July 11, 2022

ಜನನಾತ್ ಪೂರ್ವ ಗರ್ಭದಾರಣ ಕಾಲ

ನಿಖರ ಭವಿಷ್ಯವನ್ನು ಈ ಲೆಕ್ಕಾಚಾರದಿಂದ ಮಾತ್ರ ತಿಳಿಯಬಹುದು. 
ಮಾಂದಿ ಸ್ಥಿತಿ-ಶನಿ ಸ್ಥಿತಿ= ಉಳಿದ ಅಂಶ.
ಲಗ್ನ ಸ್ಪುಟ-ನವಮ ಸ್ಪಟ= ಉಳಿದ ಅಂಶ.
ಈ ಎರಡು ಅಂಶಗಳಿಗೆ ಚಂದ್ರ ಭುಕ್ತಾಂಶ ಸೇರಿಸಿದಾಗ ಬರುವ ಮಾಸ- ದಿನ- ಸಮಯವೇ ಜನನಾತ್ ಪೂರ್ವ ಗರ್ಭ ಧಾರಣಾ ಕಾಲ.
ಈ ಲೆಕ್ಕಾಚಾರ ಮಾಡುವವನೇ ನಿಜವಾದ ಜ್ಯೋತಿಷಿ. ಒಂದು ಕ್ಷಣದಲ್ಲಿ ಟಿವಿ ಪರದೆಯಲ್ಲಿ ಕಾಣಿಸಿಕೊಂಡು ಹೇಳುವಂತದ್ದಲ್ಲ ಇದು. ಒಂದು ಸೆಕುಂಡು ಆಚೆ ಈಚೆಯಾದರೂ ಭವಿಷ್ಯ ವ್ಯತ್ಯಾಸವಾದೀತು.
ಜನನವನ್ನು ನಿರ್ಧರಿಸುವುದು ಮಾಂದಿ. ಮರಣ ನಿರ್ಧರಿಸುವುದು ಶನಿ. ಇದಕ್ಕೇ ಶನಿಯನ್ನೇ ಯಮಾಗ್ರಜ ಎಂದಿದ್ದಾರೆ
ಯಾರೋ ಟಿವಿ ನೋಡಿಕೊಂಡು ಮಹರ್ಷಿ,ಬ್ರಹ್ಮಾಂಡ,ಮಾನವಗುರು,ದೇವ ಮಾನವ,ದೇವರ್ಷಿಗಳೇ ಜ್ಯೋತಿಷ್ಯರು ಎಂದುಕೊಂಡರೆ ಯಾರೇನು ಮಾಡಲಿ?
ಅದು ಅವರವರ ಭ್ರಮೆಯಷ್ಟೆ.
ಪ್ರಕಾಶ್ ಅಮ್ಮಣ್ಣಾಯ

No comments:

Post a Comment

If you have any doubts. please let me know...