"ಉದ್ದಿನಬೇಳೆಗೆ ಅಧಿಪತಿ ದೇವಿ "ಸಿದ್ಧಲಕ್ಷ್ಮೀ" ದೇವಿ..
ಪುರುಷ ದೇವತೆಗಳಲ್ಲಿ ಛಾಯಾಗ್ರಹವಾದ ರಾಹು..
೧. ಪ್ರತೀ ತಿಂಗಳು ಪ್ರತೀ ವರ್ಷ ಮಹಾಲಯ ಅಮಾವಾಸ್ಯೆ, ಸಂಕ್ರಮಣಗಳಲ್ಲಿ, ಸೂರ್ಯ-ಚಂದ್ರ ಗ್ರಹಣ ಕಾಲದಲ್ಲಿ, ಕ್ಷಣವತೀ
ಪ್ರಯೋಗದಲ್ಲಿ, ಮರಣ ಹೊಂದಿದವರಿಗೆ
ಮೊದಲ ವರ್ಷ ೧೬ ಶ್ರಾಧ್ಧವನ್ನಾದರೂ ಮಾಡದೇ ಇರುವವರು..
ಸುಮಂಗಲಿಯರಿಗೆ ಶ್ರಾಧ್ದದಲ್ಲಿ ಮುತ್ತೈದೆಯರಿಗೆ ಅರಿಸಿನ, ಕುಂಕುಮ ಕೊಡದಿರುವವರು,
ಜಾತಕದಲ್ಲಿ "ಪಿತೃಶಾಪ" ಇರುವವರು, ಶ್ರಾದ್ಧದಲ್ಲಿ ನಂಬಿಕೆ ಇಲ್ಲದವರು, ತುಂಬಾ ಗಂಡು ಮಕ್ಕಳಿದ್ದರೂ ಶ್ರಾದ್ಧ ಮಾಡದೇ ಇರುವವರು..
ಇವೇ ಮುಂತಾದ ಹಲವು ದೋಷಗಳು, ಮನುಷ್ಯನನ್ನು ನರಕದ ಜೀವನ ಅನುಭವಿಸುವ ಹಾಗೆ ಮಾಡುತ್ತವೆ..
ರೋಗಗಳ ರೂಪದಲ್ಲಿ, ಅಪಮೃತ್ಯುವಿನ ರೂಪದಲ್ಲಿ, ಶತೃಗಳ ರೂಪದಲ್ಲಿ, ಋಣದ ರೂಪದಲ್ಲಿ, ಮನುಷ್ಯನನ್ನು ಕಾಡಿಸುತ್ತವೆ..
ನೆಮ್ಮದಿ ಇಲ್ಲದೆ ನರಕ ಯಾತನೆ ಅನುಭವಿಸುವಿರಿ..
ಇಂತಹವರಿಗೆ ಯಾವುದೇ ಶಾಂತಿ ಮಾಡಿಸಿದರೂ ಹಿಡಿಯುವುದಿಲ್ಲ..
ಈ ಸಮಸ್ಯೆ ಇರುವವರು "ಉದ್ದಿನಬೇಳೆ" ಯಿಂದ ಮಾಡಿದ ತಿನ್ನುವ ಪದಾರ್ಥಗಳನ್ನು ದಾನ ಮಾಡುವುದರಿಂದ ಸ್ವಲ್ಪಮಟ್ಟಿಗೆ ದೋಷ ಕಡಿಮೆಯಾಗುವುದು ..
(ಇದಕ್ಕೇ ಪೂರ್ಣ ಪರಿಹಾರ ತುಂಬಾ ತಿಳಿದವರು ಹೇಳೋದಿಲ್ಲ, ಕಾರಣ "ಶ್ರಾದ್ಧ ಮಾಡುವಾಗ ನಿಯಮ ಪಾಲಿಸಲು, ಶ್ರದ್ಧೆ ಇಂದ ಮಾಡಲೀ ಎಂದು)
ಸಂಕಲ್ಪ ಸಮೇತ ಮಾಡಿ..
೨. ಯಾರ ಮನೆಯಲ್ಲಿ ಮಾಂತ್ರಿಕ ಭಾಧೆಗಳು ಬಹಳವಾಗಿ ನಡೆಯುತ್ತಿರುತ್ತದೆಯೋ, ಅಂಥವರು ಉದ್ದಿನಬೇಳೆಯಿಂದ ಮಾಡಿದ ತಿನ್ನುವ ಪದಾರ್ಥಗಳನ್ನು, "ನರಸಿಂಹ" ದೇವರು, ಪಂಚಮುಖೀ ಆಂಜನೇಯ ಸ್ವಾಮಿ, ಭದ್ರಕಾಳಿ, .. ಇತ್ಯಾದಿ ದೇವರನ್ನು ಪೂಜಿಸಿ ನೈವೇದ್ಯ ಮಾಡಿದರೆ ಸಮಸ್ತ ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..
೩. ಮನೆಯಲ್ಲಿ ಮಕ್ಕಳು ಹೇಳಿದ ಮಾತು ಕೇಳುವುದಿಲ್ಲವೋ, ಅಂಥವರು ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಉದ್ದಿನಬೇಳೆಯಿಂದ ಮಾಡಿದ ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡಿ ದಾನ ಮಾಡಿದರೆ, ಮಕ್ಕಳು ಹೇಳಿದ ಮಾತು ಕೇಳುವಂತವರಾಗಿ,ಹಠ ಕೋಪ ಕಮ್ಮಿಯಾಗುತ್ತದೆ..
೪. ವಿವಾಹ ಕಾಲದಲ್ಲಿ ಗಲಾಟೆ ನಡೆಯುತ್ತದೆಂದು ಮುಂಚೆಯೇ ಗೊತ್ತಿದ್ದರೆ,
ಅಂತಹವರು ವರಪೂಜೆಯ ದಿವಸವಾಗಲೀ, ಅಥವಾ ದೇವತಾಶಾಸ್ತ್ರದ ದಿವಸವಾಗಲೀ, ಮನೆದೇವರ ಪೂಜೆ ಮಾಡಿ,
ಉದ್ದಿನಬೇಳೆಯಿಂದ ಮಾಡಿದ ಸಿಹಿ ಪದಾರ್ಥ ನೈವೇದ್ಯ ಮಾಡಿ, ಚಿಕ್ಕ ವಯಸ್ಸಿನ ಬ್ರಹ್ಮಚಾರಿ ಬ್ರಾಹ್ಮಣರಿಗೆ ತಾಂಬೂಲದೊಡನೆ ದಾನ ಮಾಡಿದರೆ, ಶುಭ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ..
ಶುಭಕಾರ್ಯದ ನಂತರ ಎಲ್ಲರೂ ಚೆನ್ನಾಗಿರುತ್ತಾರೆ..
೫. ಸಂಸಾರದಲ್ಲಿ ಸತಿ-ಪತಿ ಕಲಹ ಇರುವವರು ಪ್ರತೀ ಮಂಗಳವಾರ ಹಾಗೂ ಶನಿವಾರದ ದಿವಸ "ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ದುರ್ಗಾ ದೇವಿಗೆ(ಯಾವುದಾದರೂ ಒಂದು ದೇವರಿಗೆ), ಉದ್ದಿನವಡೆಯ ಹಾರವನ್ನು ಹಾಕಿಸಿ,
ಪೂಜಿಸಿ, ಪ್ರಸಾದ ತಿನ್ನುತ್ತಾ ಬಂದರೆ, ಸತಿಪತಿ ಕಲಹ, ಜಗಳಗಳು, ಅನುಮಾನ, ವಿರಸ, ದೂರವಾಗಿ, ಸಮಸ್ಯೆ ನಿವಾರಣೆಯಾಗುತ್ತದೆ ..
ಸುಖ ಶಾಂತಿಯ ನೆಮ್ಮದಿ ಜೀವನ ನಡೆಸುತ್ತಾರೆ.
ಪಿತೃಪಕ್ಷದ ದಾನ ತುಂಬಾ ವಿಶೇಷ,
ಸರಿಯಾಗಿ ತಿಳಿದು ಮಾಡಿ..
ಶುಭವಾಗಲಿ
ಸರ್ವಜನ ಸುಖಿನೋಭವಂತು
No comments:
Post a Comment
If you have any doubts. please let me know...