ನಮಗೆ ಮಾತಾಡುವ ಸಾಮರ್ಥ್ಯವಿದೆ, ಅವಕಾಶವಿದೆ ಎಂದ ಮಾತ್ರಕ್ಕೆ ಏನೇನೋ ಮಾತನಾಡಬಾರದು. ಒಳ್ಳೆಯ ಮಾತುಗಳನ್ನೇ ಆಡಬೇಕು.
ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ।
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ|
ಮಾತಾಡುವ ಶಕ್ತಿಯನ್ನು ಭಗವಂತ ಮನುಷ್ಯನಿಗೆ ದಯಪಾಲಿಸಿದ್ದಾನೆ. ಇಂತಹ ಅಪೂರ್ವ ಅವಕಾಶ ಅನ್ಯ ಜೀವಿಗಳಿಗಿಲ್ಲ.
ದೈವದತ್ತವಾದ ಈ ಅವಕಾಶವನ್ನು ಅಷ್ಟೇ ಗೌರವದಿಂದ ಬಳಸಿಕೊಳ್ಳಬೇಕು.
ಆಡುವ ಮಾತುಗಳು ಸುಲಲಿತವಾಗಿ, ಚೆನ್ನಾಗಿರಬೇಕು, ಹೃದ್ಯವಾಗಿರಬೇಕು, ಇತರರಿಗೆ ಬೇಗ ಅರ್ಥವಾಗುವಂತಿರಬೇಕು. ಮೃದುವಾಗಿರಬೇಕು, ಸತ್ಯವಾದ ಮಾತುಗಳನ್ನೇ ಆಡಬೇಕು.
ನಮ್ಮ ಮಾತು ಇತರರಿಗೆ ಆತ್ಮೀಯತೆಯನ್ನು ಹುಟ್ಟಿಸುವಂತಿರಬೇಕು.
ಯಾಕೆಂದರೆ ಒಳ್ಳೆಯ ಮಾತನ್ನಾಡುವುದರಿಂದ ಎಲ್ಲರೂ ಸಂತಸಪಡುತ್ತಾರೆ.
ಆದ್ದರಿಂದ ಒಳ್ಳೆಯ ಮಾತುಗಳನ್ನೇ ಆಡಬೇಕು. ನಮಗೆ ಮಾತಿಗೇನೂ ಬಡತನವಿಲ್ಲವಲ್ಲ!
No comments:
Post a Comment
If you have any doubts. please let me know...