December 6, 2024
ಬಾಲಾರಿಷ್ಟ
December 5, 2024
ಅಮೃತಬಳ್ಳಿ ಹಿತಮಿತವಾಗಿ ಬಳಸಿ
ಅಮೃತಬಳ್ಳಿ
ವೈಜ್ಞಾನಿಕ ಹೆಸರು- ಟಿನೊಸ್ಪೆರ ಕಾರ್ಡಿಫೋಲಿಯ (Tinospora cordifolia (Willd) Miers)
ಸಸ್ಯದ ಕುಟುಂಬ- (ಮೆನಿಸ್ಪರ್ಮೇಸಿಯೇ) Menispermaceae
ಕನ್ನಡದ ಇತರ ಹೆಸರುಗಳು- ಕಾಡುಹಾಕು ಕಾರೇ, ಗುಡೂಚಿ, ಮಧುವರ್ಣಿ, ಮಧುವರ್ಕ
ಇತರ ಭಾಷೆಯ ಹೆಸರುಗಳು- ಸಂ -ಅಮೃತ, ಗುಡೂಚಿ, ಮಧುವರ್ಣಿ, ವತ್ಪಾದನಿ, ಛಿನ್ನರುಹಾ, ತಂತ್ರಿಕಾಮೃತ, ಜೀವಂತಿಕಾ, ಸೋಮವಲ್ಲಿ, ವಿಶಲ್ಯಾ, ಹಿಂ-ಗಿಲೊಯ, ಗುಡಿಚ, ಗುಲಂಚ, ತ-ಅಮುದಂ, ಅಮೃತವಳ್ಳಿ, ಸಿಂದಾಲ್, ತೆ- ಗುಡುಚಿ, ಸೊಮಿಡ, ಇಂ-ಹರ್ತಾ ಲೀವ್ ಮೂನ್ ಸೀಡ್, ಗುಲಾಂಚ, ಟಿನೋಸ್ಪೊರ್.
ಪರಿಚಯ
ಅಮೃತವಳ್ಳಿಯು ಇತರೆ ಬಳ್ಳಿಗಿಡಗಳಂತೆ ಸಾಮಾನ್ಯವಾಗಿ ಕಂಡುಬರುವುದಿಲ್ಲ. ಅವರೂವವಾಗಿ ಕಂಡುಬರುವ ಈ ಬಳ್ಳಿಯು ಉಷ್ಣವಲಯದ ಭಾಗಶಃ ನಿತ್ಯ ಹರಿದ್ವರ್ಣ ಸಸ್ಯಾವರಣ, ಬೇಸಿಗೆಯಲ್ಲಿ ಎಲೆಯುದುರುವ ಮಲೆನಾಡಿನ ಸಸ್ಯಾವರಣ, ಬೇಸಿಗೆಯಲ್ಲಿ ಎಲೆಯುದುರುವ ಮೈದಾನ ಸೀಮೆಯ ಒಣ ಸನ್ಯಾವರಣ ಮತ್ತು ಕಳ್ಳಿ ಕುರುಚಲು ಗಿಡಗಳೊನ್ನೊಳಗೊಂಡ ಸಸ್ಯಾವರಣಗಳಲ್ಲಿ ಅಲ್ಲಲ್ಲಿ ವೊದಗಿಡಗಳ ಮೇಲೆ ಹಬ್ಬಿ ಬೆಳೆಯುತ್ತದೆ ಬೇಸಿಗೆಯಲ್ಲಿ ಬಳ್ಳಿಯ ಎಲೆಗಳು ಉದುರಿಹೋಗುತ್ತವೆ ಹೃದಯಾಕಾರದ ಹೊಳಪಿನ ಎಲೆಗಳು ಬಳ್ಳಿ ಕಾಂಡದ ಮೇಲೆ ಪರ್ಯಾಯವಾಗಿ ಜೋಡಣೆಯಾಗಿರುತ್ತವೆ. ಅಂತ್ಯಾರಂಭಿ ವುಷ್ಪಮಂಜರಿಯಲ್ಲಿ ಬಿಳುವಾದ ಏಕಲಿಂಗ ಹೂಗಳಿರುತ್ತವೆ. ದುಂಡನೆಯ ಕಾಯಿಗಳು ಹಣ್ಣಾದಾಗ ಕವಲಾಗುತ್ತವೆ
ಇತ್ತೀಚೆಗೆ ಈ ಗಿಡವನ್ನು ಕೆಲವರು ಅಲಂಕಾರಿಕ ಬಳ್ಳಿ ಗಿಡವಾಗಿ ಮನೆಯಂಗಳದಲ್ಲಿ ಬೆಳೆಸುತ್ತಿದ್ದಾರೆ.
ಉಪಯೋಗಗಳು
1 ಅಮೃತಬಳ್ಳಿಯ ಘನಕ್ವಾದ (Condenced decoction) ಅಥವಾ ಕಾಷಾಯ ಸೇವನೆಯಿಂದ ಮಧುಮೇಹ ರೋಗ ಹತೋಟಿಗೆ ಬರುತ್ತದೆ.
2 ಅಮೃತ ಬಳ್ಳಿಯ ಚೂರ್ಣ, ಕಷಾಯ, ನತ್ವ ಮುಂತಾದವು ಆಯುರ್ವೇದ ಗ್ರಂಧಗಳಲ್ಲಿ ಒಂದು ಉತ್ತಮವಾದ ಕಾಯಕಲ್ಪ (Rejuvenater) ಔಷಧ ಎಂದು ವರಿಗಣಿಸಲ್ಪಟ್ಟದೆ
3 ಅಮೃತಬಳ್ಳಿ ರಸ ಸುಮಾರು 1-2 ಚಮಚ ತೂಕ ತೆಗೆದುಕೊಂಡು ಸ್ವಲ್ಪ ಜೇನುತುಪ್ಪ ಸೇರಿಸಿ ದಿನವೂ ಬೆಳಿಗ್ಗೆ ಒಂದು ಹೊತ್ತಿನಂತೆ ಒಂದು ವಾರ ಕುಡಿಸುವುದರಿಂದ ಕಾಮಾಲೆ (Jaundice) ಗುಣವಾಗುತ್ತದೆ.
4 ಅಮೃತಬಳ್ಳಿಯ ರಸ ಸುಮಾರು / ತೊಲದಷ್ಟು ತೆಗೆದುಕೊಂಡು ಅದಕ್ಕ ಸ್ವಲ್ಪ ಜೇನುತುಪ್ಪ ಸೇರಿಸಿ ದಿವನಕ್ಕೆ 2-3 ಸಾರಿ ಕುಡಿಸುವುದರಿಂದ ಅತಿಯಾದ ಬಾಯಾರಿಕೆ ಗುಣವಾಗುತ್ತದೆ.
5 ಅಮೃತ ಬಳ್ಳಿಯ ಅಥವಾ ಎಲೆಯ ರಸ 1/ ತೊಲಕ್ಕ ಸ್ವಲ್ಪ ಸಕ್ಕರೆ ಬೆರಸಿ ದಿವಸಕ್ಕೆ ಎರಡು ವೇಳೆ, 3-5 ಕುಡಿಸುವುದರಿಂದ ರಕ್ತ ಪ್ರದರವು ಗುಣವಾಗುತ್ತದೆ
6 ಬಳ್ಳಿಕಾಂಡದ ಚೂರ್ಣವನ್ನು ಹಾಲಿನಲ್ಲಿ ಕಲಸಿ ಕುಡಿಯುವುದರಿಂದ ವೀರ್ಯವೃದ್ಧಿಯಾಗುತ್ತದೆ.
7 ಸಮೂಲವನ್ನು ಅರೆದು ಮೂಳೆಮುರಿದ ಕಡೆ ಕಟ್ಟುಹಾಕಿ ಕಟ್ಟುತ್ತಾರೆ.
8 ಬಳ್ಳಿಕಾಂಡದಿಂದ ಆಗತಾನೆ ತೆಗೆದ 7-14 ಮಿ ಲೀ ರಸಕ್ಕೆ ಜೇನುತುಪ್ಪ ಸೇರಿಸಿ ದಿವಸಕ್ಕೆ ಎರಡುಬಾರಿ ಕುಡಿಯುವುದರಿಂದ ಕುಷ್ಠರೋಗ ವಾಸಿಯಾಗುತ್ತದೆ.
9 ಬಳ್ಳಿಕಾಂಡದ ಕಷಾಯ ಸುಮಾರು 14-28 ಮಿ ಲೀ ನಷ್ಟು ತೆಗೆದುಕೊಂಡು ಅದಕ್ಕೆ 2 ಗ್ರಾಂ ಗುಗ್ಗುಳವನ್ನು ಸೇರಿಸಿ ದಿವಸಕ್ಕೆ ಎರಡು ಬಾರಿ ಕುಡಿಯುವುದರಿಂದ ಸಂಧಿವಾತ (Arthritis) ಗುಣವಾಗುತ್ತದೆ.
10 ಅಮೃತಬಳ್ಳಿ, ಶುಂಠಿ, ನೆಲಗುಳ್ಳವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೂರ್ಣಮಾಡಿ, 2 ಚಮಚ ಚೂರ್ಣವನ್ನು 1 ಸೇರು ನೀರಿಗೆ ಹಾಕಿ ಅಷ್ಟಾವಶೇಷ ಕಷಾಯಮಾಡಿ ಅದನ್ನು ಬೆಳಗ್ಗೆ ರಾತ್ರಿ 5-6 ದಿವಸ ಕುಡಿಯುವುದರಿಂದ ವಾತಶ್ಲೇಷ್ಮ (ಫೂ, ಇನ್ ಫೂರ್ಯಜಾ) ಜ್ವರ ವಾಸಿಯಾಗುತ್ತದೆ.
11 ಅಮೃತಬಳ್ಳಿಯ ರಸ 1 ತೊಲಕ್ಕೆ 1 ತೋಲ ಜೇನುತುಪ್ಪ ಸೇರಿಸಿ ನಿತ್ಯ ಬೆಳಿಗ್ಗೆ ರಾತ್ರಿ ಕುಡಿಯುವುದರಿಂದ ಶ್ರೇಷ್ಮ ಪರಿಹಾರವಾಗುತ್ತದೆ.
12 ಅಮೃತಬಳ್ಳಿ ಮತ್ತು ಒಂದೆಲಗವನ್ನು ಸಮಪ್ರಮಾಣ ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಕೊಂಡು ಹೊತ್ತಿಗೆ 2 ತೊಲ ಚೂರ್ಣ ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಕಷಾಯಕ್ಕಿಟ್ಟು ಒಂದು ಚಟಾಕಿಗಿಳಿಸಿ ನಿತ್ಯ ಎರಡು ಹೊತ್ತಿನಂತೆ 20-40 ದಿವಸ ಸೇವಿಸುವುದರಿಂದ ಉನ್ಮಾದ (Hysteria) ವು ವರಿಹಾರವಾಗುತ್ತದೆ.
13 ಅಮೃತಬಳ್ಳಿ, ಆಡುಸೋಗೆ, ಜೇಷ್ಠಮಧು ಈ ಮೂರರ ಪ್ರತಿಯೊಂದನ್ನೂ ಕಾಲು ತೊಲ ಪ್ರಮಾಣ ತೆಗೆದುಕೊಂಡು ಚತುರ್ಧಾಂಶ ಕಷಾಯ ಮಾಡಿ ಇದನ್ನು ನಿತ್ಯ ನಾಲ್ಕು ಬಾರಿಯಂತೆ 2-3 ತಿಂಗಳು ಸೇವಿಸುವುದರಿಂದ ಕ್ಷಯ ವಾಸಿಯಾಗುತ್ತದೆ.
14 ಅಮೃತಬಳ್ಳಿಯ ಎಲೆ ಅಥವಾ ಕಾಯಿಯ ರಸವನ್ನು ನಿತ್ಯ ರಾತ್ರಿ ಮುಖಕ್ಕೆ ಲೇಪಿಸಿ ಬೆಳಿಗ್ಗೆ ತೊಳೆಯುವ ವದ್ಧತಿಯನ್ನು ರೂಡಿಸಿಕೊಂಡರೆ ಮುಖದ ಕಾಂತಿ ಹೆಚ್ಚಾಗುತ್ತದೆ.
15 ಅಮೃತಬಳ್ಳಿಯ ರಸ 2-3 ಮಿ.ಲೀ.ನಷ್ಟನ್ನು ಜೇನುತುಪ್ಪದೊಡನೆ ಸೇವಿಸಿ, ಉದ್ದಿನಕಾಳಿನ ಕಟ್ಟಿನ ಸಾರು ಅನ್ನ ಊಟಮಾಡುವುದರಿಂದ ತೊನ್ನು ನಿವಾರಣೆಯಾಗುತ್ತದೆ. ಈ ಚಿಕಿತ್ಸೆಯನ್ನು ಬಿಡದೆ ಹಲವು ತಿಂಗಳು ಅನುಸರಿಸಬೇಕಾಗುತ್ತದೆ.
ಪಶುರೋಗ ಚಿಕಿತ್ಸೆಯಲ್ಲಿ
ಅಮೃತ ಬಳ್ಳಿಯ ಸಮೂಲವನ್ನು ಕುಟ್ಟಿ 1 ಲೀಟರ್ ನಷ್ಟು ರಸ ಮಾಡಿಕೊಂಡು ಹಾವು ಕಡಿದಾಗ ಸ್ವಲ್ಪ ರಸವನ್ನು ಕಡಿದ ಜಾಗದ ಮೇಲೆ ಲೇಪಿಸಿ ಉಳಿದ ರಸವನ್ನು ಕುಡಿಸುತ್ತಾರೆ.
ಕೃಪೆ- ಕರ್ನಾಟಕ ಔಷಧೀಯ ಸಸ್ಯಗಳು
October 27, 2024
ಚಂಡೀಶ್ವರ ಚಂಡಿಕೇಶ್ವರ
ಚಂಡಿಕೇಶ್ವರನಿಗೆ "ಚಿಟಿಕೆ" ಹೊಡೆಯುವುದು ಅಥವ "ಚಪ್ಪಾಳೆ ತಟ್ಟುವುದು" ಏಕೆ.?
ಶಿವನ ನಾಮಾವಳಿಗಳ ಅರ್ಥ
ಓಂ ಶಿವಾಯ ನಮಃ - ಮಹಾನ್ ದೇವ ಶಿವನಿಗೆ ನಮಸ್ಕಾರಗಳು
ಓಂ ಮಹೇಶ್ವರಾಯ ನಮಃ - ಶ್ರೇಷ್ಠ ಅಧಿಪತಿಯು ಆಗಿರುವನು
ಓಂ ಶಂಭವೇ ನಮಃ - ಮಹಾನ್ ಶಂಭುವೇ ನೀನು
ಓಂ ಪಿನಾಕಿನೇ ನಮಃ - ಪಿನಾಕಾ ಎಂಬ ಬಿಲ್ಲು ಹಿಡಿದವನು
ಓಂ ಶಶಿಶೇಖರಾಯ ನಮಃ - ಚಂದ್ರನನ್ನು ಜಟೆಯಲ್ಲಿ ಹಿಡಿದವನು
ಓಂ ವಾಮದೇವಾಯ ನಮಃ - ಆತನು ಮಹಾನ್ ದೇವಾನು ದೇವ ಆಗಿರುವನು
ಓಂ ವಿರೂಪಾಕ್ಷಾಯ ನಮಃ - ಮೂರು ಕಣ್ಣುಗಳು ಉಳ್ಳವನು
ಓಂ ಕಪರ್ದಿನೇ ನಮಃ - ಸ್ಮಶಾನವಾಸಿಯೇ ತಲೆಬುರುಡೆಗಳನ್ನು ಹಿಡಿದವನು
ಓಂ ನೀಲಲೋಹಿತಾಯ ನಮಃ - ನೀಲಿ ಬಣ್ಣದ ದೇಹ ಉಳ್ಳವನು
ಓಂ ಶಂಕರಾಯ ನಮಃ - ಶಂಕರನೇ ನಿನಗೆ ನಮೋ ನಮಃ
ಓಂ ಶೂಲಪಾಣಯೇ ನಮಃ- ತ್ರಿಶೂಲವನ್ನು ಹಿಡಿದವನಾಗಿರುವನು
ಓಂ ಖಟ್ವಾಂಗಿನೇ ನಮಃ -ಕತ್ತಿಯನ್ನು ಹಿಡಿದವನು
ಓಂ ವಿಷ್ಣುವಲ್ಲಭಾಯ ನಮಃ - ವಿಷ್ಣುವಿನ ಸ್ವರೂಪಿಯಾಗಿರುವನು
ಓಂ ಶಿಪಿವಿಷ್ಟಾಯ ನಮಃ - ಬೆಳಕಿನ ಕಿರಣದೊಂದಿಗೆ ಇರುವವನು
ಓಂ ಅಂಬಿಕಾನಾಥಾಯ ನಮಃ - ಪಾರ್ವತಿಯ ಪತಿರಾಯನಾಗಿರುವನು
ಓಂ ಶ್ರೀಕಂಠಾಯ ನಮಃ - ಕಂಠದಲ್ಲಿ ವಿಷವನ್ನೇ ಇಟ್ಟುಕೊಂಡಿರುವ ವಿಷಕಂಠನು ಆಗಿರುವನು
ಓಂ ಭಕ್ತವತ್ಸಲಾಯ ನಮಃ - ತನ್ನ ಭಕ್ತರನ್ನು ಪ್ರೀತಿಸುವವನು
ಓಂ ಭವಾಯ ನಮಃ - ಸದಾ ಭಕ್ತರ ಪಾಲಿಗೆ ಕರುಣಿಸುವವವನು
ಓಂ ಶರ್ವಾಯ ನಮಃ - ವಿನಾಶಕಾರಿ ಆಗಿರುವನು
ಓಂ ತ್ರಿಲೋಕೇಶಾಯ ನಮಃ- ಮೂರು ವಿಧದ ಕೂದಲು (ಜಟೆ) ಯನ್ನು ಹೊಂದಿರುವವನು
ಓಂ ಶಿತಿಕಂಠಾಯ ನಮಃ - ಕಪ್ಪು ಕುತ್ತಿಗೆ ಹೊಂದಿರುವವನು
ಓಂ ಶಿವಾಪ್ರಿಯಾಯ ನಮಃ - ಪಾರ್ವತಿಯಿಂದ ಇಷ್ಟಪಟ್ಟವನು
ಓಂ ಉಗ್ರಾಯ ನಮಃ - ಉಗ್ರ ಸ್ವರೂಪನು ಆಗಿರುವನು
ಓಂ ಕಪಾಲಿನೇ ನಮಃ - ರುಂಡಮಾಲಾ ಧರಿಸಿದವನು
ಓಂ ಕೌಮಾರಯೇ ನಮಃ - ಕುಮಾರನು ಆಗಿರುವನು
ಓಂ ಅಂಧಕಾಸುರ ಸೂದನಾಯ ನಮಃ - ಅಂಧಕಾಸುರನನ್ನು ಕೊಂದವನು
ಓಂ ಗಂಗಾಧರಾಯ ನಮಃ - ಗಂಗೆಯನ್ನು ಶಿರದಲ್ಲಿ ಧರಿಸಿದವನು
ಓಂ ಲಲಾಟಾಕ್ಷಾಯ ನಮಃ - ಹಣೆಯಲ್ಲಿ ಕಣ್ಣು (ಮುಕ್ಕಣ್ಣ) ಇರುವವನು
ಓಂ ಕಾಲಕಾಲಾಯ ನಮಃ - ಸಾವಿನ ದೇವರಿಗೆ ಸಾವು ಯಾರು
ಓಂ ಕೃಪಾನಿಧಯೇ ನಮಃ - ಕರುಣೆಯ ನಿಧಿಯು ಆಗಿರುವನು
ಓಂ ಭೀಮಾಯ ನಮಃ - ಪರಿಪೂರ್ಣನು ಆಗಿರುವನು
ಓಂ ಪರಶುಹಸ್ತಾಯ ನಮಃ - ಕೈಯಲ್ಲಿ ಕೊಡಲಿ ಇರುವವನು
ಓಂ ಮೃಗಪಾಣಯೇ ನಮಃ - ಕೈಯಲ್ಲಿ ಜಿಂಕೆ ಹಿಡಿದವನು
ಓಂ ಜಟಾಧರಾಯ ನಮಃ - ಜಟೆಯನ್ನು ಹೊಂದಿರುವವನು
ಓಂ ಕ್ತೆಲಾಸವಾಸಿನೇ ನಮಃ - ಕೈಲಾಸದಲ್ಲಿ ವಾಸಿಸುವವನು
ಓಂ ಕವಚಿನೇ ನಮಃ - ರಕ್ಷಾಕವಚವನ್ನು ಧರಿಸಿದವನು
ಓಂ ಕಠೋರಾಯ ನಮಃ - ತುಂಬಾ ಕಠೋರನು ಆಗಿರುವನು
ಓಂ ತ್ರಿಪುರಾಂತಕಾಯ ನಮಃ - ಮೂರು ನಗರಗಳಲ್ಲಿನ ರಾಕ್ಷಸರನ್ನು ನಾಶಪಡಿಸಿದವನು
ಓಂ ವೃಷಾಂಕಾಯ ನಮಃ - ನಂದಿಯ ಮಿತ್ರನು ಆಗಿರುವನು
ಓಂ ವೃಷಭಾರೂಢಾಯ ನಮಃ - ನಂದಿಯನ್ನು ವಾಹನವಾಗಿ ಇರಿಸಿಕೊಂಡವನು
ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ - ತನ್ನ ದೇಹವನ್ನು ಬೂದಿಯಿಂದ ಶೃಂಗರಿಸಿಕೊಂಡವನು
ಓಂ ಸಾಮಪ್ರಿಯಾಯ ನಮಃ - ಸಾಮವೇದವನ್ನು ಇಷ್ಟಪಡುವವನು
ಓಂ ಸ್ವರಮಯಾಯ ನಮಃ - ಎಲ್ಲೆಡೆ ತನ್ನ ಪ್ರಭಾವ ಬೀರಿರುವವನು.
ಓಂ ತ್ರಯೀಮೂರ್ತಯೇ ನಮಃ - ತ್ರಿಮೂರ್ತಿದಾಯಕನು ಆಗಿರುವನು
ಓಂ ಅನೀಶ್ವರಾಯ ನಮಃ - ವಿನಾಶ ಮಾಡುವವನು
ಓಂ ಸರ್ವಙ್ಞಾಯ ನಮಃ - ಎಲ್ಲವನ್ನು ತಿಳಿದವನು
ಓಂ ಪರಮಾತ್ಮನೇ ನಮಃ - ದೈವಿಕ ಆತ್ಮ ಉಳ್ಳವನು
ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ - ಚಂದ್ರ, ಸೂರ್ಯ ಮತ್ತು ಕೋಪವನ್ನು ತನ್ನ ಕಣ್ಣುಗಳಂತೆ ಹೊಂದಿರುವವನು
ಓಂ ಹವಿಷೇ ನಮಃ - ಅಗ್ನಿಯಿಂದ ಅರ್ಪಣೆ ಮಾಡಿಸಿಕೊಳ್ಳುವವನು
ಓಂ ಯಙ್ಞಮಯಾಯ ನಮಃ - ಬೆಂಕಿಯಂತೆ ತ್ಯಾಗದ ವ್ಯಕ್ತಿತ್ವದವನು
ಓಂ ಸೋಮಾಯ ನಮಃ - ಜಟೆಯಲ್ಲಿ ಚಂದ್ರನನ್ನು ಧರಿಸಿದವನು
ಓಂ ಪಂಚವಕ್ತ್ರಾಯ ನಮಃ - ಐದು ಕುತ್ತಿಗೆಗಳನ್ನು ಹೊಂದಿರುವವನು
ಓಂ ಸದಾಶಿವಾಯ ನಮಃ - ಸದಾ ಶಾಂತಿಯುತವಾಗಿ ಇರುವವನು
ಓಂ ವಿಶ್ವೇಶ್ವರಾಯ ನಮಃ - ಬ್ರಹ್ಮಾಂಡಕ್ಕೆ ಭಗವಂತನು ಆಗಿರುವನು
ಓಂ ವೀರಭದ್ರಾಯ ನಮಃ - ವೀರಭದ್ರನು ಆಗಿರುವನು
ಓಂ ಗಣನಾಥಾಯ ನಮಃ - ಗಣಗಳ ನಾಯಕ
ಓಂ ಪ್ರಜಾಪತಯೇ ನಮಃ - ಎಲ್ಲ ಜೀವಿಗಳ ಅಧಿಪತಿ
ಓಂ ಹಿರಣ್ಯರೇತಸೇ ನಮಃ - ದೇವರಂತೆ ಹೊಳೆಯುವವನು
ಓಂ ದುರ್ಧರ್ಷಾಯ ನಮಃ - ಅವನ್ನು ನೋಡಲು ಬಹಳ ಕಷ್ಟ
ಓಂ ಗಿರೀಶಾಯ ನಮಃ - ಪರ್ವತಗಳ ರಾಜ
ಓಂ ಗಿರಿಶಾಯ ನಮಃ - ಪರ್ವತಗಳ ಪ್ರಭು
ಓಂ ಅನಘಾಯ ನಮಃ - ದೋಷರಹಿತ
ಓಂ ಭುಜಂಗ ಭೂಷಣಾಯ ನಮಃ - ಹಾವನ್ನು ಆಭರಣವಾಗಿ ಧರಿಸಿದವನು
ಓಂ ಭರ್ಗಾಯ ನಮಃ - ಶಿವನ ಮತ್ತೊಂದು ಹೆಸರು
ಓಂ ಗಿರಿಧನ್ವನೇ ನಮಃ - ಬಿಲ್ಲಿನಂತೆ ಪರ್ವತವನ್ನು ಹೊಂದಿರುವವನು
ಓಂ ಗಿರಿಪ್ರಿಯಾಯ ನಮಃ - ಪರ್ವತಗಳನ್ನು ಪ್ರೀತಿಸುವವನು
ಓಂ ಕೃತ್ತಿವಾಸಸೇ ನಮಃ - ಮರೆಮಾಚುವವನು
ಓಂ ಪುರಾರಾತಯೇ ನಮಃ - ಎಂದೆಂದಿಗೂ ಸಂತೋಷಪಡುವವನು
ಓಂ ಭಗವತೇ ನಮಃ - ಅದ್ಭುತ ಬಿಲ್ಲುಗಾರ
ಓಂ ಪ್ರಮಧಾಧಿಪಾಯ ನಮಃ - ಅವನೇ ಬೃಹತ್ ದೀಪ
ಓಂ ಮೃತ್ಯುಂಜಯಾಯ ನಮಃ - ಸಾವನ್ನೇ ಗೆದ್ದವನು
ಓಂ ಸೂಕ್ಷ್ಮತನವೇ ನಮಃ - ಸೂಕ್ಷ್ಮ ದೇಹವನ್ನು ಹೊಂದಿರುವವನು
ಓಂ ಜಗದ್ವ್ಯಾಪಿನೇ ನಮಃ - ಪ್ರಪಂಚದಾದ್ಯಂತ ವ್ಯಾಪಿಸಿರುವವನು
ಓಂ ಜಗದ್ಗುರವೇ ನಮಃ - ಜಗತ್ತಿನ ಗುರು
ಓಂ ವ್ಯೋಮಕೇಶಾಯ ನಮಃ - ಆಕಾಶದಂಥ ಕೇಶ ರಾಶಿಯನ್ನು ಹೊಂದಿರುವವನು
ಓಂ ಮಹಾಸೇನ ಜನಕಾಯ ನಮಃ -ದೊಡ್ಡ ಸೈನ್ಯವನ್ನು ಸೃಷ್ಟಿಸಬಲ್ಲವನು
ಓಂ ಚಾರುವಿಕ್ರಮಾಯ ನಮಃ - ಸುಂದರ ಮತ್ತು ಶೂರನಾದವನು
ಓಂ ರುದ್ರಾಯ ನಮಃ - ತೀವ್ರ ಕೋಪಗೊಂಡವನು
ಓಂ ಭೂತಪತಯೇ ನಮಃ - ಭೂತ ಭಗವಂತ
ಓಂ ಸ್ಥಾಣವೇ ನಮಃ - ಸ್ಥಿರವಾದವನು
ಓಂ ಅಹಿರ್ಭುಥ್ನ್ಯಾಯ ನಮಃ - ಸರ್ಪವನ್ನು ಧರಿಸಿದವನು
ಓಂ ದಿಗಂಬರಾಯ ನಮಃ - ದಿಕ್ಕುಗಳನ್ನೇ ವಸ್ತ್ರವಾಗಿ ಧರಿಸಿದವನು
ಓಂ ಅಷ್ಟಮೂರ್ತಯೇ ನಮಃ - ಎಂಟು ರೂಪಗಳನ್ನು ಹೊಂದಿರುವವನು
ಓಂ ಅನೇಕಾತ್ಮನೇ ನಮಃ - ಹಲವಾರು ರೂಪಗಳನ್ನು ಹೊಂದಿರುವವನು
ಓಂ ಸ್ವಾತ್ತ್ವಿಕಾಯ ನಮಃ - ಸಾತ್ವಿಕ (ಶಾಂತಿಯುತ)ವಾಗಿರುವವನು
ಓಂ ಶುದ್ಧವಿಗ್ರಹಾಯ ನಮಃ - ಸ್ವಚ್ಛವಾದ ಚಿತ್ರಣವನ್ನು ಹೊಂದಿರುವವನು
ಓಂ ಶಾಶ್ವತಾಯ ನಮಃ - ದೀರ್ಘಕಾಲನು
ಓಂ ಖಂಡಪರಶವೇ ನಮಃ - ಕೊಡಲಿಯಿಂದ ಶಸ್ತ್ರಸಜ್ಜಿತನಾದವನು
ಓಂ ಅಜಾಯ ನಮಃ - ಎಂದಿಗೂ ಗೆಲ್ಲುವವನು
ಓಂ ಪಾಶವಿಮೋಚಕಾಯ ನಮಃ - ಕಷ್ಟಗಳಿಂದ ನಮ್ಮನ್ನು ಮುಕ್ತಗೊಳಿಸುವವನು
ಓಂ ಮೃಡಾಯ ನಮಃ - ಸಾವು ಇಲ್ಲದವನು
ಓಂ ಪಶುಪತಯೇ ನಮಃ - ಸಕಲ ಜೀವಿಗಳಿಗೂ ಪ್ರಭು
ಓಂ ದೇವಾಯ ನಮಃ - ದೇವಾನ್ ದೇವತೆ
ಓಂ ಮಹಾದೇವಾಯ ನಮಃ - ಮಹಾನ್ ದೇವರು
ಓಂ ಅವ್ಯಯಾಯ ನಮಃ - ಎಂದಿಗೂ ಬದಲಾಗದವನು
ಓಂ ಹರಯೇ ನಮಃ - ವಿನಾಶಕನು.
ಓಂ ಪೂಷದಂತಭಿದೇ ನಮಃ - ಪುಷ್ಪದಂತನನ್ನು ಕೊಂದವನು.
ಓಂ ಅವ್ಯಗ್ರಾಯ ನಮಃ - ಆಕ್ರೋಶಗೊಳ್ಳದವನು.
ಓಂ ದಕ್ಷಾಧ್ವರಹರಾಯ ನಮಃ - ದಕ್ಷನ ಮನೆಯನ್ನು ನಾಶಪಡಿಸಿದವನು
ಓಂ ಹರಾಯ ನಮಃ - ನಾಶ ಮಾಡುವವನು
ಓಂ ಭಗನೇತ್ರಭಿದೇ ನಮಃ - ಸೂರ್ಯ, ಚಂದ್ರ ಮತ್ತು ಬೆಂಕಿಯನ್ನು ಕಣ್ಣುಗಳಂತೆ ಹೊಂದಿರುವವನು
ಓಂ ಅವ್ಯಕ್ತಾಯ ನಮಃ - ಸ್ಪಷ್ಟವಾಗಿಲ್ಲದವನು
ಓಂ ಸಹಸ್ರಾಕ್ಷಾಯ ನಮಃ - ಸಾವಿರ ಕಣ್ಣುಗಳನ್ನು ಹೊಂದಿರುವವನು
ಓಂ ಸಹಸ್ರಪಾದೇ ನಮಃ - ಸಾವಿರ ಪಾದಗಳನ್ನು ಹೊಂದಿರುವವನು
ಓಂ ಅಪಪರ್ಗಪ್ರದಾಯ ನಮಃ - ಪೂರ್ಣಗೊಳಿಸಲು ನಮಗೆ ಸಹಾಯ ಮಾಡುವವನು
ಓಂ ಅನಂತಾಯ ನಮಃ - ಅಂತ್ಯವಿಲ್ಲದವನು.
ಓಂ ತಾರಕಾಯ ನಮಃ - ನಕ್ಷತ್ರನಿವನು
ಓಂ ಪರಮೇಶ್ವರಾಯ ನಮಃ - ದೈವಿಕ ಭಗವಂತನೇ ಈ ಶಿವನು ಆಗಿರುವನು.