ಪ್ರಜೆಗಳಿಗೆ ಒಳಿತು ಮಾಡದೇ ರಾಜನು ದೇವತಾಕಾರ್ಯಗಳನ್ನು ನಡೆಸಿ ಪ್ರಯೋಜನವೇನು?
ಕಿಂ ದೇವಕಾರ್ಯಾಣಿ ನರಾಧಿಪಸ್ಯ ಕೃತ್ವಾ ವಿರೋಧಂ ವಿಷಯಸ್ಥಿತಾನಾಮ್।
ತದ್ದೇವಕಾರ್ಯಂ ಜಪಯಜ್ಞಹೋಮಾಃ ಯಸ್ಯಾಶ್ರುಪಾತಾ ನ ಪತಂತಿ ರಾಷ್ಟ್ರೇ॥
ತದ್ದೇವಕಾರ್ಯಂ ಜಪಯಜ್ಞಹೋಮಾಃ ಯಸ್ಯಾಶ್ರುಪಾತಾ ನ ಪತಂತಿ ರಾಷ್ಟ್ರೇ॥
ಯಾವನ ರಾಜ್ಯದಲ್ಲಿ ಪ್ರಜೆಗಳು ಕಣ್ಣೀರು ಸುರಿಸುವುದಿಲ್ಲವೋ ಅದೇ ದೇವಕಾರ್ಯ. ಅದೇ ಯಜ್ಞ, ಅದೇ ಹೋಮ. ಪ್ರಜೆಗಳನ್ನು ತನ್ನ ಮಕ್ಕಳಂತೆ ಸಂರಕ್ಷಿಸುವುದು ರಾಜನ ಕರ್ತವ್ಯ. ಪ್ರಜೆಗಳು ನೆಮ್ಮದಿಯಿಂದ ಜೀವನ ನಡೆಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅವರ ಬೇಕು, ಬೇಡಗಳ ಕಡೆ ಗಮನಹರಿಸಬೇಕು. ಈ ಕಾರ್ಯ ಸುಗಮವಾಗಿ ಸಾಗಲು ಧಾರ್ಮಿಕ, ಆಧ್ಯಾತ್ಮಿಕ ಬದುಕಿನ ಸ್ಪರ್ಶವಿದ್ದರೆ ಒಳಿತು. ಧಾರ್ಮಿಕ ಕಾರ್ಯವೆಲ್ಲವೂ ಲೋಕ ಕಲ್ಯಾಣಾರ್ಥವಾಗಿರಬೇಕು. ಆದರೆ ರಾಜನಾದವನು ಪ್ರಜೆಗಳ, ದೇಶದ ಹಿತಕಾರ್ಯ ನಿರ್ಲಕ್ಷಿಸಿ ಕೇವಲ ಹೋಮ, ಹವನ, ಪೂಜೆ ಮುಂತಾದ ದೇವತಾಕಾರ್ಯ ಮಾಡುತ್ತಾ, ಪ್ರಜೆಗಳು ಕಣ್ಣೀರಿಡುವಂತೆ ಮಾಡಿದರೆ, ರಾಜನು ಕರ್ತವ್ಯಲೋಪ ಮಾಡಿದಂತಾಗುವುದು.
Dr̤ Ganapathi Hegade
No comments:
Post a Comment
If you have any doubts. please let me know...