June 15, 2022

ಗೋಚರ ಮತ್ತು ಅಗೋಚರ ಶಾಪಗಳು

೧. ಮಾತಾ ಪಿತೃ ಶಾಪ :

* ಯಾವ ಮಕ್ಕಳು ಜವಾಬ್ದಾರಿ ಬಂದ ಮೇಲೆ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲವೋ..

* ವೃದ್ಧಾಪ್ಯದ ತಂದೆ ತಾಯಿಗಳು ಬದುಕಿರುವಾಗ ಮಕ್ಕಳು ಬೇರೆ ಮನೆ ಮಾಡಿಕೊಂಡು ಸಂಸಾರ ಮಾಡುತ್ತಾರೆಯೋ..

* ತಂದೆ ತಾಯಿಗಳ ಮನಸ್ಸು ನೋಯಿಸಿದ ಮಕ್ಕಳು..
ಕೊಂಕು ಮಾತನಾಡಿ ,ತಿರಸ್ಕಾರದಿಂದ ನೋಯಿಸಿದ್ದರೂ ಬರುತ್ತದೆ.

* ತಂದೆ ತಾಯಿಗಳ ಪಾಲನೆ ಪೋಷಣೆ ಮಾಡದ ಮಕ್ಕಳು..

* ತಂದೆ ತಾಯಿಯರನ್ನು ಅಗಲಿಸಿದ ಮಕ್ಕಳು..

* ತಂದೆ ತಾಯಿಯರ ಅಂತಿಮ ಕಾರ್ಯ ಮಾಡದ ಮಕ್ಕಳು..

* ತಂದೆ ತಾಯಿಯರ ನಂತರ ಶ್ರಾದ್ಧ ಮಾಡದ ಮಕ್ಕಳು..
.... ಇತ್ಯಾದಿ

ಇವೆಲ್ಲವೂ ಮಾತಾಪಿತೃ ಶಾಪ ಎಂದು ಕರೆತುತ್ತೇವೆ.‌
ಈ ದೋಷ ಇದ್ದರೆ ಮನೆಯು ಏಳಿಗೆಯಾಗುವುದಿಲ್ಲ , ಮಕ್ಕಳ ಏಳಿಗೆಯಾಗುವುದಿಲ್ಲ , ಸಂತಾನ ದೋಷವೂ ಆಗಬಹುದು, ನೆಮ್ಮದಿ ಇರದ ದಾರಿದ್ರ್ಯದ ಜೀವನ, ..
ಇಂತಹ ಫಲಗಳು ಬರುತ್ತವೆ..
     ***

೨. "ಸ್ತ್ರೀ ಶಾಪ"

* ಅನ್ಯ ಸ್ತ್ರೀಯರಿಗೆ ನಂಬಿಸಿ ಮೋಸ ಮಾಡಿದ ದೋಷಗಳು..

* ಅನ್ಯ ಸ್ತ್ರೀ ಆಭರಣ ಅಡಮಾನ ದೋಷಗಳು..

* ಸ್ತ್ರೀ ಗೆ ಮಾತು ಕೊಟ್ಟು ತಪ್ಪಿದ ದೋಷಗಳು..

* ಒಬ್ಬರು ಸ್ತ್ರೀಗೆ ಮಾತುಕೊಟ್ಟು ಅನ್ಯ ಸ್ತ್ರೀಯನ್ನು ವಿವಾಹವಾದ ದೋಷಗಳು..

* ಸ್ತ್ರೀಯರ ಹಣನುಂಗಿದ ದೋಷಗಳು.
.. ಇತ್ಯಾದಿ

* ಸ್ತ್ರೀಯರನ್ನು ನಿಂದಿಸಿ , ಕಣ್ಣೀರು ಹಾಕಿಸಿದ ದೋಷಗಳು..

ಇವೆಲ್ಲವೂ ಸ್ತ್ರೀಶಾಪಗಳಾಗುತ್ತವೆ..

ಅನಾರೋಗ್ಯ, ಕಷ್ಟದ ಜೀವನ, ಮನೆಯಲ್ಲಿ ಜಗಳಗಳು, ವಿವಾಹಕ್ಕೆ ದೋಷಗಳು, ಅಪಘಾತದ ಭಯಗಳು ಆಗುತ್ತಿರುತ್ತವೆ.
    ********

೩. "ಗುರುಶಾಪ"..

* ಗುರುವಿನಿಂದ ಮಂತ್ರದೀಕ್ಷೆ ಪಡೆದು ದಕ್ಷಿಣೆ ಕೊಡದ ದೋಷಗಳು..

* ಗುರುವಿನ ನಿಂದನೆ ಮಾಡಿದ ದೋಷಗಳು.‌

* ಗುರುವಿನ ಅನುಗ್ರಹ ಪಡೆದು ಗುರುವಾಕ್ಯ ಪಾಲಿಸದ ದೋಷಗಳು..

* ಗುರುವಿನಿಂದ ವಿದ್ಯೆ ಕಲಿತು ಗುರುವಿಗೇ ತಿರುಮಂತ್ರ ಹೇಳಿದ ದೋಷಗಳು..

* ಗುರುವನ್ನು ತಿರಸ್ಕಾರ ಮಾಡಿದ ದೋಷಗಳು.‌

* ಗುರುಗಳು ನೊಂದುಕೊಳ್ಳುವಂತೆ ಮಾಡಿದ ದೋಷಗಳು..

* ಗುರುವಿನಿಂದ ಮಂತ್ರೋಪದೇಶ, ದೀಕ್ಷೆ ಪಡೆದು , ಅದನ್ನು ಕೆಟ್ಟ ಕಾರ್ಯಗಳಿಗೆ ಉಪಯೋಗಿಸಿದ ದೋಷಗಳು..
..
ಇವೆಲ್ಲವೂ ಗುರುಶಾಪಗಳಾಗುತ್ತವೆ..
ಇಂತಹವರಿಗೆ ಜೀವನದಲ್ಲಿ ಅಭಿವೃದ್ಧಿನೇ ಇರುವುದಿಲ್ಲ, ಸಂತಾನಭಾಗ್ಯ ಕಷ್ಟ, ಮಕ್ಕಳಿಗೆ ವಿದ್ಯೆ ಹತ್ತುವುದಿಲ್ಲ, ಅಗೋಚರ ಕಾಯಿಲೆಗಳಾಗುತ್ತವೆ , ವಂಶವು ಅಧಃಪತನವಾಗುವುದು..
******

೪. " ದೈವಶಾಪ"

* ದೇವರ ವಿಗ್ರಹಗಳನ್ನು ಬಿಸಾಡುವುದು, ಸರಿಯಾಗಿ ಪೂಜಿಸದೇ ಇರುವುದು..

* ದೇವರ ವಿಗ್ರಹಗಳನ್ನು ಅಡಮಾನ ಇಟ್ಟು ವ್ತವಹರಿಸುವುದು..

* ದೇವರ ಆಭರಣಗಳನ್ನು ಧರಿಸುವುದು..

* ನಿಮ್ಮ ಮನೆಯ ಪೂಜಾವಿಗ್ರಹವನ್ನು ಬೇರೆಯವರಿಗೆ ಕೊಡುವುದು..

* ದೇವರ ಆಭರಣಗಳನ್ನು ಕರಗಿಸಿದ ದೋಷಗಳು..

* ದೇವಾಲಯದಲ್ಲಿ ಮಾರುವ ಆಭರಣಗಳನ್ನು ಬೆಲೆಕಟ್ಟಿ ಕೊಂಡುಕೊಂಡರೆ..ಇವೆಲ್ಲವೂ ದೈವಶಾಪಗಳಾಗುತ್ತವೆ..
ಅಗೋಚರವಾಗಿಯೂ ಪೂಜೆಗಳಲ್ಲಿ ದೈವ ಶಾಪ ಅಥವಾ ದೈವ ಜನರ ಶಾಪ ಉಂಟಾಗುತ್ತದೆ.‌.

೧. ದೇವರನ್ನು ನಂಬಿ ಜ್ಯೋತಿಷ್ಯ ಹೇಳುವವರ ಬಳಿ , ಜ್ಯೋತಿಷ್ಯ ಕೇಳಿ ದಕ್ಷಿಣೆ ಕೊಡದೆ ಇದ್ದ ದೋಷಗಳು..
ಜ್ಯೋತಿಷ್ಯ ಕೇಳಿ, ಜಾತಕ ಕೇಳಿ , ಪರಿಹಾರ ಕೇಳಿಯೂ ದಕ್ಷಿಣೆ ಕೊಡದೆ ನಿಂದಿಸಿದ ದೋಷಗಳು..

೨. ಪುರೋಹಿತರು ಪೂಜೆಯ ಸಾಮಗ್ರಿಗಳನ್ನು ಅವರೇ ತಂದು ಪೂಜೆ ಮಾಡಿಕೊಂಡು ಹೋದ ದೋಷಗಳು..

೩.. ದೈವಜ್ಞರನ್ನು ನಿಂದಿಸಿದ ದೋಷಗಳು..
ಇತ್ಯಾದಿ

ಈ ದೈವ ಶಾಪ ಅಥವಾ ದೈವ ಜನರ ಶಾಪ ತುಂಬಾ ಇವೆ..
ಈ ದೋಷ ಇದ್ದರೆ ಅಂತಹ ಮನೆಯಲ್ಲಿ ದೇವರು ವಾಸ ಮಾಡುವುದಿಲ್ಲ..
ದೇವರ ಬಲ ಇರುವುದಿಲ್ಲ..
ಕಷ್ಟಕರವಾದ ಜೀವನ, ಮನೆಯಲ್ಲಿ ಅನಾರೋಗ್ಯದ ಭಾಗ್ತ, ಸಂಸಾರದಲ್ಲಿ ಕಷ್ಟ.. ಇತ್ಯಾದಿ , ಫಲಗಳು ಬರುತ್ತವೆ..
   *******

೫. "ಸರ್ಪದೋಷ"

* ಯಾರು ಸರ್ಪವನ್ನು ಹಿಂಸಿಸುತ್ತಾರೋ, ಹೊಡೆಯುತ್ತಾರೋ, ಸಾಯಿಸುತ್ತಾರೋ ಅವರಿಗೆಲ್ಲಾ , ಮನೆಯವರಿಗೂ ಸೇರಿ ದೋಷ ಬರುತ್ತದೆ..

* ಯಾರು ಸರ್ಪದ ವಾಸಸ್ಥಾನವನ್ನು ನಾಶ ಮಾಡುತ್ತಾರೆಯೋ, ಅಲ್ಲಿ ಮನೆಯನ್ನು ಕಟ್ಟುತ್ತಾರೆಯೋ, 

* ಯಾರು ತನಿ ಎರೆಯುವುದಿಲ್ಲವೋ, ಯಾರು ನಾಗರ ಪೂಜೆ ಮಾಡುವುದಿಲ್ಲವೋ..

* ಯಾರು ಸರ್ಪಗಳನ್ನು ದಾಟಿರುತ್ತಾರೋ, ಸರ್ಪವನ್ನು ಆಟ ಆಡಿಸುತ್ತಾರೋ..

* ಯಾರೋ ಮಾಡುವ ಸರ್ಪಸಂಸ್ಕಾರ, ನಾಗರ ಪ್ರತಿಷ್ಟೆ ನೋಡುವುದು, ಪ್ರಸಾದ ಸೇವಿಸುವುದರಿಂದಲೂ ಸರ್ಪದೋಷ ಬರುವುದು, ನೇತ್ರ ಸರ್ಪದೋಷ ವಾಗುತ್ತದೆ..
*ನಾಗರಕಲ್ಲನ್ನು ಕೆಡುವಿದ ದೋಷಗಳು, ಯಾರಿಗೋ ನಾಗರ ಹಾವನ್ನು ತೋರಿಸಿ ಒಡೆಸಿದ ದೋಷಗಳು..

ಇವೆಲ್ಲವೂ ಸರ್ಪದೋಷಗಳಾಗುತ್ತವೆ..

ಸಂತಾನ ಭಾಗ್ಯ ಕಷ್ಟ, ಅಗೋಚರ ರೋಗಗಳು, ಗಾಯಗಳು, ಕಿವಿನೋವು, ಕಣ್ಣಿನ ರೋಗಗಳು, ಮಕ್ಕಳ ಬೆಳವಣಿಗೆ ಇಲ್ಲದೇ ಇರುವುದು , ಮದುವೆಯ ದೋಷಗಳು, ಅಭಿವೃದ್ಧಿ ಆಗದೇ ಇರುವುದು  ವಿವಾಹ ದೋಷಗಳು, ವಿಚ್ಛೇದನ ದೊಷಗಳು.
..ಇತ್ಯಾದಿ ಫಲಗಳು ಬರುತ್ತವೆ..

(ಈ ಎಲ್ಲಾ ದೋಷಗಳಿಗೆ ಜಾತಕ ನೋಡಿಸಿ ಪರಿಹಾರ ಮಾಡಿಕೊಂಡಾಗ ಮಾತ್ರ ಫಲಗಳ ಪ್ರಭಾವ ಕಡಿಮೆಯಾಗುವುದು)

ಶುಭವಾಗಲಿ..

No comments:

Post a Comment

If you have any doubts. please let me know...