February 27, 2021

ಇಂಗು

 ’ಇಂಗು’ ರಾಮಠದೇಶದ ಕೊಡುಗೆ !


ಇಂಗು ಅಥವಾ ಹಿಂಗು ಎಂದು ಕರೆಯಲಾಗುವ ಪದಾರ್ಥವೊಂದು ಮೂಲತಃ ಇರಾನ್ - ಪರ್ಷಿಯಾ ಮೂಲದ ಫೆರುಲಾ ತಳಿಗೆ ಸೇರಿದೆ. ಅಸಾಫೋಟಿಡಾ ಎಂದು ಆಂಗ್ಲ ಭಾಷೆಯಲ್ಲಿ ಕರೆಸಿಕೊಳ್ಳುವ ಈ ಪದಾರ್ಥ ಕಚ್ಚಾ ಸ್ಥಿತಿಯಲ್ಲಿದ್ದಾಗ ಕಟುವಾದ, ಅಹಿತಕಾರಿ ವಾಸನೆಯನ್ನು ಹೊಂದಿರುತ್ತದೆ, (ಕೆಟ್ಟ ವಾಸನೆ). ಆದರೆ ಶುದ್ಧೀಕರಿಸಿ ಅಡಿಗೆಯಲ್ಲಿ ಬಳಸಿದಾಗ, ಅದು ಪರಿಮಳವನ್ನು ಬೀರುತ್ತದೆ. ಈ ಮಸಾಲೆ ಪದಾರ್ಥ ಜೀರ್ಣಕ್ರಿಯೆಗೆ ಸಹಕಾರಿಯಾಗಿ, ಆಹಾರದಲ್ಲಿ ವ್ಯಂಜನವಾಗಿ ಹಾಗೂ ಉಪ್ಪಿನಕಾಯಿಗಳಲ್ಲಿಯೂ ಬಳಸಲಾಗುತ್ತದೆ. ಇದರ ವಾಸನೆಯು, ಬೇಯಿಸದಿದ್ದಾಗ ಎಷ್ಟು ಕಟುವಾಗಿರುತ್ತದೆಂದರೆ ಅದನ್ನು ಗಾಳಿ ಆಡದ ಡಬ್ಬದಲ್ಲಿಡಬೇಕಿರುತ್ತದೆ, ಇಲ್ಲದಿದ್ದರೆ ಅದರ ಪರಿಮಳ ಸಮೀಪದ ಇತರ ಮಸಾಲೆ ಪದಾರ್ಥಗಳನ್ನು ಕಲುಷಿತಗೊಳಿಸಬಹುದು. ಆದಾಗ್ಯೂ, ಎಣ್ಣೆ ಅಥವಾ ತುಪ್ಪದಲ್ಲಿ ಬಿಸಿ ಮಾಡಿದಾಗ ಅದರ ವಾಸನೆ ಹಾಗೂ ರುಚಿಯು ಮತ್ತಷ್ಟು ಸೌಮ್ಯವಾಗಿ ಹಾಗೂ ಹಿತಕರವಾಗುತ್ತದೆ.


ಇಂಗು ಮಾನವನ ಅಜೀರ್ಣಕಾರಕ ಬೆಳವಣಿಗೆಯನ್ನು ತಡೆಹಿಡಿದು, ವಾಯುಬಾಧೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇನ್ನು ಇಂಗು ನಾಡಿಕ ಅಂತ ಒಂದಿದೆ. ಅದೂ ಸಹ ಆಯುರ್ವೇದದ ಔಷಧ ತಯಾರಿಕೆಯಲ್ಲಿ ಬಳಸುವ ರಾಳದಂತಹದ್ದು. ಇಂಗು ನಿರ್ಯಾಅಸ ಎಂದು ಸಹ ಈ ಎಂಗನ್ನು ಕರೆಯಲಾಗುತ್ತಿದ್ದು, ಇಂಗು ಪತ್ರ, ಇಂಗುಪರ್ಣಿ ಎಮದೂ ಕರೆಯಲಾಗುತ್ತದೆ.

ಇನ್ನು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಇರಾನಿನಿಂದ ಭಾರತಕ್ಕೆ ತರಲಾಗಿದೆ. ಇವೆರಡೂ ಸಹ ಇರಾನಿಯನ್ನರ ಅತ್ಯಂತ ಪ್ರೀತಿಯ ಭೋಜ್ಯವಸ್ತು. ಇವುಗಳನ್ನು ಆ ಪ್ರದೇಶದಿಂದ ತಂದಿರುವ ಕಾರಣ ಮ್ಲೇಚ್ಛಖಂಡ ಅಥವಾ ನೀಚಭೋಜ್ಯವೆಂದು ಅವುಗಳಿಗೆ ಮಡಿವಂತಿಕೆ ಕಲ್ಪಿಸಲಾಗಿತ್ತು. ಇವೆರಡರಂತೆ ಇಂಗು ಸಹ ಆ ಪ್ರದೇಶದಿಂದಲೇ ಭಾರತವನ್ನು ಪ್ರವೇಶಿಸಿದ್ದರಿಂದ ಅದೂ ಸಹ ಮಡಿವಂತಿಕೆಯಿಂದಾಗಿ ದೂರವೇ ಇತ್ತು. 

ಕೆಲವು ಪುರಾಣಗಳಲ್ಲಿ ಇಂಗನ್ನು ನಿಷೇಧಿಸಲಾಗಿದೆ. ಮಹಾಭಾರತದ ವನಪರ್ವದ ನಲೋಪಾಖ್ಯಾನದಲ್ಲಿ ಮ್ಲೇಚ್ಛ ಜಾತಿಯ ಕಾಡುಜನರ ಕುರಿತು ಹೇಳುತ್ತಾ ಅಲ್ಲಿ ತಿಂದುಕ ಇಂಗುದ ಮುಂತಾದ ಮರಗಳಿದ್ದವು ಎಂದು ಹೇಳಲಾಗಿದೆ. ಇದು ಇಂಗುವಿನಂತೆಯೇ ಆಯುರ್ವೇದ ಔಷಧಗಳಿಗೆ ಸಂಬಂಧಿಸಿದ ಪುತ್ರಂಜೀವ Roxburghii ಅಥವಾ Terminalia Catappa ಎನ್ನುವ ಪ್ರಬೇಧದ್ದು. 


ಇನ್ನು ಭೀಷ್ಮಪರ್ವದ ೪೨ನೇ ಅಧ್ಯಾಯದಲ್ಲಿಯೂ ಅತ್ಯಂತ ಕೆಟ್ಟ ವಾಸನೆಯ ಇಂಗು ಎನ್ನುವುದಾಗಿ ಬರುತ್ತದೆ. ಭಾಗವತ ಪುರಾಣದ ೪ನೇ ಸ್ಕಂಧದಲ್ಲಿ ಇಂಗಿನ ವಿಷಯ ಬರುತ್ತದೆ. ಹರಿವಂಶದಲ್ಲಿಯೂ ಉಲ್ಲೇಖವಾಗಿದೆ. ಆದರೆ ಇಂಗು ನಿಷೇಧಿತವೆಂದು ಗುರುತಿಸಿಕೊಂಡರೂ ಈರುಳ್ಳಿ ಮತ್ತು ಬೆಳ್ಳುಳ್ಳಿಯಷ್ಟು ದೂಷಣೆಗೆ ಒಳಗಾಗಲಿಲ್ಲ. ಅತ್ರಿಸಂಹಿತೆಯಲ್ಲಿ ಇಂಗು, ಈರುಳ್ಳಿ, ಬೆಳ್ಳುಳ್ಳಿ ಅತಿ ಹೆಚ್ಚು ವರ್ಜ್ಯ ಎನ್ನಿಸಿಕೊಂಡಿದೆ. ಅದೇನೇ ಇರಲಿ, ಇವುಗಳ ಔಷಧೀಯ ಗುಣಗಳನ್ನು ಚರಕ ತನ್ನ ಸಂಹಿತೆಯಲ್ಲಿ ಆರುಸಲ ಪ್ರಸ್ತಾಪಿಸಿದರೆ ಸುಶ್ರುತ ೫೭ ಸಲ ಪ್ರಸ್ತಾಪಿಸಿದ್ದಾನೆ. ಅಲ್ಲದೇ ಹಲವು ಪುರಾತನ ಎಲ್ಲಾ ವೈದ್ಯರು ಗುರುತಿಸಿದ್ದರು. ಕಕ್ಕಾಯನ, ನಾರದ, ಆಂಗೀರಸ, ಕಪಿಲ ಮುಂತಾದ ಮಹರ್ಷಿಗಳು ಔಷಧೀಯ ವಸ್ತುವೆಂದೇ ಇದನ್ನು ಪರಿಗಣಿಸಿದ್ದರು.

ಇಂಗಿನ ಸಮಾನಾರ್ಥಕ ಪದವಾಗಿ ಸಹಸ್ರವೇದಿ,ಜತುಕ, ಬಲ್ಹೀಕ, ಹಿಙ್ಗು, ರಾಮಠ, ಬಾಹ್ಲೀಕ ಬಳಸಲಾಗಿದೆ. ಇನ್ನು ಅಮರದಲ್ಲಿ ಸಹಸ್ರವೇಧಿ ಜತುಕಂ ಬಾಲ್ಹೀಕಂ ಹಿಙ್ಗು ರಾಮಠಮ್ |

ತತ್ಪತ್ರೀ ಕಾರವೀ ಪೃಥ್ವೀ ಬಾಷ್ಪಿಕಾ ಕಬರೀ ಪೃಥುಃ|| ಎಂದು ಬಂದಿದೆ. ಪದಾರ್ಥ ವಿಭಾಗದಲ್ಲಿ ಇದು ಖಾದ್ಯದ ಸ್ಥಾನ ಪಡೆದು ಪ್ರಾಕೃತಿಕ ಖಾದ್ಯವೆನ್ನಿಸಿಕೊಂಡಿದೆ. ರಾಮಠದೇಶದಿಂದ ಬಂದಂತಹ ಸಸ್ಯ ಇದು ಎಂದು ವಾಚಸ್ಪತ್ಯದಲ್ಲಿ ಹೇಳಿದೆ. ಹಾಗಾದರೆ ರಾಮಠ ದೇಶವೆಂದರೆ ಯಾವುದು ? ಗೊತ್ತಿಲ್ಲ. 


#ಆಯುರ್ವೇದದಲ್ಲಿ : ಚರಕ ಸಂಹಿತೆಯ ಸೂತ್ರಸ್ಥಾನ ೨೫ರಲ್ಲಿ "ಹಿಂಗು ನಿರ್ಯಾಸಃ ಛೇದನೀಯ ದೀಪನೀಯ ಅನುಲೋಮಿಕ ವಾತ ಕಫ ಪ್ರಶಮನಾನಾಂ" ಎನ್ನುತ್ತದೆ. "ಹಿಂಗೂಷ್ಣಂ ಪಾಚನಂ ರುಚ್ಯಂ ತೀಕ್ಷ್ಣಂ ವಾತ ಬಲಾಸನುತ್ ಶೂಲ ಗುಲ್ಮ ಉದರ ಆನಾಹ ಕೃಮಿಘ್ನಂ ಪಿತ್ಥ ವರ್ಧನಂ" ಎಂದು ದೇಹದಲ್ಲಿನ ಚಯಾಪಚಯ, ಜೀರ್ಣ ಕ್ರಿಯೆಗೆ ಸಹಾಯಕ ಎಂದು ಭಾವಪ್ರಕಾಶ ನಿಘಂಟಿನಲ್ಲಿ ವಿವರಿಸಿದೆ. ಇನ್ನು "ಹೃದ್ಯಂ ಹಿಂಗೂ ಕಟೂಷ್ಣಂ ಚ ಕೃಮಿ ವಾತ ಕಫ ವಿಬಂಧ ಆಧ್ಮಾನ ಶೂಲ ಗುಲ್ಮ ನಾಶಿತ್ವಂ ಚಕ್ಷುಷ್ಯಂ" ಇಂಗು ಸುವಾಸನೆ ಭರಿತವಾಗಿದ್ದು, ವಾತ, ಕಫ, ಹೊಟ್ಟೆನೋವು ಮುಂತಾದವಕ್ಕೆ ಔಷದವಾಗಿದೆ ಎನ್ನುವುದಾಗಿ ರಾಜ ನಿಘಂಟುವಿನಲ್ಲಿ ಹೇಳಿದೆ. ’ಹಿಙ್ಗೂಷ್ಣಂ ಪಾಚನಂ ರುಚ್ಯಂ ತೀಕ್ಷ್ಣಂ ವಾತವಲಾಸಹೃತ್| ರಸೇ ಪಾಕೇ ಚ ಕಟುಕಂ ಸ್ನಿಗ್ಧಞ್ಚ ವಹ್ನಿದೀಪನಮ್ | ಶೂಲಗುಲ್ಮೋದರಾನಾಹಕೃಮಿಘ್ನಂ ಪಿತ್ತವರ್ದ್ಧನಮ್ ||’ ಎಂದು ಭಾವಪ್ರಕಾಶದಲ್ಲಿ ಹೇಳಲಾಗಿದೆ. ಅಂದರೆ ಔಷಧೀಯವಾಗಿ ಸಾಮಾನ್ಯವಾಗಿ ಹೆಚ್ಚಿನ ಕಡೆ ಇದನ್ನು ಬಳಸಿದ್ದು ಕಂಡು ಬರುತ್ತದೆ. 


ಹಿಂಗು ವಾತಕಫಾನಾಹ ಶೂಲಘ್ನಂ ಪಿತ್ಥ ಕೋಪನಂ || ಕಟುಪಾಕರಸಂ ರುಚ್ಯಂ ದೀಪನಂ ಪಾಚನಂ ಲಘು - ಅಷ್ಟಾಂಗ ಹೃದಯ ಸೂತ್ರಸ್ಥಾನ ೬ನೇ ಅಧ್ಯಾಯದ ೧೫೨ರಲ್ಲಿ ಬರುತ್ತದೆ. 

ಚರಕ ಸಂಹಿತೆಯ ಸೂತ್ರಸ್ಥಾನ ೨೭ರಲ್ಲಿ "ವಾತ ಶ್ಲೇಷ್ಮ ವಿಬಂಧಘ್ನಂ ಕಟೂಷ್ಣಂ ದೀಪನಂ ಲಘು |

ಹಿಂಗು ಶೂಲಪ್ರಶಮನಂ ವಿದ್ಯಾತ್ ಪಾಚನರೋಚನಮ್ || ೨೯೯|| ಎಂದು ವಿವರಿಸಲ್ಪಟ್ಟಿದೆ. ಇಲ್ಲೆಲ್ಲ ಹೇಳುವುದು ಮುಖ್ಯವಾಗಿ ದೇಹದಲ್ಲಿನ ಜೀರ್ಣವ್ಯವಸ್ಥೆ ಸರಿಯಾಗುವಂತೆ, ಮತ್ತು ವಾತ ಕಫ ಪಿತ್ತವೇ ಮೊದಲಾದ ರೋಗಗಳು ನಿವಾರಣೆಯಾಗುತ್ತವೆ ಎಂದು.


ಮಹಾಭಾರತದ ಅನುಶಾಸನಪರ್ವ ೯೧ನೇ ಅಧ್ಯಾಯದಲ್ಲಿ ಒಂದು ಸನ್ನಿವೇಶ ಹೀಗಿದೆ. ನಿಮಿಯೇ, ಇವರೆಲ್ಲರೂ ವಿಶ್ವೇದೇವತೆಗಳು. ಹೀಗೆ ನಿನಗೆ ಸನಾತನರಾದ ವಿಶ್ವೇದೇವತೆಗಳ ಹೆಸರುಗಳನ್ನು ಹೇಳಿದ್ದೇನೆ. ಮಹಾ ಭಾಗ್ಯಶಾಲಿಗಳಾದ ಇವರೆಲ್ಲರೂ ಕಾಲದ ಗತಿಯನ್ನು ತಿಳಿದವರಾಗಿದ್ದಾರೆ. ಈಗ ನಾನು ನಿನಗೆ ಶ್ರಾದ್ಧದಲ್ಲಿ ನಿಷಿದ್ಧವಾದ ವಸ್ತುಗಳನ್ನು ಹೇಳುತ್ತೇನೆ. ಎನ್ನುವ ಮಾತು ಬರುತ್ತದೆ ಅಲ್ಲಿ . . .  

ಹಿಂಗುದ್ರವ್ಯೇಷು ಶಾಕೇಷು ಪಲಾಣ್ಡುಂ ಲಸುನಂ ತಥಾ |

ಸೌಭಾಞ್ಜನಃ ಕೋವಿದಾರಸ್ತಥಾ ಗೃಞ್ಜನಕಾದಯಃ || ೩೯ || 

ಪಿತೃಕಾರ್ಯದ ದಿನ ಮತ್ತು ಶ್ರಾದ್ಧದಲ್ಲಿ ಒಗ್ಗರಣೆಹಾಕುವ ಪದಾರ್ಥಗಳಲ್ಲಿ ಹಿಂಗನ್ನು ಉಪಯೋಗಿಸಬಾರದು. ತರಕಾರಿಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ನುಗ್ಗೇಕಾಯಿ, ಕೆಂಚನಾಳದ ಕಾಯಿ, ಗಜ್ಜರಿ ಅಥವಾ ಗಾಜಿನ ಗೆಡ್ಡೆ ಮುಂತಾದವನ್ನು ಉಪಯೋಗಿಸಬಾರದು.

ಬೂದುಗುಂಬಳ, ಸೋರೇ ಮುಂತಾದುವು, ಕಪ್ಪುಬಣ್ಣದ ಉಪ್ಪು, ಅಪ್ರೋಕ್ಷಿತವಾದ (ಸಂಸ್ಕಾರಹೀನವಾದ ಅಂದರೆ ತೊಳೆಯದೇ ಇರುವ) ಪದಾರ್ಥಗಳು, ಕಪ್ಪುಜೀರಿಗೆ, ನಿಂಬುಪ್ಪು, ಶೀತಪಾಕೀ ಎಂಬ ತರಕಾರಿ, ಮೊಳಕೆಬಂದಿರುವ ಧಾನ್ಯಗಳು, ಶೃಂಗಾಟಕವೇ ಮೊದಲಾದ ಬಳ್ಳಿಗಳು ಇವುಗಳನ್ನು ಶ್ರಾದ್ಧದಲ್ಲಿ ಉಪಯೋಗಿಸಬಾರದು. ಹೀಗೇ ಅಲ್ಲಿ ಅನೇಕ ಪದಾರ್ಥಗಳನ್ನು ಹೇಳಲಾಗುತ್ತದೆ.


#ಘಮ_ಘಮ_ಇಂಗು

ಕೃಪೆ: ಸದ್ಯೋಜಾತರದ್ದು

February 23, 2021

ಚಿಂತಿಸಿ.. ಏಕೆಂದರೆ ಚಿಂತಕರು ನೀವು..

ಜಗತ್ತಿನ ಅತಿ ಶ್ರೀಮಂತರಾಷ್ಟ್ರ ಅಮೇರಿಕಾ ಗೋಮೂತ್ರದ ಪೇಟೆಂಟ್ ಏಕೆ ಪಡೆದುಕೊಂಡಿದೆ..?,


ಅಮೇರಿಕಾ ಗೋಮೂತ್ರ ದಿಂದ ಅನೇಕ ಕ್ಯಾನ್ಸರ್ ನಿಯಂತ್ರಕ ಔಷಧಿಗಳನ್ನು ತಯಾರಿಸುತ್ತಿದೆ..


(ಆದರೆ ಭಾರತೀಯರಾದ ನಾವು ಗೋವಿನ ಬಗ್ಗೆ , ಗೋಸಂರಕ್ಷಣೆಯ ಬಗ್ಗೆ ಮಾತನಾಡಿದರೆ ಕೋಮುವಾದ..!)


▶ಅಮೇರಿಕಾದ ನ್ಯೂಜೆರ್ಸಿಯಲ್ಲಿರುವ ಸೇಟನ್ ವಿಶ್ವವಿದ್ಯಾಲಯದಲ್ಲಿ ಭಗವದ್ಗೀತೆಯನ್ನು ವಿದ್ಯಾರ್ಥಿಗಳು ಓದಲೇಬೇಕಿದೆ..


(ನಮ್ಮಲ್ಲಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡಹೊರಟರೆ ಬುದ್ಧಿಜೀವಿಗಳು ಊಳಿಡುತ್ತವೆ..ಭಗವದ್ಗೀತೆಯನ್ನೇ ಸುಡಲು ಮುಂದಾಗುತ್ತವೆ.)


▶ ಮುಸ್ಲಿಂ ಪ್ರಾಬಲ್ಯವಿರುವ ಇಂಡೊನೇಷಿಯಾ ದೇಶ ತನ್ನ ವಾಯುಯಾನಸಂಸ್ಥೆಗೆ 

"ಗರುಡ ಇಂಡೋನೇಷಿಯಾ ಐರ್ಲೈನ್ಸ್" 

ಎಂಬ ಹೆಸರಟ್ಟಿದೆ..

ಇಂಡೋನೇಷಿಯಾದ ರಾಷ್ಟೀಯ ಸಂಕೇತ -Garuda Pancasila..

ವಿಷ್ಣುವಿನ ವಾಹನ ಗರುಡಕ್ಕೂ ಇಂಡೋನೇಷಿಯಾಕ್ಕೂ ಹತ್ತಿರದಸಂಬಂಧವಿದೆ..


(ನಾವಿಲ್ಲಿ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟ ಸಂಘ-ಸಂಸ್ಥೆಗಳಿಗೆಹಿಂದೂ ಹೆಸರನ್ನಿಡಲುಪ್ರತಿಭಟನೆ ಮಾಡಬೇಕಿದೆ.)


▶ ಇಂಡೋನೇಷಿಯಾ ತನ್ನ ಅತಿಮೌಲ್ಯದ (೨೦೦೦೦) ನೋಟಿನ ಮೇಲೆ ಗಣೇಶನ ಚಿತ್ರವನ್ನುಪ್ರಿಂಟ್ ಮಾಡುತ್ತದೆ...


(ನಮ್ಮ ದೇಶದ ಯಾವ ನೋಟಿನ ಮೇಲೆ ಹಿಂದೂದೇವರ ಚಿತ್ರವಿದೆ..?)


▶ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಯಾವಾಗಲೂ ಆಂಜನೇಯನ ಗುಣಗಾನವನ್ನು ಮಾಡುತ್ತಾರೆ.


(ನಮ್ಮ ರಾಜಕಾರಣಿಗಳು ಜಾತ್ಯತೀತತೆಯ ಸೋಗಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.)


▶ ಇಡೀ ಪ್ರಪಂಚವೇಕೆ ಯೋಗ , ಪ್ರಾಣಾಯಾಮಗಳನ್ನುಕಲಿಯಲು ಹಾತೊರೆಯುತ್ತಿದೆ..?


(ನಮ್ಮ ಶಾಲೆಗಳ ಪಠ್ಯದಲ್ಲಿ ಯೋಗ , ಪ್ರಾಣಾಯಾಮ ಸೇರಿಸುವಂತಿಲ್ಲ..ಕೋಮುವಾದ...!!)


▶ ಜರ್ಮನಿಯ ಐರ್ಲೈನ್ಸ್ ಹೆಸರೇಕೆ 

"ಲುಪ್ತಹಂಸ"..?

ಇದು ಕೋಮುವಾದಿ ಭಾಷೆಸಂಸ್ಕೃತಪದ..

ಲುಪ್ತ ಅಂದರೆ ಮರೆ ..

ಅಂದರೆ ಮರೆಯಾಗುವ ಹಂಸ..


(ಹಾಗಾದರೆ ಸಂಸ್ಕೃತಭಾಷೆಯನ್ನು ಅತಿಯಾಗಿ ಪ್ರೀತಿಸುವ ಜರ್ಮನ್ನರೂ ಕೋಮುವಾದಿಗಳು...!!)


▶ ಅಪ್ಘಾನಿಸ್ತಾನದ ಒಂದು ಪರ್ವತದ ಹೆಸರೇಕೆ "ಹಿಂದುಕುಶ್"..?


▶ ಹಿಂದಿ, ಹಿಂದುಸ್ತಾನ್, ಹಿಂದೂ ಮಹಾಸಾಗರ ಹೆಸರುಗಳೇಕಿವೆ..?


(ಇದನ್ನೆಲ್ಲಾ ಬದಲಾಯಿಸುವ ಪ್ರಸ್ತಾಪ ನಿಮ್ಮಿಂದ ಬರಬಹುದು ಬಿಡಿ..!!)


▶ ವಿಯೆಟ್ನಾಂದಲ್ಲಿ ೪೦೦೦ ವರ್ಷಗಳಿಗಿಂತಲೂ ಹಿಂದಿನದಾದ ವಿಷ್ಣುವಿನ ಮಂದಿರವೇಕಿದೆ..?


▶ ಅಮೇರಿಕಾದ ಖ್ಯಾತ ವಿಜ್ಞಾನಿ ಡಾ. ಹೊವಾರ್ಡ್ , ಗಾಯತ್ರಿ ಮಂತ್ರ ಒಂದು ಕ್ಷಣಕ್ಕೆ೧೧೦೦೦೦ ಧ್ವನಿ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ..ಇದು ಅತ್ಯಂತ ಶಕ್ತಿಶಾಲಿ ಮಂತ್ರಎಂದು ಕಂಡುಹಿಡಿದಿದ್ದೇಕೆ..?


(ಡಾ.ಹೋವಾರ್ಡ್ ದೊಡ್ಡ ಕೋಮುವಾದಿ..!!)


▶ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶ ಎಂಬ ಗ್ರಂಥವನ್ನು ಓದಿದ ಉತ್ತರಪ್ರದೇಶದಬರ್ವಾಲ ಮಸೀದಿಯ ಇಮಾಮನೊಬ್ಬ ಮಹೇಂದ್ರ ಪಾಲ್ ಆರ್ಯ ಆಗಿದ್ದೇಕೆ..?


▶ ಹೋಮವೆಂಬುದು ಮೂಢನಂಬಿಕೆಯಾಗಿದ್ದರೆ , ಮನೆಯಲ್ಲಿ ಹೋಮವನ್ನು ಮಾಡುತ್ತಿದ್ದಖುಷ್ವಾಹ್ ಕುಟುಂಬ , ಭೋಪಾಲ್ ಅಗ್ನಿದುರಂತದಿಂದ ಬಚಾವಾಗಿದ್ದು ಹೇಗೆ..?


▶ ತುಪ್ಪ ಹಾಗೂ ಗೋಮಯವನ್ನು ಸುಡುವುದರಿಂದ ಗಾಳಿಯಲ್ಲಿರುವ ಮಾಲಿನ್ಯ ದೂರಾಗಿಆಕ್ಸೀಜನ್ ಹೆಚ್ಚಾಗುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ಧೃಡಪಟ್ಟಿದ್ದು ಹೇಗೆ..?


▶ ಅಮೇರಿಕಾದ ಪ್ರಸಿದ್ಧ ಚಿತ್ರನಟಿ ಜೂಲಿಯಾ ರಾಬರ್ಟ್ಸ್ ಹಿಂದೂಧರ್ಮವನ್ನು ಸ್ವೀಕರಿಸಿಪ್ರತಿನಿತ್ಯ ಮಂದಿರಕ್ಕೆ ಹೋಗುವುದೇಕೆ..?

ಇವಳಂತಹ ಅದೆಷ್ಟೋ ಜನರು ಪ್ರತಿನಿತ್ಯ ಸನಾತನಸಂಸ್ಕೃತಿಯತ್ತ ಬರುತ್ತಿರುವುದೇಕೆ..?


▶ ರಾಮಾಯಣ ಸುಳ್ಳಾದರೆ ರಾಮಸೇತುವೆಯೇಕೆ..?


▶ ಕೃಷ್ಣ ಸುಳ್ಳಾದರೆ 

ಸಮುದ್ರದೊಳಗಿನ ಮಥುರೆಯೇಕೆ..?


▶ ಮಹಾಭಾರತ ಸುಳ್ಳಾದರೆ , ನ್ಯಾಶನಲ್ ಜಿಯೋಗ್ರಾಫಿಕ್ ಹಾಗೂ ಭಾರತೀಯ ಸೇನೆಯ ಜಂಟಿಕಾರ್ಯಾಚರಣೆಯಲ್ಲಿ ಭಾರತದ ಉತ್ತರದಲ್ಲಿ ಸಿಕ್ಕ ೮೦ ಅಡಿ ಉದ್ದದ ಅಸ್ಥಿಪಂಜರಘಟೋತ್ಕಚನದೇ ಎಂದು ಸಾಬೀತಾಗಿರುವುದೇಕೆ..?


▶ ಅಮೇರಿಕಾದ ವಾಯುಸೇನೆ ಅಪ್ಘಾನಿಸ್ತಾನದ ಕಂದಹಾರದಲ್ಲಿ , ಸುಮಾರು ೫೦೦೦ವರ್ಷಕ್ಕಿಂತಲೂ ಹಳೆಯದಾದ ಮಹಾಭಾರತದ ಕಾಲದಲ್ಲಿದ್ದ ವಿಮಾನವನ್ನು ಹೇಗೆಗುರುತಿಸಿತು..?


▶ ದೆಹಲಿಯಲ್ಲಿ ಇಂದ್ರಪ್ರಸ್ಥ ಹೇಗೆ ರೂಪುಗೊಂಡಿತು..?


ಇನ್ನೂ ಅದೆಷ್ಟೋ ವಿಷಯಗಳಿವೆ..

ಸದ್ಯಕ್ಕೆ ಸಾಕು..

ಚಿಂತಿಸಿ..

ಏಕೆಂದರೆ ಚಿಂತಕರು ನೀವು..!!! 

(ಸಂಗ್ರಹ-ಚನ್ನೇಶಶಾಸ್ರ್ತಿಗಳು)

ಆಲೋಚಿಸಿ ತೀರ್ಮಾನಿಸಿ

 *🌻ದಿನಕ್ಕೊಂದು ಕಥೆ🌻*

*ಆಲೋಚಿಸಿ ತೀರ್ಮಾನಿಸಿ ಅಪಾರ ಲಾಭ ಕಟ್ಟಿಟ್ಟಬುತ್ತಿ…*


ಸಂನ್ಯಾಸಿಯೊಬ್ಬ ಏಕಾಂಗಿಯಾಗಿ ಧ್ಯಾನಮಾಡಬೇಕೆಂದು ತನ್ನ ಆಶ್ರಮದಿಂದ ದೂರಹೋಗಲು ನಿರ್ಧರಿಸುತ್ತಾನೆ. ಏಕೆಂದರೆ ಆತ ಬಹುಕೋಪಿಷ್ಟ. ಆಶ್ರಮದಲ್ಲಿ ಆತನ ಧ್ಯಾನಕ್ಕೆ ತೊಂದರೆಯಾಗುತ್ತಿರುತ್ತದೆ. ಯಾರಾದರೂ ಬರುವುದು, ಈತ ಅವರ ಮೇಲೆ ಕೋಪಗೊಳ್ಳುವುದು ನಡೆಯುತ್ತಲೇ ಇರುತ್ತದೆ. ದೋಣಿಯನ್ನೇರಿ ಕೆರೆಯ ನಡುವೆ ನಿಲ್ಲಿಸಿ ಕಣ್ಣುಮುಚ್ಚಿ ಧ್ಯಾನಕ್ಕೆ ತೊಡಗುತ್ತಾನೆ. ಕೆಲವು ಗಂಟೆಗಳು ನಿಶ್ಶಬ್ದವಾಗಿ ಸರಿದುಹೋಗುತ್ತವೆ. ಇದ್ದಕ್ಕಿದ್ದಂತೆ ಇನ್ನೊಂದು ದೋಣಿ ಬಂದು ಸಂನ್ಯಾಸಿಯ ದೋಣಿಗೆ ಡಿಕ್ಕಿಹೊಡೆದ ಅನುಭವವಾಗುತ್ತದೆ. ಕಣ್ಣುಮುಚ್ಚಿದ್ದ ಸಂನ್ಯಾಸಿಗೆ ತನ್ನ ಕೋಪ ಹೆಚ್ಚಾಗುತ್ತಿರುವ ಅನುಭವವಾಗುತ್ತದೆ. ಏಕಾಗ್ರತೆಗೆ ಭಂಗತಂದ ದೋಣಿಯಾತನನ್ನು ಚೆನ್ನಾಗಿ ಬೈದುಬಿಡಬೇಕು ಎಂದುಕೊಳ್ಳುತ್ತ ಸಿಟ್ಟಿನಿಂದ ಕಣ್ಣುಬಿಡುತ್ತಾನೆ. ಆದರೆ, ಎದುರಿನ ದೋಣಿ ಖಾಲಿ ಇರುತ್ತದೆ. ನಾವಿಕನಿಲ್ಲದ ಆ ದೋಣಿ ಹಗ್ಗ ಬಿಚ್ಚಿಹೋಗಿ ತಾನಾಗಿಯೇ ತೇಲುತ್ತ ತೇಲುತ್ತ ಬಂದು ಈ ದೋಣಿಗೆ ಡಿಕ್ಕಿ ಹೊಡೆಯಿತು.


ಆ ಸಂನ್ಯಾಸಿಗೆ ಜ್ಞಾನೋದಯವಾಗುತ್ತದೆ. ‘ಕೋಪವೆಂಬುದು ತನ್ನೊಳಗೇ ಇದೆಯೇ ಹೊರತು ಹೊರಗಡೆಯಿಂದ ಬರುವುದಲ್ಲ; ಹೊರಗಡೆಯ ವಸ್ತುವೊಂದು ತಾಕುವುದರಿಂದ ತನ್ನೊಳಗಿರುವ ಕೋಪ ಜಾಗೃತಗೊಳ್ಳುತ್ತದೆ’ ಎಂಬ ಸತ್ಯವನ್ನು ಆತ ಅರಿತುಕೊಳ್ಳುತ್ತಾನೆ. ಆಗಿನಿಂದ ಆತ ಯಾರಾದರೂ ಕಿರಿಕಿರಿಯಾಗುವಂತೆ ವರ್ತಿಸಿದರೆ, ಕೋಪ ಬರುವಂತೆ ನಡೆದುಕೊಂಡರೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದ- ‘ಅವರೊಂದು ಖಾಲಿ ದೋಣಿಯಂಥವರು, ಕೋಪ ನನ್ನೊಳಗೇ ಇದೆ’ ಅಂತ.


ಇದು ಆ ಸಂನ್ಯಾಸಿಯ ಸಮಸ್ಯೆ ಮಾತ್ರವಲ್ಲ, ನಮ್ಮೆಲ್ಲರ ಸಮಸ್ಯೆ. ನಾವು ತಲ್ಲಣಗೊಳ್ಳುವುದು ಯಾವಾಗ? ಮನಸ್ಸಿಗೆ ಕಿರಿಕಿರಿಯಾದಾಗ. ಆದರೆ ಕಿರಿಕಿರಿ ಮಾಡಿಕೊಳ್ಳುವುದರಿಂದ, ಹತಾಶರಾಗಿ ತಲೆಮೇಲೆ ಕೈಹೊತ್ತು ಕೂರುವುದರಿಂದ ಸಮಸ್ಯೆಯ ಬೆಟ್ಟ ಒಂದಿಂಚೂ ಕರಗುವುದಿಲ್ಲ. ನಾವು ಬಯಸಲಿ ಬಿಡಲಿ ಕೆಲವು ಘಟನೆಗಳು ತಮ್ಮಷ್ಟಕ್ಕೆ ತಾವೇ ನಡೆಯುತ್ತಿರುತ್ತವೆ. ನಮ್ಮ ಕೈಮೀರಿದ ಘಟನೆಗಳು ನಡೆದಾಗ ಅವನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದನ್ನಾಧರಿಸಿ ಅದರ ಪರಿಣಾಮದ ತೀವ್ರತೆ ಮತ್ತು ನಮ್ಮ ವ್ಯಕ್ತಿತ್ವ ನಿರ್ಧರಿಸಲ್ಪಡುತ್ತವೆ.


ದಿನನಿತ್ಯದ ಬದುಕಿನಲ್ಲಿ ನಿಮಗೆ ಕೋಪ ಬರಿಸುವ ಸಂಗತಿಗಳು ಯಾವುವು ಎಂದು ಪಟ್ಟಿಮಾಡಿ ನೋಡಿ; ಅವು ನಮ್ಮ ಬಗ್ಗೆ ನಮಗೇ ನಾಚಿಕೆಯಾಗುವಷ್ಟು ಜುಜುಬಿ ಎನ್ನುವಂತಹ ಸಂಗತಿಗಳಾಗಿರುತ್ತವೆ. ಪಲ್ಯಕ್ಕೆ ಕಡಿಮೆಯಾದ ಉಪ್ಪು, ತುಸುವೇ ತಳಹತ್ತಿದ ಅನ್ನ, ಹೊರಡುವ ಸಮಯಕ್ಕೆ ಕೈಗೆ ಸಿಗದ ಕಾಲುಚೀಲ, ಮಕ್ಕಳು ಮಾಡಿದ ತುಂಟತನ, ಕಡಿಮೆ ರನ್​ಗೆ ಔಟಾದ ಕೊಹ್ಲಿ, ಕೊಂಚ ತಡವಾಗಿದ್ದಕ್ಕೆ ಸಿಕ್ಕ ಬಾಸ್ ಬೈಗುಳ, ಸಹೋದ್ಯೋಗಿಗೆ ಸಿಕ್ಕ ಹೊಗಳಿಕೆ, ಸೈಡ್ ಕೊಡದ ವಾಹನದ ಡ್ರೈವರ್… ಓಹ್ ಒಂದೇ ಎರಡೇ… ಎಲ್ಲ ಈ ತರಹದ ಸಂಗತಿಗಳೇ. ಇಂಥ ಚಿಕ್ಕಚಿಕ್ಕ ಸಂಗತಿಯೂ ಸಮಸ್ಯೆ ಉಂಟುಮಾಡಲು ಕಾರಣವೇನೆಂದರೆ ನಾವು ತಕ್ಷಣ ಪ್ರತಿಕ್ರಿಯಿಸುತ್ತೇವೆ. ಅಂದರೆ ‘ರಿಯಾಕ್ಟ್’ ಮಾಡುತ್ತೇವೆ.


ಜನರು ನಮ್ಮನ್ನು ಟೀಕಿಸುವುದನ್ನು ತಡೆಯಲು ಸಾಧ್ಯವೇ? ನೀವು ಏನೂ ಸಾಧನೆ ಮಾಡದಿದ್ದರೆ ‘ದಂಡಪಿಂಡ’ ಎನ್ನುತ್ತಾರೆ. ಏನಾದರೂ ಮಾಡಿದರೆ ‘ಅಯ್ಯೋ ಇದೇನು ಮಹಾ, ಮನಸ್ಸು ಮಾಡಿದರೆ ಇವರಪ್ಪನಂತಹ ಸಾಧನೆ ಮಾಡುತ್ತಿದ್ದೆ’ ಎನ್ನುತ್ತಾರೆ! ಬದುಕೂ ಆಟದ ಹಾಗೆ. ನಾವು ಬಯಸಿದ್ದೇ ಆಗಿಬಿಡುವುದಿಲ್ಲ. ಒಂದು ಒಳ್ಳೆಯ ಇನ್​ಸ್ವಿಂಗ್ ಬಾಲ್ ಬರಲಿ ಎಂದು ಬ್ಯಾಟ್ಸ್​ಮನ್ ಆಶಿಸುತ್ತಿರುತ್ತಾನೆ. ಬೌಲರ್ ಕೂಡ ಅದನ್ನೇ ಹಾಕುತ್ತಾನೆ. ಆದರೆ ಆ ಕ್ಷಣ ಬೀಸಿದ ಗಾಳಿ, ಚೆಂಡಿನ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಸಿಕ್ಸರ್ ಹೊಡೆಯುವ ಕನಸಿನಲ್ಲಿದ್ದ ಬ್ಯಾಟ್ಸ್​ಮನ್ ಔಟ್ ಆಗಿಬಿಡುತ್ತಾನೆ! ಬ್ಯಾಟ್ಸ್​ಮನ್ ಬಯಸಿದ್ದು ಇನ್​ಸ್ವಿಂಗ್, ಬೌಲರ್ ಹಾಕಿದ್ದೂ ಅದೇ. ಬ್ಯಾಟ್ಸ್​ಮನ್ ಅದನ್ನು ನೋಡಿದ್ದಾನೆ ಕೂಡ! ಆದರೆ 22 ಗಜ ಅಳತೆಯ ಪಿಚ್ ದಾಟಿ ಚೆಂಡು ಬರಬೇಕಾದರೆ ಬೀಸಿದ ಗಾಳಿ ಎಲ್ಲ ಲೆಕ್ಕಾಚಾರಗಳನ್ನೂ ತಲೆಕೆಳಗೆ ಮಾಡಿಬಿಟ್ಟಿತು, ಥೇಟ್ ನಮ್ಮ ಜೀವನದಂತೆ!


ಆದರೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳುವುದರಿಂದ ಅನೇಕ ಅವಕಾಶಗಳು ಲಭ್ಯವಾಗುತ್ತವೆ. ಒಮ್ಮೆ ನಾಲ್ಕೈದು ಜಪಾನಿಯರು ಹಸುಗಳನ್ನು ಖರೀದಿಸಲೆಂದು ಅಮೆರಿಕದ ಫಾಮರ್್​ಹೌಸ್ ಒಂದಕ್ಕೆ ಹೋದರು. ಮಾರಾಟಗಾರ ಅವರಿಗೆ ಹೇಳಿದ, ‘ನೀವು ಹಸುಗಳನ್ನು ಆಯ್ಕೆಮಾಡಿದರೆ ಒಂದು ಹಸುವಿಗೆ ನೂರು ಡಾಲರ್, ನಾನೇ ಆಯ್ಕೆಮಾಡಿದರೆ ಶೇ. 50 ಕಡಿತ!’. ನಾನೋ ನೀವೋ ಏನು ಮಾಡುತ್ತಿದ್ದಿವಿ? ‘ಅವನು ಹಾಲುಕೊಡದ ಹಸು ಕೊಡ್ತಾನೆ ಬಿಡಪ್ಪ’ ಎಂದು ಕೆಲವರು ನೂರು ಡಾಲರ್​ಗೆ ಒಂದರಂತೆ ಹಸುಗಳನ್ನು ಖರೀದಿಸಿದರೆ, ಮತ್ತೆ ಕೆಲವರು ‘ಅಯ್ಯೋ 4 ಲೀಟರ್ ಕಡಿಮೆ ಹಾಲು ಕೊಡಬಹುದು, ಆದರೆ ಅರ್ಧಕ್ಕರ್ಧ ದುಡ್ಡು ಉಳಿಯಿತಲ್ಲ’ ಎಂದು ಐವತ್ತು ಡಾಲರ್ ಆಫರ್ ಒಪ್ಪಿಕೊಳ್ಳುತ್ತಿದ್ದೆವೇನೋ. ಆ ಜಪಾನಿಯರು ಏನು ಮಾಡಿರಬಹುದು? ಯೋಚಿಸಿ ಹೇಳಲೆಂದು ಅವರು ಒಂದು ಗಂಟೆಯ ಸಮಯ ಕೇಳಿದರು. ಒಂದು ಗಂಟೆಯ ನಂತರ ಕೋಣೆಯಿಂದ ಹೊರಬಂದಾಗ ಅಮೆರಿಕನ್ ಕೇಳಿದ, ‘ತೀರ್ವನ ಮಾಡಿದಿರಾ?’. ‘ಹೌದು’ ಇವರೆಂದರು. ‘ಏನು ತೀರ್ವನ? ನಾನು ಆಯ್ಕೆ ಮಾಡುವುದೋ ನೀವೇ ಆರಿಸುತ್ತೀರೋ?’. ಅವರೆಂದರು, ‘ನೀವೇ ಆರಿಸಿ, ನಾವು ಐವತ್ತು ಡಾಲರ್ ಆಫರ್​ಗೇ ಹೋಗುತ್ತೇವೆ’. ಅಮೆರಿಕನ್ ವಿಜಯೋತ್ಸಾಹದಲ್ಲಿ ಬೀಗಿದ- ‘ಅಂದಹಾಗೆ ನಿಮಗೆ ಎಷ್ಟು ಹಸುಗಳನ್ನು ಆರಿಸಲಿ’?. ಜಪಾನೀಯರಲ್ಲಿ ಒಬ್ಬ ಟೈ ಸರಿಮಾಡಿಕೊಳ್ಳುತ್ತ ತಣ್ಣಗೆ ಹೇಳಿದ, ‘ಎಲ್ಲವನ್ನೂ ಆಯ್ಕೆ ಮಾಡಿ!’. ಎಂತಹ ಅದ್ಭುತ ನಿರ್ಧಾರ ಅಲ್ಲವೇ? ಇದನ್ನೇ ಯೋಚಿಸಿ ತೀರ್ವನಕ್ಕೆ ಬರುವುದು ಎನ್ನುತ್ತಾರೆ.


ಕ್ರಿಕೆಟ್​ನಲ್ಲಿ ಸ್ಲೆಡ್ಜಿಂಗ್ ಎಂಬುದಿದೆ. ಅಂದರೆ ಕೆಟ್ಟಶಬ್ದಗಳನ್ನು ಉಪಯೋಗಿಸಿ ಎದುರಾಳಿ ಬ್ಯಾಟ್ಸ್​ಮನ್​ಗೆ ಬೈಯುವುದು. ಆತನ ಏಕಾಗ್ರತೆ ಭಂಗವಾಗಿ ಔಟ್ ಆಗಲಿ ಎಂಬುದು ಉದ್ದೇಶ! ಬದುಕಿನಲ್ಲೂ ಹೀಗಾಗುತ್ತದೆ. ಏನು ಮಾಡುವುದು? ಸಚಿನ್ ತೆಂಡುಲ್ಕರ್ ಜೀವನ ಇದಕ್ಕೆ ಉತ್ತರವಾಗಬಲ್ಲದು. ಸಚಿನ್ ವಿಶ್ವಖ್ಯಾತಿಯ ದಾಂಡಿಗನಾಗಲು, ‘ಡೆಮಿಗಾಡ್’ ಎನಿಸಿಕೊಳ್ಳಲು ಕಾರಣವಾದ ಹಲವು ಸಂಗತಿಗಳಲ್ಲೊಂದು ಕೂಲ್ ಆಗಿರುವುದು! ಯಾರು ಏನೇ ಹೇಳಲಿ ತಲೆಕೆಡಿಸಿಕೊಳ್ಳದೆ ಏಕಾಗ್ರತೆಯನ್ನು ಕಳೆದುಕೊಳ್ಳದಿರುವುದು.


ಆದರೆ ನಾವು ಸುಮ್ಮನಿರುತ್ತೇವೆಯೇ? ಇಲ್ಲ, ಬದಲು ಕೂಗಾಡುತ್ತೇವೆ. ಹಾಗಂತ ಯಾರು ಏನು ಹೇಳಿದರೂ ಸುಮ್ಮನೆ ಇರಬೇಕೆಂದಲ್ಲ. ತತ್​ಕ್ಷಣಕ್ಕೆ ಪ್ರತಿಕ್ರಿಯಿಸಿ ಪರಿಸ್ಥಿತಿಯನ್ನು ಬಿಗಡಾಯಿಸುವುದರ ಬದಲು ಯೋಚಿಸಿ ಪ್ರತಿಕ್ರಿಯಿಸಬಹುದು. ಅದನ್ನು ‘ರೆಸ್ಪಾಂಡಿಂಗ್’ ಎನ್ನುತ್ತೇವೆ.


ಬೆಳಗ್ಗೆ ಕಚೇರಿಗೆ ಹೋಗಲು ತಯಾರಾಗಿರುತ್ತೀರಿ. ಹೊರಡುವಾಗ ನೀರು ತಂದುಕೊಡಲು ಹೇಳುತ್ತೀರಿ. ನಿಮ್ಮ ಹತ್ತಿರ ಬರುವಾಗ ನೀರು ತರುತ್ತಿರುವವರ ಕಾಲು ಮ್ಯಾಟ್​ಗೆ ತಾಗಿ ಅವರು ಮುಗ್ಗರಿಸುತ್ತಾರೆ. ನೀರು ನಿಮ್ಮ ಬಟ್ಟೆಯ ಮೇಲೆ ಚೆಲ್ಲುತ್ತದೆ. ಆಗ ನೀವು ಕೂಗಾಡುತ್ತೀರಿ. ಮೂಡ್ ಆಫ್ ಮಾಡಿಕೊಂಡು ಕಚೇರಿಗೆ ಹೋಗುತ್ತೀರಿ. ಅಲ್ಲಿಯೂ ಚಿಕ್ಕಪುಟ್ಟ ವಿಷಯಕ್ಕೆ ಬೇರೆಯವರ ಮೇಲೆ ಸಿಡುಕುತ್ತೀರಿ. ಬೆಳಗಿನ ಘಟನೆ ಮನೆಯಲ್ಲೂ ಕಚೇರಿಯಲ್ಲೂ ಸಂಬಂಧಗಳ ಮೇಲೆ ನೆಗೆಟಿವ್ ಪ್ರಭಾವ ಬೀರುತ್ತದೆ. ಪದೇಪದೆ ಇಂತಹ ಬೇರೆಬೇರೆ ಸಂಗತಿಗಳು ನಡೆಯುತ್ತಿದ್ದರೆ ಕೋಪಿಷ್ಟ ಎನ್ನುವ ಬಿರುದೂ, ಬಿಪಿಯಂತಹ ಕಾಯಿಲೆಗಳೂ ಗ್ಯಾರಂಟಿ. ಅದೇ ನೀರು ಚೆಲ್ಲಿದಾಗ ಎರಡು ಸೆಕೆಂಡ್ ತಡೆದರೆ, ಅವರು ಬೇಕಂತಲೇ ಮಾಡಿದ್ದಲ್ಲ ಎಂದು ನಿಮಗೆ ಗೊತ್ತಾಗುತ್ತದೆ. ಆಗ ನೀವು ‘ಸದ್ಯ ನಿಮಗೆ ಪೆಟ್ಟಾಗಲಿಲ್ಲವಲ್ಲ’ ಎಂದು ಹೇಳಿ ಬಟ್ಟೆ ಬದಲಾಯಿಸಿ ಹೊರಡುತ್ತೀರಿ. ಕಚೇರಿಯಲ್ಲೂ ಅಕಾಸ್ಮಾತ್ ಏನಾದರೂ ಅಹಿತಕರ ಘಟನೆ ನಡೆದರೂ ನಿಮ್ಮ ಸ್ವಭಾವ ಅದನ್ನು ದೊಡ್ಡದಾಗಲು ಬಿಡುವುದಿಲ್ಲ. ಮನೆ, ಕಚೇರಿ ಎರಡೂ ಕಡೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಮತ್ತು ನೀರು ಚೆಲ್ಲಿದವರಿಗೆ ನಿಮ್ಮ ಮೇಲೆ ಎಷ್ಟು ಗೌರವ ಹೆಚ್ಚಾಗಿರುತ್ತದೆ ಎಂದರೆ ಅದನ್ನು ಅವರು ಶಬ್ದಗಳಲ್ಲಿ ವರ್ಣಿಸಲಾರರು. ಸರಿ, ನಿಮ್ಮದು ಯಾವ ದಾರಿ? ಮೊದಲನೆಯದಾ ಅಥವಾ ಎರಡನೆಯದಾ? ಎರಡನೆಯದೇ ಎಂದು ಈಗ ಹೇಳುತ್ತೀರಾದರೂ ನಮ್ಮಲ್ಲಿ ಮೊದಲನೆಯದನ್ನೇ ಮಾಡುವವರು ಶೇ.90 ಮಂದಿ! ನಿಧಾನವಾಗಿ ರೆಸ್ಪಾಂಡ್ ಮಾಡುವ ಈ ಕೆಲಸ ಉಪದೇಶ ಮಾಡಿದಷ್ಟು, ಲೇಖನ ಬರೆದಷ್ಟು ಸುಲಭವಲ್ಲ. ದಿನದಿನವೂ ಪ್ರಜ್ಞಾಪೂರ್ವಕವಾಗಿ ರೂಢಿಮಾಡಿಕೊಳ್ಳಬೇಕಾಗುತ್ತದೆ. ಇವತ್ತಿನಿಂದಲೇ ಶುರುವಾಗಲಿ ನಮ್ಮ ಪ್ರಯತ್ನ. ಆಗಬಹುದಲ್ಲ?

February 22, 2021

ವಿದ್ಯಾ ದದಾತಿ

 ಚೇದಿ ಎನ್ನುವ ಹೆಸರಿನ ರಾಜನೊಬ್ಬನಿದ್ದ. ಆತನಿಗೆ ಕುಶು ಅಥವಾ ಕಶು ಎನ್ನುವ ಮಗನಿದ್ದ. ಚೇದಿ ತನ್ನ ಕಾಲದಲ್ಲಿ ಧಾರ್ಮಿಕನಾಗಿ ಅನೇಕ ಯಾಗಗಳನ್ನು ಮಾಡಿ ಪ್ರಸಿದ್ಧನಾಗಿದ್ದ. ಆತನ ಮಗನೂ ಸಹ ತಂದೆಯಂತೆಯೇ ಧಾರ್ಮಿಕ ಮನೋಭಾವದವನಾಗಿ ಯಜ್ಞವೊಂದನ್ನು ನೆರವೇರಿಸುವ ಸಲುವಾಗಿ ಕಾಣ್ವ ಗೋತ್ರದ ಬ್ರಹ್ಮಾತಿಥಿ ಎನ್ನುವ ಮಹರ್ಷಿಯನ್ನು ಸಂಪರ್ಕಿಸಿ ಯಜ್ಞವನ್ನು ನೆರವೇರಿಸಿಕೊಡಲು ಕೇಳಿಕೊಳ್ಳುತ್ತಾನೆ. ಬ್ರಹ್ಮಾತಿಥಿ ಅದಕ್ಕೆ ಸಮ್ಮತಿಸಿ ರಾಜನಲ್ಲಿ ಬಂದಾಗ, ರಾಜನಲ್ಲಿ ಸಂಪತ್ತುಗಳ ಕೊರತೆ ಕಾಣಿಸುತ್ತದೆ. ಆಗ ಬ್ರಹ್ಮಾತಿಥಿ ಆಲೋಚಿಸುತ್ತಾನೆ. ಸಂಪತ್ತಿಲ್ಲದೇ ಯಾಗ ಮಾಡಲು ಸಾಧ್ಯವಿಲ್ಲ. ಆದರೆ, ರಾಜನಿಗೆ ಧಾರ್ಮಿಕವಾದ ಹುಮ್ಮಸ್ಸು ಮತ್ತು ಮನಸ್ಸಿದೆ. ಆಗ ಇಂದ್ರನನ್ನು ಸ್ತುತಿಸಿ ಕೆಲವು ಋಕ್ಕುಗಳನ್ನು ಸಾಕ್ಷಾತ್ಕರಿಸಿಕೊಂಡು ಅದರಿಂದ ಗೋ ಸಂಪತ್ತನ್ನು ಪಡೆದು ರಾಜನಿಗೆ ಕೊಡುತ್ತಾನೆ. ಯಜ್ಞ ಸಂದರ್ಭ ದಾನಕ್ಕಾಗಿ ಕರೆಯುವ ಬ್ರಹ್ಮಾತಿಥಿಯು ಅಶ್ವಿನೀ ದೇವತೆಗಳನ್ನು ದಾನ ಸ್ವೀಕರಿಸಲು ಬರಬೇಕೆಂದು ಕೇಳಿಕೊಳ್ಳುವ ಭಾಗದಲ್ಲಿ ಅಂದರೆ ಋಗ್ವೇದದ ಎಂಟನೇ ಮಂಡಲದ ೫ನೇ ಸೂಕ್ತದಲ್ಲಿ ಈ ಋಕ್ಕನ್ನು ತಿಳುವಳಿಕೆಯ ಸಲುವಾಗಿಯೇ ಹೇಳುತ್ತಾನೆ.


ತಾ ಮೇ ಅಶ್ವಿನಾ ಸನೀನಾಂ ವಿದ್ಯಾತಂ ನವಾನಾಂ| ಅಂದರೆ ಇಲ್ಲಿ ’ವಿದ್ಯಾತಂ’ ಎನ್ನುವುದು ತಿಳುವಳಿಕೆ ಅಥವಾ ಜ್ಞಾನದ ಕುರಿತಾಗಿ ಹೇಳಿರುವುದು. ವಿದ್ಯೆ ಎನ್ನುವುದು ನಮಗೆ ಕೊಡುವ ಜ್ಞಾನ. ಈ ಜ್ಞಾನವನ್ನು ಕೊಡುವ ವ್ಯವಸ್ಥೆಯೇ ಶಿಕ್ಷಣ. ಈ ಶಿಕ್ಷಣದ ಮೂಲದ ಕುರಿತಾಗಿ ಗಮನಿಸುತ್ತಾ ಸಾಗಿದರೆ ನಮಗೆ ಸಿಗುವುದು ಶಿಷ್ಟ ಎನ್ನುವ ಮೂಲ ಪದ. ನಿಗದಿತವಾದ ಕ್ರಮದಲ್ಲಿ ನಾವು ಏನನ್ನು ಗುರುವಿನಿಂದ ಸ್ವೀಕರಿಸಿ ಕಲಿಯುತ್ತೇವೆಯೋ ಅದು ಶಿಕ್ಷಣ. ಅದು ಒಂದು ಕ್ರಮಬದ್ಧವಾದ ವ್ಯವಸ್ಥೆ. ಅಲ್ಲಿ ಯಾರು ನಮ್ಮ ಜ್ಞಾನದ ಅಭಿವೃದ್ಧಿಗೆ ಕಾರಣರಾಗುತ್ತಾರೋ ಅವರು ಗುರು ಅಥವಾ ನಿರ್ದೇಶಕ ಎನ್ನಿಸಿಕೊಳ್ಳುತ್ತಾರ. ಹೀಗೆ ಶಿಕ್ಷಣ ಎನ್ನುವುದು ಜ್ಞಾನದ ವ್ಯವಸ್ಥಿತವಾದ ಜೋಡಣೆಯಾಗಿದೆ. ಇದೊಂದು ವ್ಯವಸ್ಥೆ ಅಥವಾ ಪದ್ಧತಿ ಅಂತ ಸಹ ಹೇಳಬಹುದು. 


ಅದೇನೇ ಇರಲಿ, ಶಿಕ್ಷಣ ಪದ್ಧತಿಯು ಪ್ರಾಚೀನಕಾಲದಿಂದ ಬದಲಾಗುತ್ತ ಬಂದಿದೆ. ಮೊದಲಿಗೆ ಮೌಖಿಕ ಪಾಠಗಳಿದ್ದವು ಗುರುಕುಲದಲ್ಲಿದ್ದು ಸ್ನಾತಕನಾಗಿ ತಾನು ಸಮಾವರ್ತನವನ್ನು ಪೂರೈಸುವ ಹೊತ್ತಿಗೆ ಅಗಾಧವಾದ ಜ್ಞಾನ ಸಂಪಾದನೆ ಮಾಡಿರುತ್ತಿದ್ದ ಎನ್ನುವುದು ಋಗ್ವೇದದ ಹತ್ತನೇ ಮಂಡಲದಿಂದ ತಿಳಿದು ಬರುತ್ತದೆ.

ಸೂರ್ಯ ಮತ್ತು ಭೂಮಿಯ ಗುರುತ್ವ ಕಂಡು ಹಿಡಿದ ಋಗ್ವೇದ ಕಾಲದ ಋಷಿ ಅರ್ಚನ್ ಸಹ ಗುರುವಿನಿಂದ ಕಲಿತ ವಿದ್ಯೆಯ ಸಾಧನೆಯ ಫಲ.


ಇನ್ನು ಪುರಾಣಕ್ಕೆ ಬಂದಾಗ ಗುರುವಿನ ಪ್ರತಿಬಿಂಬದೆದುರು ಅಭ್ಯಾಸ ಮಾಡಿದ ಏಕಲವ್ಯನ ಕಥೆ ಸ್ಪಷ್ಟವಾಗಿ ಗುರುವಿನ ಅವಶ್ಯಕತೆ ಮತ್ತು ಶಿಸ್ತುಬದ್ಧ ಶಿಕ್ಷಣಬೇಕು ಅನ್ನುವುದನ್ನು ತೊರಿಸಿಕೊಡುತ್ತದೆ. ಮಹಾಭಾರತದಲ್ಲಿ ಬರುವ ದೌಮ್ಯರ ಪ್ರಸಂಗದಲ್ಲಿ ಅವರು ಮೂವರು ಶಿಷ್ಯರನ್ನು ಪರೀಕ್ಷಿಸಿ ಅವರಿಗೆ ವಿದ್ಯೆಯನ್ನು ಕೊಡುವುದು ಗಮನಿಸಿದರೆ ಇಂದು ಅನೇಕ ವಿದ್ಯಾ ಸಂಸ್ಥೆಗಳಲ್ಲಿರುವ ಪ್ರವೇಶ ಪರೀಕ್ಷೆ ನೆನಪಿಗೆ ಬರುತ್ತದೆ. ದೌಮ್ಯರಲ್ಲಿದ್ದ ಒಬ್ಬ ಬಾಲಕ ನೀರಿನ ಬದುವನ್ನು ಕಟ್ಟಿ ನೀರಾವರಿ ವ್ಯವಸ್ಥೆಗೆ ಕಾಯಕಲ್ಪ ಮಾಡಿದ. ಆತನೇ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಟ್ಟ ಮೊದಲಿಗನಾಗಿದ್ದರಿಂದ ಅವನಿಗೆ ಉದ್ದಾಲಕ ಎನ್ನುವ ಹೆಸರು ಹಾಗೇ ನಿಂತುಬಿಡುತ್ತದೆ. ಹೀಗೇ ಋಷಿಗಳೆಲ್ಲ ಹಿಂದೆ ಸ್ವಾಧ್ಯಾಯ ಮತ್ತು ಅಧ್ಯಾಪನಗಳೆರಡರಲ್ಲೂ ತೊಡಗಿಸಿಕೊಂಡು ಶಿಕ್ಷಣ ವ್ಯವಸ್ಥೆಯಲ್ಲಿ ಅಧ್ಯಯನದ ಅವಶ್ಯಕತೆಯನ್ನು ಜಗತ್ತಿಗೆ ತೋರಿಸಿಕೊಟ್ಟರು. ಇವೆಲ್ಲವೂ ಪುರಾಣ ಮತ್ತು ವೇದಗಳ ವಿಷಯವಾದರೆ ಇನ್ನು ಇತಿಹಾಸಕ್ಕೆ ಬಂದರೆ . . . . .


ಸುಮಾರು ಸಾಮಾನ್ಯ ಪೂರ್ವದ ಶಕವರ್ಷ ೬ ರಲ್ಲಿ ಪಾಣಿನಿ ವರರುಚಿಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದ ಮತ್ತು ಆತನ ದೊಡ್ಡ ವಿದ್ಯಾಲಯವೇ ಇತ್ತು ಎನ್ನುವುದು ತಿಳಿದು ಬರುತ್ತದೆ. ಇನ್ನು ನಮಗೆ ಕಾಣಸಿಗುವ ಎರಡು ಪ್ರಮುಖ ವಿಶ್ವವಿದ್ಯಾಲಯ ಎಂದರೆ ಒಂದು ತಕ್ಷಶಿಲಾ ಮತ್ತೊಂದು ನಾಲಂದಾ.


#ವಿದ್ಯೆ_ಶಿಕ್ಷಣ

ಸದ್ಯೋಜಾಯ ಉವಾಚ©®

February 18, 2021

ಮೌಲ್ಯಗಳ ಪರಿಚಯ

 ಮೌಲ್ಯಗಳ ಪರಿಚಯ

-ಡಾ. ಗುರುರಾಜ ಕರ್ಜಗಿ


------- ನನಗಿಂತ ಹಿರಿಯರೊಬ್ಬರು ಒಂದು ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದವರು ನಮ್ಮ ಮನೆಯ ಹತ್ತಿರವೇ ಇದ್ದಾರೆ. ಒಂದು ದಿನ ಭಾನುವಾರ ಮನೆಗೆ ಬಂದರು. ಆ ಮಾತು, ಈ ಮಾತು ಆದ ಮೇಲೆ ವಿಚಾರ ಮೌಲ್ಯಗಳ ಕಡೆಗೆ ತಿರುಗಿತು. ಅವರು ಬಹಳ ದುಃಖದಿಂದ, `ಈಗ ಮೌಲ್ಯಗಳ ಬಗ್ಗೆ ಮಾತನಾಡುವುದೇ ಕಷ್ಟ. 


------ ಯಾರಿಗೂ ಅದರ ಬಗ್ಗೆ ಚಿಂತೆ ಇಲ್ಲ` ಎಂದು ಹೇಳಿ ತಮ್ಮ ಮನೆಯಲ್ಲೇ ಆದ ಘಟನೆಯೊಂದನ್ನು ವಿವರಿಸಿದರು. ಅವರಿಗೆ ಹರಿಶ್ಚಂದ್ರನ ಕಥೆ ತುಂಬ ಇಷ್ಟ. ತಮ್ಮ ಮೊಮ್ಮಗನಿಗೆ ಹರಿಶ್ಚಂದ್ರನ ಕಥೆಯ ಚಲನಚಿತ್ರ ತೋರಿಸಿ ಅವನ ಜೀವನದ ಮೌಲ್ಯವನ್ನು ತಿಳಿಸಬೇಕೆಂಬಾಸೆ. ಆದರೆ ಹುಡುಗನಿಗೆ ಆಸಕ್ತಿ ಇಲ್ಲ. ಕೊನೆಗೆ ಒತ್ತಾಯ ಮಾಡಿ ಒಂದು ಭಾನುವಾರ ಅವನನ್ನು ಚಿತ್ರಮಂದಿರಕ್ಕೆ ಕರೆದೊಯ್ದರು. ಅಲ್ಲಿ ಬಹಳ ಜನ ಇರಲಿಲ್ಲ. 


---------- ಬಾಲ್ಕನಿಯಲ್ಲಿ ಅಜ್ಜ, ಮೊಮ್ಮಗ ಕುಳಿತರು. ಚಿತ್ರ ಪ್ರಾರಂಭವಾಯಿತು. ಹರಿಶ್ಚಂದ್ರನ ಕಷ್ಟದ ಪರಂಪರೆ ಬೆಳೆಯಿತು. ಅಜ್ಜನಿಗೆ ದುಃಖ ತಡೆದುಕೊಳ್ಳುವುದು ಅಸಾಧ್ಯ. ಅವರ ಕಣ್ಣೀರು ಹರಿಯಿತು. ಮೊಮ್ಮಗ ಒಮ್ಮೆ ಪರದೆ, ಮತ್ತೊಮ್ಮೆ ಅಜ್ಜನ ಮುಖ ನೊಡುತ್ತ ಕುಳಿತ. ಸಿನಿಮಾ ಮುಗಿದ ಮೇಲೆ ಕಣ್ಣೊರೆಸಿಕೊಂಡು ಅಜ್ಜ, `ನೀನೂ ಹಾಗೇ ಆಗಬೇಕಪ್ಪ` ಎಂದರು. ಹುಡುಗ, `ಯಾರ ಹಾಗೆ` ಎಂದು ಕೇಳಿದ. `ಯಾರ ಹಾಗೆ ಅಂದರೇನಪ್ಪ.


------- ನೀನೂ ಆ ಹರಿಶ್ಚಂದ್ರನ ತರಹವೇ ಆಗಬೇಕಲ್ಲವೇ` ಎಂದರು ಅಜ್ಜ. ಥಟ್ಟನೇ ಮೊಮ್ಮಗ ಉತ್ತರಿಸಿದ, `ಖಂಡಿತ ಇಲ್ಲ. ನಾನು ಅವನ ಹಾಗೆ ಆಗುವುದಿಲ್ಲ. ನೋಡಲಿಲ್ಲವೇ ಸಿನಿಮಾದ ಮೊದಲನೇ ರೀಲಿನಿಂದ ಕೊನೆಯವರೆಗೂ ಅಳ್ತಾನೇ ಇದ್ದ. ನಾನು ವಿಶ್ವಾಮಿತ್ರನ ತರಹ ಆಗ್ತೇನೆ` ಎಂದ. ಅಜ್ಜನ ಗುಂಡಿಗೆ ಒಡೆಯಿತು. ಇದನ್ನೇ ನನ್ನ ಹತ್ತಿರ ಹೇಳಿಕೊಂಡರು. ನಾನು ಅವರಿಗೆ ಹೇಳಿದೆ, `ನಿಮ್ಮ ಮೊಮ್ಮಗನನ್ನು ಮುಂದಿನ ಭಾನುವಾರ ನನ್ನೆಡೆಗೆ ಕರೆದುಕೊಂಡು ಬನ್ನಿ, ಮಾತನಾಡುತ್ತೇನೆ`. ಅಂತೆಯೇ ಹುಡುಗ ಭಾನುವಾರ ಬಂದ.


`ಯಾಕಪ್ಪಾ, ಸಿನಿಮಾ ಹೇಗಿತ್ತು` ಎಂದು ಕೇಳಿದೆ. `ಬರೀ ಬೋರು ಅಂಕಲ್, ಸಿನಿಮಾ ತುಂಬ ಅಳೋದೇ ಅಳೋದು. ಒಂದೂ ಫೈಟ್ ಇಲ್ಲ` ಎಂದ. `ಹೋಗಲಿ ಬಿಡು, ಹರಿಶ್ಚಂದ್ರನ ಕಷ್ಟ ಪ್ರಾರಂಭವಾಯ್ತಲ್ಲ, ಹೆಂಡತಿ ಮಗನನ್ನು ಮಾರಿಕೊಂಡ, ತಾನೇ ಸುಡುಗಾಡು ಕಾಯಲು ನಿಂತ. ಅಲ್ಲಿಂದ ಕೊನೆಗೆ ಅವನಿಗೆ ಮರಳಿ ರಾಜ್ಯ ದೊರೆಯುವವರೆಗೆ ಅದೆಷ್ಟು ಕಾಲ ಆಗಿದ್ದಿರಬೇಕು` ಎಂದು ಕೇಳಿದೆ. 


ಅದಕ್ಕಾತ `ಅದನ್ನೇನೂ ತೋರಿಸಲಿಲ್ಲ` ಎಂದ. `ಅವನು ಮತ್ತೆ ರಾಜನಾದ ಮೇಲೆ ಅದೆಷ್ಟು ಕಾಲ ಚಕ್ರವರ್ತಿಯಾಗಿಯೇ ಉಳಿದ` ಎಂದು ಕೇಳಿದಾಗಲೂ ಆತ ಅದನ್ನೂ ಹೇಳಲಿಲ್ಲ. `ಬರೀ ಶುಭಂ ಎಂದು ತೋರಿಸಿ ಕಳುಹಿಸಿಬಿಟ್ಟರು` ಎಂದ. ಆಗ ನಾನು, `ಇದೇ ನಮ್ಮ ದುರ್ದೈವ. ಹರಿಶ್ಚಂದ್ರ ಕಷ್ಟಪಟ್ಟಿದ್ದು ಅವನ ಜೀವನದಲ್ಲಿ ಎರಡು ವರ್ಷ ಮಾತ್ರ. ಆಗ ವಿಧಿ ಅವನನ್ನು ಚೆನ್ನಾಗಿ ಅರೆದು ಪರೀಕ್ಷಿಸಿತು.


ಅವನು ಗಟ್ಟಿಯಾಗಿ ನಿಂತ. ಮುಂದೆ ಅವನು ಚಕ್ರವರ್ತಿಯಾಗಿ ಎಷ್ಟೋ ಸಾವಿರ ವರ್ಷ ಬದುಕಿದ ಎಂದು ಪುರಾಣ ಹೇಳುತ್ತದೆ. ಎರಡು ವರ್ಷ ಸತ್ಯವೆಂಬ ಮೌಲ್ಯವನ್ನು ಗಟ್ಟಿಯಾಗಿ ಪಾಲಿಸಿದ್ದಕ್ಕೆ ಸಾವಿರಾರು ವರ್ಷಗಳ ರಾಜ್ಯಪದವಿ ಅವನಿಗೆ ದೊರಕಿತು. ಕಷ್ಟಪಟ್ಟಿದ್ದು ಎರಡು ವರ್ಷ. ಸುಖಪಟ್ಟಿದ್ದು ಸಾವಿರಾರು ವರ್ಷ. ಹಾಗೆ ಅವನು ಪರೀಕ್ಷೆಯ ಕಾಲದಲ್ಲಿ ಗಟ್ಟಿಯಾಗಿ ನಿಂತದ್ದರಿಂದಲ್ಲವೇ ಅವನ ಹೆಸರೇ ಸತ್ಯಹರಿಶ್ಚಂದ್ರ ಎಂದಾದದ್ದು.


ಅವನ ಹಿಂದಿದ್ದ ರಾಜನ ಹೆಸರು ಮತ್ತು ಅವನ ನಂತರದ ರಾಜನ ಹೆಸರು ನಮಗೆ ಗೊತ್ತಿಲ್ಲ. ಇದು ಸತ್ಯವೆಂಬ ಮೌಲ್ಯ ಪಾಲಿಸಿದ್ದರ ಫಲ` ಎಂದು ಹೇಳಿ ಅವನ ಮುಖ ನೋಡಿದೆ. ಅವನು, `ಹಾಗಿದ್ದರೆ ಪರವಾಗಿಲ್ಲ ಅಂಕಲ್, ನಾನು ಅವನ ಹಾಗೆ ಆಗಲು ಪ್ರಯತ್ನಿಸುತ್ತೇನೆ` ಎಂದ. ಅಜ್ಜನ ಮುಖದಲ್ಲಿ ಸಂತೋಷ. ನಾವು ಮೌಲ್ಯಗಳ ಬಗ್ಗೆ ಹೇಳುವ ರೀತಿ ಹೇಗಿದೆಯೆಂದರೆ ಅವುಗಳನ್ನು ಪಾಲಿಸಿದರೆ ಕಷ್ಟ ತಪ್ಪಿದ್ದಲ್ಲ ಎನ್ನುವಂತೆ ತೋರುತ್ತದೆ. 


ಅಯ್ಯೋ ಸತ್ಯ ಹೇಳಿದರೆ ಹರಿಶ್ಚಂದ್ರನಂತೆ ಸುಡುಗಾಡು ಕಾಯೋದೇ ಗತಿ ಎನ್ನುವುದಿಲ್ಲವೇ. ನಮ್ಮ ಜೀವನದಲ್ಲೂ ಮೌಲ್ಯಗಳ ಪರೀಕ್ಷೆ ನಡೆಯುತ್ತದೆ. ಯಾರು ಗಟ್ಟಿಯಾಗಿ ನಿಂತು ಅವುಗಳನ್ನು ಪಾಲಿಸುತ್ತಾರೋ ಅವರು ಜನರ ಮನಸ್ಸಿನಲ್ಲಿ ಬಹುಕಾಲ ಉಳಿಯುತ್ತಾರೆ. 


------ ಕೇವಲ ಹದಿನಾಲ್ಕು ವರ್ಷ ವನವಾಸ ಮಾಡಿದ ರಾಮ, ರಾಜನಾಗದೇ ಉಳಿದ ಕೃಷ್ಣ, ಸದಾ ದಯೆ ತೋರಿದ ಏಸು, ಕರುಣೆಯ ಮೂರ್ತಿ ಬುದ್ಧ ಇವರೆಲ್ಲ ಇನ್ನೂ ಸಹಸ್ರಾರು ವರ್ಷಗಳ ನಂತರವೂ ದೇವರಾಗಿಯೇ ಉಳಿದಿರುವುದಿಲ್ಲವೆ. ನಾವು ಮೌಲ್ಯಗಳನ್ನು ತಿಳಿ ಹೇಳುವ ವಿಧಾನ ಬದಲಿಸಿಕೊಳ್ಳಬೇಕು. ಮೌಲ್ಯಪಾಲನೆಯಿಂದ ಸದಾ ಕಷ್ಟವೇ ಎಂಬುದೂ ಸರಿಯಲ್ಲ....

ಸಾಷ್ಟಾಂಗ ನಮಸ್ಕಾರ ಮಾಡುವ ವಿಧಾನ

 ಉಪಾಸ್ಯ ದೇವತೆಗೆ ಶರೀರದಿಂದ, ಮನಸ್ಸಿನಿಂದ ಮತ್ತು ವಾಣಿಯಿಂದ ಶರಣಾಗಿ ಮಾಡಿದ ನಮಸ್ಕಾರವೆಂದರೆ, ‘ *ಸಾಷ್ಟಾಂಗ* *ನಮಸ್ಕಾರ*’ !


*ಸಾಷ್ಟಾಂಗ ನಮಸ್ಕಾರ ಮಾಡುವ ವಿಧಾನ* 


ಮೊದಲು ಎರಡೂ ಕೈಗಳನ್ನು ಎದೆಯ ಸಮೀಪ ಜೋಡಿಸಬೇಕು (ನಮಸ್ಕಾರದ ಮುದ್ರೆಯಂತೆ). ನಂತರ ಸೊಂಟ ಬಗ್ಗಿಸಬೇಕು, ನಂತರ ಎರಡೂ ಅಂಗೈಗಳನ್ನು ನೆಲದ ಮೇಲಿಡಬೇಕು, ಮೊದಲು ಬಲಗಾಲನ್ನು, ಆಮೇಲೆ ಎಡಗಾಲನ್ನು ಹಿಂದಕ್ಕೆ ಸರಿಸಿ ಎರಡೂ ಕಾಲುಗಳನ್ನು ನೇರವಾಗಿ ಉದ್ದ ಮಾಡಬೇಕು.

ಕೈಗಳನ್ನು ಮಡಚಿ ತಲೆ, ಎದೆ, ಅಂಗೈ, ಮೊಣಕಾಲು ಮತ್ತು ಕಾಲುಗಳ ಬೆರಳುಗಳು ನೆಲಕ್ಕೆ ತಾಗುವಂತೆ ಮಲಗಬೇಕು ಹಾಗೂ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು.

ಮನಸ್ಸಿನಿಂದ ನಮಸ್ಕರಿಸಬೇಕು ಮತ್ತು ಬಾಯಿಯಿಂದ ‘ನಮಸ್ಕಾರ’ ಎಂದು ಹೇಳಬೇಕು.

ಎದ್ದುನಿಂತು ಎರಡೂ ಕೈಗಳನ್ನು ಅನಾಹತಚಕ್ರದ ಬಳಿ (ಎದೆಯ ಮೇಲೆ) ಜೋಡಿಸಿ ಶರಣಾಗತ ಭಾವದಿಂದ ನಮಸ್ಕಾರ ಮಾಡಬೇಕು.

              ನಮಸ್ಕಾರ ಎನ್ನುವ ಪದವು ಸಂಸ್ಕೃತ ಭಾಷೆಯ ಒಂದು ಪದ. ಈ ಪದವನ್ನು ಬಿಡಿಸಿದಾಗ ನಮಸ್ | ಕಾರ ಎನ್ನುವ ಎರಡು ಬೇರೆ ಬೇರೆ ಪದಗಳು ದೊರೆಯುತ್ತವೆ. ಇದು `ಣಮು ಪ್ರಹ್ವತ್ವೇ ಶಬ್ದೇ ಚ` ಎನ್ನುವ ಧಾತುವಿನಿಂದ ಉತ್ಪನ್ನವಾಗಿದೆ. ನಮಸ್ ಎಂದರೆ ಪ್ರಹ್ವತೆ. ಧಾತುವಿನಲ್ಲಿರುವ ಪದಗಳ ಅರ್ಥವನ್ನು ನೋಡಿದಾಗ ನಾವು ನಮಸ್ಕಾರ ಎನ್ನುವ ಪ್ರಕ್ರಿಯೆಯನ್ನು ಮಾಡುವಾಗ ನಮ್ಮ ದೇಹವನ್ನು ಬಾಗಿಸಿರಬೇಕು ಮತ್ತು ಮನಸ್ಸೂ ಸಹ ಬಾಗಿರಬೇಕು ಎನ್ನುವ ಅರ್ಥ ಸಿಗುತ್ತದೆ. ಅಂದರೆ ನಮಸ್ಕಾರವನ್ನು ಮಾಡುವಾಗ ನಮ್ಮ ದೇಹಬಾಗಿದ್ದರೆ ಮಾತ್ರ ಸಾಲದು. ದೇವದೇವನ ಮುಂದೆ ನಮ್ಮ ಮನಸ್ಸೂ ಬಾಗಿದ್ದು, ಅವನ ಮಹಿಮೆಗಳು ಶಬ್ದರೂಪ ಸ್ತೋತ್ರದ ಮೂಲಕ ಹೊರಬರುತ್ತಿರಬೇಕು.

ಇದೇ ಮಾತನ್ನು ಶ್ರೀಮಜ್ಜಯತೀರ್ಥರು ತಮ್ಮ ಸುಧಾಗ್ರಂಥದಲ್ಲಿ `ಮನೋವೃತ್ತೇಃ ತತ್ಪ್ರವಣತಾ ಹಿ ವಂದನಮ್` ಎಂದಿದ್ದಾರೆ. ಹೀಗೆ ನಮಸ್ಕಾರ ಮಾಡುವುದು ಮನಸ್ಸಿನಿಂದ, ಕೇವಲ ಅಡ್ಡಬೀಳುವುದೇ ನಮಸ್ಕಾರವಲ್ಲ. ನಾವು ಪೂಜಾವಸಾನದಲ್ಲಿ ಹೇಳುವ `ನಾಹಂ ಕರ್ತಾ ಹರಿ ಕರ್ತಾ ತತ್ಪೂಜಾ ಕರ್ಮ ಚಾಖಿಲಮ್` ಎನ್ನುವ ಮಾತಿನಂತೆ ಯಾವುದೇ ಕಾರ್ಯ ನಮ್ಮಿಂದಾದರೆ ನಿಜವಾಗಿಯೂ ಆ ಕಾರ್ಯ ನಮ್ಮಿಂದಾದುದಲ್ಲ. ಭಗವಂತನಿಂದಲೇ ಆದದ್ದು ಎನ್ನುವ ಭಾವನೆಯೇ ನಮಸ್ಕಾರ. ಅಲ್ಲದೇ! ನಮಸ್ಕಾರವನ್ನು ಮಾಡಿದಾಗ ನಮ್ಮ ದೇಹದ ಭಾರ ವನ್ನು ಭೂವರಾಹನ ಮೇಲೆ ಹಾಕಿ ಆತ್ಮವನ್ನು ನಿವೇದಿಸಬೇಕಾದರೆ `ನಾಹಂ ಕರ್ತಾ` ಎನ್ನುವ ಅನುಸಂಧಾನವಿರಲೇಬೇಕು. ಇಲ್ಲದಿದ್ದಲ್ಲಿ ದೇಹವನ್ನು ಮಾತ್ರ ಭೂಮಿಯ ಮೇಲೆ ಬೀಳಿಸಿದಂತಾ ಗುತ್ತದೆ. ಆತ್ಮನಿವೇದನೆ ಮಾಡಿದಂತಾಗುವುದಿಲ್ಲ.


ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |

ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್ ||


ಎನ್ನುವ ನವವಿಧ ಭಕ್ತಿ ಯಲ್ಲಿ ಆತ್ಮನಿವೇದನೆ ಸೇರಿದಂತೆ ವಂದನವೂ ಸೇರಿದೆ. ಈ ವಂದನದ ಮೂಲಕ ಭಗವಂತನಲ್ಲಿ ಸ್ನೇಹವನ್ನು ಸಂಪಾದಿಸಿ, ಅವನ ದಾಸರಾಗಿ, ಅವನ ಉತ್ಕರ್ಷವನ್ನು ಒಪ್ಪಿಕೊಂಡು ಅವನಿಗೆ ನಮ್ಮ ಆತ್ಮನಿವೇದನೆಯನ್ನು ಮಾಡುವುದರ ಮೂಲಕ ನಮ್ಮ ಒಳಿತು-ಕೆಡಕುಗಳಿಗೆ ಆ ಭಗವಂತನೇ ಕಾರಣ ಎನ್ನುವ ಅನುಸಂಧಾನದ ಮೂಲಕ ಮನಸ್ಸನ್ನು ನಮ್ರವಾಗಿಸುವುದೇ ನಮಸ್ಕಾರದ ಪ್ರಕ್ರಿಯೆ.


ನಮಸ್ಕಾರದಲ್ಲಿ ಎಷ್ಟು ವಿಧಗಳು:

ನಮಸ್ಕಾರವು `ಕಾಯಿಕ, ವಾಚಿಕ, ಮಾನಸಿಕ` ಎಂದು ಮೂರು ವಿಧವಾಗಿದೆ. ದೇಹ ದಿಂದ ಮಾಡುವ ನಮಸ್ಕಾರವು `ಕಾಯಿಕ(ದೈಹಿಕ) ನಮಸ್ಕಾರ` ಎನಿಸಿಕೊಂಡರೆ, ಮಾತಿನ ಮೂಲಕ ಮಾಡುವ ನಮಸ್ಕಾರವು `ವಾಚಿಕ ನಮಸ್ಕಾರ`, ಮನಸ್ಸಿನ ಮೂಲಕ ಮಾಡುವ ನಮಸ್ಕಾರವು `ಮಾನಸಿಕ ನಮಸ್ಕಾರ` ಎಂದು ಕರೆಸಿಕೊಳ್ಳುತ್ತದೆ. ಈ ಮೂರು ವಿಧವಾದ ನಮಸ್ಕಾರಗಳು ಸೇರಿದಾಗ ಮಾತ್ರ ಅದು `ಉತ್ತಮ ನಮಸ್ಕಾರ` ಎಂದೆನಿಸಿಕೊಳ್ಳುತ್ತದೆ. ಇದನ್ನೇ `ತ್ರಿಕರಣ ಪೂರ್ವಕ ನಮಸ್ಕಾರ` ಎನ್ನುತ್ತಾರೆ. ಈ ಮೂರು ವಿಧದ ನಮಸ್ಕಾರಗಳಲ್ಲಿ `ಕಾಯಿಕ ನಮಸ್ಕಾರವು ಉತ್ತಮ. ವಾಚಿಕ ನಮಸ್ಕಾರವು ಅಧಮ. ಮಾನಸಿಕ ನಮಸ್ಕಾರವು ಮಧ್ಯಮ` ಎಂದು ವಿಭಾಗ ಮಾಡಲಾಗಿದೆ


ಕಾಯಿಕ ವಾಗ್ಭವಶ್ಚೈವ ಮಾನಸಸ್ತ್ರಿವಿಧಸ್ಸ್ಮೃತಃ|

ನಮಸ್ಕಾರಸ್ತು ತತ್ವಜ್ಞೈಃ ಉತ್ತಮಾಧಮಮಧ್ಯಮಾಃ ||


ಎಂಬುದಾಗಿ.  ಕಾಯದಿಂದ ಮಾಡುವ ನಮಸ್ಕಾರಗಳಲ್ಲಿ ಪುನಃ ಮೂರುವಿಧಗಳಿವೆ. `ಕಾಯಿಕ ಉತ್ತಮ, ಕಾಯಿಕ ಮಧ್ಯಮ, ಕಾಯಿಕ ಅಧಮ` ಎಂಬುದಾಗಿ. ಕಾಯಿಕ ಉತ್ತಮ ನಮಸ್ಕಾರದ ವಿಧವನ್ನು ಹೇಳುತ್ತಿದ್ದಾರೆ 


ಪ್ರಸಾರ್ಯ ಪಾದೌ ಹಸ್ತೌ ಚ ಪತಿತ್ವಾ ದಂಡವತ್ ಕ್ಷಿತೌ |

ಜಾನುಭ್ಯಾಂ ಧರಣೀಂ ಗತ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ |

ಕ್ರಿಯತೇ ಯೋ ನಮಸ್ಕಾರಃ ಉತ್ತಮಕಾಯಿಕಸ್ತು ಸಃ ||


ಎಂಬುದಾಗಿ.


ಕಾಯಿಕ ಉತ್ತಮ:

ಭೂಮಿಯಲ್ಲಿ ದಂಡಾಕಾರವಾಗಿ ಮಲಗಿ, ಹಸ್ತ, ಪಾದಗಳನ್ನು ಚಾಚಿ, ಮಂಡಿ, ತಲೆಗಳಿಂದ ಭೂಮಿಯನ್ನು ಸ್ಪರ್ಶಿಸುತ್ತಾ, ನಮ್ಮ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂತನಲ್ಲಿ ನೆಟ್ಟು ಮಾಡುವ ನಮಸ್ಕಾರವೇ `ಕಾಯಿಕ ಉತ್ತಮ ನಮಸ್ಕಾರ.` ಈ ರೀತಿಯ ನಮಸ್ಕಾರವನ್ನು ಪುರುಷರು ಮಾತ್ರ ಮಾಡಬೇಕು.


ಕಾಯಿಕ ಮಧ್ಯಮ:

ಮಂಡಿಗಳನ್ನು ಭೂಮಿಯಲ್ಲಿ ಊರಿ, ತಲೆಯನ್ನು ಭೂಮಿಗೆ ತಾಗಿಸಿ ಕಣ್ಣನ್ನು ಭಗವಂತನ ಪಾದದಲ್ಲಿಟ್ಟು, ಮನಸ್ಸನ್ನು ಭಗವಂಕನ ರೂಪದಲ್ಲಿಟ್ಟು ಮಾಡುವ ನಮಸ್ಕಾರವೇ `ಕಾಯಿಕ ಮಧ್ಯಮ` ಎಂದೆನಿಸಿಕೊಳ್ಳುತ್ತದೆ.


ಜಾನುಭ್ಯಾಂ ಚ ಕ್ಷಿತಿಂ ಸ್ಪೃಷ್ಟ್ವಾ ಶಿರಸಾ ಸ್ಪೃಶ್ಯ ಮೇದಿನೀಮ್ |

ಕ್ರಿಯತೇ ಯೋ ನಮಸ್ಕಾರಃ ಮಧ್ಯಮಃ ಕಾಯಿಕಸ್ತು ಸಃ ||


ಎಂದು ಹೇಳಿ ಈ ನಮಸ್ಕಾರವನ್ನು ಸ್ತ್ರೀಪುರುಷರಿಬ್ಬರೂ ಮಾಡಬಹುದೆಂದು ಹೇಳಿ, ಮುಂದೆ ಕಾಯಕ ಅಧಮ ನಮಸ್ಕಾರದ ರೀತಿಯನ್ನು  ಹೇಳುತ್ತಿದ್ದಾರೆ


ಕಾಯಿಕ ಅಧಮ:


ಪುಟೀಕೃತ್ಯ ಕರೌ ಶೀರ್ಷೇ ದೀಯತೇ ಯದ್ಯಥಾ ತಥಾ |

ಅಸ್ಪೃಷ್ಟ್ವಾ ಜಾನುಶೀರ್ಷಾಭ್ಯಾಂ ಕ್ಷಿತಿಂ ಸೋಡಧಮ ಉಚ್ಯತೇ ||


ಮಂಡಿ ಮತ್ತು ತಲೆ ಯನ್ನು ಭೂಮಿಗೆ ತಾಗಿಸದೇ, ಕೈಯನ್ನು ತಲೆಯಲ್ಲಿಟ್ಟು ಮಾಡುವ ನಮಸ್ಕಾರವು ಕಾಯಕ ಅಧಮ ನಮಸ್ಕಾರ ಎಂದು ಕರೆಸಿಕೊಳ್ಳುತ್ತದೆ.

ಇಲ್ಲಿ ಒಂದು ಪ್ರಶ್ನೆ ಬರುತ್ತದೆ ಎನೆಂದರೆ? 

ಕಾಯಕ ಉತ್ತಮದ ನಮಸ್ಕಾರವನ್ನು ಪುರುಷರು ಮಾತ್ರ ಎಕೆ ಮಾಡಬೇಕು, ಸ್ತ್ರೀಯರು ಎಕೆ ಮಾಡಬಾರದು ಎಂಬುದಾಗಿ? ಅದಕ್ಕೆ ಉತ್ತರವನ್ನು ಈ ರೀತಿ ಹೇಳುತ್ತಿದ್ದಾರೆ.   


ಬ್ರಾಹ್ಮಣಸ್ಯ ಗುದಂ ಶಂಖಂ ಯೋಷಿತಃ ಸ್ತನಮಂಡಲಮ್ |

ರೇತಃ ಪವಿತ್ರಗ್ರಂಥಿಂ ಚ ನ ಭೂಃ ಧಾರಯಿತುಂ ಕ್ಷಮಾ ||


ಎನೆಂದರೆ ಇಡೀ ಭೂ ಮಂಡಲದ ಭಾರವನ್ನು ಹೊತ್ತಿರುವ ಭೂದೇವಿಯು ಬ್ರಾಹ್ಮಣರ ಗುದಪ್ರದೇಶವನ್ನು, ಶಂಖವನ್ನು, ಸ್ತ್ರೀಯರ ಸ್ತನಮಂಡಲವನ್ನು, ಶುಕ್ಲರೂಪದಲ್ಲಿರುವ ರೇತಸ್ಸನ್ನು, ಧಭರ್ೆಯ ಗ್ರಂಥಿಯನ್ನು ಧರಿಸ ಲಾರಳಂತೆ. ಆದುದರಿಂದ ಸ್ತ್ರೀಯರು ಕಾಯಕ ಉತ್ತಮ ನಮಸ್ಕಾರವನ್ನು ಮಾಡಬಾರದೆಂದು ತಿಳಿಸುತ್ತಾ ಇದನ್ನು ಕೇವಲ ಪುರುಷರಿಗೆ ಮಾತ್ರ ವಿಧಾನ ಮಾಡಿರುವರು. ಅಲ್ಲದೇ! ಪುರುಷರು ಆಸನವಿಲ್ಲದೇ ನೆಲದ ಮೇಲೆ ಕುಳಿತುಕೊಳ್ಳಬಾರದೆಂದೂ ಕೂಡ ವಿಧಾನ ಮಾಡಿರುವರು.


ಪ್ರಣಾಮ ಎಂದರೇನು?

`ಸ್ವಾಪಕರ್ಷಬೋಧಕ, ಪರೋತ್ಕರ್ಷಬೋಧಕ ಕಾಯಕವ್ಯಾಪಾರಃ ನಮಸ್ಕಾರಃ` ಎನ್ನುವ ದುರ್ಗಾದಾಸನ ಮಾತಿನಂತೆ ಪ್ರಣಾಮವೆಂದರೆ ನಮಗಿಂತ ಹಿರಿಯರ ಮುಂದೆ ನಾನು ಅಲ್ಪ ಎನ್ನುವ ಭಾವನೆಯನ್ನು ಪ್ರತಿಬಿಂಬಿಸುವ ದೈಹಿಕ ವ್ಯಾಪಾರದ ಅನುಸಂಧಾನವೇ ನಮಸ್ಕಾರ ವೆಂದು ಗೊತ್ತಾಗುತ್ತದೆ. ಅಲ್ಲದೇ! ಮೇಲೆ ತಿಳಿಸಿದಂತೆ ಕಾಯವನ್ನು ಭೂಮಿಯಲ್ಲಿ ಬೀಳಿಸಿ, ತಲೆ ಯ ಮೇಲುಗಡೆ ಗುಣಾಕಾರದ ಚಿಹ್ನೆ( ) ಯಂತೆ ಎಡಕೈಯ ಮೇಲೆ ಬಲಕೈ ಬರುವಂತೆ ಮಾಡಿ, ನಮ್ಮ ಬಲಕೈ ಭಗವಂತನ ಬಲಪಾದವನ್ನು, ನಮ್ಮ ಎಡಕೈ ಭಗವಂತನ ಎಡಪಾದವನ್ನು ಮುಟ್ಟು ವಂತೆ ಮಾಡುವ ನಮಸ್ಕಾರವೇ ಪ್ರಣಾಮ ಎಂಬುದಾಗಿ ಕಾಲಿಕಾ ಖಂಡವು ಈ ರೀತಿಯಾಗಿ ತಿಳಿಸುತ್ತಿದೆ


ಅಯಮೇವ ನಮಸ್ಕಾರಃ ದಂಡಾದಿಪ್ರತಿಪತ್ತಿಭಿಃ|

ಪ್ರಣಾಮ ಇತಿ ಜ್ಞೇಯಃ ಸ ಪೂರ್ವಪ್ರತಿಪಾದಿತಃ ||


ಎಂಬುದಾಗಿ. ಇಂತಹ ಪ್ರಣಾಮವು ನಮ್ಮಲ್ಲಿರುವ ಅಹಂಕಾರವನ್ನು ಹೊಡೆದೋಡಿಸಿ, ನಾವು ನಮಸ್ಕಾರಾರ್ಹನಿಗಿಂತ ಸಣ್ಣವರು ಎನ್ನುವ ಭಾವನೆಯನ್ನು ಜಾಗೃತಗೊಳಿಸುತ್ತದೆ.

ಇಂತಹ ನಮಸ್ಕಾರದಲ್ಲಿ ಪುನಃ ನಾಲ್ಕುವಿಧಗಳಿವೆ. ಅವುಗಳೆಂದರೆ (1) ಭಕ್ತಿಪೂರ್ವಕ ನಮಸ್ಕಾರ (2) ಅಷ್ಟಾಂಗ ನಮಸ್ಕಾರ (3) ಪಂಚಾಂಗ ನಮಸ್ಕಾರ (4) ಅಭಿವಾದನ ಎಂಬುದಾಗಿ.

    ಸಂಗ್ರಹ :  ವಸಂತಶಾಸ್ತ್ರಿ ರಾ.ಪುರಾಣಿಕ

ಭಗವಂತನಲ್ಲಿ ಪಂಚ ತತ್ವಗಳು

ಗೋ ಭಸ್ಮ ಸಿಗದೇ ಇದ್ದ ಕಾಲದಲ್ಲಿ ಏನು ಮಾಡಬೇಕು?

*ಗೋ ಭಸ್ಮ ಸಿಗದೇ ಇದ್ದ ಕಾಲದಲ್ಲಿ ಏನು ಮಾಡಬೇಕು?*
ವೇ ಬ್ರ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ

ಅಂಗಡಿಯಲ್ಲಿ ದೊರೆಯುವಂತಹ ಭಸ್ಮವನ್ನೇ ತೆಗೆದುಕೊಂಡುಬಂದು ಅದನ್ನು ಸಣ್ಣಗೆ ಪುಡಿಮಾಡಿ ಬಟ್ಟೆಯಿಂದ ಸೋಸಿ ನಂತರ ಗೋಮೂತ್ರದಿಂದ ಅಂದರೆ ಕರುವು ಹಾಲುಕುಡಿಯುತ್ತಿರುವಾಗ ದೊರೆಯುವ ಗೋಮೂತ್ರದಿಂದ ಅದನ್ನು ಕಲಿಸಿ ಉಂಡೆಗಳನ್ನಾಗಿ ಮಾಡಿ ನೆರಳಿನಲ್ಲಿ ಒಣಗಿಸಬೇಕು. ಅಘೋರಮಂತ್ರದಿಂದ ಸುಟ್ಟು ಈಶಾನಮಂತ್ರದಿಂದ ಸಂಗ್ರಹಿಸಬೇಕು. ಅನಿವಾರ್ಯವಾಗಿ ಗೋಭಸ್ಮ ಲಭ್ಯವಾಗದ ಸ್ಥಿತಿಯಲ್ಲಿ ಈ ತರಹ ಮಾಡಿಕೊಂಡ ಭಸ್ಮವನ್ನು ಬಳಸಬಹುದು. ಈ ತರಹದ ಭಸ್ಮಕ್ಕೆ ಉಪಕಲ್ಪಭಸ್ಮ (ಸಿ ಶಿ, ೭.೧೬-೧೭) ಎಂದು ಕರೆಯುವರು. ಉತ್ಕೃಷ್ಟವಾದ ಗೋಮಯದಿಂದ ತಯಾರಾದ ಭಸ್ಮವನ್ನೇ ಬಳಸಬೇಕು. ಅದು ದೊರೆಯದಿದ್ದಾಗ ಈ ತರಹ ಭಸ್ಮ ತಯಾರಿಸಿಕೊಂಡು ಬಳಸಬಹುದು. 

 *ಯೇಷಾಂ ವಪುರ್ಮನುಷ್ಯಾಣಾಂ ತ್ರಿಪುಂಡ್ರೇಣ ವಿನಾ ಸ್ಥಿತಮ್। ಸ್ಮಶಾನಸದೃಶಂ ತಸ್ಮಾನ್ನ ಪ್ರೇಕ್ಷ್ಯಂ ಪುಣ್ಯಕೃಜ್ಜನೈಃ॥ ದಿಗ್ ಭಸ್ಮರಹಿತಂ ಭಾಲಂ ದಿಗ್ ಗ್ರಾಮಮಶಿವಾಲಯಮ್॥* ಅಂದರೆ ಯಾರ ಶರೀರವು ತ್ರಿಪುಂಡ್ರವಿಲ್ಲದೇ ಇರುತ್ತದೆಯೋ ಅವನ ಶರೀರವು ಸ್ಮಶಾನ ಸದೃಶವಾಗಿರುವದು. ಅಂತವರನ್ನು ನೋಡಬಾರದು. ಭಸ್ಮವಿಲ್ಲದಾ ಹಣೆ ಹಾಗೂ  ಶಿವನ ದೇವಾಲಯಗಳಿಲ್ಲದ ಊರುಗಳು ಇವುಗಳಿಗೆ ಧಿಕ್ಕಾರ ಎಂದು ಕ್ರಿಯಾಸಾರ ಭಾಗ ೨. ಪುಟ ೮೪ರಲ್ಲಿ ಉಕ್ತವಾಗಿದೆ.
ವೇ ಬ್ರ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ (ಹೊಸಹಳ್ಳಿ)

ಮಹಾಶಿವರಾತ್ರಿ_ಆಚರಣೆ_ಮತ್ತು_ಹಿನ್ನೆಲೆ

#ಮಹಾಶಿವರಾತ್ರಿ_ಆಚರಣೆ_ಮತ್ತು_ಹಿನ್ನೆಲೆ
ಸಂಗ್ರಹ: ವೇ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ

ಪ್ರತಿ ಸಂವತ್ಸರದಲ್ಲಿ.. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿ ಯಂದು… ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ ಎನ್ನುವ ಪ್ರತೀತಿ.  ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ.. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಯೂ ಇದೆ.

ಸ್ಕಂದ ಪುರಾಣ  ದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದೆ.. ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ… ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು.. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ..

ತ್ರಯೋದಶಿಯು ಶಕ್ತಿರೂಪವಾದರೆ,, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ.

‘ ಶಿವ ಪುರಾಣ ‘ ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ….., ‘ ಸ್ಕಂದ ಪುರಾಣ ‘ದ ಬೇಡ ಚಂದನನ ಕಥೆ…, ‘ ಗರುಡ ಮತ್ತು ಅಗ್ನಿ ಪುರಾಣ ‘ ಗಳಲ್ಲಿ ಬೇಡ ಸುಂದರ ಸೇನನ ಕಥೆ… ಈ ಎಲ್ಲ ಕಥೆಗಳಲ್ಲೂ ಒಂದು ವಿಶೆಷವಾದ ಸಾಮ್ಯತೆಯನ್ನು ಕಾಣಬಹುದು.. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು.  ಇದು ಶಿವರಾತ್ರಿ ಪೂಜೆಯ ಫಲದ ಮಹಿಮೆಯನ್ನು ಎತ್ತಿ ತೋರಿಸುತ್ತದೆ..

ದೇವತೆಗಳು ಮತ್ತು ಅಸುರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ್ತಿರಬೇಕಾದ್ರೆ ಮೊದ್ಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು.. ಆದ್ರೆ ದೇವತೆಗಳು… ಅಸುರರು ಯಾರೂ ಆ ಹಾಲಾಹಲವನ್ನು ಕುಡಿಯೋಕೆ ಮುಂದಾಗಲಿಲ್ಲ.. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು.. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ.. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು… ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ.. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು.. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ.

ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಏಕೆ ?

🌹 *ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಏಕೆ ? ಕಾರಣ ಇಲ್ಲಿದೆ.*  🌹

ಶ್ರಿರಾಮ,ಸೀತೆ,ಲಕ್ಷ್ಮಣರು ವನವಾಸಕ್ಕೆಂದು,ಅಯೋಧ್ಯೆಯಿಂದ ಹೊರಟು,ಗುಹನಿಂದ ಗಂಗೆಯನ್ನು ದಾಟಿ,ಮುಂದೆ ಸಾಗಿ,ದಟ್ಟಡವಿಯನ್ನು ಪ್ರವೇಶಿಸಿದರು.
ನಡೆದು ದಣಿದ  ಸೀತಾಮಾತೆಗೆ ಬಹಳ ಬಾಯಾರಿಕೆಯಾಗಿತ್ತು.
ಅಡವಿಯಲ್ಲಿ ಹತ್ತಿರದಲ್ಲೆಲ್ಲಿಯೂ ನೀರು
ಕಾಣಿಸಲಿಲ್ಲ.ದೂರ ದೂರದ ವರೆಗೆ ಬರೀ ಕಾಡೇ ಕಾಣುತ್ತಿತ್ತು. 
ಆಗ ಶ್ರೀ ರಾಮನು ವಿಧಿಯನ್ನು ಪ್ರಾರ್ಥಿಸಿ,
"ಹೇ,ವನದೇವತೆಯೇ! ಕೃಪೆ ಮಾಡಿ ಎಲ್ಲಾದರೂ ಹತ್ತಿರದಲ್ಲಿ ನೀರಿದ್ದರೆ,ಅಲ್ಲಿಗೆ ಹೋಗುವ ಮಾರ್ಗವನ್ನು ತೋರಿಸು",ಎಂದು ಬೇಡಿಕೊಂಡನು.
ಆಗ ಅಲ್ಲೊಂದು ನವಿಲು ಬಂದು ಶ್ರೀ ರಾಮನಿಗೆಹೇಳಿತು...
"ಇಲ್ಲೇ ಸ್ವಲ್ಪ ದೂರದಲ್ಲಿ ಒಂದು ಜಲಾಶಯವಿದೆ.ನಡೆಯಿರಿ ನಾನು ಮಾರ್ಗವನ್ನು ತೋರಿಸುವೆನು.ಆದರೆ ಮಾರ್ಗದಲ್ಲಿ ನೀವು ದಾರಿ ತಪ್ಪುವ ಸಾಧ್ಯತೆ ಇದೆ" ಎಂದಿತು.
ಶ್ರೀರಾಮನು ಹಾಗೇಕೆ ? ಎಂದು ಕೇಳಿದ್ದಕ್ಕೆ, ನವಿಲು "ನಾನು ಹಾರುತ್ತಾ ಹೋಗುತ್ತೇನೆ.
ನೀವು ನಡೆಯುತ್ತಾ ಬರುವಿರಿ.
ಹಾರುತ್ತಿರುವ ನನ್ನನ್ನು ನೀವು ಹಿಂಬಾಲಿಸಲಾಗದೆ ದಾರಿ ತಪ್ಪಬಹುದು.
ನಿಮಗೆ ದಾರಿ ತಿಳಿಯಲು,ನಾನು ಹಾರುತ್ತ ನನ್ನ ಒಂದೊಂದೇ  ಗರಿಯನ್ನು ಕಿತ್ತು ಕೆಳಗೆ ಹಾಕುತ್ತಾ ಹೋಗುವೆನು.ನೀವು ಬಿದ್ದ ಗರಿಯನ್ನು ಅನುಸರಿಸಿ ಬಂದರೆ ಜಲಾಶಯವನ್ನು ಸುಲಭವಾಗಿ ತಲುಪುವಿರಿ" ಎಂದು ಹೇಳಿತು.

ನವಿಲು ಗರಿಗಳು ವಿಶೇಷ ಸಮಯ ಹಾಗೂ ವಸಂತ ಋತುವಿನಲ್ಲಿ ಮಾತ್ರ ತಾವಾಗಿಯೇ ಉದುರುತ್ತವೆ. ಬಲವಂತವಾಗಿ ತೆಗೆದರೆ ನವಿಲಿನ ಸಾವು ನಿಶ್ಚಿತ.
ಇಲ್ಲಾಗಿದ್ದೂ ಅದೇ!!

ಆ ನವಿಲು ತನ್ನ ಕೊನೆಯ ಗರಿಯನ್ನು ಕಿತ್ತು ಉದುರಿಸಿ,ಕೊನೆಯ ಉಸಿರು ತೆಗೆದುಕೊಳ್ಳುವ ಮುನ್ನ ಅದರ ಮನಸ್ಸಿನಲ್ಲೊಂದು ಭಾವನೆ ಬಂದಿತು.!!

"ಯಾರು ಜಗತ್ತಿನ ಬಾಯಾರಿಕೆಯನ್ನು ತೀರಿಸುವರೋ,ಅಂತಹ ಪ್ರಭುವಿನ ಬಾಯಾರಿಕೆ ತೀರಿಸುವ ಸೌಭಾಗ್ಯ ಇಂದು ನನ್ನ ಪಾಲಿಗೆ ಬಂದಿದೆ.ನನ್ನ ಜೀವನ ಪಾವನವಾಯಿತು.ಇನ್ನು ನನ್ನ ಜೀವನದಲ್ಲಿ ಯಾವ ಆಸೆಯೂ ಉಳಿದಿಲ್ಲ" ಎಂದುಕೊಂಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ಪ್ರಭು ಶ್ರೀರಾಮನು ನವಿಲಿಗೆ ಹೇಳಿದನು.  "ನನಗಾಗಿ ನೀನು ನಿನ್ನ ಗರಿಗಳನ್ನ ಕಿತ್ತು ಜೀವನವನ್ನೇ ತ್ಯಾಗ ಮಾಡುತ್ತಿರುವೆ. ನನ್ನ ಮೇಲೆ ನಿನ್ನ ಋಣವಿದೆ. ಈ ಋಣವನ್ನು ನನ್ನ ಮುಂದಿನ ಅವತಾರದಲ್ಲಿ ಖಂಡಿತವಾಗಿಯೂ ತೀರಿಸುವೆನು.  
ನಿನ್ನ ಗರಿಯನ್ನು ಸದಾ ನನ್ನ ತಲೆಯಲ್ಲಿ  ಧರಿಸುವೆನು" ಎಂದನು.
ನವಿಲಿನ ಪ್ರಾಣಪಕ್ಷಿಯು ಹಾರಿ ಹೋಯಿತು.ಪ್ರಭುವು ಅದಕ್ಕೆ ಮೋಕ್ಷವನ್ನು ಕರುಣಿಸಿದನು.

ಆನಂತರ ಮುಂದಿನ  ಶ್ರೀಕೃಷ್ಣಾವತಾರದಲ್ಲಿ ಸದಾ ತನ್ನ ಮುಕುಟದ ಮೇಲೆ ನವಿಲುಗರಿ ಧರಿಸುವುದರ ಮೂಲಕ ನವಿಲಿಗೆಕೊಟ್ಟ ವಚನವನ್ನು ಈಡೇರಿಸಿದನು.

ಇದರಲ್ಲಿರುವ ತತ್ವ...

ಋಣ ತೀರಿಸಲು,ಭಗವಂತನಿಗೇ ಪುನಃ ಜನ್ಮಧರಿಸ ಬೇಕಾಗುವುದೆಂದಮೇಲೆ,
ನಾವಂತೂ ಹುಲು ಮಾನವರು.ನಾವು ಎಷ್ಟೊಂದು ಋಣದಲ್ಲಿ ಇದ್ದೇವೆ.
ಅಳೆಯಲು ಸಾಧ್ಯವೇ? ಆ ಋಣ ಕಳೆಯಲು ಎಷ್ಟು ಜನ್ಮವೆತ್ತಿ ಬರಬೇಕಾಗುವುದೋ ಏನೋ??
ಆದ್ದರಿಂದ ಬದುಕಿದ್ದಾಗಲೇ ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನು ಮಾಡೋಣ.