December 30, 2021
ಕೇಶವನ ರೂಪಗಳನ್ನು ಹೇಗೆ ಗುರುತಿಸುವುದು?
December 26, 2021
ವೇದಗಳಲ್ಲಿ ಸತಿಸಹಗಮನ ಪದ್ಧತಿ
December 23, 2021
ಅಪಾಮಾರ್ಗ
December 22, 2021
ಸಪ್ತ ಋಷಿಗಳ ರಾಜ್ಯಾಡಳಿತ
December 20, 2021
ಸಂಸ್ಕೃತ ಕಲಿಯೋಣ
ಬಂಧೂನಾಂ ನಾಮಾನಿ – ಸಂಬಂಧಿಕರ ಹೆಸರುಗಳು
माता – ಮಾತಾ – ತಾಯಿ
पिता – ಪಿತಾ – ತಂದೆ
मातामही – ಮಾತಾಮಹೀ – ತಾಯಿಯ ತಾಯಿ (ಅಜ್ಜಿ)
पितामहः – ಪಿತಾಮಹಃ – ತಂದೆಯ ತಂದೆ (ಅಜ್ಜ)
पितामही – ಪಿತಾಮಹೀ – ತಂದೆಯ ತಾಯಿ (ಅಜ್ಜಿ)
पतिः – ಪತಿಃ – ಪತಿ
पत्नी – ಪತ್ನೀ – ಪತ್ನಿ
पुत्री – ಪುತ್ರೀ – ಪುತ್ರಿ
पुत्रः – ಪುತ್ರಃ – ಪುತ್ರ
ज्येष्ठभ्राता – ಜ್ಯೇಷ್ಠಭ್ರಾತಾ – ಅಣ್ಣ
कनिष्ठभ्राता – ಕನಿಷ್ಠಭ್ರಾತಾ – ತಮ್ಮ
ज्येष्ठभगिनी – ಜ್ಯೇಷ್ಠಭಗಿನೀ – ಅಕ್ಕ
कनिष्ठभगिनी – ಕನಿಷ್ಠಭಗಿನೀ – ತಂಗಿ
मातुलः – ಮಾತುಲಃ – ಮಾವ (ತಾಯಿಯ ಸಹೋದರ)
पितृव्यः – ಪಿತೃವ್ಯಃ – ಚಿಕ್ಕಪ್ಪ (ತಂದೆಯ ಸಹೋದರ)
मातुलानी – ಮಾತುಲಾನೀ – ಅತ್ತೆ (ತಾಯಿಯ ಸಹೋದರನ ಹೆಂಡತಿ)
पितृव्या – ಚಿಕ್ಕಮ್ಮ (ತಂದೆಯ ಸಹೋದರನ ಹೆಂಡತಿ)
श्वशुरः – ಶ್ವಶುರಃ – ಮಾವ (ಪತ್ನಿಯ ತಂದೆ)
श्वश्रूः – ಶ್ವಶ್ರೂಃ – ಅತ್ತೆ (ಪತ್ನಿಯ ತಾಯಿ)
श्यालः – ಶ್ಯಾಲಃ – ಬಾಮೈದ
श्याली – ಶ್ಯಾಲೀ – ಬಾಮೈದನ ಪತ್ನಿ
देवरः – ದೇವರಃ – ಪತಿಯ ಸಹೋದರ
ननान्दा – ನನಂದಾ – ಪತಿಯ ಸಹೋದರಿ
पौत्रः – ಪೌತ್ರಃ – ಮೊಮ್ಮಗ
पौत्री – ಪೌತ್ರೀ – ಮೊಮ್ಮಗಳು
दौहित्रः – ದೌಹಿತ್ರಃ – ಮಗಳ ಮಗ
दौहित्री – ದೌಹಿತ್ರೀ – ಮಗಳ ಮಗಳು
मित्रम् – ಮಿತ್ರಮ್ – ಗೆಳೆಯ
सखी – ಸಖೀ – ಗೆಳತಿ
ಗೃಹೋಪಕರಣಾನಾಂ ನಾಮಾನಿ
आसन्दः – ಆಸಂದಃ – ಖುರ್ಚಿ
तालः – ತಾಲಃ – ಬೀಗ
दण्डदीपः – ದಂಡದೀಪಃ – ಟ್ಯೂಬ್ ಲೈಟ್
समीरकः – ಸಮೀರಕಃ – ಇಸ್ತ್ರಿಪೆಟ್ಟಿಗೆ
स्यूतः – ಸ್ಯೂತಃ – ಬ್ಯಾಗ್
अग्निपेटिका – ಅಗ್ನಿಪೇಟಿಕಾ – ಕಡ್ದಿಪೆಟ್ಟಿಗೆ
करदीपः – ಕರದೀಪಃ – ಟಾರ್ಚ್
कटः – ಕಟಃ – ಮ್ಯಾಟ್
पिञ्जः – ಪಿಂಜಃ – ಸ್ವಿಚ್
दर्पणः – ದರ್ಪಣಃ – ಕನ್ನಡಿ
नलिका – ನಲಿಕಾ – ನಳ (ಟ್ಯಾಪ್)
कुञ्जिका – ಕುಂಜಿಕಾ – ಬೀಗದ ಕೈ
दूरवाणी – ದೂರವಾಣೀ – ದೂರವಾಣಿ
कपाटिका – ಕಪಾಟಿಕಾ – ಕಪಾಟು
अवकरिका – ಅವಕರಿಕಾ – ಕಸದತೊಟ್ಟಿ
चुल्ली – ಚುಲ್ಲೀ – ಒಲೆ
सम्मार्जनी – ಸಮ್ಮಾರ್ಜನೀ – ಕಸಬರಿಗೆ
कङ्कतं – ಕಂಕತಮ್ – ಬಾಚಣಿಗೆ
शय्या – ಶಯ್ಯಾ – ಬೆಡ್
जवनिका – ಜವನಿಕಾ – ಕರ್ಟನ್
पेटिका – ಪೇಟಿಕಾ – ಬಾಕ್ಸ್
पुष्पाधानी – ಪುಷ್ಪಧಾನೀ – ಹೂಕುಂಡ
उपधानम् – ಉಪಧಾನಮ್ – ದಿಂಬು
व्यजनम् – ವ್ಯಜನಮ್ – ಫ್ಯಾನ್
ವೇಷಭೂಷಣಾನಿ – ವೇಷಭೂಷಣಗಳು
वसनम् – ವಸನಮ್ – ವಸ್ತ್ರ
उष्णीषम् – ಉಷ್ಣೀಷಮ್ – ಮುಂಡಾಸು
शिरस्त्राणम् – ಶಿರಸ್ತ್ರಾಣಮ್ – ಕ್ಯಾಪ್
उत्तरीयः – ಉತ್ತರೀಯಃ – ಉತ್ತರೀಯ
गलवन्धनांशुकम् – ಗಲವಂಧನಾಂಶುಕಮ್ – ಮಫ್ಲರ್
कञ्चुकः, निचोलः – ಕಂಚುಕಃ / ನಿಚೋಲಃ – ಶರ್ಟ್
करवस्त्रम् – ಕರವಸ್ತ್ರಮ್ – ಕರವಸ್ತ್ರ
रल्लकः, कम्बलः – ರಲ್ಲಕಃ / ಕಂಬಲಃ – ಬ್ಲ್ಯಾಂಕೆಟ್
शाटिका – ಶಾಟಿಕಾ – ಸೀರೆ
अधोवस्त्रम् – ಅಧೋವಸ್ತ್ರಮ್ – ಧೋತಿ
जङ्घात्राणम् – ಜಂಘಾತ್ರಾಣಮ್ – ಪ್ಯಾಂಟ್
कटिसूत्रम् – ಕಟಿಸೂತ್ರಮ್ – ಬೆಲ್ಟ್
पादत्राणम् – ಪಾದತ್ರಾಣಮ್ – ಸಾಕ್ಸ್
नीशारः – ನಿಶಾರಃ – ಗಾದಿ
ಛಾತ್ರೋಪಕರಣಾನಾಂ ನಾಮಾನಿ – ವಿದ್ಯಾರ್ಥಿಗಳು ಬಳಸುವ ವಸ್ತುಗಳು.
सुधाखण्डः – ಸುಧಾಖಂಡಃ – ಚಾಕ್ ಪೀಸ್
निर्यास: – ನಿರ್ಯಾಸಃ – ಗಮ್
पत्रभार: – ಪತ್ರಭಾರಃ – ಪತ್ರದ ಭಾರ
उत्पीठिका – ಉತ್ಪೀಠಿಕಾ – ಟೇಬಲ್
अन्त: पेटिका – ಅಂತಃ ಪೇಟಿಕಾ- ಡ್ರಾಯರ್
रन्ध्रिका – ರಂಧ್ರಿಕಾ – ಪಂಚಿಂಗ್ ಮಶಿನ್
मृदुमुद्रा – ಮೃದುಮುದ್ರಾ – ರಬ್ಬರ್ ಸ್ಟ್ಯಾಂಪ್
मापिका – ಮಾಪಿಕಾ – ಸ್ಕೇಲ್
लेपनपट्टिका – ಲೇಪನಪಟ್ಟಿಕಾ – ಅಂಟುಪಟ್ಟೀ (Adhesive Tape)
लेखनी – ಲೇಖನೀ – ಪೆನ್ನು
अङ्कनी – ಅಂಕನೀ – ಪೆನ್ಸಿಲ್
वर्णलेखनी – ವರ್ಣಲೇಖನೀ – ಸ್ಕೆಚ್ ಪೆನ್
योजिनी – ಯೋಜಿನೀ – ಸ್ಟೇಪ್ಲರ್
पत्रसूची – ಪತ್ರಸೂಚೀ – ಪಿನ್ ಕೋಡ್
मार्जनी – ಮಾರ್ಜನೀ – ಇರೇಸರ್
कर्तरी – ಕರ್ತರೀ – ಕತ್ತರಿ
पुस्तकम् – ಪುಸ್ತಕಮ್ – ಪುಸ್ತಕ
श्वेतपत्रम् – ಶ್ವೇತಪತ್ರಮ್ – ಬಿಳಿಹಾಳೆ
लेखनपीठम् – ಲೇಖನಪೀಠಮ್ – ಡೆಸ್ಕ್
कृष्णफलकम् – ಕೃಷ್ಣಫಲಕಮ್ – ಬ್ಲ್ಯಾಕ್ ಬೋರ್ಡ್
सुभाषितम् – ಸುಭಾಷಿತಮ್
“चिन्तनीया हि विपदाम् आदावेव प्रतिक्रिया । न कूपखननं युक्तम् प्रदीप्ते वह्निना गृहे ॥”
“ಚಿಂತನೀಯಾ ಹಿ ವಿಪದಾಮ್ ಆದಾವೇವ ಪ್ರತಿಕ್ರಿಯಾ | ನ ಕೂಪಖನನಂ ಯುಕ್ತಮ್ ಪ್ರದೀಪ್ತೇ ವಹ್ನಿನಾ ಗೃಹೇ ||”
ಭಾವಾರ್ಥಃ – ಮುಂದೆ ಬರಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನು ಮುಂಚೆಯೇ ಯೋಚಿಸಿಕೊಳ್ಳಬೇಕು. ಮನೆಗೆ ಬೆಂಕಿ ಆವರಿಸಿದಾಗ ನೀರಿಗಾಗಿ ಬಾವಿಯನ್ನು ತೋಡುವುದು ಯುಕ್ತವಲ್ಲ.
“ಪುನಃ ಮಿಲಾಮಃ” “ಶುಭಂ ಭೂಯಾತ್”
December 13, 2021
ಹನುಮಂತನ ವಾಹನ
December 10, 2021
ಮಾತೆಯ ಹಿರಿಮೆ
December 6, 2021
ಕರ್ಣನನ್ನೇ ಏಕೆ ದಾನಶೂರ ಎಂದು ಕರೆಯುತ್ತಾರೆ
December 1, 2021
ಹನುಮದ್ವ್ರತ
November 27, 2021
ಅಭಿಜಿತ್ ಎನ್ನುವ ನಕ್ಷತ್ರವೋ ಮುಹೂರ್ತವೋ
ಸ್ಕಂದನು ಅಥವಾ ಕಾರ್ತಿಕೇಯನು ವಿವರಿಸುವ ವಿಷಯ ಇದು. ಕಾರ್ತಿಕೇಯನು ದೇವ ಸೇನಾಧಿಪತಿಯಾಗಿದ್ದನ್ನು ಕೇಳಿ ಸಪ್ತರ್ಷಿಗಳ ಪತ್ನಿಯರಲ್ಲಿ ಅರುಂಧತಿಯನ್ನು ಬಿಟ್ಟು ಉಳಿದ ಆರು ಮಂದಿ ಬರುತ್ತಾರೆ. ಸ್ಕಂದನಲ್ಲಿ ಹೇಳಿಕೊಳ್ಳುತ್ತಾರೆ. ನಾವು ನಮ್ಮ ಪತಿಗಳಿಂದ ಪರಿತ್ಯಕ್ತರಾಗಿದ್ದೇವೆ. ಯಾವುದೊಂದು ಕಾರಣವೂ ಇಲ್ಲದೇ ಅವರ ಕೋಪಕ್ಕೆ ತುತ್ತಾಗಿ ನಾವು ಅವರಿಂದ ದೂರ ಆಗಿದ್ದೇವೆ. ನೀನು ಅಗ್ನಿಯಿಂದ ಹುಟ್ಟಿದೆಯೆಂದು ಯಾರೋ ಕೆಲವರು ಸುಳ್ಳುಸುದ್ದಿಯನ್ನು ಹಬ್ಟಿಸಿದ್ದೇ ಇದಕ್ಕೆ ಕಾರಣ. ಅದನ್ನೇ ಸತ್ಯವೆಂದು ನಂಬಿದ ನಮ್ಮ ಪತಿಗಳು ನಮ್ಮನ್ನು ದೂರ ಅಟ್ಟಿಬಿಟ್ಟರು. ಈ ಸಮಯದಲ್ಲಿ ನಮ್ಮನ್ನು ಈ ಅಪವಾದದಿಂದ ಪಾರುಮಾಡಲು ನೀನೇ ಸಮರ್ಥ. ಆದರೆ, ನಮ್ಮ ಮೇಲೆ ಬಂದಿರುವ ಅಪವಾದವನ್ನು ಕಳೆದುಕೊಳ್ಳಲೂ ನಮಗೆ ಇಷ್ಟವಿಲ್ಲ. ಆದರೂ ನಾವು ನಿನ್ನ ಜನ್ಮಕ್ಕೆ ಕಾರಣರಾಗದಿದ್ದರೂ ಈಗ ನಾವು ನಿನ್ನನ್ನು ನಮ್ಮ ಪುತ್ರನೆಂದೇ ಭಾವಿಸುತ್ತೇವೆ. ನಿನ್ನ ಅನುಗ್ರಹದಿಂದ ನಮಗೆ ಸ್ವರ್ಗ ಸಿಗಲಿ. ಈ ವರ ಕೊಟ್ಟು ಮಾತೃಋಣದಿಂದ ನೀನು ವಿಮುಕ್ತನಾಗು. ನಿಮ್ಮ ಇಚ್ಛೆಯಂತೆಯೇ ನೀವು ನನ್ನ ತಾಯಂದಿರಾಗಿರಿ. ನಾನು ನಿಮ್ಮ ಮಗನಾಗುವೆನು. ನೀವು ಯಾವುದನ್ನು ಇಚ್ಛಿಸುವಿರೋ ಅವೆಲ್ಲವೂ ನಿಮಗೆ ಸಿಗುವುದು ಎಂದು ಸ್ಕಂದನು ಹೇಳುತ್ತಾನೆ. ಇಲ್ಲಿ ನಕ್ಷತ್ರಗಳ ಮಾಹಿತಿ ಬರುತ್ತದೆ.
ಅಭಿಜಿತ್ ನಕ್ಷತ್ರವು ರೋಹಿಣಿಯ ತಂಗಿ. ಆದರೆ ರೋಹಿಣಿಗಿಂತಲೂ ಉನ್ನತಸ್ಥಾನ ತನಗೆ ಸಿಗಬೇಕೆಂಬುದು ಅಭಿಜಿತಳ ಆಶಯವಾಗಿತ್ತು. ಅವಳಿಗಾಗಿ ನೀಡಲ್ಪಟ್ಟ ಸ್ಥಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಹಾಗಿರುವಾಗ ಬಹಳ ಬೇಸರಗೊಳ್ಳುತ್ತಾಳೆ. ಆಕೆ ಇದರಿಂದ ಖತಿಗೊಂಡ ಅಭಿಜಿತಳು ನಕ್ಷತ್ರಾಧಿದೇವತೆಯ ಜ್ಯೇಷ್ಠತ್ವವನ್ನು ಪಡೆಯುವ ಸಲುವಾಗಿ ಅಂತರಿಕ್ಷದಿಂದ ಭೂಮಿಗಿಳಿದು ತಪಸ್ಸು ಮಾಡಲು ಕಾಡಿಗೆ ಹೊರಟು ಹೋದಳು. ಈಗ ಅಭಿಜಿತಳ ಸ್ಥಾನ ಖಾಲಿಯಾಗಿದೆ. ಅವಳ ಸ್ಥಾನವನ್ನು ನಾವು ತುಂಬಲೇಬೇಕು. ಈ ವಿಷಯವನ್ನು ನೀನು ಬ್ರಹ್ಮನೊಡನೆ ಚರ್ಚಿಸಬೇಕು. ಧನಿಷ್ಠವೇ ಮೊದಲಾದ ನಕ್ಷತ್ರಗಳನ್ನೊಳಗೊಂಡ ಕಾಲವು ಹಿಂದೆ ಬ್ರಹ್ಮನಿಂದಲೇ ಸೃಷ್ಟಿಯಾಗಿತ್ತು. ಆ ಸಮಯದಲ್ಲಿ ರೋಹಿಣಿನಕ್ಷತ್ರವೂ ಆ ನಕ್ಷತ್ರಮಾಲೆ ಯಲ್ಲಿದ್ದಳು. ನಕ್ಷತ್ರಸಂಖ್ಯೆಯು ಪೂರ್ಣವಾಗಿತ್ತು. ಈಗ ಅಭಿಜಿತಳು ಹೊರಟುಹೋಗಿರುವುದರಿಂದ ಅವಳ ಸ್ಥಾನಕ್ಕೆ ಬೇರೊಂದು ನಕ್ಷತ್ರವನ್ನು ತುಂಬಬೇಕಾಗಿದೆ. ಇಲ್ಲದಿದ್ದರೆ ಕಾಲದಲ್ಲಿ ವ್ಯತ್ಯಯವಾಗುತ್ತದೆ. ಇಂದ್ರನು ಕಾರ್ತಿಕೇಯನಿಗೆ ಹೇಳುತ್ತಾನೆ. ಸ್ಕಂದ ಮತ್ತು ಬ್ರಹ್ಮನ ಮನಸ್ಸಿನ ಆಶಯವನ್ನು ತಿಳಿದ ಕೃತ್ತಿಕಾ ನಕ್ಷತ್ರಾಧಿದೇವತೆಗಳು ತಾರಾಮಂಡಲವನ್ನು ಸೇರಿಕೊಳ್ಳುತ್ತಾರೆ. ಆ ಕೃತ್ತಿಕಾ ನಕ್ಷತ್ರವು ಏಳು ತಲೆಗಳ ಹಾಗೇ ಈಗಲೂ ಪ್ರಕಾಶಿಸುತ್ತಿದೆ. ಮತ್ತು ಆ ನಕ್ಷತ್ರಗಳ ಅಧಿದೇವತೆ ಅಗ್ನಿಯೇ. ಸಪ್ತ ಋಷಯಃ ಪ್ರಥಮಾಂ ಕೃತ್ತಿಕಾನಾಮರುನ್ಧತೀಂ ಎನ್ನುವ ಮಂತ್ರದಂತೆ ಕೃತ್ತಿಕೆಯರು ಆರು ಜನ. ಧ್ರುವ ಅಥವಾ ಧ್ರುವೆ ಅರುಂಧತಿಯು ಏಳನೆಯವಳು. ನವ ವಿವಾಹಿತರಿಗೆ ತೋರಿಸುವ ನಕ್ಷತ್ರ ಎಂದರೆ ವಿವಾಹಿತಳಾದ ವಧುವು ಎಂಟನೆಯವಳಾಗಿ ಅವರಂತೆ ಪತಿವ್ರತೆಯಾಗಲಿ ಎಂದು ಇದರ ಅರ್ಥ. ಪೂರ್ವಾಷಾಢಾ ಮತ್ತು ಉತ್ತರಾಷಾಢಾ ನಕ್ಷತ್ರದ ನಂತರ ಹಾಗೂ ಶ್ರವಣಾ ನಕ್ಷತ್ರಕ್ಕೂ ಮೊದಲು ಈ ಅಭಿಜಿತ್ ನಕ್ಷತ್ರವಿತ್ತು.
ಅಭಿಜಿತ್ ನಕ್ಷತ್ರ ಅತ್ಯಂತ ಬುದ್ಧಿವಂತೆಯಾದ ನಕ್ಷತ್ರ. ಅಭಿಜಿತ್ ಎನ್ನುವ ಸೋಮಯಾಗವೂ ಇದೆ. ಅವುಗಳೆಂದರೆ ಅಭಿಜಿತ್ ಮತ್ತು ವಿಶ್ವಜಿತ್. ಹರಿವಂಶದಲ್ಲಿ ಯಾದವ ರಾಜ ಪುನರ್ವಸುವಿನ ತಂದೆ ಎಂದು ಹೇಳಲಾಗಿದೆ. ದಿನದ ಎಂಟನೇ ಮುಹೂರ್ತವನ್ನು ಅಭಿಜಿತ್ ಎನ್ನಲಾಗುತ್ತದೆ. ಮಧ್ಯಾಹ್ನದ 24 ನಿಮಿಷ ಮೊದಲು ಹಾಗೂ ನಂತರದ 24 ನಿಮಿಷಗಳು ಅಭಿಜಿನ್ ಮುಹೂರ್ತ ಎಂದು ಕರೆಯಲಾಗುತ್ತದೆ.
ಅಪರಾಹ್ನೇ ತು ಸಂಪ್ರಾಪ್ತೇ ಅಭಿಜಿದ್ರೌಹಿಣೋದಯೇ |
ಯದತ್ರ ದೀಯತೇ ಜಂತೋ ತದಕ್ಷಯಮುದಾಹೃತಮ್|| ಎಂದು ಹರಿವಂಶ ಹೇಳುತ್ತದೆ. ಇಪ್ಪತ್ತೆಂಟಿದ್ದ ನಕ್ಷತ್ರದಲ್ಲಿ ಒಂದು ನಕ್ಷತ್ರದ ಸ್ಥಾನ ಪಲ್ಲಟವೋ ಅಥವಾ ಕಣ್ಮರೆಯೋ ಆಗಿದೆ. ಆದರೆ ನಕ್ಷತ್ರಗಳ ಸ್ಥಾನಪಲ್ಲಟ ಅಥವಾ ಕಣ್ಮರೆಯಿಂದ ಕಾಲ ವ್ಯತ್ಯಾಸವಾಗುತ್ತದೆ ಎನ್ನುವುದು ನಕ್ಷತ್ರಗಳಿಗೂ ಕಾಲಕ್ಕೂ ಸಂಬಂಧವನ್ನು ಸೂಚಿಸುತ್ತದೆ. ಅಂದರೆ ನಕ್ಷತ್ರಗಳಿಗೆ ಹೆಸರು ಬಂದದ್ದು ಯಜುರ್ವೇದದಲ್ಲಿಯೇ.
ಇನ್ನು ಅಭಿಜಿನ್ನಾಮ ನಕ್ಷತ್ರಮ್ ಉಪರಿಷ್ಟಾದಷಾಢಾನಾಮ್ ಅಧಸ್ತಾಚ್ಛ್ರೋಣಾಯೈ ದೇವಾಸುರಾಸ್ಸಂಯತ್ತಾ ಆಸನ್| ಎಂದು ತೈತ್ತಿರೀಯಬ್ರಾಹ್ಮಣದಲ್ಲಿದೆ.
ಇತ್ತೀಚಿನ ದಿನಗಳಲ್ಲಿ ವೇಗ(vega) ಎಂಬ ಉಜ್ವಲವಾಗಿ ಹೊಳೆಯುತ್ತಾ ಕಂಗೊಳಿಸುವ ಮಕರ ರಾಶಿಯಲ್ಲಿರುವ ನಕ್ಷತ್ರವನ್ನು ಅಭಿಜಿತ್ ಎಂದು ಹೇಳಲಾಗುತ್ತಿದೆ.
#ಧ್ರುವಾರುಂಧತೀ_ಅಭಿಜಿತ್
ಸದ್ಯೋಜಾತರು
November 24, 2021
ಉದ್ದಿನಬೇಳೆಯನ್ನು ದಾನ ಮಾಡಿದರೆ ಫಲ ಏನು?
November 21, 2021
ವೇದದಲ್ಲಿ ಗೋಮಾಂಸ ಸೇವನೆ ಇಲ್ಲ
ವೇದಗಳು – ಪ್ರಪಂಚದ ಮೊದಲನೆಯ ಜ್ಞಾನದ ಪುಸ್ತಕ. ನಮ್ಮ ಮೊದಲನೆ ಭಾಗವಾದ ವೇದಗಳಿಗೆ ಸಂಭಂಧಿಸಿದಂತ ತಪ್ಪು ಗ್ರಹಿಕೆಗಳ ವಿಮರ್ಶೆಗೆ ನಿಮಗೆ ಸ್ವಾಗತ.
ಹಿಂದುಗಳ ಪವಿತ್ರ ಗ್ರಂಥವಾದ ವೇದವು ಶತಕಗಳಿಂದ ಹಲವಾರು ರೀತಿಯಲ್ಲಿ ಹಲವಾರು ಜನರಿಂದ ನಿಂದನೆಗೆ ಗುರಿಯಾಗಿದೆ. ಇವರ ತಪ್ಪು ಗ್ರಹಿಕೆಯಿಂದ ಬಹಳಾ ಅಪವಿತ್ರ ವಿಷಯಗಳನ್ನು ಸೇರಿಸಿ ಜನರನ್ನು ನಂಬಿಸುತ್ತಿದ್ದಾರೆ. ಇವರ ನಿಂದನೆಗಳನ್ನು ಪೂರ್ಣವಾಗಿ ನಂಬಿದರೆ ಹಿಂದುಗಳ ತತ್ವಜ್ಞಾನ, ಸಂಸ್ಕೃತಿ, ಪದ್ಧತಿ, ಕೇವಲ ಬರ್ಬರತೆ, ಅಸಭ್ಯತೆ, ಕ್ರೌರ್ಯತೆ ಹಾಗು ನರಭಕ್ಷತೆಗೆ ಮೀಸಲೆಂದು ಅನಿಸುತ್ತದೆ.
ಹಿಂದುಗಳ ಮೂಲ ಬೇರಾದ ವೇದವು, ಪ್ರಪಂಚದ ಜ್ಞಾನದ ಮೊದಲನೆಯ ಮೂಲವಾಗಿದೆ. ಈ ವೇದಗಳು ಮನುಷ್ಯನ ಪರಮಾನಂದಕ್ಕೆ ಕೈಪಿಡಿಯಾಗಿದೆ. ಇದನ್ನು ಇಷ್ಟಪಡದ ಕೆಲವರು ವೇದಗಳ ಪಾವಿತ್ರ್ಯತೆಯನ್ನು ಹಾಳುಮಾಡುವ ಸಲುವಾಗಿ ಹುಚ್ಚುಹುಚ್ಚಾದ, ಅರ್ಥ ಗರ್ಭಿತವಲ್ಲದ ವಿಷಯಗಳಿಗೆ ವೇದಗಳೆ ಆಧಾರವೆಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ.
ಇವರ ಈ ಪ್ರಯತ್ನದಿಂದ ಬಡವರು ಹಾಗು ಅನಕ್ಷರಸ್ಥರು ಭಾರತದ ಮೂಲ ಆಧಾರವಾದ ವೇದವು ಹೆಂಗಸರ ಮೇಲೆ ದೌರ್ಜನ್ಯ, ಮಂಸ ಭಕ್ಷಣೆ, ಬಹು ಪತ್ನಿತ್ವ, ಜಾತೀಯತೆ ಹಾಗು ಇದೆಲಕ್ಕಿಂತ ಹೆಚ್ಚಾಗಿ ಗೋಮಾಂಸ ಭಕ್ಷಣೆಯನ್ನು ಪ್ರೊತ್ಸಾಹಿಸುತ್ತದೆ ಎಂದು ಅರ್ಥೈಸಿಕೊಳುತ್ತರೆ.
ಯಜ್ಞಗಳಂತಹ ಇತರೆ ಉತ್ಸವಗಳಲ್ಲಿ ಪ್ರಾಣಿಗಳನ್ನು ಬಲಿದಾನ ಮಾಡಲು ವೇದಗಳು ಪ್ರೋತ್ಸಾಹಿಸುವುದು ಎಂಬ ಆಪಾದನೆಗೆ ವೇದಗಳು ಗುರಿಯಾಗಿವೆ. ವಿದೇಶಿಯರಷ್ಟೆ ಅಲ್ಲ, ನಮ್ಮ ದೇಶದ ಎಷ್ಟೊ ಬುದ್ಧಿಜೀವಿಗಳು ಈ ಹಿಂದೆ ಉಲ್ಲೇಖಿಸಿದ ವಿದೇಶಿ ಅನ್ವೇಷಕರ ಪುಸ್ತಕಗಳನ್ನೇ ಆಧಾರವಾಗಿಟ್ಟುಕೊಂಡು ವೇದಗಳಲ್ಲಿ ಪಾಂಡಿತ್ಯ ಹೊಂದಿದವರಂತೆ ವರ್ತಿಸಿ ವೇದಗಳ ಮೇಲೆ ಹಲವಾರು ಆಪಾದನೆ ಹೊರಸಿದ್ದಾರೆ.
ಗೋಮಾಂಸ ಭಕ್ಷಣೆಯನ್ನು ವೇದವು ಓಪ್ಪುತ್ತದೆ ಎಂಬ ಘನಘೋರ ಸುಳ್ಳನ್ನು ಹೇಳಿ, ಗೋವಿನ ಮೇಲಿರುವಂತಹ ಗೌರವವನ್ನು ಹಾಳುಮಾಡುತಿದ್ದಾರೆ. ಎಲ್ಲಿಯವರಗೆ ವೇದಗಳ ಸಂಪೂರ್ಣ ಜ್ಞಾನ ಹೊಂದಿರುವುದಿಲ್ಲವೊ ಅಲ್ಲಿಯವರೆಗೆ ಸನಾತನ ಧರ್ಮಿಯ ಅನುಯಾಯಿಗಳಾದ ಹಿಂದುಗಳು ಈ ವಿದೇಶಿ ಬೇಟೆಗಾರರಿಗೆ ಸುಲಭ ತುತ್ತಾಗಬಹುದು.
ಸಂಪೂರ್ಣವಾಗಿ ವೇದಗಳನ್ನರಿಯದ ಲಕ್ಷಾಂತರ ಹಿಂದುಗಳು ವಿದೇಶಿಯರು ಮಂಡಿಸುವ ವಿತಂಡವಾದಗಳಿಗೆ, ಹುಚ್ಚು ತರ್ಕಗಳಿಗೆ ಹಾಗು ಸುಳ್ಳಿನ ಸರಮಾಲೆಗೆ ಸೋತು ಶರಣಾಗುತ್ತಿದ್ದಾರೆ.
ವೇದಗಳನ್ನು ಕಲ್ಮಶಗೊಳಿಸಲು ಕೇವಲ ವಿದೇಶಿಯರು ಹಾಗು ಬುದ್ದಿಜೀವಿಗಳು ಮಾತ್ರ ಹೊಣೆಯಲ್ಲ, ಇವರ ಜೊತೆಗೆ ಹಿಂದುಗಳಲ್ಲೆ ಕೆಲವು ಪಂಗಡಗಳು ಆರ್ಥಿಕ ಹಾಗು ಸಾಮಾಜಿಕ ಬಲಹೇನರಾಗಿರುವ ಹಲವು ಪಂಗಡಗಳನ್ನು ವೇದಗಳ ಕಾರಣ ಹೇಳಿ ಅನುಚಿತ ಉಪಯೊಗ ಪಡೆದುಕೊಂಡಿದ್ದರೆ. ವೇದಗಳನ್ನರಿತ್ತಿದ್ದ ಈ ಜನರು, ಅದರ ಜ್ಞಾನವನ್ನು ಇತರರಿಗೆ ಹಂಚದೆ ತಮ್ಮ ಸ್ವಪ್ರಯೊಜನಕ್ಕಾಗಿ ತಾವೆ ಶ್ರೇಷ್ಠರು ಎಂಬ ನಂಬಿಕೆಯನ್ನು ಇತರ ಪಂಗಡಗಳಿಗೆ ಹುಟ್ಟುಹಾಕಿದ್ದಾರೆ.
ವೇದಗಳ ಈ ಎಲ್ಲಾ ಆಪಾದನೆಗಳಿಗೆ ಮುಖ್ಯಕಾರಣವೆಂದರೆ, ಮಧ್ಯಕಾಲೀನ ಬರಹಗಾರರಾದ ಮಾಹಿಧರ್, ಉವಾತ್ ಹಾಗು ಸಾಯನ್ ರ ವ್ಯಾಖ್ಯಾನಗಳ ಟೇಕೆಗಳಿಂದ ಹಾಗು ವೇದಗಳು ಕೇವಲ ವಾಮಾಚಾರ, ಗೂಢಾಚಾರ, ಮಾಟಮಂತ್ರಗಳಿಗೆ ಸೀಮಿತ ಎಂದು ಹಬ್ಬಿಸಿರುವುದು ಇದಕ್ಕೆ ಕಾರಣವಾಗಿದೆ. ವೇದಗಳ ಪಾವಿತ್ರ್ಯತೆಯನ್ನು ಮತ್ತಷ್ಟು ಉಲ್ಬಣಗೊಳಿಸಲು, ಅರ್ಧಜ್ಞಾನ ಹೊಂದಿದ ವಿದೇಶಿ ಅನ್ವೇಶಕರು, ಮಾಹಿಧರ್, ಉವಾತ್ ಹಾಗು ಸಾಯನ್ ರ ವ್ಯಾಖ್ಯಾನಗಳ ಟೇಕೆಯನ್ನು ಭಾಷಾಂತರಿಸಿ ವೇದಗಳನ್ನೇ ಭಾಷಾಂತರ ಮಾಡಿದುದಾಗಿ ಹೇಳಿಕೊಂಡರು.
ಸಂಸ್ಕೃತದ ಬಗ್ಗೆ ಅರ್ಧಜ್ಞಾನ ಹೊಂದಿದಂತಹ ವಿದೇಶಿ ಭಾಷಾಂತರರು ವೇದಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಲು ಬಹು ಅವಶ್ಯಕವಾಗಿರುವಂತಹ ಭಾಷಾಧ್ವನಿ ರೂಪಕ(Phonetic), ನಿಘಂಟು(Vocabulary), ಛಂದಸ್ಸು(Prosody), ಜ್ಯೋತಿಷ್ಯ ಶಾಸ್ತ್ರ(Astronomy), ಮತ್ತು ಇತರ ವಿಷಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಓಮ್ಮೆ ಮೂಲ ವೇದಗಳನ್ನು ಓದಿದರೆ ಅವರ ಈ ತಪ್ಪುಗಳನ್ನು ಬಹಳ ಸುಲಭವಾಗಿ ಕಂಡುಹಿಡಿಯಬಹುದಾಗಿದೆ.
ನಮ್ಮ(ಅಗ್ನಿವೀರ್) ಪ್ರಯತ್ನದ ಹಿಂದಿರುವ ಉದ್ದೇಶವೇನೆಂದರೆ, ವೇದಗಳ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ, ಅದರ ಪಾವಿತ್ರ್ಯತೆಯನ್ನು ಕಾಪಡುವುದು ಹಾಗು ವೇದಗಳು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಲ್ಲದೆ ಪ್ರಪಂಚದ ಎಲ್ಲಾ ಮಾನವರಿಗು ಅನ್ವಯಸುತ್ತದೆ ಎಂದು ತಿಳಿಸುವಂತದ್ದಾಗಿದೆ.
ಭಾಗ – ೧ ಪ್ರಾಣಿ ಹಿಂಸೆ ಮಹಾ ಪಾಪ
ಯಜುರ್ವೇದ ೪೦.೭
ಯಾರು,ಎಲ್ಲಾ ಜೀವಿಗಳು ಒಂದೇ ಆತ್ಮನೆಂದು ತಿಳಿಯುತ್ತಾರೊ ಅವರು ದಡ್ಡತನದಿಂದಾಗಲಿ, ಯಾತನೆಯಿಂದಾಗಲಿ ಬಳಲುವುದಿಲ್ಲ ಏಕೆಂದರೆ ನಾವೆಲ್ಲರೂ ಒಂದೇ ಎಂಬ ಅನುಭವವನ್ನು ಹೊಂದಿರುತ್ತಾರೆ.
ಯಾವ ಮನುಷ್ಯರು ಅನಶ್ವರ ಹಾಗು ಪುನರ್ಜನ್ಮ ಸಿದ್ಧಾಂತಗಳನ್ನು ನಂಬುತ್ತರೊ, ಅವರು ಪ್ರಾಣಿಗಳನ್ನು ಯಜ್ಞಗಳಲ್ಲಿ ಕೊಲ್ಲಲು ಧೈರ್ಯವಾದರೊ ಹೇಗೆ ಮಾಡಿಯಾರು? ಯಾಕೆಂದರೆ ಆ ಪ್ರಾಣಿಗಳಲ್ಲಿ ಒಂದಾನೊಂದು ಸಮಯದಲ್ಲಿ ತಮಗೆ ಹತ್ತಿರವಾಗಿದ್ದ, ಪ್ರೀತಿ ಪಾತ್ರರಾಗಿದ್ದ ಆತ್ಮಗಳನ್ನು ನೋಡುತ್ತಾರೆ.
ಮನುಸ್ಮೃತಿ ೫.೫೧
ಪ್ರಾಣಿಗಳನ್ನು ಕೊಲ್ಲಲು ಅನುಮತಿ ಕೊಡುವವರು, ಬಲಿಕೊಡಲೆಂದೆ ಪ್ರಾಣಿಗಳನ್ನು ತರುವವರು, ಪ್ರಾಣಿಗಳನ್ನು ಕೊಲ್ಲುವವರು, ಮಾಂಸವನ್ನು ಮಾರುವವರು, ಮಾಂಸವನ್ನು ಕೊಂಡುಕೊಂಡವರು, ಮಾಂಸದಿಂದ ಅಡುಗೆ ಮಾಡುವವರು, ಮಾಂಸದ ಅಡುಗೆಯನ್ನು ಬಡಿಸುವವರು ಮತ್ತು ಮಾಂಸವನ್ನು ತಿನ್ನುವವರನ್ನು ಕೊಲೆಗೆಡುಕರೆಂದೆ ಪರಿಗಣಿಸಲಾಗುವುದು.
ಅಥರ್ವಣ ವೇದ ೬.೧೪೦.೨
ಓ ಹಲ್ಲುಗಳೆ, ನೀವು ಅನ್ನವನ್ನು ತಿನ್ನಿ, ಗೋಧಿಯನ್ನು ತಿನ್ನಿ ಹಾಗು ಎಳ್ಳನ್ನು ತಿನ್ನಿ. ಈ ಧವಸಧಾನ್ಯಗಳು ನಿಮ್ಮ ಸೇವನೆಗೆಂದೇ ಇರುವುದು. ತಂದೆ ಅಥವ ತಾಯಿಯಾಗಲು ಶಕ್ತವಿರುವವರನ್ನು ಎಂದಿಗು ಕೊಲ್ಲಬೇಡಿ.
ಅಥರ್ವಣ ವೇದ ೮.೬.೨೩
ಹಸಿ ಮಾಂಸವಾಗಲಿ ಅಥವ ಬೇಯಿಸಿದ ಮಾಂಸವಾಗಲಿ, ಮಾಂಸ ತಿನ್ನುವುದನ್ನು ನಾಶಪಡಿಸಬೇಕು. ಮಾಂಸವೆಂದರೆ ಗಂಡಾಗಲಿ, ಹೆಣ್ಣಾಗಲಿ, ಭ್ರೂಣವಾಗಲಿ ಅಥವ ಮೊಟ್ಟೆಯಾಗಲಿ ನಾಶಪಡಿಸುವುದನ್ನು ನಿಲ್ಲಿಸಬೇಕು.
ಅಥರ್ವಣ ವೇದ ೧೦.೧.೨೯
ಅಮಾಯಕರನ್ನು ಕೊಲ್ಲುವುದು ಮಹಾಪಾಪ. ಹಸು, ಕುದುರೆ ಅಥವ ಮನುಷ್ಯರನ್ನು ಎಂದಿಗು ಕೊಲ್ಲಬೇಡಿ.
ವೇದಗಳು, ಪ್ರಾಣಿಹಿಂಸೆ ಮಾಡುವುದು ನಿಷೇಧಿಸಲಾಗಿದೆ ಎಂದು ಇಷ್ಟು ಪರಿಪಕ್ವವಾಗಿ ಹೇಳಿದರೂ ಸಹ ಗೋವು ಮತ್ತು ಇತರ ಪ್ರಾಣಿಗಳನ್ನು ಕೊಲ್ಲಿ ಎಂದು ಹೇಳುವುದು ಎಷ್ಟು ನ್ಯಾಯಯುತವಾಗಿದೆ? ಇದು ನಂಬುವಂತಹ ವಿಷಯವಲ್ಲ.
ಯಜುರ್ವೇದ ೧.೧
“ಓ ಮಾನವನೆ! ಪ್ರಾಣಿಗಳನ್ನು ಕೊಲ್ಲುವುದಕ್ಕಾಗಿ ಅಲ್ಲ, ಪ್ರಾಣಿಗಳನ್ನು ರಕ್ಷಿಸು”
ಯಜುರ್ವೇದ ೬.೧೧
ಪ್ರಾಣಿಗಳನ್ನು ರಕ್ಷಿಸು
ಯಜುರ್ವೇದ ೧೪.೮
ದ್ವಿಪಾದ ಹಾಗು ಚತುಷ್ಪಾದ ಜೀವಿಗಳನ್ನು ರಕ್ಷಿಸು
ಕ್ರವಿದ – ಕ್ರವ್ಯ (ಕೊಂದ ನಂತರ ಬರುವ ಮಾಂಸ) + ಅದ (ತಿನ್ನುವವನು) = ಮಾಂಸ ತಿನ್ನುವವನು
ಪಿಶಾಚ – ಪಿಸಿತ (ಮಾಂಸ) + ಅಶ (ತಿನ್ನುವವನು) = ಮಾಂಸ ತಿನ್ನುವವನು
ಅಸುತೃಪ – ಅಸು (ಉಸಿರಾಡುವ ಜೀವಿ) + ತೃಪ (ತನ್ನನ್ನು ತಾನೆ ತೃಪ್ತಿಪಡಿಸಿ ಕೊಳ್ಳುವವನು) = ಇನ್ನೊಂದು ಜೀವಿಯನ್ನು ಆಹಾರಕ್ಕೆಂದು ಬಳಸುವವನು
ಗರ್ಭದ ಮತ್ತು ಅಂಡದ – ಗರ್ಭವನ್ನು ಅಥವ ಮೊಟ್ಟೆಯನ್ನು ತಿನ್ನುವವನು
ವೇದ ಲಿಪಿಗಳಲ್ಲಿ ಮಾಂಸ ತಿನ್ನುವವರನ್ನು ಯಾವಾಗಲು ನೀಚ ದೃಷ್ಟಿಯಿಂದ ನೋಡಲಾಗಿದೆ. ಮಾಂಸ ತಿನ್ನುವವರನ್ನು ರಾಕ್ಷಸ, ಪಿಷಾಚಿ, ಹಾಗು ಇತರೆ ಪ್ರೇತಗಳಿಗೆ ಸಮಾನಾರ್ಥಕವಾಗಿದೆ ಹಾಗು ಇವೆಲ್ಲರನ್ನು ನಾಗರೀಕ ಸಮಾಜದಿಂದ ಹೊರಗಿಡಿಸಲಾಗಿದೆ.
ಯಜುರ್ವೇದ ೧೧.೮೩
ಎಲ್ಲಾ ದ್ವಿಪಾದಿಗಳು ಹಾಗು ಚತುಷ್ಪಾದಿಗಳು ಶಕ್ತಿಗೊಂಡು ಬೆಳೆಯಲಿ
ಈ ಮೇಲಿನ ಮಂತ್ರವನ್ನು ಹಿಂದುಗಳು ಪ್ರತಿ ಊಟದ ಮೂದಲು ಪಟಿಸುತ್ತಾರೆ. ಯಾವ ತತ್ವಶಾಸ್ತ್ರವು ಪ್ರತಿ ಆತ್ಮದ ಸೌಖ್ಯಕ್ಕಾಗಿ ಪ್ರಾರ್ಥಿಸುತ್ತದೊ ಅಂತಹ ತತ್ವಶಾಸ್ತ್ರವು ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡಲು ಹೇಗೆ ಸಾಧ್ಯ?
ಭಾಗ – ೨ ಯಜ್ಞಗಳಲ್ಲಿ ಹಿಂಸೆ ಸಲ್ಲದು
ಜನಪ್ರಿಯವಾಗಿ ತಿಳಿದಿರುವಂತೆ, ಯಜ್ಞಗಳಲ್ಲಿ ಪ್ರಾಣಿ ಬಲಿಯಾಗುವುದಿಲ್ಲ. ವೇದಗಳಲ್ಲಿ ಯಜ್ಞಗಳೆಂದರೆ ಶ್ರೇಷ್ಟ ಕಾರ್ಯ ಅಥವ ಉನ್ನತವಾಗಿ ಶುದ್ಧಿಕರಿಸುವ ಕಾರ್ಯ.
ಯಾಸ್ಕ ಆಚಾರ್ಯರು ಹೇಳಿರುವಂತೆ ವೇದಗಳ ಭಾಷಾಶಾಸ್ತ್ರ ಅಥವ ನಿರುಕ್ತದ ಪ್ರಕಾರ ಯಜ್ಞದ ಇನ್ನೊಂದು ಅರ್ಥವೇ ಅಧ್ವಾರ. ಧ್ವಾರ ಎಂದರೆ ಹಿಂಸೆ ಅಥವ ದೌರ್ಜನ್ಯದ ಕೃತ್ಯ. ಅಧ್ವಾರ ಎಂದರೆ ಹಿಂಸೆ ಅಥವ ದೌರ್ಜನ್ಯವಿಲ್ಲದ ಕೆಲಸ. ವೇದಗಳಲ್ಲಿ ಅಧ್ವಾರ ಎಂಬ ಪದದ ಬಳಕೆ ಬಹಳಾ ಉಪಯೋಗಿಸಲಾಗಿದೆ.
ಮಹಾಭಾರತ ನಂತರದ ಕಾಲದಲ್ಲಿ ವೇದಗಳನ್ನು ಅಪವ್ಯಾಖ್ಯಾನಿಸಲಾಗಿದೆ, ಹಾಗು ಮೂಲ ಗ್ರಂಥಕ್ಕೆ ಹೊಸ ವಿಚಾರಗಳನ್ನು ಸೇರಿಸಿ ಅಪಮೌಲ್ಯಗೊಳಿಸಲಾಗಿದೆ. ಶಂಕರಾಚಾರ್ಯರು ವೇದದ ಮೌಲ್ಯಗಳನ್ನು ಮರುಸ್ಥಾಪಿಸಲು ಶ್ಲಾಘನೀಯ ಕೆಲಸಗಳನ್ನು ಮಾಡಿದ್ದಾರೆ.
ಆಧುನಿಕ ಭಾರತದ ಪಿತಾಮಹ ಎಂದೇ ಪ್ರಖ್ಯಾತರಾದಂತಹ ಸ್ವಾಮಿ ದಯಾನಂದ ಸರಸ್ವತಿಯವರು, ಅಧಿಕೃತ ಸಾಕ್ಷಾಧಾರಗಳನಿಟ್ಟುಕೊಂಡು ಸರಿಯಾದ ಭಾಷಾ ವಿಧಿ ವಿಧಾನಗಳೊಂದಿಗೆ ವೇದಗಳನ್ನು ವ್ಯಾಖ್ಯಾನಿಸಿದ್ದಾರೆ. ಇವರ ಸಾಹಿತ್ಯದಲ್ಲಿ ವೇದಗಳ ವಿವರಣೆ, ಸತ್ಯರ್ಥ್ ಪ್ರಕಾಶ್ ರವರು ಶಿಥಿಲವಾಗಿ ಭಾಷಾಂತರಿಸಿದ “ಸತ್ಯದ ಬೆಳಕು”(Light of truth), ವೇದಗಳ ಪರಿಚಯ ಮತ್ತು ಇತರೆ ಪಠ್ಯಗಳು ಜನಪ್ರಿಯಗೊಂಡು ವೇದ ತತ್ವಶಾಸ್ತ್ರದ ಅನ್ವಯ ಸಾಮಾಜಿಕ ಬದಲಾವಣೆ ತರುವಲ್ಲಿ ಹಾಗು ಅದಕ್ಕೆ ಅಂಟಿದ್ದಂತಹ ಕಳಂಕವನ್ನು ಗಮನಾರ್ಹವಾಗಿ ಹೋಗಲಾಡಿಸಲು ಸಾಧ್ಯವಾಯಿತು.
ಈ ಭಾಗದಲ್ಲಿ ನಮ್ಮ ಪವಿತ್ರ ವೇದಗಳು ಯಜ್ಞದ ಬಗ್ಗೆ ಏನು ಹೇಳುತ್ತದೆ ಎಂದು ತಿಳಿದುಕೊಳ್ಳೊಣ.
ಋಗ್ವೇದ: ೧.೧.೪
ಓ ಕಾಂತಿಯುತವಾದ ದೇವರೆ! ನೀನು ಆಜ್ಞಾಪಿಸುವಂತಹ, ಎಲ್ಲಾ ಕಡೆಗಳಿಂದಲೂ ಮಾಡುವಂತಹ ಅಹಿಂಸೆಯ ಈ ಯಜ್ಞವು ಎಲ್ಲಾರಿಗೂ ಬಹಳ ಉಪಯೋಗಕಾರಿಯಾಗಿದೆ ಮತ್ತು ಈ ಯಜ್ಞವು ಆಧ್ಯಾತ್ಮ ತ್ರೈರಾಶಿಯನ್ನು ಹಾಗು ಕೀರ್ತಿವಂತ ಆತ್ಮಗಳನ್ನು ಮುಟ್ಟುತ್ತದೆ.
ಋಗ್ವೇದವು, ಮೊದಲಿನಿಂದಲು ಕೊನೆಯವರೆಗೂ ಯಜ್ಞವನ್ನು ಅಧ್ವಾರ ಅಥವ ಅಹಿಂಸೆ ಎಂದು ವರ್ಣಿಸಲಾಗಿದೆ, ಅಷ್ಟೇ ಅಲ್ಲದೆ ಎಲ್ಲಾ ವೇದಗಳಲ್ಲೂ ಸಹ ಪ್ರಾಣಿ ಹಿಂಸೆಯನ್ನು ವಿರೋಧಿಸಲಾಗಿದೆ. ಹೀಗಿರುವಾಗ ಹಿಂಸೆಯಾನ್ನಾಗಲಿ ಅಥವ ಪ್ರಾಣಿ ಬಲಿಯನ್ನಾಗಲಿ ವೇದಗಳು ನೇರವಾಗಿ ಅಥವ ಪರೋಕ್ಷವಾಗಿ ಸಮ್ಮತಿಸಲು ಹೇಗೆ ತಾನೆ ಸಾಧ್ಯ? ಹಲವಾರು ದುಶ್ಟರ ಪ್ರಯತ್ನದಿಂದ ವೇದಗಳನ್ನು ತಿರುಚಲು ಪ್ರಯತ್ನಿಸಿ, ವೇದಗಳ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದರೆ.
ಅತಿ ದೊಡ್ಡ ಆಘಾತಕಾರಿ ಆಪಾದನೆ ಏನೆಂದರೆ, ಯಜ್ಞಗಳಲ್ಲಿ ಜಾನುವಾರು ಬಲಿಗಳನ್ನು ಮಾಡುತ್ತಾರೆ, ಅದರಲ್ಲಿಯೂ ಅಶ್ವಮೇಧ ಯಜ್ಞ, ಗೋಮೇಧ ಯಜ್ಞ ಹಾಗು ನರಮೇಧ ಯಜ್ಞಗಳಲ್ಲಿ ಹಿಂಸೆಯು ಸರ್ವೆ ಸಾಮಾನ್ಯ ಎಂದು ತಪ್ಪು ತಿಳಿದಿದ್ದಾರೆ ಆದರೆ ಮೇಧ ಎಂಬ ಪದವು ಯಾವುದೆ ಕಾರಣದಿಂದಲು ಬಲಿ ಎಂದು ಅನ್ವಯಿಸುವುದಿಲ್ಲ.
ಯಜುರ್ವೇದವು ಕುದುರೆಗಳ ಬಗ್ಗೆ ಏನು ಹೇಳುವುದೆಂದು ತಿಳಿಯುವುದು ಮುಖ್ಯ
ಯಜುರ್ವೇದ ೧೩.೪೮
ಈ ಗೊರಸುಳ್ಳ, ಹೇಷಾರವ ಮಾದುತ್ತಾ ಇತರೆ ಪ್ರಾಣಿಗಳಿಗಿಂತಲು ವೇಗವಾಗಿ ಚಲಿಸುವಂತ ಪ್ರಾಣಿಯನ್ನು ಸಂಹಾರ ಮಾಡಬೇಡಿ.
ಅಶ್ವಮೇಧ ಯಜ್ಞ ಎಂದರೆ ಕುದುರೆಯನ್ನು ಬಲಿಕೊಡುವುದಲ್ಲ. ಯಜುರ್ವೇದವು ಕುದುರೆ ಬಲಿಯನ್ನು ಮಾಡಲೇಬಾರದೆಂದು ಸ್ಪಷ್ಟವಾಗಿ ಹೇಳಿದೆ.
ಶಥಪಥದಲ್ಲಿ ಅಶ್ವ ಎಂದರೆ ದೇಶ ಅಥವ ಸಾಮ್ರಾಜ್ಯ ಎಂದರ್ಥ.
ಮೇಧ ಎಂಬ ಪದದ ಅರ್ಥ ಸಂಹಾರ ಎಂದಲ್ಲ. ಅದರ ಮೂಲಾರ್ಥದಲ್ಲಿ ಮೇಧ ಎಂದರೆ ವಿವೇಕದಿಂದ ಮಾಡಿದಂತಹ ಕೆಲಸ ಒಟ್ಟು ಗೂಡುಸುವಿಕೆ.
ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ ಸತ್ಯದ ಬೆಳಕಿನಲ್ಲಿ ಹೀಗೆ ಬರೆಯುತ್ತಾರೆ “ಅಶ್ವಮೇಧ ಯಜ್ಞವು ರಾಷ್ಟ್ರದ, ದೇಶದ ಅಥವ ಒಂದು ಸಾಮ್ರಾಜ್ಯದ ವೈಭವ, ಸುಖ – ನೆಮ್ಮದಿ ಹಾಗು ಸಮೃದ್ಧಿಗೆ ಅರ್ಪಿಸಲಾಗುತ್ತದೆ.
ಗೋಮೇಧ ಯಜ್ಞ ಎಂದರೆ ನಮ್ಮ ಆಹಾರವನ್ನು ಶುಚಿಯಾಗಿಡಲಿ ಅಥವ ನಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿಡಲು / ಸ್ಥಿತ ಪ್ರಜ್ಞರಾಗಲು ಅಥವ ಆಹಾರವನ್ನು ಶುಚಿಮಾಡಲು ಅಥವ ಸೂರ್ಯನ ಕಿರಣಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಅಥವ ಭೂಮಿಯನ್ನು ಮಲಿನತೆ ಇಂದ ಕಾಪಾಡಿಕೊಳ್ಳುವುದು. ಗೋ ಪದದ ಇನ್ನೊಂದು ಅರ್ಥ ಭೂಮಿ ಎಂದು ಹಾಗು ಭೂಮಿಯನ್ನು ಶುಚಿಯಾಗಿಡಲು ಮಾಡುವ ಯಜ್ಞವೇ ಗೋಮೇಧ ಯಜ್ಞ.
ನರಮೇಧ ಯಜ್ಞ ಎಂದರೆ, ಸತ್ತ ಮನುಷ್ಯನ ದೇಹವನ್ನು ವೇದಗಳ ವಿಧಿ – ವಿಧಾನದ ಪ್ರಕಾರ ಅಂತ್ಯಸಂಸ್ಕಾರ ಮಾಡುವುದು.
ಭಾಗ – ೩ ವೇದಗಳಲ್ಲಿ ಗೋಮಾಂಸ ಸೇವನೆ ಇಲ್ಲ.
ವೇದಗಳು ಪ್ರಾಣಿಸಂಹಾರವನ್ನು ವಿರೋಧಿಸುತ್ತದೆ, ಅದರಲ್ಲಿಯೊ ಗೋ ಸಂಹಾರವನ್ನು ತೀವ್ರವಾಗಿ ವಿರೋಧಿಸುವುದಲ್ಲದೆ, ಗೋಸಂಹಾರವನ್ನು ನಿಷೇಧಿಸಿದೆ.
ಯಜುರ್ವೇದ ೧೩.೪೯
ರಕ್ಷಣೆಗೆ ಅರ್ಹರಾಗಿರುವಂತಹ ಹಸು ಹಾಗು ಎತ್ತುಗಳನ್ನು ಕೊಲ್ಲಬೇಡಿ
ಋಗ್ವೇದ ೭.೫೬.೧೭
ಋಗ್ವೇದದಲ್ಲಂತೂ ಗೋ ಹತ್ಯೆಯನ್ನು ಮಾನವಹತ್ಯೆಗೆ ಸಮವೆಂದು ಘೋಷಿಸಲ್ಪಟ್ಟಿದೆ. ಇಂತಹ ಹೀನ ಕೃತ್ಯ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಹೇಳುತ್ತದೆ.
ಋಗ್ವೇದ ೧.೧೬೪.೪೦, ಅಥರ್ವಣ ವೇದ೭.೭೩.೧೧, ಅಥರ್ವಣ ವೇದ ೯.೧೦.೨೦
ಪಾವಿತ್ರ್ಯತೆ, ಜ್ಞಾನ ಹಾಗು ಐಶ್ವರ್ಯವನ್ನು ಏತೇಚ್ಛವಾಗಿ ಪಡೆಯಲು ಆಜ್ಞ – ಅಂದರೆ ಹಸುಗಳನ್ನು ಕೊಲ್ಲದೆ ಅವುಗಳಿಗೆ ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ನೀಡಿ ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ರಕ್ಷಿಸತಕ್ಕದ್ದು. ವೇದಗಳ ಶಬ್ದಕೋಶದಲ್ಲಿ ಅಥವ ನಿಘಂಟಿನಲ್ಲಿ ಗೋ ಅಥವ ಹಸುವಿಗೆ ಸಮಾನಾರ್ಥಕವಾಗಿ ಆಜ್ಞ, ಅಹಿ ಮತ್ತು ಅದಿತಿ ಎಂದಿ ಬಳಸಲಾಗಿದೆ.
ಯಾವುದನ್ನು ಕೊಲ್ಲಬಾರದೊ ಅದನ್ನು ಆಜ್ಞ ಎನ್ನುತ್ತಾರೆ
ಯಾವುದನ್ನು ಸಂಹಾರಮಾಡಬಾರದೊ ಅದನ್ನು ಅಹಿ ಎನ್ನುತ್ತಾರೆ
ಯಾವುದನ್ನು ತುಂಡುತುಂಡಾಗಿ ಕತ್ತರಿಸಬಾರದೊ ಅದನ್ನು ಅದಿತಿ ಎನುತ್ತಾರೆ
ಈ ಮೂರು ಪದಗಳು ಹಸುಗಳನ್ನು ಯಾವುದೇ ರೀತಿಯಲ್ಲಿ ಹಿಂಸಿಸುವಂತಿಲ್ಲ ಎಂದು ಅರ್ಥೈಸುತ್ತದೆ. ಹಸುಗಳಿಗೆ ಸಂಬಂಧಿಸಿದಂತೆ ವೇದಗಳಲ್ಲಿ ಈ ಪದಗಳು ಎತೇಚ್ಛವಾಗಿ ಬಳಸಲಾಗಿದೆ.
ಋಗ್ವೇದ ೧.೧೬೪.೨೭
ಗೋ – ಆಜ್ಞ – ಆರೋಗ್ಯ ಮತ್ತು ಐಶ್ವರ್ಯವನ್ನು ತರುವುದು
ಋಗ್ವೇದ ೫.೮೩.೮
ಆಜ್ಞ – ಗೋವುಗಳಿಗೆ ಶುದ್ಧ ನೀರನ್ನು ಪೂರೈಸಲು ಅತ್ಯುತ್ತಮ ಸೌಲಭ್ಯವನ್ನು ಕಲ್ಪಿಸಬೇಕು.
ಋಗ್ವೇದ ೧೦.೮೭.೧೬
ಯಾರು ಮಾನವರನ್ನು, ಕುದುರೆಗಳನ್ನು ಅಥವ ಇತರೆ ಪ್ರಾಣಿಗಳ ಮಾಂಸವನ್ನು ಆಹಾರಕ್ಕೆಂದು ಬಳಸುತ್ತಾರೊ ಹಾಗು ಹಾಲು ಕೊಡುವ ಆಜ್ಞ ಹಸುಗಳನ್ನು ನಾಶ ಪಡಿಸುತ್ತಾರೊ ಅವರನ್ನು ತೀವ್ರವಾಗಿ ಶಿಕ್ಷಿಸಬೇಕು.
ಋಗ್ವೇದ ೮.೧೦೧.೧೫
ಗೋವುಗಳನ್ನು ಕೊಲ್ಲಬೇಡಿ. ಗೋವು ಬಹಳಾ ಮುಗ್ಧ ಪ್ರಾಣಿ. ಅವುಗಳನ್ನು ತುಂಡುತುಂಡಾಗಿ ಕತ್ತರಿಸಬೇಡಿ.
ಯಜುರ್ವೇದ ೧೨.೭೩
ಆಜ್ಞ ಹಸುಗಳು ಹಾಗು ಎತ್ತುಗಳು ಸಮೃದ್ಧಿತರುತ್ತದೆ.
ಯಜುರ್ವೇದ ೩೦,೧೮
ಗೋವುಗಳನ್ನು ಕೊಲ್ಲುವವರನ್ನು ನಾಶ ಮಾಡು
ಅಥರ್ವಣ ವೇದ ೧.೧೬.೪
ಯಾರಾದರೊ ಹಸುಗಳನ್ನು, ಕುದುರೆಗಳನ್ನು ಅಥವ ಮನುಷ್ಯರನ್ನು ನಾಶಪಡಿಸಿದರೆ ಅವರನ್ನು ಸೀಸದ ಗುಂಡಿನಿಂದ ಕೊಲ್ಲಬೇಕು.
ಅಥರ್ವಣ ವೇದ ೩.೩೦.೧
ಆಜ್ಞ – ಕೊಲ್ಲಬಾರದಂತಹ ಗೋವು ಹೇಗೆ ತನ್ನ ಕರುವನ್ನು ಪ್ರೀತಿಸುತ್ತದೋ ಹಾಗೆಯೇ ಒಬ್ಬರನ್ನೊಬ್ಬರು ಪ್ರೀತಿಸಿ.
ಅಥರ್ವಣ ವೇದ ೧೧.೧.೩೪
ಹಸುವು ಎಲ್ಲಾ ದಯೆಯ ಉಗಮಸ್ಥಾನ.
ಋಗ್ವೇದದ, ಆರನೆಯ ಮಂಡಲದ, ೨೮ನೆಯ ಎಲ್ಲಾ ಸೂಕ್ತಗಳು ಅಥವ ಸ್ತೂತ್ರಗಳು ಗೋವಿನ ಕೀರ್ತಿ ಮಹಿಮೆಯನ್ನು ಹಾಡಿಹೊಗಳುತ್ತದೆ.
೧. ಹಸುಗಳನ್ನು ಆರೋಗ್ಯಕರ ರೀತಿಯಲ್ಲಿದಯೇ, ಅವುಗಳು ತೊಂದರೆಗಳಿಂದ ದೂರವಿದಯೇ, ಅವುಗಳು ಸುಭದ್ರವಾಗಿದಯೇ ಎಂದು ನೊಡಿಕೊಳ್ಳುತ್ತಿರಬೇಕು.
೨. ಹಸುಗಳ ಬಗ್ಗೆ ಕಾಳಜಿ ವಹಿಸುವವರನ್ನು ದೇವರು ಆಶೀರ್ವದಿಸುತ್ತದೆ.
೩. ಶತ್ರುಗಳು ಸಹ ಹಸುಗಳ ಮೇಲೆ ಅಸ್ತ್ರಗಳನ್ನು ಪ್ರಯೋಗಿಸಬಾರದು.
೪. ಯಾರೊಬ್ಬರು ಹಸುಗಳನ್ನು ಹತ್ಯೆಮಾಡಬಾರದು.
೫. ಹಸುವು ಸಮೃದ್ಧಿ ಹಾಗು ಶಕ್ತಿಯನ್ನು ತರುತ್ತದೆ.
೬.ಹಸುಗಳು ಖುಶಿಯಾಗಿ ಹಾಗು ಆರೋಗ್ಯಕರ ರೀತಿಯಲ್ಲಿ ಇಟ್ಟಲ್ಲಿ ಗಂಡಸರು ಹಾಗು ಹೆಂಗಸರು ರೋಗ ರುಜಿನಗಳಿಂದ ದೂರವಿದ್ದು ಅಭಿವೃದ್ಧಿ ಹೊಂದುತ್ತಾರೆ.
೭. ಹಸುವು ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ಸೇವಿಸಲು ಅವುಗಳನ್ನು ಯಾರು ಕೊಲ್ಲದೆ ನಮಗೆ ಸಮೃದ್ಧಿಯನ್ನು ನೀಡಲಿ
ವೇದಗಳಲ್ಲಿ ಕೇವಲ ಹಸುಗಳನಲ್ಲದೆ ಸಕಲ ಜೀವಜಂತುಗಳನ್ನು ಉತ್ತಮವಾಗಿ ಪ್ರಶಂಸಿಸಲಾಗಿದೆ ಹಾಗು ಪ್ರಾಣಿ ಹಿಂಸೆಯನ್ನು ಖಂಡಿಸಲಾಗಿದೆ ಎಂದು ಸಾಬೀತು ಪಡಿಸಲು ಯಾರಿಗಾದರೊ ಇದಕ್ಕಿಂತ ಹೆಚ್ಚಿನ ಸಾಕ್ಷಾಧಾರಗಳನ್ನು ನೀಡಬೇಕೆ?
ಯಾವುದೇ ಅಮಾನವೀಯ ಕೃತ್ಯಗಳಿಗೆ ವೇದಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ ಎಂಬುದನ್ನು ಈ ಎಲ್ಲಾ ಸಾಕ್ಷಾಧಾರಗಳು ಧೃಢಪಡಿಸುತ್ತದೆ. ಅದರಲ್ಲೂ ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆ ಬಗ್ಗೆ ವೇದಗಳ ಪೂರ್ಣ ವಿರ್ಓಧವಿದೆ. ಆದ್ದರಿಂದ ವಿದ್ಯಾವಂತ ಓದುಗರೆ, ವೇದಗಳಲ್ಲಿ ಪ್ರಾಣಿ ಹಿಂಸೆ ಇದಯೇ? ಅಥವ ಇಲ್ಲವೇ? ಎಂಬುದನ್ನು ನೀವೇ ನಿರ್ಧರಿಸಿ.
೧೪ನೇ ಎಪ್ರಿಲ್ ೨೦೧೦ – ಹೆಚ್ಚೋಲೆ
ಈ ಲೇಖನ ಪ್ರಕಟವಾದ ನಂತರ, ವೇದಗಳ ಪಾವಿತ್ರ್ಯತೆಯನ್ನು ಹಾಗು ನಮ್ಮ ಪುರಾತನ ಸಂಸ್ಕೃತಿಯನ್ನು ಸಹಿಸದ ಕೆಲವರು ನಾನಾ ಕಡೆಗಳಿಂದ ತೀವ್ರವಾದ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಈ ನಮ್ಮ ಲೇಖನವು ತಪ್ಪೆಂದು ತೋರಿಸಲು ಹೆಚ್ಚಿನ ಆಧಾರಗಳನ್ನು ನೀಡಿ ನಮಗೆ ಹಲವಾರು ಅಂಚೆಗಳು ಬಂದಿವೆ. ಇದರಲ್ಲಿ ಮುಖ್ಯವಾಗಿ ಋಗ್ವೇದದ ೨ ಮಂತ್ರಗಳು, ಮನುಸ್ಮೃತಿಯ ಕೆಲವು ಶ್ಲೋಕಗಳು ಹಾಗು ಇತರೆ ಮೂಲಗಳು.
ನಾವು ನಿಮ್ಮ ಸಂಶಯಗಳನ್ನು ಬಗೆಹರಿಸಲು ಈ ಕೆಳಗಂಡಂತೆ ಹೆಚ್ಚಿನೆ ವಿವರಣೆ ನೀಡುತ್ತಿದ್ದೇವೆ.
೧. ಈ ಲೇಖನವು ಮನುಸ್ಮೃತಿಯ ಆಧಾರವನ್ನು ಉಲ್ಲೇಖಿಸಿದೆ. ಅದರಂತೆ ಯಾರಾದರು ಕೊಲ್ಲಲು ಅನುಮತಿ ಕೊಟ್ಟರೂ ಅವರನ್ನು ಕೊಲೆಗೆಡುಕರೆಂದೆ ಪರಿಗಣಿಸಲಾಗುವುದು. ಆದ್ದರಿಂದ ಈ ಹಿಂದೆಯೇ ಹೇಳಿದಂತೆ ಎಷ್ಟೊ ಶ್ಲೋಕಗಳು ಹಾಗು ವಿಷಯಗಳನ್ನು ಹೊಸದಾಗಿ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಈ ನಿಮ್ಮ ಸಂಶಯವು ಕಲಬೆರಕೆ ಮನುಸ್ಮೃತಿಯನ್ನೋ ಅಥವ ತಪ್ಪು ವ್ಯಾಖ್ಯಾನ ಮಾಡಿದಂತಹ ಕೃತಿಯಿಂದಲೋ ಬಂದಂತಾಗಿದೆ. ಮೊಟ್ಟಮೊದಲಾಗಿ ಮನುಸ್ಮೃತಿಯಲ್ಲಿ ಪ್ರಾಣಿಹಿಂಸೆಯನ್ನು ತೀವ್ರವಾಗಿ ವಿರೋಧಿಸಲಾಗಿದೆ.
೨.ಇಲ್ಲಿ ಕೆಲವರು ಗೋಮಾಂಸ ಸೇವನೆಯು ವೇದಗಳಲ್ಲಿ ಅಥವ ಸನಾತನ ಪಠ್ಯಗಳಲ್ಲಿ ಉದಾಹರಣೆಗಳನ್ನು ತೋರಿಸಲೇಬೇಕೆಂಬ ಹುಚ್ಚು ಹಠವಾದಿಗಳು ಮಾನ್ಸ ವನ್ನು ಮಾಂಸ ಎಂದು ಅರ್ಥೈಸಿಕೊಂಡಿದ್ದಾರೆ. ನೈಜತೆಯಲ್ಲಿ ಮಾನ್ಸ ಎಂಬ ಪದವು ಮೆತ್ತಗಿರುವ ತಿರುಳು ಎಂದರ್ಥ. ಈ ಮೆತ್ತಗಿರುವ ತಿರುಳು ಹಣ್ಣಿನದಾಗಿರಬಹುದು, ತರಕಾರಿಯದಾಗಿರಬಹುದು ಅಥವ ಮಾಂಸದಾದರೊ ಆಗಿರಬಹುದು. ವೇದಗಳಲ್ಲಿ ಪ್ರಾಣಿ ಹಿಂಸೆಯನ್ನು ಅಷ್ಟು ತೀವ್ರವಾಗಿ ವಿರೋಧಿಸಿರುವುದರಿಂದ, ಈ ಮಾನ್ಸ ಎಂಬ ಪದಾದ ಅರ್ಥ ಖಂಡಿತ ಮಾಂಸವಾಗಿರಲು ಸಾಧ್ಯವೇ ಇಲ್ಲ.
೩. ಇನ್ನು ಕೆಲವರು ಸತ್ಯಕ್ಕೆ ದೂರವಿರುವಂತಹ, ಪ್ರಮಾಣವಲ್ಲದ ಪಠ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅದೇ ಉತ್ತಮ ಸಾಕ್ಷಿಗಳೆಂದು ಬಣ್ಣಿಸಿದ್ದಾರೆ. ಇವರು ಮಾಡುವಂತಹ ಕೆಲಸ ಬಹಳಾ ಸುಲಭ. ಯಾವುದಾದರೋ ಸಂಸ್ಕೃತದಲ್ಲಿ ಬರೆದಂತಹ ಪಠ್ಯಗಳನ್ನೊ, ವಾಕ್ಯಗಳನ್ನೊ ಧರ್ಮವೆಂದೇ ತಿಳಿದು ಅವರಿಗೆ ಬೇಕಾದ ರೀತಿಯಲ್ಲಿ ಭಾಷಾಂತರಿಸಿ ನಮ್ಮ ಈ ಸನಾತನ ಧರ್ಮವೇ ತಪ್ಪೆಂದು ಧೃಡಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ನಮ್ಮನ್ನು ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ತಿರುಚಿದ ಸಾಕ್ಷಾಧಾರಗಳನ್ನು ತೋರಿಸಿ ಮೂರ್ಖರನ್ನಾಗಿ ಮಾಡುತಿದ್ದಾರೆ.
೪. ಇವರು ಹೇಳುವಂತಹಾ ೨ ಋಗ್ವೇದದ ಮಂತ್ರಗಳನ್ನು ವಿಶ್ಲೇಶಿಸೋಣ;
ಪ್ರತಿಪಾದನೆ : ಋಗ್ವೇದ ೧೦.೮೫.೧೩
ಮಗಳ ಮದುವೆಯ ಸಮಾರಂಭದಲ್ಲಿ ಎತ್ತುಗಳನ್ನು ಹಾಗು ಹಸುಗಳನ್ನು ಬಲಿಕೊಡುತ್ತಾರೆ.
ಸತ್ಯಾಂಶ: ಋಗ್ವೇದದ ಈ ಮಂತ್ರದಲ್ಲಿ ” ಸೊರ್ಯನಕಿರಣವು ಚಳಿಗಾಲದಲ್ಲಿ ಬಲಹೀನಗೊಂಡು, ವಸಂತ ಋತುವಿನಲ್ಲಿ ಮತ್ತೆ ಬಲಶಾಲಿಯಾಗುತ್ತದೆ” ಎಂದು.
ಹಸುವನ್ನು ಸಹಾ ಗೋ ಎಂದು ಕರೆಯಲಾಗುವುದು. ಆದ್ದರಿಂದ ಸೂರ್ಯನ ಕಿರಣಗಳಿಗೆ ಬದಲಾಗಿ ಗೋವು ಎಂದೇ ಮಂತ್ರದಲ್ಲಿ ಭಾಷಾಂತರಿಸಿದ್ದಾರೆ. ಈ ಮಂತ್ರದಲ್ಲಿ ಬಲಹೀನ ಎಂಬುದಕ್ಕೆ ಸಂಸ್ಕೃತದಲ್ಲಿ ಹನ್ಯತೆ ಎಂಬ ಪದ ಉಪಯೋಗಿಸಲಾಗಿದೆ. ಇದರ ಇನ್ನೊಂದರ್ಥ ಕೊಲ್ಲುವುದು ಎಂದು. ಕೆಲವರು ಬೇಕೆಂದಲೆ ಈ ಮಂತ್ರವನ್ನು ಸಂಪೂರ್ಣವಾಗಿ ಹೇಳದೆ, ಅವರಿಗೆ ಬೇಕೆಂದ ಹಾಗೆ ಅರ್ಥೈಸಿಕೊಳ್ಳುತ್ತಾರೆ. ಇಂತಹ ಅಜ್ಞಾನಿ ಮೋಸಗಾರರಿಗೆ ಕೇಳುವುದಿಷ್ಟೇ, ಚಳಿಗಾಲದಲ್ಲಿ ಕೊಂದಂತಹ ಹಸುವು ಪುನಃ ವಸಂತ ಋತುವಿನಲ್ಲಿ ಬಲಶಾಲಿಯಾಗಲು ಹೇಗೆ ತಾನೆ ಸಾಧ್ಯ?
೫. ಪ್ರತಿಪಾದನೆ : ಋಗ್ವೇದ ೬.೧೭.೧
ಇಂದ್ರನು ಹಸು, ಕುರಿ, ಕುದುರೆ ಹಾಗು ಎಮ್ಮೆಗಳ ಮಾಂಸವನ್ನು ತಿನ್ನುತ್ತಿದ್ದ.
ಸತ್ಯಾಂಶ : ಋಗ್ವೇದದ ಈ ಮಂತ್ರವು “ಹೇಗೆ ಮರದ ಸೌದೆಯು ಯಜ್ಞದ ಬೆಂಕಿಯನ್ನು ಹೆಚ್ಚಿಸುತ್ತದೊ ಹಾಗೆಯೇ ಉತ್ತಮ ವಿಧ್ವಾಂಸರು ಪ್ರಪಂಚವನ್ನು ಪ್ರಾಕಾಶಿಸುತ್ತಾರೆ” ಎಂದು ಹೇಳುತ್ತದೆ.
ಈ ಮಂತ್ರದಲ್ಲಿ ಅದು ಹೇಗೆ ಇಂದ್ರ, ಹಸು, ಕುರಿ, ಕುದುರೆ ಹಾಗು ಎಮ್ಮೆಗಳು ಬಂದವೊ ಇವರ ದಡ್ಡತಲೆಗಳಿಗೆ ಮಾತ್ರ ತಿಳಿದಿರುವಂತದ್ದು.
ಕೊನೆಯದಾಗಿ ನಾನು ಎಲ್ಲಾರಿಗೂ ಸವಾಲು ಹಾಕುತ್ತೇನೆ, ವೇದಗಳ ಯಾವುದಾದರೋ ಮಂತ್ರಗಳಲ್ಲಿ ಗೋಮಾಂಸ ಸೇವನೆಯನ್ನು ಪರೋಕ್ಷವಾಗಾದರೋ ಸಮ್ಮತಿಸಿದ್ದು ಅದು ಧೃಡಪಟ್ಟಲ್ಲಿ ಅವರು ಹೇಳಿದಂತಹ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ, ಇಲ್ಲವಾದಲ್ಲಿ ಅವರು ವೇದಗಳ ನಿಜಸಾರವನ್ನು ಬೆಂಬಲಿಸಲು ಒಪ್ಪಿಕೊಂಡು ವೇದಗಳ ಅನುಯಾಯಿಯಾಗಬೇಕು.
BY AGNIVEER
-December 23, 2011
November 20, 2021
ಸ್ತ್ರೀ ಅಂದರೆ ಬರೀ ಅವಶ್ಯಕತೆ ಅಲ್ಲ.
November 18, 2021
33 ಕೋಟಿ ದೇವತೆಗಳು
November 16, 2021
ಮುಹೂರ್ತ
November 12, 2021
ನಾವಾಡುವ ಭಾಷೆಯಲ್ಲಿ ಮೃದುತ್ವ ತುಂಬಿರಬೇಕು
November 5, 2021
ಗೋವು ಮತ್ತು ಗೋವಧೆ
November 2, 2021
ಹಾಲಿನಿಂದ ಬೆಳಕಾಗುವ ಪರಿ..!
ಕತ್ತರಿ ಮತ್ತು ಸೂಜಿ
ಸತ್ಯಕಾಮನ ಸತ್ಯಸಂದತೆ ಗುರುವಾಗಿದ್ದು
ದರ್ಗಾ_ಹಜ್ರತ್
ಮಹಾಲಕ್ಷ್ಮಿ ಅಷ್ಟೋತ್ತರ ಶತನಾಮವಳಿಃ
ಓಂ .. ಶ್ರೀಂ ಹ್ರೀಂ ಕ್ಲೀಂ ಮಹಾಲಕ್ಷ್ಮ್ಯೈ ನಮಃ