November 3, 2020

ನಾರಾಯಣಬಲಿ ಮತ್ತು ನಾಗಬಲಿ

ನಾರಾಯಣಬಲಿ ಮತ್ತು ನಾಗಬಲಿ ಮಾಡುವ ಉದ್ದೇಶ, ವಿಧಿ ಮತ್ತು ಪದ್ಧತಿ:-
ನಾರಾಯಣಬಲಿ
೧. ಉದ್ದೇಶ : ದುರ್ಮರಣ ಹೊಂದಿದ ಅಥವಾ ಆತ್ಮಹತ್ಯೆ ಮಾಡಿದ ಜೀವದ ಕ್ರಿಯಾಕರ್ಮಗಳು ಆಗದೇ ಇರುವುದರಿಂದ ಪ್ರೇತತ್ವವು ಮುಗಿದು ಪಿತೃತ್ವವು ಸಿಗದೇ ಇದ್ದುದರಿಂದ ಅದರ ಲಿಂಗದೇಹವು ಹಾಗೆಯೇ ಅಲೆದಾಡುತ್ತಿರುತ್ತದೆ. ಇಂತಹ ಲಿಂಗದೇಹವು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ. ಅದೇ ರೀತಿ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆ ಕೊಡುತ್ತದೆ. ಇಂತಹ ಲಿಂಗದೇಹಕ್ಕೆ ಗತಿಯನ್ನು ನೀಡಲು ನಾರಾಯಣಬಲಿ ವಿಧಿಯನ್ನು ಮಾಡಬೇಕಾಗುತ್ತದೆ.
೨. ವಿಧಿ
ಅ. ವಿಧಿಯನ್ನು ಮಾಡಲು ಯೋಗ್ಯ ಸಮಯ: ನಾರಾಯಣಬಲಿಯ ವಿಧಿಯನ್ನು ಮಾಡಲು ಯಾವುದೇ ತಿಂಗಳ ಶುಕ್ಲ ಏಕಾದಶಿ ಅಥವಾ ದ್ವಾದಶಿಯು ಯೋಗ್ಯವಾಗಿರುತ್ತದೆ. ಏಕಾದಶಿಯಂದು ಅಧಿವಾಸ (ದೇವರ ಸ್ಥಾಪನೆ) ಮಾಡಿ ದ್ವಾದಶಿಯಂದು ಶ್ರಾದ್ಧವನ್ನು ಮಾಡಬೇಕು (ಇತ್ತೀಚೆಗೆ ಹೆಚ್ಚಿನ ಜನರು ಒಂದೇ ದಿನ ವಿಧಿಯನ್ನು ಮಾಡುತ್ತಾರೆ). ಸಂತತಿ ಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದರೆ ದಂಪತಿಗಳು ಸ್ವತಃ ಈ ವಿಧಿಯನ್ನು ಮಾಡಬೇಕು. ಪುತ್ರಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದಲ್ಲ್ಲಿ ಶ್ರವಣ ನಕ್ಷತ್ರ, ಪಂಚಮಿ ಅಥವಾ ಪುತ್ರದಾ ಏಕಾದಶಿ ಇವುಗಳಲ್ಲಿನ ಯಾವುದಾದರೊಂದು ತಿಥಿಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ.
ಆ. ವಿಧಿ ಮಾಡಲು ಯೋಗ್ಯ ಸ್ಥಳ: ನದಿತೀರದಂತಹ ಪವಿತ್ರ ಸ್ಥಳದಲ್ಲಿ ಈ ವಿಧಿಯನ್ನು ಮಾಡಬೇಕು.
ಇ. ಪದ್ಧತಿ
ಮೊದಲನೆಯ ದಿನ : ಮೊದಲು ತೀರ್ಥದಲ್ಲಿ ಸ್ನಾನ ಮಾಡಿ ನಾರಾಯಣಬಲಿಯ ಸಂಕಲ್ಪವನ್ನು ಮಾಡಬೇಕು. ಎರಡು ಕಲಶಗಳ ಮೇಲೆ ಶ್ರೀವಿಷ್ಣು ಮತ್ತು ವೈವಸ್ತವ ಯಮ ಇವರ ಸುವರ್ಣಮೂರ್ತಿಗಳನ್ನು ಸ್ಥಾಪಿಸಿ ಅವುಗಳಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಅನಂತರ ಆ ಕಲಶಗಳ ಪೂರ್ವಕ್ಕೆ ದರ್ಭೆಯಿಂದ ಒಂದು ರೇಖೆಯನ್ನು ಎಳೆದು ದಕ್ಷಿಣದ ಕಡೆಗೆ ದರ್ಭೆಗಳನ್ನು (ಕುಶ) ಹರಡಬೇಕು. ಅದರ ಮೇಲೆ ‘ಶುಂಧಂತಾಂ ವಿಷ್ಣುರೂಪೀ ಪ್ರೇತಃ’ ಈ ಮಂತ್ರದಿಂದ ಹತ್ತು ಬಾರಿ ನೀರನ್ನು ಬಿಡಬೇಕು.
ಅನಂತರ ದಕ್ಷಿಣಕ್ಕೆ ಮುಖಮಾಡಿ ಅಪಸವ್ಯದಿಂದ ವಿಷ್ಣುರೂಪೀ ಪ್ರೇತದ ಧ್ಯಾನವನ್ನು ಮಾಡಬೇಕು. ಆ ಹರಡಿರುವ ದರ್ಭೆಗಳ ಮೇಲೆ ಜೇನುತುಪ್ಪ, ತುಪ್ಪ ಮತ್ತು ಎಳ್ಳುಗಳಿಂದ ತಯಾರಿಸಿದ ಹತ್ತು ಪಿಂಡಗಳನ್ನು ‘ಕಶ್ಯಪಗೋತ್ರ… ಇವರ ಪ್ರೇತ ವಿಷ್ಣುದೈವತ ಅಯಂ ತೆ ಪಿಂಡಃ’ ಎಂದು ಹೇಳಿಕೊಡಬೇಕು. ಪಿಂಡಗಳನ್ನು ಗಂಧಾದಿ ಉಪಚಾರಗಳಿಂದ ಪೂಜಿಸಿ ಅನಂತರ ಅವುಗಳನ್ನು ನದಿಯಲ್ಲಿ ಅಥವಾ ಜಲಾಶಯದಲ್ಲಿ ವಿಸರ್ಜಿಸಬೇಕು. ಇದು ಹಿಂದಿನ ದಿನದ ವಿಧಿಯಾಯಿತು.
ಎರಡನೆಯ ದಿನ: ಮಧ್ಯಾಹ್ನದ ಸಮಯದಲ್ಲಿ ಶ್ರೀವಿಷ್ಣುವಿನ ಪೂಜೆಯನ್ನು ಮಾಡಬೇಕು. ಅನಂತರ ೧, ೩ ಅಥವಾ ೫ ಹೀಗೆ ಬೆಸ ಸಂಖ್ಯೆಯಲ್ಲಿ ಬ್ರಾಹ್ಮಣರನ್ನು ಆಮಂತ್ರಿಸಿ ಏಕೋದ್ದಿಷ್ಟ ವಿಧಿಯಿಂದ ಆ ವಿಷ್ಣುರೂಪೀ ಪ್ರೇತದ ಶ್ರಾದ್ಧವನ್ನು ಮಾಡಬೇಕು. ಈ ಶ್ರಾದ್ಧವನ್ನು ಬ್ರಾಹ್ಮಣರ ಪಾದಪ್ರಕ್ಷಾಲನದಿಂದ ತೃಪ್ತಿಪ್ರಶ್ನೆಯ ತನಕ ಮಂತ್ರರಹಿತವಾಗಿ ಮಾಡಬೇಕು. ಶ್ರೀವಿಷ್ಣು, ಬ್ರಹ್ಮಾ, ಶಿವ ಮತ್ತು ಸಪರಿವಾರ ಯಮ ಇವರಿಗೆ ನಾಮಮಂತ್ರಗಳಿಂದ ನಾಲ್ಕು ಪಿಂಡಗಳನ್ನು ಕೊಡಬೇಕು. ವಿಷ್ಣುರೂಪೀ ಪ್ರೇತಕ್ಕಾಗಿ ಐದನೆಯ ಪಿಂಡವನ್ನು ಕೊಡಬೇಕು. ಪಿಂಡಪೂಜೆಯನ್ನು ಮಾಡಿ ಅವುಗಳ ವಿಸರ್ಜನೆಯಾದ ನಂತರ ಬ್ರಾಹ್ಮಣರಿಗೆ ದಕ್ಷಿಣೆಯನ್ನು ಕೊಡಬೇಕು. ಓರ್ವ ಬ್ರಾಹ್ಮಣರಿಗೆ ವಸ್ತ್ರಾಲಂಕಾರ, ಹಸು ಮತ್ತು ಚಿನ್ನ ಈ ವಸ್ತುಗಳನ್ನು ಕೊಡಬೇಕು. ಅನಂತರ ಪ್ರೇತಕ್ಕೆ ತಿಲಾಂಜಲಿ ನೀಡುವ ಬಗ್ಗೆ ಬ್ರಾಹ್ಮಣರಿಗೆ ಪ್ರಾರ್ಥನೆಯನ್ನು ಮಾಡಬೇಕು. ಬ್ರಾಹ್ಮಣರು ದರ್ಭೆ, ಎಳ್ಳು ಮತ್ತು ತುಳಸೀದಳಗಳಿಂದ ಭರಿತವಾದ ನೀರನ್ನು ಬೊಗಸೆಯಲ್ಲಿ ತೆಗೆದುಕೊಂಡು ಅದನ್ನು ಪ್ರೇತಕ್ಕೆ ನೀಡಬೇಕು. ಅನಂತರ ಶ್ರಾದ್ಧಕರ್ತನು ಸ್ನಾನ ಮಾಡಿ ಭೋಜನ ಮಾಡಬೇಕು. ಈ ವಿಧಿಯಿಂದ ಪ್ರೇತಾತ್ಮಕ್ಕೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
ಸ್ಮೃತಿಗ್ರಂಥದಲ್ಲಿ ನಾರಾಯಣಬಲಿ ಮತ್ತು ನಾಗಬಲಿ ಇವುಗಳನ್ನು ಒಂದೇ ಉದ್ದೇಶಕ್ಕಾಗಿ ಹೇಳಿರುವುದರಿಂದ ಎರಡೂ ವಿಧಿಗಳನ್ನು ಜೊತೆಯಲ್ಲಿ ಮಾಡುವ ಪರಂಪರೆಯಿದೆ. ನಾರಾಯಣ-ನಾಗಬಲಿ ಈ ಜೋಡಿಹೆಸರು ಇದೇ ಕಾರಣದಿಂದಾಗಿ ರೂಢಿಗೆ ಬಂದಿದೆ.
ನಾಗಬಲಿ
೧. ಉದ್ದೇಶ : ನಮ್ಮ ಮನೆತನದಲ್ಲಿ ಹಿಂದೆ ಯಾರಾದರೊಬ್ಬ ಪೂರ್ವಜರಿಂದ ನಾಗನ (ನಾಗರಹಾವಿನ) ಹತ್ಯೆಯಾಗಿದ್ದಲ್ಲಿ ಆ ನಾಗನಿಗೆ ಗತಿ ಸಿಗದೇ ಇದ್ದುದರಿಂದ ಅದು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ, ಹಾಗೆಯೇ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆಗಳನ್ನು ಕೊಡುತ್ತದೆ. ಈ ದೋಷದ ನಿವಾರಣೆಗಾಗಿ ಈ ವಿಧಿಯನ್ನು ಮಾಡುತ್ತಾರೆ.
೨. ವಿಧಿ : ಸಂತತಿಪ್ರಾಪ್ತಿಗಾಗಿ ಈ ವಿಧಿಯನ್ನು ಮಾಡುವುದಿದ್ದರೆ ಆ ದಂಪತಿಗಳು ಸ್ವತಃ ಈ ವಿಧಿಯನ್ನು ಮಾಡಬೇಕು. ಪುತ್ರಪ್ರಾಪ್ತಿಗಾಗಿ ಮಾಡಬೇಕಾಗಿದ್ದಲ್ಲಿ ಶ್ರವಣ ನಕ್ಷತ್ರ, ಪಂಚಮಿ ಅಥವಾ ಪುತ್ರದಾ ಏಕಾದಶಿ ಇವುಗಳಲ್ಲಿನ ಯಾವುದಾದರೊಂದು ತಿಥಿಗೆ ಮಾಡಿದರೆ ಹೆಚ್ಚು ಲಾಭವಾಗುತ್ತದೆ.’ ಜಂಗಮಾಮೃತ

October 21, 2020

ಆತ್ಮಾನ್ವೇಷಣೆ

ಒಬ್ಬ ಸನ್ಯಾಸಿಯು ಒಂದು ಮನೆಯ ಮುಂದೆ ಬಂದು ಭಿಕ್ಷೆ ಯಾಚಿಸಿದ. ಆ ಮನೆಯೊಡತಿ ಭಿಕ್ಷೆ ಹಾಕಲು ಮುಂದೆ ಬಂದಾಗ, ಆಶೀರ್ವಾದ ಮಾಡುತ್ತ ಆ ಸನ್ಯಾಸಿಯು, "ತಾಯೆ?! ನಿನ್ನ ವಯಸ್ಸೆಷ್ಟು?' ಎಂದು ಕೇಳಿದ.


ಗೃಹಿಣಿಯು ಸನ್ಯಾಸಿಗೆ ನಮಸ್ಕರಿಸಿ, ಮುಗುಳುನಗುತ್ತಾ, "ನನಗೆ ಕೇವಲ ಒಂದು ವರ್ಷ' ಎಂದಳು. ಈ ನಡುವಯಸ್ಸಿನ ಗೃಹಿಣಿ ಹಾಗೆ ಹೇಳಲು ಸನ್ಯಾಸಿ ಕುತೂಹಲದಿಂದ ಮತ್ತೆ ಕೇಳಿದ"ನಿಮ್ಮ ಯಜಮಾನರ ವಯಸ್ಸೇನು?' "ಅವರಿನ್ನೂ ಆರು ತಿಂಗಳಿನ ಮಗು". ಸನ್ಯಾಸಿ ಪುನಃ ಕೇಳಿದ, "ಅತ್ತೆಮಾವಂದಿರಿದ್ದರೆ ಅವರ ವಯಸ್ಸೆಷ್ಟು?" "ಅವರಿನ್ನೂ ಮೂರು ಮೂರು ತಿಂಗಳ ತೊಟ್ಟಿಲ ಕೂಸುಗಳು".


ಹೀಗೆ ಉತ್ತರವಿತ್ತ ಗೃಹಿಣಿಯನ್ನು ಸನ್ಯಾಸಿಯು "ತಾಯೆ! ನನಗೆ ನಿನ್ನ ಮಾತು ಅರ್ಥವಾಗುತ್ತಿಲ್ಲ. ಸರಿಯಾಗಿ ಬಿಡಿಸಿ ಹೇಳು" ಎನ್ನಲು, ಆ ಗೃಹಿಣಿ ಹೀಗೆ ಹೇಳಿದಳು: "ಸ್ವಾಮೀ! ನನ್ನ ದೇಹಕ್ಕೆ ಮೂವತ್ತೈದು ವರ್ಷಗಳಾದವು. ಆದರೆ, ಇಷ್ಟು ವರ್ಷವೂ ನಾನು ಕೇವಲ ಉಣಿಸು-ತಿನಿಸು, ಉಡಿಗೆತೊಡಿಗೆಗಳಲ್ಲೇ ಕಾಲ ಕಳೆಯುತ್ತಿದ್ದೆ. ಸುಮ್ಮನೇ ವ್ಯರ್ಥವಾಗಿ ಕಳೆದ ವರ್ಷ ಲೆಕ್ಕಕ್ಕಿಟ್ಟು ಏನು ಪ್ರಯೋಜನ? ಆದ್ದರಿಂದ ನನಗೆ ಒಂದೇ ವರ್ಷ ಪ್ರಾಯ" ಎಂದಳು.


"ಇನ್ನು ನಮ್ಮ ಯಜಮಾನರು ದೊಡ್ದ ದೊಡ್ದ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದರು. ಆದರೆ ಇತ್ತೀಚೆಗೆ ಯಾರಿಂದಲೋ ಮೋಸ ಹೋಗಿ ಈಗ ಆರು ತಿಂಗಳಿಂದೀಚೆಗೆ ನನ್ನ ಜೊತೆಯಲ್ಲಿ ಭಜನೆ, ಸತ್ಸಂಗದಲ್ಲಿ ಸಹಕರಿಸುವುದರಿಂದ ಅವರ ವಯಸ್ಸು ಆರು ತಿಂಗಳೆನ್ನಲು ಅಡ್ಡಿ ಇಲ್ಲ. ನಮ್ಮ ಅತ್ತೆ ಮಾವಂದಿರು ಸತ್ಸಂಗ ಭಜನೆಯಲ್ಜಿ ತೊಡಗಿಸಿಕೊಂಡ ನಮ್ಮನ್ನು ಬೈಯುತ್ತಿದ್ದರು. ಮೂರು ತಿಂಗಳಿಂದೀಚೆಗೆ ಅತ್ತೆಗೆ ಲಕ್ವಾ (ಪಾರ್ಶ್ವವಾಯು) ಹೊಡೆದಿದೆ. ಮಾವನವರಿಗೆ ನಡೆಯಲಾಗುವುದಿಲ್ಲ. ಈಗ ಅವರು ನಮ್ಮನ್ನು ಸತ್ಸಂಗ-ಭಜನೆಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ಆದ್ದರಿಂದ ಅವರ ವಯಸ್ಸು ಮೂರೇ ತಿಂಗಳು" ಎಂದಾಗ, ಸನ್ಯಾಸಿಗೆ ಮೈ ಬೆವರಿತು.


ಆತನೆಂದ, "ತಾಯೇ! ನಿನ್ನ ಲೆಕ್ಕದಲ್ಲಿ ನಾನಿನ್ನೂ ಹುಟ್ಟಲೇ ಇಲ್ಲ" ಎಂದ. (ಸನ್ಯಾಸಿ ಸುಮ್ಮನೆ ಭಿಕ್ಷೆ ಬೇಡುತ್ತಾ ತಿರುಗುತ್ತಾ ಇದ್ದನಂತೆ.)


ಆತ್ಮಾನ್ವೇಷಣೆಯ ಹಾದಿಯಲ್ಲಿ ನಮಗೆಷ್ಟು ವಯಸ್ಸಾಗಿದೆ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬಹುದು.

ದ್ರೋಣಪುಷ್ಪಂ (ತುಂಬೆ)

             ದ್ರೋಣಪುಷ್ಪ, ದ್ರೋಣಪುಷ್ಪಿ, ಚಿತ್ರಪತ್ರಿಕಾ, ರುದ್ರಪಾದ, ರುದ್ರಪುಷ್ಪ, ಚಿತ್ರಕ್ಷಪ, ತುಮ್ಮ ಚೆಟ್ಟು, ತುಂಬೈಚಡಿ, ಚೋಟ ಕಲ್ಕುಶ, ಭೂತಮರಿ ಎಂಬ ಹೆಸರುಗಳಿಂದ ಕರೆಯುತ್ತಾರೆ.

    ತುಂಬೆ ಗಿಡವು ಪಾಳುಭೂಮಿ, ತೋಟ ಹೊಲಗಳ ಬದುಗಳ ಮೇಲೆ, ರಸ್ತೆಗಳ ಪಕ್ಕ ಕಳೆಯಂತೆ ತಾನಾಗೆ 2-3 ಅಡಿ ಬೆಳೆಯುವ ಒಂದು ಪುಟ್ಟ ಸಸ್ಯ. ಇದರಲ್ಲಿ ತುಂಬೆ, ಕಾಡು ತುಂಬೆ, ಹೆದ್ದುಂಬೆ ಎಂಬ ಮೂರ್ನಾಲ್ಕು ಪ್ರಭೇದಗಳಿದ್ದುಗಳಿದ್ದರೂ, ಬಿಳಿ ಹೂವುಗಳು ಬಿಡುವ ತುಂಬೆ ಗಿಡವನ್ನೆ ಹೆಚ್ಚಾಗಿ ಔಷಧೀಯವಾಗಿ, ಪುರಾತನ ಕಾಲದಿಂದಲೂ ಪೂರ್ವಿಕರು, ಋಷಿಮುನಿಗಳು, ಆಯುರ್ವೇದ ಪಂಡಿತರು, ವೈದ್ಯರು ಬಳಸುತ್ತಾ ಬಂದಿದ್ದಾರೆ.ಈಗಲೂ ಅನೇಕ ವ್ಯಾಧಿಗಳನ್ನು ಗುಣಪಡಿಸಲು, ಸಮೂಲ ಸಹಿತ ಆಯುರ್ವೇದ, ಯುನಾನಿ, ಸಿದ್ಧ ಔಷಧೀಯ ಪದ್ದತಿಯಲ್ಲಿ ಬಳಸುತ್ತಿದ್ದಾರೆ. ತುಂಬೆ ಗಿಡವನ್ನು ಕಳೆಸಸ್ಯದಂತೆ ತಾತ್ಸಾರದಿಂದ ಕಂಡರೂ, ಇದರಲ್ಲಿ ಅಪಾರ ಔಷಧೀಯ ಭಂಡಾರವೆ ತುಂಬಿದೆ.

    ತುಂಬೆ ಹೂವು ಶಿವನಿಗೆ ತುಂಬಾ ಪ್ರಿಯವಾದದ್ದು, ಶ್ರೇಷ್ಠ ಹಾಗು ಪವಿತ್ರವಾದದ್ದು, ಏಕಾದಶಿ, ಶಿವರಾತ್ರಿ ಹಬ್ಬಗಳಲ್ಲಿ ತುಂಬೆ ಹೂವುಗಳನ್ನು ಅರ್ಚನೆಗೆ ತಪ್ಪದೆ ಬಳಸುತ್ತಾರೆ. ವಿಶೇಷ ಪೂಜೆಗಳಲ್ಲಿ ತುಂಬೆ ಹೂವಿನ ಮಾಲೆ ತಯಾರಿಸಿ ರುದ್ರನನ್ನು ಅಲಂಕರಿಸುತ್ತಾರೆ. 

     ಒಂದು ಮಣ್ಣಿನ ಮಡಿಕೆಯಲ್ಲಿ 30-40 ತುಂಬೆ ಹೂವುಗಳು, ಚಿಟಿಕೆ ಜೀರಿಗೆ, 5-6 ಕಾಳುಮೆಣಸು, ಚಿಟಿಕೆ ಅರಸಿಣ, ಒಂದು ಸಣ್ಣ ಗೋಲಿಗಾತ್ರ ಬೆಲ್ಲ,  200ml ನೀರು ಹಾಕಿ ಚೆನ್ನಾಗಿ ಕುದಿಸಿ,100ml ಆದಾಗ ಕೆಳಗಿಳಿಸಿ, ಊಟಕ್ಕೆ ಅರ್ಧ ಗಂಟೆ ಮೊದಲು 30ml ನಂತೆ, ಬೆಳಿಗ್ಗೆ ಮಧ್ಯಾಹ್ನ ಸಂಜೆ ಸೇವಿಸಿದರೆ, ಜ್ವರ, ನೆಗಡಿ, ಕೆಮ್ಮು,ದಮ್ಮು, ಕಫ, ವಾತ, ಪಿತ್ತ,  ಮೂತ್ರಕೋಶ ಸಮಸ್ಯೆ, ಶ್ವಾಸಕೋಶ ಸಮಸ್ಯೆ ನಿವಾರಣೆಯಾಗುತ್ತೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ರಕ್ತ ಶುದ್ಧಿಯಾಗುತ್ತೆ. 

  ತುಂಬೆ ಎಲೆ ಅಥವಾ ಹೂವುಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಸ್ನಾನ ಮಾಡುವ ನೀರಲ್ಲಿ ಕಲಸಿ, ಸ್ನಾನ ಮಾಡುವುದರಿಂದ ಅನೇಕ ರೀತಿಯ ಚರ್ಮವ್ಯಾಧಿಗಳು ನಿವಾರಣೆಯಾಗುತ್ತೆ.

   ಅರ್ಧ ತಲೆನೋವು ಇದ್ದಾಗ, ಎಡಗಡೆ ಇದ್ದರೆ ಬಲಗಡೆ ಮೂಗಿನ ಒಳ್ಳೆಗೆ, ಬಲಗಡೆ ಇದ್ದರೆ ಎಡಗಡೆ ಮೂಗಿನ ಒಳ್ಳೆಗೆ 2-3 ಹನಿ ತುಂಬೆ ರಸವನ್ನು ಹಾಕುವುದರಿಂದ ಬೇಗ ಶಮನವಾಗುತ್ತೆ. ಕಿವಿ ನೋವಿದ್ದಾಗ ಇದೇರೀತಿ 2-3 ಹನಿ ಹಾಕಿದರೆ, ಕಿವಿನೋವು ನಿವಾರಣೆಯಾಗುತ್ತೆ.

    ಚೇಳು, ವಿಷಕ್ರಿಮಿ, ಜೇನುನೊಣ ಕಚ್ಚಿದಾಗ, ತುಂಬೆ ಗಿಡದ ರಸವನ್ನು ಗಾಯದ ಮೇಲೆ ಲೇಪಿಸಿ, 1 ಚಮಚ ರಸವನ್ನು ಅರ್ಧಗಂಟೆಗೊಮ್ಮೆ ಹೊಟ್ಟೆಗೆ ಕೊಟ್ಟರೆ, ವಿಷ ಇಳಿದು ಪ್ರಾಣಾಪಾಯದಿಂದ ಪಾರಾಗುತ್ತಾರೆ.

   ತುಂಬೆ ಎಲೆ ಅಥವಾ ಹೂವಿನ ರಸಕ್ಕೆ ಜೇನುತುಪ್ಪ ಕಲಸಿ ಹೊಟ್ಟೆಗೆ ಸೇವಿಸಿದರೆ, ಹುಳು, ಜಂತುಹುಳು, ಸತ್ತು ಮಲದಲ್ಲಿ ಹೊರ ಬರುತ್ತವೆ.

    ಸ್ತ್ರೀಯರಲ್ಲಿ ಸಂತಾನ ಹಾಗು ಋತಸ್ರಾವ ಸಮಸ್ಯೆಗಳು ಇದ್ದಾಗ, ತುಂಬೆ ಎಲೆ, ಕಾಳುಮೆಣಸು ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಒಂದು ಸಣ್ಣ ಗೋಲಿಗಾತ್ರ ಉಗರು ಬೆಚ್ಚಗಿನ ನೀರಲ್ಲಿ ಕಲಸಿ, ಬೆಳಿಗ್ಗೆ ಸಂಜೆ ಊಟಕ್ಕೆ ಅರ್ಧ ಗಂಟೆ ಮೊದಲು, ಮುಟ್ಟಾದ 3-4 ದಿನ ಹೊಟ್ಟೆಗೆ ತೆಗೆದುಕೊಂಡು, ಸಪ್ಪೆ ಊಟ ತಿಂದರೆ ಮೇಲಿನ ಸಮಸ್ಯೆಗಳು ನಿವಾರಣೆಗುತ್ತೆ. ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆನೋವು, ಗರ್ಭಾಶಯ ಸಮಸ್ಯೆಗಳು ದೂರವಾಗಿ ಸಂತಾನ ಭಾಗ್ಯ ಲಭಿಸುತ್ತೆ.

    ತುಂಬೆ ಎಲೆ ಹಾಗು ಕಾಳುಮೆಣಸು ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಬೆಳಿಗ್ಗೆ ಸಂಜೆ ಒಂದು ಸಣ್ಣ ಗೋಲಿಗಾತ್ರ, ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ಹೊಟ್ಟೆಗೆ ಒಂದು ವಾರ ತೆಗೆದುಕೊಂಡರೆ ಕಾಮಾಲೆರೋಗ ಗುಣವಾಗುತ್ತೆ.

    ತುಂಬೆ ಎಲೆ ರಸ ಹಾಗು ಎಳ್ಳೆಣ್ಣೆ ಸಮನಾಗಿ ತೆಗೆದುಕೊಂಡು, ಒಲೆಯಮೇಲಿಟ್ಟು ಚೆನ್ನಾಗಿ ಕುದಿಸಿ, ಎಣ್ಣೆಮಾತ್ರ ಉಳಿದಾಗ ಕೆಳಗಿಳಿಸಿ ಸೋಸಿಕೊಂಡು, ಅದಕ್ಕೆ ಚಿಟಿಕೆ ಗಡ್ಡೆ ಕರ್ಫುರಾ ಮಿಶ್ರಣಮಾಡಿ ಒಂದು ಸೀಸೆಯಲ್ಲಿ ಶೇಖರಿಸಿಟ್ಟುಕೊಂಡು, ಕೀಲುನೋವು, ವಾತನೊವು, ಮಾಂಸಖಂಡಗಳ ನೋವು ಇರುವ ಕಡೆ ಲೇಪಿಸುತ್ತಿದ್ದರೆ ನೋವು ಬೇಗ ವಾಸಿಯಾಗುತ್ತೆ.

    ತುಂಬೆ ಎಲೆ, ಕೊಮ್ಮೆ ಬೇರು, ಕಾಳುಮೆಣಸು ನುಣ್ಣಗೆ ಅರೆದು ಅವರೇಕಾಳು ಪ್ರಮಾಣದಲ್ಲಿ ಬೆಳಿಗ್ಗೆ ಸಂಜೆ ಉಗರು ಬೆಚ್ಚಗಿನ ನೀರಲ್ಲಿ ತೆಗೆದುಕೊಂಡರೆ, ಜೀರ್ಣಶಕ್ತಿ ಹೆಚ್ಚುತ್ತೆ, ಶ್ವಾಸಕೋಶಗಳು ಶುದ್ದಿಯಾಗುತ್ತೆ. 

    ತುಂಬೆ ಎಲೆ, ಶುಂಠಿ, ಬೆಲ್ಲವನ್ನು ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಮಕ್ಕಳಿಗೆ 2 ಚಿಟಿಕೆ, ದೊಡ್ಡವರು ಒಂದು ಚಮಚದಂತೆ ಬೆಳಿಗ್ಗೆ ಸಂಜೆ ಸೇವಿಸಿದರೆ, ಕಫ, ಕೆಮ್ಮು, ನೆಗಡಿ, ಗಂಟಲಕೆರೆತ ನಿವಾರಣೆಯಾಗುತ್ತೆ.

    ತುಂಬೆ ಎಲೆಗಳ ರಸಕ್ಕೆ, ನಿಂಬೆರಸ, ಅರಸಿಣ, ಕಲ್ಲುಪ್ಪು ಬೆರಸಿ, ಹುಳುಕಡ್ಡಿ, ಗಜ್ಜಿ, ನವೆ, ಇಸಬು ಗಜಕರ್ಣದ ಮೇಲೆ ಲೇಪಿಸುತ್ತಿದ್ದರೆ ಶೀಘ್ರ ಗುಣವಾಗುತ್ತೆ.

    ತುಂಬೆ ಎಲೆಗಳ ರಸಕ್ಕೆ ಬೆಲ್ಲ ಅಥವಾ ಜೇನುತುಪ್ಪ ಕಲಸಿ ಗೌತಲಮ್ಮ ಮೇಲೆ ಲೇಪಿಸುತ್ತಿದ್ದರೆ ಶೀಘ್ರ ವಾಸಿಯಾಗುತ್ತೆ.

     ಒಂದು ಚಮಚ ತುಂಬೆ ಎಲೆಯ ರಸಕ್ಕೆ ಚಿಟಿಕೆ ಕಾಳುಮೆಣಸು, ಜೀರಿಗೆ ಸೇರಿಸಿ, ಬೆಳಿಗ್ಗೆ ಸಂಜೆ ಊಟಕ್ಕೆ ಅರ್ಧ ಗಂಟೆ ಮೊದಲು ಸೇವಿಸಿದರೆ ಮಧುಮೇಹ ಹತೋಟಿಗೆ ಬರುತ್ತೆ.

     ತುಂಬೆರಸವನ್ನು ಮೂಲವ್ಯಾಧಿ ಮೇಲೆ ಲೇಪಿಸುತ್ತಿದ್ದರೆ ಶೀಘ್ರ ನಿವಾರಣೆಯಾಗುತ್ತೆ.


"ತುಂಬೆಯ ಉಪಯೋಗಗಳು ಅಪಾರವಾದದ್ದು"

        ಸೂಚನೆ:- ತುಂಬೆ ಉಪಯೋಗಿಸುವ ಮೊದಲು ಆಯುರ್ವೇದ ವೈದ್ಯರ ಸಲಹೆ ಪಡೆದುಕೊಳ್ಳಿ...

 

October 20, 2020

ಲಿಂಗಾಷ್ಟೋತ್ತರಶತನಾಮ

 

ಲಿಂಗಾಷ್ಟೋತ್ತರಶತನಾಮಾವಲಿಃ

.. ಶ್ರೀ ಲಿಂಗೇಭ್ಯೋ ನಮಃ ..

ಲಿಂಗ ಧ್ಯಾನಂ

ಲಿಂಗಮೂರ್ತಿಂ ಶಿವಂ ಸ್ತುತ್ವ ಗಾಯತ್ರ್ಯ ಯೋಗಮಾಪ್ತವಾನ್ . ನಿರ್ವಾಣಂ ಪರಮಂ ಬ್ರಹ್ಮ ವಶಿಷ್ಠೋನ್ಯಶ್ಚ ಶಂಕರಾತ್ ..

ಅಥ ಲಿಂಗಾಷ್ಟೋತ್ತರಶತನಾಮಾವಲಿಃ .

ಓಂ ಲಿಂಗಮೂರ್ತಯೇ ನಮಃ ಓಂ ಶಿವಲಿಂಗಾಯ ನಮಃ ಓಂ ಅದ್ಭುತಲಿಂಗಾಯ ನಮಃ ಓಂ ಅನುಗತಲಿಂಗಾಯ ನಮಃ ಓಂ ಅವ್ಯಕ್ತಲಿಂಗಾಯ ನಮಃ ಓಂ ಅರ್ಥಲಿಂಗಾಯ ನಮಃ ಓಂ ಅಚ್ಯುತಲಿಂಗಾಯ ನಮಃ ಓಂ ಅನಂತಲಿಂಗಾಯ ನಮಃ ಓಂ ಅನೇಕಲಿಂಗಾಯ ನಮಃ (10) ಓಂ ಅನೇಕಸ್ವರೂಪಲಿಂಗಾಯ ನಮಃ ಓಂ ಅನಾದಿಲಿಂಗಾಯ ನಮಃ ಓಂ ಆದಿಲಿಂಗಾಯ ನಮಃ ಓಂ ಆನಂದಲಿಂಗಾಯ ನಮಃ ಓಂ ಆತ್ಮಾನಂದಲಿಂಗಾಯ ನಮಃ ಓಂ ಅರ್ಜಿತಪಾಪವಿನಾಶಲಿಂಗಾಯ ನಮಃ ಓಂ ಆಶ್ರಿತರಕ್ಷಕಲಿಂಗಾಯ ನಮಃ ಓಂ ಇಂದುಲಿಂಗಾಯ ನಮಃ ಓಂ ಇಂದ್ರಿಯಲಿಂಗಾಯ ನಮಃ ಓಂ ಇಂದ್ರಾದಿಪ್ರಿಯಲಿಂಗಾಯ ನಮಃ (20) ಓಂ ಈಶ್ವರಲಿಂಗಾಯ ನಮಃ ಓಂ ಊರ್ಜಿತಲಿಂಗಾಯ ನಮಃ ಓಂ ಋಗ್ವೇದಶ್ರುತಿ ಲಿಂಗಾಯ ಓಂ ಏಕಲಿಂಗಾಯ ನಮಃ ಓಂ ಐಶ್ವರ್ಯಲಿಂಗಾಯ ನಮಃ ಓಂ ಓಂಕಾರಲಿಂಗಾಯ ನಮಃ ಓಂ ಹ್ರೀನ್ಕಾರಲಿಂಗಾಯ ನಮಃ ಓಂ ಕನಕಲಿಂಗಾಯ ನಮಃ ಓಂ ವೇದಲಿಂಗಾಯ ನಮಃ ಓಂ ಪರಮಲಿಂಗಾಯ ನಮಃ (30) ಓಂ ವ್ಯೋಮಲಿಂಗಾಯ ನಮಃ ಓಂ ಸಹಸ್ರಲಿಂಗಾಯ ನಮಃ ಓಂ ಅಮೃತಲಿಂಗಾಯ ನಮಃ ಓಂ ವಹ್ನಿಲಿಂಗಾಯ ನಮಃ ಓಂ ಪುರಾಣಲಿಂಗಾಯ ನಮಃ ಓಂ ಶ್ರುತಿಲಿಂಗಾಯ ನಮಃ ಓಂ ಪಾತಾಲಲಿಂಗಾಯ ನಮಃ ಓಂ ಬ್ರಹ್ಮಲಿಂಗಾಯ ನಮಃ ಓಂ ರಹಸ್ಯಲಿಂಗಾಯ ನಮಃ ಓಂ ಸಪ್ತದ್ವೀಪೋರ್ಧ್ವಲಿಂಗಾಯ ನಮಃ ಓಂ ನಾಗಲಿಂಗಾಯ ನಮಃ (40) ಓಂ ತೇಜೋಲಿಂಗಾಯ ನಮಃ ಓಂ ಊರ್ಧ್ವಲಿಂಗಾಯ ನಮಃ ಓಂ ಅಥರ್ವಲಿಂಗಾಯ ನಮಃ ಓಂ ಸಾಮಲಿಂಗಾಯ ನಮಃ ಓಂ ಯಜ್ಞಾಂಗಲಿಂಗಾಯ ನಮಃ ಓಂ ಯಜ್ಞಲಿಂಗಾಯ ನಮಃ ಓಂ ತತ್ವಲಿಂಗಾಯ ನಮಃ ಓಂ ದೇವಲಿಂಗಾಯ ನಮಃ ಓಂ ವಿಗ್ರಹಲಿಂಗಾಯ ನಮಃ ಓಂ ಭಾವಲಿಂಗಾಯ ನಮಃ (50) ಓಂ ರಜೋಲಿಂಗಾಯ ನಮಃ ಓಂ ಸತ್ವಲಿಂಗಾಯ ನಮಃ ಓಂ ಸ್ವರ್ಣ ಲಿಂಗಾಯ ಓಂ ಸ್ಫಟಿಕಲಿಂಗಾಯ ನಮಃ ಓಂ ಭವಲಿಂಗಾಯ ನಮಃ ಓಂ ತ್ರೈಗುಣ್ಯಲಿಂಗಾಯ ನಮಃ ಓಂ ಮಂತ್ರಲಿಂಗಾಯ ನಮಃ ಓಂ ಪುರುಷಲಿಂಗಾಯ ನಮಃ ಓಂ ಸರ್ವಾತ್ಮಲಿಂಗಾಯ ನಮಃ ಓಂ ಸರ್ವಲೋಕಾಂಗಲಿಂಗಾಯ ನಮಃ (60) ಓಂ ಬುದ್ಧಿಲಿಂಗಾಯ ನಮಃ ಓಂ ಅಹಂಕಾರಲಿಂಗಾಯ ನಮಃ ಓಂ ಭೂತಲಿಂಗಾಯ ನಮಃ ಓಂ ಮಹೇಶ್ವರಲಿಂಗಾಯ ನಮಃ ಓಂ ಸುಂದರಲಿಂಗಾಯ ನಮಃ ಓಂ ಸುರೇಶ್ವರಲಿಂಗಾಯ ನಮಃ ಓಂ ಸುರೇಶಲಿಂಗಾಯ ನಮಃ ಓಂ ಮಹೇಶಲಿಂಗಾಯ ನಮಃ ಓಂ ಶಂಕರಲಿಂಗಾಯ ನಮಃ ಓಂ ದಾನವನಾಶಲಿಂಗಾಯ ನಮಃ (70) ಓಂ ರವಿಚಂದ್ರಲಿಂಗಾಯ ನಮಃ ಓಂ ರೂಪಲಿಂಗಾಯ ನಮಃ ಓಂ ಪ್ರಪಂಚಲಿಂಗಾಯ ನಮಃ ಓಂ ವಿಲಕ್ಷಣಲಿಂಗಾಯ ನಮಃ ಓಂ ತಾಪನಿವಾರಣಲಿಂಗಾಯ ನಮಃ ಓಂ ಸ್ವರೂಪಲಿಂಗಾಯ ನಮಃ ಓಂ ಸರ್ವಲಿಂಗಾಯ ನಮಃ ಓಂ ಪ್ರಿಯಲಿಂಗಾಯ ನಮಃ ಓಂ ರಾಮಲಿಂಗಾಯ ನಮಃ ಓಂ ಮೂರ್ತಿಲಿಂಗಾಯ ನಮಃ (80) ಓಂ ಮಹೋನ್ನತಲಿಂಗಾಯ ನಮಃ ಓಂ ವೇದಾಂತಲಿಂಗಾಯ ನಮಃ ಓಂ ವಿಶ್ವೇಶ್ವರಲಿಂಗಾಯ ನಮಃ ಓಂ ಯೋಗಿಲಿಂಗಾಯ ನಮಃ ಓಂ ಹೃದಯಲಿಂಗಾಯ ನಮಃ ಓಂ ಚಿನ್ಮಯಲಿಂಗಾಯ ನಮಃ ಓಂ ಚಿದ್ಘನಲಿಂಗಾಯ ನಮಃ ಓಂ ಮಹಾದೇವಲಿಂಗಾಯ ನಮಃ ಓಂ ಲಂಕಾಪುರಲಿಂಗಾಯ ನಮಃ ಓಂ ಲಲಿತಲಿಂಗಾಯ ನಮಃ (90) ಓಂ ಚಿದಂಬರಲಿಂಗಾಯ ನಮಃ ಓಂ ನಾರದಸೇವಿತಲಿಂಗಾಯ ನಮಃ ಓಂ ಕಮಲಲಿಂಗಾಯ ನಮಃ ಓಂ ಕೈಲಾಶಲಿಂಗಾಯ ನಮಃ ಓಂ ಕರುಣಾರಸಲಿಂಗಾಯ ನಮಃ ಓಂ ಶಾಂತಲಿಂಗಾಯ ನಮಃ ಓಂ ಗಿರಿಲಿಂಗಾಯ ನಮಃ ಓಂ ವಲ್ಲಭಲಿಂಗಾಯ ನಮಃ ಓಂ ಶಂಕರಾತ್ಮಜಲಿಂಗಾಯ ನಮಃ ಓಂ ಸರ್ವಜನಪೂಜಿತಲಿಂಗಾಯ ನಮಃ (100) ಓಂ ಸರ್ವಪಾತಕನಾಶನಲಿಂಗಾಯ ನಮಃ ಓಂ ಗೌರಿಲಿಂಗಾಯ ನಮಃ ಓಂ ವೇದಸ್ವರೂಪಲಿಂಗಾಯ ನಮಃ ಓಂ ಸಕಲಜನಪ್ರಿಯಲಿಂಗಾಯ ನಮಃ ಓಂ ಸಕಲಜಗದ್ರಕ್ಷಕಲಿಂಗಾಯ ನಮಃ ಓಂ ಇಷ್ಟಕಾಮ್ಯಾರ್ಥಫಲಸಿದ್ಧಿಲಿಂಗಾಯ ನಮಃ ಓಂ ಶೋಭಿತಲಿಂಗಾಯ ನಮಃ ಓಂ ಮಂಗಲಲಿಂಗಾಯ ನಮಃ (108)

ಇತಿ ಲಿಂಗಾಷ್ಟೋತ್ತರ ಶತ ನಾಮಾವಲಿ ಸಮಾಪ್ತಃ


ಶ್ರೀಶಿವಪಂಚಾಕ್ಷರಾಷ್ಟೋತ್ತರಶತನಾಮಾವಲಿಃ

 

ಶ್ರೀಶಿವಪಂಚಾಕ್ಷರಾಷ್ಟೋತ್ತರಶತನಾಮಾವಲಿಃ

ಶ್ರೀಗಣೇಶಾಯ ನಮಃ . ಓಂ ಓಂಕಾರರೂಪಾಯ . ಓಂಕಾರಾಯ . ಓಂಕಾರಪದ್ಮನಿಲಯಾಯ . ಓಂಕಾರನಿಲಯಾಯ . ಓಂಕಾರಬೀಜಾಯ . ಓಂಕಾರಸುಲಕ್ಷಣಾಯ . ಓಂಕಾರಮಂತ್ರಾಯ . ಓಂಕಾರತಂತ್ರಾಯ . ಓಂಕಾರನಿವಾಸಿನೇ . ಓಂಕಾರಯಂತ್ರಾಯ . ಓಂಕಾರಪೀಠಾಯ . ಓಂಕಾರವಿಭೂಷಣಾಯ . ಓಂಕಾರವಾಚ್ಯಾಯ . ಓಂಕಾರಲಕ್ಷ್ಯಾಯ . ಓಂಕಾರಸುಪೂಜಿತಾಯ . ಓಂಕಾರವೇದೋಪನಿಷದೇ . ಓಂಕಾರಪ್ರದಕ್ಷಿಣಾಯ . ಓಂಕಾರವಾಚಾಮುದ್ದಂಡಪಂಡಿತಾಯ . ನಕಾರರೂಪಾಯ . ನದ್ಯಾಯ ನಮಃ . 20 ಓಂ ನಟರಾಜಾಯ ನಮಃ . ನಟೇಶ್ವರಾಯ . ನಾರಾಯಣಸಖ್ಯೇ . ನಾಥಾಯ . ನಗವೇಷಧರಾಯ . ನಟಾಯ . ನಕ್ಷತ್ರಮಾಲಾಭರಣಾಯ . ನಾಮರೂಪವಿವರ್ಜಿತಾಯ . ನಯನಾದೃಶ್ಯರೂಪಾಯ . ನಿರ್ಮಲಾಯ . ನಂದಿವಾಹನಾಯ . ನವಗ್ರಹಸ್ವರೂಪಾಯ . ನವ್ಯಹವ್ಯಾಗ್ರಭೋಜನಾಯ . ನಾದಪ್ರಿಯಾಯ . ನಾದರೂಪಾಯ . ನಾಮಪಾರಾಯಣಪ್ರಿಯಾಯ . ಮಕಾರರೂಪಾಯ . ಮಂತ್ರಜ್ಞಾಯ . ಮಂದಾಯ . ಮನ್ಮಥನಾಶನಾಯ ನಮಃ . 40 ಓಂ ಮಂತ್ರಾಲಯಾಯ ನಮಃ . ಮಹೇಶಾಯ . ಮಯೂರಪುರವಾಸಿನೇ . ಮಹಾದೇವಾಯ . ಮಹಾನಾಥಾಯ . ಮಹಾಭೈರವಪೂಜಿತಾಯ . ಮಹಾಕಾಮೇಶ್ವರಾಯ . ಮತ್ತಾಯ . ಮಾನಸಾಯ . ಮಹೇಶ್ವರಾಯ . ಮಹಾಬಾಹವೇ . ಮಹಾಯಜ್ಞಾಯ . ಮಹಾನಿಧಯೇ . ಶಿಕಾರರೂಪಾಯ . ಶಿಷ್ಟೇಷ್ಟಾಯ . ಶಿತಿಕಂಠಾಯ . ಶಿವಾಲಯಾಯ . ಶಿವರೂಪಾಯ . ಶಿವಾನಂದಾಯ . ಶಿಖಿವಾಹನಜನ್ಮಭುವೇ ನಮಃ . 60 ಓಂ ಶಿವಾಯ ನಮಃ . ಶಿವಮಯಾಯ . ಶಿಷ್ಟಪೂಜಿತಾಯ . ಶಿವದಾಯ . ಶಿವಯೋಗಾಯ . ಶಿವಜ್ಞಾನಿನೇ . ಶಿವಚೈತನ್ಯಮಾನಸಾಯ . ಶಿವಪ್ರದಾಯ . ಶಿವಾರಾಧ್ಯಾಯ . ಶಿವಾಲಾಲಿತವಿಗ್ರಹಾಯ . ವಕಾರರೂಪಾಯ . ವಾಮಾಂಗಸುಂದರಾಯ . ವಾಯುವಂದಿತಾಯ . ವಾಗ್ವಿಭೂತಯೇ . ವಾಮದೇವಾಯ . ವಾಲ್ಮಿಕೀಪರಿಪೂಜಿತಾಯ . ವಾತುಲಾಗಮಸಮ್ಸೇವಿತಾಯ . ವರಿಷ್ಠಾಯ . ವರದಾಯಕಾಯ . ವಾಗ್ವಿಕತ್ಥಚರಿತ್ರಾಯ ನಮಃ . 80 ಓಂ ವಾತ್ಸಲ್ಯಪರಮೇಶ್ವರಾಯ ನಮಃ . ವರದಾಭಯಹಸ್ತಾಯ . ವರೇಣ್ಯಾಯ . ವಸುದಾಯ . ವಸವೇ . ವದಾನ್ಯಾಯ . ವಾಮನಯನಾಯ . ವಾಮದೇವಪ್ರಪೂಜಿತಾಯ . ಯಕಾರರೂಪಾಯ . ಯಂತ್ರಜ್ಞಾಯ . ಯಜ್ಞಕರ್ಮಫಲಪ್ರದಾಯ . ಯಜ್ಞಪ್ರಿಯಾಯ . ಯಜ್ಞರೂಪಾಯಾ . ಯಜ್ಞನಾಥಾಯ . ಯಜಪತಯೇ . ಯಜ್ಞಾಯ . ಯಜ್ಞಪತಯೇ . ಯಜ್ಞಪಾಲನತತ್ಪರಾಯ . ಯಜ್ಞಾಸಕ್ತಾಯ . ಯಜ್ಞಭೋಕ್ತ್ರೇ ನಮಃ . 100 ಓಂ ಯತಿವೇದ್ಯಾಯ ನಮಃ . ಯತೀಶ್ವರಾಯ . ಯಜಮಾನಸ್ವರೂಪಾಯ . ಯಜ್ಞಾನಾಂ ಫಲದಾಯಕಾಯ . ಯಜುರ್ವೇದಸ್ವರೂಪಾಯ . ಯಕ್ಷರಾಜನಿಷೇವಿತಾಯ . ಶ್ರೀಸಾಂಬಪರಮೇಶ್ವರಾಯ . ಸದಾಶಿವಾಯ ನಮಃ . 108 ಇತಿ ಶ್ರೀಶಿವಪಂಚಾಕ್ಷರಾಷ್ಟೋತ್ತರಶತನಾಮಾವಲಿಃ ಸಮಾಪ್ತಾ .

October 13, 2020

ಇಷ್ಟಲಿಂಗದ ಮೇಲೆ ಕಂತೆ

 ಇಷ್ಟಲಿಂಗದ ಮೇಲೆ ಕಂತೆ ಏಕೆ ಕೂಡಿಸಬೇಕು 

****************************



ಇಷ್ಟಲಿಂಗ ಪೂಜೆಯಿಂದ ಅಧ್ಯಾತ್ಮಿಕ ಪ್ರಗತಿಯ ಜೋತೆಗೆ ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವು ಸುಧಾರಣೆಯಾಗಿ ಜೀವನವೆಲ್ಲ ಆನಂದಮಯವಾಗಿರುತ್ತದೆ. 


ಇಷ್ಟಲಿಂಗ ದ ಮೇಲೆ ಚಿದ್ರಸ ಕಂತೆ ಏಕೆ ಎಂಬ ಪ್ರಶ್ನೆ ಬಹಳ ಜನರ ಮನಸಿನಲ್ಲಿ ಬಂದಿರುತ್ತದೆ. ಸಂಪೂರ್ಣ ಮಾಹಿತಿ ಇರಲ್ಲ.

    

ಕಂತೆಯಲ್ಲಿ ಗೇರೆಣ್ಣೆಯನ್ನೆ ಏಕೆ ಬಳಸುತ್ತಾರೆಂಬುದು ಸಹ ವಿಚಾರಯೋಗ್ಯ ಅಂಶವೇ. 


ಇಷ್ಟಲಿಂಗಕ್ಕೆ ಮೇಲೆ ಲೇಪಿಸಲು ನಿರ್ಮಿಸಿದ ಕಂಥೆಯು ಭಲ್ಲಾತಕೀ(ಗೇರೆಣ್ಣೆ)ಯಿಂದ ತಯಾರಿಸಲ್ಪಟ್ಟಿರುತ್ತದೆ. 

 

"ಆಯಸ್ಕಾಂತ ಭಲ್ಲಾತಕೀ....... ಇತ್ಯೇನಾನಿ ರಸಾಯನಿ (ವೈದ್ಯಶತಶ್ಲೋಕಿ ಪುಟ(109) 

ಎಂಬ ಉಕ್ತಿಯಲ್ಲಿ ಆಯಸ್ಕಾಂತ ಹಾಗೂ ಗೇರೆಣ್ಣೆಗಳು ರಸಾಯನ ಔಷಧಗಳೆಂದು ಪ್ರತಿಪಾದಿಸಲ್ಪಟ್ಟಿವೆ.


ಗೇರು ಅಥವಾ ಭಲ್ಲಾತಕಕ್ಕೆ ಆಯುರ್ವೇದ ಶಾಸ್ತ್ರದಲ್ಲಿ ಬಹಳ ಮಹತ್ವವಿದೆ. 

"ಭಲ್ಲಾತಕ ಕ್ಷೀರಂ ತತ್ಪ್ರಯೋಗಾತ್ ವರ್ಷಶತಂ ಅಜರಂ ವಯಸ್ತಿಷ್ಠತೀತಿ ಸಮಾನಂ (ಚರಕ ಸಂಹಿತೆ, ಚಿಕಿತ್ಸಾಧ್ಯಾಯ)


ವಿಶುದ್ದಗೊಳಿಸದೇ ಬಳಸಿದಾಗ ಹಲವಾರು ಬಾರಿ ಸುಡುವ ಗಾಯಗೊಳಿಸುವ ಗೇರು, ನೂರುಕಾಲ ಬಾಳು ನೀಡುವ ಅಮೃತೌಷಧವೆಂದೂ ಪರಿಗಣಿತವಾಗಿದೆ. ಇಂತಹ  ಸುಡುವ ಅಗ್ನಿಯ ತೆರದಿ ಇರುವ ಗೇರು ಯಥೋಚಿತವಾಗಿ ಬಳಸಿದಾಗ ಅಮೃತಸದೃಶವಾಗಿ ಮಾನವ ಶರೀರಕ್ಕೆ ಉಪಕರಿಸುತ್ತದೆ.


ಬಯಲು ಸೀಮೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕೇರುಮರದ ಔಷಧ ಪ್ರಭಾವ ಮೂರು ಸಾವಿರ ವರ್ಷಗಳಿಂದ ನಮ್ಮ ಜನರಿಗೆ ಚಿರಪರಿಚಿತ.

ಕೇರುಕಾಯಿ (ಕ್ಯಾರು ಅಂತಾರೆ ಹಳ್ಳಿಕಡೆ)  

ಕೇರುಕಾಯಿಯನ್ನು ನೋಡಿದರೆ ತಟ್ಟನೇ ನಮಗೆ ಪಾಣಿಪೀಠದ ಮೇಲಿನ (ಕೈಯಲ್ಲಿ) ಲಿಂಗದ ನೆನಪಾಗುತ್ತದೆ. ದುಂಡನೆಯ ಮಾಂಸಲ ಹಣ್ಣು ಪಾಣಿಪೀಠದಂತಿದೆ.  ನಡುವೆ ಬಾಣದಾಕಾರದ ಲಿಂಗವನ್ನು ಹೋಲುವ ಬೀಜ. ಜನಪದೀಯರಲ್ಲಿ ಒಂದು ಸಾದೃಶ್ಯ ಸಿದ್ದಾಂತ ಬಹಳ ಮಹತ್ವ ಪಡೆದಿದೆ. ಅಥರ್ವ ವೇದದ ಕಾಲದಿಂದಲೂ ಈ ಸಿದ್ದಾಂತವು ಸಾಧಿತವಾಗಿದೆ.  ಲಿಂಗಾಕಾರದ ಕೇರುಹಣ್ಣನ್ನು ಕೇವಲ ಆಕಾರದ ದೃಷ್ಟಿಯಿಂದ ಮಾತ್ರ ಲಿಂಗದ ಕಂತೆಗೆ ಬಳಸಲಾಗಿದೆಯೆಂದರೆ ಅಸಮರ್ಥನೀಯವೆನಿಸುತ್ತದೆ.


ಭಲ್ಲಾತಕ ಅಥವಾ ಕೇರು ಬಹಳ ಶಕ್ತಿಶಾಲಿ ಔಷಧ, ಉತ್ತಮ ರಸಾಯನವಾಗಿಯೂ ಕಾರ್ಯನಿರ್ವಹಿಸುತ್ತದೆ. ದೇಹದ ಅಕಾಲ ಮುಪ್ಪನ್ನು ನಿವಾರಿಸುತ್ತದೆ. ರೋಗದ ಕ್ಷಮತೆಯನ್ನು ವರ್ಧಿಸುತ್ತದೆ. ಇನ್ನು ಲಿಂಗವನ್ನು ಅಗ್ನಿ, ತೇಜಸ್ಸು ಎಂಬ ವಿಶೇಷಣಗಳಿಂದಲೂ ಕರೆಯಲಾಗುತ್ತದೆ.  

ಭಲ್ಲಾತಕವನ್ನೂ ಅಗ್ನಿ ಎಂಬ ಪರ್ಯಾಯ ನಾಮದಿಂದ ಕರೆಯಲಾಗುತ್ತದೆ.  ಗುಣ, ಕರ್ಮದಲ್ಲಿ ಅದು ಅಗ್ನಿಸಮನಾಗಿಯೇ ಇದೆ.  ಪಾಪರಾಶಿ ಮತ್ತು ರೋಗರಾಶಿಗಳನ್ನು ಅದು ಭಸ್ಮೀಕರಿಸುವುದೆಂದು ಕಂತೆಗೆ ಬಳಸಿದರು. ಕಾಮಾಲೆ ರೋಗದಲ್ಲಿ 'ಚಿತ್ರಮೂಲ' ವೆಂಬ ಹೆಸರಿನ ದ್ರವ್ಯವನ್ನು ಬಳಸಲಾಗುತ್ತದೆ. ಅದೂ ಕೂಡ ಸುಡುವ ಗುಣವುಳ್ಳದ್ದಾಗಿದ್ದರೂ ಅದನ್ನು ಕಂತೆಗೆ ಬಳಸುವುದಿಲ್ಲ.

ಕೇರನ್ನು ಬಳಸಿ ಲಿಂಗದ ಆಯುಷ್ಯ ಮತ್ತು ಆ ಲಿಂಗವನ್ನು ಧರಿಸುವವನ ಆಯುಷ್ಯವನ್ನು ವೃದ್ಧಿಸುವುದು ಪ್ರಾಚೀನರ ಪ್ರಧಾನ ಗುರಿಯಾಗಿತ್ತು. 

ಹೀಗಾಗಿ ಕಂತೆಯಲ್ಲಿ ಗೇರೆಣ್ಣೆಯನ್ನೇ ಆಧ್ಯ ಪದಾರ್ಥವಾಗಿ ಬಳಸಲಾಗುತ್ತದೆ.

     ಗೇರೆಣ್ಣೆಯನ್ನು ಶುದ್ಧಗೊಳಿಸಿ ಶೂಲ, ಮೂಲವ್ಯಾಧಿ ಮತ್ತು ಅತಿಸಾರ ಮುಂತಾದ ರೋಗಗಳಿಗೆ ಉಪಯೋಗಿಸುವ ವಿಧಾನವು "ಗುಣ ಭೂಷಣ" ವೈಧ್ಯನಿಘಂಟುವಿನಿಂದ ತಿಳಿದುಬರುತ್ತದೆ. ಚರಕಸಂಹಿತೆ ಚಿಕಿತ್ಸಾಸ್ಥಾನ 1 ನೇ ಅಧ್ಯಾಯದಲ್ಲಿ ಭಲ್ಲಾತಕೀ ಅಂದರೆ ಗೇರೆಣ್ಣೆಯನ್ನು ಶುದ್ಧಗೊಳಿಸಿ ಯೋಗ್ಯ ರೀತಿಯಿಂದ ಉಪಯೋಗಿಸಿದರೆ ಅಮೃತ ಸದೃಶವಾಗುತ್ತದೆ ಎಂಬುದನ್ನು ತಿಳಿಸಿ, ಅದರಿಂದ ಭಲ್ಲಾತಕಘೃತ, ಭಲ್ಲಾತಕಕ್ಷೀರ, ಭಲ್ಲಾತಕಕ್ಷೌದ್ರ, ಭಲ್ಲಾತಕಗುಡ, ಭಲ್ಲಾತಕಯೂಷ, ಭಲ್ಲಾತಕತೈಲ, ಭಲ್ಲಾತಕಪಲಲ, ಭಲ್ಲಾತಕಸಕ್ತು, ಭಲ್ಲಾತಕ ಲವಣ ಮತ್ತು ಭಲ್ಲಾತಕ ತರ್ಪಣವೆಂಬ ಹತ್ತು ವಿಧವಾದ ಔಷಧವನ್ನು ತಯಾರಿಸಿ ಉಪಯೋಗಿಸುವ ರೀತಿಯನ್ನು ತಿಳಿಸಲಾಗಿದೆ ಎಂಬ ವಿಷಯವನ್ನು ಶ್ರೀ ಜಿ.ಟಿ. ಅಕ್ಕುಲಯ್ಯ ದೀಕ್ಷಿತರು " ಇಷ್ಟಲಿಂಗ ವಿಜ್ಞಾನ" ಪುಸ್ತಕದಲ್ಲಿ ವಿಶದಪಡಿಸಿದ್ದಾರೆ.


ಸಸ್ಯಾಶಾಸ್ತ್ರದನುಸಾರ Semecarpus anacardium Linn ಎಂದು ಕರೆಯಲ್ಪಡುವ ಭಲ್ಲಾತಕವು ಭಲ್ಲಿ, ಅರುಸ್ಕರ, ಅಗ್ನಿಕ, ಅಗ್ನಿಮುಖ, ವೀರವೃಕ್ಷ ಇತ್ಯಾದಿ ಪರ್ಯಾಯವಾದ ನಾಮಗಳಿಂದ ಗುರುತಿಸಲ್ಪಡುವ ಇದು ಆಂಗ್ಲಭಾಷೆಯಲ್ಲಿ Marking Nut ಎಂಬ ನಾಮದಿಂದ ಪ್ರಸಿದ್ಧವಾಗಿದೆ. Anacardiac acid, cardol, Catechol, Anacardol and Bhilwanol oil ಗಳನ್ನು ಹೊಂದಿರುವ ಇದರ ಹಣ್ಣುಗಳು ಕುಷ್ಠ, ಉಪದಂಶ, ಶುಕ್ರದೌರ್ಬಲ್ಯ, ಮಸ್ತಿಷ್ಕ, ನರದೌರ್ಬಲ್ಯ, ಅಪಸ್ಮಾರ, ಅರ್ಶ, ಯಕೃತ್ - ಪ್ಲೀಹ ವಿಕಾರ, ಹೃದ್ರೋಗ, ಗ್ರಹಣಿ, ಸರ್ಪದಂಶ, ವಾತವಿಕಾರ,ಜ್ವರ ಮುಂತಾದ ರೋಗಗಳಲ್ಲಿ ಅತ್ಯುಪಯುಕ್ತವಾಗಿವೆ. ಮಧುರ -ಕಷಾಯ ರಸದ, ಲಘು ಗುಣವುಳ್ಳ ಸ್ನೀಗ್ಯ- ತೀಕ್ಷ್ಣ ವೀರ್ಯದ, ಮಧುರ ವಿಪಾಕದ ಈ ದ್ರವ್ಯವು ಕಫವಾತ ಶಾಮಕವಾಗಿ , ಪಿತ್ತಸಂಶೋಧಕವಾಗಿಯೂ ಕೆಲಸ ಮಾಡುತ್ತದೆ. ಮೂಲವ್ಯಾಧಿ, ಅಜಿರ್ಣದಿಂದ ಬಳಲುವವರಿಗೆ ಇದು ಉತ್ತಮ ಔಷಧಿಯಾಗಿದೆ.  ಮತವ್ಯಾಧಿ ( Rheumatoid Arthritis ಯಲ್ಲಿ, ಉಳುಕುನೋವುಗಳಿಗೆ , ಕೆಮ್ಮು- ದಮ್ಮುಗಳಿಗೆ ಪ್ರಯೋಜನಕಾರಿಯಾಗಿದೆ. Syphilis, Epilepsy ಗಳಂಥ ಕಷ್ಟಸಾಧ್ಯ ರೋಗಗಳಿಗೂ ಇದು ದಿವ್ಯೌಷದವಾಗಿದೆ. 

ಕೆಲವರಿಗೆ ಅಲರ್ಜಿ ಸಮಸ್ಯೆ ಇರುವವರಿಗೆ ಇದರ ರಸ ತಗುಲಿದರೆ ಕೆಲವರಿಗೆ ವಿಪರೀತ ಕೆರೆತ,ಗಂಧೆಗಳುತ್ಪನ್ನವಾಗಬಹುದು ಇಂತಹವರು ವೈದ್ಯರ ಮಾರ್ಗದರ್ಶನದಲ್ಲಿಯೇ ಇದನ್ನು ಉಪಯೋಗಿಸಬೇಕು. ಇದರ ನೇರ ಬಳಕೆ ನಿಷಿದ್ಧ ವಿದ್ದು ಸೂಕ್ತ ಶೋಧನವಿಧಿಯಿಂದ ಸಂಸ್ಕರಿಸಿದ ನಂತರವೇ ಇದನ್ನು ಬಳಸಬೇಕು.


ಕಂಥೆ:-


ಇಷ್ಟಲಿಂಗವನ್ನು ಸಿದ್ದಪಡಿಸಲು, ಶಿಲಾಲಿಂಗದ ಹೊರಗವಚದ ನಿರ್ಮಾಣಕ್ಕೆ ಬೇಕಾಗುವ ವಸ್ತುವನ್ನು ಕಂತೆ, ಕಾಂಥೆ, ಕಂತಿ ಇತ್ಯಾದಿ ಕರೆಯಲಾಗುತ್ತದೆ. ಈ ಕಂಥೆಯನ್ನು ಕೇರು, ಮಣ್ಣಿನ ಗಡಿಗೆ,ಮುಚ್ಚಳ,ಕೊಡ, ಆಕಳ ಬೆರಣಿ,ಹಾಸುಗಲ್ಲು, ರುಬ್ಬುಗಲ್ಲು, ಚಮಟಿಗೆ, ಕಡಾಯಿ ,ಕಡಚಗಿ, ಹಣತೆ, ರಾಳ , ಜಾಲ್ದೋಪ, ಬತ್ತಿ, ಕುಸುಬಿ ಎಣ್ಣೆ, ಆಕಳತುಪ್ಪ, ಕರ್ಪೂರ, ಶುದ್ಧ ಧೋತರ, ಬಟ್ಟೆ ಇತ್ಯಾದಿ ವಸ್ತುಗಳ ಸಹಾಯದಿಂದ ತಯಾರಿಸಲ್ಪಟ್ಟಿರುತ್ತದೆ. 

ಕಂಥೆಗೆ ಕೇರೆಣ್ಣೆ/ ಗೇರೆಣ್ಣೆಯೇ ಮುಖ್ಯವಾದ ಕಚ್ಛಾಸಾಮಗ್ರಿ. ಇದರೊಂದಿಗೆ ಸೇರಿಸುವ ಪದಾರ್ಥಕ್ಕನುಗುಣವಾಗಿ ನಾಲ್ಕು ಪ್ರಕಾರದ ಕಂಥೆಗಳನ್ನು ಹೇಳಲಾಗುತ್ತದೆ.  ಸಾದಾ ಕಂಥೆ, ಎಣ್ಣೆಕಂಥೆ, ತುಪ್ಪದಕಂಥೆ, ಕರ್ಪೂರದ ಕಂಥೆ ಎಂದು ನಾಲ್ಕು ವಿಧದ ಕಂಥೆಗಳು ಬಳಕೆಯಲ್ಲಿವೆ. ಎಣ್ಣೆ, ಕರ್ಪೂರ ,ತುಪ್ಪ, ದಟ್ಟಕಾಡಿಗೆಯ ಮಸಿಯನ್ನು ಮೂಲಕಂಥೆಯೊಡನೆ ಮಿಶ್ರ ಮಾಡಿದಾಗ ಆಯಾ ಮೂಲವಸ್ತುವಿನ ಕಂಥೆಯೆಂಬ ಪರಿಭಾಷೆಯೊಂದಿಗೆ ಗುರುತಿಸಲಾಗುತ್ತದೆ.

    ಇಷ್ಟಲಿಂಗ ಪೂಜೆಯಲ್ಲಿ ಹೇಳಿದ ಪಿಷ್ಠಾದಿ ಲೇಪನಗಳು ,ಪಂಚಾಮೃತಾದಿ ಅಭೀಷೇಕಗಳು ಕಂಥೆಯಲ್ಲಿ ಉಪಯೋಗಿಸಲ್ಪಟ್ಟ ಗೇರೆಣ್ಣೆಯನ್ನು ಆಯುರ್ವೇದ ಪದ್ದತಿಯಂತೆ ಸಹಜವಾಗಿ ಪ್ರತಿದಿವಸ ಶುದ್ಧಗೊಳಿಸುತ್ತವೆ.

ಒಂದು


ಹೀಗೆ ಪೂಜಿಸಲ್ಪಟ್ಟ ಇಷ್ಟಲಿಂಗದ ಅಭಿಷೇಕೋದಕ ಪ್ರೋಕ್ಷಣ ಹಾಗೂ ಲಿಂಗೋದಕವನ್ನು ಪ್ರತಿದಿನ ಪ್ರಾಶನ ಮಾಡುವುದರಿಂದ ಶಾರೀರಿಕ ರೋಗಗಳೆಲ್ಲ ಸಹಜವಾಗಿ ನಿವೃತ್ತಿಯಾಗಿ ಉತ್ತಮ ಆರೋಗ್ಯ ಲಾಭವು ಪ್ರಾಪ್ತವಾಗುವುದು.


ದೇಹದ ಮೇಲೆ ಇಷ್ಟಲಿಂಗ ಧರಿಸಬೇಕೆಕೆ ?

***********************************

 ಆಕಳಿಗೆ ಮೈಮೇಲೆ ಹುಣ್ಣು ಆದಾಗ ಪಶುವೈದ್ಯನು ಬಂದು ಔಷಧ ಕೊಟ್ಟು ಅದನ್ನು ಆಕಳ ತುಪ್ಪದಲ್ಲಿ ಬೆರೆಸಿ ಗಾಯಕ್ಕೆ ಲೇಪಿಸಲು ಹೇಳುತ್ತಾನೆ. ಜಾಣನಾದ ಆಕಳ ಯಜಮಾನನು "ಅದು ಕರೆವ ಹಸು, ಅದರ ಕೆಚ್ಚಲಲ್ಲಿ ಹಾಲಿದೆ, ಆ ಹಾಲಿನಲ್ಲಿ ತುಪ್ಪವಿದ್ದೇ ಇದೆ. ಆದ್ದರಿಂದ ಔಷಧವನ್ನು ಮಾತ್ರ ಹುಣ್ಣಿಗೆ ಹಚ್ಚಿದರೆ ಸಾಕು" ಎಂದು ತಿಳಿದರೆ ಆ ಹುಣ್ಣು ಮಾಯದು. ಅದಕ್ಕಾಗಿ ಹಾಲು ಕರೆದು, ಕಾಯಿಸಿ, ಹೆಪ್ಪು ಹಾಕಿ, ಮೊಸರು ಕಡೆದು, ಬೆಣ್ಣೆ ತೆಗೆದು, ಅದನ್ನು ಕಾಯಿಸಿ ತುಪ್ಪ ಮಾಡಿ ಅದನ್ನು ಔಷಧಕ್ಕೆ ಬೆರೆಸಿ ಗಾಯಕ್ಕೆ ಬಳಿದಾಗಲೇ ಅದು ವಾಸಿಯಾದೀತು! ಅದರಂತೆ ಮಾನವನ ಶರೀರದಲ್ಲಿ ಶಿವಕಲೆ ಇರುವುದು ನಿಜ. ಮಾನವನಿಗೆ ಬಂದಿರುವ ಹುಟ್ಟುಸಾವು ಎಂಬ "ಭವರೋಗ"ವು ವಾಸಿಯಾಗಬೇಕಾದರೆ ಸದ್ಗುರು ಎಂಬ ಭವರೋಗವೈದ್ಯನು ಇಷ್ಟಲಿಂಗವೆಂಬ ಔಷಧಕ್ಕೆ ಅವ(ಆ ಶಿಷ್ಯ)ನಲ್ಲಿಯೇ ಇರುವ ಶಿವಕಲೆಯನ್ನು ಆಕರ್ಷಿಸಿ, ಇಷ್ಟಲಿಂಗದಲ್ಲಿ ಸ್ಥಾಪಿಸಿ, ಅದನ್ನು ಶಿಷ್ಯನಿಗೆ ಧರಿಸಿ, ವಿಧ್ಯುಕ್ತವಾಗಿ ಭಕ್ತಿಯಿಂದ ಆರಾಧಿಸಲು ಹೇಳುತ್ತಾನೆ. ಗುರುವಿನ ಆದೇಶದಂತೆ ಆ ಲಿಂಗವನ್ನು ಪೂಜಿಸಿ, ಅನುಸಂಧಾನ ಮಾಡುವುದರಿಂದ ಮಾನವನು ಭವರೋಗದಿಂದ ಬಿಡಲ್ಪಟ್ಟು ಮುಕ್ತನಾಗುತ್ತಾನೆ. ಆದ್ದರಿಂದ ಇಷ್ಟಲಿಂಗವನ್ನು ದೇಹದ ಮೇಲೆ ಅವಶ್ಯವಾಗಿ ಧರಿಸಬೇಕು.


                            1)ಇಷ್ಟಲಿಂಗದ  ಒಳಗಡೆ ಇರುವ ಚಿಕ್ಕದಾದ ಪೀಠಿಕೆಯು ತುಂಬಾ  ಸೂಕ್ಷ್ಮವಾಗಿ ( ಸೂಕ್ಷ್ಮ ವಸ್ತು ಗ ಳಿಂದ ) ರೂಪಿತವಾಗಿರುತ್ತದೆ..!!              ಇಷ್ಟಲಿಂಗಕ್ಕೆ  ವಿವಿಧ  ಪೂಜಾ ವಿಧಾನದ  ಅಭಿಷೇಕದ ವಸ್ತು ಗಳಿಂದ  ಹಾನಿಯಾಗುವ  ಸಂ ಭವವಿರುತ್ತದೆ  -  ಹಾಗಾಗಿ  ಅದ ರ  ರಕ್ಷಣಾ  ಕವಚವಾಗಿ -  ಗೋ ಳಾಕಾರದಲ್ಲಿ  ಕಂತಿ ( ಕಾಂತಿ)   ಕಟ್ಟಿರುತ್ತಾರೆ  ಹಾಗೂ  ಅದಕ್ಕೆ  ಹೊಳಪು  ನೀಡಲಾಗಿರು ತ್ತದೆ ..!!!


2) ಇಷ್ಟ ಲಿಂಗ ಅಸ್ತ ಧಾತುವಿಂದ ತಯಾರಿಸುತ್ತಾರೆ, ಆಕಳ ತುಪ್ಪವನ್ನು ಸುತ್ತು ಅದರಿಂದ ಬರುವ ಕಾಡಿಗೆ ಇಂದ ತಯಾರಿಸುತ್ತಾರೆ,


      ಇಷ್ಟ ಲಿಂಗ ಎಡ ಕೈಲಿ ಇಟ್ಟುಕೊಂಡೆ ಪೂಜಿಸುತ್ತಾರೆ, ಯಾಕೆ ಅಂದ್ರೆ, ನಮ್ಮ ದೇಹದ ಬಲ ಮೆದುಳು ಎಡ ಹಾಗೂ ಎಡ ಮೆದುಳು ದೇಹದ ಬಲಭಾಗವನ್ನು ನಿಯಂತ್ರಿಸುತ್ತದೆ.

ದೇಹದ ಬಳ ಮೆದುಳು ಪ್ರೀತಿ , ಕರುಣೆ, ಸ್ನೇಹ etc... ಅದರ ಕೆಲಸ.


       ಇಷ್ಟಲಿಂಗ ಕಪ್ಪಾಗಿರುವುದರಿಂದ, ನಮ್ಮ ಕಣ್ಣು ಕಪ್ಪಿರುವುದರಿಂದ ಕಪ್ಪು  ಬೇಗನೆ observing capacity  ಹೊಂದುವುದು.

ಇದರಿಂದ ಮೆದುಳಿನ ಹಿಂಭಾಗದಲ್ಲಿ ಮೇಲಟೋನ್ ರಸ ಉತ್ಪತ್ತಿಯಾಗುತ್ತದೆ, ಮೇಲಟೋನ್ ರಸದಿಂದ  ಮನುಷ್ಯ ಅತ್ಯಂತ ಚೈತ್ಯನ್ಯದಿಂದ ಇರಲು ಸಾಧ್ಯಲಿಂಗಾಯತ ಧರ್ಮದ ವ್ಯೆಶಿಷ್ಟ್ಯ ಪೂರ್ಣ ಉಪಾಸನಾ ಸಾಧನ ಇಷ್ಟಲಿಂಗ.  ಜಗತ್ತಿನ ಮತ್ತಾವ ಧರ್ಮಗಳಲ್ಲಿಯೂ ಇರದ ದೇವನನ್ನು ವಿಶ್ವದ ಆಕಾರದಲ್ಲಿ ತಾತ್ವಿಕವಾಕವಾಗಿ ರೂಪಿಸಿ ಪೂಜಿಸುವ ಪರಿಪೂರ್ಣತೆಯನ್ನ ಇಲ್ಲಿ ಕಾಣಬಹುದು. ನಿರಾಕಾರವನ್ನು ಸಾಕಾರ ಮೂಲಕ ಗ್ರಹಿಸಿಕೊಳ್ಳುವ ಪರಿಪಾಠ ಆಧ್ಯಾತ್ಮಿಕ, ವ್ಯೆವಹಾರಿಕ ಎರಡು ಪ್ರಪಂಚದಲ್ಲಿ ಉಂಟು, ನಿರಕಾರವಾದ ವೇಳೆಯನ್ನ ಅರಿಯಲಿಕ್ಕೆ ಸಾಕಾರವಾದ ಗಡಿಯಾರವು ಸಾಧನಗುವಂತೆ ನಿರಕಾರವಾದ ದೇವನನ್ನ ಅರಿಅಯಲಿಕ್ಕೆ ಇಷ್ಟಲಿಂಗವು ಸಾಕಾರ ಕುರುಹು.  ಗುಡಿಯಲ್ಲಿನ ಲಿಂಗದಂತೆ  ಶಿವನನ್ನು ಸಂಕೇತಿಸುವ ಜಗತ್ತನ್ನೆಲ್ಲ ತುಂಬಿಕೊಂಡಿರುವ ಪರಮಾತ್ಮನ ಶರಿರವವಾದ ಬ್ರಹ್ಮಾಂಡವು ಗೋಲಾಕಾರದಲ್ಲಿ ಇರುವದರಿಂದ ಆ ಆಕಾರದಲ್ಲಿ ರೂಪಿಸಿಕೊಂಡ ಕುರುಹು. 


        ಇಷ್ಟಲಿಂಗಕ್ಕೆ ಕಪ್ಪಾದ ಕಾಂತಿಯುಕ್ತವಾದ ಕಂಥೆಯ ಕವಚವು ಇರುವ ಕಾರಣ  ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು.ಆಧ್ಯಾತ್ಮಿಕವಾಗಿ ಇದು ಭಾವಸಾಗರವನ್ನು ದಾಂಟಿಸುವ ಹಡಗಿನಂತೆ. ಹಸುವಿನ ಕೆಚ್ಚಲಿನಲ್ಲಿರುವ ಹಾಲಿನಲ್ಲಿ ತುಪಾವಿರುವುದು ಸತ್ಯಾಂಶ. ಒಂದು ವೇಳೆ ಹಸುವು ಬಿದ್ದು ಪೆಟ್ಟದರೆ, ಬಿಸಿ ತುಪ್ಪವನ್ನ ಹಚ್ಚಿ ಆದ ಗಾಯ ಅಥವಾ ಪೆಟ್ಟನ್ನ ವಾಸಿ ಮಾಡುವುದು ಸರಿಯಾದುದು. ಆದರೆ "ಕೆಚ್ಚಲಿನಲ್ಲಿ ಹಾಲಿದೆ, ಹಾಲಿನಲ್ಲಿ ತುಪ್ಪವಿದೆ" ಎಂದು ಅತಿ ಬುದ್ದಿವಂತರಂತೆ(ಅಹಂ ಬ್ರಹ್ಮಾಸ್ಮಿ) ಕೂತರೆ ಹೇಗೆ ಹಸುವನ್ನ ಪೋಷಿಸಿ, ಕೆಚ್ಚಲಿಂದ ಹಾಲನ್ನ ಕರೆದು, ಹಾಲಿಗೆ ಸಂಸ್ಕಾರಕೊಟ್ಟು ತುಪ್ಪಮಾಡಿದಂತೆ ಇದು ಬಾಹ್ಯ ಲಿಂಗ ಪೂಜೆ ಯಿಂದ ಅಂತರಂಗದ ಪರಮಾತ್ಮನ ಪೂಜೆ ಆಗಿದೆ.

       ಇಷ್ಟಲಿಂಗ ಪೂಜೆಯನ್ನು ಜ್ಞಾನ ಮುದ್ರೆಯಲ್ಲಿ ಮಾಡಬೇಕು. 

ಜ್ಞಾನ ಮುದ್ರೆ

ಎರಡೂ ಕೈಗಳನ್ನು ಮೇಲ್ಮುಖವಾಗಿ ಇಟ್ಟು ಆಯಾ ಕೈಗಳ ತೋರು ಬೆರಳಿಗೆ ಹೆಬ್ಬೆರಳಿನ ತುದಿಯನ್ನು ತಾಗಿಸಿ. ಉಳಿದ ಮೂರು ಬೆರಳುಗಳು ನೇರವಾಗಿ ಇರಲಿ. ಒತ್ತಡ ನೀಡಬೇಕಾದ ಅಗತ್ಯ ಇಲ್ಲ. 


#ಪ್ರಯೋಜನ: ಮೆದುಳಿನ ಶಕ್ತಿ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ನಾಡಿಗಳಲ್ಲಿ ಶಕ್ತಿ ಬಲವಾಗಿ ಸಂಚರಿಸುತ್ತದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಕಾರಿ. ನಿದ್ರಾಹೀನತೆ, ಉದ್ವೇಗ, ಭಯ, ಒತ್ತಡ, ಮಾನಸಿಕ ಚಂಚಲತೆ ದೂರವಾಗುತ್ತದೆ. ಅಧಿಕವಾದ ಸಿಟ್ಟನ್ನು ಶಮನಗೊಳಿಸುವುದರ ಜೊತೆಗೆ ಮನುಷ್ಯ ಸ್ವಭಾವಗಳಾದ ಹಟಮಾರಿತನ, ಆಲಸ್ಯ, ಸಂಶಯ, ಅತಿ ನಿದ್ರೆಯನ್ನು ಹೋಗಲಾಡಿಸುತ್ತದೆ.


        ಅಧ್ಯಾತ್ಮ ಶಕ್ತಿಯ ವೃದ್ಧಿಗೆ ಜ್ಞಾನ ಮುದ್ರೆ ಸಹಾಯಕ. ಪಿಟ್ಯುಟರಿ ಗ್ರಂಥಿಗಳ ಕಾರ್ಯಕ್ಷಮತೆ ಹೆಚ್ಚಿಸುವುದರೊಂದಿಗೆ ದೇಹಕ್ಕೆ ಹೊಸ ಚೈತನ್ಯವನ್ನು ತುಂಬಿಸುತ್ತದೆ. ಎಷ್ಟು ಹೊತ್ತು ಬೇಕಾದರೂ ಮಾಡಬಹುದು.


 ಪಂಚಸೂತ್ರ ಕಿರುಪೀಠಗ ಷಟ್ಕಳೆಹೊಂದಿದ ಪುರ್ಣರಂದ್ರ ರಹಿತ ಭಾನಸ್ಥಾಪಿಸಿದ ಕಾರಣ ಪಂಚಸೂತ್ರ ಶಿವಶಕ್ತಿ ಸಮ್ಮಿಲನ ಹೊಂದಿದ ಪರಿಣಾಮ ಮೆಲೆ (ಚಿದ್ಲೇಪ) ಕಂತೆ ಇರಸಿದೆ ಇದಕ್ಕೆ ಇಷ್ಟಲಿಂಗ ಎಂದು ನಾಮಕರಣ ಮಾಡಿ ಗುರು ಪಾದೋದಕ ಪ್ರಸಾದ ಕ್ರಿಯೆಗೆ ಅನುಮೋದನೆ ಮಾಡಿ ಶಿವ ಶಕ್ತಿಯರಲ್ಲಿ ಹೇಗೆ ಬೇದಬಾವ ವಿಲ್ಲವೊ ಹಾಗೆ ಗುರುಶಿಷ್ಯರಲ್ಲಿಯೋ ಬೇದಬಾವವನ್ನು ಹರನ ಮಾಡಲು ಶಕ್ತಿವಿಶಿಷ್ಟಾದ್ವೈತ ತತ್ವ ನಿರ್ಣಯ ಆದರ್ಶನಿಯ ವಾಗಿದೆ.


ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,

ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,

ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,

ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.


            


ವೀರಶೈವ ಧರ್ಮದ  ಅಷ್ಟಾವರಣ ಗಳಲ್ಲಿ ಆರೋಗ್ಯ

ಡಾ. ಸಿ. ಎ .ಹೀರೇಮಠ ರ ಕೃತಿಯಿಂದ ಹಾಗೂ ಇತರೆ ಮೂಲಗಳಿಂದ  ಲೇಖನ

October 8, 2020

ಆರೋಗ್ಯ ಜ್ಯೋತಿಷ್ಯ

 ಆರೋಗ್ಯ

ಯಾರೊಬ್ಬರ ಆರೋಗ್ಯದ ವಿಷಯವಾಗಿ ಅವರ ಮೂಲ ಜಾತಕದೊಂದಿಗೆ ಗೋಚಾರೀ ಗ್ರಹಗಳ ಪರಿಭ್ರಮಣದ ಪರಿಣಾಮ ಹಾಗೂ ಮಹರ್ದಶೆ, ಅಂತರ್ದಶೆಗಳ ಪ್ರಭಾವವನ್ನು ತುಲನಾತ್ಮಕವಾಗಿ ಪರಿಶೀಲಿಸಬೇಕು. ಏಕೆಂದರೆ ಅವರ ಮೂಲ ಜಾತಕದ ಪ್ರಕಾರ ಆರೋಗ್ಯ ಭಾಗ್ಯವನ್ನು ಪಡೆದುಕೊಂಡು ಬಂದಿರುವರೇ ಹೇಗೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಜಾತಕನು ಯಾವ ಸಂಗತಿಗಳನ್ನು (ಭಾವಗಳು) ಜನ್ಮಾರಭ್ಯ ಸಂಸ್ಕಾರ ರೂಪದಿಂದ ಇಲ್ಲವೋ ಅದು ಗೋಚರಿ ಗ್ರಹಗಳು ಎಷ್ಟೇ ಶುಭದಾಯಕವಾಗಿದ್ದರೂ ಮಹರ್ದಶೆ ಅಂತರ್ದಶೆಗಳು ಶುಭರಿದ್ದಾಗ್ಯೂ ಫಲ ಮಾತ್ರ ದೊರೆಯುವದಿಲ್ಲ. 

ಇದರಂತೆ ಯಾವುದರ ಬಗೆಗೆ ಲವಲೇಶವಾದರೂ ಕಡಿಮೆ ಇಲ್ಲವೋ ಅದು ಗೋಚಾರೀ ಗ್ರಹಗಳು ಎಷ್ಟೇ ಅಶುಭವಿದ್ದರೂ ಹಾಗೂ ಮಹರ್ದಶೆ ಅಂತರ್ದಶೆಗಳು ಅಶುಭವಿದ್ದರೂ ಆ ವಿಷಯದ ಬಗೆಗೆ ಆ ಭಾವಗಳ ಬಗೆಗೆ ಸ್ವಲ್ಪವೂ ಕೂಡ ಕಡಿಮೆ ಆಗಲಾರದು. ಈ ದೃಷ್ಟಿಯಿಂದ ಗೋಚಾರೀ ಗ್ರಹಗಳ ಪರಿಭ್ರಮಣದ ಪರಿಣಾಮ ಹಾಗೂ ಮಹರ್ದಶೆ ಅಂತರ್ದಶೆಗಳ ಪ್ರಭಾವವನ್ನು ತುಲನಾತ್ಮಕವಾಗಿ ಪರಿಶೀಲಿಸಬೇಕು.  ಗಮನಿಸಬೇಕಾದ ವಿಷಯವೆಂದರೆ ಗೋಚಾರೀ ಗ್ರಹಗಳ ಪರಿಭ್ರಮಣದ ಪರಿಣಾಮವಾಗಲಿ ಮಹರ್ದಶೆ ಅಂತರ್ದಶೆಗಳ ಪರಿಣಾಮವಾಗಲಿ ಕೆಲ ಅವಧಿಯವರೆಗೆ ಮಾತ್ರ... ಎಷ್ಟು ಅವಧಿಯವರೆಗೆ ಎನ್ನುವುದನ್ನು ನಮ್ಮ ವೃತ್ತಿ ಬಾಂಧವರಿಗೆ ತಿಳಿಸಿ ಹೇಳಬೇಕಾಗಿಲ್ಲ ಅನ್ಕೋತೀನಿ.. 


ಪ್ರಸ್ತುತಃ ಆರೋಗ್ಯ ದೃಷ್ಟಿಯಿಂದ ಯಾವ ಯಾವ ಗೋಚಾರೀ ಗ್ರಹಗಳು ಅಶುಭ ಫಲ ಕೊಡುವವು ಯಾವ ಗ್ರಹಗಳ ಮಹರ್ದಶೆ ಅಂತರ್ದಶೆಗಳು ಅಶುಭ ಫಲ ಕೊಡುವವು ಎಂಬುದನ್ನು ನೋಡೋಣ..


೧. ಸೂರ್ಯನು ಗೋಚಾರಿಯಿಂದ ೧-೪-೮-೧೨ನೆಯವನಾಗಿ ಬಂದಾಗ ಶಾರೀರಿಕ ಪೀಡೆ ಕೊಡುವನು.


೨. ಚಂದ್ರನು ಗೋಚಾರಿಯಿಂದ ೪-೬-೮-೧೨ ನೆಯವನಾಗಿ ಬಂದಾಗ ವ್ಯಾಕುಲತೆ, ಶಾರೀರಿಕ ಪೀಡೆ, ಶತೃಪೀಡೆ, ಭಯ, ಭೀತಿ, ಮಾನಸಿಕವಾಗಿ ಉದಾಸೀನತೆ, ಅಸಮಾಧಾನದ ಪ್ರವೃತ್ತಿ ಉಂಟು ಮಾಡುತ್ತಾನೆ.


೩. ಕುಜನು ಗೋಚಾರಿಯಿಂದ ೧-೪-೮-೧೨ ನೆಯವನಾಗಿ ಬಂದಾಗ ಶಾರೀರಿಕ ಪೀಡೆ, ಶತೃಪೀಡೆ, ವಾಹನದ ಅಪಘಾತ, ಅಗ್ನಿಭಯ, ಚೋರಭಯ ಮೊದಲಾದ ಅಶುಭ ಫಲಗಳನ್ನು ಕೊಡುತ್ತಾನೆ.


೪. ಬುಧನು ಗೋಚಾರಿಯಿಂದ ೪-೬-೮-೧೨ ನೆಯವನಾಗಿ ಬಂದಾಗ ಶತೃವೃದ್ಧಿ, ರೋಗಬಾಧೆ, ಶಾರೀರಿಕ ಪೀಡೆ ಕೊಡುತ್ತಾನೆ.


೫. ಗುರುವು ಗೋಚಾರಿಯಿಂದ ೪-೬-೮-೧೨ ನೆಯವನಾಗಿ ಬಂದಾಗ ಶಾರೀರಿಕ ಪೀಡೆ, ರೋಗ ವೃದ್ಧಿ, ಚಿಂತಾತುರತೆ, ವ್ಯಾಕುಲತೆ ಮೊದಲಾದ ಅಶುಭ ಫಲಗಳನ್ನು ಕೊಡುತ್ತಾನೆ.


೬. ಶುಕ್ರನು ೩-೪-೬-೮ ನೆಯವನಾಗಿ ಬಂದಾಗ ರೋಗವೃದ್ಧಿ, ಶತೃಪೀಡೆ, ಶಾರೀರಿಕ ಪೀಡೆ ಮೊದಲಾದ ಅಶುಭ ಫಲಗಳನ್ನು ಕೊಡುತ್ತಾನೆ. 


೭. ಶನಿಯು ೧-೨-೪-೫-೮-೧೨ ನೆಯವನಾಗಿ ಬಂದಾಗ ಶಾರೀರಿಕ ಪೀಡೆ, ಶತೃಪೀಡೆ, ರೋಗವೃದ್ಧಿ ಮೊದಲಾದ ಅಶುಭ ಫಲಗಳು ಸಂಭವ.


೮. ರಾಹುವಿನ ಗೋಚಾರೀ ಫಲಗಳು ಕುಜನಂತೆ ದೊರೆಯುತ್ತವೆ.


೯. ಕೇತುವಿನ ಗೋಚಾರೀ ಫಲಗಳು ಶನಿಯಂತೆ ದೊರೆಯುತ್ತವೆ.

👉ಜಂಗಮಾಮೃತ ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ.✍️

ಬ್ರಾಹ್ಮಣ ಅಂದರೆ ಏನು?

 *ಬ್ರಾಹ್ಮಣ* ಅಂದರೆ ಏನು ಎಂಬುದನ್ನು ಪರೀಕ್ಷಿಸೋಣ..


*ಅದು ಒಂದು ಜೀವವೆ?* *ಅಥವಾ ಅದು ಶರೀರವೆ?*

ಇಲ್ಲಾ

 *ಅದೊಂದು ವರ್ಗವೆ? ಜ್ಞಾನವೆ? ಕರ್ಮವೆ? ಅಥವಾ ಅದೊಂದು ಧಾರ್ಮಿಕ ಕ್ರಿಯೆಯೆ?* *ಯಾವುದನ್ನು ಬ್ರಾಹ್ಮಣ ಎನ್ನುತ್ತೇವೆ ??* ನೋಡೋಣ...


*ಜೀವವು ಬ್ರಾಹ್ಮಣವೆ?*


 ಎಂದು ಪ್ರಾರಂಭಿಸಿದರೆ ಉತ್ತರ ಅಲ್ಲ ಎಂದಾಗುತ್ತದೆ.


ಯಾಕೆಂದರೆ ಪೂರ್ವಜನ್ಮ ಹಾಗೂ ಪುನರ್ಜನ್ಮಗಳಲ್ಲಿ ಅದೇ ಜೀವ ಮುಂದುವರಿಯುತ್ತದೆ. ಪ್ರಾರಬ್ಧ ಕರ್ಮದಿಂದ ಕೆಲವೊಮ್ಮೆ  ವಿಭಿನ್ನ ಪ್ರಾಣಿ ಪಕ್ಷಿಗಳಾಗಿಯೂ ಅದೇ ಜೀವ ಮುಂದುವರಿಯುವುದರಿಂದ ಜೀವ ಎಂಬುದು ಬ್ರಾಹ್ಮಣ ಅಲ್ಲ.


*ಹಾಗಾದರೆ ದೇಹ ಬ್ರಾಹ್ಮಣವೆ?*


 ಅಲ್ಲ, ಅದು ಪಂಚಭೂತಗಳಿಂದ ಮಾಡಲ್ಪಟ್ಟು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಎಲ್ಲ ಮಾನವರಿಗೂ ಅದು ಸಮಾನವಾಗಿರುವುದರಿಂದ ದೇಹ ಬ್ರಾಹ್ಮಣ ಅಲ್ಲ.


*ಹಾಗಾದರೆ ಜಾತಿ ಬ್ರಾಹ್ಮಣವೆ?* ಅಲ್ಲ,


 ಏಕೆಂದರೆ ಅನೇಕ ಋಷಿಗಳು ಬೇರೆ ಬೇರೆ ಜಾತಿಯಿಂದ ಹುಟ್ಟಿದವರಾಗಿದ್ದಾರೆ. ಋಷ್ಯಶೃಂಗನು ಜಿಂಕೆಯಿಂದ, ಕೌಶಿಕನು ಕುಶ (ಗರಿಕೆ) ಹುಲ್ಲಿನಿಂದ, ಜಂಬೂಕನು ನರಿಯಿಂದ ವಾಲ್ಮೀಕಿಯು ಹುತ್ತದಿಂದ, ವ್ಯಾಸನು ಮೀನುಗಾರನ ಮಗಳಿಂದ, ಗೌತಮನು ಮೊಲದಿಂದ ವಸಿಷ್ಠನು ಊರ್ವಶಿಯಿಂದ, ಅಗಸ್ತ್ಯನು ನೀರಿನ ಕುಂಭದಿಂದ ಹೀಗೆ ಅನೇಕ ಋಷಿಗಳು ಎಲ್ಲೆಲ್ಲೊ ಹೇಗೋ ಜನಿಸಿದರು. ಆದರೆ ಅವರು ತಮ್ಮ ಆಧ್ಯಾತ್ಮಿಕ ಸಾಧನೆಗಳಿಂದ ಮಹಾಜ್ಞಾನಿಗಳಾಗಿ ದಿವ್ಯೋಪದೇಶ ಮಾಡುವ ಸಂತರಾದರು. ಆದ್ದರಿಂದ ಜಾತಿ ಬ್ರಾಹ್ಮಣವಲ್ಲ.


*ಜ್ಞಾನ ಬ್ರಾಹ್ಮಣವೆ?*


 ಅಲ್ಲ ಎಷ್ಟೋ ಕ್ಷತ್ರಿಯರೂ ಕೂಡ ದಿವ್ಯಜ್ಞಾನ ಪಾರಂಗತರಾಗಿದ್ದಾರೆ. ಉದಾಹರಣೆಗೆ *ಜನಕಾದಿ ರಾಜರು* ಆದ್ದರಿಂದ ಜ್ಞಾನವೂ ಬ್ರಾಹ್ಮಣವಲ್ಲ.


*ಹಾಗಾದರೆ ಕರ್ಮ ಬ್ರಾಹ್ಮಣವೆ?* 


 ಅಲ್ಲ, ಏಕೆಂದರೆ ಹಿಂದಿನ ಜನ್ಮದ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತೇವೆ. ಅದನ್ನು ಪ್ರಾರಬ್ಧ ಕರ್ಮ ಎನ್ನಲಾಗುತ್ತದೆ. ಹಿಂದಿನ, ಈಗಿನ ಕರ್ಮಫಲಗಳು ಮುಂದಿನ ಜನ್ಮಕ್ಕೆ ಸಾಗಿಬರುತ್ತವೆ. ಅವನ್ನು ಸಂಚಿತ ಎನ್ನುತ್ತೇವೆ. ಎಲ್ಲರಿಗೂ ಕರ್ಮ ಒಂದೇ ಆಗಿರುತ್ತದೆ. ಅವರು ಇಂದು ಮಾಡುವ ಕಾರ್ಯ ಪ್ರಾರಾಬ್ಧ ಹಾಗೂ ಸಂಚಿತ ಕರ್ಮಗಳ ಫಲವಾಗಿರುತ್ತದೆ. ಅದ್ದರಿಂದ ಕರ್ಮ ಬ್ರಾಹ್ಮಣವಲ್ಲ.


ಹಾಗಾದರೆ, *ಧಾರ್ಮಿಕ ಕಾರ್ಯಗಳನ್ನು ಮಾಡುವವನು ಬ್ರಾಹ್ಮಣನೆ?* ಅಲ್ಲ, ಎಷ್ಟೋ ಕ್ಷತ್ರಿಯರು ಚಿನ್ನವನ್ನು ದಾನವಾಗಿ ನೀಡುತ್ತಾರೆ. ಆದ್ದರಿಂದ ಅವರು ಸತ್ಕಾರ್ಯ ಮಾಡಿದಂತಾಗುತ್ತದೆ. ಅ ಸತ್ಕಾರ್ಯವೇ ಬ್ರಾಹ್ಮಣ ವಾಗುವುದಿಲ್ಲವಲ್ಲವೇ..


ಹಾಗಾದರೆ *ನಿಜವಾಗಿಯೂ ಬ್ರಾಹ್ಮಣನಾರು?* 

ಯಾರು ತನ್ನ ಆತ್ಮವನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾನೋ ಅವನೇ *ಬ್ರಾಹ್ಮಣ.*


 *ಯಾರು ತನ್ನ ಆತ್ಮವನ್ನು ಅಂಗೈಯೊಳಗಣ ಅಂಜೂರವನ್ನು ಕಾಣುವಂತೆ ಕಾಣುವನೋ, ಯಾರಿಗೆ ಹಸಿವು, ನೀರಡಿಕೆ, ದುಃಖ, ಗೊಂದಲ, ವೃದ್ಧಾಪ್ಯ ಮತ್ತು ಸಾವಿನ ಭೀತಿ ಇರುವುದಿಲ್ಲವೊ, ಯಾರಿಗೆ ಸತ್ಯ, ಜ್ಞಾನ, ಆನಂದ ಮತ್ತು ಚಿರಂತನ ಭಾವಗಳ ಅರಿವಿದೆಯೋ, ಯಾರಿಗೆ ಜಡ ಮತ್ತು ಸೂಕ್ಷ್ಮ ವಸ್ತುಗಳ ಒಳಗೆ ಮತ್ತು ಹೊರಗೆ ವ್ಯಾಪಿಸಿರುವ ಆಕಾಶವನ್ನು ಮತ್ತು ತರ್ಕಾತೀತವಾದ ಸತ್ಯವನ್ನು ತನ್ನ ಅಂತಃ ಶಕ್ತಿಯಿಂದ ಕಾಣುವನೋ ಅವನು ಬ್ರಾಹ್ಮಣ*


*ಯಾರು ಭೌತಿಕ ಜಗತ್ತಿನ ಆಸೆ ಆಮಿಷಗಳನ್ನು ಶಮ, ದಮ, ಉಪ್ರತಿ, ತಿತಿಕ್ಷ, ಸಮಾಧಾನ ಮತ್ತು ಶ್ರದ್ಧೆಗಳ ಮೂಲಕ ಗೆದ್ದಿರುವನೋ ಅವನು ಬ್ರಾಹ್ಮಣ*


ವೇದಗಳು, ಸ್ಮೃತಿಗಳು, ಇತಿಹಾಸ ಮತ್ತು ಪುರಾಣಗಳು ಅದನ್ನೇ ಹೇಳುತ್ತವೆ. ಮಾನವನು ತನ್ನ ಆತ್ಮವನ್ನು ಸತ್ – ಚಿತ್ – ಆನಂದ ಸ್ಥಿತಿಯಲ್ಲಿ ಧ್ಯಾನಿಸಬೇಕು.


 ಅದೇ ಅದ್ವೈತ ಸಿದ್ಧಾಂತ ಎಂದು ವಜ್ರಸೂಚಿಕೋಪನಿಷತ್ತು ಹೇಳುತ್ತದೆ.

                    

               ಸಂಗ್ರಹ 👉ಧರ್ಮಭಾರತಿ ಪತ್ರಿಕೆ.

September 27, 2020

ರೇಣುಕಾಕವಚಂ

 ರೇಣುಕಾಕವಚಂ ಭೈರವರುದ್ರಯಾಮಾಲೇ


ಶ್ರೀ ದೇವ್ಯುವಾಚ .

ಜಮದಗ್ನಿಪ್ರಿಯಾಂ ದೇವೀಂ ರೇಣುಕಾಮೇಕಮಾತರಂ
ಸರ್ವಾರಂಭೇ ಪ್ರಸೀದ ತ್ವಂ ನಮಾಮಿ ಕುಲದೇವತಾಂ .
ಅಶಕ್ತಾನಾಂ ಪ್ರಕಾರೋ ವೈ ಕಥ್ಯತಾಂ ಮಮ ಶಂಕರ 
ಪುರಶ್ಚರಣಕಾಲೇಷು ಕಾ ವಾ ಕಾರ್ಯಾ ಕ್ರಿಯಾಪರಾ ..

ಶ್ರೀ ಶಂಕರ ಉವಾಚ .

ವಿನಾ ಜಪಂ ವಿನಾ ದಾನಂ ವಿನಾ ಹೋಮಂ ಮಹೇಶ್ವರಿ .
ರೇಣುಕಾ ಮಂತ್ರಸಿದ್ಧಿಸ್ಯಾನ್ನಿತ್ಯಂ ಕವಚಪಾಠತಃ ..

ತ್ರೈಲೋಕ್ಯವಿಜಯಂ ನಾಮ ಕವಚಂ ಪರಮಾದ್ಭುತಂ .
ಸರ್ವಸಿದ್ಧಿಕರಂ ಲೋಕೇ ಸರ್ವರಾಜವಶಂಕರಂ ..

ಡಾಕಿನೀ-ಭೂತವೇತಾಲ-ಬ್ರಹ್ಮರಾಕ್ಷಸ-ನಾಶನಂ .
ಪುರಾ ದೇವಾಸುರೇ ಯುಧ್ದೇ ಮಾಹಿಷೇ ಲೋಕೇ ವಿಗ್ರಹೇ ..

ಬ್ರಹ್ಮಣಾ ನಿರ್ಮಿತಾ ರಕ್ಷಾ ಸಾಧಕಾನಾಂ ಸುಖಾಯ ಚ .
ಮಂತ್ರವೀರ್ಯಂ ಸಮೋಪೇತಂ ಭೂತಾಪಸ್ಮಾರ-ನಾಶನಂ ..

ದೇವೈರ್ದೇವಸ್ಯ ವಿಜಯೇ ಸಿದ್ಧೇಃ ಖೇಚರ-ಸಿಧ್ದಯೇ .
ದಿವಾ ರಾತ್ರಮಧೀತಂ ಸ್ಯಾತ್ ರೇಣುಕಾ ಕವಚಂ ಪ್ರಿಯೇ ..

ವನೇ ರಾಜಗೃಹೇ ಯುದ್ಧೇ ಬ್ರಹ್ಮರಾಕ್ಷಸಸಂಕುಲೇ .
ಬಂಧನೇ ಗಮನೇ ಚೈವ ಕರ್ಮಣಿ ರಾಜಸಂಕಟೇ ..

ಕವಚಸ್ಮರಣಾದೇವ ಸರ್ವಂ ಕಲ್ಯಾಣಮಶ್ನುತೇ .
ರೇಣುಕಾಯಾಃ ಮಹಾದೇವ್ಯಾಃ ಕವಚಂ ಶೃಣು ಪಾರ್ವತಿ ..

ಯಸ್ಯ ಸ್ಮರಣಮಾತ್ರೇಣ ಧರ್ಮಕಾಮಾರ್ಥಭಾಜನಂ .
ರೇಣುಕಾ-ಕವಚಸ್ಯಾಸ್ಯ ಋಷಿರ್ಬ್ರಹ್ಮಾ ವಿಧೀಯತೇ ..

ಛಂದಶ್ಚಿತ್ರಾಹ್ವಯಂ ಪ್ರೋಕ್ತಂ ದೇವತಾ ರೇಣುಕಾ ಸ್ಮೃತಾ .
ಪೃಥ್ವೀ ಬೀಜಂ ರಮಾ ಶಕ್ತಿಃ ಪುರುಷಾರ್ಥ-ಚತುಷ್ಟಯಂ ..

ವಿನಿಯೋಗೋ ಮಹೇಶಾನಿ ತದಾಕಾಲೇ ಪ್ರಕೀರ್ತ್ತಿತಃ ( ಪ್ರಕೀರ್ತಿತಃ ).
ಧ್ಯಾತ್ವಾ ದೇವೀಂ ಮಹಾಮಾಯಾಂ ಜಗನ್ಮಾತರಮಂಬಿಕಾಂ ..

ಪೂರ್ಣಕುಂಭಸಮಾಯುಕ್ತಾಂ ಮುಕ್ತಾಹಾರವಿರಾಜಿತಾಂ .
ಸ್ವರ್ಣಾಲಂಕಾರಸಂಯುಕ್ತಾಂ ಸ್ವರ್ಣಸಿಂಹಾಸನಸ್ಥಿತಾಂ ..

ಮಸ್ತಕೇ ಗುರುಪಾದಾಬ್ಜಂ ಪ್ರಣಮ್ಯ ಕವಚಂ ಪಠೇತ್ .
ಇಂದ್ರೋ ಮಾಂ ರಕ್ಷತು ಪ್ರಾಚ್ಯಾಂ ವಹ್ನೌ ವಹ್ನಿಃ ಸುರೇಶ್ವರಿ ..

ಯಾಮ್ಯಾಂ ಯಮಃ ಸದಾ ಪಾತು ನೈರೃತ್ಯಾಂ ನಿರೃತಿಸ್ತಥಾ .
ಪಶ್ಚಿಮೇ ವರುಣಃ ಪಾತು ವಾಯವ್ಯೇ ವಾಯುದೇವತಾ ..

ಧನಶ್ಚೋತ್ತರೇ ಪಾತು ಈಶಾನ್ಯಾಮೀಶ್ವರೋ ವಿಭುಃ .
ಊರ್ಧ್ವಂ ಬ್ರಹ್ಮಾ ಸದಾ ಪಾತು ಅನಂತೋಽಧಃ ಸದಾಽವತು ..

ಪಂಚಾಂತಕೋ ಮಹೇಂದ್ರಶ್ಚ ವಾಮಕರ್ಣೇಂದುಭೂಷಿತಃ .
ಪ್ರಣವಂ ಪುಟಿತಂ ಕೃತ್ವಾ ತತ್ಕೃತ್ವಾ ಪ್ರಣವಂ ಪುನಃ ..

ಸಮುಚ್ಚಾರ್ಯ ತತೋ ದೇವೀಕವಚಂ ಪ್ರಪಠೇ ತಥಾ .
ಬ್ರಹ್ಮಾಣೀ ಮೇ ಶಿರಃ ಪಾತು ನೇತ್ರೇ ಪಾತು ಮಹೇಶ್ವರೀ ..

ವೈಷ್ಣವೀ ನಾಸಿಕಾಯುಗ್ಮಂ ಕರ್ಣಯೋಃ ಕರ್ಣವಾಸಿನೀ .
ಕಂಠಂ ಮಾತು ಮಹಾಲಕ್ಷ್ಮೀರ್ಹೃದಯಂ ಚಂಡಭೈರವೀ ..

ಬಾಹೂ ಮೇ ಬಗಲಾ ಪಾತು ಕರೌ ಮಹಿಷಮರ್ದಿನೀ .
ಕರಾಂಗುಲಿಷು ಕೇಶೇಷು ನಾಭಿಂ ಮೇ ಚರ್ಚಿಕಾಽವತು ..

ಗುಹ್ಯಂ ಗುಹ್ಯೇಶ್ವರೀ ಪಾತು ಊರೂ ಪಾತು ಮಹಾಮತಿಃ .
ಜಾನುನೀ ಜನನೀ ರಾಮಾ ಗುಲ್ಫಯೋರ್ನಾರಸಿಂಹಿಕಾ ..

ವಸುಂಧರಾ ಸದಾ ಪಾದೌ ಪಾಯಾತ್ಪಾದಾಂಗುಲೀಷು ಚ .
ರೋಮಕೂಪೇ ಮೇದಮಜ್ಜಾ ರಕ್ತ-ಮಾಂಸಾಸ್ಥಿಖಂಡಿಕೇ ..

ರೇಣುಕಾ ಜನನೀ ಪಾತು ಮಹಾಪುರನಿವಾಸಿನೀ  .
ರಕ್ಷಾಹೀನಂ ತು ಯತ್ಸ್ಥಾನಂ ವರ್ಜಿತಂ ಕವಚೇನ ತು ..

ಪೂರ್ವಂ ಬೀಜಂ ಸಮುಚ್ಚಾರ್ಯ ಸಂಪುಟಕ್ರಮಯೋಗತಃ .
ಮುದ್ರಾಂ ವಧ್ವಾ ಮಹೇಶಾನಿ ಗೋಲಂ ನ್ಯಾಸಂ ಸಮಾಚರೇತ್ ..

ಅಸ್ಯ ಶ್ರೀರೇಣುಕಾ-ಕವಚಮಂತ್ರಸ್ಯ ಬ್ರಹ್ಮಾ ಋಷಿಃ ಅನುಷ್ಟುಪ್ ಛಂದಃ ರೇಣುಕಾ ದೇವತಾ
ಲಂ ಬೀಜಂ ರೇಣುಕಾ ಪ್ರೀತ್ಯರ್ಥೇ ಗೋಲನ್ಯಾಸೇ ವಿನಿಯೋಗಃ .

ಓಂ ರಾಂ ಅಂಗುಷ್ಠಾಭ್ಯಾಂ ನಮಃ .
ಓಂ ರೀಂ ತರ್ಜನೀಭ್ಯಾಂ ನಮಃ .
ಓಂ ರೂಂ ಮಧ್ಯಮಾಭ್ಯಾಂ ನಮಃ .
ಓಂ ರೈಂ ಅನಾಮಿಕಾಭ್ಯಾಂ ನಮಃ .
ಓಂ ರೌಂ ಕನಿಷ್ಠಿಕಾಭ್ಯಾಂ ನಮಃ .
ಓಂ ರಃ ಕರತಲಕರಪೃಷ್ಠಾಭ್ಯಾಂ ನಮಃ .

ಏವಂ ಹೃದಯಾದಿನ್ಯಾಸಃ .

ಓಂ ಪಂ ನಮಃ ಮೂರ್ಧ್ನಿ .
ಓಂ ಫಂ ನಮಃ ದಕ್ಷಿಣನೇತ್ರೇ .
ಓಂ ಬಂ ನಮಃ ವಾಮನೇತ್ರೇ .
ಓಂ ಭಂ ನಮಃ ದಕ್ಷಿಣನಾಸಾಪುಟೇ .
ಓಂ ಮಂ ನಮಃ ವಾಮನಾಸಾಪುಟೇ .
ಓಂ ಯಂ ನಮಃ ದಕ್ಷಿಣಕರ್ಣೇ .
ಓಂ ರಂ ನಮಃ ವಾಮಕರ್ಣೇ .
ಓಂ ಲಂ ನಮಃ ಮುಖೇ .
ಓಂ ವಂ ನಮಃ ಗುದೇ .

ಬ್ರಹ್ಮಾಣೀ ಬ್ರಹ್ಮಭಾಗೇ ಚ ಶಿರೋ ಧರಣಿ ಧಾರಿಣೀ .
ರಕ್ಷ ರಕ್ಷ ಮಹೇಶಾನಿ ಸದಾ ಮಾಂ ಪಾಹಿ ಪಾರ್ವತೀ ..

ಭೈರವೀ ತ್ರಿಪುರಾ ಬಾಲಾ ವಜ್ರಾ ಮೇ ತಾರಿಣೀ ಪಱಾ .
ರಕ್ಷ ರಕ್ಷ ಮಹೇಶಾನಿ ಸದಾ ಮಾಂ ಪಾಹಿ ಪಾರ್ವತೀ ..

ಏಷಾ ಮೇಽಙ್ಗಂ ಸದಾ ಪಾತು ಪಾರ್ವತೀ ಹರವಲ್ಲಭಾ .
ಮಹಿಷಾಸುರಸಂಹರ್ತ್ರೀ ವಿಧಾತೃವರದಾಯಿನೀ ..

ಮಸ್ತಕೇ ಪಾತು ಮೇ ನಿತ್ಯಂ ಮಹಾಕಾಲೀ ಪ್ರಸೀದತು .
ಆಕಾಶೇ ತಾಡಕಾ ಪಾತು ಪಾತಾಲೇ ವಹ್ನಿವಾಸಿನೀ ..

ವಾಮದಕ್ಷಿಣಯೋಶ್ಚಾಪಿ ಕಾಲಿಕಾ ಚ ಕರಾಲಿಕಾ .
ಧನುರ್ಬಾಣಧರಾ ಚೈವ ಖಡ್ಗ-ಖಟ್ವಾಂಗ-ಧಾರಿಣೀ ..

ಸರ್ವಾಂಗಂ ಮೇ ಸದಾ ಪಾತು ರೇಣುಕಾ ವರದಾಯಿನೀ .
ರಾಂ ರಾಂ ರಾಂ ರೇಣುಕೇ ಮಾತರ್ಭಾರ್ಗವೋದ್ಧಾರಕಾರಿಣೀ ..

ರಾಜರಾಜಕುಲೋದ್ಭೂತೇ ಸಂಗ್ರಾಮೇ ಶತ್ರುಸಂಕಟೇ .
ಜಲಾಪ್ನಾವ್ಯೇ ವ್ಯಾಘ್ರಭಯೇ ತಥಾ ರಾಜಭಯೇಽಪಿ ಚ .
ಶ್ಮಶಾನೇ ಸಂಕಟೇ ಘೋರೇ ಪಾಹಿ ಮಾಂ ಪರಮೇಶ್ವರಿ ..

ರೂಪಂ ದೇಹಿ ಯಶೋ ದೇಹಿ ದ್ವಿಷತಾಂ ನಾಶಮೇವ ಚ .
ಪ್ರಸಾದಃ ಸ್ಯಾಚ್ಛುಭೋ ಮಾತರ್ವರದಾ ರೇಣುಕೇ ಭವ ..

ಐಂ ಮಹೇಶಿ ಮಹೇಶ್ವರಿ ಚಂಡಿಮೇ
       ಭುಜಂಗಧಾರಿಣಿ ಶಂಖಕಪಾಲಿಕೇ .
ಕನಕ-ಕುಂಡಲ-ಮಂಡಲ-ಭಾಜನೇ 
       ವಪುರಿದಂಚ ಪುನೀಹಿ ಮಹೇಶ್ವರಿ ..

ಇದಂ ಶ್ರೀಕವಚಂ ದೇವ್ಯಾಃ ರೇಣುಕಾಯಾ ಮಹೇಶ್ವರಿ .
ತ್ರಿಕಾಲಂ ಯಃ ಪಠೇನ್ನಿತ್ಯಂ ತಸ್ಯ ಸಿದ್ಧಿಃ ಪ್ರಜಾಯತೇ ..

ಗ್ರಹಣೇಽರ್ಕಸ್ಯ ಚಂದ್ರಸ್ಯ ಶುಚಿಃ ಪೂರ್ವಮುಪೋಷಿತಃ .
ಶತತ್ರಯಾವೃತ್ತಿಪಾಠಾದ್ಮಂತ್ರಸಿದ್ಧಿಃ ಪ್ರಜಾಯತೇ ..

ನದೀಸಂಗಮಮಾಸಾದ್ಯ ನಾಭಿಮಾತ್ರೋದಕಸ್ಥಿತಃ .
ರವಿಮಂಡಲಮುದ್ವೀಕ್ಷ್ಯ ಜಲೇ ತತ್ರ ಸ್ಥಿತಾಂ ಶಿವಾಂ ..

ವಿಚಿಂತ್ಯ ಮಂಡಲೇ ದೇವೀ ಕಾರ್ಯೇ ಸಿದ್ಧಿರ್ಭವೇದ್ಧ್ರುವಂ .
ಘಟಂ ತವ ಪ್ರತಿಷ್ಠಾಪ್ಯ ವಿಭೂತಿಸ್ತತ್ರ ವೇಶಯೇತ್ .
ದೀಪಂ ಸರ್ಷಪತೈಲೇನ ಕವಚಂ ತ್ರಿಃ ಪಠೇತ್ತದಾ ..

ಭೂತಪ್ರೇತ-ಪಿಶಾಚಾಶ್ಚ ಡಾಕಿನ್ಯೋ ಯಾತುಧಾನಿಕಾ .
ಸರ್ವ ತೇ ನಾಶಮಾಯಾಂತಿ ಕವಚಸ್ಮರಣಾತ್ಪ್ರಿಯೇ ..

ಧನಂ ಧಾನ್ಯಂ ಯಶೋ ಮೇಧಾಂ ಯತ್ಕಿಂಚಿನ್ಮನಸೇಪ್ಸಿತಂ .
ಕವಚಸ್ಮರಣಾದೇವ ಸರ್ವಮಾಪ್ನೋತಿ ನಿತ್ಯಶಃ ..

ಇತಿ ಶ್ರೀ ಮಾತೃಸಂಸ್ಥಾನೇ ಭೈರವರುದ್ರಯಾಮಲೇ ರೇಣುಕಾಕಲ್ಪೇ
ಪಂಚಮಂ ಪಟಲಂ ಸಂಪೂರ್ಣಂ ..
 ಮೂಲ: ಭೈರವರುದ್ರಯಾಮಲ ರೇಣುಕಾ ಕಲ್ಪದ ಐದನೇ ಪಟಲ
 ಸಂಗ್ರಹ:ಜಂಗಮಾಮೃತ ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ ಹೊಸಹಳ್ಳಿ ಹಿರೇಕೆರೂರ 9986175616

ಕಾರ್ಯಸಿದ್ಧಿಯನ್ನು ಹೊಂದಲು ಶಕ್ತಿವಂತವಾದ ಆಂಜನೇಯ ಸ್ವಾಮಿಯ ಶ್ಲೋಕಗಳು



🌺🌺🌺  ಕಾರ್ಯಸಿದ್ಧಿಯನ್ನು ಹೊಂದಲು ಶಕ್ತಿವಂತವಾದ ಆಂಜನೇಯ ಸ್ವಾಮಿಯ ಶ್ಲೋಕಗಳು.🌺🌺🌺


*ಹನುಮಂತನು ಕಾರ್ಯಸಾಧಕನು, ಭಕ್ತಿಯಿಂದ ಹನುಮಂತನ್ನು ಆರಾಧನೆ ಮಾಡುವವರಿಗೆ ಅವರ ಕೋರಿಕೆಗಳು ಖಂಡಿತವಾಗಿ ನೆರವೇರಿತ್ತವೆ. ಭಕ್ತರ ಕೋರಿಕೆಯನ್ನು ಅನುಸರಿಸಿ ಆಂಜನೇಯ ಸ್ವಾಮಿಯ ಶ್ಲೋಕಗಳನ್ನು ಭಕ್ತಿಯಿಂದ ಪಠಿಸುವುದರಿಂದ ತಮ್ಮ ತಮ್ಮ ಕಾರ್ಯ ಸಿದ್ಧಿಯನ್ನು ಸಾಧಿಸಬಹುದು*


 1.-  *ವಿದ್ಯಾ ಪ್ರಾಪ್ತಿಗೆ*


ಪೂಜ್ಯಾಯ ವಾಯುಪುತ್ರಾಯ ವಾಗ್ದೋಷ ವಿನಾಶನ |

ಸಕಲ ವಿದ್ಯಾಂಕುರಮೇ ದೇವ ರಾಮದೂತ ನಮೋಸ್ತುತೆ ||


 2. :- *ಉದೋಗ ಪ್ರಾಪ್ತಿಗೆ*


ಹನುಮಾನ್ ಸರ್ವಧರ್ಮಜ್ಞ ಸರ್ವಾ ಪೀಡಾ ವಿನಾಶಿನೇ |

ಉದ್ಯೋಗ ಪ್ರಾಪ್ತ ಸಿದ್ಧ್ಯರ್ಥಂ ಶಿವರೂಪಾ ನಮೋಸ್ತುತೇ ||


 3.  :- *ಕಾರ್ಯ ಸಾಧನೆಗೆ*


ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ |

ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ ||


 *4.  :- *ಗ್ರಹದೋಷ ನಿವಾರಣೆ*


ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |

ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||


 5. :- *ಆರೋಗ್ಯ* 


ಆಯುಃ ಪ್ರಜ್ಞ ಯಶೋ ಲಕ್ಷ್ಮೀ ಶ್ರದ್ಧಾ ಪುತ್ರಾಸ್ಸುಶೀಲತಾ |

ಆರೋಗ್ಯಂ ದೇಹ ಸೌಖ್ಯಾಂಚ ಕಪಿನಾಥ ನಮೋಸ್ತುತೇ ||


 6. - *ಸಂತಾನ ಪ್ರಾಪ್ತಿಗೆ* 


ಪೂಜ್ಯಾಯ ಅಂಜನೇಯ ಗರ್ಭದೋಷಾಪಹಾರಿತೋ |

ಸಂತಾನಂ ಕುರುಮೇ ದೇವ ರಾಮದೂತ ನಮೋಸ್ತುತೇ ||


 7. :- *ವ್ಯಾಪಾರಾಭಿವೃದ್ಧಿಗೆ* 


ಸರ್ವ ಕಲ್ಯಾಣ ದಾತಾರಮ್ ಸರ್ವಾಪತ್ ನಿವಾರಕಮಂ|

ಅಪಾರ ಕರುಣಾಮೂರ್ತಿಂ ಆಂಜನೇಯಂ ಸಮಾಮ್ಯಹಂ ||


 8. :- *ವಿವಾಹ ಪ್ರಾಪ್ತಿಗೆ* 


ಯೋಗಿ ಧ್ಯೇ ಯಾಂ ಘ್ರೀ ಪದ್ಮಾಯ ಜಗತಾಂ ಪತಯೇ ನಮಃ |

ವಿವಾಹಂ ಕುರುಮೇದೇವ ರಾಮದೂತ ನಮೋಸ್ತುತೇ ||

ಜಂಗಮಾಮೃತ ವೇ ಶ್ರೀ ಚನ್ನೇಶ ಶಾಸ್ತ್ರಿಗಳು 

ಪಂಚಪ್ರಾಣಗಳು

 ನಿಮಗಿದು ತಿಳಿದಿರಲಿ 

ಪಂಚಪ್ರಾಣ - ಬಹುಷಃ ನೀವು ಆಗಾಗ ನಿಮ್ಮ ಆತ್ಮೀಯರಿಗೆ ಹೇಳಿರಬಹುದು ನೀವೆಂದರೆ ನನಗೆ ಪಂಚ ಪ್ರಾಣ ವೆಂದು .‌ ಪಂಚಪ್ರಾಣ ಅಂದರೆ ಐದು ಪ್ರಾಣ ಅಂತಲಾ ? ಪ್ರಾಣ ಅಂದರೆ ವಾಯು , ವಾಯು ಇದ್ದರೇನೇ ಈ ಭೌತಿಕ ದೇಹ ಉಸಿರಾಡುವುದು ಅಲ್ವಾ .  ಪಂಚಪ್ರಾಣವೆಂದರೆ ಪಂಚ ವಾಯುಗಳು . 


ಪಂಚ‌ಪ್ರಾಣಗಳು ಎಂದರೇನು ಮತ್ತು ಅದರ ಮಹತ್ವ 


ಮೊದಲು ಪ್ರಾಣಾಅಂದರೆ ಏನು ಅನ್ನುವುದನ್ನು ತಿಳಿಯೋಣ  . 

#ಪ್ರಾಣ ಎಂದರೆ ವಾಯು (ಗಾಳಿ , ಉಸಿರು ), ವಾಯುವೇ ಪ್ರಾಣ ಎಂದು . 


ಈ ವಾಯುವು ಮಾನವನ ದೇಹದಲ್ಲಿ ಐದು ಮುಖ್ಯ ವಾಯುಗಳಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಆ ಐದು ಮುಖ್ಯ ಕಾರ್ಯಗಳನ್ನು ಪಂಚ ಪ್ರಾಣಗಳು ಎಂದು ಕರೆಯುತ್ತೇವೆ.


ಪಂಚ ಅಂದರೆ ಐದು

ಪ್ರಾಣ ಎಂದರೆ ವಾಯು

ಜೀವಿಗಳ ದೇಹದಲ್ಲಿ ಇರುವ ಐದು ವಾಯುಗಳೇ ಪಂಚ ಪ್ರಾಣಗಳು . 


1. ಪ್ರಾಣ, 2. ಅಪಾನ, 3. ವ್ಯಾನ, 4. ಉದಾನ, 5. ಸಮಾನ 


1. #ಪ್ರಾಣ ವಾಯುವು  - ಮೂಗಿನ ಮುಖಾಂತರ ಹೃದಯವನ್ನು ಪ್ರವೇಶಮಾಡಿ ನಂತರ ದೇಹದ ಎಲ್ಲಾ ಭಾಗಗಳಿಗೂ ಇದು ರವಾನೆಯಾಗುತ್ತದೆ. ಅದಕ್ಕೆ ಇದನ್ನು ಪ್ರಾಣ ವಾಯು ಎಂದು ಮತ್ತು ಪಂಚ ಪ್ರಾಣಗಳಲ್ಲಿ ಇದು ಮೊದಲಿನದು.


2. #ಅಪಾನ ವಾಯುವು  - ಇದು ಪಂಚ ಪ್ರಾಣಗಳಲ್ಲಿ ಎರಡೆನೆಯದು. ಶ್ವಾಸಕೋಶ ಮತ್ತು ಇತರೆ ಕೆಲವು ಭಾಗಗಳಲ್ಲಿ ಇರುತ್ತದೆ ಮಲ ಮೂತ್ರಗಳ ವಿಸರ್ಜನೆಗೆ, ಈ ವಾಯುವು ಸಹಾಯವಾಗುತ್ತದೆ. ಇದು ಒಂದು ರೀತಿಯ ತಳ್ಳುವಿಕೆಯ (pushing) ರೀತಿಯಲ್ಲಿ ಸಹಾಯ ಆಗುತ್ತದೆ.ಅಪಾನ ವಾಯುವು  ಕರುಳುಗಳ ಮೂಲಕ ವ್ಯರ್ಜ್ಯವಾದ ಮಲವನ್ನು ಹೊರಕ್ಕೆ ತಳ್ಳುತ್ತದೆ ಅದಕ್ಕೆ ವಾಯು ಆಗಾಗ ಹೊರಬರುವುದು ಮಲ ವಿಸರ್ಜನೆ ಮಾಡುವಾಗ . 


3.#ವ್ಯಾನ ವಾಯುವು - ಇದು ಮೂರನೇ ವಾಯು. ಇದು ಕೈಕಾಲುಗಳ, ದೇಹದ ಭಾಗಗಳು ಅಂದರೆ ದೇಹದ ಭಾಗಗಳ ಸಂಕೋಚನೆ ವ್ಯಾಕೋಚನಗಳಿಗೆ ಸಹಾಯ ಆಗುತ್ತದೆ. 


4. #ಉದಾನ ವಾಯುವು  - ಇದು ನಾಲ್ಕನೇ ವಾಯು. ಇದು ವಾಕ್ಕಿಗೆ ಸಹಕಾರಿಯಾದ ವಾಯುವು. ಹಾಡು ಹಾಡುವಾಗ ಮಾತನಾಡುವುದು ಉದಾನವಾಯುವಿನ ಸಹಾಯದಿಂದ .‌


5. #ಸಮಾನ ವಾಯು - ಇದು ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ ಯಾಗುತ್ತದೆ. ತಿಂದ ಆಹಾರ ಜೀರ್ಣವಾಗಲು ಸಹಾಯಕಾರಿ.


ಇವು ಐದು ರೀತಿಯ ಪ್ರಾಣಗಳು ಅಥವಾ ಪ್ರಾಣಯಾವುಗಳು...

ಇವುಗಳನ್ನು ಸರಿಯಾಗಿ ನಿಯಂತ್ರಣದಲ್ಲಿ ಇಟ್ಟುಕೊಂಡವನು ಮಹಾನ್ ಯೋಗಿಯಾಗುತ್ತಾನೆ... ಮತ್ತು ಅತ್ಯಂತ ಆರೋಗ್ಯವಂತ ಮನುಷ್ಯನಾಗಿ ಇರುತ್ತಾನೆ .‌

ಜಂಗಮಾಮೃತ

ಬ್ರಾಹ್ಮಣನೇಕೆ ಮಾಂಸಾಹಾರಿ ?

ವಿದರ್ಭರಾಜನ ಮಗಳಾದ ಲೋಪಮುದ್ರೆಯನ್ನು ವಿವಾಹವಾಗಿ ಹಣದ ಅವಶ್ಯಕತೆ ಉಂಟಾಗಿ ಶ್ರುತರ್ವಾಣ, ಬ್ರಧ್ನಶ್ವ ಮತ್ತು ತ್ರಸದಸ್ಯುವನ್ನು ಕೇಳಿಕೊಳ್ಳುತ್ತಾರೆ. ಆದರೆ ಅವರಲ್ಲಿ ಸಿಗದಾಗ ಅವರೆಲ್ಲರನ್ನೂ ಕೂಡಿಕೊಂಡು ಮಹರ್ಷಿಗಳಾದ ಅಗಸ್ತ್ಯರು ಇಲ್ವಲನ ಬಳಿ ಹೋಗುತ್ತಾರೆ. ಅಗಸ್ತ್ಯರ ಆಗಮನದ ವಿಷಯ ಇಲ್ವಲನಿಗೆ ಗೊತ್ತಾಗಿ, ತನ್ನ ರಾಜಧಾನಿಯ ಕಡೆಗೇ ಬರುತ್ತಿರುವರೆಂಬ ವಾರ್ತೆಯನ್ನು ಕೇಳಿ ಇಲ್ವಲನು ತನ್ನ ಮಂತ್ರಿಗಳನ್ನು ಕೂಡಿಕೊಂಡು ತನ್ನ ರಾಜಧಾನಿಯ ಎಲ್ಲೆಯ ಬಳಿಗೆ ಹೋಗಿ, ಮಹರ್ಷಿಗಳಿಗೂ ರಾಜರಿಗೂ ಆದರದ ಸ್ವಾಗತವನ್ನಿತ್ತು ರಥದಲ್ಲಿ ಕುಳ್ಳಿರಿಸಿ ತನ್ನ ಅರಮನೆಗೆ ಕರೆದುಕೊಂಡು ಬಂದು, ಅತಿಥಿಗಳನ್ನು ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿ, ಸುಖಾಸನದಲ್ಲಿ ಕುಳ್ಳಿರಿಸಿದನು. ಯಥಾಪೂರ್ವವಾಗಿ ವಾತಾಪಿಯು ಆಡಾಗಿ ಪರಿವರ್ತಿತನಾದನು. ಆಡಾಗಿದ್ದ ವಾತಾಪಿಯನ್ನು ಕತ್ತರಿಸಿ ಇಲ್ವಲನು ಅದರ ಮಾಂಸವನ್ನು ರಾಜರ ಮತ್ತು ಅಗಸ್ತ್ಯರ ಭೋಜನಕ್ಕೆ ಸಿದ್ಧಪಡಿಸಿದನು. ಆ ಭೋಜನದ ರಹಸ್ಯವನ್ನು ಮೊದಲೇ ತಿಳಿದಿದ್ದರೂ ಅಗಸ್ತ್ಯರನ್ನೂ ತಮ್ಮನ್ನೂ ಇಲ್ವಲನು ಬೇರೆಯವರಂತೆಯೇ ಕೊಲ್ಲಲು ಯತ್ನಿಸುವನೆಂದು ರಾಜರು ಭಾವಿಸಿರಲಿಲ್ಲ. ಆದುದರಿಂದ ಇಲ್ವಲನ ಪ್ರಯತ್ನವನ್ನು ಗಮನಿಸಿದ ಆ ರಾಜರು ಬೇಸರಗೊಳ್ಳುತ್ತಾರೆ. ತಮ್ಮ ಸಾವು ಸನ್ನಿಹಿತವಾಯಿತೆಂದೇ ಭಾವಿಸುತ್ತಾರೆ. ಅವರ ಮುಖಭಾವಗಳಿಂದಲೇ ಅವರ ಹೃದಯಗಳಲ್ಲಿದ್ದ ಸಂಕಟವನ್ನು ತಿಳಿದು, ಅಗಸ್ತ್ಯರು ಹೇಳಿದರು. “ರಾಜರೇ! ನೀವು ದುಃಖಪಡುವ ಕಾರಣವಿಲ್ಲ. ಆಡಿನ ರೂಪನಾದ ವಾತಾಪಿಯ ಮಾಂಸವೆಲ್ಲವನ್ನೂ ನಾನೊಬ್ಬನೇ ತಿನ್ನುತ್ತೇನೆ. ಆದುದರಿಂದ ನೀವು ಈ ವಿಷಯದಲ್ಲಿ ಸ್ವಲ್ಪವೂ ಭೀತರಾಗಬೇಡಿ” ಎನ್ನುತ್ತಾರೆ. ಅನಂತರದಲ್ಲಿ ಅಗಸ್ತ್ಯರಿಗೆ ಇಲ್ವಲನು ನಗು ನಗುತ್ತಾ ಪಕ್ವಮಾಡಿದ ಮಾಂಸವನ್ನು ಬಡಿಸುತ್ತಾನೆ.
ಬಡಿಸಿದ ಮಾಂಸವೆಲ್ಲವನ್ನೂ ಅಗಸ್ತ್ಯರೊಬ್ಬರೇ ತಿಂದುಬಿಟ್ಟರು. ಅಗಸ್ತ್ಯರ ಭೋಜನವು ಮುಗಿದನಂತರ ಇಲ್ವಲನು ಯಥಾಪೂರ್ವವಾಗಿ ‘ವಾತಾಪೇ! ಅತ್ರಾಗಚ್ಛ!’ ಎಂದು ಗಟ್ಟಿಯಾಗಿ ಕೂಗಿದನು. ಇಲ್ವಲನು ಹೀಗೆ ಹೇಳಿದೊಡನೆಯೇ ಅಗಸ್ತ್ಯರು ‘ವಾತಾಪೇ! ಜೀರ್ಣೋಭವ’ ಎಂದು ಹೇಳುತ್ತಾ ಹೊರಗೆ ಬಿಟ್ಟ ಅಪಾನವಾಯುವಿನ ಶಬ್ದವು ಗುಡುಗಿನ ಶಬ್ದವನ್ನೂ ಮೀರಿಸುವುದಾಗಿದ್ದಿತು. ತನ್ನ ತಮ್ಮನು ಎಷ್ಟು ಹೊತ್ತಾದರೂ ಅಗಸ್ತ್ಯರ ಹೊಟ್ಟೆಯನ್ನು ಸೀಳಿ ಹೊರಗೆ ಬಾರದಿರಲು ಇಲ್ವಲನು ಪುನಃ ಪುನಃ ‘ವಾತಾಪೇ! ಅತ್ರಾಗಚ್ಛ!’ ಎಂದು ಕೂಗಿಕೊಂಡನು. ಅವನ ಕೂಗನ್ನು ಕೇಳಿ ಅಗಸ್ತ್ಯರು ಒಮ್ಮೆ ಗಟ್ಟಿಯಾಗಿ ನಕ್ಕು ಹೇಳಿದರು “ಇಲ್ವಲ! ವಾತಾಪಿಯು ಹೇಗೆ ಹೊರಗೆ ಬಂದಾನು? ನಾನಾಗಲೇ ಅವನನ್ನು ಜೀರ್ಣಿಸಿಕೊಂಡಿದ್ದೇನೆ!”
ಇದರ ಮುಂದಿನಭಾಗ ನನಗೆ ಬೇಡ. ಆದರೆ ವೃಥಾ ಇದೊಂದು ಪುರಾಣದಲ್ಲಿ ಬರುವ ಉಪಕಥೆಯನ್ನು ಹಿಡಿದುಕೊಂಡು ಹಿಂದಿನ ಬ್ರಾಹ್ಮಣರು ಮುನಿಗಳೆಲ್ಲರೂ ಮಾಂಸಾಹಾರಿಗಳಾಗಿದ್ದರು ಜೈನ ಮತ್ತು ಬೌದ್ಧ ಮತ ಪ್ರಾಬಲ್ಯಕ್ಕೆ ಬಂದು ಆಮೇಲೆ ಮಾಂಸಾಹಾರ ವರ್ಜ್ಯವಾಯಿತೆಂದು ಬೊಬ್ಬಿಡುವವರಿಗೆ ಈ ಮುಂದಿನ ಇದೇ ಕಥೆ ಉತ್ತರಿಸಬಲ್ಲದು.

ಇದು ಋಗ್ವೇದದ ಒಂದನೇ ಮಂಡಲದಲ್ಲಿನ ೧೮೭ನೇ ಸೂಕ್ತದ ವಿಷಯ.
ಅಗಸ್ತ್ಯ ಮಹರ್ಷಿ ವಿದರ್ಭದ ರಾಜಕುಮಾರಿಯನ್ನು ಮದುವೆಯಾಗುತ್ತಾರೆ. ಆಗ ಅವರಿಗೆ ಹಣದ ಅವಶ್ಯಕತೆ ಉಂಟಾಗುತ್ತದೆ. ಆಗ ಆತ ಸುದಾಸನೇ ಮೊದಲಾದವರಲ್ಲಿ ಹೋದ ನಂತರ ಇಲ್ವಲನಲ್ಲಿ ಹೋಗುತ್ತಾರೆ. ಇಲ್ವಲ ಮೃತ ಸಂಜೀವಿನಿ ವಿದ್ಯೆ ಪಡೆದವನಾಗಿದ್ದ. ಮೊದಲೆಲ್ಲಾ ಧಾರ್ಮಿಕನೂ ಆಗಿದ್ದ. ಆದರೆ ಸಂಜೀವಿನಿ ವಿದ್ಯೆ ಸಿಕ್ಕಿದ ನಂತರ ಅಹಂಕಾರದಿಂದ ಮೆರೆಯುತ್ತಿದ್ದ. ಈ ಇಲ್ವಲನನ್ನು ಸರಿದಾರಿಗೆ ತರುವುದು ಅಗಸ್ತ್ಯರ ಉದ್ದೇಶವಾಗಿತ್ತು. ಇಲ್ವಲನಿಗೆ ವಾತಾಪಿ ಎನ್ನುವ ತಮ್ಮನಿದ್ದ. ಅಗಸ್ತ್ಯರು ಇಲ್ವಲನ ಅರಮನೆಗೆ ಬಂದಾಗ ಇಲ್ವಲ ಬರಮಾಡಿಕೊಳ್ಳುತ್ತಾನೆ. ಹೇಗಾದರೂ ಅಗಸ್ತ್ಯರನ್ನು ಮುಗಿಸಬೇಕೆನ್ನುವುದು ಆತನ ಹವಣಿಕೆಯಾಗಿತ್ತು. ಇಲ್ವಲ ಅಗಸ್ತ್ಯರಲ್ಲಿ ಇಂದು ತನ್ನ ಮನೆಯಲ್ಲಿ ಶ್ರಾದ್ಧ ಆದುದರಿಂದ ಪಿತೃಸ್ಥಾನದಲ್ಲಿದ್ದು ನಮ್ಮನ್ನು ಅನುಗ್ರಹಿಸಿ ಎನ್ನುತ್ತಾನೆ. ಅಗಸ್ತ್ಯರು ಕೆಲವು ಷರತ್ತು ವಿಧಿಸುತ್ತಾರೆ. ಶ್ರಾದ್ಧದಲ್ಲಿ ತಾನು ಏನು ಬಯಸುತ್ತೇನೆಯೋ ಅದನ್ನು ತನಗೆ ತೃಪ್ತಿಯಾಗುವ ತನಕ ಬಡಿಸಬೇಕು ಎನ್ನುತ್ತಾರೆ ಅದಕ್ಕೆ ಇಲ್ವಲ ಒಪ್ಪಿಕೊಂಡು ತನ್ನ ಷರತ್ತು ಮುಂದಿಡುತ್ತಾನೆ. ಶ್ರಾದ್ಧದಲ್ಲಿ ತಮ್ಮ ಹಿಂದಿನವರ ನಿಯಮದಂತೆ ತಾನು ಮಾಂಸಾಹಾರ ಮಾಡಿಸುತ್ತೇನೆ ತಾವು ತಿನ್ನಬೇಕು ಎನ್ನುತ್ತಾನೆ. ಎಲ್ಲವಕ್ಕೂ ಒಪ್ಪಿಕೊಂಡು ಅಗಸ್ತ್ಯರು ಸ್ನಾನಕ್ಕೆ ತೆರಳುತ್ತಾರೆ. ಇತ್ತ ಇಲ್ವಲ ವಾತಾಪಿಯನ್ನು ಕಡಿದು ಕೊಂದು (ವಾತಾಪಿಯನ್ನು ಆಡಿನ ರೂಪತಳೆಯುವಂತೆ ಪರಿವರ್ತಿಸಿ ಅದರಿಂದ ಬೇಯಿಸಲಾಗುತ್ತಿತ್ತು) ಅವನ ಮಾಂಸದಿಂದ ಅಡುಗೆ ತಯಾರಾಗುತ್ತದೆ. ಅಗಸ್ತ್ಯರು ಊಟಕ್ಕೆ ಬಂದಾಗ ಅವರ ಪರಿವಾರವೂ ಊಟಕ್ಕೆ ಬರುತ್ತದೆ. ಊಟಕ್ಕೆ ಕುಳಿತಾಗ ಅವರ ಎದುರು ವಾತಾಪಿಯನ್ನು ಕಡಿದು ಮಾಡಿದ ಮಾಂಸದ ಭಕ್ಷ್ಯವನ್ನು ಇಡುತ್ತಾನೆ. ಆಗ ಅಗಸ್ತ್ಯರು ಅದನ್ನು ಬೇರೊಂದು ಉಪಾಯದಿಂದ ತಿಳಿದು ನರಮಾಂಸ ವಾತಾಪಿಯದ್ದೇ ಎಂದು ತಿಳಿಯುತ್ತಲೇ ಇದನ್ನು ಬೇರೆಯವರು ತಿನ್ನುವಂತಿಲ್ಲ ತಾನು ಮಾತ್ರವೇ ತಿನ್ನುತ್ತೇನೆ ಅನ್ನುತ್ತಾರೆ. ಅದಕ್ಕೆ ಇಲ್ವಲ ಆಕ್ಷೇಪಿಸಿದಾಗ ತಾನು ಆಪೋಷನ ತೆಗೆದುಕೊಂಡು ಏಳುತ್ತೇನೆ ಎನ್ನುತ್ತಾರೆ. ಅಂತೂ ಇಲ್ವಲ ಒಪ್ಪಿಕೊಳ್ಳುತ್ತಾನೆ. ಆಗ ಅಗಸ್ತ್ಯರು

ಯದದೋ ಪಿತೋ ಅಜಗನ್ವಿವಸ್ವ ಪರ್ವತಾನಾಂ |
ಅತ್ರಾಚಿನ್ನೋ ಮಧೋ ಪಿತೋ ರಂ ಭಕ್ಷಾಯ ಗಮ್ಯಾಃ || ಮಾಧುರ್ಯೋಪೇತವಾದ ಎಲೈ ಅನ್ನವೇ ನಮಗೆ ಪುಷ್ಕಲವಾದ ಭೋಜನಕ್ಕೆ ಯೋಗ್ಯವಾಗಿರುವಂತೆ ಮಾಡು ಎಂದು ಬೇಡಿಕೊಳ್ಳುತ್ತಾರೆ. ಆಗ ಮಾಂಸವಿದ್ದದ್ದು ಮಾಷವಾಗಿ ಅದು ಉದ್ದಿನ ವಡೆಯಾಗುತ್ತದೆ. ಯಥೇಷ್ಟವಾಗಿ ಒಂದೂ ಬಿಡದೇ ತಿನ್ನುತ್ತಾರೆ. ಹೀಗೆ ಮಾಂಸವನ್ನು ತಿನ್ನದೇ ಶುದ್ಧ ಶಾಖಾಹಾರಿ ಭೋಜವಾಗಿಯೇ ಎಲ್ಲವೂ ಪರಿವರ್ತಿತವಾಗುತ್ತವೆ. ಎಲ್ಲರ ಭೋಜನವಾದ ಮೇಲೆ ಇಲ್ವಲನಲ್ಲಿ ವಾತಾಪಿಯನ್ನು ಕರೆ ಮಂತ್ರಾಕ್ಷತೆಯನ್ನು ಕೊಡುತ್ತೇನೆ ಎಂದರೆ ವಾತಾಪಿ ಬರಲು ಇವನಲ್ಲಿ ಸಂಜೀವಿನೀ ವಿದ್ಯೆ ಮರೆತಿರುತ್ತದೆ. ಮಾಂಸವೂ ಮಾಷವಾಗಿ ದೇಹ ಸೇರಿದೆ. ಆಗ ಅಗಸ್ತ್ಯರು ಹೇಳುವ ಮಂತ್ರ ಈಗ ನಾನು ಬರೆಯುತ್ತಿರುವ ವಿಷಯಕ್ಕೆ ಅತಿಮುಖ್ಯದ್ದು. . . .

ಯದಪಾಮೋಷಧೀನಾಂ ಪರಿಂಶ ಮಾರಿಷಾಮಹೇ |
ವಾತಾಪೇ ಪೀವ ಇದ್ಭವ ||
ಎಲೈ ಶರೀರವೇ ನೀರು ಮತ್ತು ಸಸ್ಯಗಳಿಗೂ ಸಂಬಂಧಿಸಿದ ಅನ್ನ (ಆಹಾರ) ಸಂಪೂರ್ಣವಾಗಿ ಸುಖವನ್ನು ಕೊಡತಕ್ಕದ್ದು ಇಂತಹ ಅನ್ನವು ನನ್ನ ಜಠರದಲ್ಲಿ ಪಚನವಾಗಿ ನನ್ನ ಆರೋಗ್ಯವನ್ನು ಸುಸ್ಥಿರವಾಗಿಡು ಎನ್ನುವುದು ಭಾವಾರ್ಥ. ತಿಂದ ಆಹಾರಗಳು ಪಚನವಾಗಿ ಜೀರ್ಣವಾಗಲಿ ಎನ್ನುವರು. ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಅಗಸ್ತ್ಯರು ಮಾಂಸಾಹಾರ ಮಾಡಿಲ್ಲ ಎನ್ನುವುದು.
ಯದಪಾಮೋಷಧೀನಾಂ - ಯತ್ ಅಪಾಂ ಓಷಧೀನಾಂ ಓಷಧಿಗಳು ಎಂದರೆ ಸಸ್ಯಗಳು. ಸಸ್ಯಗಳು ಬೆಳೆಯಲು ನೀರಿನ ಅವಶ್ಯಕತೆ ಇರುವುದು ನೀರು ಮತ್ತು ಸಸ್ಯಗಳಿಂದ ನಮ್ಮ ಅನ್ನ ಆಹಾರ ಬೆಳೆಯುತ್ತದೆ.

ವಾತಾಪೇ ಎಂದರೆ ವಾತೇನ ಪ್ರಾಣೇನಾಪ್ನೋತಿ ಸ್ವನಿರ್ವಾಹಮಿತಿ ವಾತೇನಾಪ್ಯಾಯತ ಇತಿ ವಾ ವಾತಾಪಿ ಶರೀರಂ.
ಎಂದರೆ ಪ್ರಾಣವಾಯುವಿನಿಂದ ನಮ್ಮ ಇಡೀ ಶರೀರದ ಸಮತೋಲನ ನಿರ್ವಹಿಸಲ್ಪಡುವುದರಿಂದ ವಾತಾಪಿ ಎಂದರೆ ಶರೀರ ಎನ್ನುವ ಅರ್ಥ ಕೊಡುತ್ತದೆ.
ಪೀವ ಎನ್ನುವುದನ್ನು ಸಾಯಣರು ತೃಪ್ತಿಹೊಂದಿದ ಅನ್ನುವಂತೆ ಹೇಳಿದ್ದಾರೆ, ಪೀವ ಎನ್ನುವುದು ಸ್ಥೂಲಕಾಯವನ್ನೂ ಹೇಳುವುದರಿಂದ ಎರಡೂ ಸಮಂಜಸವೇ. ಆಹಾರ ತಿಂದ ಬಳಿಕ ಸ್ಥೂಲ ಶರೀರವಾಗುವುದು ಅನ್ನುವುದೂ ಅರ್ಥವಾಗುತ್ತದೆ. ಆಮೇಲಿನ ಎರಡು ಋಕ್ಕುಗಳೂ ವಾತಾಪೇ ಪೀವ ಇದ್ಭವ ಎನ್ನುತ್ತವೆ ಅಂದರೆ ವಾತ ಸಂಬಂಧಿ (ವಾಯುವಿಗೆ ಸಂಬಂಧಿಸಿದ) ಎಲ್ಲಾ ತೊಂದರೆಗಳಿಂದ ಪಾರುಮಾಡಿ ನನ್ನ ದೇಹ ಪುಷ್ಟಿಯಾಗುವಂತೆ ಮಾಡು ಎನ್ನುವುದು ಅರ್ಥ. ಹಾಗದರೆ ಬ್ರಾಹ್ಮಣ ಮಾಂಸಾಹಾರ ಮಾಡಿದ ಎನ್ನುವುದು ಎಲ್ಲಿಂದ ? ಯಾಕಾಗಿ ? ಮಾಷ ಎನ್ನುವುದು ಮಾಂಸಾಹಾರವಾಗಿರಬಹುದಲ್ಲವೇ ಪುರಾಣದ ಕಥೆಗಳಿಂದ ಎಲ್ಲೆಲ್ಲಿಯೋ ಏನೇನೋ ಆಗಿರಬಹುದಲ್ಲ.

#ವಾತಾಪಿ_ಇಲ್ವಲ_ಪುನಃ
ಸದ್ಯೋಜಾತ ಭಟ್

पदमा गाय

 


जिसका दूध बाल कृष्ण पिया करते थे

पदमा गाय का बड़ा महत्व है पदमा गाय किसे कहते है पहले तो हम ये जानते है – एक लाख देशी गौ के दूध को 

०,००० गौ को पिलाया जाता है,उन १० ,००० गौ के दूध को १०० गौ को पिलाया जाता है अब उन १०० गायों के दूध को १० गौ को पिलाया जाता है अब उन १० गौ का दूध काढकर १ गौ को पिलाया जाता है. और जिसे पिलाया जाता है, उस गौ के जो "बछड़ा" 'बछड़ी" होता है उसे "पदमा गाय"कहतेहै.

ऐसी गौ का बछड़ा जहाँ जिस भूमि पर मूत्र त्याग करता है उसका इतना महत्व है कि यदि कोई बंध्या स्त्री उस जगह को सूँघ भी लेती है तो उसे निश्चित ही पुत्र की प्राप्ति हो जाती है.

ऐसी एक लाख गाये नन्द भवन में महल में थी जिनका दूध नन्द बाबा यशोदा जी और बाल कृष्ण पिया करते थे, तभी नन्द बाबा और यशोदा के बाल सफ़ेद नहीं थे सभी चिकने और एकदम काले थे चेहरे पर एक भी झुर्री नहीं थी, शरीर अत्यंत पुष्ट थी.

ऐसी गौ का दूध पीने से चेहरे कि चमक में कोई अंतर नहीं आता, आँखे कमजोर नहीं होती, कोई आधी-व्याधि नहीं आती.इसलिए नंद बाबा के लिए सभी कहते थे ‘साठा सो पाठा” अर्थात ६० वर्ष के नंद बाबा थे जब बाला कृष्ण का प्राकट्य हुआ था पर फिर भी जबान कि तरह दिखते थे.

_____श्री राधा विजयते नमः

जब गोपियों ने पदमा गौ के मूत्र से बाल कृष्ण का अभिषेक किया

जब पूतना का मोक्ष भगवान ने किया उसके बाद पूर्णमासी, रोहिणी, यशोदा और अन्य गोपियाँ बाल कृष्ण की शुद्धि के लिए उन्हें पदमा गौ कि गौशाला में लेकर गई. रोहिणी जी पदमा गौ को कुजली करने लगी अर्थात प्यार से सहलाने लगी,

यशोदा जी ने गौ शाला में ही गोद में बाल कृष्ण को लेकर बैठ गई और पूर्णमासी उस गौ की पूंछ से, भगवान के ही दिव्य नामो से झाडा (नजर उतारने) देने लगी. 

उसी पदमा गौ के मूत्र से बाल कृष्ण को स्नान कराया, गौ के चरणों से रज लेकर लाला के सारे अंगों में लगायी. और गौ माता से प्रार्थना करने लगी की हमारे लाल को बुरी नजर से बचाना.

गऊ सेवा करो मेरी राधे जू के प्यारो अनंत कृपा बरसेगी

जय जय गैया मैया।

जय-जय श्री राधे कृष्णा जी|

ಜಂಗಮಾಮೃತ ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಹೊಸಹಳ್ಳಿ ಹಿರೇಕೆರೂರ

September 21, 2020

ವ್ಯಕ್ತಿತ್ವ ವಿಕಸನಕ್ಕೆ ( Personality Development ) ಅತ್ಯುತ್ತಮ ಮಾರ್ಗದರ್ಶನ ವೆಂದರೆ ಭಗವದ್ಗೀತೆ

 ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶನ ಭಗವದ್ಗೀತೆ.


 “ ಭಗವದ್ಗೀತೆ ಭಾರತದ ಪವಿತ್ರ ಗ್ರಂಥ . ಸಾವಿರಾರು ವರ್ಷಗಳ ಹಿಂದೆಯೇ ಬೆಳಕಿಗೆ ಬಂದ ಕೃತಿ . ದೇಶ ವಿದೇಶಗಳ ತಾರ್ಕಿಕರು , ಪರೀಕ್ಷಕರು , ವಿಜ್ಞಾನಿಗಳು , ಆತ್ಮಜ್ಞಾನಿಗಳು ಅದನ್ನು ಮನಸಾರೆ ಕೊಂಡಾಡಿದ್ದಾರೆ . ಸಾಮಾನ್ಯನಿಗೂ ತಿಳಿಯು ವಂತಹ ಸುಲಭ ಸಂಸ್ಕೃತ ಭಾಷೆ ಯಾವುದೇ ಮತ ಪಂಥಗಳಿಗೆ ಅಂಟಿಕೊಳ್ಳದ ಅಪರೂಪದ ತತ್ವಗಳನ್ನು ಅಹಂಭಾವವಿಲ್ಲದೆ ಆತ್ಮೀಯವಾಗಿ ಹೇಳುವ ಮಮತೆಯ ಮಾತೆಯ ರೀತಿ ” -ಇವೆಲ್ಲವುಗಳಿಂದ ಗ್ರಂಥವು ವಿಶ್ವಮಾನ್ಯವಾಗಿದೆ .


 ವ್ಯಕ್ತಿತ್ವ ವಿಕಸನಕ್ಕೆ ( Personality Development ) ಅತ್ಯುತ್ತಮ ಮಾರ್ಗದರ್ಶನ ವೆಂದರೆ ಭಗವದ್ಗೀತೆ , ಇದನ್ನು ಬೋಧಿಸಿದ ಶ್ರೀಕೃಷ್ಣ ಪರಮಾತ್ಮನೇ ಪ್ರಪಂಚ ಕಂಡ ಮೊಟ್ಟಮೊದಲ ವ್ಯಕ್ತಿವಿಕಸನ ತರಬೇತುದಾರ ( HRD- Programmer ) . ತನ್ನ ಆತ್ಮೀಯ ಗೆಳೆಯ ಅರ್ಜುನನಿಗೆ ಗೀತೋಪದೇಶ ಮಾಡುವುದರ ಮೂಲಕ ಶ್ರೀಕೃಷ್ಣ ಮನುಕುಲಕ್ಕೆ ' ಬದುಕುವ ಕಲೆ'ಯ ಸಂದೇಶವನ್ನು ಸಾರಿದ್ದಾನೆ . ಗಾಂಧೀಜಿಯವರು ಒಂದೆಡೆ “ ಭಗವದ್ಗೀತೆ ನನ್ನ ತಾಯಿ : ನಾನು ಏಕಾಂಗಿ ಯಾದಾಗ , ನಿರಾಶೆ ನನ್ನನ್ನು ಮುತ್ತಿಕೊಂಡಾಗ , ಬೆಳಕಿನ ಕಿರಣ ಕಾಣದಾದಾಗ ನಾನು ಗೀತೆಯ ಮೊರೆ ಹೋಗುತ್ತೇನೆ ” ಎಂದು ಹೇಳಿರುವುದು ಮಹತ್ತರವಾದ ವಿಷಯ .


 ಭಗವದ್ಗೀತೆಯನ್ನು ಕೇವಲ ಧಾರ್ಮಿಕ ದೃಷ್ಟಿಯಲ್ಲಿ ನೋಡುವ ಬದಲಾಗಿ ಅದನ್ನು ದಾರ್ಶನಿಕ , ಅಧ್ಯಾತ್ಮಿಕ ಚಿಂತನೆಯ ನೆಲೆಗಳಲ್ಲಿ ವಿವೇಚಿಸಿದಾಗ ಅದು ಮನುಕುಲದ ಸಾರ್ವಕಾಲಿಕ ದಾರಿದೀಪ ಎಂಬ ಸತ್ಯ ಸ್ಪಷ್ಟವಾಗುತ್ತದೆ . ಈ ಹಿನ್ನೆಲೆಯಲ್ಲಿಯೇ ಪ್ರಪಂಚದ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಲಾಗಿದೆ . ವ್ಯವಹಾರ ನಿರ್ವಹಣಾ ಕೌಶಲ್ಯ ( Business Man agement Skil ) ಆಡಳಿತ ಪದಎಗಳಲ್ಲಿ ಗೀತೆಯಲ್ಲಿ ಬರುವ ವ್ಯಕ್ತಿವಿಕಸನದ ಹಲವು ವಿಚಾರಗಳನ್ನು ವಿಶೇಷವಾಗಿ ಬೋಧಿಸಲಾಗುತ್ತಿದೆ . “ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜಲ ಶಲಾಕಯ ' ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಕಳೆಯಲು ಜ್ಞಾನದ ಬೆಳಕನ್ನು ಹುಡುಕಿಕೊಳ್ಳಬೇಕು ಎಂಬುದು ಗೀತೆಯ ಬಹುಮುಖ್ಯ ಸಂದೇಶ . ನಿಜವಾದ ಅರಿವಿನ ದರ್ಶನವಾಗಬೇಕಾದರೆ , ಅಹಂಕಾರ ಎಂಬ ಪೊರೆ ಕಳಚಬೇಕು ಎಂಬ ವ್ಯಕ್ತಿ ವಿಕಸನದ ಮೂಲತತ್ವವನ್ನು ಗೀತೆ ಬೋಧಿಸುತ್ತದೆ . ಯಾರಲ್ಲಿ ಆತ್ಮಜ್ಞಾನದ ಪ್ರಕಾಶ ಬೆಳಗುತ್ತದೆಯೋ ಅಂಥವರಿಗೆ ಕಲ್ಲು , ಮಣ್ಣು , ಚಿನ್ನಗಳಲ್ಲಿ ವ್ಯತ್ಯಾಸ ಕಾಣಿಸುವುದಿಲ್ಲ . ಹಾಗೆಯೇ ಸುಖ-ದುಃಖಗಳನ್ನೂ ಸಮನಾಗಿ ನೋಡುವ ಸ್ಥಿತಪ್ರಜ್ಞತ್ವ ' ಲಭಿಸುತ್ತದೆ . 


ವ್ಯಕ್ತಿವಿಕಸನದ ಪ್ರಮುಖ ಅಗತ್ಯವಾದ ಸಮಚಿತ್ತವನ್ನು ಗೀತೆ ಪ್ರಮುಖವಾಗಿ ತಿಳಿಸುತ್ತದೆ ( ಸಮತ್ವಂ ಯೋಗಮುಚ್ಯತೇ -ಭ.ಗೀ .೨ : ೪೮ ) . 


ನಾವೇ ನಮ್ಮ ಭವಿಷ್ಯದ ಶಿಲ್ಪಿಗಳು ಧನಾತ್ಮಕವಾಗಿ ಯೋಚಿಸಿ ( Positive thinking ) ಪ್ರಯತ್ನಶೀಲರಾದರೆ ಯಶಸ್ಸು ಸದಾ ನಮ್ಮದಾಗುತ್ತದೆ . ವ್ಯಕ್ತಿತ್ವ ಎಂಬ ಅಂತರಂಗದ ಶಕ್ತಿ ವಿಕಸಿತವಾಗುವುದು ಕ್ರಿಯಾಶೀಲತೆಯಿಂದ . ಗೀತೆಯಲ್ಲಿ ಕ್ರಿಯಾಶೀಲತೆ ಜಡತ್ವಕ್ಕಿಂತ ( ನಿಶ್ಚಲಕ್ಕಿಂತ ) ಸದಾಶ್ರೇಷ್ಠ , ಜೀವನ ಕರ್ತವ್ಯದ ಸರಿಯಾದ ನಿರ್ವಹಣೆಯೇ ಕ್ರಿಯಾಶೀಲತೆ ಎಂದು ಹೇಳಲಾಗಿದೆ . “ ಸದಾ ಸಂಶಯಗ್ರಸ್ತನಿಗೆ ಸಂತೋಷವೆಂಬುದಿಲ್ಲ ” ( ಸಂಶಯಾತ್ಮಾ ವಿನಶ್ಯತಿಃ -ಭ.ಗೀ , ೪:೪೦ ) ಎಂಬ ಗೀತೆಯ ಹೇಳಿಕೆ ಎಂದೆಂದಿಗೂ ಸತ್ಯ . 


ಇಂದಿನ ಸಮಾಜದಲ್ಲಿ ಒಬ್ಬರನ್ನೊಬ್ಬರು ನಂಬದಂಥ ಸ್ಥಿತಿ ಉಂಟಾಗಿದೆ . “ ನಂಬಿಯೂ ನಂಬದಿಹ ಇರ್ಬಂದಿ ನೀನು ” ಎಂದು ಡಿ.ವಿ.ಜಿ. ಅವರು ಹೇಳಿರುವುದು ಇದನ್ನೇ .


 “ ನಂಬರು ನೆಚ್ಚರು ಬರಿದೆ ಕರೆವರು , ನಂಬಿ ಕರೆದೊಡೆ ಓ ಎನ್ನನೇ ಶಿವಾ ” ಎಂದು ಅಣ್ಣ ಬಸವಣ್ಣನವರು ಹೇಳಿದ್ದಾರೆ . 


“ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ , ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ” ಎಂಬ ಕವಿ ಜಿ.ಎಸ್.ಶಿವರುದ್ರಪ್ಪನವರ ಮಾತಿನಂತೆ ಇಂದು ನಮ್ಮನ್ನು ನಾವೇ ನಂಬದಂತಹ ಸ್ಥಿತಿ ನಿರ್ಮಾಣವಾಗಿದೆ .


 ಹೀಗಿದ್ದರೆ ಮನಶ್ಯಾಂತಿ ಹೇಗೆ ಉಂಟಾದೀತು ! ಬದುಕಿನಲ್ಲಿ ನಂಬಿಕೆ ಭರವಸೆಗಳಿದ್ದಾಗ ಬದುಕು ಆನಂದಮಯವಾಗುತ್ತದೆ . “ ಮನಸ್ಸೇ ಮನುಷ್ಯನ ಆತ್ಮೀಯ ಸ್ನೇಹಿತ ಹಾಗೂ ಕೆಟ್ಟ ಶತ್ತು ” ಎಂಬ ಗೀತೆಯ ಮಾತು ಸ್ವಯಂ ನಿರ್ವಹಣೆಗೆ ಹಿಡಿದ ಕನ್ನಡಿ . ಜ್ಞಾನಿಯಾದವನು ಮನಸ್ಸನ್ನು ನಿಯಂತ್ರಿಸುತ್ತಾನೆ . ಜೊತೆಗೆ ಸಹನೆ , ನಿರಂತರ ಪ್ರಯತ್ನಗಳಿಂದ ತನ್ನೊಳಗಿನ ಅರಿವಿನ ಬೆಳಕನ್ನು ಕಂಡುಕೊಳ್ಳುತ್ತಾನೆ ಎಂಬುದೇ ಗೀತಾದರ್ಶನ . 


ತಾನು ಯಾರು ? ಎಲ್ಲಿಂದ ಬಂದಿದ್ದೇನೆ ? ಬದುಕಿನ ಉದ್ದೇಶವೇನು ? ಸತ್ತ ನಂತರ ಎಲ್ಲಿಗೆ ಹೋಗುತ್ತೇನೆ ? ಎಂಬ ಜಿಜ್ಞಾಸೆಯ ಪ್ರಶ್ನೆಗಳು ಮನಸ್ಸಿನಲ್ಲಿ ಜಾಗೃತಗೊಂಡಾಗ ಭಗವದ್ಗೀತೆಯನ್ನು ಗ್ರಹಿಸುವ ಶಕ್ತಿ ಲಭಿಸುತ್ತದೆ . ಅದು ಆಗ ಹೆಚ್ಚು ಅರ್ಥಪೂರ್ಣವಾಗುತ್ತದೆ .


ವ್ಯಕ್ತಿ ವಿಕಸನದ ಮೊದಲ ಹಂತವೇ ಅರ್ಥಬದ್ಧವಾದ ಪ್ರಶ್ನೆಗಳನ್ನು ಕೇಳುವ ಸ್ವಭಾವ . ಭಗವದ್ಗೀತೆ ಒಟ್ಟಾರೆಯಾಗಿ ಐದು ಮೂಲಸತ್ಯಗಳನ್ನು ( Universal Truths ) ವಿವರಿಸುತ್ತದೆ . ಪರಮ ನಿಯಾಮಕನಾದ ಈಶ್ವರ . ಅವನ ಅಂಶವೇ ಆದ ಜೀವಿ , ಜೀವಿಸುವ ಪ್ರಕೃತಿ , ಸದಾ ಚಲನೆಯಲ್ಲಿರುವ ಕಾಲ ಹಾಗೂ ಜೀವಿ ತೊಡಗಿರುವ ಕರ್ಮ - ಇವೇ ಆ ಐದು ಸತ್ಯಗಳು .

July 17, 2020

ಶ್ರೀ ಗಣೇಶ ಚತುರ್ಥಿ


ಪ್ರಾಚೀನ ವ್ರತ  ರತ್ನಮಾಲ  ಪುಸ್ತಕದಿಂದ ಸಂಗ್ರಹ

೧. ಎಲ್ಲಾ ವ್ರತಗಳಿಗಿಂತ ಅಗ್ರಗಣ್ಯವಾಗಿರುವ ಪೂಜೆ..,
ಪ್ರಾಯಶ್ಚಿತ್ತ ಸಂಕಲ್ಪದಿಂದ ಪ್ರಾರಂಭ ಮಾಡಿ.., ಸಂಕಲ್ಪಕ್ಕೆ ಮುಂಚೆ..

೨. ಗಣಪತಿಯು ಆದಷ್ಟೂ ಬೆಳ್ಳಿ ಅಥವ ಮಣ್ಣಿನ ಗಣಪತಿ ತುಂಬಾ ಶ್ರೇಷ್ಟ..
ದೂರ್ವಾ ಸಗಣಿ ಗಣಪತಿ ಮಹಾಶ್ರೇಷ್ಟ...

೩. ಮನೆಯ ಹಿರಿಯರ ಆಶೀರ್ವಾದದೊಂದಿಗೆ ವ್ರತಾರಂಭ ಮಾಡಿ..

೪. ಗಣಪತಿಯು ರಕ್ತಾಂಭರದಾರಿ ಎನಿಸುವುದರಿಂದ, ಗಣಪತಿಗೆ ಅರ್ಪಿಸುವ ವಸ್ತ್ರವನ್ನು, ಕುಂಕುಮದಿಂದ ಕೆಂಪಾಗಿಸಿದ, ವಸ್ತ್ರದ್ವಯವನ್ನೇ ಅರ್ಪಿಸಬೇಕು..!.
ಅರಿಸಿನದ್ದು ಅರ್ಪಿಸಬಹುದು

೫. ಗಣಪತಿಗೆ ತುಲಸೀ ಪೂಜೆ ಮಾಡಬಾರದು, ಎಂಬ ನಿಯಮ ಇದೆ..
ಆದರೆ ವ್ರತಗಳಲ್ಲಿ ಖಂಡಿತಾ ಮಾಡಬಹುದು, ನಿಷೇಧ ಇಲ್ಲ....

೬. ವಾಯನದಾನಕ್ಕೆ ಎರಡು ತೆಂಗಿನಕಾಯಿ, ಐದು ವೀಳ್ಯದೆಲೆ, ಐದು ಅಡಿಕೆ, ಅರ್ಧ ಸೇರು ಅಕ್ಕಿ, ಹಣ್ಣು ಮತ್ತು ಭಕ್ಷ್ಯಗಳ ಜೊತೆಗೆ ಇಟ್ಟು, ಎರಡು ಬಾಳೆ ಎಲೆ ಮುಚ್ಚಿ, ಬ್ರಾಹ್ಮಣರನ್ನು ಪೂರ್ವಕ್ಕೆ ಕೂಡಿಸಿ, ದಾನಿಯು ಉತ್ತರಕ್ಕೆ ಮುಖ ಮಾಡಿ, ಸಂಕಲ್ಪ ಮಾಡಿ ದಾನ ಮಾಡಬೇಕು ...

೭. ಆಚಮನವನ್ನು ಮಾಡುವಾಗ ಪ್ರತಿಯೊಂದು ಸಾರಿಯೂ ಒಂದೊಂದು ನಾಮಕ್ಕೂ, ನಮ್ಮ ದೇಹದ ವಿವಿಧ ಅಂಗವನ್ನು ಸ್ಪರ್ಶಿಸಬೇಕು.., ನಮ್ಮ ಶರೀರದ ಪ್ರತಿಯೊಂದು ಅಂಗಾಂಗದಲ್ಲೂ ಪರಮಾತ್ಮನು ನೆಲೆಸಿದ್ದಾನೆ ಎಂದು ಸೂಚಿಸುವ ಉದಾತ್ತ ತತ್ವವೇ ಆಚಮನ...
ಕೆಲವರು ವ್ರತ ಪ್ರಾರಂಭದಲ್ಲಿ ಮಾತ್ರ ಮಾಡಿ, ನಂತರ ಸುಮ್ಮನೆ ಮಂತ್ರ ಹೇಳಿಕೊಳ್ಳುತ್ತಾರೆ, ಇದು ತಪ್ಪು....

೮. ಮನೆಯಲ್ಲಿ ವ್ರತದ ದಿನ, ಹಗಲಿನಲ್ಲಿ ಮಲಗಬಾರದು, (ಅನಾರೋಗ್ಯಸ್ಥರೂ ಮತ್ತು ವಯಸ್ಸಾದವರು ಮಲಗಬಹುದು)..

೯. ಹಸೀ ಹಾಲನ್ನೇ ಪೂಜೆಗೆ ಬಳಸಬೇಕು..

೧೦. ನುಚ್ಚಿಲ್ಲದ ಅಕ್ಕಿಯಿಂದ ಅಕ್ಷತೆಯನ್ನು ಮಾಡಿಟ್ಟುಕೊಳ್ಳಿ...

೧೧. ಗಣಪತಿಗೆ

ಬೆಲ್ಲದ ಅಚ್ಚು / ಪಂಚಕಜ್ಜಾಯ/ ಮೋದಕ/ ಲಾಡು / ಕರಿಗಡುಬು/
ನೇರಳೆಹಣ್ಣು, ಬೇಲದ ಹಣ್ಣು, ಸೀಬೆಹಣ್ಣು, ಒಣದ್ರಾಕ್ಷಿ, ಖರ್ಜೂರ, ಚಿಗಳಿ, ತೆಂಬಿಟ್ಟು, ಕಜ್ಜಾಯ, .....
...... ಇತ್ಯಾದಿ ..
ತುಂಬಾ ಇಷ್ಟ ಮತ್ತು ಶ್ರೇಷ್ಠ..!

೧೨.ಬೆಳ್ಳಿಗಣಪತಿಯನ್ನು ಮೊದಲು ಅರಿಸಿನದ ನೀರಿನಿಂದ ಶುದ್ಧ ಮಾಡಿ, ಪೂಜೆಗೆ ಇಟ್ಟುಕೊಳ್ಳಿ...

೧೩. ೨೧ ಗರಿಕೆಯ, ೨೧ ಕಟ್ಟುಗಳುಳ್ಳ, ಹರಿಸಿನ ಅಥವ ಗಂಧ ಹಚ್ಚಿದ ದಾರದಿಂದ, ಹಾರ ಮಾಡಿ, ಹಾಕಿದರೆ ತುಂಬಾ ವಿಶೇಷ ಫಲ..
ಸಾಧ್ಯವಾಗದವರು ೩೩ ಗರಿಕೆಗಳನ್ನು ಕೈಯಲ್ಲಿ ಹಿಡಿದು..
ಶುಕ್ಲಾಂಭರದರಂ.....................
.................
..............ವಿಘ್ನೋಪ ಶಾಂತಯೇ||
ಈ ಶ್ಲೋಕ ೩೩ ಸಾರಿ ಹೇಳಿ ಗಣಪತಿಗೆ ಅರ್ಪಿಸಿ, ತುಂಬಾ ವಿಶೇಷ...

೧೪. ಪತ್ರೆಗಳು

a. ಗರಿಕೆ : ಇಷ್ಟಾರ್ಥ ಸಿದ್ಧಿ, ಪೂಜೆಯ ನಂತರ ಗರಿಕೆಯನ್ನು ಹಣವಿಡುವ ಜಾಗದಲ್ಲಿ ಇಡಿ, ಮತ್ತು 9 ಗರಿಕೆಯನ್ನು ಕುಡಿಯೋ ನೀರಿಗೆ ಹಾಕಿ...
ಶನೇಶ್ವರ ದೋಷ, ಸಾಡೇಸಾತ್ ನಡೆಯುತ್ತಿರೋರು, ಗರಿಕೆಯಿಂದ ಪೂಜೆ ಮಾಡಿ..
೨. ದವನ ಪತ್ರೆ : ಸಕಲ ಕಾರ್ಯ ಸಿದ್ಧಿ, ಕೆಲಸದಲ್ಲಿ ಯಾವ ತೊಂದರೆ ಬರದೇ, ಅಧಿಕ ಲಾಭವಾಗುತ್ತದೆ ..
೩. ಬಿಲ್ವಪತ್ರೆ : ಋಣಭಾದೆ ರೋಗಭಾದೆ ನಿವಾರಣೆಯಾಗುತ್ತದೆ ..
೪. ಶಮೀ ಪತ್ರೆ : ಸಾಡೇಸಾತ್, ಅಷ್ಟಮ, ಪಂಚಮ, ಇತ್ಯಾದಿ ಶನಿದೋಷಗಳು ನಿವಾರಣೆಯಾಗುತ್ತದೆ ..
೫. ಅರಳೀ ಪತ್ರೆ : ಸಂತಾನವಾಗದವರಿಗೆ ಸಂತಾನ ಭಾಗ್ಯ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..,
೬. ಉತ್ತರಾಣಿ ಪತ್ರೆ : ವಿದ್ಯಾರ್ಥಿಗಳಿಗೆ ಅತ್ಯಂತ ಶುಭ, ಸಕಲ ವಿದ್ಯಾ ಬುದ್ದಿ ಯೋಗ..
೭. ದರ್ಬೆ : ಸಕಲ ಕೇತು ದೋಷ, ನಕ್ಷತ್ರ ದೋಷ ನಿವಾರಣೆಯಾಗುತ್ತದೆ ..
......... ಇತ್ಯಾದಿ.

೧೭. ಹೂವುಗಳು

ಬಿಳಿ ಎಕ್ಕದ ಹೂವು : ಸಮಸ್ತ ರೋಗ ನಿವಾರಣೆ, ಆರೋಗ್ಯ ಭಾಗ್ಯ..
ದ್ರೋಣ ಪುಷ್ಪ : ಶತ್ರು ನಾಷ ಮತ್ತು ನೆಮ್ಮದಿ..
ತುಂಬೆ ಹೂವು : ದೈವಭಲ ಜಾಸ್ತಿಯಾಗುತ್ತದೆ, ಭಕ್ತಿ ಜಾಸ್ತಿ..
ಮಲ್ಲಿಗೆ ಹೂವು : ಸಮಸ್ತವಾದ ದೈಹಿಕ ಹಾಗೂ ಮಾನಸಿಕ ರೋಗ ನಿವಾರಣೆಯಾಗುತ್ತದೆ...
ಪಾರಿಜಾತ : ಸರ್ಪದೋಷ ನಿವಾರಣೆ ಮಾಡುತ್ತೆ..
ರುದ್ರಾಕ್ಷಿ ಹೂವು : ಎಷ್ಟೇ ಕಷ್ಟ ಬಂದರು ಜಯ ನಿಮ್ಮದಾಗುತ್ತೆ..
ಕಣಗಲೆ ಹೂವು : ಭಯ ಭೀತಿ ನಿವಾರಣೆ, ಮಾಂತ್ರಿಕ ಭಾದೆ ನಿವಾರಣೆ, ಹಾಗೂ ವಿದ್ಯಾಪ್ರಾಪ್ತಿ..
ಸೂರ್ಯಕಾಂತಿ : ಅಷ್ಟೈಶ್ವರ್ಯ ಪ್ರಾಪ್ತಿ, ಉದ್ಯೋಗ ಭಾಧೆ ನಿವಾರಣೆ..
..... ಇತ್ಯಾದಿ..

ಹಣ್ಣುಗಳು

ಬಾಳೆಹಣ್ಣು : ಇಷ್ಟಾರ್ಥ ಸಿದ್ಧಿ,
ಯಾಲಕ್ಕಿ ಬಾಳೆಹಣ್ಣು : ನಿಂತು ಹೋದ ಕಾರ್ಯಗಳು ಮುಂದುವರಿಯುತ್ತದೆ, ಶೀಘ್ರವಾಗಿ ನೆರವೇರುತ್ತದೆ ...
ಬಾಳೆಹಣ್ಣು ರಸಾಯನ : ಸಾಲದ ಭಾದೆ ನಿವಾರಣೆ, ಬರಬೇಕಾದ ಹಣ ಬರುತ್ತದೆ,
ಶುಭ ಕಾರ್ಯಕ್ಕೆ ಬೇಕಾದ ಹಣ ಮಂಜೂರ್ ಆಗಿ ಸಿಗುತ್ತದೆ ..
ಪೂರ್ಣಫಲ/ ತೆಂಗಿನಕಾಯಿ : ಕೆಲಸ ಕಾರ್ಯಗಳು ನಿಮ್ಮ ಮನಸ್ಸಿನಂತೆಯೇ ನೆರವೇರುತ್ತದೆ.., ಬಹಳ ಸುಲಭವಾಗಿ ಆಗುತ್ತದೆ, ಸಕಲ ಕಾರ್ಯ ದಿಗ್ವಿಜಯವಾಗುತ್ತದೆ..
೫. ಅಂಜೂರ : ಆರೋಗ್ಯಭಾಗ್ಯ, B.P, ನಾರ್ಮಲ್ ಆಗುತ್ತದೆ..,
ನೇರಳೆ ಹಣ್ಣು ; ಬೆನ್ನು ನೋವು, ಮಂಡೀ ನೋವು, ಸೊಂಟದ ನೋವು ವಾಸಿಯಾಗುತ್ತದೆ, ಶನಿಕಾಟ ನಿವಾರಣೆಯಾಗುತ್ತದೆ ..
ಸೀಬೆಹಣ್ಣು : ಎಲ್ಲರಿಂದಲೂ ರಾಜಗೌರವ, ಸತ್ಕಾರ ಸಿಗುತ್ತದೆ, ಉದರವ್ಯಾಧಿ ನಿವಾರಣೆಯಾಗುತ್ತದೆ ..
ವಿವಾಹ ಭಾಗ್ಯವಾಗುತ್ತದೆ..,
ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಧಿಕ ಲಾಭವಾಗುತ್ತದೆ ...
.......ಇತ್ಯಾದಿ ..

ಭಕ್ಷ್ಯಗಳು 

ಮೋದಕ : ಇಷ್ಟಾರ್ಥ ಸಿದ್ಧಿ ಮತ್ತು ಸಾಕ್ಷಾತ್ ಗಣಪತಿಯೇ ನಮ್ಮ ಮನೆಯನ್ನು ಕಾಯುತ್ತಾನೆ.., ಜಾತಕ ದೋಷಗಳು ನಿವಾರಣೆಯಾಗುತ್ತದೆ.

ಲಾಡು : ಮನೆಯಲ್ಲಿ ಮಂಗಳ ಕಾರ್ಯಗಳು ಹೆಚ್ಚಾಗಿ ನಡೆಯುತ್ತದೆ, ವಿವಾಹ ಭಾಗ್ಯವಾಗುತ್ತದೆ ...
ಕರಿಗಡುಬು : ಸರ್ವರಿಗೂ ಆರೋಗ್ಯ ಭಾಗ್ಯ , ಮತ್ತು ಲಕ್ಷ್ಮೀ ಪ್ರಾಪ್ತಿ..
ಅಪ್ಪಂ ಅಥವಾ ಕಜ್ಜಾಯ : ಹಿರಿಯರ ಶಾಪ ನಿವಾರಣೆ,
ಒಬ್ಬಟ್ಟು : ಕುಜದೋಷ ನಿವಾರಣೆಯಾಗುತ್ತದೆ, ವಿವಾಹದ ದೋಷಗಳು ನಿವಾರಣೆಯಾಗುತ್ತದೆ ...
ಬೆಲ್ಲದ ಅಚ್ಚು ; ಕುಲದೇವರ ಬಲ, ದಾರಿದ್ರ್ಯ ನಿವಾರಣೆ, ಇಷ್ಟಾರ್ಥ ಸಿದ್ಧಿ, ಶುಗರ್ control, ಆಗುತ್ತೆ, ಅಧಿಕ ಲಾಭವಾಗುತ್ತೆ, ಅಪಮೃತ್ಯು ನಿವಾರಣೆಯಾಗುತ್ತದೆ ..
ಪಂಚಕಜ್ಜಾಯ : ಸಕಲ ಗ್ರಹ ಕಾಟ ನಿವಾರಣೆ, ಉದ್ಯೋಗ ಭಾಗ್ಯ,
ಇಷ್ಟಾರ್ಥ ಸಿದ್ಧಿ,
ಶನಿ ದೋಷ, ರಾಹು ದೋಷ ನಿವಾರಣೆ, .. ಸರ್ವತಾ ಅಭಿವೃದ್ಧಿ..






ಗಣಪತಿಗೆ 21 ನಮಸ್ಕಾರಗಳು ಏಕೆ ಮಾಡಬೇಕು. 

ನಮ್ಮ ದೇಹದಲ್ಲಿರುವ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವುಗಳು ವೃದ್ಧಿಯಾಗಲು ಮಾಡುತ್ತೇವೆ. ಎಡಗೈಯಿಂದ ಬಲ ಕಿವಿ, ಬಲಗೈಯಿಂದ ಎಡ ಕಿವಿ ಹಿಡಿದುಕೊಂಡು ದೇಹ ನೇರವಾಗಿ ಕುಳಿತು ಹೇಳಬೇಕು.
5 ಪಂಚ ಭೂತಗಳು (ಭೂಮಿ, ನೀರು, ಅಗ್ನಿ, ವಾಯು, ಆಕಾಶ)

5 ಪಂಚೇಂದ್ರಿಯಗಳು (ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ)
5 ಕರ್ಮೇಂದ್ರಿಯಗಳು (ಕೈ, ಕಾಲು, ಬಾಯಿ, ಗುದ, ಗುಹ್ಯ)
5 ಪಂಚ ತನ್ಮ0ತೃಗಳು ( ರೂಪ, ಶಬ್ಧ, ಗಂಧ, ರಸ, ಸ್ಪರ್ಶ) 

1 ಮನಸು.
14ವರ್ಷದ ಮಕ್ಕುಳು 14 ನಮಸ್ಕಾರ, 14ಕ್ಕೆ ಮೇಲ್ಪಟ್ಟುವರು 21 ನಮಸ್ಕಾರ ಮಾಡಿದರೆ ಒಳ್ಳೇದು. ಮದುವೆ ಆದಂತಹವರು ಉತ್ತರ ದಿಕ್ಕಿಗೆ ಮುಖಮಾಡಿ ಹಾಗೂ ವಯಸ್ಕರು ಮತ್ತು ಮಕ್ಕಳು ಪೂರ್ವದಿಕ್ಕೆಗೆ ಮುಖ ಮಾಡಿ ಗಣೇಶ ನಮಸ್ಕಾರ ಮಾಡಿದರೆ ಒಳ್ಳೇದು.

*********

ಗರಿಕೆಯ ಹಿನ್ನೆಲೆ ಮತ್ತು ಮಹತ್ವ

ಗರಿಕೆ ಹುಲ್ಲಿಗೆ ಪೂಜೆಯಲ್ಲಿ ಅತ್ಯಂತ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಯನ್ನು ನೀಡಲಾಗುತ್ತದೆ. ಗರಿಕೆಯು ದೇವರಾದ ಶಿವ, ದೇವಿ ಶಕ್ತಿ ಮತ್ತು ಗಣೇಶ ದೇವರನ್ನು ಒಟ್ಟಾಗಿ ಸೇರಿಸುತ್ತದೆ. 
ಹಿಂದೂ ಧರ್ಮದಲ್ಲಿ ಗರಿಕೆಯಿಲ್ಲದೆ ಯಾವ ಪೂಜೆಯು ಸಂಪೂರ್ಣವಾಗುವುದಿಲ್ಲ. ಪವಿತ್ರವಾದ ಗರಿಕೆಯನ್ನು ಮೊದಲು ಪೂಜಿತನಾದ ಗಣೇಶನಿಗೆ ಅರ್ಪಿಸಲೇಬೇಕು. ಪೂಜೆಯಲ್ಲಿ ಪವಿತ್ರವಾದ ಸ್ಥಾನವನ್ನು ಮೊದಲು ತುಳಸಿ ಗಿಡಕ್ಕೆ ನೀಡಲಾಗಿದೆ. ತುಳಸಿಯ ನಂತರ ಗರಿಕೆ ಹುಲ್ಲಿಗೆ ಎರಡನೇ ಸ್ಥಾನ ನೀಡಲಾಗಿದೆ. ತುಳಸಿ ಮತ್ತು ಗರಿಕೆ ಎರಡೂ ಸಹ ಪವಿತ್ರವೆಂದು ಭಾವಿಸಲಾಗಿದೆ. ಗಣೇಶನ ಪೂಜೆಯಲ್ಲಿ ಗರಿಕೆಯು ವಿಶೇಷ ಸ್ಥಾನವನ್ನು ಪಡೆದಿದೆ.
ಗರಿಕೆಯು ಎಲೆಗಳು ಮೂರು ಕತ್ತಿಗಳ ಆಕಾರದ ರೀತಿಯಲ್ಲಿ ಮೊದಲು ಚಿಗುರೊಡೆಯುತ್ತವೆ. ಆ ಮೂರು ಗರಿಕೆಯ ಎಲೆಗಳು ಸಹ ಮೂರು ದೇವ ತತ್ವಗಳಾದ ಶಿವ, ಶಕ್ತಿ,ಮತ್ತು ಗಣೇಶನನ್ನು ಪ್ರತಿಬಿಂಬಿಸುತ್ತವೆ.
ಗರಿಕೆಯ ಹುಲ್ಲಿಗೆ ಗಣೇಶ ದೇವರ ಆತ್ಮವನ್ನು ಆಕರ್ಷಿಸುವ ಶಕ್ತಿಯಿದೆ ಹಾಗೆ ದೇವರ ತತ್ವಗಳನ್ನು ನೀರಿನ ಹನಿಗಳ ಮೂಲಕ ಗರಿಕೆಯ ಎಲೆಗಳಿಗೆ ಹೀರಿಕೊಳ್ಳುವ ಸಾಮರ್ಥ್ಯ ಇದೆ. 21 ಗರಿಕೆಯನ್ನು ಗಣೇಶ ದೇವನಿಗೆ ಪೂಜೆ ಮಾಡುವಾಗ ಅರ್ಪಿಸಿ ಭಕ್ತಿಯಿಂದ ಪೂಜಿಸುವುದರಿಂದ ಅದೃಷ್ಟವನ್ನು ಹೊತ್ತು ತರುವುದು ಎಂದು ನಂಬಲಾಗಿದೆ.

ಗರಿಕೆಯ ಗಿಡವನ್ನು ಗುರುತಿಸುವುದು ಹೇಗೆ ?

ಗರಿಕೆಯು ಒಂದೇ ಬೇರಿನಲ್ಲಿ ಮೊದಲು ಮೂರು ಉದ್ದನೆಯ ಎಲೆಗಳಾಗಿ ಬೆಳೆದು ನಂತರ ಮೂರ್ನಾಲ್ಕು ಗಂಟುಳಾಗಿ ಅಲ್ಲಿಂದ ಎಲೆಗಳು ಚಿಗುರೊಡೆದು ಮತ್ತೆ ಉದ್ದಕ್ಕೆ ಬೆಳೆಯುತ್ತವೆ. ಗರಿಕೆಯ ಎಲೆಯನ್ನು ನೀವು ಒಂದು ವೇಳೆ ಪೂಜೆಗೆ ಕಿತ್ತರೂ ಸಹ ಅದು ಬೇಗ ಬೇಗನೇ ಚಿಗುರೊಡೆದು ಮರುಹುಟ್ಟು ಪಡೆದು ಪುನರ್ಜೀವ ಪಡೆಯುವುದು.

ಎಂತಹ ಗರಿಕೆಯನ್ನು ಗಣೇಶನಿಗೆ ಅರ್ಪಿಸಬಾರದು ?



ಗಣೇಶನಿಗೆ ಹೂವು ಹೊಡೆದ ಗರಿಕೆಯನ್ನು ಅರ್ಪಿಸಬಾರದು. ಯಾಕೆಂದರೆ ಎಲೆಗಳು ಹಣ್ಣಾಗಿ ಹೋಗಿರುತ್ತವೆ ಬಣ್ಣವೂ ಸ್ವಲ್ಪ ಬದಲಾಗುತ್ತದೆ. ಆದ್ದರಿಂದ ಅಂತಹ ಹಣ್ಣಾಗಿ ಹೂವು ಬಿಟ್ಟ ಗರಿಕೆಯ ಹುಲ್ಲನ್ನು ಪೂಜೆಗೆ ಬಳಸಬಾರದು. ಗರಿಕೆಯಲ್ಲಿರುವ ಜೀವಶಕ್ತಿಯ ಉಲ್ಲಾಸ ಕೂಡ ಕಡಿಮೆಯಾಗಿರುತ್ತದೆ. ಗರಿಕೆಯಲ್ಲಿರುವ ದೇವತೆಗಳನ್ನು ಆಕರ್ಷಿಸುವ ಶಕ್ತಿ ಸಾಮರ್ಥ್ಯ ಕೂಡ ಕಡಿಮೆ ಆಗಿರುವುದು. ಆದ್ದರಿಂದ ಹೂವು ಹೊಡೆದ ಗರಿಕೆಯು ಪೂಜೆಗೆ ಬಳಸಬಾರದು.

********

ತುಳಸಿಯನ್ನು ನೇರವಾಗಿ ಗಣಪತಿಗೆ ಅರ್ಪಿಸಬಾರದು. 
ಹಿರಿಯ ವಿದ್ವಾಂಸರ ಪ್ರಕಾರ ವಿಷ್ಣುವಿಗೆ ಅರ್ಪಿತವಾದ ಹರಿನಿರ್ಮಾಲ್ಯ ರೂಪವಾದ ತುಳಸಿಯನ್ನು ಗಣಪತಿಗೆ ಅರ್ಪಿಸಬಹುದು. 
ಬ್ರಹ್ಮ ವೈವರ್ತ ಪುರಾಣದಲ್ಲಿ ಹೀಗೊಂದು ಕಥೆಯಿದೆ. ತುಳಸಿಯು ಗಣಪತಿಯನ್ನು ನೋಡಿ ಬಹಳ ಮೋಹಿತಳಾಗುತ್ತಾಳೆ. ಆದರೆ ಗಣಪತಿಯು ಪರಮ ವೈರಾಗ್ಯ ಮೂರ್ತಿಯಾಗಿ ತಪಸ್ಸನ್ನು ಆಚರಿಸುತ್ತಿರುತ್ತಾನೆ. ಆಗ ತುಳಸಿಯು ಅವನನ್ನು ಒಲಿಸಿಕೊಳ್ಳಲು ಬಹಳ ಪ್ರಯತ್ನವನ್ನು ಪಡುತ್ತಾಳೆ. ಆದರೆ ಗಣಪತಿಯು ಇವಳ ಯಾವ ಚೇಷ್ಟೆಗೂ ಬಗ್ಗದೆ ಇದ್ದಾಗ ತುಳಸಿಯು ಕಾಮನ ಸಹಾಯವನ್ನು ಕೇಳುತ್ತಾಳೆ. ಆಗ ಕಾಮನೂ ಗಣಪತಿಯ ವೈರಾಗ್ಯವನ್ನು ಹಾಳು ಮಾಡಲು ಪರಿಪರಿಯಾಗಿ ಪ್ರಯತ್ನಿಸುತ್ತಾನೆ. ಆದರೆ ಗಣಪತಿಯು ಕಾಮನ ಯಾವುದೇ ಬಾಣಗಳಿಗೆ ಸೋಲುವುದಿಲ್ಲ. ಆಗ ಸೋತ ಕಾಮನು ತುಳಸಿಯಲ್ಲಿ ತನ್ನಿಂದ ಇನ್ನು ಸಾಧ್ಯವಿಲ್ಲ ಎಂದು ಹೇಳಿ ಹೋಗುತ್ತಾನೆ. ಹೀಗೆ ಗಣಪತಿಯು ಇಕ್ಷುಚಾಪನಾದ ಕಾಮನನ್ನು ಗೆಲಿದವನು. ಮುಂದೆ ಸಿಟ್ಟಾದ ತುಳಸಿ ಗಣಪತಿಗೆ ನೀನು ನಿನ್ನ ಸುಂದರ ರೂಪದಿಂದ ಅಹಂಕಾರ ಪಡುತ್ತಿದ್ದೀ. ಆದ್ದರಿಂದ ನಿನ್ನ ಸೌಂದರ್ಯಕ್ಕೆ ಕಾರಣವಾದ ಈ ದಂತಗಳಲ್ಲಿ ಒಂದು ದಂತವು ಮುಂದೆ ನಡೆಯುವ ಯುದ್ಧದಲ್ಲಿ ನಾಶವಾಗಲಿ ಎಂದು ಶಾಪವನ್ನು ಕೊಡುತ್ತಾಳೆ. ಆಗ ಸಿಟ್ಟಾದ ಗಣಪತಿಯು ನೀನು ವೃಕ್ಷವಾಗಿ ಹುಟ್ಟು ಎಂದು ಪ್ರತಿ ಶಾಪವನ್ನು ಕೊಡುತ್ತಾನೆ. ಆಗ ತುಳಸಿಯು ದುಃಖದಿಂದ ಗಣಪತಿಯನ್ನು ಕ್ಷಮೆ ಕೇಳಿ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾಳೆ. ಆಗ ಗಣಪತಿಯು ನೀನು ವೃಕ್ಷವಾಗಿ ಹುಟ್ಟಿದರೂ ವಿಷ್ಣುವಿಗೆ ಅತ್ಯಂತ ಪ್ರಿಯಳಾಗುತ್ತೀ. ಆದರೆ ನಾನು ಮಾತ್ರ ಎಂದೆಂದಿಗೂ ನಿನ್ನನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾನೆ. ಆದ್ದರಿಂದ ಗಣಪತಿಗೆ ತುಳಸಿ ಹಾಕಬಾರದು ಎಂದು ಸಂಪ್ರದಾಯ ಬಂದಿದೆ. ವಾದಿರಾಜರೂ ತಮ್ಮ ಲಕ್ಷ್ಮೀಶೋಭಾನೆಯಲ್ಲಿ ಲಕ್ಷ್ಮಿಯು ಹಿಡಿದ ಹಾರದಲ್ಲಿ ತುಳಸಿಯು ಇರುವುದರಿಂದ ಇದು ಗಣಪತಿಗೆ ಯೋಗ್ಯವಲ್ಲ ಎಂದು ಯೋಚಿಸುತ್ತಾಳೆ ಎಂದು ಹೇಳಿದ್ದಾರೆ. (ಬಹಳ ಹಿಂದೆ ಇಲ್ಲಿ ಗಣಪತಿಗೆ ತುಳಸಿ ಯಾಕೆ ಹಾಕಬಾರದು ಎಂದು ಯಾರೋ ಒಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ಸೇರಿ ಈ ಲೇಖನ) ಅನೇಕ ಹಿರಿಯ ವಿದ್ವಾಂಸರ ಪ್ರಕಾರ ವಿಷ್ಣುವಿಗೆ ಅರ್ಪಿತವಾದ ಹರಿನಿರ್ಮಾಲ್ಯ ರೂಪವಾದ ತುಳಸಿಯನ್ನು ಗಣಪತಿಗೆ ಅರ್ಪಿಸಬಹುದು. ಆದರೆ ನೇರವಾಗಿ ಅರ್ಪಿಸಬಾರದು.

ಸಂಗ್ರಹ -ಶ್ರೀಪ್ರಸನ್ನ
*********

ಗಣಪತಿ ಬಪ್ಪಾ ಮೋರ್ಯ - ಇದರ ಅರ್ಥ

ಗಣಪತಿ ಅಂದ್ರೆ ಗಣೇಶ, ಬಪ್ಪ ಅಂದ್ರೆ ದೊಡ್ಡಣ್ಣ(ದೊಡ್ಡವ)
ಮೊರ್ಯ?
ಮೋರ್ಯ ಅನ್ನೋದು ಮಹಾರಾಷ್ಟ್ರದ ಪುಣೆಯ ಸಮೀಪ ಚಿಂಚಾವಾಡ ದ ಹತ್ತಿರ 12ನೆ ಶತಮಾನದಲ್ಲಿ ಬದುಕಿದ್ದ ಮೋರ್ಯ_ಗೋಸಾವಿ ಎಂಬ ಶ್ರೇಷ್ಠ ಸಂತನ ಹೆಸರು . ಅವನೊಬ್ಬ ಶ್ರೇಷ್ಠ ಗಣೇಶನ ಭಕ್ತನಾಗಿದ್ದ. ಅವನ ಮರಣಾನಂತರ ಅವನ ಹೆಸರಿನ ಮೋರ್ಯ ಎಂಬ ಪದ ಗಣಪತಿ ಬಪ್ಪ ಮೋರ್ಯ ಅಂತ ಉಳಿಯಿತು..

ಗಣಪತಿ ಬಪ್ಪಾ ಮೋರ್ಯ

ಮೋರಯಾ ಅಂದರೆ ಸಮೋರ ಯಾ ಅಂದರೆ ಮುಂದೆ ಬಾ ಅಂತ ಸಮೋರ ಶಬ್ದ ದ ತದ್ಭವ ಮೋರ ಯಾ ಮುಂದೆ ಬಂದು ಆಶೀರ್ವದಿಸು


ಹರಿ ಓಂ
********

ಗಣೇಶ ಚತುರ್ಥಿ 

ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ ಗಣೇಶ ಚತುರ್ಥಿ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ.ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ,ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.

ಗಣಪತಿ ಪೂಜೆ (ಕೆಲವು ಮಾಹಿತಿಗಳು)

ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ |

ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ಊತಿಭಿ: ಸೀದ ಸಾಧನಂ || (ಯಜುರ್ವೇದ ಸಂಹಿತೆ)

ತ್ವಮೇವ ಕೇವಲಂ ಕರ್ತಾಸಿ ತ್ವಮೇವ ಕೇವಲಂ ಧರ್ತಾಸಿ ತ್ವಮೇವ ಕೇವಲಂ ಹರ್ತಾಸಿ ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ ತ್ವಂ ಸಾಕ್ಷಾದಾತ್ಮಾಸಿ ಆತ್ಮಂ ತ್ವಂ ಬ್ರಹ್ಮಾ ವಿಷ್ಣುಸ್ತ್ವಂ ರುದ್ರಸ್ತ್ವಂ ಇಂದ್ರಸ್ತ್ವಂ ಅಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮಭೂರ್ಭುವಸ್ಸುವರೋಮ್. ಗಣೇಶಾಥರ್ವಶೀರ್ಷದಲ್ಲಿ ಹೀಗೆ ಆತನನ್ನು ವರ್ಣಿಸಿದೆ.

ಗಣೇಶನು ಶಿವನ ಗಣಗಳ ಅಧಿಪತಿ. ಸ್ವರ್ಣಗೌರಿಯ ಪ್ರೀತಿಯ ಪುತ್ರ. ವಿಘ್ನ ವಿನಾಶಕ ವಿನಾಯಕ.

ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗುದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ. ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು.

ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಇದರ ಬಗೆಗಿನ ಕಥೆ ಎಲ್ಲರಿಗೂ ತಿಳಿದಿರುವುದೇ.

ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ,ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತಿ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದ ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.

ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತುದಿನಗಳವರೆವಿಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.

ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.

*********

" ಶ್ರೀ ಗಣೇಶ ಕಥಾ "

ಗಣಪತಿಯು ಪರಮಾತ್ಮನ ಮಹಾಭಕ್ತನಾಗಿದ್ದು; ಭಕ್ತರ ಸಕಲೇಷ್ಟಗಳನ್ನು ಪೂರೈಸುವವನಾಗಿದ್ದಾನೆ. ಗಣಪತಿಗೆ ಪ್ರಿಯವಾದ ತಿಥಿಯು ಚತುರ್ಥಿಯು. ಅದರಲ್ಲಿಯೂ ಭಾದ್ರಪದ ಶುಕ್ಲ ಚತುರ್ಥಿಯು ಅತ್ಯಂತ ಪ್ರಿಯವಾದುದು. ಅಂದು ಯಾರು ಭಕ್ತಿಯಿಂದ ಗಣಪತಿಯ ಅಂತರ್ಯಾಮಿಯಾದ ಶ್ರೀ ವಿಶ್ವನಾಮಕ ಜಾಗ್ರದಾವಸ್ಥಾ ಪ್ರೇರಕನನ್ನು ಪೂಜಿಸುವರೋ ಅವರಿಗೆ ಅಂತರ್ಯಾಮಿ ಸಕಲೇಷ್ಟಗಳನ್ನೂ ಕೊಡುತ್ತಾನೆ.

ಈ ಚತುರ್ಥಿಯಂದು ಶುದ್ಧರಾಗಿ ಬೆಳ್ಳಿ ಅಥವಾ ಮಣ್ಣಿನ ಪ್ರತಿಮೆಯನ್ನಾಗಲೀ ಮಾಡಿಸಿ ಆ ಪ್ರತಿಮೆಯಲ್ಲಿ ಗಣಪತಿಯ ಅಂತರ್ಯಾಮಿಯಾದ ವಿಶ್ವನನ್ನು ಪೀಠ ಪೂಜಾ ಪೂರ್ವಕವಾಗಿ ಆವಾಯಿಸಿ ಪೂಜಿಸಿದರೆ ಸಮಸ್ತ ಸಂಕಷ್ಟಗಳಿಂದ ಮುಕ್ತರಾಗುವರು. ಈ ವ್ರತಾಚರಣೆಯಿಂದ ಅಪವಾದಗಳನ್ನು ಪರಿಹರಿಸಿಕೊಳ್ಳಬಹುದು.

ಚತುರ್ಥ್ಯಾಂ ಶುಕ್ಲ ಪಕ್ಷೇ ತು ಕಾರ್ಯ೦ ಗಾಣೇಶ್ವರಂ ವೃತಮ್ ।
ಅಪವಾದ ಹರಂ ಚೈವ ಸರ್ವ ಸಂಕಷ್ಟ ನಾಶನಮ್ ।।

ಈ ವ್ರತವನ್ನು ಯಾರು ಮೊದಲು ಆಚರಿಸಿದರು?

ಈ ವ್ರತದ ಆಚರಣೆಯಿಂದ ಅಪವಾದವು ಹೇಗೆ ಪರಿಹಾರ ಹೊಂದುವುದು?

ತಿಳಿಸಿ ಎಂದು ಶ್ರೀ ಶೌನಕರು, ಶ್ರೀ ಸೂತ ಪುರಾಣಿಕರನ್ನು ಕೇಳಿದರು.

ಕೇನ ಚಾದೌ ಪುರಾ ಚೀರ್ಣ೦ ಮರ್ತ್ಯಲೋಕೇ ಕಥ೦ ಗತಮ್ ।।

ಶ್ರೀ ಸೂತ ಪುರಾಣಿಕರು ಹೀಗೆಂದರು...

ಈ ವ್ರತವನ್ನು ಮೊದಲು ಶ್ರೀ ಕೃಷ್ಣ ಪರಮಾತ್ಮನೇ ಆಚರಿಸಿ ತನಗೆ ಬಂದ ಅಪವಾದನ್ನು ಪರಿಹರಿಸಿ ಕೊಂಡಿರುವನು.

ಚಕ್ರೇ ವ್ರತಂ ಜಗನ್ನಾಥೋ ವಾಸುದೇವಃ ಪ್ರತಾಪವಾನ್ ।
ಆದಿಷ್ಟೋ ನಾರದೇನೈವ ವೃಥಾಲಾಂಛನ ಮುಕ್ತಯೇ ।।

ಶ್ರೀ ಶೌನಕರು..

ಜಗನ್ನಾಥನಾದ ಶ್ರೀ ಕೃಷ್ಣನಿಗೆ ಅಪವಾದ ಬಂದದ್ದಾದರೂ ಹೇಗೆ? ಎಂದು ಕೇಳಿದರು. ಅದಕ್ಕೆ ಶ್ರೀ ಸೂತ ಪುರಾಣಿಕರು...

ಭಾದ್ರಪದ ಶುಕ್ಲ ಚತುರ್ಥಿಯಂದು ಶ್ರೀ ಕೃಷ್ಣನು ಚಂದ್ರ ದರ್ಶನ ಮಾಡಿದ್ದರಿಂದ " ಮಣಿಗಳ್ಳ " ನೆಂಬ ಅಪವಾದಕ್ಕೆ ಗುರಿಯಾದನು.

ಭಾದ್ರಪದ ಶುಕ್ಲ ಚತುರ್ಥಿಯಂದು ಯಾರು ಚಂದ್ರನನ್ನು ನೋಡುವರೋ ಅವರು ಮಿಥ್ಯಾಪವಾಡದಿಂದ ದೂಷಿತರಾಗಲಿ ಎಂದು ಗಣಪತಿಯ ಶಾಪವಿರುತ್ತದೆ. ಆದುದರಿಂದ ಆ ದಿನವೂ ಚಂದ್ರ ದರ್ಶನ ನಿಷಿದ್ಧವಾಗಿದೆ.

ಕನ್ಯಾದಿತೇ ಚತುರ್ಥ್ಯಾಂ ತು ಶುಕ್ಲ ಚಂದ್ರಸ್ಯ ದರ್ಶನಮ್ ।
ಮಿಥ್ಯಾ ದೂಷಣಂ ಕುರ್ಯಾತ್ ತಸ್ಮಾತ್ ಪಶ್ಯೇನ್ನ ತ ತದಾ ।।

ಶ್ರೀ ಶೌನಕರು..

ಚಂದ್ರನಿಗೆ ಗಣಪತಿಯು ಶಾಪ ಕೊಡಲು ಕಾರಣವೇನೆಂಬುದನ್ನು ಸವಿಸ್ತಾರವಾಗಿ ತಿಳಿಸಿರಿ ಎಂದು ಕೇಳಿದರು.

ಕಿಮರ್ಥಂ ಗಣನಾಥೇನ ಶಪ್ತಶ್ಚಂದ್ರ: ಸುಧಾಮಯಃ ।
ಏತದಾಖ್ಯಾನಕಂ ಶ್ರೇಷ್ಠ೦ ಯಥಾವದ್ವಕ್ತುಮರ್ಹಸಿ ।।

ಹಿಂದೆ ಶ್ರೀ ರುದ್ರದೇವರು ಮತ್ತು ಶ್ರೀ ಚತುರ್ಮುಖ ಬ್ರಹ್ಮದೇವರು ಗಣಪತಿಗೆ ಮಹಿಮಾ ಮೊದಲಾದ ಅಷ್ಟ ಸಿದ್ಧಿಗಳನ್ನು ಅನುಗ್ರಹಿಸಿದರು. ಹಾಗೆಯೇ ಶ್ರೀ ಚತುರ್ಮುಖ ಬ್ರಹ್ಮದೇವರು ಲೋಕ ಶಿಕ್ಷಣಾರ್ಥವಾಗಿ ಸ್ತುತಿಸಿದರು.

ಶ್ರೀ ಚತುರ್ಮುಖ ಬ್ರಹ್ಮದೇವರು ಮಾಡಿದ ಗಣಪತಿಯ ಸ್ತುತಿಯು ಮಿಶ್ರ ಸ್ತುತಿಯಾಗಿದ್ದೂ; ಮುಖ್ಯವಾಗಿ ಗಣಪತಿ ಅಂತರ್ಯಾಮಿಯಾದ ಶ್ರೀ ವಿಶ್ವ೦ಭರ ಸ್ತೋತ್ರವಾಗಿದೆ. ಈ ಸ್ತೋತ್ರದಿಂದ ಸಂತುಷ್ಟನಾದ ಗಣಪತಿಯು ಶ್ರೀ ಚತುರ್ಮುಖ ಬ್ರಹ್ಮದೇವರಿಗೆ ಸೃಷ್ಠಿ ಮಾಡುವಾಗ ಯಾವುದೇ ವಿಘ್ನ ಉಂಟಾಗದಿರಲಿ ಎಂದು ಅನುಗ್ರಹಿಸಿದನು.

ಇದರರ್ಥವು ಜನರು ಯಾವುದೇ ಕಾರ್ಯವನ್ನು ಪ್ರಾರಂಭಿಸುವಾಗ ಗಣಪತಿಯನ್ನು ಪೂಜಿಸಿದರೆ ನಿರ್ವಿಘ್ನತೆ ಉಂಟಾಗುತ್ತದೆ.

ಹೀಗೆ ವರವನ್ನು ನೀಡಿ ಸತ್ಯಲೋಕದಿಂದ ಚಂದ್ರಲೋಕಕ್ಕೆ ಬರುತ್ತಿರುವಾಗ ಎಡವಿ ಬಿದ್ದನು. ಇದನ್ನು ನೋಡಿ ಚಂದ್ರನು ಅಪಹಾಸ್ಯ ಮಾಡುತ್ತಾ ನಕ್ಕನು. ಚಂದ್ರನಿಗೆ ನಾನೇ ಸುಂದರನೆಂಬ ಮಡವೂ ಈ ಅಪಹಾಸ್ಯಕ್ಕೆ ಕಾರಣವಾಗಿದ್ದಿತು!

ಚಂದ್ರಲೋಕಂ ಸಮಾಸಾದ್ಯ ಸ್ಖಲಿತೋ ಗಣನಾಯಕಃ ।
ಉಪಹಾಸಂ ಸಮಾಚಕ್ರೇ ಸೋಮೋ ರೂಪ ಮದಾನ್ವಿತಃ ।।

ಚಂದ್ರನ ಉಪಹಾಸದಿಂದ ಕೋಪಗೊಂಡ ಗಣಪತಿಯು ಹೀಗೆ ಶಾಪವಿತ್ತನು...

ನೀನು ಅತ್ಯಂತ ಸುಂದರನೆಂದು ಅಹಂಕಾರಿಯಾಗಿರುವೆ. ಆದ್ದರಿಂದ ಅವಮಾನವನ್ನು ಮಾಡಿರುವೆ. ಇದಕ್ಕಾಗಿ ನಿನ್ನನ್ನು ಶಪಿಸುವೆ. ಇಂದಿನಿಂದ ಜನರು ನಿನ್ನನ್ನು ನೋಡುವುದೇ ಬೇಡ! ನೋಡಿದರೆ ಅವರಿಗೆ ಸುಳ್ಳು ಅಪವಾದ ಬರಲೀ ಎಂದ!

ಆದ್ಯ ಪ್ರಭೃತಿ ಲೋಕಸ್ಥಾ೦ ನ ಹಿ ಪಶ್ಯತಿ ಪಾಪಿನಂ ।
ಯೇ ಪಶ್ಯಂತಿ ಪ್ರಮಾದೇನ ತ್ವಾ೦ ನಾರಾ ಮೃಗಲಾಂಚನಮ್ ।।
ಮಿಥ್ಯಾಭಿಶಾಪ ಸಂಯುಕ್ತಾ: ಭವಿಷ್ಯಂತಿ ಹಿ ತೇ ಧ್ರುವಮ್ ।।

ಈ ಶಾಪದಿಂದ ಚಂದ್ರನು ದುಃಖಿತನಾದನು. ನನ್ನ ಸೌಂದರ್ಯವನ್ನು ಜನರು ನೋಡದೆ ಇದ್ದರೆ ಆ ಸೌಂದರ್ಯವಿದ್ದೂ ವ್ಯರ್ಥವೇ ಸರಿ ಎಂದು ತಿಳಿದು ಗಣಪತಿಯನ್ನು ಶಾಪ ನಿವೃತ್ತಿಗಾಗಿ ಭಕ್ತಿಯಿಂದ ಸ್ತೋತ್ರ ಮಾಡಿದನು.

ಪ್ರಸೀದ ದೇವೇಶ ಜಗನ್ನಿವಾಸ ಗಣೇಶ ಲಂಬೋದರ ವಕ್ರತುಂಡ ।
...... ಪೂಜ್ಯಮಾನ ಕ್ಷಮಸ್ವ ಮೇ ಗರ್ವ ಕೃತಂ ಚ ಹಾಸ್ಯ೦ ।।

ಇದೆ ಮೊದಲಾದ ಸ್ತೋತ್ರಗಳಿಂದ ಸಂತುಷ್ಟನಾದ ಗಣಪತಿಯು ಹೀಗೆ ಶಾಪವನ್ನು ಸಂಕೋಚಗೊಳಿಸಿದನು.

" ಭಾದ್ರಪದ ಶುದ್ಧ ಚತುರ್ಥಿಯಂದು ಯಾರು ನಿನ್ನನ್ನು ನೋಡುವರೋ ಅವರಿಗೆ ಮಾತ್ರ ಮಿಥ್ಯಾಪವಾದ ಉಂಟಾಗುತ್ತದೆ. ಬೇರೇ ಸಮಯದಲ್ಲಿ ನೋಡಲಡ್ಡಿಯಿಲ್ಲ " ಎಂದ.

ಶುಕ್ಲ ಪಕ್ಷೇ ಚತುರ್ಥ್ಯಾಂ ತು ಯೇ ಪಶ್ಯಂತಿ ಸದೈವ ಹಿ ।
ಮಿಥ್ಯಾಪವಾದಂ ಮಾಸಾಂತೇ ಪ್ರಾಪ್ಯಂತೇsತ್ರ ನ ಸಂಶಯಃ ।।

ಭಾದ್ರಪದ ಶುಕ್ಲ ಚತುರ್ಥಿಯಂದು ಯಾರು ತಿಳಿದೋ - ತಿಳಿಯದೋ ಚಂದ್ರನ ದರ್ಶನ ಮಾಡಿದರೆ ತಿಂಗಳು ಕಳೆಯುವುದರೊಳಗಾಗಿ ಮಿಥ್ಯಾಪವಾದಕ್ಕೆ ಗುರಿಯಾಗುತ್ತಾರೆ. ಈ ವಿಷಯದಲ್ಲಿ ಸಂಶಯವಿಲ್ಲ!

ಮಾಸಾದೌ ಪೂರ್ವಮೇವ ತ್ವಾ ದೃಷ್ಟ್ವಾ ಪಶ್ಯಂತಿ ಮಾನವಾ: ।
ಚತುರ್ಥ್ಯಾಂ ಶುಕ್ಲ ಪಕ್ಷೇ ತು ತೇಷಾ೦ ದೋಷೋ ನ ವಿದ್ಯತೇ ।।

ಭಾದ್ರಪದ ಮಾಸದ ಶುಕ್ಲ ಪಕ್ಷ ದ್ವಿತೀಯಾ ಚಂದ್ರನನ್ನು ನೋಡಿದವರಿಗೆ ಚತುರ್ಥಿ ಚಂದ್ರನ ದರ್ಶನವಾದರೂ ಮಿಥ್ಯಾಪವಾದ ಬರುವುದಿಲ್ಲ!

ಸ್ಯಮಂತಕೋಪಾಖ್ಯಾನವು ಭಗವಂತನ ಮಹಿಮಾ ಪ್ರದರ್ಶನ ಪೂರ್ವಕ ಜಾಂಬವತೀ ಹಾಗೂ ಸತ್ಯಭಾಮಾದೇವಿಯರ ಮಂಗಳ ವಿವಾಹವನ್ನು ವರ್ಣಿಸುವುದರಿಂದ ಆ ದೋಷವು ಪರಿಹಾರವಾಗುವುದು.

ಸ್ಯಮಂತಕೋಪಾಖ್ಯಾನವನ್ನು ಶ್ರವಣ ಮಾಡಲು ಅನುಕೂಲವಿಲ್ಲದಿದ್ದಾಗ ಭಗವಂತನಿಂದ ಹೇಳಲ್ಪಟ್ಟ ಸ್ಯಮಂತಕೋಪಾಖ್ಯಾನ ಸಂಗ್ರಹಾತ್ಮಕವಾದ ಈ ಶ್ಲೋಕವನ್ನಾದರೂ ಜಪಿಸಬೇಕು.

ಸಿಂಹಃ ಪ್ರಸೀನಮವಧೀತ್ ಸಿಂಹೋ ಜಾಂಬವತಾ ಹತಃ ।
ಸುಕುಮಾರಕಮಾರೋಧೀಸ್ತವಹ್ಯೇಷಃ ಸ್ಯಮಂತಕಃ ।।

********


"ಸ್ಯಮಂತಕೋಪಾಖ್ಯಾನ" –

ಸಿಂಹ: ಪ್ರಸೇನಮವಧೀತ್,
ಸಿಂಹೋ ಜಾಂಬವತಾ: ಹತ: |
ಸುಕುಮಾರಕ ಮಾ ರೋದೀ:
ತವ ಹ್ಯೇಷ: ಸ್ಯಮಂತಕ: ||
ನೈಮಿಷಾರಣ್ಯದಲ್ಲಿ ಒಮ್ಮೆ ಸೂತಪುರಾಣಿಕರನ್ನು ಶೌನಕಾದಿಗಳು ಗಣಪತಿಯ ಕಥೆಯನ್ನು ಹೇಳಿದಾಗ, ಅವರು ಹೇಳಿದರು – ಪೂರ್ವದಲ್ಲಿ ಶ್ರೀಕೃಷ್ಣ ಪರಮಾತ್ಮನೇ ತನಗೆ ಬಂದ ಅಪವಾದವನ್ನು ಪರಿಹರಿಸಿಕೊಳ್ಳಲು ಈ ವ್ರತವನ್ನು ಮಾಡಿದನೆಂದರು.
ಆಗ ಶೌನಕರು ಪ್ರಶ್ನಿಸುತ್ತಾರೆ – ಜಗನ್ನಿಯಾಮಕನಾದ ಶ್ರೀಕೃಷ್ಣನಿಗೆ ಅಪವಾದವೇ? ಅದು ಹೇಗೆ ಸಾಧ್ಯ? ಅದನ್ನು ವಿವರಿಸಿ ಹೇಳಲು ಬಯಸಿದಾಗ ಸೂತರು ಹೇಳುತ್ತಾರೆ –
ಭಾದ್ರಪದ ಚತುರ್ಥಿಯಂದು ಶ್ರೀ ಕೃಷ್ಣನು ಚಂದ್ರ ದರ್ಶನವನ್ನು ಮಾಡಿದ್ದರಿಂದ ಸ್ಯಮಂತಕ ಮಣಿ ಕಳ್ಳನೆಂಬ ಅಪಖ್ಯಾತಿಗೆ ಗುರಿಯಾದನು. (ಕೃಷ್ಣನಿಗೆ ಅಪವಾದವೇ? ಇಲ್ಲಿ ಕೃಷ್ಣ ಇದರ ಮಹತ್ವ ತಿಳಿಸಲು ಆದರೆ ಅಪವಾದವನ್ನು ಸ್ವೀಕರಿಸಿದನೇ ಹೊರತು ಅವನಿಗೆ ಯಾವುದೇ ದೋಷವಿಲ್ಲ)
ಒಮ್ಮೆ ಬ್ರಹ್ಮದೇವರು ಗಣಪತಿಗೆ ಅಣಿಮಾದಿ ಅಷ್ಟಸಿದ್ಧಿ ಗಳನ್ನೂ ಅನುಗ್ರಹಿಸಿದರು. ಹೀಗೆ ಅನುಗ್ರಹೀತನಾದ ಗಣಪತಿಯು ಸತ್ಯಲೋಕದಿಂದ ಚಂದ್ರಲೋಕಕ್ಕೆ ಬರುತ್ತಿರುವಾಗ ಎಡವಿ ಬಿದ್ದನು. ಇದನ್ನು ನೋಡಿದ ಚಂದ್ರನು ಅಪಹಾಸ್ಯ ಮಾಡುತ್ತಾ ನಕ್ಕನು. ಈ ಸಂದರ್ಭದಲ್ಲಿ ಚಂದ್ರನಿಗೆ ತಾನೇ ಅತಿ ಸುಂದರನೆಂಬ ಅಹಂಕಾರವೂ ಕಾರಣವಾಗಿತ್ತು. ಈ ಅಪಹಾಸ್ಯವನ್ನು ನೋಡಿದ ಗಣಪತಿಯು ಕುಪಿತನಾಗಿ ಚಂದ್ರನಿಗೆ ಶಾಪ ವಿತ್ತನು “ನೀನು ಅತ್ಯಂತ ಸುಂದರ ನೆಂಬ ಅಹಂಕಾರ ದಿಂದ ನನಗೆ ಅಪಹಾಸ್ಯ ಮಾಡಿರುವೆ. ಇಂದಿನಿಂದ ನಿನ್ನನ್ನು ಜನರು ನೋಡುವುದೇ ಬೇಡ, ಅಕಸ್ಮಾತ್ ನೋಡಿದರೆ ಅವರಿಗೆ ಸುಳ್ಳು ಅಪವಾದ ಬರಲಿ” ಎಂದು. ಆಗ ತನ್ನ ತಪ್ಪಿಗೆ ಪಶ್ಚಾತಾಪಗೊಂಡ ಚಂದ್ರನು ಗಣಪತಿಯನ್ನು ಸ್ತುತಿಸಿದನು –
ಪ್ರಸೀದ ದೇವೇಶ ಜಗನ್ನಿವಾಸ
ಗಣೇಶ ಲಂಬೋದರ ವಕ್ರತುಂಡ |
ವಿರಿಂಚಿ ನಾರಾಯಣ ಪೂಜ್ಯಮಾನ
ಕ್ಷಮಸ್ವ ಮೇ ಗರ್ವಕೃತಂ ಚ ಹಾಸ್ಯಂ |
ಆಗ ಸಂತುಷ್ಟನಾದ ಗಣಪತಿಯು ತನ್ನ ಶಾಪವನ್ನು ಸಂಕುಚಿತಗೊಳಿಸಿದನು – “ಯಾರು ಚಂದ್ರನನ್ನು ಗಣಪತಿಯ ದಿನವಾದ ಭಾದ್ರಪದ ಶುದ್ಧ ಚತುರ್ಥಿಯಂದು ನೋಡುತ್ತಾರೋ ಅವರಿಗೆ ಮಿಥ್ಯಾಪವಾದ ಬರಲಿ. ಬೇರೆ ದಿನ ನೋಡಲು ಅಡ್ಡಿಯಿಲ್ಲ”.
ಅಥವಾ ಭಾದ್ರಪದ ಶುದ್ಧ ದ್ವಿತೀಯದಂದು ಬಿದಿಗೆ ಚಂದ್ರನನ್ನು ನೋಡಿದರೂ ಕೂಡ ಆ ಅಪವಾದದಿಂದ ಮುಕ್ತಿಯಿದೆ.
ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರನನ್ನು ನೋಡಿದರೆ ಅಪವಾದ ತಪ್ಪದು. ಆದ್ದರಿಂದ ಅಕಸ್ಮಾತ್ ಚಂದ್ರನನ್ನು ನೋಡಿದರೆ, ಅದರ ಪರಿಹಾರಾರ್ಥವಾಗಿ ಈ ಶ್ಲೋಕವನ್ನು ಪಠಿಸಿದರೆ , ಅಪವಾದದಿಂದ ಪರಿಹಾರವಾಗುವುದೆಂದು ವರವಿದೆ.
ಪರಮಾತ್ಮನ ಭಕ್ತನಾದ ಸತ್ರಾಜಿತನು ಒಮ್ಮೆ ಸೂರ್ಯ ಮಂಡಲಾಂತರ್ಗತನಾದ ಸೂರ್ಯನಾರಾಯಣನನ್ನು ತಪಿಸಿ, ಅವನಿಂದ ಸ್ಯಮಂತಕಮಣಿಯನ್ನು ಪಡೆದನು. ಸೂರ್ಯನು ಆ ಮಣಿಯನ್ನು ಸತ್ರಾಜಿತನಿಗೆ ಕರುಣಿಸು ವಾಗ ಅಶುಚಿಯಲ್ಲಿ ಇದನ್ನು ಧರಿಸಿದರೆ ಅದು ಒಲಿಯ
ದೆಂದು ಹೇಳಿದ್ದನು. ಸತ್ರಾಜಿತನು ವಿಷ್ಣುಭಕ್ತ. ಆದರೂ ಕೂಡ ಲೋಭತನವನ್ನು ಬಿಟ್ಟಿರಲಿಲ್ಲ. ಅವನ ಲೋಭ ತನವನ್ನು ಹೋಗಲಾಡಿಸಲೆಂದೇ ಶ್ರೀ ಕೃಷ್ಣನು ತನಗೆ ಆ ಸ್ಯಮಂತಕ ಮಣಿ ಬೇಕೆಂದು ಸತ್ರಾಜಿತನಲ್ಲಿ ಕೇಳಿದಾಗ, ಅವನು ಅದನ್ನು ಕೊಡದೆ ತನ್ನ ಸಹೋದರನಾದ ಪ್ರಸೇನನಿಗೆ ನೀಡಿದ್ದನು. ಪ್ರಸೇನನಾದರೋ ತಾನು ಭೇಟೆಯಾಡಲು ಹೋದಾಗ ಅಶುಚಿಯಾಗಿದ್ದಾಗ ಅದನ್ನು ಧರಿಸಿದ್ದನು. ಆಗ ಒಂದು ಸಿಂಹವು ಪ್ರಸೇನ ನನ್ನು ಕೊಂದು ಸ್ಯಮಂತಕಮಣಿಯನ್ನು ಕಚ್ಚಿಕೊಂಡು ಹೋಗುತ್ತಿತ್ತು. ಆಗ ದಾರಿಯಲ್ಲಿ ಜಾಂಬವಂತ ನೆಂಬ ಕರಡಿಯು ಆ ಸಿಂಹವನ್ನು ಕೊಂದು ಮಣಿಯನ್ನು ತನ್ನ ಗುಹೆಯಲ್ಲಿ ಮಗಳ ಉಯ್ಯಾಲೆಯಲ್ಲಿ ಕಟ್ಟಿದನು.
ಅಷ್ಟರಲ್ಲಿ ಸತ್ರಾಜಿತನಾದರೋ ತನ್ನ ತಮ್ಮನು ವಾಪಸ್ಸು ಬರದಿರುವುದನ್ನು ನೋಡಿ, ಹಿಂದೆ ಕೃಷ್ಣನು ಸ್ಯಮಂತಕ ಮಣಿಯನ್ನು ಕೇಳಿದ್ದುದರಿಂದ ಅವನೇ ಈಗ ತನ್ನ ತಮ್ಮನನ್ನು ಕೊಂದು ಅಪಹರಿಸಿದ್ದಾನೆಂದೆ ಎಲ್ಲಾ ಕಡೆ ಪ್ರಚಾರ ಮಾಡಿದನು. ಕೃಷ್ಣನಾದರೋ ಒಮ್ಮೆ ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರದರ್ಶನ ಮಾಡಿದ್ದನು. ಸರ್ವದೋಷ ದೂರನಾದ, ಸಕಲರಿಗೂ ನಿಯಾಮಕನಾದ ಪರಮಾತ್ಮನಿಗೆ ಅಪವಾದವೇ?ಇಲ್ಲ. ಗಣಪತಿಯ ಮಾತನ್ನು ಸತ್ಯವಾಗಿಸಲು, ಜಗನ್ನಾಟಕ ಸೂತ್ರದಾರಿಯಾದ ತಾನೇ ಲೋಕ ಶಿಕ್ಷನಾರ್ಥ ಅಪವಾದವನ್ನು ಸ್ವೀಕರಿಸಿದನು. ಮತ್ತು ಅದರ ಪರಿಹಾರಕ್ಕಾಗಿ ಸ್ಯಮಂತಕವನ್ನು ಹುಡುಕಿಕೊಂಡು ಹೊರಟನು. ಕಾಡಿನಲ್ಲಿ ಸಿಂಹದಿಂದ ಹತನಾದ ಪ್ರಸೇನನನ್ನೂ, ಕರಡಿಯಿಂದ ಹತವಾದ ಸಿಂಹವನ್ನೂ ನೋಡಿ, ಕರಡಿಯ ಹೆಜ್ಜೆ ಗುರುತು ಹಿಡಿದು ಗುಹೆ ಯೊಳಗೆ ಪ್ರವೇಶಿಸಿದನು. ಗುಹೆಯಲ್ಲಿ ಜಾಂಬವಂತನ ಮಗಳಾದ ಜಾಂಬವತಿಯು ಆ ತೊಟ್ಟಿಲಲ್ಲಿದ್ದ ಮಗುವಿಗೆ ಹೇಳುತ್ತಿದ್ದಳು –
ಸಿಂಹ: ಪ್ರಸೇನಮವಧೀತ್,
ಸಿಂಹೋ ಜಾಂಬವತಾ: ಹತ: |
ಸುಕುಮಾರಕ ಮಾ ರೋದೀ:
ತವ ಹ್ಯೇಷ: ಸ್ಯಮಂತಕ: |

ಅರ್ಥ – ಸಿಂಹವು ಪ್ರಸೇನನನ್ನು ಕೊಂದಿತು, ಸಿಂಹ ವನ್ನು ಜಾಂಬವಂತನೆಂಬ ಕರಡಿಯು ಸಂಹರಿಸಿತು. ಹೇ ಸುಕುಮಾರ ಅಳಬೇಡ, ಈ ಸ್ಯಮಂಟಕಮಣಿಯು ನಿನಗಾಗಿ ಜಾಂಬವಂತನಿಂದ ತರಲ್ಪಟ್ಟಿದೆ ಎಂದು ಹಾಡುತ್ತಿದ್ದಳು. ಆಗ ಗುಹಾ ಪ್ರವೇಶಿಸಿದ ಕೃಷ್ಣನನ್ನು ನೋಡಿದ ಜಾಂಬವತಿಯು ಜೋರಾಗಿ ಕಿರುಚಿದಳು. ಆಗ ಅಲ್ಲಿಗೆ ಬಂದ ಜಾಂಬವಂತನು ಕೃಷ್ನನೊಂದಿಗೆ ೨೮ ದಿನಗಳ ಕಾಲ ಯುದ್ಧಮಾಡಿದನು. (ತಾನೇ ಹಿಂದೆ ರಾಮಾವತಾರ ಕಾಲದಲ್ಲಿ ಶ್ರೀರಾಮನೊಂದಿಗೆ ಪ್ರಾರ್ಥಸಿ ಯುದ್ಧ ಭಿಕ್ಷೆಯನ್ನು ನೀಡಬೇಕೆಂದು ಕೇಳಿದ್ದನು. ಅದನ್ನು ಶ್ರೀಹರಿಯು ಕೃಷ್ಣಾವತಾರ ಕಾಲದಲ್ಲಿ ಅನುಗ್ರಹಿಸುವೆ ಎಂದಿದ್ದನು). ಕೃಷ್ಣನೊಂದಿಗೆ ಅಷ್ಟು ದೀರ್ಘಕಾಲ ಯುದ್ಧ ಮಾಡಿ ಸೋತು ನಿಷ್ಚೇತಿತನಾದಾಗ ತನ್ನನ್ನು ಸೋಲಿಸಲು ಯಾರಿಗೂ ಸಾಮರ್ಥ್ಯವಿಲ್ಲದಿರುವಾಗ, ಬಹುಶ: ಇವನು ರಾಮಚಂದ್ರನೋ ಎಂಬ ಅನುಮಾನ ಬಂದು, ರಾಮಸ್ಮರಣೆ ಮಾಡಲು, ಆಗ ಕೃಷ್ಣನು ರಾಮಚಂದ್ರನ ರೂಪದಲ್ಲಿ ಕಂಡಾಗ ರಾಮನನ್ನು ಕಂಡು, ತನ್ನ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತಕ್ಕಾಗಿ ತನ್ನ ಮಗಳಾದ ಜಾಂಬವತೀದೇವಿಯನ್ನು ಮತ್ತು ಸ್ಯಮಂತಕಮಣಿಯನ್ನೂ ಕೊಟ್ಟು ಕಳಿಸಿದನು.

ಶ್ರೀಕೃಷ್ಣನು ಹಿಂತಿರುಗಿ, ನಂತರ ಯಾದವರ ಸಭೆಯಲ್ಲಿ ಸತ್ರಾಜಿತನಿಗೆ ನಡೆದ ಸಕಲ ವೃತ್ತಾಂತವನ್ನೂ ತಿಳಿಸಿ, ಸ್ಯಮಂತಕಮಣಿಯನ್ನೂ ಹಿಂತಿರುಗಿಸಿದನು. ವೃಥಾ ಅಪವಾದವನ್ನು ಶ್ರೀಕೃಷ್ಣನ ಮೇಲೆ ಮಾಡಿದ್ದರಿಂದ ನೊಂದು, ತನ್ನ ಪಾಪವನ್ನು ಕಳೆಯುವ ಸಲುವಾಗಿ ತನ್ನ ಪುತ್ರಿಯಾದ, ಸಾಕ್ಷಾತ್ ಭೂದೇವಿಯ ಅವತಾರಳಾದ ಸತ್ಯಭಾಮೆಯನ್ನು ಕೊಟ್ಟು ಮದುವೆ ಮಾಡಿದನು.

********



ಶನಿ ದೇವರನ್ನು ಗೆದ್ದ ಗಣಪತಿಯ ರೋಚಕ ಕಥೆ

ಎಲ್ಲರ ರಾಶಿಗೆ ಪ್ರವೇಶ ಪಡೆದು
ಕಷ್ಟ ಸುಖಗಳನ್ನು  ನೀಡಿದ ಶನಿದೇವರಿಗೆ ಗಣೇಶನನ್ನು ಕಾಡಲು ಸಾಧ್ಯವಾಗಲಿಲ್ಲ ಏಕೆ.?

ಓದಿ ಈ ಪೌರಾಣಿಕ ಕಥೆ.

🔸ಒಮ್ಮೆ ವಿಹಾರಕ್ಕೆಂದು ಹೊರಟ ಗಣೇಶನಿಗೆ ಆಕಸ್ಮಿಕವಾಗಿ ಎದುರಾಗಿದ್ದು ಈ ಶನಿರಾಜ. ಮುದ್ದು ಮುದ್ದಾಗಿ ಕಾಣುತ್ತಿದ್ದ ಗಣಪತಿಯನ್ನು ನೋಡಿದ ಶನಿರಾಜನಿಗೆ ಗಣಪತಿಯನ್ನೊಮ್ಮೆ ಹಿಡಿಯುವ ಮನಸ್ಸಾಗಿ ಗಣಪತಿಯ ಕಡೆ ಹೊರಟ. ಶನಿದೇವರು ತನ್ನ ಕಡೆಯೆ ಬರುತ್ತಿರುವುದನ್ನು ನೋಡಿ ನಡುಗಿಹೋದ ಗಣೇಶ. * ಈ ಮಹಾನುಭಾವ ನನ್ನನ್ನೇನಾದರೂ ಹಿಡಿದು ಬಿಟ್ಟರೆ ಏನು ಗತಿ ಎಂದು ಚಿಂತಿಸಿದ. ಈತನಿಗೆ ಸಿಗಲೇಬಾರದು ಎಂದು ಕೊಂಡು ಅಲ್ಲಿಂದ ಓಡತೊಡಗಿದ.

🔸ಹಾಗೆ ಓಡುತ್ತಿದ್ದ ಗಣೇಶನನ್ನು ಕೂಗಿದ ಶನಿದೇವರು ನಿಲ್ಲುವಂತೆ ಹೇಳಿ ನಾನೇನು ನಿನಗೆ ತೊಂದರೆ ಮಾಡುವುದಿಲ್ಲ, ಒಂದೇ ಒಂದು ಕ್ಷಣ ನಿನ್ನ ಜನ್ಮರಾಶಿ ಪ್ರವೇಶಿಸಿ ಹೋರಟು ಹೋಗುತ್ತೆನೆ ಎಂದನು. ಇದಕೊಪ್ಪದ ಗಣೇಶ ನಿನ್ನ ಸಹವಾಸವೇ ಬೇಡ ಎಂದು ಹೇಳಿ ಮತ್ತೆ ಓಡತೊಡಗಿದ. ಗಣೇಶನ ಮಾತಿನಿಂದ ಕೆರಳಿದ ಶನಿದೇವರು ಏನಾದಾರಾಗಲಿ ಈತನನ್ನು ಹಿಡಿಯದೆ ಬಿಡುವುದಿಲ್ಲವೆಂದು ತಿರ್ಮಾನಿಸಿ ಗಣೇಶನ ಬೆನ್ನುಹತ್ತಿದ.

🔸ಗಣೇಶ ಇನ್ನೂ ಜೋರಾಗಿ ಓಡತೊಡಗಿದ. ಅದರೂ ನಮ್ಮ ಡೊಳ್ಳುಹೊಟ್ಟೆಯ ಗಣೇಶನಿಗೆ ಓಡಲು ಕಷ್ಟವಾಗಿ ನಿಂತುಬಿಟ್ಟ. ಇದನ್ನು ಕಂಡು ಖುಷಿಗೊಂಡ ಶನಿದೇವರು ನಗುತ್ತಲೆ ಗಣೇಶನ ಕಡೆ ಬರತೊಡಗಿದರು. ಆಗ ನಮ್ಮ ಬುದ್ಧಿವಂತ ಗಣಪ, ಅಲ್ಲಿಯೆ ಪಕ್ಕದಲ್ಲಿ ಮೆಯ್ಯುತ್ತಿದ್ದ ಹಸುವನ್ನು ಕಂಡು ಅದರ ಮುಂದೆ ಹುಲ್ಲಿನ ಗರಿಕೆಯಾಗಿಬಿಟ್ಟ.

🔸ಆ ಗರಿಕೆಯನ್ನು ಹಸು ತಿಂದು ಬಿಟ್ಟಿತು. ಇದನ್ನು ಗಮನಿಸಿದ ಶನಿದೇವರು ಸಹ ಹಸುವಿನ ಮುಂದೆ ಗರಿಕೆಯಾದಾಗ ಹಸು ಅದನ್ನೂ ತಿಂದುಬಿಟ್ಟಿತು. ಈಗ ಗಣೇಶನಿಗೆ ಫಜಿತಿಗಿಟ್ಟುಕೊಂಡಿತು. ಎತ್ತಹೋಗುವುದೆಂದು ತಿಳಿಯದೆ "ಹಸುವಿನ ಸಗಣಿಯ ರೂಪದಲ್ಲಿ ಆಚೆ ಬಂದ". ಗಣೇಶ ಹಸುವಿನ ಸಗಣಿಯಜೊತೆ ಹೊರ ಹೋಗಿದ್ದನ್ನು ನೋಡಿದ ಶನಿದೇವರು ಅಸಹ್ಯಪಟ್ಟುಕೊಂಡು ಹೊರಟು ಹೋದರು.

🔸ಅಂದಿನಿಂದ ಯಾವುದೇ ಶುಭ ಕಾರ್ಯಮಾಡುವಾಗ ಶನಿಯ ವಕ್ರದೃಷ್ಟಿ ಬೀಳದಿರಲೆಂದು, ಸಗಣಿ ಮತ್ತು ಗರಿಕೆಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆ ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸುತ್ತಾರೆ.

🔸ಆದ್ದರಿಂದ ಎಲ್ಲಾ ಶುಭ ಕಾರ್ಯಗಳಲ್ಲಿ ಗಣೇಶನ ಪ್ರತಿಮೆ ಅಥವಾ ಪ್ರಥಮ ಪೂಜೆ ಗಣಪನಿಗೇ ಸಲ್ಲಿಸುತ್ತಾರೆ. ಇದು ಸಗಣಿಯ ಮಹತ್ವ ತಿಳಿಸುವ ಒಂದು ಪೌರಾಣಿಕ ಕಥೆ.

**********

ಗಣಪತಿಯ ಬಗೆಗೆ ವೇದಗಳಲ್ಲಿ,ಪುರಾಣಗಳಲ್ಲಿ ಬೇರೆ ಬೇರೆ ಸಂಪ್ರದಾಯಗಳಲ್ಲಿ ಏನು ಹೇಳಿದ್ದಾರೆ ತಿಳಿಯ ಬೇಕೇ ? ಹಾಗಾದರೆ ಪುರಾಣ ಹಾಗೂ ವೇದಮಂತ್ರಗಳ ಅರ್ಥವನ್ನು ಯಥಾವತ್ತಾಗಿ ಬಲ್ಲ ಬಹುಶ್ರುತ ವಿದ್ವಾಂಸರೆನಿಸಿದ ನಮ್ಮ ನಾಡಿನವರೇ ಆದ ಪೂಜ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಏನು ಹೇಳುತ್ತಾರೆ... ಈ ಲೇಖನವನ್ನೊಮ್ಮೆ ಓದಿ :-
ಘನಪಾಠಿಗಳಿಗೂ ದಕ್ಕದ ಗಣಪತಿ
ಲೇಖನ : ಡಾ.ಬನ್ನ೦ಜೆ ಗೋವಿ೦ದಾಚಾಯ೯
ಶಿವ-ಪಾರ್ವತಿಯರ ಮಗನೆಂದು ಶೈವರಿಗೆ-ಶಾಕ್ತರಿಗೆ ಗಣಪತಿ ಪ್ರಿಯನಾದ.
ಅಷ್ಟೇ ಅಲ್ಲ, ಇದೇ ಗಣಪತಿ ಕೃಷ್ಣ-ರುಕ್ಮಿಣಿಯರ ಮಗನಾಗಿ ಚಾರುದೇಷ್ಣನಾದ. ಅದರಿಂದ ವೈಷ್ಣವರಿಗೂ ಪ್ರಿಯ.

ಅವನು ಕ್ಷಿಪ್ರಪ್ರಸಾದ.

ಪೂಜಿಸಿದವರಿಗೆ ಉಳಿದ ದೇವತೆಗಳಿಗಿಂತ ಬೇಗ ಫಲಕೊಡುವವನು. ಅದರಿಂದಲೂ ಅವನು ಎಲ್ಲರಿಗೂ ಇಷ್ಟದೇವತೆಯಾದ.

ಋಗ್ವೇದದಲ್ಲಿ ಒಂದು ಗಣಪತಿ ಮಂತ್ರ ಇದೆ -

ನಿಷು ಸೀದ ಗಣಪತೇ ಗಣೇಷು
ತ್ವಾಮಾಹುರ್ವಿಪ್ರತಮಂ ಕವೀನಾಮ್
ನ ಋತೇ ತ್ವತ್ ಕ್ರಿಯತೇ ಕಿಂಚನಾರೇ
ಮಹಾಮರ್ಕಂ ಮಘವನ್ ಚಿತ್ರಮರ್ಚ
(10.112.9)

ಈ ಮಂತ್ರದ ಋಷಿ ವಿರೂಪನ ಮಗ ನಭಃಪ್ರಭೇದನ. ಇದು ಗಣಪತಿಯ ಸ್ತುತಿಯಲ್ಲ. ಇಂದ್ರನ ಸ್ತುತಿ ಎನ್ನುತ್ತಾರೆ ಸಂಪ್ರದಾಯಜ್ಞರು. ಇಲ್ಲಿ ಬಂದ ಗಣಪತಿ ಎಂದರೆ ಆನೆಯ ಮೋರೆಯ, ಸೊಟ್ಟ ಸೊಂಡಿಲಿನ ಗಣಪತಿ ಅಲ್ಲ. ಇಂದ್ರನೆಂದರೆ ಸಗ್ಗದೊಡೆಯ, ಶಚೀಪತಿ ಇಂದ್ರನೂ ಅಲ್ಲ. ವೈದಿಕ ಪರಿಭಾಷೆಯಲ್ಲಿ ಮುಖ್ಯವಾಗಿ ಇಂದ್ರ ಎಂದರೆ ಇಡಿಯ ವಿಶ್ವವನ್ನು ನಿಯಂತ್ರಿಸುವ ಪರತತ್ವ. ಪರಮಪುರುಷ. ಪುರುಷೋತ್ತಮ.

ಈ ಮಂತ್ರದಲ್ಲಿ ನಭಃಪ್ರಭೇದನ ಕಂಡ ಅರ್ಥ- 'ಓ ಜೀವಗಣಗಳ ಒಡೆಯನಾದ ಪರಮಾತ್ಮನೆ, ಪೀಠದಲ್ಲಿ ಬಂದು ಕೂಡು. ಜ್ಞಾನಿಗಳ ತಂಡದಲ್ಲೆ ನೀನು ಎಲ್ಲರಿಗಿಂತ ಮಿಗಿಲಾದ ಜ್ಞಾನಿ, ಸರ್ವಜ್ಞ ಎನ್ನುತ್ತಾರೆ. ನಿನ್ನ ನೆರವಿಲ್ಲದೆ ಎಲ್ಲೂ ಯಾರೂ ಏನೂ ಮಾಡಲಾರರು. ಓ ಯಜ್ಞಾರಾಧ್ಯನೆ, ಪೂಜೆಕೊಳ್ಳುವವರಲ್ಲಿ ಮೊದಲಿಗ ನೀನು. ಜ್ಞಾನಾನಂದಗಳ ಅಚ್ಚರಿಯ ಮೂರ್ತಿ ನೀನು. ನನ್ನ ಮೂಲಕ ನೀನೇ ನಿನ್ನ ಪೂಜೆಯನ್ನು ಮಾಡಿಸಿಕೋ...’

ಇಲ್ಲಿ ಗಜಾನನನ ಸುಳಿವೇ ಇಲ್ಲ. ಜಗನ್ನಿಯಾಮಕನಾದ ಭಗವಂತನ ಪ್ರಾರ್ಥನೆ ಇದು.

ಪ್ರಾಯಃ ಈ ಮಂತ್ರದ ಪ್ರಭಾವದಿಂದಲೇ ಒಂದು ಹೊಸ ಪಂಥ ಹುಟ್ಟಿಕೊಂಡಿತು. ಗಣಪತಿಯೇ ಸರ್ವಶಕ್ತ, ಗಣಪತಿಯೇ ಪರತತ್ವ ಎನ್ನುವ ಪಂಥ. ಇದರ ಅನುಯಾಯಿಗಳನ್ನು ಗಾಣಪತ್ಯರು ಅಥವಾ ಗಾಣಪತರು ಎಂದು ಕರೆಯುತ್ತಿದ್ದರು.

ಈಗ ಈ ಪಂಥ ಬಳಕೆಯಲ್ಲಿಲ್ಲ. ಅದು ಶಾಕ್ತರಲ್ಲಿ ಶೈವರಲ್ಲಿ ಅಂತರ್ಭಾವಗೊಂಡಿದೆ. ಪರಿಣಾಮವಾಗಿ ಪಂಚಾಯತನ ಪೂಜೆಯಲ್ಲಿ ಶಿವಪಾರ್ವತಿಯರ ಜತೆಗೆ ಗಣಪತಿಯೂ ಸೇರಿಕೊಂಡ. ಆದರೆ ವಾಸ್ತವವಾಗಿ ಈ ಮಂತ್ರದಲ್ಲಿ ಗಾಣಪತ್ಯರು ಪೂಜಿಸುವ ಗಣಪತಿಯ ಸುದ್ದಿಯೇ ಇಲ್ಲ.


ಬ್ರಹ್ಮಣಸ್ಪತಿಯಾದ ಗಣಪತಿ :
ಋಗ್ವೇದದಲ್ಲಿ ಇನ್ನೊಂದು ಮಂತ್ರವಿದೆ -
ಗಣಾನಾಂ ತ್ವಾ ಗಣಪತಿಂ ಹವಾಮಹೇ...
(2.23.1)

ಈ ಮಂತ್ರದ ಋಷಿ ಗೃತ್ಯಮದ ಅಥವಾ ಶೌನಕ. ಇದರ ದೇವತೆ ಬೃಹಸ್ಪತಿ ಮತ್ತು ಬ್ಲೇಖನ ಬಹುಶಃ ಪೂರ್ಣವಾಗಿಲ್ಲವೆನಿಸುತ್ತದೆ

ಗಣಪತಿಯ ಬಗೆಬಗೆಯ ಅವತಾರಗಳು

ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.*

ಬಾಲ ಗಣಪತಿ

ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.

ತರುಣ ಗಣಪತಿ

ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.

ಭಕ್ತಿ ಗಣಪತಿ

ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.

ವೀರ ಗಣಪತಿ

ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.

ಶಕ್ತಿ ಗಣಪತಿ

ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.

ದ್ವಿಜ ಗಣಪತಿ

"ದ್ವಿಜ" ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.

ಸಿದ್ಧಿ ಗಣಪತಿ

ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.

* ಉಚ್ಚಿಷ್ಟ ಗಣಪತಿ*

ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.

ವಿಘ್ನ ಗಣಪತಿ

ಗಣಪತಿಯನ್ನು "ವಿಘ್ನೇಶ್ವರ, ವಿಘ್ನನಾಶಕ" ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.

ಕ್ಷಿಪ್ರ ಗಣಪತಿ

ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.

ಹೇರಂಬ ಗಣಪತಿ

ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.

ಲಕ್ಷ್ಮೀ ಗಣಪತಿ

ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.

ಮಹಾಗಣಪತಿ

"ಮಹಾ" ಎಂಬ ಮಾತೇ "ಶ್ರೇಷ್ಟ" ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.

ವಿಜಯ ಗಣಪತಿ

ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ "ವಿಜಯ"ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.

ನೃತ್ಯ ಗಣಪತಿ

ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?

ಊರ್ಧ್ವ ಗಣಪತಿ

ಊರ್ಧ್ವ ಗಣಪತಿ ಎಂದರೆ" ಉದ್ದವಾಗಿ ಇರುವ ಗಣಪತಿ" ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.

ಏಕಾಕ್ಷರ ಗಣಪತಿ

"ಏಕಾಕ್ಷರ ಗಣಪತಿ"ಯು ಹೆಸರೇ ಸೂಚಿಸುವಂತೆ "ಒಂದೆ ಅಕ್ಷರದ "ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.

ವರದ ಗಣಪತಿ

ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ "ಮೂರನೆ ಕಣ್ಣು" ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.

ತ್ರಯಾಕ್ಷರ ಗಣಪತಿ

ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.

ಕ್ಷಿಪ್ರ ಪ್ರಸಾದ ಗಣಪತಿ

ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.

ಹರಿದ್ರ ಗಣಪತಿ

ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.

ಏಕದಂತ ಗಣಪತಿ

ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.

ಸೃಷ್ಟಿ ಗಣಪತಿ

ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.

ಉದ್ಧಂಡ ಗಣಪತಿ

ಉದ್ಧಂಡ ಗಣಪತಿಯು ವಿಶ್ವದಲ್ಲಿ 'ಧರ್ಮವನ್ನು ಪರಿಪಾಲಿಸುತ್ತಾನೆ" . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.

ಋಣಮೋಚನ ಗಣಪತಿ

ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.

ದುಂಧಿ ಗಣಪತಿ

ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.

ಮೊದಲಿನ ಎರಡು ವಿವರಣೆಗಳನ್ನು ನೋಡಿದಾಗ ಬೃಹಸ್ಪತಿ – ಮರುದ್ಗಣ ದೇವತೆಗಳೇ ಗಣಪತಿಯಾಗಿ ರೂಪಪರಿವರ್ತನೆ ಹೊಂದಿರುವವರು ಎಂದು ಎನಿಸದೆ ಇರದು. ಇದರಲ್ಲಿ ಅಚ್ಚರಿಯೇನಿಲ್ಲ. ಅದರಲ್ಲೂ ಆ ನಂತರ ಬಂದ ಹಿಂದೂ ಬಹುದೇವತೆಗಳ ನಡುವೆ ವೇದಗಳ ಅನೇಕ ದೇವತೆಗಳು ಒಂದಾಗಿ ಹೋಗಿರುವರು ಎಂಬುದನ್ನು ಗಮನಿಸಿದಾಗ. ಒಂದೊಮ್ಮೆ ಅತ್ಯಂತ ಮುಖ್ಯನೂ ಅತಿಶಯ ಶೂರನೂ ಆಗಿದ್ದ ಇಂದ್ರನನ್ನು ಕೇವಲ ಒಂದು ಭಾಗದ ಆಳ್ವಿಕೆ ಮಾತ್ರ ಇರುವ ಒಬ್ಬ ಕಿರಿಯ ದೇವತೆಯ ಮಟ್ಟಕ್ಕೆ ಇಳಿಸಲಾಯಿತು. ಅವನ ಅನುಚರನಾಗಿದ್ದ ವಿಷ್ಣುವನ್ನು ತ್ರಿಮೂರ್ತಿಗಳ ಮಧ್ಯದವನನ್ನಾಗಿ ಮೇಲಕ್ಕೇರಿಸಲಾಯಿತು. ಭಯಂಕರನಾಗಿದ್ದ ರುದ್ರನು ಪವಿತ್ರತಮನಾದ ಶಿವನಾದನು. ದ್ಯೌಸ್, ಅರ್ಯಮನ್ ಮತ್ತು ಪ್ಯೂಷನ್ ರಂಥ ಇನ್ನಿತರ ದೇವತೆಗಳು ಶೂನ್ಯದಲ್ಲಿ ಲೀನವಾಗಿ ಹೋದರು. ಗಣಪತಿಯು ಅತಿಶಯವಾಗಿ ಆರಾಧಿಸಲ್ಪಡುವ ಅತ್ಯಂತ ಮುಖ್ಯನಾದ ದೇವತೆಯಾಗಿದ್ದರೂ, ಇತರರಿಗೆ ಒಮ್ಮೊಮ್ಮೆ ಅವನ ತಲೆ ಒಂದು ದೊಡ್ಡ ನಿಗೂಢವೆನಿಸುತ್ತದೆ. ಪುರಾಣಗಳೇನೋ ತಮ್ಮದೇ ಆದ ರೀತಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಿವೆಯಾದರೂ ಇದು ಶ್ರೀಸಾಮಾನ್ಯನಿಗೇ ಆಗಲಿ ವಿದ್ವಾಂಸರಿಗೇ ಆಗಲಿ ತೃಪ್ತಿಯಾಗುವಂತಿಲ್ಲ. ಈ ಅಚ್ಚರಿಯ ದೇವತೆಯ ಮೂಲದ ಬಗೆಗೆ ಲಭ್ಯವಿರುವ ಕಥೆಗಳೆಲ್ಲವನ್ನೂ ಸಂಕ್ಷಿಪ್ತವಾಗಿ ಒಗ್ಗೂಡಿಸಿದರೆ ತುಂಬ ಕುತೂಹಲವೆನ್ನಿಸಬಹುದು. ತಮ್ಮ ಕಾರ್ಯ ಸಫಲವಾಗುವುದಕ್ಕೆ ರಬಹುದಾದ ಎಲ್ಲ ಅಡೆತಡೆಗಳನ್ನೂ ನಿವಾರಿಸುವ ಸಾಮರ್ಥ್ಯವುಳ್ಳ ಒಬ್ಬ ದೇವನು ಬೇಕೆಂಬ ದೇವತೆಗಳ ಕೋರಿಕೆಯಂತೆ ಸಾಕ್ಷಾತ್ ಶಿವನೇ ಪಾರ್ವತಿಯ ಗರ್ಭದಲ್ಲಿ ಗಜಾನನನಾಗಿ ಹುಟ್ಟಿದನು. ಒಂದು ಸಲ ಪಾರ್ವತಿಯು ತಮಾಷೆಗಾಗಿ ತಾನು ಮೈಮೇಲೆ ಸವರಿಕೊಂಡಿದ್ದ ಲೇಪನದಿಂದ ಒಂದು ಆನೆಯ ತಲೆಯ ಆಕೃತಿಯನ್ನು ಮಾಡಿ ಅದನ್ನು ಗಂಗೆಗೆ ಎಸೆದಳು. ಅದು ಜೀವಂತವಾಯಿತು. ಪಾರ್ವತಿ ಮತ್ತು ಗಂಗೆ ಇಬ್ಬರೂ ಆ ಬಾಲಕನನ್ನು ತಮ್ಮ ಮಗನೆಂದು ಕರೆದರು. ಹೀಗಾಗಿ, ಅವನಿಗೆ ದ್ವೈಮಾತುರ (ಇಬ್ಬರು ತಾಯಂದಿರನ್ನು ಉಳ್ಳವನು) ಎಂಬ ಹೆಸರು ಬಂತು.