸಿ, ಕ೦ಠದಲ್ಲಿ ಹಾವನ್ನು ಹಾರವಾಗಿ ಹಾಕಿಕೊಂಡು, ತಲೆಯೋಡನ್ನು ಭಿಕ್ಷಾಪಾತ್ರೆಯಾಗಿ ಕೈಯಲ್ಲಿ ಹಿಡಿದು, ಭೂತಗಳ ಮಧ್ಯೆ ವಾಸಿಸುವ ಪಶುಪತಿಯಾದ ಶಿವನು ಅದ್ವಿತೀಯವಾದ ಜಗದೀಶ್ವರನ ಪದವಿಯನ್ನು ಹೊಂದಿದನು-
ಭವಾನಿ, ಇದು ನಿನ್ನ ಪಾಣಿಗ್ರಹಣದ ಫಲವೇ!
ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವ ವಾಂಛಾಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸಖೇಚ್ಛಾಪಿ ನ ಪುನಃ |
ಅತಸ್ತ್ವಾಂಸಂಯಾಚೇ ಜನನಿ ಜನನಂ ಯಾತು ಮಮವೈ
ಮೃಡಾನೀ ರುದ್ರಾನೀ ಶಿವ ಶಿವ ಭವಾನೀತಿ ಜಪತಃ ||8||
ಹೇ ಚಂದ್ರಮುಖಿ, ನನಗೆ ಮೋಕ್ಷದ ಅಪೇಕ್ಷೆಯಿಲ್ಲ; ಧನಸಂಪತ್ತುಗಳ ಇಚ್ಛೆಯಿಲ್ಲ;ಜ್ಞಾನದ ಅಪೇಕ್ಷೆಯಿಲ್ಲ; ಸುಖದ ಇಚ್ಛೆಯೂ ಇಲ್ಲ; ಹೇ ತಾಯಿ, ನಿನ್ನಮು೦ದೆ ಇಷ್ಟು ಮಾತ್ರ ಯಾಚಿಸುತ್ತೇನೆ-ಮೃಡಾಣಿ, ರುದ್ರಾಣಿ, ಶಿವ, ಶಿವ, ಭವಾನಿ ಎಂದು ಜಪಿಸುತ್ತಾ ನನ್ನ ಜನ್ಮವೆಲ್ಲವೂ ಕಳೆದು ಹೋಗಲಿ!
ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ
ಕಿಂ ರುಕ್ಷಚಿಂತನಪರೈರ್ನ ಕೃತಂ ವಚೋಭಿಃ |
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ ||9||
ವಿಧಿಪೂರ್ವಕವಾದ ವಿವಿಧೋಪಚಾರಗಳಿಂದ ನಾನು ಎಂದೂ ನಿನ್ನನ್ನು ಪೂಜಿಸಲಿಲ್ಲ; ಶುಶ್ಕಚಿಂತಾಪರವಾದ ಹರಟೆಗಳಿಂದ ಕಾಲವನ್ನು ಕಳೆದು ನಾನು ಯಾವ ತಪ್ಪನ್ನುತಾನೇ ಮಾಡಿಲ್ಲ! ಆದರೂ ಶ್ಯಾಮೇ,ಅನಾಥನಾದ ನನ್ನಲ್ಲಿ ಸ್ವಲ್ಪ ಕೃಪೆಯನ್ನು ತೋರುವೆಯಾದರೆ ಅದು ನಿನಗೆ ಉಚಿತವೇ ಆಗಿರುವುದು.!
ಆಪತ್ಸುಮಗ್ನಃ ಸ್ಮರಣಂ ತ್ವದೀಯಂ
ಕರೋಮಿ ದುರ್ಗೇ ಕರುಣಾರ್ಣವೇಶಿ |
ನೈತಚ್ಛರತ್ವಂ ಮಮ ಭಾವಯೇಥಾಃ
ಕ್ಷುಧಾತೃಷಾರ್ತಾ ಜನನೀಂ ಸ್ಮರಂತಿ ||10||
ಹೇ ದುರ್ಗೆ, ಕರುಣಾರ್ಣೇಶ್ವರೀ, ಆಪತ್ತಿನಲ್ಲಿಮುಳುಗಿ ನಿನ್ನನ್ನು ಸ್ಮರಿಸುತ್ತೇನೆ; ಇದನ್ನು ಮೋಸವೆಂದು ತಿಳಿಯಬೇಡ; ಏಕೆಂದರೆ ಹಸಿವೆಯಾದಾಗ, ಬಾಯಾರಿಕೆಯಾದಾಗ ಮಕ್ಕಳು ತಾಯಿಯನ್ನು ಸ್ಮರಿಸಿಕೊಳ್ಳುತ್ತಾರೆ.
ಜಗದಂಬ ವಿಚಿತ್ರಮತ್ರ ಕಿಂ ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ |
ಅಪರಾಧಪರಂಪರಾ ಪರಂ ನ ಹಿ ಮಾತಾ ಸಮುಪಪೇಕ್ಷತೇ ಸುತಂ ||11||
ಹೇ ಲೋಕಮಾತೇ, ನೀನು ನನ್ನಲ್ಲಿ ಸಂಪೂರ್ಣ ಕರುಣಾಮಯಿಯಾಗಿದ್ದರೆ ಅದರಲ್ಲಿ ಆಶ್ಚರ್ಯವೇನು? ಏಕೆಂದರೆ ಸಾವಿರಾರು ಅಪರಾಧಗಳನ್ನು ಮಾಡಿದ್ದರೂ ತಾಯಿ ಮಗನನ್ನು ಉಪೇಕ್ಷಿಸುವುದಿಲ್ಲ.
ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ |
ಏವಂ ಜ್ಞಾತ್ವಾ ಮಹಾದೇವಿ ಯಥಾಯೋಗ್ಯಂ ತಥಾಕುರು ||
ನನ್ನಂತಹ ಪಾತಕಿಯೂ ಇಲ್ಲ,ನಿನ್ನಂತಹ ಪಾಪನಾಶಕಳೂ ಇಲ್ಲ;ಹೇ ದೇವಿ,ಇದನ್ನು ಅರಿತು ಯಾವುದು ಉಚಿತವೋ ಅದನ್ನು ಮಾಡು.
No comments:
Post a Comment
If you have any doubts. please let me know...