May 27, 2020
ದಾಸರೋ ನಾವೆಲ್ಲ ಶುನಕನಂದದಿ ಜಗದ । ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ॥ ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹವು । ವಾಸನಾಕ್ಷಯ ಮೋಕ್ಷ – ಮಂಕುತಿಮ್ಮ
ರುದ್ರನ ಆರಾಧನೆಯಲ್ಲಿ ಮಾ ನೋ ವಧೀಃ ಪಿತರಂ ಮೋ ತ ಮಾತರಂ’ ನನಗೆ ಜನ್ಮಕೊಟ್ಟ ತಂದೆ ತಾಯಿಯರನ್ನೂ ಸಹ ನೀನು ಹಿಂಸಿಸಬೇಡ.
May 24, 2020
ಶ್ರೀ ಮಹಾ ಮೃತ್ಯುಂಜಯ ಮಂತ್ರ
May 17, 2020
ನೀರಿನ ಕುರಿತಾಗಿ ಅಧ್ಯಯನ ಮಾಡಿದ ಋಷಿ ಅಂಬರೀಷ
ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ

ಹೌದು. ಋಗ್ವೇದದ ಹತ್ತನೇ ಮಂಡಲದ ೯ನೇ ಸೂಕ್ತ ನೀರನ್ನು ಕುರಿತಾಗಿಯೇ ಧ್ಯಾನಿಸಲ್ಪಟ್ಟಿದೆ. ಈ ಸೂಕ್ತದ ದೃಷ್ಟಾರ. ಈತನನ್ನು ಅಂಬರೀಷ ಎಂತಲೂ, ಸಿಂಧುದ್ವೀಪ ಅಥವಾ ತ್ರಿಶಿರಾ ಎನ್ನುವುದು ಈ ಋಷಿಗಿರುವ ಹೆಸರುಗಳು. ಇಲ್ಲಿ ನೀರನ್ನು ಆಪಃ ಎಂದು ಕರೆಯಲಾಗಿದ್ದು ಅದು ಉದಕಾಭಿಮಾನಿ ದೇವತೆಗಳನ್ನು ಕುರಿತಾದದ್ದು. ಇದನ್ನು ಸಾಮಾನ್ಯವಾಗಿ ಉಪನಯನವಾಗಿ ದಿನವೂ ಸಂಧ್ಯಾವಂದನೆಯನ್ನು ಮಾಡುವ ಅಭ್ಯಾಸ ಇಟ್ಟುಕೊಂಡವರು ಒಮ್ಮೆಯಾದರೂ ಹೇಳುತ್ತಾರೆ.
ಒಂದು ನದೀ ಅಥವಾ ಸರೋವರದಲ್ಲಿ ತನ್ನ ಸೊಂಟದ ತನಕ ನೀರು ಬರುವಷ್ಟು ನಿಂತು ಹನ್ನೆರಡು ವರ್ಷ ಈ ಸೂಕ್ತ ಜಪಮಾಡಿದರೆ ಬ್ರಹ್ಮಹತ್ಯಾದೋಷ ನಿವಾರಣೆಯಾಗುತ್ತದೆ ಎನ್ನುವುದನ್ನು ಋಗ್ವಿಧಾನ ಮತ್ತು ಬೃಹದ್ದೇವತಾದಲ್ಲಿ ವಿಧಿ ಪೂರ್ವಕವಾಗಿ ಹೇಳಲಾಗಿದೆ. ಇಂದಿಗೂ ನೀರನ್ನು ಮುಟ್ಟಿ ಗಂಗೇಚ ಯಮುನೇ ಚೈವ ಎನ್ನುವ ಶ್ಲೋಕವನ್ನು ಹೇಳುವ ರೂಢಿ ಇದ್ದೇ ಇದೆ.
ಪ್ರಾತರುತ್ಥಾಯ ಸತತಂ ಕುರ್ಯಾನ್ಮಾರ್ಜನಮಾತ್ಮನಃ |
ರಾತ್ರೌ ಕೃತಸ್ಯ ಪಾಪಸ್ಯ ಅವಿಜ್ಞಾತಸ್ಯ ನಿಷ್ಕೃತಿಃ ||
ರಾತ್ರಿ ಕಾಲದಲ್ಲಿ ತಿಳಿಯದೇ ಮಾಡಿದ ಯಾವುದೇ ಪಾಪಕೃತ್ಯವಿದ್ದರೂ ಸಹ ಅದು ಪರಿಹಾರವಾಗಲಿ ಎಂದು ಸ್ನಾನದ ನಂತರ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಪರಿಹಾರವಾಗುತ್ತದೆ ಎನ್ನಲಾಗಿದೆ.
ಅದೇ ರೀತಿ ಸಾಯಂಕಲ ಮಾಡಿದರೆ ಹಗಲಿನಲ್ಲಿ ಗೊತ್ತಗದೇ ಘಟಿಸಿದ ಪಾಪಕಾರ್ಯದ ಪರಿಮರ್ಜನೆ ಎನ್ನುವಲ್ಲಿ ಶುದ್ಧವಾದ ನೀರು ನಮಗೆ ಸೀಕಿದಾಗ ದೇಹದಲ್ಲಿ ಇರತಕ್ಕ ರೋಗಾಣುಗಳು ಮತ್ತು ಸೂಕ್ಷ್ಮ ಜೀವಿಗಳು ದೇಹದಿಂದ ದೂರಕ್ಕೆ ಹೋಗುತ್ತವೆ ಎನ್ನುವ ಸೂಕ್ಷಾರ್ಥ ಇದೆ.
ಆಪೋ ಹಿ ಷ್ಠಾ ಮಯೋಭುವಸ್ತಾ ನ ವೂರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ || ಎನ್ನುವ ಈ ಋಕ್ಕಿನಲ್ಲಿ ಆಪಃ ಎನ್ನುವುದು ಉದಕ ದೇವತೆಗಳಿಗೆ. ಆಪಃ ಎನ್ನುವುದು ಸುತ್ತಲೂ ಹರಡಿಕೊಳ್ಳುವುದು ಎನ್ನುವ ಅರ್ಥ. ನೀರು ನಿಲ್ಲುವ ಸ್ವಭಾವದ್ದಲ್ಲ ಸುತ್ತಲೂ ಪಸರಿಸುವ ಸ್ವಭಾವದ್ದು ಈ ನೀರು ಎಂತಹ ರೋಗಗಳಿದ್ದರೂ ಗುಣ ಪಡಿಸಬಲ್ಲದು ಎನ್ನಲಾಗಿದೆ. ಕೆಲವೊಂದು ರೋಗಗಳು ಇದರಿಂದಲೇ ಬಂದರೂ ಅವೆಲ್ಲವೂ ಸಹ ಇದರಿಂದಲೇ ಗುಣಮುಖವಾಗುತ್ತವೆ. ಆಪಃ ಎನ್ನುವುದು ಸುಖ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಉದಕಾಭಿಮಾನಿ ದೇವತೆಗಳೇ ನೀವು ಎಲ್ಲರಿಗೂ ಆರೋಗ್ಯದೊಂದಿಗೆ ಸುಖ ಮತ್ತು ಸಮೃದ್ಧಿಯನ್ನು ಒದಗಿಸಿ ಅವರ ಅನ್ನಾದಿ ಆಹಾರಗಳ ಸಮೃದ್ಧಿಕೊಟ್ಟು ಸುಖ ಶಾಂತಿ ನೆಲೆಸುವಂತೆ ಮಾಡಿರಿ ಎಂದು ಈ ಋಕ್ಕಿನಲ್ಲಿ ಹೇಳಲಾಗಿದೆ.
ಯೋ ವಃ ಶಿವತಮೋ ರಸಸ್ತಸ್ಯ ಭಾಜಯತೇಹ ನಃ |
ಉಶತೀರಿವ ಮಾತರಃ || ಹಾಲುಗಲ್ಲದ ಹಸುಳೆಯ ಅಥವಾ ತನ್ನ ಮಗುವಿನ ಪುಷ್ಟಿಯನ್ನು ಅಪೇಕ್ಷಿಸುವ ತಾಯಿಯಂತೆ ಎನ್ನುವ ಮಾತು "ಉಶತೀರಿವ ಮಾತರಃ" ಎಂದು. ಎಂತಹ ಉದಾತ್ತ ಮಾತು. ತಾಯಿ ತನ್ನ ಸರ್ವಸ್ವವನ್ನೂ ತನ್ನ ಮಗುವಿಗೆ ಧಾರೆ ಎರೆಯುತ್ತಾಳೆ. ತಾಯಿಗೆ ಮಗುವಿನ ಶ್ರೇಯೋಭಿವೃದ್ಧಿ ಬಹಳ ಮುಖ್ಯವಾಗುತ್ತದೆ. ಅದನ್ನೇ ಇಲ್ಲಿ ಹೇಳಲಾಗಿದೆ. ಉದಕಾಭಿಮಾನಿ ಅಪ್ ದೇವತೆಗಳೇ ನಿಮ್ಮ ನೀರು ಅತ್ಯಂತ ರುಚಿಕರ ಅಂತಹ ನೀರನ್ನು ನಮಗೆ ದಯಪಾಲಿಸಿ. ತಾಯಿ ತನ್ನ ಮಗುವಿಗೆ ಸ್ತನ್ಯಪಾನ ಮಾಡಿಸಿ ಮಗುವಿಗೆ ಪುಷ್ಟಿಯನ್ನು ಕೊಡುವಂತೆ ನಮಗೂ ಆಯುರಾರೋಗ್ಯವನ್ನು ಕೊಡಿ ಎನ್ನಲಾಗಿದೆ.
ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|
ಆಪೋ ಜನಯಥಾ ಚ ನಃ || ಉದಕಾಭಿಮಾನಿ ಅಪ್ ದೇವತೆಗಳೆ ನಾವು ಮಾಡಿದ ಪಾಪದ ಪರಿಹಾರವನ್ನು ನೀವು ಮಾಡುತ್ತೀರಿ ಆದುದರಿಂದ ಆದಷ್ಟು ವೇಗವಗಿ ನಾವು ನಿಮ್ಮ ಸಮೀಪಕ್ಕೆ ಬಂದು ನಿಮ್ಮನ್ನು ಪ್ರಾರ್ಥಿಸಿ ನಿಮ್ಮನ್ನು ಸಂಪ್ರೀತಿಗೊಳಿಸುತ್ತೇವೆ. ನಮಗೆ ನೀವು ಪುತ್ರ ಪೌತ್ರಾದಿ ಸಂಪತ್ತುಗಳನ್ನು ಕೊಡಿ ಎನ್ನಲಾಗಿದೆ.
ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||
ಹೌದು ಈ ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವಂತೆ. ನೀರು ದೇಹದಲ್ಲಿ ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗದ ತೀವ್ರತೆ ಅಧಿಕವಾಗುತ್ತದೆಯಂತೆ. ಜೀರ್ಣ ಮತ್ತು ಅಜೀರ್ಣಕ್ಕೂ ಇದೇ ನೀರು ಅತ್ಯಂತ ಅವಶ್ಯವಂತೆ. ಪಚನಕ್ರಿಯೆ ನಡೆಯಲೂ ನೀರು ಬೇಕೇ ಬೇಕು ಅನ್ನುತ್ತಾ ಶಂ ನೋ ಎನ್ನುತ್ತದೆ. ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೋಗಕಾರಕ ಕ್ರಿಮಿಗಳಿಂದ ನಮಗೆ ಹಾನಿ ಉಂಟಾಗದಿರಲಿ ಎನ್ನುವ ಈ ಋಕ್ಕಿನ ಆಶಯ ಬಹಳ ಮಹತ್ವದ್ದು. ನಾವು ಕುಡಿಯುವ ನೀರು ಕುಡಿಯಲು ಯೋಗ್ಯವಾಗಿರುವಂತೆ ದೊರಕಿಸಿಕೊಡಿ ಎನ್ನುವ ಮಾತು ನಿಜಕ್ಕೂ ಸೂರ್ಯ ಚಂದ್ರರಿರುವ ತನಕವೂ ಸತ್ಯದ್ದು.
May 14, 2020
ಬೆನಕ ಬೆನಕ ಏಕದಂತ ಪಚ್ಚೆಕಲ್ಲು ಪಾಣಿಪೀಠ ಮುತ್ತಿನುಂಡೆ ಹೊನ್ನ ಘಂಟೆ ಒಪ್ಪುವ ವಿಘ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು....ಏಕೆ?
ಬೆನಕ ಬೆನಕ
ಏಕದಂತ
ಪಚ್ಚೆಕಲ್ಲು ಪಾಣಿಪೀಠ
ಮುತ್ತಿನುಂಡೆ ಹೊನ್ನ ಘಂಟೆ
ಒಪ್ಪುವ ವಿಘ್ನೇಶ್ವರನಿಗೆ ಇಪ್ಪತ್ತೊಂದು ನಮಸ್ಕಾರಗಳು.....
May 12, 2020
ಅಯೋಗ್ಯಃ ಪುರುಷೋ ನಾಸ್ತಿ.... ಯಾವ ಕೆಲಸಕ್ಕೂ ಯೋಗ್ಯನಲ್ಲದ ಮನುಷ್ಯನು ಇಲ್ಲವೇ ಇಲ್ಲ..
ಅಮಂತ್ರಂ ಅಕ್ಷರಮ್ ನಾಸ್ತಿ ನಾಸ್ತಿ ಮೂಲ ಮನೌಷಧಮ್|
ಅಯೋಗ್ಯ: ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭ: ||
ಎಷ್ಟು ಸರಳವಾಗಿದೆ ಅರ್ಥ! ಮಂತ್ರವಾಗದ ಅಕ್ಷರವಿಲ್ಲ. ಔಷಧಿಯಾಗದ ಗಿಡಮೂಲಿಕೆಗಳಿಲ್ಲ. ಯಾವ ವ್ಯಕ್ತಿಯೂ ಅಯೋಗ್ಯನಲ್ಲ. ಆದರೆ ಯೋಜನೆ ಮಾಡುವವರು ವಿರಳ. ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು ಮನುಷ್ಯನ ಜನ್ಮವಾಗುವಾಗ ಭಗವಂತನು ಎಲ್ಲರಲ್ಲಿ ಚೈತನ್ಯದ ಮೂಟಯನ್ನೇ ಇಟ್ಟು ಕಳಿಸಿದ್ದಾನೆ,
ಕೆಲವರು ಮೂಟೆಯ ಬಾಯ್ಬಿಚ್ಚಿ ತೆರೆದು ಚೈತನ್ಯವನ್ನು ಜಾಗೃತಗೊಳಿಸಿಕೊಂಡು ಪ್ರಭಾವಶಾಲಿಗಳಾಗುತ್ತಾರೆ. ಕೆಲವರು ಮೂಟೆಯ ಬಾಯನ್ನೇ ತೆರೆಯುವುದಿಲ್ಲ. ಒಳಗಿರುವ ಚೈತನ್ಯದ ಜಾಗೃತಿ ಮಾಡಬೇಕಾದವರು ಯಾರು?
ಮನೆಯಲ್ಲಿ ಅಪ್ಪ-ಅಮ್ಮ,
ಶಾಲೆಯಲ್ಲಿ ಟೀಚರ್. ಆದರೆ ಮಗುವಿನ ಅಂತ:ಶಕ್ತಿಯನ್ನು ಜಾಗೃತ ಗೊಳಿಸುವ ಕೆಲಸ ಆಗುತ್ತಿದೆಯೇ?
ನಮ್ಮ ಕಣ್ಮುಂದಿರುವ ದಾರಿ ಯಾವುದು?
ನಮ್ಮ ಮಕ್ಕಳು ಸಾಫ್ಟ್ ವೇರ್ ಇಂಜಿನಿಯರಾಗಬಾರದೆಂದಲ್ಲ,
ವೈದ್ಯರುಗಳಾಗಬಾರದೆಂದಲ್ಲ. ಆದರೆ ಮೊದಲು ಮಾನವೀಯತೆಯ ಶಿಕ್ಷಣ , ನೈತಿಕ ಮೌಲ್ಯಗಳ ಶಿಕ್ಷಣ,
ಪ್ರೀತಿ,ಪ್ರೇಮ, ವಾತ್ಸಲ್ಯಗಳಂತಹ ಗುಣಗಳನ್ನು ಅರಳಿಸುವ ಸಂಸ್ಕಾರ ಕೊಡಬೇಡವೇ?
ವೇದ ಮಂತ್ರವು ಹೇಳುವಂತೆ ನೀನು ಪುಣ್ಯವಂತ,
ನೀನು ಭಾಗ್ಯಶಾಲಿ,
ನೀನು ಶಕ್ತಿವಂತ,
ನೀನು ಸಮರ್ಥ. . . . .ಎಂಬ ಮಾತುಗಳನ್ನು ಮಕ್ಕಳ ಮುಂದೆ ಹೇಳುತ್ತಿರಿ,
ಅವರು ಸಮರ್ಥರೇ ಆಗುತ್ತಾರೆ. ಆದರೆ ಹೊರಗಿನ ವೇಷಭೂಷಣ,
ಹೇರಿಕೆಯ ಶಿಸ್ತು,
ಈ ನೆಲಕ್ಕೆ ಒಗ್ಗದ ನಮ್ಮದಲ್ಲದ ಸಂಸ್ಕೃತಿಯ ಅಂಧಾನುಕರಣೆ,
ಇವೆಲ್ಲವೂ ಮಕ್ಕಳ ಆತ್ಮವಿಕಾಸ ಮಾಡಲಾರದು.
ಮಕ್ಕಳು ಕೇವಲ ಬುದ್ಧಿವಂತರಾದರೆ ಸಾಕೇ?
ಹೌದೆನ್ನುತ್ತಾರೆ ಇಂದಿನ ಹಲವಾರು ಪೋಷಕರು. ಆದರೆ ಮಕ್ಕಳ ಬುದ್ಧಿವಂತಿಕೆಯ ಜೊತೆಗೇ ಮನಸ್ಸನ್ನುಅರಳಿಸುವ,
ಸದ್ಗುಣಗಳನ್ನು ಬೆಳೆಸುವ ಶಿಕ್ಷಣವು ಇಂದು ಎಲ್ಲಾ ದಿನಗಳಿಗಿಂತಲೂ ಹೆಚ್ಚು ಅನಿವಾರ್ಯವಾಗಿದೆ. ಕಾರಣ ಮೌಲ್ಯಾಧಾರಿತ ಶಿಕ್ಷಣದ ಕೊರತೆಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯದ ಕೊರತೆ ಎದ್ದು ಕಾಣುತ್ತಿದೆ. ಆತ್ಮ ವಿಶ್ವಾಸದ ಕೊರತೆಯಿಂದ ಹಲವು ಮಕ್ಕಳು ಆತ್ಮಹತ್ಯೆಗೆ ಒಳಗಾಗಿರುವ ಉಧಾಹರಣೆಗಳನ್ನು ಕಾಣುತ್ತೇವೆ. ನಿಮ್ಮ ಮಕ್ಕಳಿಗೆ ವೇದಮಂತ್ರದಲ್ಲಿ ತಿಳಿಸಿರುವಂತೆ ನೀನು ಸಮರ್ಥನಾಗಿದ್ದೀಯೇ,
ನೀನು ಒಳ್ಳೆಯವ,
ನೀನು ಶಕ್ತಿಶಾಲಿ,ನೀನು
ಮೇಧಾವಂತ,
ನೀನು ಗುಣವಂತ ಎಂದು ಇಂದಿನಿಂದಲೇ ಹೇಳುತ್ತಾ ಬನ್ನಿ,
ಅವರು ಹಾಗೆಯೇ ಆಗುತ್ತಾರೆ. ಒಳ್ಳೆಯ ಮಾತಿಗೇಕೇ ದಾರಿದ್ರ್ಯ?
ಅಷ್ಟೇ ಅಲ್ಲ "ಅ" ಕಾರದಿಂದ "ಕ್ಷ" ಕಾರದ ತನಕ ಇರುವ ೫೧ ವರ್ಣಗಳಿಗೂ ಭಗವಂತನ
೫೧ ರೂಪಗಳ ಅನುಸಂಧಾನ ಇದೆ... 'ಅ' ದಿಂದ 'ಕ್ಷ'
ತನಕದ ಎಲ್ಲ ೫೧ ವರ್ಣಗಳಲ್ಲೂ ಭಗವಂತ
೫೧ ರೂಪಗಳಿಂದ ಇದ್ದು ಅದರಲ್ಲಿ ಅವನು ರಮಿಸುವವನಾದ್ದರಿಂದಲೇ ಅದನ್ನು "ಅಕ್ಷರ" ಅಂತ ಕರೆದದ್ದು... (Alphabets
from ಅ to ಕ್ಷ is called as "ಅಕ್ಷರ)...
ಬಹಳ ಹಿಂದಿನ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ನಾವು ಉಚ್ಛರಿಸುವ ಯಾವ ಅಕ್ಷರದಲ್ಲಿ ದೋಷ ಇದೆ ಎನ್ನುವುದರಿಂದಲೇ ಆಯುರ್ವೇದ ಪಂಡಿತರು ನಮ್ಮ ದೇಹದಲ್ಲಿರುವ ರೋಗದ ಲಕ್ಷಣಗಳನ್ನು ಕಂಡುಹಿಡಿಯುತ್ತಿದ್ದರು...
"ನಾಸ್ತಿ
ಮೂಲಂ ಅನೌಷದಂ" - ಔಷಧೀಯ ಗುಣವಿಲ್ಲದ ಯಾವುದೇ ಗಿಡಮೂಲಿಕೆಯಿಲ್ಲ... ಅರ್ಥಾತ್ ನಾವು ಯಾವುದಕ್ಕೂ ಉಪಯೋಗಕ್ಕೆ ಬಾರದ "ಕಳೆ" ಅಂತ ಕಿತ್ತು ಎಸೆಯುವ ಸಣ್ಣ ಗಿಡದಲ್ಲೂ ಒಂದು ವಿಶಿಷ್ಟ ಗುಣ ಇರುತ್ತದೆ... ಉದಾ: ನಾಚಿಗೆ ಮುಳ್ಳು ಅಥವಾ ಮುಟ್ಟಿದರೆ ಮುನಿ ಗಿಡ... ಇದು ಯಾತಕ್ಕೂ ಉಪಯೋಗವಿಲ್ಲದ ಕಳೆ ಅಂತ ಕಿತ್ತು ಎಸೆಯುವ ಗಿಡ. ಆದರೆ ಅದರ ಎಲೆಯ ರಸದಲ್ಲಿ ನಮಗೆ ಬರುವ "ಪೈಲ್ಸ್ ಕಾಯಿಲೆಗೆ" (ಮೂಲವ್ಯಾಧಿಗೆ) ಭಗವಂತ ಮದ್ದನ್ನು ಇಟ್ಟಿದ್ದಾನೆ...
"ಅಯೋಗ್ಯಃ
ಪುರುಷೋ ನಾಸ್ತಿ"
ಯಾವ ಕೆಲಸಕ್ಕೂ ಯೋಗ್ಯನಲ್ಲದ ಮನುಷ್ಯನು ಇಲ್ಲವೇ ಇಲ್ಲ... ಯಾರನ್ನು ನಾವು ಶತದಡ್ಡ ಯಾತಕ್ಕೂ ಬಾರದ ಮನುಷ್ಯಪ್ರಾಣಿ ಅಂತ ತಿಳಿದಿರುತ್ತೇವೋ ಅಂಥವನಲ್ಲೂ ಕೂಡ ಯಾರಲ್ಲೂ ಇಲ್ಲದ ಒಂದು ವಿಶಿಷ್ಟಗುಣವಿರಬಹುದು..
ಉದಾ: ಭಾಗವತದಲ್ಲಿ ಬರುವ ಮೂರು ಜನ್ಮಗಳ ವರ್ಣನೆಯಂತೆ ಒಂದು ಜನ್ಮದಲ್ಲಿ ಚಕ್ರವರ್ತಿಯಾಗಿ ದೇಶವನ್ನಾಳಿದ ಭರತಚಕ್ರವರ್ತಿ, ಮುಂದೆ ಜಿಂಕೆಯಾದ, ಮೂರನೇ ಜನ್ಮದಲ್ಲಿ ಜಡಭರತನಾದ ಅತ್ಯಂತ ಪೆದ್ದನಂತೆ ನಡೆದುಕೊಂಡ... ಆಗ ಆ ಕಾಲದ
ಜನ ಪ್ರಾಣಿಗೂ ಕಡೆಯಾಗಿ ಅವನನ್ನು ನಡೆಸಿಕೊಂಡರು... ಮುಂದೆ ಜಡಭರತ ಆ ದೇಶದ ರಾಜನ
ಪಾಲಕಿ ಹೊತ್ತು ರಾಜನಿಗೇ ಗುರುವಾಗಿ ಉಪದೇಶಮಾಡಿದ.. ಹೀಗೆ ಜ್ಞಾನದ ಮೊಟ್ಟೆ ಎಲ್ಲಿ ಚಿಗುರೊಡೆದಿರುತ್ತೋ ಬಲ್ಲವರಾರು ... ಅದರಿಂದ ನಮಸ್ಕಾರದ ಒಂದು ವೇದ ಮಂತ್ರ "ನಮೋ ಅರ್ಭಕೇಭ್ಯಃ "ಅನ್ನುತ್ತೆ - ಅಂದರೆ ತಾಯಿಯ ಗರ್ಭದಲ್ಲಿರು ಶಿಶುವಿಗೂ ನಮಸ್ಕಾರ ಅಂತ...
"ಯೋಜಕಸ್ತತ್ರ
ದುರ್ಲಭಃ" -
ಹೀಗೆ ಭಗವಂತನ ಸೃಷ್ಟಿಯಲ್ಲಿ ನಿಷ್ಪ್ರಯೋಜಕವಾದ ವಸ್ತು ಅಥವಾ
ಜೀವಿ ಎಂಬುದೇ ಇಲ್ಲ.... ಆದರೆ ಅವುಗಳ ಉಪಯೋಗವನ್ನು , ಯೋಗ್ಯತೆಯನ್ನು ಗುರುತಿಸಿ, ಅರಿತು ಉಪಯೋಗ ಪಡೆದುಕೊಳ್ಳಬಲ್ಲ ಮನುಜರು ಮಾತ್ರ ಬಹಳ ವಿರಳ...
ಮುಂದಾಳುತ್ವ ಗುಣ (leading from
front)
ನಾಯಕನಾದವನು ತಾನು ಮುಂದೆ ನಿಂತು ,ಸೋಲು ಗೆಲುವುಗಳ ಜವಾಬ್ದಾರಿಯನ್ನು ಹೊತ್ತು,ತನ್ನ ಜೊತೆಯಿರುವವರನ್ನು ಮುನ್ನಡೆಸಬೇಕು. ಯಶಸ್ಸನ್ನು ಪಡೆದಾಗ ಅದರ ಶ್ರೇಯಸ್ಸನ್ನು ಪಡೆದು,ಯಶ ಕಾಣದಾಗ ಜವಾಬ್ದಾರಿಯಿಂದ
ನುಣಿಚಿಕೊಂಡು,ಅಪಕೀರ್ತಿಯ ಜವಾಬ್ದಾರಿಯನ್ನು ತನ್ನವರ ಮೇಲೆ ಹಾಕುವುದು ನಿಜವಾದ ನಾಯಕನ ಲಕ್ಷಣವಲ್ಲ. ಆಚಾರ್ಯರು ತಾವು ಮುಂದೆ ನಿಂತು ನಾಯಕತ್ವವನ್ನು ವಹಿಸಿ ತೋರಿಸಿದ್ದಾರೆ. ಶ್ರೀ ಮಧ್ವವಿಜಯದ ೧೦ನೇ ಸರ್ಗದಲ್ಲಿ ಆಚಾರ್ಯರ ಉತ್ತರಭಾರತದ ಸಂಚಾರವನ್ನು ವರ್ಣಿಸುತ್ತಾರೆ. ಆಚಾರ್ಯರು ಸಂಚರಿಸುತ್ತಾ ಶಿಷ್ಯರೊಂದಿಗೆ ಕೂಡಿ ಗಂಗಾನದಿಯ ದಡಕ್ಕೆ ಬಂದು ಸೇರುತ್ತಾರೆ. ಅಲ್ಲಿ ಶತ್ರುಗಳ ಆಕ್ರಮಣದ ಭಯದಿಂದ ತುರುಷ್ಕರಾಜನು ನೌಕೆಗಳ ಸಂಚಾರವನ್ನು ನಿಲ್ಲಿಸಿದ್ದನು. ಅಲ್ಲಿರುವ ಜನರೆಲ್ಲರೂ ಭಯಂಕರ ಪ್ರವಾಹ,ಶತ್ರುರಾಜನ ಸೈನ್ಯದ ಭಯವಿರುವುದರಿಂದ ನದಿಯು ದಾಟಲು ಯೋಗ್ಯವಲ್ಲ, ಎಂದು ತಡೆದರು.ಬೇರೆಯವರಿಗೆ ಇದೋಂದು Risk Factor ಆಗಿತ್ತು. ಆದರೆ ಆಚಾರ್ಯರು “ನಾಯಕನಾದವನು ಗಮ್ಯ ತಲುಪಲು ಅತ್ಮವಿಶ್ವಾಸದಿಂದ ರಿಸ್ಕ್ ತೆಗೆದುಕೊಳ್ಳಬೇಕೆಂದು” ತಾವು ಆಚರಿಸಿ ತೋರಿಸುತ್ತಾರೆ. ಹಾಗಂತ ಆಚಾರ್ಯರು ಮೊದಲು ತಮ್ಮ ಶಿಷ್ಯರನ್ನು ನೀರಿಗೆ ಬಿಡಲಿಲ್ಲ. ತಾವು ಮುಂದೆ ನಿಂತರು,ಶಿಷ್ಯರಿಗೆ ಧೈರ್ಯ ತುಂಬಿ ತಮ್ಮನ್ನು ಅನುಸರಿಸಲು ಹೇಳಿದರು. ತಾವು ಮುಂದೆ ಈಜುತ್ತಾ, ಎಲ್ಲರನ್ನೂ ದಡ ಸೇರಿಸಿದರು. ನಾಯಕನು
ಹೀಗಿರಬೇಕೆಂದು ಜಗತ್ತಿಗೆ ತೋರಿಸಿದರು.
ಭಯಮಿಶ್ರಿತಪ್ರೀತಿ
“ಭೀಷಾಸ್ಮಾತ್
ವಾತಃ ಪವತೆ ಭೀಷೋದೇತಿ ಸೂರ್ಯ:” ಎಂಬುವ ತೈತ್ತಿರೀಯ ಮಂತ್ರಕ್ಕೆ ವ್ಯಾಖ್ಯಾನ ಮಾಡುತ್ತಾ ಆಚಾರ್ಯರು ಹೀಗೆ ಹೇಳುತ್ತಾರೆ.”ತಸ್ಮಾತ್ ವಾಯ್ವಾದಯೋ ದೇವಾಃ ವಿದ್ವಾಂಸೋಪಿ ವಿಶೇಷತಃ| ಭೀತಾಃ ಸ್ವಕರ್ಮ ಕುರ್ವಂತಿ ವಿಷ್ಣೋಃ ಪ್ರೀತ್ಯರ್ಥಮಂಜಸಾ||”. ವಾಯು ,ಸೂರ್ಯ ಮೊದಲಾದ ದೇವತೆಗಳು ಪರಮಾತ್ಮನ ಭಯದಿಂದ, ಅವನ ಪ್ರೀತಿಗಾಗಿ ಚೆನ್ನಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ವಾಯು ಮೊದಲಾದ ದೇವತೆಗಳಿಗೆ ಪರಮಾತ್ಮನ ವಿಷಯದಲ್ಲಿ ಪ್ರೀತಿಯೂ ಇದೆ,ಭಯವೂ ಇದೆ. ನಾಯಕನಲ್ಲಿ ಅವನ ಅನುಯಾಯಿಗಳಿಗೆ ಇವೆರಡೂ ಇರಬೇಕೆಂದು ಸೂಚಿಸುತ್ತಾರೆ. ಕೇವಲ ಭಯವಿದ್ದರೆ ಅವನ ಎದುರು ಮಾತ್ರ ಕೆಲಸ ಮಾಡುತ್ತಾರೆ.ಕೇವಲ ಪ್ರೀತಿಯಿದ್ದರೆ ಉದಾಸೀನ ಮಾಡಿ,ಚೆನ್ನಾಗಿ ಕೆಲಸ ಮಾಡುವುದಿಲ್ಲ. ಎರಡೂ ಇದ್ದರೆ ನಿರಂತರವಾಗಿ ,ಚೆನ್ನಾಗಿ ಕೆಲಸ ಮಾಡುತ್ತಾರೆ. ಹಾಗಾದರೆ ನಾಯಕನಾದವನು ಅನುಯಾಯಿಗಳಿಂದ ಭಯಮಿಶ್ರಿತಪ್ರೀತಿಯನ್ನು ಹೇಗೆ ಸಂಪಾದಿಸಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಅದಕ್ಕೆ ಆಚಾರ್ಯರು ಕೊಡುವ ಉತ್ತರ “ಧಾರ್ಯತೇ ಯೇನ ವಿಶ್ವಂ ಸದಾ ಅಜಾದಿಕಂ”.ಎಂದು ಪರಮಾತ್ಮ ನಿರಂತರವಾಗಿ ಈ ವಿಶ್ವದ ಸೃಷ್ಟಿ,
ಸ್ಥಿತಿ, ಲಯ ಮುಂತಾದ ಕಾರ್ಯಗಳಲ್ಲಿ
ತೊಡಗಿಕೊಂಡಿರುತ್ತಾನೆ.ಅವನು ವಾಯು ಮೊದಲಾದ ದೇವತೆಗಳಿಗಿಂತ ಅತಿ ಹೆಚ್ಚು ಕೆಲಸ ಮಾಡುತ್ತಾನೆ. ಅಷ್ಟೇ ಅಲ್ಲ “ವಾರ್ಯತೇ ಅಶೇಷ ದುಃಖಂ ನಿಜಧ್ಯಾಯಿನಾಂ”,ತನ್ನನ್ನು ನಂಬಿ ಕೆಲಸ ಮಾಡುವವರ ದುಃಖಕ್ಕೆ ಸ್ಪಂದಿಸಿ,ಅವರ ದುಃಖವನ್ನು ಪರಿಹರಿಸುತ್ತಾನೆ.ಅಪ್ಪ ತಾನು ಸಂಧ್ಯಾವಂದನೆ ಮಾಡದೇ ಮಗನಿಗೆ ಸಂಧ್ಯಾವಂದನೆ ಮಾಡೆಂದು ಹೇಳುವುದು ಪರಿಣಾಮಕಾರಿಯಾಗುವುದಿಲ್ಲ. ಹಾಗಾಗಿ ನಾಯಕನು ತಾನು ಪರಿಶ್ರಮಿಯಾಗಿರಬೇಕು(Hard
working). ಅಷ್ಟೇ ಅಲ್ಲದೆ ತನ್ನವರ ವಿಷಯದಲ್ಲಿ ಕಾಳಜಿವುಳ್ಳವನಾಗಿರಬೇಕು(concerned).
ಆಗ ಅನುಯಾಯಿಗಳು ನಾಯಕನಲ್ಲಿ ಭಯಮಿಶ್ರಿತ ಪ್ರೀತಿಯುಳ್ಳವರಾಗುತ್ತಾರೆ.
ಆಚಾರ್ಯರು ತಮ್ಮ ಶಿಷ್ಯರಲ್ಲಿ ಕಾಳಜಿಯುಳ್ಳವರಾಗಿದ್ದರು.ಈ ವಿಷಯದಲ್ಲಿ ನಾರಾಯಣಪಂಡಿತಾಚಾರ್ಯರು
ಆಚಾರ್ಯರ ಜೀವನದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸಿದ್ದಾರೆ.ಆಚಾರ್ಯರು ಅರುಣೋದಯ ಕಾಲದಲ್ಲಿ ಎದ್ದು ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಿದ್ದರು. ಶಿಷ್ಯರು ತಡವಾಗಿ ಮಲಗಿದರೂ, ಬೇಗ ಎದ್ದು ಕಷ್ಟಕರವಾದ ಗುರು ಶುಷ್ರೂಶೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಆದರೆ ಒಮ್ಮೆ ಶ್ರವಣ ಮನನ ಮಾಡುತ್ತಾ ಬಹಳ ತಡವಾಗಿ ಮಲಗಿದ್ದ ಶಿಷ್ಯರು ಬೆಳಿಗ್ಗೆ ಬೇಗ ಏಳಲಿಲ್ಲ. ಆಚಾರ್ಯರು ತಾವೇ ತಮ್ಮ ಸ್ನಾನವಸ್ತ್ರಾದಿಗಳನ್ನು ಹಿಡಿದು ನದಿಗೆ ಹೊರಟರು. ಶಿಷ್ಯರನ್ನು ಎಬ್ಬಿಸಲಿಲ್ಲ. ಆಮೇಲೆ ತಕ್ಷಣ ಎಚ್ಚರಗೊಂಡ ಶಿಷ್ಯರು ಆಚಾರ್ಯರು ಕೆಲಸ ಮಾಡದ್ದಕ್ಕೆ ಬಯ್ಯುವರು ಎಂದು ಗಾಬರಿಯಿಂದ ಸುಮ್ಮನೆ ನಿಂತರು ಆದರೇ ಆಚಾರ್ಯರು ಬಯ್ಯಲಿಲ್ಲ. ಹಾಗಾಗಿ ನಾಯಕನು ನಿಯಮಕ್ಕನುಗುಣವಾಗಿ ಕೆಲಸ ಮಾಡಿಸಬೇಕಾದರೂ, (Principled)
ಕೆಲವೊಮ್ಮೆ ಸಂದರ್ಭಾನುಸಾರವಾಗಿ, ವ್ಯಕ್ತಿಗಳಿಗನುಸಾರವಾಗಿ ಮುಕ್ತತೆಯನ್ನೂ(Liberty) ಪ್ರದರ್ಶಿಸಬೇಕು. ಹೀಗೆ ಆಚಾರ್ಯರೂ ನಾಯಕತ್ವ ಗುಣಗಳ ಬಗ್ಗೆ ಅನೇಕ ಕಡೆ ಬೆಳಕು ಚೆಲ್ಲಿದ್ದಾರೆ, ಆ ದೃಷ್ಟಿಯಿಂದ ಗಮನಿಸಿ,
ಜನರಿಗೆ ತಿಳಿಸಿ, ಅಳವಡಿಸಿಕೊಳ್ಳಬೇಕಾಗಿದೆ.