ಇಷ್ಟಲಿಂಗದ ಮೇಲೆ ಕಂತೆ ಏಕೆ ಕೂಡಿಸಬೇಕು
****************************
ಇಷ್ಟಲಿಂಗ ಪೂಜೆಯಿಂದ ಅಧ್ಯಾತ್ಮಿಕ ಪ್ರಗತಿಯ ಜೋತೆಗೆ ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವು ಸುಧಾರಣೆಯಾಗಿ ಜೀವನವೆಲ್ಲ ಆನಂದಮಯವಾಗಿರುತ್ತದೆ.
ಇಷ್ಟಲಿಂಗ ದ ಮೇಲೆ ಚಿದ್ರಸ ಕಂತೆ ಏಕೆ ಎಂಬ ಪ್ರಶ್ನೆ ಬಹಳ ಜನರ ಮನಸಿನಲ್ಲಿ ಬಂದಿರುತ್ತದೆ. ಸಂಪೂರ್ಣ ಮಾಹಿತಿ ಇರಲ್ಲ.
ಕಂತೆಯಲ್ಲಿ ಗೇರೆಣ್ಣೆಯನ್ನೆ ಏಕೆ ಬಳಸುತ್ತಾರೆಂಬುದು ಸಹ ವಿಚಾರಯೋಗ್ಯ ಅಂಶವೇ.
ಇಷ್ಟಲಿಂಗಕ್ಕೆ ಮೇಲೆ ಲೇಪಿಸಲು ನಿರ್ಮಿಸಿದ ಕಂಥೆಯು ಭಲ್ಲಾತಕೀ(ಗೇರೆಣ್ಣೆ)ಯಿಂದ ತಯಾರಿಸಲ್ಪಟ್ಟಿರುತ್ತದೆ.
"ಆಯಸ್ಕಾಂತ ಭಲ್ಲಾತಕೀ....... ಇತ್ಯೇನಾನಿ ರಸಾಯನಿ (ವೈದ್ಯಶತಶ್ಲೋಕಿ ಪುಟ(109)
ಎಂಬ ಉಕ್ತಿಯಲ್ಲಿ ಆಯಸ್ಕಾಂತ ಹಾಗೂ ಗೇರೆಣ್ಣೆಗಳು ರಸಾಯನ ಔಷಧಗಳೆಂದು ಪ್ರತಿಪಾದಿಸಲ್ಪಟ್ಟಿವೆ.
ಗೇರು ಅಥವಾ ಭಲ್ಲಾತಕಕ್ಕೆ ಆಯುರ್ವೇದ ಶಾಸ್ತ್ರದಲ್ಲಿ ಬಹಳ ಮಹತ್ವವಿದೆ.
"ಭಲ್ಲಾತಕ ಕ್ಷೀರಂ ತತ್ಪ್ರಯೋಗಾತ್ ವರ್ಷಶತಂ ಅಜರಂ ವಯಸ್ತಿಷ್ಠತೀತಿ ಸಮಾನಂ (ಚರಕ ಸಂಹಿತೆ, ಚಿಕಿತ್ಸಾಧ್ಯಾಯ)
ವಿಶುದ್ದಗೊಳಿಸದೇ ಬಳಸಿದಾಗ ಹಲವಾರು ಬಾರಿ ಸುಡುವ ಗಾಯಗೊಳಿಸುವ ಗೇರು, ನೂರುಕಾಲ ಬಾಳು ನೀಡುವ ಅಮೃತೌಷಧವೆಂದೂ ಪರಿಗಣಿತವಾಗಿದೆ. ಇಂತಹ ಸುಡುವ ಅಗ್ನಿಯ ತೆರದಿ ಇರುವ ಗೇರು ಯಥೋಚಿತವಾಗಿ ಬಳಸಿದಾಗ ಅಮೃತಸದೃಶವಾಗಿ ಮಾನವ ಶರೀರಕ್ಕೆ ಉಪಕರಿಸುತ್ತದೆ.
ಬಯಲು ಸೀಮೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕೇರುಮರದ ಔಷಧ ಪ್ರಭಾವ ಮೂರು ಸಾವಿರ ವರ್ಷಗಳಿಂದ ನಮ್ಮ ಜನರಿಗೆ ಚಿರಪರಿಚಿತ.
ಕೇರುಕಾಯಿ (ಕ್ಯಾರು ಅಂತಾರೆ ಹಳ್ಳಿಕಡೆ)
ಕೇರುಕಾಯಿಯನ್ನು ನೋಡಿದರೆ ತಟ್ಟನೇ ನಮಗೆ ಪಾಣಿಪೀಠದ ಮೇಲಿನ (ಕೈಯಲ್ಲಿ) ಲಿಂಗದ ನೆನಪಾಗುತ್ತದೆ. ದುಂಡನೆಯ ಮಾಂಸಲ ಹಣ್ಣು ಪಾಣಿಪೀಠದಂತಿದೆ. ನಡುವೆ ಬಾಣದಾಕಾರದ ಲಿಂಗವನ್ನು ಹೋಲುವ ಬೀಜ. ಜನಪದೀಯರಲ್ಲಿ ಒಂದು ಸಾದೃಶ್ಯ ಸಿದ್ದಾಂತ ಬಹಳ ಮಹತ್ವ ಪಡೆದಿದೆ. ಅಥರ್ವ ವೇದದ ಕಾಲದಿಂದಲೂ ಈ ಸಿದ್ದಾಂತವು ಸಾಧಿತವಾಗಿದೆ. ಲಿಂಗಾಕಾರದ ಕೇರುಹಣ್ಣನ್ನು ಕೇವಲ ಆಕಾರದ ದೃಷ್ಟಿಯಿಂದ ಮಾತ್ರ ಲಿಂಗದ ಕಂತೆಗೆ ಬಳಸಲಾಗಿದೆಯೆಂದರೆ ಅಸಮರ್ಥನೀಯವೆನಿಸುತ್ತದೆ.
ಭಲ್ಲಾತಕ ಅಥವಾ ಕೇರು ಬಹಳ ಶಕ್ತಿಶಾಲಿ ಔಷಧ, ಉತ್ತಮ ರಸಾಯನವಾಗಿಯೂ ಕಾರ್ಯನಿರ್ವಹಿಸುತ್ತದೆ. ದೇಹದ ಅಕಾಲ ಮುಪ್ಪನ್ನು ನಿವಾರಿಸುತ್ತದೆ. ರೋಗದ ಕ್ಷಮತೆಯನ್ನು ವರ್ಧಿಸುತ್ತದೆ. ಇನ್ನು ಲಿಂಗವನ್ನು ಅಗ್ನಿ, ತೇಜಸ್ಸು ಎಂಬ ವಿಶೇಷಣಗಳಿಂದಲೂ ಕರೆಯಲಾಗುತ್ತದೆ.
ಭಲ್ಲಾತಕವನ್ನೂ ಅಗ್ನಿ ಎಂಬ ಪರ್ಯಾಯ ನಾಮದಿಂದ ಕರೆಯಲಾಗುತ್ತದೆ. ಗುಣ, ಕರ್ಮದಲ್ಲಿ ಅದು ಅಗ್ನಿಸಮನಾಗಿಯೇ ಇದೆ. ಪಾಪರಾಶಿ ಮತ್ತು ರೋಗರಾಶಿಗಳನ್ನು ಅದು ಭಸ್ಮೀಕರಿಸುವುದೆಂದು ಕಂತೆಗೆ ಬಳಸಿದರು. ಕಾಮಾಲೆ ರೋಗದಲ್ಲಿ 'ಚಿತ್ರಮೂಲ' ವೆಂಬ ಹೆಸರಿನ ದ್ರವ್ಯವನ್ನು ಬಳಸಲಾಗುತ್ತದೆ. ಅದೂ ಕೂಡ ಸುಡುವ ಗುಣವುಳ್ಳದ್ದಾಗಿದ್ದರೂ ಅದನ್ನು ಕಂತೆಗೆ ಬಳಸುವುದಿಲ್ಲ.
ಕೇರನ್ನು ಬಳಸಿ ಲಿಂಗದ ಆಯುಷ್ಯ ಮತ್ತು ಆ ಲಿಂಗವನ್ನು ಧರಿಸುವವನ ಆಯುಷ್ಯವನ್ನು ವೃದ್ಧಿಸುವುದು ಪ್ರಾಚೀನರ ಪ್ರಧಾನ ಗುರಿಯಾಗಿತ್ತು.
ಹೀಗಾಗಿ ಕಂತೆಯಲ್ಲಿ ಗೇರೆಣ್ಣೆಯನ್ನೇ ಆಧ್ಯ ಪದಾರ್ಥವಾಗಿ ಬಳಸಲಾಗುತ್ತದೆ.
ಗೇರೆಣ್ಣೆಯನ್ನು ಶುದ್ಧಗೊಳಿಸಿ ಶೂಲ, ಮೂಲವ್ಯಾಧಿ ಮತ್ತು ಅತಿಸಾರ ಮುಂತಾದ ರೋಗಗಳಿಗೆ ಉಪಯೋಗಿಸುವ ವಿಧಾನವು "ಗುಣ ಭೂಷಣ" ವೈಧ್ಯನಿಘಂಟುವಿನಿಂದ ತಿಳಿದುಬರುತ್ತದೆ. ಚರಕಸಂಹಿತೆ ಚಿಕಿತ್ಸಾಸ್ಥಾನ 1 ನೇ ಅಧ್ಯಾಯದಲ್ಲಿ ಭಲ್ಲಾತಕೀ ಅಂದರೆ ಗೇರೆಣ್ಣೆಯನ್ನು ಶುದ್ಧಗೊಳಿಸಿ ಯೋಗ್ಯ ರೀತಿಯಿಂದ ಉಪಯೋಗಿಸಿದರೆ ಅಮೃತ ಸದೃಶವಾಗುತ್ತದೆ ಎಂಬುದನ್ನು ತಿಳಿಸಿ, ಅದರಿಂದ ಭಲ್ಲಾತಕಘೃತ, ಭಲ್ಲಾತಕಕ್ಷೀರ, ಭಲ್ಲಾತಕಕ್ಷೌದ್ರ, ಭಲ್ಲಾತಕಗುಡ, ಭಲ್ಲಾತಕಯೂಷ, ಭಲ್ಲಾತಕತೈಲ, ಭಲ್ಲಾತಕಪಲಲ, ಭಲ್ಲಾತಕಸಕ್ತು, ಭಲ್ಲಾತಕ ಲವಣ ಮತ್ತು ಭಲ್ಲಾತಕ ತರ್ಪಣವೆಂಬ ಹತ್ತು ವಿಧವಾದ ಔಷಧವನ್ನು ತಯಾರಿಸಿ ಉಪಯೋಗಿಸುವ ರೀತಿಯನ್ನು ತಿಳಿಸಲಾಗಿದೆ ಎಂಬ ವಿಷಯವನ್ನು ಶ್ರೀ ಜಿ.ಟಿ. ಅಕ್ಕುಲಯ್ಯ ದೀಕ್ಷಿತರು " ಇಷ್ಟಲಿಂಗ ವಿಜ್ಞಾನ" ಪುಸ್ತಕದಲ್ಲಿ ವಿಶದಪಡಿಸಿದ್ದಾರೆ.
ಸಸ್ಯಾಶಾಸ್ತ್ರದನುಸಾರ Semecarpus anacardium Linn ಎಂದು ಕರೆಯಲ್ಪಡುವ ಭಲ್ಲಾತಕವು ಭಲ್ಲಿ, ಅರುಸ್ಕರ, ಅಗ್ನಿಕ, ಅಗ್ನಿಮುಖ, ವೀರವೃಕ್ಷ ಇತ್ಯಾದಿ ಪರ್ಯಾಯವಾದ ನಾಮಗಳಿಂದ ಗುರುತಿಸಲ್ಪಡುವ ಇದು ಆಂಗ್ಲಭಾಷೆಯಲ್ಲಿ Marking Nut ಎಂಬ ನಾಮದಿಂದ ಪ್ರಸಿದ್ಧವಾಗಿದೆ. Anacardiac acid, cardol, Catechol, Anacardol and Bhilwanol oil ಗಳನ್ನು ಹೊಂದಿರುವ ಇದರ ಹಣ್ಣುಗಳು ಕುಷ್ಠ, ಉಪದಂಶ, ಶುಕ್ರದೌರ್ಬಲ್ಯ, ಮಸ್ತಿಷ್ಕ, ನರದೌರ್ಬಲ್ಯ, ಅಪಸ್ಮಾರ, ಅರ್ಶ, ಯಕೃತ್ - ಪ್ಲೀಹ ವಿಕಾರ, ಹೃದ್ರೋಗ, ಗ್ರಹಣಿ, ಸರ್ಪದಂಶ, ವಾತವಿಕಾರ,ಜ್ವರ ಮುಂತಾದ ರೋಗಗಳಲ್ಲಿ ಅತ್ಯುಪಯುಕ್ತವಾಗಿವೆ. ಮಧುರ -ಕಷಾಯ ರಸದ, ಲಘು ಗುಣವುಳ್ಳ ಸ್ನೀಗ್ಯ- ತೀಕ್ಷ್ಣ ವೀರ್ಯದ, ಮಧುರ ವಿಪಾಕದ ಈ ದ್ರವ್ಯವು ಕಫವಾತ ಶಾಮಕವಾಗಿ , ಪಿತ್ತಸಂಶೋಧಕವಾಗಿಯೂ ಕೆಲಸ ಮಾಡುತ್ತದೆ. ಮೂಲವ್ಯಾಧಿ, ಅಜಿರ್ಣದಿಂದ ಬಳಲುವವರಿಗೆ ಇದು ಉತ್ತಮ ಔಷಧಿಯಾಗಿದೆ. ಮತವ್ಯಾಧಿ ( Rheumatoid Arthritis ಯಲ್ಲಿ, ಉಳುಕುನೋವುಗಳಿಗೆ , ಕೆಮ್ಮು- ದಮ್ಮುಗಳಿಗೆ ಪ್ರಯೋಜನಕಾರಿಯಾಗಿದೆ. Syphilis, Epilepsy ಗಳಂಥ ಕಷ್ಟಸಾಧ್ಯ ರೋಗಗಳಿಗೂ ಇದು ದಿವ್ಯೌಷದವಾಗಿದೆ.
ಕೆಲವರಿಗೆ ಅಲರ್ಜಿ ಸಮಸ್ಯೆ ಇರುವವರಿಗೆ ಇದರ ರಸ ತಗುಲಿದರೆ ಕೆಲವರಿಗೆ ವಿಪರೀತ ಕೆರೆತ,ಗಂಧೆಗಳುತ್ಪನ್ನವಾಗಬಹುದು ಇಂತಹವರು ವೈದ್ಯರ ಮಾರ್ಗದರ್ಶನದಲ್ಲಿಯೇ ಇದನ್ನು ಉಪಯೋಗಿಸಬೇಕು. ಇದರ ನೇರ ಬಳಕೆ ನಿಷಿದ್ಧ ವಿದ್ದು ಸೂಕ್ತ ಶೋಧನವಿಧಿಯಿಂದ ಸಂಸ್ಕರಿಸಿದ ನಂತರವೇ ಇದನ್ನು ಬಳಸಬೇಕು.
ಕಂಥೆ:-
ಇಷ್ಟಲಿಂಗವನ್ನು ಸಿದ್ದಪಡಿಸಲು, ಶಿಲಾಲಿಂಗದ ಹೊರಗವಚದ ನಿರ್ಮಾಣಕ್ಕೆ ಬೇಕಾಗುವ ವಸ್ತುವನ್ನು ಕಂತೆ, ಕಾಂಥೆ, ಕಂತಿ ಇತ್ಯಾದಿ ಕರೆಯಲಾಗುತ್ತದೆ. ಈ ಕಂಥೆಯನ್ನು ಕೇರು, ಮಣ್ಣಿನ ಗಡಿಗೆ,ಮುಚ್ಚಳ,ಕೊಡ, ಆಕಳ ಬೆರಣಿ,ಹಾಸುಗಲ್ಲು, ರುಬ್ಬುಗಲ್ಲು, ಚಮಟಿಗೆ, ಕಡಾಯಿ ,ಕಡಚಗಿ, ಹಣತೆ, ರಾಳ , ಜಾಲ್ದೋಪ, ಬತ್ತಿ, ಕುಸುಬಿ ಎಣ್ಣೆ, ಆಕಳತುಪ್ಪ, ಕರ್ಪೂರ, ಶುದ್ಧ ಧೋತರ, ಬಟ್ಟೆ ಇತ್ಯಾದಿ ವಸ್ತುಗಳ ಸಹಾಯದಿಂದ ತಯಾರಿಸಲ್ಪಟ್ಟಿರುತ್ತದೆ.
ಕಂಥೆಗೆ ಕೇರೆಣ್ಣೆ/ ಗೇರೆಣ್ಣೆಯೇ ಮುಖ್ಯವಾದ ಕಚ್ಛಾಸಾಮಗ್ರಿ. ಇದರೊಂದಿಗೆ ಸೇರಿಸುವ ಪದಾರ್ಥಕ್ಕನುಗುಣವಾಗಿ ನಾಲ್ಕು ಪ್ರಕಾರದ ಕಂಥೆಗಳನ್ನು ಹೇಳಲಾಗುತ್ತದೆ. ಸಾದಾ ಕಂಥೆ, ಎಣ್ಣೆಕಂಥೆ, ತುಪ್ಪದಕಂಥೆ, ಕರ್ಪೂರದ ಕಂಥೆ ಎಂದು ನಾಲ್ಕು ವಿಧದ ಕಂಥೆಗಳು ಬಳಕೆಯಲ್ಲಿವೆ. ಎಣ್ಣೆ, ಕರ್ಪೂರ ,ತುಪ್ಪ, ದಟ್ಟಕಾಡಿಗೆಯ ಮಸಿಯನ್ನು ಮೂಲಕಂಥೆಯೊಡನೆ ಮಿಶ್ರ ಮಾಡಿದಾಗ ಆಯಾ ಮೂಲವಸ್ತುವಿನ ಕಂಥೆಯೆಂಬ ಪರಿಭಾಷೆಯೊಂದಿಗೆ ಗುರುತಿಸಲಾಗುತ್ತದೆ.
ಇಷ್ಟಲಿಂಗ ಪೂಜೆಯಲ್ಲಿ ಹೇಳಿದ ಪಿಷ್ಠಾದಿ ಲೇಪನಗಳು ,ಪಂಚಾಮೃತಾದಿ ಅಭೀಷೇಕಗಳು ಕಂಥೆಯಲ್ಲಿ ಉಪಯೋಗಿಸಲ್ಪಟ್ಟ ಗೇರೆಣ್ಣೆಯನ್ನು ಆಯುರ್ವೇದ ಪದ್ದತಿಯಂತೆ ಸಹಜವಾಗಿ ಪ್ರತಿದಿವಸ ಶುದ್ಧಗೊಳಿಸುತ್ತವೆ.
ಒಂದು
ಹೀಗೆ ಪೂಜಿಸಲ್ಪಟ್ಟ ಇಷ್ಟಲಿಂಗದ ಅಭಿಷೇಕೋದಕ ಪ್ರೋಕ್ಷಣ ಹಾಗೂ ಲಿಂಗೋದಕವನ್ನು ಪ್ರತಿದಿನ ಪ್ರಾಶನ ಮಾಡುವುದರಿಂದ ಶಾರೀರಿಕ ರೋಗಗಳೆಲ್ಲ ಸಹಜವಾಗಿ ನಿವೃತ್ತಿಯಾಗಿ ಉತ್ತಮ ಆರೋಗ್ಯ ಲಾಭವು ಪ್ರಾಪ್ತವಾಗುವುದು.
ದೇಹದ ಮೇಲೆ ಇಷ್ಟಲಿಂಗ ಧರಿಸಬೇಕೆಕೆ ?
***********************************
ಆಕಳಿಗೆ ಮೈಮೇಲೆ ಹುಣ್ಣು ಆದಾಗ ಪಶುವೈದ್ಯನು ಬಂದು ಔಷಧ ಕೊಟ್ಟು ಅದನ್ನು ಆಕಳ ತುಪ್ಪದಲ್ಲಿ ಬೆರೆಸಿ ಗಾಯಕ್ಕೆ ಲೇಪಿಸಲು ಹೇಳುತ್ತಾನೆ. ಜಾಣನಾದ ಆಕಳ ಯಜಮಾನನು "ಅದು ಕರೆವ ಹಸು, ಅದರ ಕೆಚ್ಚಲಲ್ಲಿ ಹಾಲಿದೆ, ಆ ಹಾಲಿನಲ್ಲಿ ತುಪ್ಪವಿದ್ದೇ ಇದೆ. ಆದ್ದರಿಂದ ಔಷಧವನ್ನು ಮಾತ್ರ ಹುಣ್ಣಿಗೆ ಹಚ್ಚಿದರೆ ಸಾಕು" ಎಂದು ತಿಳಿದರೆ ಆ ಹುಣ್ಣು ಮಾಯದು. ಅದಕ್ಕಾಗಿ ಹಾಲು ಕರೆದು, ಕಾಯಿಸಿ, ಹೆಪ್ಪು ಹಾಕಿ, ಮೊಸರು ಕಡೆದು, ಬೆಣ್ಣೆ ತೆಗೆದು, ಅದನ್ನು ಕಾಯಿಸಿ ತುಪ್ಪ ಮಾಡಿ ಅದನ್ನು ಔಷಧಕ್ಕೆ ಬೆರೆಸಿ ಗಾಯಕ್ಕೆ ಬಳಿದಾಗಲೇ ಅದು ವಾಸಿಯಾದೀತು! ಅದರಂತೆ ಮಾನವನ ಶರೀರದಲ್ಲಿ ಶಿವಕಲೆ ಇರುವುದು ನಿಜ. ಮಾನವನಿಗೆ ಬಂದಿರುವ ಹುಟ್ಟುಸಾವು ಎಂಬ "ಭವರೋಗ"ವು ವಾಸಿಯಾಗಬೇಕಾದರೆ ಸದ್ಗುರು ಎಂಬ ಭವರೋಗವೈದ್ಯನು ಇಷ್ಟಲಿಂಗವೆಂಬ ಔಷಧಕ್ಕೆ ಅವ(ಆ ಶಿಷ್ಯ)ನಲ್ಲಿಯೇ ಇರುವ ಶಿವಕಲೆಯನ್ನು ಆಕರ್ಷಿಸಿ, ಇಷ್ಟಲಿಂಗದಲ್ಲಿ ಸ್ಥಾಪಿಸಿ, ಅದನ್ನು ಶಿಷ್ಯನಿಗೆ ಧರಿಸಿ, ವಿಧ್ಯುಕ್ತವಾಗಿ ಭಕ್ತಿಯಿಂದ ಆರಾಧಿಸಲು ಹೇಳುತ್ತಾನೆ. ಗುರುವಿನ ಆದೇಶದಂತೆ ಆ ಲಿಂಗವನ್ನು ಪೂಜಿಸಿ, ಅನುಸಂಧಾನ ಮಾಡುವುದರಿಂದ ಮಾನವನು ಭವರೋಗದಿಂದ ಬಿಡಲ್ಪಟ್ಟು ಮುಕ್ತನಾಗುತ್ತಾನೆ. ಆದ್ದರಿಂದ ಇಷ್ಟಲಿಂಗವನ್ನು ದೇಹದ ಮೇಲೆ ಅವಶ್ಯವಾಗಿ ಧರಿಸಬೇಕು.
1)ಇಷ್ಟಲಿಂಗದ ಒಳಗಡೆ ಇರುವ ಚಿಕ್ಕದಾದ ಪೀಠಿಕೆಯು ತುಂಬಾ ಸೂಕ್ಷ್ಮವಾಗಿ ( ಸೂಕ್ಷ್ಮ ವಸ್ತು ಗ ಳಿಂದ ) ರೂಪಿತವಾಗಿರುತ್ತದೆ..!! ಇಷ್ಟಲಿಂಗಕ್ಕೆ ವಿವಿಧ ಪೂಜಾ ವಿಧಾನದ ಅಭಿಷೇಕದ ವಸ್ತು ಗಳಿಂದ ಹಾನಿಯಾಗುವ ಸಂ ಭವವಿರುತ್ತದೆ - ಹಾಗಾಗಿ ಅದ ರ ರಕ್ಷಣಾ ಕವಚವಾಗಿ - ಗೋ ಳಾಕಾರದಲ್ಲಿ ಕಂತಿ ( ಕಾಂತಿ) ಕಟ್ಟಿರುತ್ತಾರೆ ಹಾಗೂ ಅದಕ್ಕೆ ಹೊಳಪು ನೀಡಲಾಗಿರು ತ್ತದೆ ..!!!
2) ಇಷ್ಟ ಲಿಂಗ ಅಸ್ತ ಧಾತುವಿಂದ ತಯಾರಿಸುತ್ತಾರೆ, ಆಕಳ ತುಪ್ಪವನ್ನು ಸುತ್ತು ಅದರಿಂದ ಬರುವ ಕಾಡಿಗೆ ಇಂದ ತಯಾರಿಸುತ್ತಾರೆ,
ಇಷ್ಟ ಲಿಂಗ ಎಡ ಕೈಲಿ ಇಟ್ಟುಕೊಂಡೆ ಪೂಜಿಸುತ್ತಾರೆ, ಯಾಕೆ ಅಂದ್ರೆ, ನಮ್ಮ ದೇಹದ ಬಲ ಮೆದುಳು ಎಡ ಹಾಗೂ ಎಡ ಮೆದುಳು ದೇಹದ ಬಲಭಾಗವನ್ನು ನಿಯಂತ್ರಿಸುತ್ತದೆ.
ದೇಹದ ಬಳ ಮೆದುಳು ಪ್ರೀತಿ , ಕರುಣೆ, ಸ್ನೇಹ etc... ಅದರ ಕೆಲಸ.
ಇಷ್ಟಲಿಂಗ ಕಪ್ಪಾಗಿರುವುದರಿಂದ, ನಮ್ಮ ಕಣ್ಣು ಕಪ್ಪಿರುವುದರಿಂದ ಕಪ್ಪು ಬೇಗನೆ observing capacity ಹೊಂದುವುದು.
ಇದರಿಂದ ಮೆದುಳಿನ ಹಿಂಭಾಗದಲ್ಲಿ ಮೇಲಟೋನ್ ರಸ ಉತ್ಪತ್ತಿಯಾಗುತ್ತದೆ, ಮೇಲಟೋನ್ ರಸದಿಂದ ಮನುಷ್ಯ ಅತ್ಯಂತ ಚೈತ್ಯನ್ಯದಿಂದ ಇರಲು ಸಾಧ್ಯಲಿಂಗಾಯತ ಧರ್ಮದ ವ್ಯೆಶಿಷ್ಟ್ಯ ಪೂರ್ಣ ಉಪಾಸನಾ ಸಾಧನ ಇಷ್ಟಲಿಂಗ. ಜಗತ್ತಿನ ಮತ್ತಾವ ಧರ್ಮಗಳಲ್ಲಿಯೂ ಇರದ ದೇವನನ್ನು ವಿಶ್ವದ ಆಕಾರದಲ್ಲಿ ತಾತ್ವಿಕವಾಕವಾಗಿ ರೂಪಿಸಿ ಪೂಜಿಸುವ ಪರಿಪೂರ್ಣತೆಯನ್ನ ಇಲ್ಲಿ ಕಾಣಬಹುದು. ನಿರಾಕಾರವನ್ನು ಸಾಕಾರ ಮೂಲಕ ಗ್ರಹಿಸಿಕೊಳ್ಳುವ ಪರಿಪಾಠ ಆಧ್ಯಾತ್ಮಿಕ, ವ್ಯೆವಹಾರಿಕ ಎರಡು ಪ್ರಪಂಚದಲ್ಲಿ ಉಂಟು, ನಿರಕಾರವಾದ ವೇಳೆಯನ್ನ ಅರಿಯಲಿಕ್ಕೆ ಸಾಕಾರವಾದ ಗಡಿಯಾರವು ಸಾಧನಗುವಂತೆ ನಿರಕಾರವಾದ ದೇವನನ್ನ ಅರಿಅಯಲಿಕ್ಕೆ ಇಷ್ಟಲಿಂಗವು ಸಾಕಾರ ಕುರುಹು. ಗುಡಿಯಲ್ಲಿನ ಲಿಂಗದಂತೆ ಶಿವನನ್ನು ಸಂಕೇತಿಸುವ ಜಗತ್ತನ್ನೆಲ್ಲ ತುಂಬಿಕೊಂಡಿರುವ ಪರಮಾತ್ಮನ ಶರಿರವವಾದ ಬ್ರಹ್ಮಾಂಡವು ಗೋಲಾಕಾರದಲ್ಲಿ ಇರುವದರಿಂದ ಆ ಆಕಾರದಲ್ಲಿ ರೂಪಿಸಿಕೊಂಡ ಕುರುಹು.
ಇಷ್ಟಲಿಂಗಕ್ಕೆ ಕಪ್ಪಾದ ಕಾಂತಿಯುಕ್ತವಾದ ಕಂಥೆಯ ಕವಚವು ಇರುವ ಕಾರಣ ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು.ಆಧ್ಯಾತ್ಮಿಕವಾಗಿ ಇದು ಭಾವಸಾಗರವನ್ನು ದಾಂಟಿಸುವ ಹಡಗಿನಂತೆ. ಹಸುವಿನ ಕೆಚ್ಚಲಿನಲ್ಲಿರುವ ಹಾಲಿನಲ್ಲಿ ತುಪಾವಿರುವುದು ಸತ್ಯಾಂಶ. ಒಂದು ವೇಳೆ ಹಸುವು ಬಿದ್ದು ಪೆಟ್ಟದರೆ, ಬಿಸಿ ತುಪ್ಪವನ್ನ ಹಚ್ಚಿ ಆದ ಗಾಯ ಅಥವಾ ಪೆಟ್ಟನ್ನ ವಾಸಿ ಮಾಡುವುದು ಸರಿಯಾದುದು. ಆದರೆ "ಕೆಚ್ಚಲಿನಲ್ಲಿ ಹಾಲಿದೆ, ಹಾಲಿನಲ್ಲಿ ತುಪ್ಪವಿದೆ" ಎಂದು ಅತಿ ಬುದ್ದಿವಂತರಂತೆ(ಅಹಂ ಬ್ರಹ್ಮಾಸ್ಮಿ) ಕೂತರೆ ಹೇಗೆ ಹಸುವನ್ನ ಪೋಷಿಸಿ, ಕೆಚ್ಚಲಿಂದ ಹಾಲನ್ನ ಕರೆದು, ಹಾಲಿಗೆ ಸಂಸ್ಕಾರಕೊಟ್ಟು ತುಪ್ಪಮಾಡಿದಂತೆ ಇದು ಬಾಹ್ಯ ಲಿಂಗ ಪೂಜೆ ಯಿಂದ ಅಂತರಂಗದ ಪರಮಾತ್ಮನ ಪೂಜೆ ಆಗಿದೆ.
ಇಷ್ಟಲಿಂಗ ಪೂಜೆಯನ್ನು ಜ್ಞಾನ ಮುದ್ರೆಯಲ್ಲಿ ಮಾಡಬೇಕು.
ಜ್ಞಾನ ಮುದ್ರೆ
ಎರಡೂ ಕೈಗಳನ್ನು ಮೇಲ್ಮುಖವಾಗಿ ಇಟ್ಟು ಆಯಾ ಕೈಗಳ ತೋರು ಬೆರಳಿಗೆ ಹೆಬ್ಬೆರಳಿನ ತುದಿಯನ್ನು ತಾಗಿಸಿ. ಉಳಿದ ಮೂರು ಬೆರಳುಗಳು ನೇರವಾಗಿ ಇರಲಿ. ಒತ್ತಡ ನೀಡಬೇಕಾದ ಅಗತ್ಯ ಇಲ್ಲ.
#ಪ್ರಯೋಜನ: ಮೆದುಳಿನ ಶಕ್ತಿ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ನಾಡಿಗಳಲ್ಲಿ ಶಕ್ತಿ ಬಲವಾಗಿ ಸಂಚರಿಸುತ್ತದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಕಾರಿ. ನಿದ್ರಾಹೀನತೆ, ಉದ್ವೇಗ, ಭಯ, ಒತ್ತಡ, ಮಾನಸಿಕ ಚಂಚಲತೆ ದೂರವಾಗುತ್ತದೆ. ಅಧಿಕವಾದ ಸಿಟ್ಟನ್ನು ಶಮನಗೊಳಿಸುವುದರ ಜೊತೆಗೆ ಮನುಷ್ಯ ಸ್ವಭಾವಗಳಾದ ಹಟಮಾರಿತನ, ಆಲಸ್ಯ, ಸಂಶಯ, ಅತಿ ನಿದ್ರೆಯನ್ನು ಹೋಗಲಾಡಿಸುತ್ತದೆ.
ಅಧ್ಯಾತ್ಮ ಶಕ್ತಿಯ ವೃದ್ಧಿಗೆ ಜ್ಞಾನ ಮುದ್ರೆ ಸಹಾಯಕ. ಪಿಟ್ಯುಟರಿ ಗ್ರಂಥಿಗಳ ಕಾರ್ಯಕ್ಷಮತೆ ಹೆಚ್ಚಿಸುವುದರೊಂದಿಗೆ ದೇಹಕ್ಕೆ ಹೊಸ ಚೈತನ್ಯವನ್ನು ತುಂಬಿಸುತ್ತದೆ. ಎಷ್ಟು ಹೊತ್ತು ಬೇಕಾದರೂ ಮಾಡಬಹುದು.
ಪಂಚಸೂತ್ರ ಕಿರುಪೀಠಗ ಷಟ್ಕಳೆಹೊಂದಿದ ಪುರ್ಣರಂದ್ರ ರಹಿತ ಭಾನಸ್ಥಾಪಿಸಿದ ಕಾರಣ ಪಂಚಸೂತ್ರ ಶಿವಶಕ್ತಿ ಸಮ್ಮಿಲನ ಹೊಂದಿದ ಪರಿಣಾಮ ಮೆಲೆ (ಚಿದ್ಲೇಪ) ಕಂತೆ ಇರಸಿದೆ ಇದಕ್ಕೆ ಇಷ್ಟಲಿಂಗ ಎಂದು ನಾಮಕರಣ ಮಾಡಿ ಗುರು ಪಾದೋದಕ ಪ್ರಸಾದ ಕ್ರಿಯೆಗೆ ಅನುಮೋದನೆ ಮಾಡಿ ಶಿವ ಶಕ್ತಿಯರಲ್ಲಿ ಹೇಗೆ ಬೇದಬಾವ ವಿಲ್ಲವೊ ಹಾಗೆ ಗುರುಶಿಷ್ಯರಲ್ಲಿಯೋ ಬೇದಬಾವವನ್ನು ಹರನ ಮಾಡಲು ಶಕ್ತಿವಿಶಿಷ್ಟಾದ್ವೈತ ತತ್ವ ನಿರ್ಣಯ ಆದರ್ಶನಿಯ ವಾಗಿದೆ.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
ವೀರಶೈವ ಧರ್ಮದ ಅಷ್ಟಾವರಣ ಗಳಲ್ಲಿ ಆರೋಗ್ಯ
ಡಾ. ಸಿ. ಎ .ಹೀರೇಮಠ ರ ಕೃತಿಯಿಂದ ಹಾಗೂ ಇತರೆ ಮೂಲಗಳಿಂದ ಲೇಖನ