ಶಿವ ಪಾರ್ವತಿಗೆ 3 ಜನ ಹೆಣ್ಣು ಮಕ್ಕಳು..
1 : ಮೊದಲ ಮಗಳು "ಅಶೋಕ ಸುಂದರಿ"
2 : ಎರೆಡನೆಯವಳು "ಜ್ಯೋತಿ"
3 :ಮೂರನೇ ಮಗಳು "ಮಾನಸ"
ಇದರಲ್ಲಿ ಮಾನಸದೇವಿ ಪಾತ್ರವು ತುಂಬಾ ಮುಖ್ಯವಾದದ್ದು ಹಾಗೂ ಮನಸದೇವಿಯು ತುಂಬಾ ಕಷ್ಟವನ್ನು ಪಡಬೇಕಾದ ಸಂಧರ್ಭ ಕೂಡ ಇತ್ತು..
ಮಾನಸ ದೇವಿಯು 2 ಉದ್ದೇಶವನ್ನು ಪೂರ್ಣಗೊಳಿಸಲು ಜನ್ಮ ತಾಳಿದವಳು
1) ಒಂದನೇಯ ಉದ್ದೇಶ..
ಸಮುದ್ರ ಮಂಥನದ ಹಾಲಹಲ ವಿಷವನ್ನು ಶಿವ ಸೇವಿಸಿದಾಗ ಆ ವಿಷದ ಪ್ರಭಾವವನ್ನು ಕಡಿಮೆ ಮಾಡಲು..
2) ಎರೆಡನೆ ಉದ್ದೇಶ..
ದ್ವಾಪರಯುಗದ ಮಹಾಭಾರತದ ಜನಮೇಜಯನ ನಾಗಬಲಿ ಯಜ್ಞವನ್ನು ನಿಲ್ಲಿಸಿ. ಇಡಿ ನಾಗಲೋಕದ ನಾಗಗಳನ್ನು ರಕ್ಷಣೆ ಮಾಡುವ ಉದ್ದೇಶ.
ಮಾನಸದೇವಿಯ ಜನ್ಮದ ಬಗ್ಗೆ ತಿಳಿಯೋಣ ಈಗ
ಸಮುದ್ರ ಮಂಥನದಲ್ಲಿ ಬಂದಂತಹ ಭಯಂಕರ ಹಾಲಹಲ ವಿಷವು ಸ್ರಷ್ಟಿಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಆ ವಿಷವನ್ನು ಶಿವನು ತನ್ನೊಳೋಗೆ ಸೇವಿಸುತ್ತಾನೆ..
ಪಾರ್ವತಿ ದೇವಿಯು ಆ ವಿಷವು ಶಿವನ ಗಂಟಲಿನಲ್ಲಿ ನಿಲ್ಲುವ ಹಾಗೆ ಮಾಡುತ್ತಾಳೆ. ಆದರೂ ಕೂಡ ಆ ವಿಷವು ಶಿವನ ಮೇಲೆ ತುಂಬಾ ನೋವಿನ ಪರಿಣಾಮ ಬೀರುತ್ತಾ ಇರುತ್ತದೆ..
"ಕಶ್ಯಪ ಋಷಿ"
ಇದನ್ನು ಅರ್ಥ ಮಾಡಿ ಕೊಂಡಂತ " ಕಶ್ಯಪ ಋಷಿ "
ಒಂದು ಯಜ್ಞವನ್ನು ಮಾಡುತ್ತಾರೆ. ಶಿವನ ಕಷ್ಟ ದೂರ ಮಾಡಬೇಕು ಎಂದು ಯಜ್ಞವನ್ನು ಮಾಡುತ್ತಾ ಮನಸ್ಸಿನಲ್ಲಿ ಮಾನಸಿಕ ಕಲ್ಪನೆಯನ್ನು ಮಾಡುತ್ತಾರೆ. ಕಶ್ಯಪ ಋಷಿಯ ಮಾನಸಿಕ ಕಲ್ಪನೆಯಿಂದ ಒಂದು ಸುಂದರವಾದ ಯುವತಿಯ ವಿಗ್ರಹವು ರಚನೆ ಆಗುತ್ತದೆ.
ಶಿವನ ತೇಜಸ್ಸಿನಿಂದ ಸುಬ್ರಹ್ಮಣ್ಯ ಸ್ವಾಮಿಯ ಜನ್ಮವಾಗುವ ಸಮಯದಲ್ಲಿ ಅದರ ಒಂದು ಭಾಗ ತೇಜಸ್ಸು ಹೋಗಿ..
ಕಶ್ಯಪ ಋಷಿಯ ಮಾನಸಿಕ ಕಲ್ಪನೆಯಿಂದ ರಚನೆಯಾದ ಆ ವಿಗ್ರಹದ ಒಳಗೆ ಆ ತೇಜಸ್ಸು ಹೋಗಿ ಸೇರಿಕೊಂಡು ಆ ವಿಗ್ರಹಕ್ಕೆ ಜೀವ ಬರುತ್ತದೆ..
ನಂತರ ಆ ಹುಡುಗಿಯು ಕಶ್ಯಪ ಋಷಿಗೆ ನಮಸ್ಕರಿಸಿ ಋಷಿವರ್ಯ ನಾನು ಯಾರು ನನ್ನ ಜನ್ಮ ಯಾವ ಉದ್ದೇಶಕ್ಕಾಗಿ ಆಗಿದೆ ತಿಳಿಸಿ ಎನ್ನುತ್ತಾಳೆ..
ದೇವಿ ನಿಮ್ಮ ಜನ್ಮವು ಶಿವನ ಕೃಪೆಯಿಂದ ಆಗಿದೆ. ಶಿವನ ತೇಜಸ್ಸಿನಿಂದ ನಿಮ್ಮ ಜನ್ಮವಾಗಿದೆ ಹಾಗಾಗಿ ನೀವು ಶಿವನ ಪುತ್ರಿ..
ಹಾಗೆ ಶಿವನ ಕೃಪೆಯಿಂದ ನೀವು ನನ್ನ ಮಾನಸಿಕ ಕಲ್ಪನೆಯ ವಿಗ್ರಹ ರೂಪದಲ್ಲಿ ರಚನೆಯಾದ ಕಾರಣ ನಿಮ್ಮ ಹೆಸರು
" ಮಾನಸ " ಎಂದು ಕಶ್ಯಪ ಋಷಿ ಹೇಳುತ್ತಾರೆ.
ಋಷಿವರ್ಯ ನೀವು ನನ್ನ ಹೆಸರನ್ನು ನೀಡಿದಕ್ಕೆ ತುಂಬಾ ಧನ್ಯವಾದಗಳು ಹಾಗೆ ನನ್ನ ಜನ್ಮದ ಉದ್ದೇಶವನ್ನು ಕೂಡ ತಿಳಿಸಿ ನನ್ನನ್ನು ಮಾರ್ಗದರ್ಶನ ಮಾಡಿ ಎಂದು ಮಾನಸದೇವಿಯು ಕೇಳಿ ಕೊಳ್ಳುತ್ತಾಳೆ..
ದೇವಿ ಮಾನಸ ನಿಮ್ಮ ಜೀವನದ ಉದ್ದೇಶ ಸಮಯ ಬಂದಾಗ ನಿಮಗೆ ತಿಳಿಯುತ್ತದೆ.. ತಪಸ್ಸು ನಿಮ್ಮನ್ನು ನಿಮ್ಮ ಜೀವನದ ಉದ್ದೇಶದ ಕಡೆಗೆ ಕರೆದುಕೊಂಡು ಹೋಗುತ್ತದೆ ತಪಸ್ಸನ್ನು ಆಚರಿಸಿ ಎಂದು ಋಷಿ ಕಶ್ಯಪ ಹೇಳುತ್ತಾರೆ..
ಋಷಿ ಕಶ್ಯಪರು ಹೇಳಿದ ಹಾಗೆ ಮಾನಸ ದೇವಿಯು ತಪಸ್ಸು ಮಾಡುತ್ತಾಳೆ ಆ ತಪಸ್ಸಿನ ಫಲವಾಗಿ ಶಿವನು ಪ್ರತ್ಯಕ್ಷವಾಗಿ ಮಾನಸದೇವಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಕೈಲಾಸದಲ್ಲಿ ಮನಸದೇವಿಯು ತನ್ನ ತಾಯಿಯಾದ ಪಾರ್ವತಿಯನ್ನು ಭೇಟಿ ಆಗಿ ಸಂತೋಷದಿಂದ ಇರುತ್ತಾಳೆ
ನಂತರ ಸಮುದ್ರ ಮಂಥನದ ಸಮಯದಲ್ಲಿ ಅದರಿಂದ ಬಂದಂತ ಹಾಲಹಲವಿಷವನ್ನು ಶಿವನು ಸೇವಿಸಿದಾಗ ಆ ವಿಷವು ಶಿವನ ಮೇಲೆ ಘೋರವಾಗಿ ಕೆಟ್ಟ ಪರಿಣಾಮ ಬೀರುತ್ತಾ ಇರುತ್ತದೆ..
ಅಮ್ಮ..ಏನಿದು ವಾತಾವರಣದಲ್ಲಿ ಯಾಕಿಷ್ಟು ಬದಲಾವಣೆ ಆಗುತ್ತಿದೆ ಎಂದು ಮಾನಸದೇವಿ ಪಾರ್ವತಿಯ ಬಳಿ ಕೇಳುತ್ತಾಳೆ..
ಪುತ್ರಿ.. ನಿನ್ನ ತಂದೆ ಮಹಾದೇವನ ಗಂಟಲಿನಲ್ಲಿ ಇರುವ ಹಾಲಹಲ ವಿಷವು ಅವರಿಗೆ ತುಂಬಾ ಕಷ್ಟವನ್ನು ಕೊಡುತ್ತಿದೆ ಹಾಗಾಗಿ ವಾತಾವರಣದಲ್ಲಿಯೂ ಈ ರೀತಿ ಬದಲಾವಣೆಗಳು ಆಗುತ್ತಿವೆ ಎಂದು ಪಾರ್ವತಿ ದೇವಿ ಹೇಳುತ್ತಾಳೆ..
( ಮಾನಸದೇವಿಯು ಶಿವನ ವಿಷದ ಪ್ರಭಾವವನ್ನು ಕಡಿಮೆ ಮಾಡುವ ಸಂಧರ್ಭ.)
ಆಗ ಮಾನಸದೇವಿಗೆ ತನ್ನ ಜೀವನದ ಉದ್ದೇಶವು ಅರ್ಥ ವಾಗುತ್ತದೆ.. ಏಕೆಂದರೆ ಅವಳು ಋಷಿ ಕಶ್ಯಪರ ಹತ್ತಿರ ತನ್ನ ಜೀವನದ ಉದ್ದೇಶ ಕೇಳಿದಾಗ..
ಆಗ ಅವರು " ಜಗತ್ತಿನ ಕಷ್ಟ ಹರಿಸುವವನ ಕಷ್ಟವನ್ನು ನೀನು ಹರಿಸಬೇಕು ಎಂದು ಹೇಳಿದ್ದರು "..
ಹಾಗಾಗಿ ಮಾನಸದೇವಿಗೆ ಅರ್ಥ ವಾಗುತ್ತದೆ. ಈಗ ನಾನೆ ಶಿವನ ಕಷ್ಟವನ್ನು ದೂರ ಮಾಡಬೇಕು ನನ್ನ ಜೀವನದ ಉದ್ದೇಶ ಪೂರ್ಣ ಗೊಳಿಸಬೇಕು ಎಂದು.
ಮಾನಸದೇವಿಯು ಕೂಡಲೇ ಶಿವನು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಮಂಡಿಯೂರಿ ಕುಳಿತುಕೊಂಡು ಶಿವನ ಗಂಟಲಿನಲ್ಲಿ ಶಿವನಿಗೆ ನೋವನ್ನು ಕೊಡುತ್ತಿರುವ ಹಾಲಹಲದ ವಿಷದ ಪ್ರಭಾವವನ್ನು ತನ್ನೊಳೋಗೆ ಹೀರಿಕೊಳ್ಳುತ್ತಾಳೆ. ಶಿವನ ಹಾಲಹಲದ ವಿಷದ ಪ್ರಭಾವವನ್ನು ಕೇವಲ ಅವರ ಮಗಳಾದ ಮಾನಸ ದೇವಿಗೆ ಮಾತ್ರ ಸಹಿಸಿಕೊಳ್ಳಲು ಸಾಧ್ಯವಾಗಿತ್ತು ಹಾಗಾಗಿ ಅವಳು ಆ ವಿಷದ ಪ್ರಭಾವವೆಲ್ಲ ತನ್ನೊಳೋಗೆ ತೆಗೆದುಕೊಳ್ಳುತ್ತಾಳೆ.
ತಾಯಿಯರ ಕಷ್ಟವನ್ನು ದೂರ ಮಾಡುವ ಸಾಮರ್ಥ್ಯ ಕೇವಲ ಸಂತಾನಕ್ಕೆ ಮಾತ್ರ ಇರುತ್ತದೆ ಎಂದು ಶಿವ ಹಾಗೂ ಪಾರ್ವತಿ ಮಾನಸದೇವಿಯನ್ನು ತುಂಬಾ ಹೆಮ್ಮೆಯಿಂದ ಹೋಗುಳುತ್ತಾರೆ
ಬ್ರಹ್ಮದೇವ ಹಾಗೂ ವಿಷ್ಣು ದೇವ
ಮಾನಸದೇವಿಗೆ " ವಿಷಹರಿ " ಎಂಬ ಹೆಸರನ್ನು ಯಾಕೆ ಕೊಟ್ಟರು ಅಂತ ನೋಡಿ..
ದೇವಿ ಮಾನಸ..ಹಾಲಹಲ ವಿಷವನ್ನು ಕೇವಲ ಶಿವನು ಮಾತ್ರ ಸೇವಿಸಬಲ್ಲರು ಅಂತಹ ವಿಷವನ್ನು ನೀವು ಸೇವಿಸಿ ಶಿವನ ಕಷ್ಟವನ್ನು ದೂರ ಮಾಡಿದ್ದೀರಾ. ಹಾಗಾಗಿ ಇನ್ನುಮುಂದೆ ಇಡಿ ಜಗತ್ತು ನಿಮ್ಮನ್ನು "ವಿಷಹರಿ" ಎಂದು ಗುರುತಿಸುತ್ತಾರೆ ಎಂದು ಬ್ರಹ್ಮದೇವನು ಮಾನಸದೇವಿಗೆ "ವಿಷಹರಿ" ಎಂಬ ಹೆಸರನ್ನು ಕೊಟ್ಟು ವರದಾನ ಕೊಡುತ್ತಾರೆ..
ದೇವಿ ಮಾನಸ..ಇನ್ನುಮುಂದೆ ಭಕ್ತರ ಮೇಲೆ ನಿಮ್ಮ ದ್ರಷ್ಟಿ ಬಿದ್ದರೆ ಆ ಭಕ್ತರು ಎಲ್ಲ ರೀತಿಯ ಭಯಂಕರ ವಿಷದಿಂದ ಮುಕ್ತಾರಾಗುತ್ತಾರೆ ಎಂದು " ವಿಷ್ಣುದೇವ" ಕೂಡ ಮಾನಸದೇವಿಗೆ ವರವನ್ನು ಕೊಡುತ್ತಾನೆ..
ಈ ರೀತಿ ಮಾನಸದೇವಿಯು ಶಿವನನ್ನು ಹಾಲಹಲ ವಿಷದ ಪ್ರಭಾವದಿಂದ ಮುಕ್ತಗೊಳಿಸಿ.. ತನ್ನ ಜೀವನದ ಮೊದಲ ಉದ್ದೇಶವನ್ನು ಪೂರ್ಣಗೊಳಿಸುತ್ತಾಳೆ.
ಈಗ ಮಾನಸದೇವಿ ಜೀವನದ 2 ನೇಯ ಉದ್ದೇಶ ಬಗ್ಗೆ ತಿಳಿಯೋಣ ಬನ್ನಿ..
ನಂತರ ಶಿವನು ಮಾನಸದೇವಿಯ ಹತ್ತಿರ ಮಗಳೇ ನೀನು ಈಗ ನಿನ್ನ ಜೀವನದ ಇನ್ನೊಂದು ಮಹಾನ್ ಉದ್ದೇಶವನ್ನು ಪೂರ್ಣಗೊಳಿಸಬೇಕಾಗಿದೆ..ಎಂದು ಶಿವನು ಹೇಳುತ್ತಾನೆ..
ಸರಿ ಪಿತಾಶ್ರೀ ಈಗ ನಾನು ಏನು ಮಾಡಬೇಕು ಮಾರ್ಗದರ್ಶನ ಮಾಡಿ ಎಂದು ಮಾನಸದೇವಿ ಹೇಳುತ್ತಾಳೆ.
ಮಗಳೇ ಮಾನಸ ನಾನು ನಿನಗೆ ಕೃಷ್ಣನ ಮಂತ್ರ ಹೇಳುತ್ತೇನೆ ನೀನು ಪುಷ್ಕರಕ್ಕೆ ಹೋಗಿ ಈ ಕೃಷ್ಣ ಮಂತ್ರ ಹೇಳುತ್ತಾ ತಪಸ್ಸು ಮಾಡು. ನಿನ್ನ ಜೀವನದ 2 ನೇಯ ಉದ್ದೇಶ ನಿನಗೆ ತಿಳಿಯುತ್ತದೆ ಎಂದು ಶಿವನು ಹೇಳುತ್ತಾನೆ.
ಮಾನಸದೇವಿಯು ಸ್ವಲ್ಪ ಕೂಡ ತಡ ಮಾಡದೆ ಪುಷ್ಕರಕ್ಕೆ ಹೋಗಿ ಕೃಷ್ಣನ ವಿಗ್ರಹಕ್ಕೆ ಹೂವನ್ನು ಅರ್ಪಿಸಿ ಕೃಷ್ಣನ ಮಂತ್ರ ಹೇಳುತ್ತಾ ತಪಸ್ಸು ಮಾಡುತ್ತಾಳೆ.
ಈಕಡೆ ಕೈಲಾಸದಲ್ಲಿ ಶಿವ ಪಾರ್ವತಿ ಇಬ್ಬರು ಮಾನಸದೇವಿಯ ಮದುವೆಯ ಬಗ್ಗೆ ಮಾತಾಡಿ ಕೊಳ್ಳುತ್ತಾರೆ. ನಮ್ಮ ಮಗಳ ವಿವಾಹಕ್ಕೆ ವರ ಯಾರು ಎಂದು ಪಾರ್ವತಿ ಕೇಳುತ್ತಾಳೆ ಆಗ ಶಿವನು ಋಷಿ "ಜರಾತ್ಕಾರುವಿನ" ಜೊತೆ ನಮ್ಮ ಮಗಳ ಜೊತೆ ಆಗುತ್ತದೆ ಪಾರ್ವತಿ..
ಮಾನಸ ಋಷಿ ಜರತ್ಕಾರುವನ್ನು ಮದುವೆ ಆದಮೇಲೆಯೆ ನಾಗಕುಲದ ರಕ್ಷಣೆ ಆಗುತ್ತದೆ ಎಂದು ಶಿವ ಹೇಳುತ್ತಾನೆ. ಮತ್ತೇಕೆ ತಡ ಸ್ವಾಮಿ. ಆದಷ್ಟು ಬೇಗ ಇಬ್ಬರಿಗೂ ಮದುವೆ ಮಾಡಿಸೋಣ ಎಂದು ಪಾರ್ವತಿ ಹೇಳುತ್ತಾಳೆ.
ಶಿವನು ಕೂಡಲೇ ತನ್ನ ಕೊರಳಿನಲ್ಲಿ ಇರುವ ನಾಗಗಳ ರಾಜನಾದ ವಾಸುಕಿ ನಾಗನ ಹತ್ತಿರ ನೀನು ಈಗ ಮಾನಸದೇವಿಗೆ ಅಣ್ಣನ ಸ್ಥಾನದಲ್ಲಿ ನಿಂತುಕೊಂಡು ಋಷಿ ಜಾರತ್ಕಾರು ಬಳಿ ಹೋಗಿ ಮದುವೆ ಪ್ರಸ್ತಾಪವನ್ನು ತಿಳಿಸಬೇಕು ಎಂದು ಹೇಳುತ್ತಾನೆ..
ನಾಗಗಳ ರಾಜನದ ವಾಸುಕಿ ಶಿವನ ಗಣಗಳ ಜೊತೆಗೆ ಋಷಿ ಜರಾತ್ಕಾರು ಆಶ್ರಮಕ್ಕೆ ಹೋಗುತ್ತಾರೆ..
ಋಷಿ ಜರತ್ಕಾರು ನಿಮಗೆ ಪ್ರಣಾಮಗಳು. ನಾನು ಇಲ್ಲಿಗೆ ನನ್ನ ತಂಗಿ ಮಾನಸಳ ಮದುವೆ ಪ್ರಸ್ತಾಪವನ್ನು ತಂದಿದ್ದೇನೆ.. ನನ್ನ ತಂಗಿ ಮಾನಸ ಮಹಾನ್ ತಪಸ್ವಿನೀ ಹಾಗು ಶಿವ ಪಾರ್ವತಿಯ ಮಗಳು ನೀವು ಈಗ ದಯಮಾಡಿ ಈ ಮದುವೆ ಪ್ರಸ್ತಾಪವನ್ನು ಸ್ವೀಕರಿಸಿ ನನ್ನ ತಂಗಿ ಮಾನಸಳನ್ನು ಮದುವೆ ಆಗಬೇಕಾಗಿದೆ ವಿನಂತಿಸುತ್ತೇವೆ ಎಂದು ವಾಸುಕಿ ನಾಗ ಕೇಳುತ್ತಾನೆ.
ನಾಗರಾಜ ವಾಸುಕಿ ದಯಮಾಡಿ ಕ್ಷಮಿಸಿ, ನಾನು ಶಿವನ ಭಕ್ತ ಕೇವಲ ಶಿವನ ಪೂಜೆ ಮಾಡುತ್ತೇನೆ ಹಾಗೂ ಸಂಸಾರ ಜೀವನದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದೇನೆ ಹಾಗಾಗಿ ನಾನು ಯಾರನ್ನು ಮದುವೆ ಆಗಲಾರೆ ಎಂದು ಋಷಿ ಜರತ್ಕಾರು ಹೇಳುತ್ತಾನೆ..
ಆದರೂ ಒತ್ತಾಯ ಮಾಡಿದ ಕಾರಣ ಮದುವೆಗೆ ಒಪ್ಪುತ್ತಾನೆ ಆದರೆ 3 ಷರತ್ತು ಹಾಕುತ್ತಾನೆ.
ಷರತ್ತು ಒಂದು : ನಾನು ಮದುವೆ ಆಗುವ ಹುಡುಗಿಯ ಹೆಸರು ನನ್ನ ಹೆಸರೇ ಆಗಿರಬೇಕು ಅಂದರೆ ಜರಾತ್ಕರು ಅಂತಾನೆ ಆಗಿರಬೇಕು.
ಷರತ್ತು ಎರೆಡು : ನಾನು ಮದುವೆ ಆದಮೇಲೆ ನಾನು ನನ್ನ ಪತಿಧರ್ಮವನ್ನು ನಿಭಾಯಿಸುವಿದಿಲ್ಲ ಪತ್ನಿ ಅಂತ ಅವಳನ್ನು ಪೋಷಣೆ ಮಾಡುವುದಿಲ್ಲ..
ಷರತ್ತು ಮೂರು : ನಾನು ಮದುವೆ ಆದಮೇಲೆ ನನ್ನ ಪತ್ನಿ ಆದವಳು ನನ್ನ ಎಲ್ಲ ಕೆಲಸಗಳನ್ನು ಮಾಡಬೇಕು ಒಂದು ಚೂರು ತಪ್ಪು ಆದರೂ ಕೂಡ ನಾನು ಅವಳನ್ನು ಬಿಟ್ಟು ಬಿಡುತ್ತೇನೆ ಎಂದು ಋಷಿ ಜರತ್ಕಾರು ಹೇಳುತ್ತಾನೆ..
ಇಂತಹ ಷರತ್ತುಗಳನ್ನು ಕೇಳಿ ನಾಗಗಳ ರಾಜನಾದ ವಾಸುಕಿಗೆ ತುಂಬಾ ದುಃಖ ಆಗುತ್ತದೆ. ಈ ಎಲ್ಲ ವಿಚಾರವನ್ನು ಅವನು ಮಾನಸದೇವಿಯ ಬಳಿ ಹೇಳುತ್ತಾನೆ..
ಆಗ ಮಾನಸದೇವಿಗೂ ತುಂಬಾ ಆಘಾತವಾಗುತ್ತದೆ. ಯಾವ ಗಂಡನಾದವನು ಕೂಡ ಇಂತಹ ಷರತ್ತುಗಳನ್ನು ಹಾಕುವುದಿಲ್ಲ.. ಇಂತಹ ಷರತ್ತುಗಳನ್ನು ಹಾಕುವ ಗಂಡನನ್ನು ಕೂಡ ಯಾವುದೇ ಸ್ತ್ರೀ ಮದುವೆ ಆಗುವುದಿಲ್ಲ. ನಾನು ಕೂಡ ಈ ಮದುವೆ ಆಗುವುದಿಲ್ಲ ಎಂದು ಮಾನಸದೇವಿ ಹೇಳುತ್ತಾಳೆ..
ಆಗ ಅಲ್ಲಿಗೆ ಎಲ್ಲ ದೇವತೆಗಳು ಹಾಗೂ ಋಷಿ ಕಶ್ಯಪ ಬರುತ್ತಾರೆ.. ದೇವಿ ಮಾನಸ ದಯಮಾಡಿ ನೀವು ಈ ಮದುವೆ ಆಗಲೇ ಬೇಕು. ಜನಮೇಜಯ ರಾಜನು ಇಡಿ ನಾಗಲೋಕದ ನಾಗಗಳನ್ನು ಬಲಿ ಕೊಡಲು ಯಜ್ಞವನ್ನು ಮಾಡಲು ನಿರ್ಧಾರ ಮಾಡಿದ್ದಾನೆ.. ಒಂದು ವೇಳೆ ನೀವು ಜರತ್ಕಾರುವನ್ನು ಮದುವೆ ಆಗದೆ ಹೋದರೆ.. ಎಲ್ಲ ನಾಗವಂಶವು ಜನಮೇಜಯನ ಯಜ್ಞ ಕುಂಡದ ಒಳಗೆ ಬಿದ್ದು ಸುಟ್ಟು ಭಸ್ಮವಾಗಿ ಇಡಿ ನಾಗಕುಲ ನಾಶವಾಗುತ್ತದೆ ಎಂದು ಋಷಿ ಕಶ್ಯಪ ಹೇಳುತ್ತಾರೆ.
ಆಧಿಶೇಷ ನಾಗನು ಕೂಡ ಅಲ್ಲಿಗೆ ಬಂದು ಬೇಡಿಕೊಳ್ಳುತ್ತಾನೆ. ದೇವಿ ಮಾನಸ ನೀವು ಮದುವೆಗೆ ಒಪ್ಪದೇ ಇದ್ದರೆ ಶಿವನ ಕೊರಳಲ್ಲಿ ಇರುವ ವಾಸುಕಿಯು ಇರುವುದಿಲ್ಲ ಹಾಗೆ ವಿಷ್ಣುವಿನ ಹಾಸಿಗೆಯಾಗಿ ನಾನು ಕೂಡ ಇರುವುದಿಲ್ಲ ಒಂದೇ ಒಂದು ನಾಗಗಳು ಉಳಿಯುವುದಿಲ್ಲ ದಯಮಾಡಿ ಮದುವೆಗೆ ಒಪ್ಪಿಕೊಳ್ಳಿ ಎಂದು ಎಲ್ಲರೂ ಬೇಡಿಕೊಳ್ಳುತ್ತಾರೆ..
ಚಿಂತಿಸಬೇಡಿ ನಾಗಗಳು ನಾಶವಾಗಿ ನಾಗಲೋಕ ಅಂತ್ಯವಾಗಲು ನಾನು ಬಿಡುವುದಿಲ್ಲ. ಋಷಿ ಕಶ್ಯಪರೇ ನಿಮ್ಮ ಮಾನಸಿಕ ಕಲ್ಪನೆಯಿಂದ ನಾನು ವಿಗ್ರಹ ರೂಪದಲ್ಲಿ ಜನಿಸಿದ್ದೆ ಹಾಗಾಗಿ.. ನೀವು ಮತ್ತು ನಿಮ್ಮ ಪತ್ನಿಯಾದ ದೇವಿ ಕದ್ರು ನೀವಿಬ್ಬರು ನನಗೆ ತಂದೆ ತಾಯಿಯ ಸಮಾನ. ಹಾಗಾಗಿ ನೀವು ಮತ್ತು ಮಾತೆ ಕದ್ರು ಸೇರಿ ನನ್ನ ಕನ್ಯಾಧಾನ ಮಾಡಿಸಿ ಮದುವೆ ಮಾಡಿ ಎಂದು ಮಾನಸದೇವಿ ಹೇಳುತ್ತಾಳೆ. ನಂತರ ಅದೇ ರೀತಿ ಮಾನಸದೇವಿ ಹಾಗೂ ಋಷಿ ಜರತ್ಕಾರುವಿನ ಮದುವೆ ಅದ್ಧುರಿಯಾಗಿ ನಡಿಯುತ್ತದೆ..
ಮದುವೆ ಆದಮೇಲೆ ಮಾನಸದೇವಿ ತುಂಬಾ ಕಷ್ಟ ಪಡಬೇಕಾಗುತ್ತದೆ.. ಏಕೆಂದರೆ ಅವಳ ಗಂಡ ಜರತ್ಕಾರು ಬೇಕು ಅಂತಾನೆ ಕೆಲಸಗಳನ್ನು ಕೊಡುತ್ತಿದ್ದ ಆದರೆ ಅವನು ಅವಳಿಗೆ ನೋವು ಆಗಬೇಕು ಎಂದು ಹಾಗೆ ಮಾಡುತ್ತ ಇರಲಿಲ್ಲ ಬದಲಿಗೆ ಮಾನಸ ಏನಾದರೂ ಕೆಲಸದಲ್ಲಿ ಚಿಕ್ಕ ತಪ್ಪು ಮಾಡಲಿ ಅದೇ ನೆಪ ಇಟ್ಟುಕೊಂಡು ಸಂಸಾರ ಜೀವನ ಬಿಟ್ಟು ಹೋಗಬಹುದು ಎಂದು ಜರತ್ಕಾರುವಿನ ಯೋಚನೆ ಆಗಿತ್ತು..
ಆದರೆ ಮಾನಸದೇವಿ ಒಂದೇ ಒಂದು ತಪ್ಪು ಕೂಡ ಮಾಡುತ್ತಿರಲಿಲ್ಲ.. ಗಂಡ ಹೇಳಿದ ಎಲ್ಲ ಕೆಲಸವನ್ನು ಮಾಡುತ್ತಿದ್ದಳು.. ಜರತ್ಕಾರುವಿಗೆ ಮಾನಸದೇವಿಯ ಒಂದೇ ಒಂದು ತಪ್ಪು ಕೂಡ ಸಿಗುತ್ತಿರಲಿಲ್ಲ ಅಷ್ಟರ ಮಟ್ಟಿಗೆ ಮಾನಸದೇವಿಯು ಜರತ್ಕಾರುವಿನ ಸೇವೆ ಮಾಡುತ್ತಿದ್ದಳು
ಹೀಗೆ ಸ್ವಲ್ಪ ದಿನಗಳು ಆದ ನಂತರ
ಒಂದು ದಿನ ಜರಾತ್ಕಾರು ಹೇಳುತ್ತಾನೆ ದೇವಿ ಮಾನಸ ನಾನು ನಿಮ್ಮ ತೊಡೆಯ ಮೇಲೆ ನಿದ್ರೆ ಮಾಡುತ್ತೇನೆ ಎಂದು ಮಲಗುತ್ತಾನೆ..
ಋಷಿ ಜರತ್ಕಾರುವಿಗೆ ತಿಳಿದಿತ್ತು ನಾನು ದಿನನಿತ್ಯ ಸೂರ್ಯ ಮುಳುಗುವ ವೇಳೆ ಸಂಧ್ಯಾವಂದನೆ ಮಾಡುತ್ತೇನೆ
ಹಾಗಾಗಿ ದೇವಿ ಮಾನಸ ಖಂಡಿತ ನನ್ನನ್ನು ನಿದ್ರೆಯಿಂದ ಎಬ್ಬಿಸುತ್ತಾಳೆ ಅವಳು ಎಬ್ಬಿಸಿದ ಕೂಡಲೇ ನೀವು ನನ್ನ ನಿದ್ರೆ ಹಾಳು ಮಾಡಿ ನನ್ನ ಷರತ್ತು ಮುರಿದ್ದಿದ್ದೀರಾ ಎಂದು ನಾನು ಸಂಸಾರ ಜೀವನವನ್ನು ಮುರಿದುಕೊಂಡು ಬಿಟ್ಟು ಹೋಗಬಹುದು ಅಂತ ಜರಾತ್ಕಾರು ಯೋಚನೆ ಮಾಡುತ್ತಾನೆ
ಅದೇ ಪ್ರಕಾರ ಮಾನಸ ಅವನನ್ನು ನಿದ್ರೆಯಿಂದ ಎಬ್ಬಿಸುತ್ತಾಳೆ ಕೂಡಲೇ ಜರಾತ್ಕಾರು ಅವಳನ್ನು ಬಿಟ್ಟು ಹೊರಡಲು ಸಿದ್ದನಗುತ್ತಾನೆ ಆದರೆ ಮಾನಸದೇವಿ ಸ್ವಲ್ಪ ಕೂಡ ಬೇಸರ ಪಟ್ಟು ಕೊಳ್ಳುವುದಿಲ್ಲ ಗಂಡನ ಮಾತಿಗೆ ಎದುರು ಮಾತಾಡದೆ ಸುಮ್ಮನೆ ಆಗುತ್ತಾಳೆ ಏನನ್ನು ಪ್ರಶ್ನೆ ಮಾಡುವುದಿಲ್ಲ..
ಸ್ವಾಮಿ ನೀವು ನಿಮ್ಮ ಷರತ್ತಿನ ಪ್ರಕಾರ ನನ್ನನ್ನು ಬಿಟ್ಟು ಸಂಸಾರ ಜೀವನದಿಂದ ಮುಕ್ತರಾಗಬಹುದು ಎಂದು ಹೇಳುತ್ತಾಳೆ.. ಆಗ ಋಷಿ ಜರಾಕಾರುವಿಗೆ ತುಂಬಾ ದುಃಖ ಆಗುತ್ತದೆ ತನ್ನ ಹೆಂಡತಿ ಮಾನಸಳ ಪ್ರೀತಿ ತ್ಯಾಗ ಎಂತದ್ದು ಎಂದು ಅವನು ಅರಿತುಕೊಂಡು ಮತ್ತೆ ಮಾನಸ ದೇವಿಯ ಜೊತೆ ಸಂತೋಷದ ಜೀವನ ನಡೆಸುತ್ತಾನೆ
( ಮಹಾಭಾರತದ ಜನಮೇಜಯನ ನಾಗಬಲಿ ಯಜ್ಞವನ್ನು ನಿಲ್ಲಿಸುವ ಸಮಯ..)
ಋಷಿ ಜರಾತ್ಕಾರು ಹಾಗೂ ಮಾನಸದೇವಿಗೆ ಒಬ್ಬ ಮಗ ಜನಿಸುತ್ತಾನೆ.. ಇವನಿಗೆ " ಆಸ್ತಿಕ " ಎಂದು ನಾಮಕರಣ ಮಾಡುತ್ತಾರೆ..ನಂತರ ಅವನು ದೊಡ್ಡವನಗುತ್ತಾನೆ..
ಪುತ್ರ " ಆಸ್ತಿಕ " ನೀನು ಈಗ ಜನಮೇಜಯ ರಾಜನ ನಾಗಬಲಿ ಯಜ್ಞವನ್ನು ನಿಲ್ಲಿಸಿ ನಾಗಗಳ ರಕ್ಷಣೆ ಮಾಡಬೇಕು. ನನ್ನ ಜೀವನದ ಎರೆಡನೆ ಉದ್ದೇಶವನ್ನು ಪೂರ್ಣಗೊಳಿಸು ಮಗನೆ ಎಂದು ಮಾನಸದೇವಿ ಹೇಳುತ್ತಾಳೆ..
ಅದೇ ಪ್ರಕಾರ ಆಸ್ತಿಕ ಋಷಿಯು ಜನಮೇಜಯ ರಾಜನ ಯಜ್ಞ ನಡೆಯುವ ಸ್ಥಳಕ್ಕೆ ಹೋಗಿ ರಾಜನನ್ನು ಮಾತಿನಲ್ಲಿ ಕಟ್ಟಿಹಾಕಿ ನಾಗಬಲಿ ಯಜ್ಞವನ್ನು ನಿಲ್ಲಿಸುತ್ತಾನೆ..
ಈ ರೀತಿ ಮಾನಸದೇವಿಯು ತನ್ನ ಜೀವನದ ಎರೆಡನೆ ಉದ್ದೇಶವನ್ನು ಪೂರ್ಣಗೊಳಿಸುತ್ತಾಳೆ.
ಇಡಿ ನಾಗಲೋಕವೇ ಮಾನಸದೇವಿಗೆ ತಲೆ ಭಾಗುತ್ತದೆ. ಈ ರೀತಿ ಮಾನಸದೇವಿಯು ನಾಗಲೋಕಕ್ಕು ಹಾಗೂ ಎಲ್ಲ ನಾಗಗಳಿಗೂ ಮಾತೆ ಆಗುತ್ತಾಳೆ. ಹಾಗೂ ಇವಳ ಪುತ್ರನಾದ ಆಸ್ತಿಕ ಋಷಿಯ ಹೆಸರು ಹೇಳಿದರೇ ಅಥವಾ ಆಸ್ತಿಕ ಅಂತ ಮನೆಯ ಗೋಡೆಯಲ್ಲಿ ಬರೆದರೆ ಯಾವ ವಿಷದ ಹಾವುಗಳು ಜಂತುಗಳು ಬರುವುದಿಲ್ಲ. ಹಾಗೂ ಮಾನಸ ದೇವಿಯ ನಾಮಸ್ಮರಣೆ ಮಾಡಿದರೆ ಯಾವುದೇ ವಿಷದ ಹಾವುಗಳು ಜಂತುಗಳು ತೊಂದರೆ ಕೊಡುವುದಿಲ್ಲ.
ನಾಗರ ಪಂಚಮಿ ಸಮಯದಲ್ಲಿ ಈಶಾನ್ಯ ಭಾರತದ ಕಡೆಗೆ ಹೆಚ್ಚಾಗಿ ಮಾನಸದೇವಿಯನ್ನು ಹೆಚ್ಚಾಗಿ ಪೂಜೆ ಮಾಡುತ್ತಾರೆ..
ಮಾನಸದೇವಿಯ ವಾಹನ ಬಾತುಕೋಳಿ ಅವಳು ಕೈಯಲ್ಲಿ ನಾಗಗಳನ್ನು & ಕಮಲದ ಹೂವನ್ನು ಹಿಡಿದು ಭಕ್ತರನ್ನು ಹರಸುತ್ತಾಳೆ..
ನಾಗಲೋಕ.. ಹಾಗೂ ಇಡಿ ನಾಗವಂಶವನ್ನು ರಕ್ಷಣೆ ಮಾಡಿದ ಕಾರಣ.. ಇಡಿ ನಾಗಲೋಕ ಹಾಗೂ ಎಲ್ಲ ನಾಗಗಳು ಯಾವಾಗಲು.. ಮಾನಸದೇವಿ ಹಾಗೂ ಅವಳ ಮಗನಾದ ಆಸ್ತಿಕ ಋಷಿಗೆ ಚಿರಋಣಿ ಆಗಿ ಇರುತ್ತವೆ..
ಈಗ ಮಳೆಗಾಲದಲ್ಲಿ ಹೆಚ್ಚಾಗಿ ಭಕ್ತಾದಿಗಳು ಮಾನಸದೇವಿಯನ್ನು ಪೂಜಿಸುತ್ತಾರೆ..
✍️ : ಅಶ್ವಿನಿ ಶೆಟ್ಟಿ..