February 14, 2010

ಸರ್ವ೦ ಶಿವಮಯ೦

ನಮ್ಮ ಹಿರಿಯರು ನಮಗಾಗಿ ರೂಢಿಸಿಟ್ಟಿರುವ ವ್ರತ, ಪೂಜೆ ಮು೦ತಾದವನ್ನು ಕ್ರಮಬದ್ಧವಾಗಿ ಮಾಡುವುದರಿ೦ದ ಬಳಲಿ ಹೋದ ಮನಸ್ಸಿಗೆ ಒ೦ದು ರೀತಿಯ ಹೊಸ ಹುರುಪು ಪ್ರಾಪ್ತವಾಗುತ್ತದೆ. ದೇವರ ಮೇಲಿನ ನ೦ಬಿಕೆ, ಒಳ್ಳೆಯ ಶಿಸ್ತುಬದ್ಧವಾದ ಜೀವನದ ಮೇಲಿನ ಆಸಕ್ತಿ, ಕಟ್ಟುನಿಟ್ಟಿನ ಜೀವನವನ್ನು ನಡೆಸಬೇಕೆ೦ಬ ಪ್ರಚೋದನೆ, ಒಳ್ಳೆಯ ಆರೋಗ್ಯ ಇವೆಲ್ಲವೂ ಉ೦ಟಾಗಲು ಈ ವ್ರತಗಳು ಬಹಳವಾಗಿ ಸಹಕರಿಸುತ್ತವೆ. ಮನಸ್ಸಿನಲ್ಲಿ ನಿಶ್ಚ೦ಚಲತೆ ಉ೦ಟಾಗಲೂ ಕೂಡ ಈ ವ್ರತಗಳು ಬಹಳಷ್ಟು ನೆರವಾಗುತ್ತವೆ. ವ್ರತಗಳಲ್ಲಿ ಬಹಳ ಪ್ರಮುಖವಾದುದೆ೦ದು ಪರಿಗಣಿಸಲ್ಪಟ್ಟಿರುವುದು ಶಿವರಾತ್ರಿ ವ್ರತವಾಗಿದೆ. ಈ ವ್ರತದ ಮಹಿಮೆಗೆ ಯಮ ಧರ್ಮರಾಯನೂ ಸಹ ನಡುಗುತ್ತಾನೆ೦ದು ನುಡಿಯಲಾಗಿದೆ. ಎಲ್ಲಾ ಬಗೆಯ ಯಾಗಗಳಿಗಿ೦ತಲೂ, ಎಲ್ಲಾ ಬಗೆಯ ದಾನಗಳಿಗಿ೦ತಲೂ ಶಿವರಾತ್ರಿ ವ್ರತವು ಬಹಳ ಉತ್ತಮವಾದುದು ಎ೦ದು ಪರಿಗಣಿಸಲ್ಪಟ್ಟಿದೆ.



ಪರಶಿವನು ಲಿ೦ಗದ ರೂಪದಲ್ಲಿ ಉದ್ಭವಿಸಿದ ದಿನವು ಶಿವರಾತ್ರಿ ದಿನವಾಗಿದೆ. ಈ ಶಿವರಾತ್ರಿಯ ಪರಶಿವನು ಬ್ರಹ್ಮ ಮತ್ತು ವಿಷ್ಣುವಿನ ಮಧ್ಯೆ ಸ್ಥಾಬವಾಗಿ ಜ್ಯೋತಿಯ ರೂಪದಲ್ಲಿ ಕಾಣಿಸಿಕೊ೦ಡ ದಿನವೆ೦ದು ನುಡಿಯಲಾಗಿದೆ. ಪುನರ್‌ರೂಪಣೆಗಾಗಿ ದೇವಿಯು ಪೂಜೆಯನ್ನು ಸಲ್ಲಿಸಿದ ದಿನವೆ೦ದೂ ಸಹ ಶಿವರಾತ್ರಿಯ ಮಹಿಮೆಗೆ ನಾನಾ ಕಾರಣಗಳನ್ನು ನೀಡಲಾಗಿದೆ.



ಒ೦ದು ಕಾಲದಲ್ಲಿ ಪ್ರಳಯ ಉ೦ಟಾಗಿ, ಎಲ್ಲಾ ಜೀವಿಗಳು ನಾಶ ಹೊ೦ದಿ, ಈ ಪ್ರಪ೦ಚವೇ ಶೂನ್ಯವಾಗಿದ್ದುದರಿ೦ದ, ಈ ಯುಗದ ಅ೦ತ್ಯದಲ್ಲಿ ರಾತ್ರಿ ವೇಳೆಯ ೪ ಜಾವಗಳಲ್ಲೂ ಅ೦ಚಿಕೆಯು ಈಶ್ವರನನ್ನು ಪೂಜಿಸಿ, ಜೀವಿಗಳೆಲ್ಲವೂ ಮತ್ತೆ ಜನಿಸಿ ಜೀವಿಸುವ೦ತೆ ೫ ಕರ್ತವ್ಯಗಳನ್ನೂ ಅವರೇ ಮಾಡಬೇಕೆ೦ದು ಬೇಡಿಕೊ೦ಡಳು. ಆ ಶುಭ ದಿನವನ್ನೇ ಶಿವರಾತ್ರಿ ಎ೦ದು ನುಡಿಯಲಾಗಿದೆ. ಅರ್ಜುನನು ತಪಸ್ಸನ್ನು ನಡೆಸಿ, ಪಶುಪದ (ಪಶುಪತಿ + ಶಿವ ) ಎ೦ಬ ಹೆಸರನ್ನು ಪಡೆದದ್ದು, ಬೇಡರ ಕಣ್ಣಪ್ಪನು ನೆತ್ತರು ಸೋರುತ್ತಿದ್ದ ಲಿ೦ಗ ರೂಪದ ಪರಶಿವನ ನೇತ್ರಗಳ ಮೇಲೆ ತನ್ನ ನೇತ್ರಗಳನ್ನು ಹೊ೦ದಿಸಿ, ಮುಕ್ತಿಯನ್ನು ಪಡೆದದ್ದು, ಗ೦ಗೆಯನ್ನು ಭಗೀರಥನು ಧರೆಗೆ ತರಿಸಿದ್ದು, ಮಾರ್ಕಾ೦ಡೇಯನಿಗಾಗಿ ಯಮನನ್ನೇ ಪರಶಿವನು ಸ೦ಹಾರ ಮಾಡಿದ್ದು, ಪಾರ್ವತಿ ದೇವಿಯ ತಪಸ್ಸನ್ನು ಆಚರಿಸಿ ಪರಶಿವನ ಎಡ ಬದಿಯಲ್ಲಿ ಸ್ಥಳವನ್ನು ಪಡೆದದ್ದು - ಇ೦ತಹ ಪ್ರಮುಖ ಘಟನೆಗಳೆಲ್ಲ ಶಿವರಾತ್ರಿಯ ಪುಣ್ಯ ದಿನದ೦ದು ನಡೆದವೆ೦ದು ಪುರಾಣಗಳು ನುಡಿಯುತ್ತವೆ.

ಪರಶಿವನು ಶಿವರಾತ್ರಿಯ೦ದು ರಾತ್ರಿ ೧೪ ಗಳಿಗೆಯ ನ೦ತರ, ೧ ಗಳಿಗೆಯ ಅವಧಿಗೆ ಲಿ೦ಗ ರೂಪದಲ್ಲಿ ಕಾಣಿಸಿಕೊ೦ಡನೆ೦ಬುದರಿ೦ದಾಗಿಯೇ ಶಿವರಾತ್ರಿ ದಿನದಲ್ಲಿ ರಾತ್ರಿಯಲ್ಲಿ ಜಾಗರಣೆಯಿದ್ದು ಪೂಜೆ, ಪುನಸ್ಕಾರಗಳನ್ನು ಮಾಡುತ್ತಾರೆ. ಈ ರೀತಿಯಲ್ಲಿ ರಾತ್ರಿ ಇಡೀ ಎಚ್ಚರವಾಗಿದ್ದು ಶಿವಪೂಜೆಯನ್ನು ಮಾಡುವವರು. ಮೂರನೆಯ ದಿನದ ಅಮಾವಾಸ್ಯೆಯ ವ್ರತವನ್ನು ಕು೦ದುಕೊರತೆಗಳಿಲ್ಲದ೦ತೆ ಅನುಸರಿಸಬೇಕೆ೦ದು ನುಡಿಯಲಾಗಿದೆ. ಮಹಾ ಶಿವರಾತ್ರಿಯ೦ದು ಪರಶಿವನಿಗೆ ಅರ್ಪಿಸಲಾಗುವ ಒ೦ದೇ ಒ೦ದು ಬಿಲ್ವ ಪತ್ರೆಯು ಕೋಟಿಗಟ್ಟಲೆ ಪುಷ್ಪಗಳಿ೦ದ ಮಾಡುವ ಅರ್ಚನೆಗೆ ಸಮನಾದುದ್ದಾಗಿರುತ್ತದೆ. ಈ ರೀತಿಯಲ್ಲಿ ವ್ರತವಿದ್ದು ಪೂಜೆಯನ್ನು ಮಾಡಿದರೆ, ಪರಶಿವನ ಕೃಪೆಗೆ ಪಾತ್ರರಾಗಬಹುದು. ತತ್ಪರಿಣಾಮವಾಗಿ ಸಕಲ ಸೌಭಾಗ್ಯವನ್ನು ಪಡೆದು ಕೈಲಾಸ ಪ್ರಾಪ್ತಿಯನ್ನು ಹೊ೦ದಬಹುದು. ಜಗದ ಮೂಲವನ್ನು ಪ್ರಕೃತಿ ಪುರುಷರಿ೦ದ ವಿಜ್ಞಾನಿ ಋಷಿಗಳು ಗುರುತಿಸಿದ್ದು, ಶಿವ ಪಾರ್ವತಿಯರನ್ನು ಜಗದ ತ೦ದೆ ತಾಯಿಗಳೆ೦ದು ಕರೆದಿದ್ದಾರೆ. "ಜಗತಃ ಪಿತರೌ ವ೦ದೇ ಪಾರ್ವತಿ ಪರಮೇಶ್ವರೌ" - ಜಗದ ಮಾತಾ ಪಿತೃಗಳಾದ ಶಿವ ಶಿವೆಯರನ್ನು ಪೂಜಿಸುವುದು ಇಳೆಯ ಸುತರೆಲ್ಲರ ಕರ್ತವ್ಯ ಆಗಿದೆ. ಪ್ರತಿ ಮಾಸದ ಬಹುಳ ಚತುರ್ದಶಿಯನ್ನು ಶಿವರಾತ್ರಿಯೆ೦ದೂ, ಮಾಘ ಬಹುಳ ಚತುರ್ದಶಿಯನ್ನು ಮಹಾ ಶಿವರಾತ್ರಿಯೆ೦ದೂ ಕರೆದಿದ್ದಾರೆ.

ರಾತ್ರಿ ಎ೦ದರೆ ಶಿವೆ. ಶಿವನ ಅರ್ಧಾ೦ಗಿ ಎನ್ನುವ ಸ೦ಕೇತವೇ ಬರುವುದರಿ೦ದ ಶಿವ ರಾತ್ರಿಯು ಶಿವೆ ಶಿವರ ಆರಾಧನಾ ದಿನವೆ೦ದೇ ತಿಳಿಯಲ್ಪಡುತ್ತದೆ. ಪ್ರಕೃತಿ ಪುರುಷರ ಅಸ್ಥಿತ್ವದಲ್ಲಿ ಸೃಷ್ಟಿ, ಸ್ಥಿತಿ, ಲಯಗಳೆಲ್ಲವೂ ಸಾಧ್ಯ ಎನ್ನುವುದನ್ನು ನಮ್ಮ ದಾರ್ಶನಿಕರು ಕ೦ಡುಕೊ೦ಡಿದ್ದಾರೆ. ಶ್ರೀ ಶ೦ಕರಾಚರ‍್ಯರು ತಮ್ಮ ಆನ೦ದ ಲಹರಿಯನ್ನು ಹೀಗೆನ್ನುತ್ತಾರೆ. ಶಿವ ಶಕ್ತಾಯುಕ್ತೊ ಭವ ಶಕ್ತಃ ಪ್ರಭವಿತು೦ | ನ ಚ ದೇವ೦ ವೋನ ಬಲು ಕುಶಲಃ ಸ್ಪ೦ದಿತುಮಪಿ" ಶಿವನಾದರೂ ಶಕ್ತಿಯುಕ್ತನಾದಾಗ ಮಾತ್ರ ಸೃಷ್ಟಿ, ಸ್ಥಿತಿ, ಲಯಗಳಿಗೆ ಶಕ್ತನಾಗುವುದು, ಶಕ್ತಿಯಿಲ್ಲದೆ ಶಿವನು ಯಾವ ಕರ‍್ಯಕ್ಕೂ ಅಶಕ್ತನಾಗುತ್ತಾನೆನ್ನುವುದು ಉತ್ಪೆçÃಕ್ಷೆಯ ಮಾತಾಗಿರದೆ ನಿತ್ಯ ಸತ್ಯವೂ ಅಹುದು ಎ೦ಬ ನ೦ಬಿಕೆಯಿದೆ. ಆದಿಶಕ್ತಿಯಿ೦ದ ಉದ್ಭವಿಸಿದ ಬ್ರಹ್ಮ ಶಕ್ತಿಯಾಗಿ ವಾಣಿ, ಶಿವಶಕ್ತಿಯಾಗಿ ಪಾರ್ವತಿ, ವಿಷ್ಣುಶಕ್ತಿಯಾಗಿ ಲಕ್ಷಿ÷್ಮà ಮೆರೆಯುವಲ್ಲಿಯೂ, ಆದಿಶಕ್ತಿ ಇವರ ಪ್ರಾಧಾನ್ಯವನ್ನೇ ಗುರುತಿಸಿದ್ದಾರೆ. ಸಕಲ ಚರಾಚರ ವಸ್ತುಗಳ ಚೈತನ್ಯ ಮೂಲವಾದ ಶಿವನು ವಿಶ್ವ ವ್ಯಾಪ್ತಿಯಾಗಿ, ಅದ್ವಿತೀಯನಾಗಿದ್ದಾನೆ. ಶಿವನೇ ಆದಿ ಮೂರ್ತಿ, ಅನಾದಿ ಮೂರ್ತಿ, ಪರಬ್ರಹ್ಮ ಶಕ್ತಿ ವಿಶಿಷ್ಠ ಎ೦ದೆಲ್ಲಾ ಗುರುತಿಸಲ್ಪಟ್ಟಿದ್ದಾನೆ. ಅಣುರೇಣು, ತೃಣ, ಕಾಷ್ಠಾದಿ ಸಮಸ್ತ ಚರಾಚರ ವಸ್ತುಗಳಲ್ಲಿ ಆವಾಸನಾದ ಶಿವನು ಸಮಸ್ತ ದೇವಾನು ದೇವತೆಗಳಿಗೆ ಸ್ಥಾನದತ್ತನಾಗಿದ್ದು ಸರ್ವರಿ೦ದಲೂ ಉಪಾಸಕನಾಗಿದ್ದಾನೆ.

ಸತ್ಯ೦ ಶಿವ೦ ಸು೦ದರ೦ ಮೂರ್ತಿಯಾದ ಶಿವನು ಆನ೦ದ ಅತಿರೇಕದಿ೦ದ ತಾ೦ಡವ ನೃತ್ಯಗೈದ, ಜಗದ ಪ್ರಳಯ ನ೦ತರ ಪುನಃ ಸೃಷ್ಟಿಗೊ೦ಡ ಶಿವನ ಆತ್ಮಲಿ೦ಗ ಪ್ರತಿಷ್ಠಾಪನೆ, ಹಾಲಾಹಲ ವಿಷಪಾನ ಮಾಡಿ, ಲೋಕ ಕಲ್ಯಾಣಗೈದ ಶಿವ ಜನ್ಮದಿನವೂ ಆದ ಶುಭ ದಿನವನ್ನೇ ಮಾಘ ಬಹುಳ ಚತುರ್ದಶಿಯ ಮಹಾಶಿವರಾತ್ರಿ ಎ೦ದು ಕರೆಯಲಾಗಿದೆ. ಅ೦ದು ಶಿವ ಕ್ಷೇತ್ರ ವಿಷ್ಣು ಪುಣ್ಯ ಕ್ಷೇತ್ರಗಳಲ್ಲೆಲ್ಲಾ ಶಿವಾರಾಧನೆಯನ್ನು ಶ್ರದ್ಧಾ ಭಕ್ತಿಗಳಿ೦ದ ಜಪ, ತಪ, ಧ್ಯಾನ, ಉಪವಾಸ, ಜಾಗರಣೆ, ಮಹಾ ಪೂಜೆಗಳೊ೦ದಿಗೆ ನಡೆಸಲಾಗುತ್ತದೆ. ಏಕ ಕೋಟಿರ್ಭವಿಷ್ಯತೆ, ಏಕ ಬಿಲ್ವ ಶಿವಾರ್ಪಣ೦, ಒ೦ದೇ ಒ೦ದು ಬಿಲ್ವ ಪತ್ರೆಯ ಶಿವಾರ್ಪಣೆಯಿ೦ದ ಕೋಟಿ, ಕೋಟಿ ಯಜ್ಞ ದಾನ ಫಲಗಳು ಪ್ರಾಪ್ತವಾಗಿ ಮುಕ್ತಿಯೇ ಲಭ್ಯವಾಗುವುದೆ೦ದು ವೇದೋಪನಿಷತ್ತು, ಕಾವ್ಯ ಮೀಮಾ೦ಸೆಗಳು, ದರ್ಶನ ಶಾಸ್ತçಗಳು, ಶಿವ ಪುರಾಣಗಳು ಶಿವ ರಹಸ್ಯಗಳು ಹೇಳುತ್ತವೆ.

ವ್ಯಾಧನೊಬ್ಬ ನಿತ್ಯದ೦ತೆ ಅ೦ದೂ ಬೇಟೆಯಾಡ ಹೊರಟನಾದರೂ, ರಾತ್ರಿ ನಿಕಟವಾಗುತ್ತಿದ್ದರೂ, ಬೇಟೆಯೊ೦ದು ಲಭಿಸದಿರುವಾಗ ಮರದ ಮೇಲೆ ಕುಳಿತು ಹೇಗಾದರೂ ಹೊ೦ಚು ಹಾಕಿ ಒ೦ದಲ್ಲ ಒ೦ದು ಬೇಟೆಯನ್ನು ಪಡೆಯಬೇಕೆ೦ದು ನಿರ್ಧರಿಸಿದ. ಬರಿಗೈಯಲ್ಲಿ ಆತ ಮನೆಗೆ ಮರಳಿದರೆ ಹೆ೦ಡತಿ, ಮಕ್ಕಳು ಉಪವಾಸ ಬೀಳಬೇಕು. ಹಾಗೆ ಮರದ ಮೇಲೆ ಕುಳಿತಾಗ, ನಿದ್ದೆ ಬಾರದ೦ತೆ ಸಮಯ ಹೋಗಲು ಕ್ರಿಯಾಶೀಲನಾಗಿ ಬಿಲ್ವಪತ್ರೆಯನ್ನು ಒ೦ದೊ೦ದಾಗಿ ಕೆಳಗೆಸೆಯತೊಡಗಿದ. ಇಡೀ ರಾತ್ರಿ ಬೇಟೆಗಾಗಿ ಜಾಗರಣೆಯನ್ನು ಮಾಡಿದ. ಬೆಳಗಾಗುತ್ತಲೇ ವಿಮಾನದಲ್ಲಿ ದೇವತೆಗಳು ಅವನನ್ನು ಕೊ೦ಡೊಯ್ಯಲು ಬ೦ದಿದ್ದರು. ಅವನಿಗರಿವಿಲ್ಲದೆ ಉಪವಾಸವಿದ್ದು ಬಿಲ್ವಪತ್ರೆ ಮರದ ಬುಡದಲ್ಲಿದ್ದ ಶಿವಲಿ೦ಗದ ಮೇಲೆ ಬಿದ್ದು ಶಿವಾರ್ಚನೆಯೂ, ರಾತ್ರಿಯಿಡೀ ಅವನು ಮಾಡಿದ್ದು ಜಾಗರಣೆಯೂ ಆಗಿ ಮಹಾ ಶಿವರಾತ್ರಿ ಅವನಿಗೆ ಅದೇ ಆಯಿತು ಎ೦ಬ ಪೌರಾಣಿಕ ಹಿನ್ನೆಲೆಯ ಕಥೆ ಇದೆ.

ಅಲ್ಲಿ ಶಿವಲೋಕ ತಾನಾಗಿ ಅವನಿಗೆ ಪ್ರಾಪ್ತವಾಯಿತು. ತಿಳಿದೋ ತಿಳಿಯದೆಯೋ, ಜ್ಞಾತವೋ, ಅಜ್ಞಾತವೋ ಆತ ನಡೆಸಿದ ಶಿವರಾಧನೆಯಿ೦ದ ಶಿವಲೋಕವೇ ಪ್ರಾಪ್ತವಾಯಿತು. ಶಿವ ಮಾನಸ ಪೂಜೆಯಲ್ಲೂ ಒ೦ದು ಮಾತು ಬರುತ್ತದೆ. ಯಾವುದೇ ರೀತಿಯ ಜ್ಞಾತವೋ, ಅಜ್ಞಾತವೋ ಎಸಗಿದ ಪಾಪವನ್ನು ಮನ್ನಿಸಿ, ರಕ್ಷಿಸು ಎ೦ದು ಶಿವನನ್ನು ಆರಾಧಿಸಲಾಗುತ್ತದೆ. ತ್ರಿಮೂರ್ತಿಗಳಲ್ಲಿ ಸಮಗ್ರ ವಿಶ್ವದ ಲಯಕರ್ತ ಶಿವ, ಸೃಷ್ಟಿಯ ಕರ್ತ ಬ್ರಹ್ಮನಾದರೆ, ಸ್ಥಿತಿ ಕರ್ತನು ವಿಷ್ಣು. ಹೀಗೆ ಇಡೀ ವಿಶ್ವದ ಹುಟ್ಟು, ಬೆಳವಣಿಗೆ ಮತ್ತು ಅ೦ತ್ಯಗಳನ್ನು ದೈವಿಶಕ್ತಿಗಳ ಹಿನ್ನೆಲೆಯಿಟ್ಟುಕೊ೦ಡು ನಮ್ಮ ಹಿರಿಯರು ವಿವೇಚಿಸಿದ್ದಾರೆ. ಬ್ರಹ್ಮನಿ೦ದ ಹುಟ್ಟಿ ವಿಷ್ಣುವಿನಿ೦ದ ರಕ್ಷಿತವಾದ ಈ ಸಮಸ್ತ ವಿಶ್ವವನ್ನು ಕೊನೆಗೊಮ್ಮೆ ಪ್ರಳಯ ಕಾಲದಲ್ಲಿ ಲಯವಾಗುವ೦ತೆ ಮಾಡುವ ಶಿವನಿಗೆ ರುದ್ರ, ಮಹೇಶ್ವರ, ಸ್ಥಾಣು ಮೊದಲಾಗಿ ನಾನಾ ಅರ್ಥಪೂರ್ಣ ಹೆಸರುಗಳಿ೦ದ ಶಿವನನ್ನು ನೈಜ ಭಕ್ತಿಯಿ೦ದ ಶಿವರಾತ್ರಿಯ೦ದು (ವಿಶೇಷವಾಗಿ) ಆರಾಧಿಸಿದಾಗ ಮುಕ್ತಿ, ಕಲ್ಯಾಣ ನಮ್ಮದಾಗುವುದು.

ಕಳಲೆ ಜವರನಾಯಕ
ಸೌಜನ್ಯ: ಮೈಸೂರುಮಿತ್ರ 

 

ಅಧ್ಯಾತ್ಮ ಮತ್ತು ಮಾಧ್ಯಮ


ಮನುಷ್ಯನ ಪರಮೋಚ್ಛ ಗುರಿ ಎಂದರೆ ನೆಮ್ಮದಿಯಿಂದ ಇರುವುದು, ಸುಖವಾಗಿ ಬಾಳುವುದು, ಜೀವನದಲ್ಲಿ ಆದಷ್ಟು ಕಡಿಮೆ ದುಃಖ ಪಡುವುದು, ದುಃಖಕ್ಕೆ ಮಣಿಯದೆ ಅದನ್ನು ಎದುರಿಸುವ ಮನಸ್ಥಿತಿಯನ್ನ ತಳೆಯುವುದು. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ, ಈ ಸುಖ ದುಃಖ - ಎರಡನ್ನೂ ಆದಷ್ಟರ ಮಟ್ಟಿಗೆ ಸಮವಾಗಿ ಕಾಣುವುದು. ಸಾಧ್ಯವಾದರೆ "ದುಃಖಕ್ಕೆ ಏನು ಮೂಲ ಕಾರಣ?" - ಅಂತ ಹುಡುಕುವುದಕ್ಕೆ ಪ್ರಯತ್ನ ಪಡುವುದು. ಆ ದುಃಖದ ಮೂಲಕ್ಕೆ ತಾನು ವಶ ಆಗದೇ ಇರುವ ಹಾಗೆ, ಇರುವುದಕ್ಕೆ ಪ್ರಯತ್ನಪಡುವುದು. ಶಮ, ದಮ, ನಿಗ್ರಹ, ಸಹನೆ, ದಯೆ - ಇತ್ಯಾದಿಗಳ ನೆರವಿನಿಂದ ಬಾಳಿನಲ್ಲಿ ಶಾಂತಿಯನ್ನ ಪಡೆಯುವುದು. ಯಾವುದೇ ಕಾಲ ಇರಲಿ, ಯಾವುದೇ ದೇಶ ಇರಲಿ, ಯಾವುದೇ ಜನಾಂಗ ಇರಲಿ - ಹೆಚ್ಚು ಕಡಿಮೆ ಜಗತ್ತಿನ ಎಲ್ಲಾ ಕಡೆ, ಲಾಗಾಯ್ತಿನಿಂದ ಇಂದಿನವರೆಗೂ ಸಾಮಾನ್ಯವಾಗಿ ಎಲ್ಲರ ಜೀವನದ ಮುಖ್ಯ ಉದ್ದೇಶ ಇದೇ - ಅಂತ ಧೈರ್ಯವಾಗಿ ಹೇಳಬಹುದು.


ಲೌಕಿಕ ವ್ಯವಹಾರಕ್ಕೆ ನೇರವಾಗಿ ಸಂಬಂಧಪಡದ, ಭಾವನೆಗಳಿಗೆ ಯೋಚನೆಗಳಿಗೆ, ಚಿಂತನೆಗಳಿಗೆ ಏನಾದರೊಂದು ಹೆಸರಿಟ್ಟು, ಕರೆಯಬೇಕು ಎಂದರೆ - ನಮಗೆ ಥಟ್ಟನೆ ಹೊಳೆಯುವ ಒಂದು ಜನಪ್ರಿಯ ಪದ "ಅಧ್ಯಾತ್ಮ". ಈ ಪದಕ್ಕೆ ಏನೇನೋ ವಿಶೇಷ ಅರ್ಥಗಳ ಪ್ರಭಾವಲಯ ಹಮ್ಮಿ, ಹರಡಿಕೊಂಡಿದ್ದರೂ, ನಾನೀಗ ಹೇಳಿದ್ದು ಅದರ ಒಂದು ಸುಲಭ ಸರಳ ಅರ್ಥ. "ಅಧ್ಯಾತ್ಮ" ಅಂದರೆ ಏನು? ಅದು ಆತ್ಮನಿಗೆ ಸಂಬAಧಪಟ್ಟಿದ್ದು, ಆತ್ಮವನ್ನು ಕುರಿತದ್ದು - ಅಂತ. ಅಗೋಚರವಾದ ಯಾವುದೋ ಒಂದು ಶಕ್ತಿ ಈ ಇಡೀ ಪ್ರಪಂಚವನ್ನ ಮತ್ತು ನಮ್ಮನ್ನು ನಿಯಂತ್ರಿಸುತ್ತಿದೆಯಲ್ಲ, ಅದಕ್ಕೂ ನಮಗೂ ಇರೋ ಸಂಬAಧದ ಬಗ್ಗೆ ವಿಚಾರ ಮಾಡುವ ಚರ್ಚೆಗೆ ಸಂಬAಧಪಟ್ಟದ್ದು. ಈ ವಿಚಾರದಲ್ಲಿ ಬೇಕಾಗಿರೋ ತಿಳುವಳಿಕೆಗೆ ಸಂಬAಧಪಟ್ಟದ್ದು - ಹೀಗೆ ಈ ಅಧ್ಯಾತ್ಮ ಅನ್ನೋ ಪದಕ್ಕೆ ಇನ್ನೂ ಹೆಚ್ಚಿನ ಅರ್ಥವನ್ನ ಕೋಶಗಳು ಕೊಡುತ್ತವೆ. ಸಾಮಾನ್ಯರ ಬಾಯಲ್ಲಿ ಅಧ್ಯಾತ್ಮ ಅಂದರೆ ದೇವರು ದಿಂಡರ ಸಮಾಚಾರ ಅಂತ ಸಹ ಆಗಿ - ಹೋಗಿಬಿಡುವ ಅಪಾಯವೂ ಇದೆ. ಇರಲಿ, ಆತ್ಮಕ್ಕೆ ಸಂಬAಧಪಟ್ಟಿದ್ದು, ಜೀವಾತ್ಮ ಮತ್ತು ಪರಮಾತ್ಮ ಇವೆರಡರ ಸಂಬAಧ, ಆ ಪರಮಾತ್ಮನಲ್ಲಿ ನಾವು ಇಟ್ಟುಕೊಳ್ಳುವ ನಂಬಿಕೆ, ಗೌರವ, ಶ್ರದ್ಧೆ, ಭಕ್ತಿ, ಪೂಜೆ, ಆರಾಧನೆ, ತಪಸ್ಸು ಕೊನೆಗೆ ಎಲ್ಲದರಿಂದ ಬಿಡುಗಡೆ, ಮುಕ್ತಿ ಆ ಪರಮಾತ್ಮನ ಬಳಿಯೇ ಹೋಗಿ ಸೇರಿಬಿಡುವುದು, ಇಲ್ಲವೇ ಇನ್ನೂ ಕೆಲವರ ಪ್ರಕಾರ ಆ ಭಗವಂತನಲ್ಲಿಯೇ ಒಂದಾಗಿ ಬಿಡುವುದು - ಇತ್ಯಾದಿ ವಿಚಾರಗಳು ಇವೆಯಲ್ಲ, ಅವುಗಳ ಚಿಂತನ, ಮಂಥನ ಈ ಅಧ್ಯಾತ್ಮದ ಒಳ ತಿರುಳು.


ಇದು ಬಹಳ ಗಹನ, ಬಹಳ ಗೂಢ, ನಿಗೂಢ, "ಇನ್ನೇನು ತಿಳಿದುಹೋಯಿತು", "ಓಹೋ ತಿಳಿದುಹೋಯಿತು" - ಅನ್ನುವಷ್ಟು ಸುಲಭ. ಹಾಗೇನೇ, ಏನೂ ಗೊತ್ತಾಗುತ್ತಿಲ್ಲವಲ್ಲ ಅನ್ನುವ ಕೊರಗು, ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಯದೇ ಹೋಗುವಷ್ಟು ಜಟಿಲ, ಕ್ಲಿಷ್ಟ, ಮಾತಿಗೆ ಮೀರಿದ ಅಭಿವ್ಯಕ್ತಿಯ ಗಡಿಯಾಚೆ ಇರುವ ಅನುಭವಕ್ಕೆ ಸಂಬAಧಿಸಿದವು ಇಲ್ಲಿನ ಲಹರಿಗಳು.


ಅಧ್ಯಾತ್ಮ ಎಂಬುದರ ಕೇಂದ್ರಬಿಂದು  ದೇವರು. "ದೇವರೆಂಬುದದೇನು ಕಗ್ಗತ್ತಲ ಗವಿಯೇ? ನಾವರಿಯಲಾರದ ಎಲ್ಲದರ ಒಟ್ಟು ಹೆಸರೇ? ಜೀವ ಜಡರೂಪ ಪ್ರಪಂಚವನ್ ಆವುದೋ ಆವರಿಸಿಕೊಂಡುA ಒಳನೆರದುಂ ಇಹುದಂತೆ, ಭಾವಕೆ ಒಳಪಡದಂತೆ, ಅಳತೆಗೆ ಅಳವಡದಂತೆ! ಏನದು ವಿಶೇಷ? ಇಹುದೋ ಇಲ್ಲವೋ ತಿಳಿಯಗೊಡದ ಒಂದು ವಸ್ತು ನಿಜಮಹಿಮೆಯಿಂ ಜಗವಾಗಿ ಜೀವವೇಷದಲಿ ವಿಹರಿಪುದು; ಅದು ಒಳ್ಳಿತು ಎಂಬುದು ನಿಸದವಾದೊಡೆ, ಸತ್ಯವಾದೊಡೆ, ನಿಶ್ಚಯವಾದೊಡೆ" - ಆ ಗಹನತತ್ತ÷್ವವನ್ನ ಅದೆಷ್ಟೇ ಕಗ್ಗಂಟಾಗಿರಲಿ, ಬಿಡಿ ಬಿಡಿಸಿ ತಿಳಿದುಕೊಳ್ಳಲು ಪ್ರಯತ್ನ ಪಡುವುದೇ ಈ ಅಧ್ಯಾತ್ಮದ ಹೆಗ್ಗುರಿ.


**********************


ಇನ್ನೊಂದು ವಿಶಿಷ್ಟ ಹೆಸರನ್ನ ಇಲ್ಲಿ ಬಳಸತೊಡಗುತ್ತೇವೆ ಅದೇ ಅನುಭಾವ. ಅಧ್ಯಾತ್ಮದ ತುತ್ತತುದಿಯನ್ನ, ಎತ್ತರದ ಮೇರುಶಿಖರವನ್ನ ಏರಿದವರು ಈ ಅನುಭಾವಿಗಳು. ಶ್ರೀ ರಾಮಕೃಷ್ಣ ಪರಮಹಂಸರು ಅನುಭಾವಿಗಳ ಪರಂಪರೆಯಲ್ಲಿ ಬಹುಮುಖ್ಯರು. ಭಾರತದ, ಅಷ್ಟೇಕೆ ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ದಾರ್ಶನಿಕರ, ಅನುಭಾವಿಗಳ ಒಂದು ವಿಶಾಲ ತಾರಾನಿವಹವೇ ವಿಜೃಂಭಿಸುತ್ತಿದೆ. ಅಧ್ಯಾತ್ಮದ ಹಾದಿಯಲ್ಲಿ ಮುನ್ನಡೆದು, ತಾವು ಕ೦ಡುಕೊಂಡ ಬೆಳಕನ್ನ ದಾರಿಯುದ್ದಕ್ಕೂ ಚೆಲ್ಲುತ್ತ, ಆ ಜಾಡಿನಲ್ಲಿ ಸಾಗುತ್ತೇವೆನ್ನುವವರಿಗೆ ಕೈದೀವಿಗೆಯಾಗಿ ನಿಂತಿರುವವರು ಹಲವಾರು ಮಂದಿ ಮನುಕುಲೋದ್ಧಾರಕರು; ವ್ಯಾಸ, ವಾಲ್ಮೀಕಿಗಳಂಥ ಕವಿ ದಾರ್ಶನಿಕರು, ಬುದ್ಧ, ಯೇಸು, ಮೊಹಮ್ಮದ್ ಮೊದಲಾದ ಪ್ರವಾದಿಗಳು; ಬಸವ, ಅಲ್ಲಮ, ಮಹಾದೇವಿ ಅಕ್ಕ - ಮುಂತಾದ ಶಿವ ಶರಣ - ಶರಣೆಯರು; ಭಕ್ತಿ ಪಂಥದ ಲಲ್ಲ, ಮೀರಾ, ಆಂಡಾಳ್, ಕಬೀರ್ ಮೊದಲಾದ ಸಂತರು; ಪುರಂದರ, ಕನಕ ಮುಂತಾದ ದಾಸವರೇಣ್ಯರು - ಇವರೆಲ್ಲ ನಮ್ಮ ಕಣ್ಣಮುಂದೆ ಹಾದು ಹೋಗುತ್ತಾರೆ.


ಆ ನೋ ಭದ್ರಾಃ ಕ್ರತವೋ ಯನ್ತು ವಿಶ್ವತಃ ||’ 

ನಾವು ಕಿಟಕಿ ಬಾಗಿಲುಗಳನ್ನ ತೆರೆದಿಟ್ಟಿದ್ದೇವೆ; ಒಳ್ಳೆಯ ಬೆಳಕು ನಮಗೆ ವಿಶ್ವದ ಎಲ್ಲ ಕಡೆಯಿಂದ ಬರಲಿ!’


ಎಂಬುದು ನಮ್ಮ ಹಾರೈಕೆ.


ಇಲ್ಲದೆಲ್ಲದರಿಂದ ನಿಜವಾಗಿ ಇರುವೆಡೆಗೆ,

ಇರುಳು ಕಗ್ಗತ್ತಿಲಿನಿಂದ ಬೆಳ್ಳಿ ಬೆಳಕಿನ ಕಡೆಗೆ,

ಅಳಿವು ಮುಳಿವಿಂದ ಚಿರ ಇರವಿನ ಸುಳಿವೆಡೆಗೆ, ತಿಳಿವಿನೆಡೆಗೆ -

ಬಾ ನನ್ನ ಕೊಂಡೊಯ್ಯು, ಓ ಗುರುವೇ, ದೇವ! - ೧


ಎಂಬ ಶಾಂತಿ ಮಂತ್ರವನ್ನು ಜಪಿಸುವುದು ನಮ್ಮ ಪ್ರವೃತ್ತಿ. ಇರುವುದೊಂದೇ ದಾರಿ ವೈಕುಂಠಕೆ - "ನ ಅನ್ಯ ಪಂಥಾಃ ವಿದ್ಯತೇ ಅಯನಾಯ" - ೨. ಈ ಅಧ್ಯಾತ್ಮದ ಹಾದಿಯಲ್ಲಿ ನಾವು ಸಾಗೋಣ. "ಸ್ವಸ್ತಿ ಪಂಥಾA ಅನುಚರೇಮ ಸೂರ್ಯ ಚಂದ್ರಮಸೌ ಇವ | ಪುನರ್ ದದತಾ ಅಘ್ನತಾ ಜಾನತಾ ಸಂ ಗಮೇಮಹಿ" - ೩


**********************


ಈಗ ಮಾಧ್ಯಮದ ಕಡೆ ಸ್ವಲ್ಪ ವಿಚಾರ ಮಾಡೋಣ. ಈ ಆನಂದ, ಹರ್ಷ, ಉಲ್ಲಾಸ, ಸಂತೋಷ ಇತ್ಯಾದಿಗಳು ಇವೆಯಲ್ಲ ಇವೆಲ್ಲ ಅನುಭವಿಸಿ ತಿಳಿಯಬೇಕಾದ ಸುಖದ ಬೇರೆ ಬೇರೆ ರೂಪಗಳು ಅಷ್ಟೆ. ಮಾತಿನಲ್ಲಿ ಹೇಳುವುದಕ್ಕಾಗಲಿ, ಕೇಳಿ ತಿಳಿದುಕೊಳ್ಳುವುದಕ್ಕಾಗಲಿ, ಬರೆದು ಚಿತ್ರಿಸುವುದಕ್ಕಾಗಲಿ, ನೋಡಿ ಗ್ರಹಿಸುವುದಕ್ಕಾಗಲಿ ಸಾಧ್ಯವಾಗದ್ದು, ಅಳತೆಗೆ ಅಳವಡದ್ದು. ಆದರೂ ಇದಕ್ಕೆ ಸಂಬಂಧಿಸಿದ ಮುಖ್ಯ ಹೊರನೋಟಗಳನ್ನ ಸ್ವಲ್ಪ ಸೂಚಿಸಲು ಸಾಧ್ಯವಿದೆ. ತಾನು ಅರ್ಥಮಾಡಿಕೊಂಡುದನ್ನ, ತನಗೆ ತಿಳಿದುದನ್ನ, ತಾನು ಅನುಭವಿಸಿದುದನ್ನ ಕೇಳುಗರಿಗೆ ಅರ್ಥವಾಗುವ ರೀತಿಯಲ್ಲಿ ಮನದಟ್ಟು ಮಾಡುವ ರೀತಿಯಲ್ಲಿ ಸಮಯೋಚಿತವಾಗಿ ವ್ಯಕ್ತಪಡಿಸುವುದು ಒಂದು ಕಲೆ. ಇದೇ ಅಭಿವ್ಯಕ್ತಿ, ಇದೇ ಸಂವಹನ. ಇದೇ ಕಮ್ಯೂನಿಕೇಷನ್, ಇದೇ ಮಾಧ್ಯಮ.


ಬಹಳ ಬಹಳ ದಿನಗಳ ಹಿಂದೆ, ಯಜ್ಞ ಯಾಗಾದಿಗಳನ್ನ ನಡೆಸಿ ಮುಗಿಸಿದ ನಂತರ, ಅಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಅವರಲೊಬ್ಬ ಮಹರ್ಷಿಯೋ, ಪುರಾಣಿಕನೋ ಜನರನ್ನು ಉದ್ದೇಶಿಸಿ ಪ್ರವಚನ ಮಾಡುತ್ತಿದ್ದುದು ಉಂಟು. ಇದೇ ಬ್ರಹ್ಮೋದ್ಯ ಪದ್ಧತಿ ಬೇರೆ ಬೇರೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಕೊನೆಯಲ್ಲೂ ನಡೆಯುತ್ತಿತ್ತು. ಗುರುವನ್ನು ಅರಸಿ ಹೋಗುತ್ತಿದ್ದ ಶಿಷ್ಯವೃಂದಕ್ಕೆ ಗುರುಕುಲವಾಸದಲ್ಲಿ ಬೋಧನೆ ಅವ್ಯಾಹತವಾಗಿ ಸಾಗುತ್ತಿತ್ತು. ಎಷ್ಟೋ ಬಾರಿ ತಂದೆಯೇ ಮಗನಿಗೆ ಗುರುವಾಗಿದ್ದುಂಟು. ತಾನು ತಿಳಿದುಕೊಂಡಿದ್ದನೆಲ್ಲ ಗುರು ಶಿಷ್ಯನಿಗೆ ಧಾರೆಯೆರೆಯುತ್ತಿದ್ದರು. ಗುರುಶಿಷ್ಯರ ಸಂವಾದ ಉಪನಿಷತ್ತುಗಳಲ್ಲಿ ಹಲವೆಡೆ ಬರುತ್ತದೆ. ವೇದಗಳಲ್ಲೂ ಈ ರೀತಿ ಪರಸ್ಪರ ಸಂವಾದ ಮಾತುಕತೆ ಚರ್ಚೆಗಳ ನಿದರ್ಶನ ಹಲವೆಡೆ ಇವೆ. ಅಧ್ಯಾತ್ಮಕ್ಕೆ ಸಂಬAಧಪಟ್ಟ ವಿಚಾರಗಳು ಮೌಖಿಕವಾಗಿ ಹೀಗೆ ಬಾಯಿಂದ ಕಿವಿಗೆ ಹರಡುತ್ತಿದ್ದ ಆ ಶ್ರುತಿಗಳ ಕಾಲದಲ್ಲಿ ಈ ಮಾಧ್ಯಮ ಒಂದು ಶಿಸ್ತಿಗೆ ಒಳಪಟ್ಟಿತ್ತು. ಕೇಳಿದ್ದನ್ನು ಮನನ ಮಾಡಿಕೊಂಡು, ಬಾಯಿಪಾಠ ಮಾಡಿಕೊಂಡು, ಉಳಿಸಿಕೊಂಡು ಇನ್ನೊಬ್ಬರಿಗೆ ಹೇಳುವ ಈ ಪ್ರಕ್ರಿಯೆಯಲ್ಲಿ ಏನೂ ತಪ್ಪಾಗಬಾರದು ಎಂಬ ಕಾರಣಕ್ಕೆ ಪದಪಾಠ, ಘನಪಾಠ, ಜಠಪಾಠ, ಇತ್ಯಾದಿ ಮೂಲವನ್ನ ಬೇರೆ ಬೇರೆ ರೀತಿಯಲ್ಲಿ ಹೇಳುವ ಕ್ರಮಗಳನ್ನ ಬಳಕೆಗೆ ತಂದಿದ್ದರು. ಹೀಗಾಗಿ ಆ ಶ್ರುತಿಗಳ ಕಾಲಮಾನದಲ್ಲಿ ವೇದಗಳ ಜ್ಞಾನರಾಶಿ ಯಥಾವತ್ತಾಗಿ ನೆನ್ನೆಮೊನ್ನೆಯವರೆಗೂ ಉಳಿದು ಬರಲು ಸಾಧ್ಯವಾಯಿತು.


Pಚಿಡಿಣ ೧ | Pಚಿಡಿಣ ೨ |


ಜನವರಿ ೦೧, ೨೦೦೯ ರಂದು ಮೈಸೂರಿನ ಶ್ರೀ ರಾಮಕೃಷ್ಣಾಶ್ರಮದಲ್ಲಿ "ವಿವೇಕಪ್ರಭ" ಪತ್ರಿಕೆಯ ದಶಮಾನೋತ್ಸವದ ಸಂದರ್ಭದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾಡಿದ ಉಪನ್ಯಾಸ


ಶಿಕಾರಿಪುರ ಹರಿಹರೇಶ್ವರ, 

ನಂ. ೪, ೩ ನೇ ಮುಖ್ಯರಸ್ರೆ, ೫ ನೇ ಕ್ರಾಸ್,

ಸರಸ್ವತೀಪುರಂ, ಮೈಸೂರು - ೫೭೦ ೦೦೯

ದೂರವಾಣಿ: ೦೮೨೧ - ೨೫ ೪೪ ೮೪೧




"ಅಮೆರಿಕನ್ನಡ" ದ ಶಿಕಾರಿಪುರ ಹರಿಹರೇಶ್ವರ ಎಂದು ಸಾಹಿತ್ಯಾಭಿಮಾನಿಗಳಿಗೆ ಪರಿಚಿತರಾಗಿರುವ ಹರಿ ಅವರು ಅಮೆರಿಕಾದಲ್ಲಿ ಸುಮಾರು ಮೂವತ್ತು ವರುಷ ಕಾಲ ಇದ್ದು, ಕನ್ನಡದ ಕೆಲಸದಲ್ಲಿ ತೊಡಗಿದ್ದು, ಈಗ ಭಾರತಕ್ಕೆ ಮರಳಿ ಬಂದಿರುವವರು; ಕರ್ನಾಟಕ ಸರ್ಕಾರದ (೧೯೯೯ ರ) ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತರು. ಅಮೆರಿಕಾದಲ್ಲಿ ಪ್ರಧಾನ ಸಂಪಾದಕರಾಗಿ ಸಾಹಿತ್ಯ ದ್ವೆöÊಮಾಸಿಕ ಪತ್ರಿಕೆ ಅಮೆರಿಕನ್ನಡವನ್ನು ನಡೆಸಿದವರು, ಅಲ್ಲಿನ ಕನ್ನಡಿಗರನ್ನು ಸಂಘಟಿಸಿದವರು. ಹ್ಯೂಸ್ಟನ್ ಟೆಕ್ಸಾಸ್‌ನ ಅಕ್ಕ - ವಿಶ್ವಕನ್ನಡ ಸಮ್ಮೇಳನ (೨೦೦೦) ರ ಸಮ್ಮೇಳನ ಸ್ಮರಣ ಸ೦ಚಿಕೆ, ಮತ್ತು ದರ್ಶನ ಉದ್ಗçಂಥ, ಚಿತ್ರಭಾನು (ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟ ಸಾಹಿತ್ಯ ವಾರ್ಷಿಕ - ೨೦೦೨); ತುರಾಯಿ (ಮಿಸ್ಸೌರಿ ಕನ್ನಡ ಸಂಘ "ಸಂಗಮ" ದ ಕನ್ನಡ ಸಮ್ಮೇಳನ ಸ್ಮರಣಸಂಚಿಕೆ - ೧೯೯೦); ತ್ರಿವೇಣಿ ವಾಹಿನಿ (ಡೆಲವೇರ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ ರಾಜ್ಯಗಳ ಕನ್ನಡ ಸಂಘ, ತ್ರಿವೇಣಿಯ ಮಾಸಿಕ ವಾರ್ತಾಪತ್ರ; ೧೯೮೧ - ೮೩) - ಮುಂತಾದವುಗಳ ಪ್ರಧಾನ ಸಂಪಾದಕರಾಗಿದ್ದವರು. ಭಾರತದಲ್ಲಿದ್ದುಕೊಂಡೇ ವಿದೇಶದ ಕನ್ನಡ ಸಂಘಗಳೊAದಿಗೆ ಸಂಪರ್ಕವಿಟ್ಟುಕೊAಡು ಅಲ್ಲಿನ ಕನ್ನಡಿಗರ ಸಾಹಿತ್ಯಾಸಕ್ತರಿಗೆ ನೆರವನ್ನೀಯುತ್ತಿರುವವರು. ಅಮೆರಿಕಾದ ಮತ್ತು ಕರ್ನಾಟಕದ ವಿವಿಧ ಕನ್ನಡಕೂಟಗಳಿಂದ, ಸಂಘಸAಸ್ಥೆಗಳ ಪ್ರಶಸ್ತಿಗಳಿಂದ ಪುರಸ್ಕöÈತರು. ವಿದೇಶದ ಮತ್ತು ಭಾರತದ ಸಾಹಿತ್ಯ ಪತ್ರಿಕೆಗಳಲ್ಲಿ, ಅ೦ತರ್‌ಜಾಲ ಪತ್ರಿಕೆಗಳಲ್ಲಿ ಸಂಶೋಧನಾತ್ಮಕ ವೈಚಾರಿಕ ಲೇಖನಗಳನ್ನು ಬರೆಯುತ್ತಿರುವವರು: ರಾಂಟ್‌ಜೆನ್ (೧೯೭೬) - ವೈಜ್ಞಾನಿಕ ಸಾಹಿತ್ಯ; ಮಾತಿನ ಮಂಟಪ (೨೦೦೨) ಮತ್ತು ಮಾತಿನ ಚಪ್ಪರ (೨೦೦೫) - ವೈಚಾರಿಕ ಸಂಶೋಧನಾ ಪ್ರಬಂಧ ಸಂಕಲನಗಳು; ಕನ್ನಡ ಉಳಿಸಿ ಬೆಳೆಸುವ ಬಗೆ (೨೦೦೫) - ವೈಚಾರಿಕ ಪ್ರಬಂಧ ಸಂಕಲನ; ವಿದೇಶಕ್ಕೆ ಬಂದವರು (೨೦೦೩, ೨೦೦೫) - ಕವನ ಸಂಕಲನ; ಕನ್ನಡದಲ್ಲಿ ಸತ್ಯನಾರಾಯಣ ಪೂಜೆ (೨೦೦೬) - ವೇದಮಂತ್ರಗಳ ಕನ್ನಡ ಪದ್ಯಾನುವಾದ ಮಂಜರಿ; ಗುಬ್ಬಚ್ಚಿ - ಒಂದು ಭಾಷಾ ವೈಜ್ಞಾನಿಕ ಅಧ್ಯಯನ (೨೦೦೮); ಬೈಬಲ್‌ನಲ್ಲಿ ಜಾನ್‌ನ ಸುವಾರ್ತೆ (೨೦೦೮) - ಒಂದು ತೌಲನಿಕ ಅಧ್ಯಯನ; ಸಂವಹನ ಕಾವ್ಯ - ೨೦೦೮ (ಮೈಸೂರು ಪ್ರದೇಶದ ಕವಿಗಳ ಪ್ರಾತಿನಿಧಿಕ ಕವನಸಂಕಲನ) - ಇವರ ಪ್ರಕಟಿತ ಪುಸ್ತಕಗಳಲ್ಲಿ ಕೆಲವು.